Sunday, November 25, 2012

ಮಳವಳ್ಳಿ ಯ ಕುನ್ನೀರ್ ಕಟ್ಟೆ ಋಷಿ ಜುಟ್ಟಿನ ಪುರಾಣ !!!!




ನಮಸ್ಕಾರ ಬನ್ನಿ ನಿಮಗೆ ನನ್ನ ಬಾಲ್ಯದಲ್ಲಿ ಕಂಡ ಒಂದು ಸತ್ಯ ಘಟನೆಯನ್ನು ಹೇಳುತ್ತೇನೆ. ಬಹುಷಃ ಇಂತಹ ಘಟನೆಗಳು ನಿಮ್ಮ ಊರಿನ ಆಸುಪಾಸಿನಲ್ಲೂ  ನಡೆದಿರ ಬಹುದು. ಓದೋಕೆ ಮಜಾ ಇದೆ ಬನ್ನಿ .



ನಾನೂ ಬಾಲ್ಯ ಕಳೆದದ್ದು ಮಳವಳ್ಳಿ ತಾಲೂಕಿನ ಹತ್ತಿರವಿದ್ದ ಒಂದು ಹಳ್ಳಿ ,ಆಗಿನ್ನೂ ಹಳ್ಳಿ ಶಾಲೆಯಲ್ಲಿ ಮೂರು ಅಥವಾ ನಾಲ್ಕನೆ  ತರಗತಿಯಲ್ಲಿದ್ದೆ  ಅನ್ನಿಸುತ್ತೆ. ನಮ್ಮ ಹಳ್ಳಿ ಆ ಕಡೆ ಪೂರ್ತಿ ಹಳ್ಳಿಯೂ ಅಲ್ಲದ ಅಥವಾ ಪೂರ್ತಿ ಪಟ್ಟಣವೂ ಅಲ್ಲದ ಎಡಬಿಡಂಗಿ ಸ್ಥಿತಿಯಲ್ಲಿತ್ತು.ಮಳವಳ್ಳಿಯಲ್ಲಿ ಏನೇ ಘಟನೆ ಆದರೂ ಬಹುಷಃ ಮೊದಲು ತಲುಪುತ್ತಿದುದೆ  ನಮ್ಮ ಹಳ್ಳಿಗೆ. ಹೀಗಿರಲು ಒಂದು ದಿನ ಒಂದು ವಿಚಾರ ಈ ಹಳ್ಳಿಗೆ ತೇಲಿಬಂತು.  ಅರಳಿ ಕಟ್ಟೆಯಲ್ಲಿ ಎಲೆ ಅಡಿಕೆ ಹಾಕುತ್ತಾ ಕುಳಿತ ಮುದುಕರು, ಹಳ್ಳಿಯ ಹೋಟೆಲ್ ಗಳಲ್ಲಿ  ಬೀಡಿ ಸೇದುತ್ತಾ  ಟೀ , ಕಾಫಿ, ಹೀರುತ್ತಾ  ದಿನ ಕಳೆಯುತ್ತಿದ್ದ  ಮಹನೀಯರು, ಶಾಲೆಯಲ್ಲಿ ಪಾಠ ಮಾಡಲು ಬರುವ ಮೇಷ್ಟ್ರು, ಒಂದು ಕೈಯಲ್ಲಿ ಜಾರುತ್ತಿದ್ದ ಚಡ್ಡಿ ಹಿಡಿದು,ಮತ್ತೊಂದು ಕೈಲಿ ಕಲ್ಲಿನ  ಸ್ಲೇಟು ಮತ್ತು ಸೀಮೆ ಸುಣ್ಣಾ ಹಿಡಿದು, ನಗುತ್ತಾ  ಗೊಣ್ಣೆ ಸುರಿಸುತ್ತಾ  ಬರುತ್ತಿದ್ದ ಮಕ್ಕಳಿಗೂ  , ಹಾಗೆ ಹಳ್ಳಿಯಲ್ಲಿದ್ದ ಪುಟ್ಲಾಯರಿಗಳಿಗೂ ಎಲ್ಲರಿಗೂ  ಮಳವಳ್ಳಿ ಗೆ  ಹೋಗಿ  ದರ್ಶನ ಮಾಡುವ ಕಾತರ. ಹೀಗಿರುವಾಗ  "ಊರಿಗೆ ಬಂದವಳು  ನೀರಿಗೆ ಬರಲಾರಳೆ"  ಎನ್ನುವ ಹಾಗೆ ನಮ್ಮ ಮನೆಗೂ ಈ ವಿಚಾರ ತೇಲಿಬಂತು. ಒಂದು ದಿನ ಮನೆಗೆ ಬಂದ ನನ್ನ ತಂದೆ '' ಮಳವಳ್ಳಿ ಯಲ್ಲಿ ಜನವೋ ಜನ  ಕಣೆ ," " ಅಲ್ಲಿ "ಕುನ್ನೀರ ಕಟ್ಟೆ " ದಡದಲ್ಲಿ  ಯಾರೋ ಋಷಿಗಳ  ಜಟೆ  ಮೂಡಿದೆಯಂತೆ "   " ಅದನ್ನು ದರ್ಶನ ಮಾಡಲೂ  ಬಹಳ ದೂರದಿಂದ ಜನಗಳ ದಂಡೆ ಬರುತ್ತಿದ್ದಾರೆ ,"   " ನಾವೂ ಒಮ್ಮೆ ಹೋಗಿ ನೋಡೋಣ "   , "ಆ ಮರಯ್ಯನಿಗೆ ಎತ್ತಿನ ಗಾಡಿ ತರಲು ಹೇಳಬೇಕೂ"  ಅಂತಾ ಹೇಳಿ  ಮುಂದಿನ ವಾರ ಹೋಗೋಣ ಅಂತಾ ತೀರ್ಮಾನ ಮಾಡಿದರು. ನನಗೂ  ಮಳವಳ್ಳಿ ಗೆ  ಹೋಗುವ ಅವಕಾಶ  ಸಿಕ್ಕಿತಲ್ಲಾ ಅನ್ನೋ ಖುಷಿ ಜೊತೆಗೆ  ಅಲ್ಲಿ  ಹೋಟೆಲಿನಲ್ಲಿ ಅಪ್ಪಾ ಕೊಡಿಸುವ  ಜಾಮೂನು , ಮಸಾಲೆ ದೋಸೆ  ತಿನ್ನುವ ಕನಸು ಮೂಡಿತ್ತು .........!

ಬನ್ನಿ ನಿಮಗೆ "ಕುನ್ನೀರ್ ಕಟ್ಟೆ"  ಬಗ್ಗೆ ತಿಳಿಸುವೆ. ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯಲ್ಲಿ  ಈಗಿನ ಸರ್ಕಾರಿ ಬಸ್ ನಿಲ್ದಾಣದ ಬಳಿ  "ಕುನ್ನೀರ್ ಕಟ್ಟೆ"  ಎಂಬ ಕೊಳ ಇತ್ತು , ಇದನ್ನು ಐತಿಹಾಸಿಕವಾಗಿ ಅಲ್ಲಿನ ಜನ ಬಹಳ ಗೌರವಿಸುತ್ತಿದ್ದರು.ಮತ್ತೊಂದು ವಿಚಾರ ವೆಂದರೆ  ಶ್ರೀ ರಂಗ ಪಟ್ಟಣ ದಲ್ಲಿ ಕಾವೇರಿ ನದಿ ಹರಿಯುತ್ತಿದ್ದರೂ  ಟಿಪ್ಪೂ ಸುಲ್ತಾನ ತಾನು ಕುಡಿಯುವ ನೀರನ್ನು ಪ್ರತಿ ನಿತ್ಯವೂ  ಈ "ಕುನ್ನೀರ್ ಕಟ್ಟೆ  " ಯಿಂದ   ಶ್ರೀ ರಂಗ ಪಟ್ಟಣಕ್ಕೆ  ತರಿಸುತ್ತಿದ್ದ  ಎಂಬ  ಮಾತೂ ಸಹ  ಇಲ್ಲಿ ಪ್ರಚಲಿತವಾಗಿತ್ತು, ಅದು ಇಂದಿಗೂ ಇದೆ. ಈ "ಕುನ್ನೀರ್ ಕಟ್ಟೆ" ಬಳಿ ಒಂದು ಅರಳಿ ಕಟ್ಟೆ  ಇತ್ತು  ಅಲ್ಲಿ ಅರಳಿಮರದ ಕೆಳಗೆ  ಯಾರೋ ಮಹಾ ಮಹಿಮಾ ಮುನಿಗಳ  ಜಟೆ ಮೂಡಿದೆ  ಎಂಬ ವಿಚಾರ ಎಲ್ಲೆಡೆ ಹಬ್ಬಿತ್ತು, ಪುಣ್ಯ  ಆಗ ಈಗಿನಂತೆ  ಮೀಡಿಯಾ ಹಾವಳಿ ಇರಲಿಲ್ಲ. ಒಂದು ವೇಳೆ  ಇದ್ದಿದ್ದರೆ ........?????ನೀವೇ ತೀರ್ಮಾನಿಸಿ.  ಆದರೆ ಆ "ಕುನ್ನೀರ್ ಕಟ್ಟೆ"  ಇಂದು ಹೇಳ ಹೆಸರಿಲ್ಲದಂತೆ  ಮಾಯವಾಗಿ ಹೋಗಿದೆ ಬಿಡಿ .


ಹಾಗೂ ಹೀಗೂ ನಾವು ಅಲ್ಲಿಗೆ ಹೊರಡುವ ದಿನಗಳು  ಹತ್ತಿರ ಬರುತ್ತಿತ್ತು.  ಅಲ್ಲಿ "ದರ್ಶನ ಮಾಡಿದ  ಯಾರೋ ಭಿಕ್ಷುಕನಿಗೆ  ಲಾಟರಿ  ಹೊಡೆದು ಲಕ್ಷಾಧೀಶ್ವರ  ಆದನಂತೆ"  "ಇಪ್ಪತ್ತು ವರ್ಷಗಳಿಂದ  ಮಕ್ಕಳಾಗದ ಕೊಳ್ಳೆಗಾಲದ  ಶೆಟ್ಟರ ಸಂಸಾರದವರು ಇಲ್ಲಿಗೆ ಬಂದು ಹೋದ ಮೇಲೆ   ಮಕ್ಕಳಾಗುವ    ಸೂಚನೆ  ಕಂಡು ಬಂತಂತೆ" ,  ಇಂತಹ ಹಲವು  ವಿಚಾರಗಳು ಊರಿಗೆ ದಿನಕ್ಕೆ ಒಂದರಂತೆ  ಬರುತ್ತಿದ್ದವು. ಹೊರಡುವ ದಿನ ಬಂದೆ ಬಿಟ್ಟಿತು,  ನಾವುಗಳೂ  ಸಹ ಎತ್ತಿನ ಗಾಡಿಯಲ್ಲಿ  ಈ ವಿಸ್ಮಯ ನೋಡಲು ಹೊರಟೆವು.


 ಅಲ್ಲಿಗೆ ಹೋದ ನನಗೆ ಕಂಡಿದ್ದು  ಋಷಿಗಳ ಜಟೆಯ ದರ್ಶನ ಮಾಡಲು  ಮೈಲುದ್ದದ  ಕ್ಯೂ ಇತ್ತು. ಆದರೆ ನಮ್ಮ ಅಪ್ಪನಿಗೆ ಪರಿಚಯದ   ಜನರಿದ್ದ ಕಾರಣ   ಸ್ಪೆಷಲ್ ದರ್ಶನ  ಪ್ರಾಪ್ತಿಯಾಯಿತು. ಹತ್ತಿರ ಹೋದ ನಮಗೆ ಕಂಡಿದ್ದು    ಬಹಳ ದೊಡ್ಡ  ಗೋಲಕ,  ಅರಳಿಕಟ್ಟೆಯ ಸನಿಹ  ಅರಿಸಿನ, ಕುಂಕುಮ , ದೂಪ, ಗಂಧದ ಕಡ್ಡಿ,  ಹೂ, ಇವುಗಳ ಮಾರಾಟ ಜೋರಿತ್ತು. ಅಲ್ಲಿ ಉದ್ಭವಿಸಿದ್ದ  ಋಷಿಯ ಜಟೆ  ಜೊತೆಯಲ್ಲೇ  ಉದ್ಭವಿಸಿದ್ದ ಪೂಜಾರಿ  ಭರ್ಜರಿ ಪೂಜೆ  ಮಾಡಿದ್ದರು, ದರ್ಶನ ಪಡೆದ  ನಾವೂ ಹೊರಗೆ ಬಂದ್ವಿ  ಆದರೆ ನಮ್ಮ ಅಪ್ಪ ಅಮ್ಮನಿಗೆ  ಯಾಕೋ ಈ ಬಗ್ಗೆ ಅನುಮಾನ .................!!!! ನನಗೋ ಏನೂ ಗೊತ್ತಾಗದೆ  ಹೋಟೆಲ್ ನಲ್ಲಿ ತಿಂಡಿ ತಿನ್ನುವ   ಕಾತರ.  ಹೋಟೆಲ್ ನಲ್ಲಿ ಜಾಮೂನು , ಮಸಾಲೆ ದೋಸೆ ತಿಂದು   ಊರಿಗೆ ಅಪ್ಪ ಅಮ್ಮನ ಜೊತೆ  ಹಳ್ಳಿಗೆ ವಾಪಸ್ಸು ಬಂದೆ . ದಾರಿಯಲ್ಲಿ ಅಪ್ಪಾ  ಹೇಳುತ್ತಿದ್ದರು ...." ಲೇ ಯಾಕೋ ಅನುಮಾನ  ಕಣೆ  ಅಲ್ಲಿನ  ವಾತಾವರಣ ನೋಡಿದರೆ  ಅಲ್ಲಿರುವ  ಋಷಿ ಜಟೆ  ಬಗ್ಗೆ  ಅನುಮಾನ ಕಾಡ್ತಾ ಇದೆ " ಅಂದರು ಆದರೆ ಗಾಡಿ ಹೊಡೆಯುತ್ತಿದ್ದ   ಮರಯ್ಯ  ತನ್ನ ಅಸಮಧಾನ ವ್ಯಕ್ತ ಪಡಿಸುತ್ತಾ " ಸ್ವಾಮೀ  ದಯವಿಟ್ಟು ತಪ್ಪಾಯ್ತು ಅನ್ನಿ ಎಲ್ಲಾರ  ಉಂಟಾ  ಅದು "ರುಸಿಗಳ ಜುಟ್ಟೆ" ಬುದ್ದಿ ," ಅಂದಾ.

ಹಾಗೂ ಹೀಗೂ  ಸ್ವಲ್ಪ ದಿನ ನಡೆದಿತ್ತು.  ಒಂದು ದಿನ  ಒಂದು ಸುದ್ದಿ ಬಂತೂ,  "ಕುನ್ನೀರ್ ಕಟ್ಟೆ"  ಹತ್ತಿರ ಮೂಡಿದ್ದ   "ಋಷಿಗಳ ಜಟೆ  "   ಸುಳ್ಳಂತೆ  ಯಾರೋ ಕೆಲವು ಪುಂಡರು  ಜನರನ್ನು  ವಂಚಿಸಿ ದುಡ್ಡು  ಮಾಡಲು  "ಕುದುರೆ ಬಾಲದ  ಜುಟ್ಟನ್ನು"  ಅರಳಿ ಮರದ ಕೆಳಗೆ  ನೆಟ್ಟು  ಅದಕ್ಕೆ  ಋಷಿಗಳ  ಜಟೆ  ಅಂತಾ ಹೆಸರು ಕರೆದು , ಅದಕ್ಕೆ ಕಥೆ ಕಟ್ಟಿ  ಜನಗಳ ಧಾರ್ಮಿಕ ಭಾವನೆಯ ಜೊತೆ ಆಟಾ  ಆಡಿದ್ದರೆಂದೂ .  ಮಾತುಗಳು ಕೇಳಿಬಂದವು. ಹೌದು ಅಂದು ಯಾರೋ ಕೆಲವು ಮಂದಿ ಬುದ್ದಿವಂತರು  ಸತ್ತ ಕುದುರೆಯ ಬಾಲದ ಜುಟ್ಟನ್ನು  ಅರಳಿ ಮರದ ಕೆಳಗೆ ನೆಟ್ಟು , ದೊಡ್ಡದಾದ ಗೋಲಕ ಇಟ್ಟು ,  ಅದಕ್ಕೊಂದು ಸಾರವಜನಿಕರನ್ನು  ಎಮಾರಿಸಿದ್ದರು.ಕಥೆ ಕಟ್ಟಿ ಅದಕ್ಕೆ ಪೂರಕವಾಗಿ  ಅಂದು ನಮ್ಮ ಸಮಾಜವೂ ಸಹ ಅಂದು ನಿಜ ತಿಳಿಯದೆ  ಮೋಸ ಹೋಗಿತ್ತು, ಆದರೆ ದುಡ್ಡು ಮಾಡಿ ಕೊಂಡ  ಹಲವರು ನಕ್ಕರೆ,  ಮಾರಾಟಗಾರರು  ಇದು ಇನ್ನೂ ಸ್ವಲ್ಪ ದಿನ ಹೀಗೆ ಇದ್ದಿದ್ದರೆ  ಚಂದಾ ಇತ್ತು ಅನ್ನುತ್ತಿದ್ದರು.  .................... ಇವತ್ತಿಗೂ  ಕುದುರೆ  ಬಾಲದ ಜುಟ್ಟು ನೋಡಿದರೆ  ಮಳವಳ್ಳಿಯಲ್ಲಿ ನಡೆದ ಈ   ಘಟನೆ ನೆನಪಿಗೆ ಬರುತ್ತದೆ.  ...........ಹೀಗೆ ನಿಮ್ಮ ಊರಿನಲ್ಲೂ ಯಾವುದಾದರು ಇಂತಹ  ಘಟನೆ ಆಗಿರ ಬಹುದಲ್ವಾ...??



Sunday, November 18, 2012

ರೀ ನಮ್ಮನೆ ಹಾಲೂ ಹಳ್ಳಿದೂ ಗೊತ್ತಾ ???

ಕಳೆದ ಹದಿನಾರು ಸಂಚಿಕೆಗಳಲ್ಲಿ  ಶಿರಸಿ ಪ್ರವಾಸದ  ಚಿತ್ರ ಸಹಿತ ಲೇಖನ  ಕೊಟ್ಟು ನಿಮ್ಮನ್ನು  ಕಾಡಿದ್ದು  ಸಾಕಾಯ್ತು ರೀ, ಅದಕ್ಕೆ ಪ್ರಾಯಶ್ಚಿತ್ತವಾಗಿ ಈ ಲೇಖನ ಚಿತ್ರವಿಲ್ಲದೆ ಬರೆಯುವ ಪ್ರಯತ್ನ . ಓದಿ  ಒಂತರಾ ಇಷ್ಟಾ ಆಗುತ್ತೆ. ಬನ್ನಿ  ಶುರುಮಾಡೋಣ ನಮ್ ಪುರಾಣ.

ಪಟ್ಟಣದ  ಸಹವಾಸ  ಮಾಡಿ ಬಹಳ ವರ್ಷವೇ ಆಯ್ತು  ಬಿಡಿ. ಹಳ್ಳಿಯಲ್ಲಿ ಹುಟ್ಟಿ, ಬಾಲ್ಯ ಸವೆಸಿ , ನಂತರ ಉದರ ನಿಮಿತ್ತಂ ಪಟ್ಟಣ ಸೇರಿದವ ನಾನು. ಮೊದಲು ಪಟ್ಟಣಕ್ಕೆ ಬಂದ ಹೊಸದರಲ್ಲಿ  ಪಪಾಯ ಹಣ್ಣು, ಮಜ್ಜಿಗೆ, ಮೊಸರು, ಇವುಗಳನ್ನು ಮಾರಾಟ ಮಾದುತ್ತಿದ್ದುದ್ದನ್ನು  ನೋಡಿ ನಗು ಬರುತ್ತಿತ್ತು. ಹಳ್ಳಿಯಲ್ಲಿ ಪ್ರತೀ ಮನೆಯಲ್ಲೂ ಹೇರಳವಾಗಿದ್ದ ಇವುಗಳನ್ನು  ಯಾರೂ ಮಾರುತ್ತಿರಲಿಲ್ಲ  ಸಾಕಾಗುವಷ್ಟು ಬಳಸಿ ನಂತರ  ಕಲಗಚ್ಚು ಮಾಡುತ್ತಿದ್ದರು, ಇವುಗಳನ್ನು ಹಸುಗಳು, ಎಮ್ಮೆಗಳು ಕುಡಿದು ಬಾಯಾರಿಕೆ ನಿವಾರಿಸಿ ಕೊಳ್ಳುತ್ತಿದ್ದವು .ಇಂತಹ ಪ್ರದೇಶದಿಂದ ಬಂದ ನನಗೆ ಇವುಗಳನ್ನು ಮಾರಾಟ ಮಾಡಿದರೆ ನಗು ಬರದೆ ಇರುತ್ತದೆಯೇ. ಆದರೆ ಬರ್ತಾ ಬರ್ತಾ ಜ್ಞಾನ ಪ್ರಸಾರಣೆ  ಪತ್ರಿಕೆ, ಟಿ .ವಿ. , ಕೇಬಲ್, ಮುಂತಾದವುಗಳಿಂದ  ಹಳ್ಳಿಗೆ ನುಗ್ಗಿತು.  ಜ್ಞಾನದ ಜೊತೆ  ಕೆಟ್ಟ ಸಂಪ್ರದಾಯಗಳೂ ನುಸುಳಿಕೊಂಡು  ಹಳ್ಳಿಯಲ್ಲಿನ ಜೀವನ ಏರುಪೇರಾಯಿತು. ಅಲ್ಲಿನ ಜನರೂ  ಬದಲಾವಣೆ  ಗಾಳಿಗೆ ತೂರಿಕೊಂಡರು.


ಬನ್ನಿ ನಮ್ಮ ಕಥೆಗೆ . ಪಟ್ಟಣದ ನಮ್ಮ ಮನೆಯ ಪಕ್ಕ ಒಂದು ಕುಟುಂಬವಿತ್ತು, ನಮ್ಮ ಕುಟುಂಬದೊಡನೆ  ಒಳ್ಳೆಯ ಸಂಬಂಧವಿತ್ತು.ಎಲ್ಲರೂ ದೊಡ್ಡ ಡಿಗ್ರೀ ಓದಿದವರೇ , ತಮ್ಮ ಮನೆಗೆ ಏನೇ ಬಂದರೂ ಫ್ರೆಶ್ ಆಗಿ ಬರಬೇಕೂ ಅನ್ನೋ ಆಸೆ. ಇನ್ನು ಹಣ್ಣು ತರಕಾರಿಯನ್ನು  ಪ್ರತೀ ಭಾನುವಾರ ಸುತ್ತ ಮುತ್ತಲಿನ  ಹಳ್ಳಿಗಳಿಂದ ತಂದರೆ ಚೆನ್ನಾಗಿರುತ್ತೆ ಅಂತಾ  ಹಳ್ಳಿಗಳಿಂದ ತರುತ್ತಿದ್ದರು. ಇನ್ನು ಮನೆಗೆ ಅಗತ್ಯ ವಿರುವ ಹಾಲು, ಹಾಗು ಬೆಣ್ಣೆಯನ್ನು  ಹಳ್ಳಿಯವರಿಂದ ಪಡೆಯುತ್ತಿದ್ದರು. ಇದನ್ನು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದರು.


ಒಮ್ಮೆ ಹೀಗಾಯ್ತು  ನಮ್ಮ ತಾಯಿಯ ಬಳಿ ಬಂದ ಪಕ್ಕದ ಮನೆಯಾಕೆ  " ಅಜ್ಜಿ  ನೋಡಿ ಹಳ್ಳಿಯಿಂದ  ಬೆಣ್ಣೆ ಬಂದಿದೆ , ಎಷ್ಟು ಗಮ್ ಅಂತಾ ವಾಸನೆ ಬರ್ತಿದೆ ಆಲ್ವಾ"!!  ಅಂತಾ ಬೆಣ್ಣೆ ಸಹಿತ ಬಂದರು,  ಅದನ್ನು ನೋಡಿದ ನನ್ನ ತಾಯಿ " ನೋಡಿ ಭಾರತಿ ಈ ಬೆಣ್ಣೆ  ನಾಡ ಬೆಣ್ಣೆ  ಅಲ್ಲಾ ಇದು ಕಲಬೆರಕೆ ಅನ್ನಿಸುತ್ತೆ" ಅಂದರು, ಆಕೆಗೆ ಯಾಕೋ ಒಂತರಾ ಆಯ್ತು. ನಮ್ಮ ತಾಯಿ ಹಳ್ಳಿಯಲ್ಲಿ ಹತ್ತಾರು , ಹಸು, ಎಮ್ಮೆ ಗಳಿಂದ ಹಾಲು ಕರೆದು  ಮೊಸರು, ಬೆಣ್ಣೆ ಮಾಡುತ್ತಿದ್ದರು. ಹಾಗಾಗಿ ಅವರಿಗೆ ಅದರ ಅಸಲಿಯತ್ತು  ಗೊತ್ತಾಗುತ್ತಿತ್ತು. ಇನ್ನು  ಅವರ ಮನೆಯ ಹಾಲಿನ ಬಗ್ಗೆ ಅವರ ಹೆಮ್ಮೆ ಬಹಳವಿತ್ತು. ಯಾರೇ ಅವರ ಮನೆಗೆ ಹೋದರೂ  ಅವರಿಗೆ ಅವರ ಮನೆಗೆ ಬರುವ ಹಳ್ಳಿ ಹಾಲಿನ ವರ್ಣನೆ ಆಗುತ್ತಿತ್ತು.                 ''ರೀ ನಮ್ಮನೆ ಹಾಲೂ ಹಳ್ಳಿದೂ  ಗೊತ್ತಾ ???'' ಅಂತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು

ಒಮ್ಮೆ ನಾನೂ ಸಹ ಅವರ ಮನೆಯಲ್ಲಿನ ಕಾರ್ಯಕ್ರಮಕ್ಕೆ ಹಾಜರಾಗಬೇಕಾಯಿತು.  ಅಲ್ಲಿ ಅವರ ವಿವರಣೆ  ಹೀಗಿತ್ತು,             "ಬಾಲೂ ಸಾರ್  ಪಟ್ಟಣದಲ್ಲಿ ಸಿಗುವ ಡೈರೀ ಹಾಲೂ ಆರೋಗ್ಯಕ್ಕೆ ಒಳ್ಳೆದಲ್ಲಾ ರೀ ....... ....."  "ನೋಡಿ  ನಮ್ಮ ಮನೆಗೆ ಸುಮಾರು ಐದು ವರ್ಷಗಳಿಂದ  ಹಳ್ಳಿಯಿಂದ  ಹಾಲು ಬರುತ್ತೆ",  "ಟಕ್ ಅಂತಾ ಬೆಳಿಗ್ಗೆ ಎಂಟು ಘಂಟೆಗೆ ತಂದು ಬಿಡುತ್ತಾಳೆ ನಮ್ಮ ನಿಂಗಮ್ಮ."   "ನಾಡ  ಹಸುವಿನ ಹಾಲೂ ರೀ !! ಒಳ್ಳೆ  ಕೆಂಡ ಸಂಪಿಗೆ ಬಣ್ಣ ಇರುತ್ತೆ " ,      "ವರ್ಷದಲ್ಲಿ  ಒಂದು ದಿನವೂ ತಪ್ಪಿಲ್ಲಾ ರೀ ಅದೇ ಕ್ವಾಲಿಟಿ ಹಾಲೂ ರೀ "   "ನೋಡಿ ನೀವೂ ಸಹ ಅವಳ ಬಳಿ  ವರ್ತನೆಗೆ  ಹಾಲು  ಹಾಕಿಸಿ  ಕೊಳ್ಳಿ "  ಅಂತಾ ಶಿಫಾರಸ್ಸು ಮಾಡಿದರು. ಆದರೂ ನನಗೆ ಒಂದು ಪ್ರಶ್ನೆಗೆ ಉತ್ತರ ಸಿಗಲಿಲ್ಲ,  ಹಳ್ಳಿಯಲ್ಲಿದ್ದ  ನಮ್ಮ ಮನೆಯ ಹಸು ಎಮ್ಮೆಗಳು  ಯಾವುವೂ  ವರ್ಷ ಪೂರ್ತಿ ಹಾಲು ನೀಡುತ್ತಿರಲಿಲ್ಲ..  ಅವುಗಳೂ ಸಹ ಗಬ್ಬ ಧರಿಸ ಬೇಕೂ, ಕರು ಹಾಕಬೇಕೂ , ಕರು ಹಾಕಿದ ತಕ್ಷಣ ಹಾಲೂ ಸಿಗುವುದಿಲ್ಲ, ಮೊದಲ ಕೆಲವು ದಿನ ಅದು ಗಿಣ್ಣು ಹಾಲು ಆಗಿರುತ್ತೆ, ಹಾಲಿನಂತೆ ಬಳಸಲು ಆಗುವುದಿಲ್ಲ ಆದರು ಒಂದು ದಿನವೂ ತಪ್ಪದೆ ಹೇಗೆ ಹಾಲನ್ನು ನೀಡಲು ಸಾಧ್ಯ ವೆಂದು ಅನ್ನಿಸುತ್ತಿತ್ತು.  ನಾನು ಅವರಿಗೆ "ಇಲ್ಲಾ  ಮುರಳಿ ಸಾರ್ ನನ್ನ  ದೈನಂದಿನ ಜೀವನ ಕ್ರಮಕ್ಕೆ  ಎಂಟು ಘಂಟೆ ತನಕ ಕಾಯಲು ಆಗೋಲ್ಲಾ."   " ಹಾಗಾಗಿ  ನಮ್ಮ ಕುಟುಂಬ  ನಂದಿನಿ ಹಾಲೂ ,ಬೆಣ್ಣೆ, ಇವುಗಳಿಗೆ ಹೊಂದಿಕೊಂಡಿದ್ದೇವೆ , ನೋಡೋಣ ಮುಂದೆ ಅಂತಾ ಮಾತು ತೇಲಿಸಿದೆ"   ಆದರೆ  ಅವರು "ನೋಡಿ  ಮಿಸ್ಟರ್ ಬಾಲೂ  ಡೈರೀ ಹಾಲೂ ಪ್ರಯೋಜನ ಇಲ್ಲಾ ರೀ ವಿಟಮಿನ್ಸ್ ಎಲ್ಲಾ ತೆಗೆದು ಹಾಕಿರ್ತಾರೆ  ಅದಕ್ಕೆ  ನಾವೂ ಹಳ್ಳಿ ಹಾಲು ಇಷ್ಟಾ ಪಡೋದು " ಅಂತಾ ಬುದ್ದಿ ಹೇಳಿದರು. ಪಾಪ ಅವರು ಹೇಳಿದ್ದು ನಮ್ಮ ಮೇಲಿನ ಕಾಳಜಿಯಿಂದ ಆಗಿತ್ತು.


ನಮ್ಮ ಮನೆಗೆ ಹಾಲು ತರುವ ಕಾಯಕ ನನ್ನದು ಬೆಳಿಗ್ಗೆ ವಾಕಿಂಗ್ ಮುಗಿಸಿ ಬರುವಾಗ  ದಾರಿಯಲ್ಲಿ ಸಿಗುವ ನಂದಿನಿ ಮಳಿಗೆಯಲ್ಲಿ  ಹಾಲೂ ಮೊಸರು, ಬೆಣ್ಣೆ ತರುತ್ತೇನೆ. ಹಾಗಾಗಿ ನಮ್ಮ ಮನೆಗೆ ಮುಂಜಾನೆ 6.30 ಗೆಲ್ಲಾ ಹಾಲಿನ  ಆಗಮನ ವಾಗುತ್ತೆ. ಒಮ್ಮೆ ಹೀಗಾಯ್ತು. ಬೆಂಗಳೂರಿಗೆ ಹೋಗ ಬೇಕಾಗಿದ್ದ ಕಾರಣ ಮುಂಜಾನೆ ವಾಕಿಂಗ್ ಬದಲು ನೇರವಾಗಿ  ನಂದಿನಿ ಹಾಲಿನ ಮಳಿಗೆ ಕಡೆ ಹೆಜ್ಜೆ ಹಾಕಿದೆ. ಹಾಲಿನ ಮಳಿಗೆ ಬಳಿ  ಮೂರು ಜನ ಹಳ್ಳಿ ಹೆಂಗಸರು  ನಂದಿನಿ ಹಾಲಿನ ಪ್ಯಾಕೆಟ್ ಖರೀದಿಸಿ  ತಮ್ಮ  ಬುಟ್ಟಿಯಲ್ಲಿದ್ದ  ಪಾತ್ರೆಗೆ  ಸುರಿದುಕೊಳ್ಳುತ್ತಿದ್ದರು !! ಹತ್ತಿರ ತೆರಳಿದ ನನ್ನನ್ನು ನೋಡಿ  ತಕ್ಷಣ ಏನೋ ಮಾತಾಡುವಂತೆ ನಟನೆ ಮಾಡುತ್ತಿದ್ದರು.   ನನಗೂ ಅಚ್ಚರಿ  ನಾನು ದಿನಾಲು ವಾಕಿಂಗ್ ಹೋಗುವ ಕಡೆ  ಸಿಗುವ ಬಸ್ ನಿಲ್ದಾಣದಲ್ಲಿ ಹಲವಾರು  ಹಳ್ಳಿ ಗಳಿಂದ  ಹೆಂಗಸರು ನಮ್ಮ  ನಗರಕ್ಕೆ ಹಳ್ಳಿ ಗಳಿಂದ  ಹಾಲು, ಮೊಸರು, ತರಕಾರಿ ಮಾರಲು   ಮುಂಜಾನೆಯೇ  ಬಂದು ಜಮಾಯಿಸುವುದನ್ನು ಗಮನಿಸುತ್ತಿದ್ದೆ.  ಇವರೂ ಸಹ ಅವರ ಗುಂಪಿಗೆ ಸೇರಿದ  ಮಹಿಳೆಯರೇ  ಆಗಿದ್ದರು.  ನಾನೂ ಇದನ್ನು ಗಮನಿಸಿಲ್ಲ ಅನ್ನುವ ಹಾಗೆ ನನ್ನ ಪಾಲಿನ ಹಾಲು ಖರೀದಿಸಿ  ದೂರದಲ್ಲಿ ಅವರಿಗೆ ಕಾಣದಂತೆ  ನಿಂತು ಅವರ ಚಟುವಟಿಕೆ ಗಮನಿಸಿದೆ. ಮತ್ತೆ ಚಟುವಟಿಕೆ ಶುರು ಆಯ್ತು  ಅವರಲ್ಲಿ ಒಬ್ಬಳು " ರತ್ನಿ ಬಿರಬಿರನೆ ಸುರಕೋ  ಹೊತ್ತಾಯ್ತು , ಆ ಮಾಡಿ ಮನೆಯವಳು ಬಯ್ತಾಳೆ ಲೇಟಾದರೆ"  ಅಂದ್ಲೂ..........,ಮತ್ತೊಬ್ಬಳು    " ಏ ನಿಂಗಿ ಸುಮ್ಕಿರು  ನಂಗೆ ಗೊತ್ತಿಲ್ವಾ  ಯಾರಾದ್ರೂ ನೋಡ್ತಾವ್ರಾ ಅಂತಾ ನನ್  ಎದ್ರುಕೆ  ನಿನಗೆನ್ ಗೊತ್ತು". ಅಂತಾ ಆಕಡೆ ಈಕಡೆ ನೋಡಿ ತನ್ನ  ಪಾತ್ರೆಗೆ ಐದು ಪ್ಯಾಕೆಟ್  ನಂದಿನಿ ಹಾಲನ್ನು ಸುರಿದು ಕೊಂಡಳು.  ನಂತರ  ಆ ಹಾಲಿಗೆ ಪಕ್ಕದ ಕೊಳಾಯಿಯ ನೀರನ್ನು  ಬೆರೆಸಿ  ಅದಕ್ಕೆ ಸ್ವಲ್ಪ ಕೇಸರಿ ಬಣ್ಣದ  ಪುಡಿ ಸೇರಿಸಿ  ಕೆಂಡ ಸಂಪಿಗೆ  ಬಣ್ಣ  ನೀಡಿದರು.  ಆಗ ನೋಡಿದೆ  ಹಳ್ಳಿ ಹಾಲಿನ  ಬಣ್ಣ ಬಯಲಾಯಿತು.

ಮನೆಗೆ ಬಂದವನೇ  ಇರುವ ವಿಚಾರವನ್ನು  ನನ್ನ ಪತ್ನಿಗೆ ತಿಳಿಸಿದೆ . "ಹೋಗ್ಲಿ ಬಿಡೀ ಅವರ ಕರ್ಮ ನಾವೇನು ಮಾಡೋಕೆ ಆಗುತ್ತೆ " ಅಂದ್ಲೂ ,  ಯಾಕೋ ಮನಸು ತಡೆಯಲಿಲ್ಲ.ಹೊರಗೆ ಬಂದೆ   ಮನೆಯ ಮುಂದೆ ಪಕ್ಕದ ಮನೆಯವರು  ನಿಂತಿರುವುದನ್ನು ಕಂಡು  'ನಮಸ್ತೆ ಮುರಳಿ ಸರ್ " ಎಂದೇ ಅವರೂ ಸಹ ನಮಸ್ತೆ "ಬಾಲೂ ಸರ್ ಏನ್ ಬ್ಯುಸೀನಾ"   ಅಂತಾ ಹತ್ತಿರ  ಬಂದರು. ನಾನೂ "ತಪ್ಪು ತಿಳೀಬೇಡಿ ಮುರಳಿ ಸರ್" ಅಂತಾ ಹೇಳಿ   ಇವತ್ತು ಹಾಲಿನ ಕಥೆ  ಹೀಗಿತ್ತು  ಅಂತಾ ವರದಿ ಒಪ್ಪಿಸಿದೆ . ಅವರಿಗೂ ಮೊದಲು ನಂಬಿಕೆ ಬರಲಿಲ್ಲ  . ಆದರೂ ನನ್ನ ಮಾತನ್ನು ತೆಗೆದು ಹಾಕಲು ಮನಸಿಲ್ಲ ಹಾಗಾಗಿ  "ಸಾರ್ ನಿಮ್ಮ ಜೊತೆ ನಾಳೆ ಬರುತ್ತೇನೆ ಸ್ವಲ್ಪ ತೋರಿಸಿ ಸಾರ್  ನಾನೂ ನೋಡ್ತೇನೆ" ಅಂದ್ರೂ  ಮತ್ತೆ ಮಾರನೆಯ ದಿನ  ನಾ ಕಂಡ ಸೀನು ಪುನರಾವರ್ತನೆ  ಆಗಿತ್ತು, ಜೊತೆಗೆ ಅವರ ಮನೆಗೆ ಹಾಲು ತಂದು ಹಾಕುತ್ತಿದ್ದ ಹೆಂಗಸೂ ಸಹ ಅಲ್ಲಿದ್ದಳು.  ಮುರಳಿ ಯವರಿಗೆ ಕೋಪ ಬಂದು ಪ್ಯಾಕೆಟ್ ಹಾಲನ್ನು  ಪಾತ್ರೆಗೆ ಸುರಿಯುತ್ತಿದ್ದ  ಹೆಂಗಸಿನ ಬಳಿ  ಬಂದು"  ಏನಮ್ಮಾ  ನಿನ್ನ ಕರಾಮತ್ತು ನಿಂದು ನಮಗೆಲ್ಲಾ  ಹಳ್ಳಿ ಹಾಲು  ಅಂತಾ ಹೇಳಿ ಮೋಸಾ ಮಾಡ್ತಾ ಇದ್ದೀಯ?' ಅಂತಾ ರಂಪಾಟ ಮಾಡಿ  ಇವತ್ತಿನಿಂದಲೇ    ನಮ್ಮ ಮನೆಗೆ  ಹಾಲು ತರಬೇಡ    ನಮಗೆ ನಂದಿನಿ ಹಾಲು  ಸಾಕು" ಅಂತಾ  ಸರಸರನೆ ಹೋಗಿ  ಮೂರು ಪ್ಯಾಕೆಟ್ ನಂದಿನಿ ಹಾಲನ್ನು ಮಳಿಗೆಯಲ್ಲಿ  ಕೊಂಡರು . ದಾರಿಯಲ್ಲಿ ಬರುವಾಗ  " ನೋಡಿ ಸಾರ್  ನಾವೋ ಎಂತಾ ಮೋಸ ಹೋಗಿದ್ವೀ  , ನಿಮ್ಮ ಮಾತನ್ನು ಮೊದಲೇ ಕೇಳಬೇಕಿತ್ತು," ಅಂತಾ  ಪಶ್ಚಾತ್ತಾಪ ಪಟ್ಟರು. ಅಂದಿನಿಂದ  ಅವರ ಮನೆಯಲ್ಲಿ  " ರೀ ನಮ್ಮನೆ ಹಾಲೂ ಹಳ್ಳಿದೂ  ಗೊತ್ತಾ??" ಅನ್ನೋ ಮಾತು ನಿಂತು  ಹೋಗಿದೆ. .........!!! ಅಂದಹಾಗೆ ನಿಮ್ಮ ಮನೆ ಹಾಲು  ಯಾವುದು??


Wednesday, November 14, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.16. ಶಿರಸಿ ನಿನಗೆ ಧನ್ಯವಾದಗಳು ಮತ್ತೆ ಬರುವೆ ನಿನ್ನಲ್ಲಿಗೆ.!!!

 

 

ಶಿರಸಿ ಮಾರಿಕಾಂಬೆ ಪ್ರಸೀದತು 



ವೇಳೆ  ನಾಲ್ಕು ಘಂಟೆ ಆಗಿತ್ತು.  ಸಂಜೆ ಮೈಸೂರಿಗೆ ತೆರಳುವ ಬಸ್ಸು  7  ಘಂಟೆಗೆ  ಇದ್ದ ಕಾರಣ  ಹೊರಡುವ ಸಿದ್ದತೆ ಆಗಬೇಕಿತ್ತು......!!! ಶಿರಸಿಗೆ ವಿದಾಯ ಹೇಳುವ ಸಮಯ  ಬಂದಿತ್ತು. ................!!!! ಹೌದು ಈ ಅಲೆದಾಟದಲ್ಲಿ ಎರಡು ದಿನ ಕಳೆದದ್ದೇ ಗೊತ್ತಾಗಲಿಲ್ಲ. ಮೈಸೂರಿಗೆ ಹೊರಡಲು ಸಿದ್ದತೆ ನಡೆಸಬೇಕಾಗಿತ್ತು.  ಶಿರಸಿ ಜಾತ್ರೆಯಿಂದ  ಅತ್ತೆಮನೆಗೆ ದೌಡಾಯಿಸಿದೆ. ನಮ್ಮ ಹರ್ಷ ತನ್ನ ಬೈಕನ್ನು ಮಿಂಚಿನ ವೇಗವಾಗಿ ಚಾಲನೆ ಮಾಡಿ ಕೇವಲ ಹತ್ತು ನಿಮಿಷದಲ್ಲಿ ಮನೆಯನ್ನು ತಲುಪಿಸಿದ.  ಮನೆಯ ಬಳಿ ಇಳಿದ ನಾನೂ  ಹರ್ಷ ಹೆಗಡೆಗೆ ವಿದಾಯ ಹೇಳುವ ಕ್ಷಣ  ಬಂದಿತ್ತು, ನನಗೆ ಅರಿವಿಲ್ಲದಂತೆ  ಮನದಲ್ಲಿ  ಅವನ ಬಗ್ಗೆ ಪ್ರೀತಿ  ಹಾಗು ಅವನನ್ನು ಬಿಟ್ಟು ಊರಿಗೆ ತೆರಳಬೇಕಲ್ಲಾ ಎನ್ನುವ ಬೇಸರ ಕಾಡಿತು.




ಗೆಳೆಯ  ಹರ್ಷ ಹೆಗ್ಡೆ.



ಎರಡು ದಿನದಿಂದ  ತನ್ನ ಬೈಕಿನಲ್ಲಿ  ನನ್ನನ್ನು ಅಲೆದಾಡಿಸಿ  ಒಂದು ಹನಿ ಪೆಟ್ರೋಲ್ ಸಹ ನನ್ನ ಕೈನಿಂದ ಹಾಕಿಸಲು ಅವಕಾಶ ಕೊಡದೆ  ಮೊದಲ ದಿನ  ಸಹಸ್ರಲಿಂಗ,  ಸೋಂದೆ ಅರಸರ ಗದ್ದಿಗೆ, , ಸೋಂದೆ ಅರಸರ ಕೋಟೆ, ಮುತ್ತಿನ ಕೆರೆ,  ಶ್ರೀ ಸ್ವರ್ಣವಲ್ಲಿ ಮಠ, ಶ್ರೀ ವಾಧಿರಾಜ ಮಠ, ಬನವಾಸಿ, ದರ್ಶನ ಮಾಡಿಸಿ, ಎರಡನೆಯ ದಿನ  ಶಿರಸಿ  ಮಾರಿಕಾಂಬಾ  ದೇವಾಲಯ, ಕೊಳಗಿ ಬೀಸ್ , ಭೀಮನೇರಿ ಗುಡ್ಡ,  ಶಿರಸಿ ಜಾತ್ರೆ ಇವೆಲ್ಲವನ್ನೂ ಉತ್ಸಾಹದಿಂದ ತೋರಿಸಿ ಸಂಭ್ರಮ ಪಟ್ಟ ಹುಡುಗ. ಯಾವ ಜನ್ಮದ  ಮಿತ್ರನೋ ಕಾಣೆ ಆರ್ಕುಟ್  ಸಾಮಾಜಿಕ ತಾಣದಿಂದ ಪರಿಚಯವಾಗಿ  ಬಹಳ ದಿನಗಳ ಪರಿಚಯವೇನೋ ಎಂಬಂತೆ  ನನ್ನನ್ನು  ಆತ್ಮೀಯವಾಗಿ  ಆದರಿಸಿದ  ಗೆಳೆಯ ಇವನು. ಇವನ ಸಹಾಯ ವಿಲ್ಲದಿದ್ದರೆ  ಶಿರಸಿಯ ಪ್ರವಾಸ ಸಾಧ್ಯವೇ ಇಲ್ಲವಾಗಿತ್ತು. " ಬಾಲೂ ಸಾರ್ ಬಹಳ ಖುಷಿಯಾಗಿತ್ತು ಎರಡು ದಿನ  ನಿಮ್ಮ ಜೊತೆ ಕಳೆದದ್ದು ಈಗ ಬೇಸರವಾಗುತ್ತಿದೆ " ಎಂದು ಹೇಳಿ  ಅಲ್ಲಿಂದ  ಹರ್ಷ ಹೊರಟೇಬಿಟ್ಟ .








ಮನೆ ಸೇರಿದ ನಾನು ನನ್ನ ಅತ್ತೆಯ ಮನೆ  ಸೇರಿದೇ ಎರಡು  ದಿನಗಳಿಂದ ಚೆಲ್ಲಾಪಿಲ್ಲಿಯಾಗಿ  ಬಿದ್ದಿದ್ದ  ನನ್ನ ವಸ್ತುಗಳನ್ನು ಕಿಟ್ ಬ್ಯಾಗಿಗೆ ತುರುಕಿ,  ಕ್ಯಾಮರಾ ಹಾಗು ಲೆನ್ಸ್  ಜೋಪಾನ ಮಾಡಿಕೊಂಡು ಪ್ಯಾಕ್ ಮಾಡಿದೆ., ಎಲ್ಲರೊಡನೆ ಆತ್ಮೀಯವಾಗಿ ಒಂದಷ್ಟು ಹರಟೆ ಹೊಡೆದು   ಎಲ್ಲರಿಗೂ ಪ್ರೀತಿಯ  ವಿದಾಯ  ಹೇಳಿ  ಬಸ್ ನಿಲ್ದಾಣದ ಕಡೆಗೆ . ಹೊರಟೆ.  ಯೆಲ್ಲಾಪುರ ದಿಂದ ಬರಬೇಕಾದ ಬಸ್ಸು ಬರಲು ಬಹಳ ಸಮಯ ತೆಗೆದು ಕೊಂಡಿತು .ಶಿರಸಿಯ ಹೊಸ ಬಸ್ ನಿಲ್ದಾಣ ಜನಗಳಿಂದ ತುಂಬಿ ಹೋಗಿತ್ತು, ಯಾವುದೇ ಬಸ್ ಬಂದರೂ ಇರುವೆಗಳಂತೆ ಜನ ಮುತ್ತುತ್ತಿದ್ದರು. ಕೊನೆಗೂ ನಮ್ಮ ಬಸ್ ಬಂತು, ಮೊದಲೇ ಟಿಕೆಟ್  ಕಾಯ್ದಿರಿಸಿದ್ದ ಕಾರಣ, ನನಗೆ ಆಸನಕ್ಕೆ ತೊಂದರೆಯಾಗಲಿಲ್ಲ , ನನ್ನ ಲಗ್ಗೆಜನ್ನು ಬಸ್ನಲ್ಲಿ ಇಟ್ಟು  ಹಾಗೆ  ಕಣ್ಣು ಹಾಯಿಸಿದೆ , ಅರೆ ಹರ್ಷ  ನನ್ನ ಕಿಟಕಿಯ  ಬಳಿ  ನಗುತ್ತಾ ನಿಂತಿದ್ದ, ನನಗೆ ಅಚ್ಚರಿ ಅಲ್ಲಾ ಈ ಹುಡುಗನಿಗೆ  ಯಾಕೆ  ಇಷ್ಟೊಂದು ಆತ್ಮೀಯತೆ ನನ್ನಲ್ಲಿ ಅಂತಾ ಅನ್ನಿಸಿ ಅಚ್ಚರಿಯಾಯಿತು.  ಮನೆಗೆ ಹೋಗಿದ್ದವ ಮನಸು ತಡೆಯದೆ ಮತ್ತೆ ಓಡಿಬಂದಿದ್ದ ನನ್ನನ್ನು ನೋಡಲು.  ಇದೆಂತಾ ಆತ್ಮೀಯತೆ ಅನ್ನಿಸಿ ಮನ ತುಂಬಿ ಬಂತು. ಇಬ್ಬರೂ ಸ್ವಲ್ಪ ಹೊತ್ತು ಎರಡು ದಿನಗಳ ಪ್ರವಾಸದ ಮೆಲುಕು ಹಾಕಿದೆವು. "ಬಾಲೂ ಸರ್ ಮತ್ತೊಮ್ಮೆ ಬನ್ನಿ ಇನ್ನಷ್ಟು ನೋಡೋಣ" "ನಿಮ್ಮ ಜೊತೆ ಇದ್ರೆ ನನಗೆ ಭಾರೀ ಖುಷಿ ಗೊತ್ತಾ"? ಎಂದಾಗ ಏನು ಹೇಳೋದು ಅಂತಾ ತಿಳಿಯಲಿಲ್ಲ . ಕೊನೆಗೆ ಮನ ತುಂಬಿಬಂದು ಮನಸಾರೆ ವಂದಿಸಿ ಅವನಿಂದ  ಬೀಳ್ಕೊಂಡೆ.  ಮನದಲ್ಲಿ   " ಶಿರಸಿ  ನಿನಗೆ ಧನ್ಯವಾದಗಳು  ಮತ್ತೊಮ್ಮೆ ಜ್ಞಾನಾರ್ಜನೆಗೆ ನಿನ್ನಲ್ಲಿಗೆ ಬರುವೆ "  ಎಂದುಕೊಂಡೆ . ನಮ್ಮ ಬಸ್ ಅಲ್ಲಿಂದ ನಿಧಾನವಾಗಿ  ಹೊರಟಿತು, ಎರಡು ದಿನದ ಅಲೆದಾಟದ  ಆಯಾಸದಿಂದ  ಬಸ್ಸು ಹೊರಟ  ತಕ್ಷಣ ನಿದ್ದೆಗೆ ಜಾರಿದೆ.  ............................................ !!! ಶಿರಸಿಯಿಂದ ಹೊರಟ  ಬಸ್ಸು ಮೈಸೂರಿನ ಕಡೆಗೆ   ಬಿರುಸಿನಿಂದ ಸಾಗಿತ್ತು.


ಮೈಸೂರಿನಲ್ಲಿ ಕುಳಿತು  ಶಿರಸಿಯ ನೆನಪುಗಳನ್ನು ಮೆಲುಕು ಹಾಕುತ್ತಾ ಈ ಲೇಖನ ಬರೆಯಲು  ಪ್ರಾರಂಭಿಸಿದಾಗ  ಇಷ್ಟೆಲ್ಲಾ ವಿಚಾರಗಳು  ಬರುತ್ತವೆಂದು  ನನಗೆ ಅನ್ನಿಸಿರಲಿಲ್ಲ , ಆದರೆ ಪ್ರೀತಿಯ ಬಲೆಯಲ್ಲಿ ಬಂಧಿಸಿ ಬ್ಲಾಗ್ ಮಿತ್ರರು ತೋರಿದ ಪ್ರೀತಿಯಿಂದ ಈ ಪ್ರವಾಸ ಕಥನ  15 ಸಂಚಿಕೆ ವರೆಗೆ ನಡೆದು ಬಂತು. ಒಟ್ಟಿನಲ್ಲಿ ಶಿರಸಿಯ ಪ್ರವಾಸದ ಅನುಭವ ನನಗೆ ಹೊಸ ಪ್ರಪಂಚ ದರ್ಶನ ಮಾಡಿಸಿತು.



 

ಈ ಪ್ರವಾಸ ಲೇಖನ ಮಾಲಿಕೆಯಲ್ಲಿ  ಹಲವಾರು ಗೆಳೆಯರು ಪ್ರೀತಿಯಿಂದ ಕರೆ ಮಾಡಿ ಖುಷಿಪಟ್ಟರು, ಹಾಗು ಹಲವಾರು ಗೆಳೆಯರು ಚಂದದ ಕಾಮೆಂಟ್ ಹಾಕಿ ಸಂಭ್ರಮಿಸಿದರು .  ಬನ್ನಿ ಆತ್ಮೀಯ ಓದುಗರು  ಪ್ರೀತಿಯಿಂದ  ಹೇಳಿದ್ದನ್ನು ಒಮ್ಮೆ ಓದೋಣ. ದಯಮಾಡಿ 01 ರಿಂದ ಮೊದಲು ಪ್ರಾರಂಭವಾಗಿ 15 ಕೊನೆಯದಾಗಿರುವಂತೆ ಓದಲು ಕೋರುತ್ತೇನೆ.
ಸಂಚಿಕೆ :-) 01


Srikanth Manjunath said...
ಆಹಾ...ಬಾಯಿ ಚಪ್ಪರಿಸುತ್ತಿದ್ದೇನೆ...
ದಿಲ್ಲಿಯ ಅಮೋಘ ದರ್ಶನ ಮಾಡಿಸಿದ ನೀವು..ಈಗ ಜಲಪಾತಗಳ ರಾಜಧಾನಿ ಸಿರಸಿಯ ಪಯಣ ಉಣಬಡಿಸುತ್ತಿರುವುದು ಆಹಾ..ಸಂತಸ ಪದಗಳಿಗೆ ಎಟುಕೊಲ್ಲ...
ರಸ್ತೆ ಸಾರಿಗೆಯ ಪಯಣ ಮುದ ತಂದಿತ್ತು..
ಆರಂಭ ಸೂಪರ್ ಆಗಿದೆ..ಕಾಯುತ್ತಿದ್ದೇವೆ..ನನ್ನ ಮುಂದಿನ ವರುಷದ ಸಿರ್ಸಿ ಪಯಣಕ್ಕೆ ಒಳ್ಳೆಯ ಮಾರ್ಗದರ್ಶನ ಸಿಗುತ್ತಿದೆ..
ಚಿನ್ಮಯ ಭಟ್ said...
ಬಾಲು ಸರ್...
ನಮ್ಮೂರಿನ ಬಗ್ಗೆಯೇ ಬರೆಯುತ್ತಿದ್ದೀರಿ..ಓದಿ ಖುಷಿಯಾಯ್ತು..ಅಂದು ನೀವಿಳಿದ ಜ್ಯೂ ಸರ್ಕಲ್ ಹತ್ತಿರ ಇಂದು ಸುಂದರ ಉದ್ಯಾನವನವೊಂದು ನಿರ್ಮಾಣವಾಗುತ್ತಿದೆ...ಮುಂದಿನ ಭಾಗಕ್ಕಾಗಿ ಕಾಯ್ತಿರ್ತೇನೆ....ಮದುವೆಯ ಊಟದಲ್ಲಿರ ಬಹುದಾದ ಹೊಸ ಪದಾರ್ಥಗಳ ಪಟ್ಟಿಯನ್ನು ನಿರೀಕ್ಷಿಸುತ್ತಿದ್ದೇನೆ(ಅಪ್ಪೆ ಹುಳಿ,ಮಾವಿನಕಾಯಿ ಗೊಜ್ಜು,ತಂಬುಳಿ ಹೀಗೆ) ...ಹಾ ಹಾ..
bhagya bhat said...
ಹಂ ...ನಮ್ಮ ಊರಿನ ಬಗ್ಗೆ ಬರೆದಿದ್ದೀರಿ !!!..ಇಷ್ಟವಾಯಿತು .

ಅಂದಹಾಗೆ' ಕೊಳಗಿಬೀಸ್ 'ಅಂದಾಗ ನೆನಪಾಗುತ್ತೆ ನೋಡಿ ..ಗೋಳಿಯ ಯಕ್ಷಗಾನ ನಾಟಕದ ಸೊಗಡು ..

ಊರಿನ ಚಿತ್ರಣ ಸೊಗಸಾಗಿದೆ .ಇಷ್ಟವಾಯಿತು
ಸಿಮೆಂಟು ಮರಳಿನ ಮಧ್ಯೆ said...
ಬಾಲಣ್ಣಾ...

ನೀವು ಹೋದಾಗ

ಅಲ್ಲಿ ಮದುವೆ ನೋಡಿದಿರಿ.... ಜಾತ್ರೆ ನೋಡಿದಿರಿ...

ಸಂಗಡ ಕ್ಯಾಮರಾ ಬೇರೆ ಜೊತೆಗಿತ್ತು...

ವಾಹ್ !!

ಶ್ರೀಕಾಂತ್ ಹೇಳಿದ ಹಾಗೆ ಬಾಯಿ ಚಪ್ಪರಿಸುತ್ತಿದ್ದೆವೆ...

ಜೈ ಹೋ ಬಾಲಣ್ಣಾ....
Badarinath Palavalli said...
"ಪುಣ್ಯಾತ್ಮ ತನ್ನ ಜನ್ಮದ ಆಸೆಯನ್ನೆಲ್ಲಾ ಸುಮಾರು ಘಂಟೆಗಳ ಕಾಲ ಮೊಬೈಲ್ ಫೋನಿನಲ್ಲಿ ಪೂರೈಸಿಕೊಂಡಿದ್ದ."

ಅಹಹ್ಹಹ್ಹಾ ಎಂತ ಮಾತು ಸಾರ್.

ಮೈಸೂರಿನಿಂದ ಸಿದ್ದಾಪುರದವರೆಗಿನ ಊರುಗಳ ವೈವಿದ್ಯತೆ ಗಮನಿಸಿದರೆ ಸಾರ್, ಅಜಗಜಾಂತರ.

ಯಾಕೋ ಈ ಸರಣಿಯೂ ರೋಚಕವಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ, ಜಮಾಯಿಸಿಬಿಡಿ.

ಅಂದ ಹಾಗೆ ಎಸ್ಟೇಟಿಗೆ ತಲುಪೋ ದಾರಿಯ ಚಿತ್ರ ಒಂದು ಕವಿತೆಗೆ ದಾರಿಯಾಯಿತು:
"ಈ ಮಣ್ಣು ಹಾದಿಯ ಕೇಳಿದೆ
ಮರೆತೆಯ ಹೆಜ್ಜೆಗಳನು?
ಹಾದಿ ಉತ್ತರಿಸಿತು ಗೆಳೆಯ
ಇಲ್ಲಿ ಸುರಿಯುತ್ತಲ್ಲ ಮಳೆ
ಅಳಿಸುತ್ತೆ ಅಳಿದುಳಿದ ನೆನಪುಗಳ"
ಗಿರೀಶ್.ಎಸ್ said...
ಮುಂದೆ ಏನಾಯ್ತು ಅಂತ ಆದಷ್ಟು ಬೇಗ ಬರೀರಿ.....ಯಾಕೋ ಫೋಟೋಗಳು ಕಮ್ಮಿ ಆದವು ಅನ್ನಿಸ್ತು ಸರ್...ಮುಂದಿನ ಸಂಚಿಕೆಯಲ್ಲಿ ಬರಬಹುದೇನೂ ಅನ್ನೋ ನಿರೀಕ್ಷೆಯಲ್ಲಿ...
shivu.k said...
ಬಾಲು ಸರ್,
ಸಿರಸಿಯ ಪ್ರಯಾಣದ ನೆನಪುಗಳು ಕುತೂಹಲಕಾರಿಯಾಗಿದೆ...ನಿರೂಪಣೆಯಲ್ಲಿ ಕಣ್ಣ ಮುಂದೆ ಚಿತ್ರಗಳು ತೇಲಿಬರುತ್ತಲಿವೆ..
manu said...
ಅಯ್ಯೋ ಅರ್ದಕ್ಕೆ ನಿಲ್ಲಿಸಿದಹಾಗಿದೆ ಆಮೇಲೆ ಏನಾಯ್ತು ಹೇಳಿ
ಮನೋಹರ್ ಬಿ ಎಸ್ಸ್






ಸಂಚಿಕೆ :-)02














Srikanth Manjunath said...
ಸಿರ್ಸಿಗೆ ಕಾಲಿಟ್ಟು...ಅನುಭವ ಕಥಾನಕದ ಮುಂದುವರೆದ ಸರಣಿ ಶುರುಮಾಡಿದ್ದಕ್ಕೆ ನಿಮಗೆ ಶಿರಬಾಗಿ ವಂದಿಸುವೆ..ಇಣುಕು ಇತಿಹಾಸದಿಂದ ಶುರುವಾದ ಮಾತು..ಮಾರಿಕಂಬೆಯ ಆಶೀರ್ವಾದ, ನಿಮ್ಮ ಸೋದರತ್ತೆ ಅತ್ತೆ, ಮಾವ ಪರಿಚಯ..ಹುಸಿ ಮುನಿಸು :-) ..ದೋಸೆಯೂ ಉದರವಾಸಿಯಾಗಿದ್ದು..ಸಹಸ್ರಲಿಂಗದ ಚುಟುಕು ದರ್ಶನ,..ಅಂತರ್ಜಾಲದ ಆದರೆ ಅಂತರಂಗದ ಸ್ನೇಹಿತ..ಎಲ್ಲರ ಪರಿಚಯ ಮಸ್ತ್ ಇದೆ..ಮುಂದುವರೆಸಿ..ದೋಸೆಗೆ ಚಟ್ನಿಯಾ ಹಾಗೆ ಕಣ್ಣುಗಳು ನಿಮ್ಮ ಮುಂದಿನ ಸರಣಿಗೆ ಕಾಯುತ್ತಿದೆ
ಪುಷ್ಪರಾಜ್ ಚೌಟ said...

ನನಗೀ ಭಾಗ್ಯ ಎಂದಿಗೆ ದೊರೆತೀತೋ ಎಂದು ಹಾತೊರೆಯುತ್ತಿದ್ದೇನೆ. ನಿಮ್ಮ ಬರಹ ಸರಣಿಯ ಜೊತೆಗೆ ಮನಮೋಹಕ ಚಿತ್ರಗಳು ಮತ್ತಷ್ಟು ಮೆರುಗು ನೀಡುತ್ತವೆ.
umesh desai said...
ಸಿರ್ಸಿ ಅನೇಕ ಬಾರಿ ಸುತ್ತಾಡಿರುವೆ..ಈಗ ನಿಮ್ಮಿಂದ ಇನೊಮ್ಮೆ
ಚೆನ್ನಾಗಿದೆ ನಿಮ್ಮ ಕಥನ..
ಮನಸು said...
ಸ್ನೇಹಿತರು ಎಂದರೆ ಹಾಗೆ... ತುಂಬಾ ಚೆನ್ನಾಗಿದೆ ಸಿರಸಿಯ ಬಗ್ಗೆ ತಿಳಿಸಿದ್ದು. ಸಿರಸಿಯ ಜನ ಬಹಳ ಒಳ್ಳೆ ಜನ ಅವರ ಆತಿಥ್ಯ ಹೇಳತೀರದು.. ಅನುಭವ ಚೆನ್ನಾಗಿ ಆಗಿದೆ ನನಗೆ. ಹಾಗೆ ಮತ್ತಷ್ಟು ಸ್ಥಳ ಪರಿಚಯ ಮಾಡಿಕೊಡಿ
UMESH VASHIST H K. said...
male ನಾಡಿನ ಪ್ರವಾಸ ಖುಷಿ ಕೊಡುತ್ತೆ .... ಪ್ರವಾಸ kathana ಚೆನ್ನಾಗಿದೆ ....
ಸಿಮೆಂಟು ಮರಳಿನ ಮಧ್ಯೆ said...
ಬಾಲಣ್ಣ...

ಅಂದು ನಿಮ್ಮ ಜೊತೆ ನಾನು ಬರಬೇಕಿತ್ತು..
ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ...
ಹೊಟ್ಟೆ ಉರಿಸ್ತಾ ಇದ್ದೀರಿ...

ಮತ್ತೊಮ್ಮೆ ಪುಕ್ಕಟೆಯಾಗಿ ಊರಿಗೆ ಕರೆದೊಯ್ಯುತ್ತಿರುವಿರಿ...

ಲೇಖನದ ಪ್ರತಿ ಶಬ್ಧಗಳಲ್ಲಿ ನಿಮ್ಮ ಕುತೂಹಲ...
ಆಸಕ್ತಿ ಎದ್ದು ಕಾಣುತ್ತಿದೆ...

ಹೊಸತನ್ನು ನಿಮ್ಮ ಹುಡುಕಾಟಕ್ಕೆ ನಿಜಕ್ಕೂ ಖುಷಿಯಾಗುತ್ತದೆ..

ನಮ್ಮೂರಲ್ಲಿ ಇನ್ನೂ ನೋಡತಕ್ಕಂಥಹ ಸ್ಥಳಗಳು ಇನ್ನೂ ಇವೆ...

ನಾವೆಲ್ಲ ಗೆಳೆಯರು ನಮ್ಮೂರಿಗೆ ಒಂದು ಟ್ರಿಪ್ ಇಡೋಣವೆ??

ಬಾಲಣ್ಣ ಜೈ ಹೋ !
Ramakant Hegde said...
ಬಾಲು ಅವರೇ,
ಧನ್ಯವಾದಗಳು. ಸೊಗಸಾದ ಚಿತ್ರಣಕ್ಕಾಗಿ ಅಭಿನಂದಿಸುತ್ತೇನೆ.
ಸ್ಥಳೀಯರ ಬಾಯಲ್ಲಿ ಅದು ಶಿರಸಿ (ಅಥವಾ ಶಿರಸೆ) - ಸಿರ್ಸಿ ಅಲ್ಲ!
ಅನೇಕಾನೇಕ ಕಾರಣಗಳಿಂದಾಗಿ ಜನ್ಮಭೂಮಿ ಶಿರಸಿಯಿಂದ ದೂರ ಉಳಿಯಬೇಕಾಗಿ ಬಂದವರಲ್ಲಿ ನಾನೂ ಒಬ್ಬ.
ನಾವೆಲ್ಲ ಆದಾಗಲೆಲ್ಲ ಹೋಗಿಬರುತ್ತೇವೆ, ಪ್ರಿಯರನ್ನು ಕಂಡು ಮಾತಾಡಿಸಿಕೊಂಡು ಬರುತ್ತೇವೆ.
ಇಂದಿನ ಆಗುಹೋಗುಗಳ ಬಗ್ಗೆ ತುಸು ಇಣುಕುನೋಟ ಎಂಬಂತೆ.
ಮೊದಲಿನ ಶಿರಸಿ ಇಂದು ಉಳಿದಿಲ್ಲ - ತುಂಬಾ ಬದಲಾವಣೆಗಳು, ಎಲ್ಲಕಡೆಯಂತೆ.
ನೋವಿನ ವಿಷಯ ಅಂದರೆ, ಅವುಗಳಲ್ಲಿ ಕೆಲವನ್ನು (ಮಾತ್ರವೇ) ಸುಧಾರಣೆ ಎಂದು ಕರೆಯಬಹುದು.
ಹೆಚ್ಚಿನವು ಬವಣೆಗಳು, ಅವರಿಗೆ ಬೇಕಿಲ್ಲದ ’ಕರಕರೆಗಳು’.
ದಯವಿಟ್ಟು ಮುಂದಿನ ಸಂಚಿಕೆಗಳಲ್ಲಿ ತಮ್ಮ ಗಮನಕ್ಕೆ ಬಂದವನ್ನು ತುಸು ಕೆದಕಿ ಬರೆಯಿರಿ - ಪರಿಹಾರದ ದಿಕ್ಕಿನಲ್ಲಿ ನೆರವಾದೀತು.

- ರಮಾಕಾಂತ ಹೆಗಡೆ
M.D.subramanya Machikoppa said...
ಶಿರಸಿ ನಮ್ಮ ಚಿಕ್ಕಮ್ಮನ ಮನೆ. ಎರಡು ವರ್ಷದ ಕೆಳಗೆ ಅವರ ಮಗಳ ಮದುವೆಗೆ ಹೋದವನು ಕೆಲವು ಘಂಟೆ ಇದ್ದೆ!!
ಸಂಧ್ಯಾ ಶ್ರೀಧರ್ ಭಟ್ said...
ನನ್ನೂರ ಬಗ್ಗೆ ಓದಲು ಖುಷಿ ಆಯಿತು. ಅದೆಷ್ಟು ಚಂದವಾಗಿ ನಮ್ಮೂರಿನ ಕಥೆ ಹೇಳಿದ್ದೀರಿ ಬಾಲಣ್ಣ.. ನಿಮಗೆ ತೋರಿಸಲೇ ಬೇಕಾದ ಇನ್ನಷ್ಟು ಸ್ಥಳಗಳಿವೆ ಅಲ್ಲಿ ...
ಬನ್ನಿ ಮತ್ತೊಮ್ಮೆ ನಮ್ಮೂರಿಗೆ...
ಐತಿಹಾಸಿಕ ಹಿನ್ನೆಲೆಯೊಂದಿಗೆ ಪ್ರವಾಸಕಥನ ಓದಲು ತುಂಬಾ ಚೆನ್ನಾಗಿದೆ.
Swarna said...
ನೀವು ಊರ ನೋಡುವ ಪರಿ ಚೆನ್ನಾಗಿರತ್ತೆ ಸರ್.
ನಮಗೂ ಆ ಊರಿಗೆ ಹೋಗ್ಬೇಕು ಅನ್ನಿಸತ್ತೆ.
ಮುಂದಿನ ಭಾಗಕ್ಕೆ ಕಾಯುತ್ತೇನೆ.
ಸ್ವರ್ಣಾ
Swarna said...
ನೀವು ಊರ ನೋಡುವ ಪರಿ ಚೆನ್ನಾಗಿರತ್ತೆ ಸರ್.
ನಮಗೂ ಆ ಊರಿಗೆ ಹೋಗ್ಬೇಕು ಅನ್ನಿಸತ್ತೆ.
ಮುಂದಿನ ಭಾಗಕ್ಕೆ ಕಾಯುತ್ತೇನೆ.
ಸ್ವರ್ಣಾ
Badarinath Palavalli said...
ರಾಜರ ಆಳ್ವಿಕೆ ಕಾಲದಲ್ಲಿ ಮೆರೆದಿದ್ದ ನಗರಗಳು ಇಂದು ಅಪ್ರಾಮುಖ್ಯ, ಅಂತೆಯೇ ಆಗ ಹೇಳ ಹೆಸರಿಲ್ಲದ ಪ್ರದೇಶಗಳೂ ಈಗ ಜನಜನಿತ. ಇದು ಕಾಲನ ಹೊಡೆತ.

ಶಿರ್ಸಿಯ ಖಾದ್ಯಗಳ ಪಟ್ಟಿ ನೋಡಿಯೇ ಬಾಯಲ್ಲಿ ನಿರೂರಿತು.

ಊರಿನ ಚಿತ್ರಗಳು ಬಹಳ ಸೊಗಸಾಗಿ ಬಂದಿವೆ.

ಹರ್ಷ ಹೆಗಡೆಯವರ ಜೊತೆ ನಿಮ್ಮ ಬೈಕ್ ಯಾತ್ರೆ ಮತ್ತು ಸಹಸ್ರ ಲಿಂಗ ಕ್ಷೇತ್ರ ದರ್ಶನಕ್ಕಾಗಿ ಕಾಯುತ್ತೇವೆ.

manu said...
ಆಮೇಲೆ ಹೇಳಿ ಸರ್ ಯಾಕೆ ಟಿವಿ ಸಿರಿಯಲ್ ತರ ಏಳಿತಿದೀರಾ ತುಂಬಾ ಇಂಟರೆಸ್ಟಿಂಗ್ ಆಗಿದೆ







ಸಂಚಿಕೆ :-) 03






Srikanth Manjunath said...
ಪ್ರಥಮ ಪೂಜೆ ಗಣನಾಯಕನಿಗೆ..ಇಲ್ಲಿ ದರುಶನ ನೀಡಿದ ಗಣಪನ ಪಿತ ಸಹಸ್ರ ಸಹಸ್ರವಾಗಿ ದರುಶನ ನೀಡಿದ್ದು ಮುದ ನೀಡಿತು..ಸುಂದರ ಚಿತ್ರಗಳು..ಅಪರೂಪದ ಚಿತ್ರಗಳು..ಸುಲಲಿತ ವಿವರಣೆ..ಒಳ್ಳೆಯ ಪತ್ತೇದಾರಿ ಚಿತ್ರದ ಹಾಗೆ..ಒಂದು ವಿಸ್ಮಯವನ್ನು ಒಡಲಲ್ಲಿ ಅರಗಿಸಿಕೊಂಡಿರುವ ಚಿತ್ರದೊಡನೆ ಈ ಕಂತು ನಿಂತಿದೆ..ಮುಂದಿನ ಲೇಖನಕ್ಕೆ ರಹದಾರಿಯನ್ನ ಕಾಯುವ ಹಾಗೆ ಮಾಡಿದೆ..ದೋಸೆ ಬಂತು..ಚಟ್ನಿ ಬಂತು..ಅರೆ ಅರೆ..ಸಾಂಬಾರ್ ಬೇಕು..ಬರಲಿ ಬರಲಿ..
umesh desai said...
ಬಹಳ ಹಿಂದೆ ನೋಡಿದ ಸ್ಥಳ..ನಿಮ್ಮ ಕೆಮರಾದಿಂದ ರಿವೈವ್ ಆತು..
ಅದ್ಭುತ ಜಾಗೆ ಇದು ನವೆಂಬರ್ ಸುಮಾರು ನೀರಿನ ಹರಿವು ಕಮಿ ಇರುತ್ತದೆ..
ಈಸಬಲ್ಲವರು ನೀರಿಗೆ ಇಳೀಬಹುದು..ಹಾಂ ನಾ ಹೋದಾಗ ಹಗ್ಗದ ಸೇತುವೆ ಇರಲಿಲ್ಲ..
ಮನಸು said...
ಅಬ್ಬಾ ವಿಸ್ಮಯಗಳ ಬೀಡು ನಮ್ಮ ಕರುನಾಡು... ನನಗೂ ಈ ಸ್ಥಳ ನೋಡಲೇ ಬೇಕು ಎನಿಸಿದೆ..!! ಇಮ್ಮಡಿ ಸದಾಶಿವ ರಾವ್ ಮತ್ತು ಸದಾಶಿವ ರಾಜೇಂದ್ರ ಇವರಿಬ್ಬರೂ ಒಬ್ಬರೇ ಎಂಬುದರ ಬಗ್ಗೆ ಏನಾದ್ರು ಅಧ್ಯಯನಗಳು ನೆಡೆಯುತ್ತಿವೇ ಅಥವಾ ಇಲ್ಲವೋ..ಆದರೆ ತಿಳಿದುಕೊಳ್ಳಲೇ ಬೇಕು ಎನಿಸುತ್ತಿದೆ.
ಆಹಾ ಆ ಶಾಲ್ಮಲಾ ದಡೆಯಲ್ಲಿ ಕಂಡ ಎಲ್ಲವೂ ಸುಂದರವಾಗಿದೆ. ತುಂಬಾ ಚೆನ್ನಾಗಿದೆ ಸರ್ ನಿರೂಪಣೆ, ಪರಿಚಯ ಎಲ್ಲವೂ ನಾನು ಒಮ್ಮೇ ನೋಡಲೇಬೇಕು.
ಸಾಗರದಾಚೆಯ ಇಂಚರ said...
Great Sir,
odoke tumba interesting
last episode odidde adre nammalli google ban agidrinda comment maadoke agirlilla
next episode ge kayta idini
UMESH VASHIST H K. said...
ಅಬ್ಬಾ.......!!! ನಿಜವಾಗಲೂ ಸುಂದರವಾದ ಚಿತ್ರಣ ...... ಆದ್ರೆ ಇದನ್ನ ಉಳಿಸಿ ಕೊಳ್ಳುವ ಮನಸ್ಸು ಯಾರಲ್ಲೂ ಇಲ್ಲ....

ಯಾರದೋ ಮೇಲಿನ ದ್ವೇಷಕ್ಕೆ ಈ ಕೆತ್ತನೆಗಳೆಲ್ಲ ಬಲಿಯಾಗಿವೆ ಅನ್ನಿಸುತ್ತೆ ...... ಪ್ರಕೃತಿಯ ಮಾಡುಲು ತುಂಬಾನೇ

ಸುಂದರವಾಗಿದೆ...... ತುಂಬಾ ತುಂಬಾ ವಂದನೆಗಳು ಬಾಲು ಸಾರ್......
UMESH VASHIST H K. said...
ಅಬ್ಬಾ.......!!! ನಿಜವಾಗಲೂ ಸುಂದರವಾದ ಚಿತ್ರಣ ...... ಆದ್ರೆ ಇದನ್ನ ಉಳಿಸಿ ಕೊಳ್ಳುವ ಮನಸ್ಸು ಯಾರಲ್ಲೂ ಇಲ್ಲ....

ಯಾರದೋ ಮೇಲಿನ ದ್ವೇಷಕ್ಕೆ ಈ ಕೆತ್ತನೆಗಳೆಲ್ಲ ಬಲಿಯಾಗಿವೆ ಅನ್ನಿಸುತ್ತೆ ...... ಪ್ರಕೃತಿಯ ಮಾಡುಲು ತುಂಬಾನೇ

ಸುಂದರವಾಗಿದೆ...... ತುಂಬಾ ತುಂಬಾ ವಂದನೆಗಳು ಬಾಲು ಸಾರ್......
ಶ್ರೀವತ್ಸ ಕಂಚೀಮನೆ. said...
ಮತ್ತೊಮ್ಮೆ ಸಹಸ್ರಲಿಂಗಕ್ಕೆ ಹೋಗಿ ಬಂದಂತಾಯ್ತು...ಶಿವರಾತ್ರಿ ಬಂದರೆ ನಮ್ಮ ಕಡೆಯವರಿಗಿದು ಪ್ರಸಿದ್ಧ ಕ್ಷೇತ್ರ...ಆರಾಮಾಗಿ ಪ್ರಕೃತಿ ಮಡಿಲಲ್ಲಿ ಶಿವನ ಪೂಜಿಸಬಹುದು...
ಚಂದನೆಯ ಪ್ರವಾಸ ಕಥನ...
Sandeep KB said...
very good information sir.. will plan to visit this place when we trip to sirsi
Santosh Hegde Ajjibal said...
tumba channagide sir odi tumba kushi aytu
manju said...
ಬಹು ಬಾರಿ ಶಿರಸಿಗೆ ಹೋಗಿದ್ದೆ, ಆದರೆ ಈ ಜಾಗಕ್ಕೆ ಹೋಗಿರಲಿಲ್ಲ, ಮು೦ದೆ ಹೋದಾಗಲೊಮ್ಮೆ ಖ೦ಡಿತ ಭೇಟಿ ಕೊಡುವೆ, ಸು೦ದರ ಚಿತ್ರಗಳು, ಆಕರ್ಷಕ ನಿರೂಪಣೆ.
ಗಿರೀಶ್.ಎಸ್ said...
ನಮಗೂ ಸಹಸ್ರ ಲಿಂಗ ದರ್ಶನ ಮಾಡಿಸಿದ ಪುಣ್ಯ ನಿಮ್ಮದು... ಇನ್ನೂ ಕುತೂಹಲ ಜಾಸ್ತಿ ಆಗುತ್ತಿದೆ..ಮುಂದೆ ಏನು ಎಂಬುದು... ಯಾವ ಊರಿಗೆ ಹೋದರು ನೀವು ಅಲ್ಲಿನ ಇತಿಹಾಸ ಕೆದಕದೆ ಬಿಡುವುದಿಲ್ಲ ಎಂಬುದಕ್ಕೆ ಇದೂ ಒಂದು ಸಾಕ್ಷಿ...ಸೋಂದೆ ಅರಸರ ಮನೆತನದ ಸದಾಶಿವ ರಾವ್ ಅವರ ಬಗ್ಗೆ ತಿಳಿಸಿದ್ದು ತುಂಬ ಒಳ್ಳೆಯದಾಯಿತು..ಬಹುಪಾಲು ಜನರಿಗೆ ಇದು ಗೊತ್ತಿರಲಿಲ್ಲ ಎಂಬುದು ನನ್ನ ಭಾವನೆ...
ಸಂಧ್ಯಾ ಶ್ರೀಧರ್ ಭಟ್ said...
Chennagide Sahasra Linga Darshana.. Urige hogalebeku anta aase huttisuttiddeeri Baalanna...:)
Badarinath Palavalli said...
ಶಾಲ್ಮಲಾ ನದಿ, ಹೇಸರೇ ಅಮೋಘವಾಗಿದೆ. ಇರಿ ನಾನೂ ಯಾವುದಾದರೂ ಕವನದಲ್ಲಿ ಬಳಸುತ್ತೇನೆ.

ಕಲ್ಲಲ್ಲಿ ಕಟೆದ ಶಿಲ್ಪಗಳು ಮನೋಹರವಾಗಿವೆ. ಕೆಲ ಶಿಲ್ಪಗಳು ಭಿನ್ನವಾಗಿರುವುದು ಕಿಡಿಗೇಡಿಗಳ ಕೃತ್ಯವೇ ಸರಿ.

ಬಯಲ ಲಿಂಗಕ್ಕೆ
ತಡಿಕೆ ಹೊದಿಕೆ,
ನದಿ ನೀರ ಮಜ್ಜನ

ನಿಮ್ಮ ಛಾಯಾಗ್ರಾಹಣ ಅಮೋಘವಾಗಿದೆ.

ಮುಂದುವರಿಯಲಿ,
ಸೀತಾರಾಮ. ಕೆ. / SITARAM.K said...
mudabharita naviru haasyada nirupaneya tamma pravaasa kathana oduvade ondu aneervachaneeya anubhava, iihaasa, vastava aste shradde mattu asaddegala ella maggalugalinda parichayisuva tamma lekhana khushi. sirasi bagge muru lekhana onde gutukige odide.
ಸೀತಾರಾಮ. ಕೆ. / SITARAM.K said...
shalmala nadi ugama thana nanna mechchina vaarantyada pavaasakke hechchina paalu padedittu Dharawadadalliddaagaa...
ಪುಷ್ಪರಾಜ್ ಚೌಟ said...
ಇನ್ನೂ ನಮ್ಮ ಕಣ್ಣಿಗೆ ಬೀಳದ ಅದೆಷ್ಟು ಈ ರೀತಿಯ ವಿಸ್ಮಯ ತಾಣಗಳಿವೆಯೋ ನಮ್ಮ ಕರುನಾಡಿನಲಿ. ಚಿತ್ರಸಮೇತ ಮಾಹಿತಿಪೂರ್ಣ ಲೇಖನಗಳನ್ನು ಪ್ರಸ್ತುತಿ ಪಡಿಸುತ್ತೀರಿ. ಓದುಗರು ನಾವಿಹೆವು ರುಚಿಯುಣಲು, ಆಸ್ವಾದಿಸಲು!







ಸಂಚಿಕೆ :-) 04










ನಿಮ್ಮ ಪ್ರೀತಿಯ ಹುಡುಗ said...
ತುಂಬಾ ಚೆನ್ನಾಗಿವೆ ನಿಮ್ಮ ಲೇಖನಗಳು ..))
Srikanth Manjunath said...
ಭಯಾನಕ ಭೂತ ಬಂಗಲೆಯಾ ಚಿತ್ರ ತೋರಿಸಿ ಕಳೆದ ಲೇಖನ ನಿಲ್ಲಿಸಿದಾಗ..ಓಹ್ ಒಳ್ಳೆಯ ಪತ್ತೇದಾರಿ ಅಥವಾ ರೋಚಕ ತಿರುವಿದೆ ಅಂದುಕೊಂಡು ಕಣ್ಣು, ಕಿವಿ, ಹಾಗು ಕೀ ಬೋರ್ಡ್ ಕಾಯ್ತಾ ಇತ್ತು...ಆಹಾ..ಎಂತಹ ತಿರುವು ಇತಿಹಾಸಕ್ಕೆ ಬೆಳಕು ಹಿಡಿಯುವ ತಾಕತ್ ಇರುವ ಲೇಖನ..ಸಹಸ್ರಲಿಂಗದ ಬುಡಕ್ಕೆ ಪ್ರಾಯಶಃ ರಾವಣ ಕೈಲಾಸ ಎತ್ತಿದ ಸಾಹಸಕ್ಕೆ ಕೈ ಹಾಕುವಂತ ಲೇಖನ...ಸೂಪರ್ ಸರ್ಜಿ ಬಹಳ ಖುಷಿ ಆಯಿತು....ಮುತ್ತಿನ ಹಾರದ ಕೆರೆಗೆ ಹಾರೋಕೆ ನಾನು ಈಗಲೇ ಈಜುವುದನ್ನ ಅಭ್ಯಾಸ ಮಾಡುತಿದ್ದೇನೆ (ನೆಲದ ಮೇಲೆ :-))
ಮುಂದಿನ ವಾರ ಬಹುಶಃ ಸಿರ್ಸಿಗೆ ಶಿರಬಾಗಿ ನಮಿಸುವ ಸೌಭಾಗ್ಯ ಒದಗುವ ಎಲ್ಲ ಲಕ್ಷಣಗಳು ಇವೆ..
ಅರೆ ದೋಸೆ ಬಂತು, ಚಟ್ನಿ ಬಂತು...ಸಂಬಾರ ಬಂತು...ಅರೆ ಮಾರಾಯ್ರೆ ಬಟಾಟೆ ಪಲ್ಯ ಬರಲಿ..!!!
Subbu Sullia said...
very nice!
nagaraj hegde said...
very nice
Guruprasad . Sringeri said...
ಲೇಖನ ಹಾಗೂ ಚಿತ್ರಗಳು ಚೆನ್ನಾಗಿದೆ ಸರ್...
Santosh Hegde Ajjibal said...
ತುಂಬಾ ಚೆನ್ನಾಗಿವೆ
nenapina sanchy inda said...
ನಮಗೂ ಈ ಚಾಳಿ ಇದೆ ಬಾಲು ಅವರೆ...ಹಳೆ ಕಟ್ಟಡ ನೋಡೊದು..ಅದರ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿ ಅದರ ಇತಿಹಾಸ form ಮಾಡೋದು..etc.. ನಮ್ಮ ಭಾರತದೇಶದಲ್ಲಿ ಇಂತಹ ವಿಸ್ಮಯಗಳು ಹಲವಾರು.
enjoyed!!thanks for the link
:-)
ಮಾಲತಿ ಎಸ್
Sriii :-) said...
sooper aagide. sirsi kade omme tour hakbeku anista ide....Thank you so much for the details....Expecting few more :-)
Ranjita said...
chennagide
ಗಿರೀಶ್.ಎಸ್ said...
ಇದೆ ರೀತಿ ತುಂಬ ಸ್ಮಾರಕಗಳು ಸಮಾಜ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದ ಹಾಳು ಬಿದ್ದಿವೆ.... ಒಳ್ಳೆಯ ಚಿತ್ರಗಳೊಂದಿಗೆ ಮಾಹಿತಿ ಕೊಟ್ಟಿದ್ದಿರಿ... ಮುತ್ತಿನ ಕೆರೆಯ ಮಾಹಿತಿಯ ನಿರೀಕ್ಷೆಯಲ್ಲಿ...
ಸಂಧ್ಯಾ ಶ್ರೀಧರ್ ಭಟ್ said...
Nice sir
Sulatha Shetty said...
Chennagide Balanna:)
Asim Das said...
Good capture...........nice touch of history.
ಸಿಮೆಂಟು ಮರಳಿನ ಮಧ್ಯೆ said...
ಬಾಲಣ್ಣ...

ಮೊದಲಿಗೆ ನಿಮ್ಮ ಇತಿಹಾಸ ಪ್ರೀತಿಗೆ ಪ್ರೀತಿಯ ವಂದನೆಗಳು...

ಮದುವೆಗೆ ಅಂತ ಹೋದವರು ಎಷ್ಟೆಲ್ಲ ವಿಷಯಗಳನ್ನು ಹೊತ್ತು ತಂದಿದ್ದೀರಿ... ನಿಜಕ್ಕೂ ಜೈ ಎನ್ನಲೇ ಬೇಕು... !

ನಿಜ ನಮ್ಮೂರಲ್ಲಿ ಇಂಥಹ ಹಲವಾರು ಸ್ಮಾರಕಗಳು ಇವೆ..
ನಮಗೂ...
ನಮ್ಮ ಘನ ಸರಕಾರಕ್ಕೂ ಆಸಕ್ತಿ ಇಲ್ಲ...

ನಮ್ಮೂರ ಹತ್ತಿರ "ಕರೂರು " ಅಂತ ಇದೆ...
ಅಲ್ಲಿ ಒಂದು ಕೋಟೆ ಕೂಡ ಇದೆ..
ಅದರ ಬಗೆಗೆ ಹೆಚ್ಚಿನ ವಿವರಗಳು ನಮಗೆ ಗೊತ್ತಿಲ್ಲ...
ಅಲ್ಲಿಯೂ ಕೂಡ ಸ್ಮಾರಕಗಳು ಇವೆ....

ಅಲ್ಲಿನ ಹಳ್ಳಿಗಳಲ್ಲಿ ಮಾಸ್ತಿ ಕಲ್ಲು.. ವೀರಗಲ್ಲುಗಳು ತುಂಬಾ ಇವೆ..

ನಮ್ಮೂರಲ್ಲಿ ಒಂದು ಮಾಸ್ತಿಕಲ್ಲನ್ನು ಒಂದು ಸಣ್ಣ ಹಳ್ಳಕ್ಕೆ ಅಡ್ಡವಾಗಿ ಸಂಕದ ಥರಹ ಬಳಸಿದ್ದು ನನಗಿನ್ನೂ ನೆನಪಿದೆ...

ನಮ್ಮೂರ ಪ್ರೀತಿಗಾಗಿ ನಿಮಗೆ ನಮ್ಮೆಲ್ಲರ ಪ್ರೀತಿಯ ವಂದನೆಗಳು...

ಮುಂದಿನ ಸಂಚಿಕೆಗಾಗಿ ಕಾಯುತ್ತಿರುವೆವು... ಜೈ ಹೋ ಬಾಲಣ್ಣ....!
Badarinath Palavalli said...
ನಮ್ಮ ಜಾಯಮಾನವೇ ಅಂತದು, ನಾವು ಇತಿಹಾಸವನ್ನು ಗೌರವಿಸುವುದೇ ಇಲ್ಲ. ನಮ್ಮದೇನಿದ್ದರೂ ’ಬಳಸು - ಬಿಸಾಕು’ ಪ್ರವೃತ್ತಿ. ಅಲ್ಲಿನ ಶಾಸನಗಳು ಕಂಡಿತ ಯಾರದೋ ಮನೆಯ ತಳಪಾಯವಾಗಿ ಬಹು ಕಾಲವೇ ಸಂದಿರಬಹುದು.

ಹಳೆಯ ಕಟ್ಟಡಗಳೆಂದರೆ, ಅನೈತಿಕ ಚಟುವಟಿಕೆಯ ತಾಣಗಳು. ಚಾಮರಾಜನಗರದ ಒಡೆಯರು ಹುಟ್ಟಿದ ಮನೆಯೂ ಇದಕ್ಕೆ ಸಾಕ್ಷಿ.

ಶ್ರೀರಂಗಪಟ್ಟಣವನ್ನು ನೀವು ಸಂಶೋಧಿಸಿ ಕೊಡಲಿಲ್ಲವೆಂದರೆ ನಮಗೆ ಅದೂ ಒಂದು ಊರೇ.

ಸರ್ಕಾರಗಳು, ಜಿಲ್ಲಾಡಳಿತ ಇಂತಹ ಅವಗಣನೆಗೆ ಗುರಿಯಾದ ಸ್ಮಾರಕಗಳನ್ನು ಕಾಯ್ದುಕೊಳ್ಳ ಬೇಕು.

ಮುಮ್ದುವರೆಯಲಿ ಸಾರ್.
ಚಿನ್ಮಯ ಭಟ್ said...
ನಾನು ನೋಡಿದ್ದು ಬರಿಯ ಕರಡ ಬೆಳೆದ ಸೋಂದೆ,
ಅದೂ ಕೂಡ ಚಿಕ್ಕವನಾಗಿದ್ದಾಗ,ಅಂದರೆ ಬಹಳ ಹಿಂದೆ...
ಬಾಲು ಸರ್ ಲೇಖನದಿಂದ ಮತ್ತೊಮ್ಮೆ ಅಲ್ಲಿಗೆ ಹೋಗೆ ಬಂದೆ..
ಕಂಡಿತು ಅಂದು ಕಾಣದ ಹೊಸ ಸೋಂದೆ, ನನ್ನ ಕಣ್ಣ ಮುಂದೆ....

ನಮಸ್ತೆ....
ಮನಸು said...
ಹೀಗೆ ನಮ್ಮ ರಾಜ್ಯದ ಹಲವು ರಾಜ ಮನೆತನದ ಇತಿಹಾಸಗಳು ಮಣ್ಣಾಗಿ ಹೋಗಿವೆ. ನಮಗೂ ಕುತುಹಲ ಎನಿಸಿತು ಇಷ್ಟು ಚೆನ್ನಾಗಿರೋ ಸ್ಥಳ ಪಾಳು ಬಿದ್ದಿದೆಯಲ್ಲಾ ಎಂದೆನಿಸಿತು. ಮುಂದಿನ ಮಾಹಿತಿಗಾಗಿ ಕಾಯುತ್ತೇವೆ. ಧನ್ಯವಾದಗಳು
bilimugilu said...
ಸರ್,
ಇತಿಹಾಸದ ಬಗ್ಗೆ ಆಸಕ್ತಿ ಇರೋವ್ರಿಗೆ ಮಾತ್ರ ಇಂತಹ ಸ್ಥಳಗಳ ಪರಿಚಯವಾಗುತ್ತಾ.... ಅಥವಾ ಕಣ್ಣಿಗೆ ಬೀಳುತ್ತಾ?
ನಿಮ್ಮ ಲೇಖನ ಒದುಒದುತ್ತ ಕುತೂಹಲವನ್ನು ಉಂಟು ಮಾಡಿತು ಚಿತ್ರಗಳು.....
ತುಂಬಾ ಇಷ್ಟವಾಯ್ತು ಬಾಲು ಸರ್
roopa
ದಿನಕರ ಮೊಗೇರ said...
nimma jote naanu hoda haagittu sir..
super narration....

nimma kaaLajige salaam....
Sandeep KB said...
Nice Sir...
ಸೀತಾರಾಮ. ಕೆ. / SITARAM.K said...
nice Balanna







ಸಂಚಿಕೆ 05






ವೆಂಕಟೇಶ್ ಹೆಗಡೆ said...
ಅದ್ಬುತ ಫೋಟೋಗಳು ಬಾಳು ಸರ್ ..ನಾವೂ ಪಿಯು ದಲ್ಲಿ ಎನ್ ಎನ್ ಎಸ್ ಕ್ಯಾಂಪ್ ಅಲ್ಲಿ ಹಾಕಿ ಆ ಕಡೆ ಎಲ್ಲ ಕೊಚ್ಚಿ ,ಅಗೆದು ,ಚೊಕ್ಕ ಮಾಡಿ ಬಂದಿದ್ದೆವು ಆದರೆ ಅವದರ ಮಹತ್ವ , ಹಿನ್ನೆಲೆ ಗೊತ್ತಿರಲಿಲ್ಲ .. ನಿಮ್ಮಿಂದ ಎಲ್ಲ ತಿಳಿದು ಕೊಳ್ಳುತ್ತಿದ್ದೇವೆ .. ನೀವು ಹೇಳುತ್ತಿರುವ ಹರ್ಷನ ದರ್ಶನವನ್ನೂ ಮಾಡಿಸಿ
Srikanth Manjunath said...
ಮುತ್ತಿನಂತ ಮಾತೊಂದು ಗೊತ್ತೇನಮ್ಮ..ನಿಮಗೆ ಗೊತ್ತೇನಮ್ಮ..ರೇಡಿಯೋದಲ್ಲಿ ಅಣ್ಣಾವ್ರ ಹಾಡು ಬರುತಿತ್ತು...ಕಂಪ್ಯೂಟರ್ ಪರದೆಯ ಮೇಲೆ ಮುತ್ತಿನ ಕೆರೆಯ ಬಗ್ಗೆ ಲೇಖನ..ವಾಹ್..
ಒಂದೊಂದು ಚಿತ್ರವೂ ಮುತ್ತು..ಚೊಕ್ಕದಾದ, ಶುಚಿಯಾಗಿದ್ದ ತಿಳಿ ಕೊಳ..ಆಹಾ..ಅದರ ಸವಿ ನಿರೂಪಣೆ..ಇತಿಹಾಸವನ್ನು ಒಮ್ಮೆ ತಡಕುವ ಪ್ರಯತ್ನ, ಜೈನರ ಬಸದಿ..ಒಂದಕ್ಕೊಂದು ಮಿಗಿಲು..
ಪ್ರತಿಯೊಂದನ್ನು ಕೂಲಂಕುಶವಾಗಿ ನೋಡುವ, ನಿಮ್ಮ ಕಣ್ಣುಗಳು, ಕ್ಯಾಮೆರಾ ಕಣ್ಣುಗಳು ನಿಜವಾಗಿಯೂ ಪುಣ್ಯ ಮಾಡಿವೆ..ನೀವು ಪ್ರತಿಯೊಂದನ್ನು ಶೂಟ್ ಮಾಡಿ ಮಾಡಿ ನಮಗೆ ದರ್ಶನ ನೀಡಿದರೆ..ನಿಮ್ಮ ಕಡೆಯೇ ಗುರಿ ಮಾಡಿಕೊಂಡು ಕಣ್ಣುಗಳನ್ನ ಹುರಿ ಮಾಡಿಕೊಂಡು ನಿಂತಿರುವ ಪಿರಂಗೆ ತನ್ನ ಕತೆಯನ್ನ ಹೇಳಲು ಬಾಯಿ ತೆರೆದು ಕುಳಿತಿದೆ..
ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಈಗ ಬಜ್ಜಿ ಬೇಕು..ಬರಲಿ ಬರಲಿ...
bhagya bhat said...
This comment has been removed by the author.
bhagya bhat said...
Baalu sir,
namgoo matte matte sirsi nenp madta ideera !
Nimma sirsi payana adeshtu dinavo na kane ,illi matra dina sirsige hogi baruvante agta ide nijwaglu .
Sondakke hodwi ,munde tapovana ,saatoddi ,magod ,jenkal gudda ,kavadikere goo suttisi banni nammannoo ,,,
inchu inchoo parachayisuttiddiri ,,
sundaravaagi saaguttide sirsi payana .
Dhanyavaadagalu
ಗಿರೀಶ್.ಎಸ್ said...
Sir,i can just say it is a beautiful journey and excellent information.Nice photos.Only a passionate traveler like you can research the history of any place..I enjoyed all the articles of your Sirsi trip..
Deep said...
ಶಿರಸಿಯ ಪಯಣ ಬಾಲು ... ನಿಮ್ಮ ಜೊತೆ ಚನ್ನಾಗಿ ನಡೆಯುತ್ತಿದೆ..
ಗರುಡಗಂಭದ ವಿಷಯ ನಿಜಕ್ಕೂ ನನಗೆ ಹೊಸದು..

ಮುಂದೆ ಏನು ? ಫಿರಂಗಿ ಯಿಂದ ಗುಂಡು ಹಾರಿಸುವಿರೋ ??
Sulatha Shetty said...
Nice Photos and articles. Belur, Halebeedu nenapaaythu:)
Subbu Sullia said...
ಕೆಲ ವರ್ಷಗಳ ಹಿಂದೆ ಒಂದು ಬಾರಿ ಶಿರಸಿ ಗೆ ಹೋಗಿದ್ದೆ , ನನ್ ಸಹೋದ್ಯೋಗಿ ಯೊಬ್ಬರ ಮದುವೆಗೆ.. ೬-೭ ಜನರ ಗುಂಪು ಒಂದೇ ಒಂದು ಆಟೋ ಬಾಡಿಗೆಗೆ ಪಡೆದು ಬನವಾಸಿಗೆ ಹೋದ ನೆನಪು ಇನ್ನು ಹಾಗೆ ಇದೆ. ನಿಮ್ಮ ಲೇಖನ ಫೋಟೋ ನೋಡ್ತಿದ್ರೆ ಇನ್ನು ಹಲವಾರು ವೀಕ್ಷಿಸ ಬೇಕಾದ ಜಾಗಗಳು ಅಲ್ಲಿವೆ ಅನ್ನಿಸುತ್ತಿದೆ ...
Santosh Hegde Ajjibal said...
sir tumba channagide nimma nirupana shili tumba ista aytu
shivu.k said...
ಬಾಲು ಸರ್,
ನಿಮ್ಮ ಸಿರಸಿಯ ಪ್ರಯಾಣ ತುಂಬಾ ಚೆನ್ನಾಗಿದೆ...ಮುತ್ತಿನ ಕೆರೆ, ವೆಂಕಟರಮಣ ದೇವಾಲಯ, ಅದರ ಕೆತ್ತನೆಗಳು ಇತ್ಯಾದಿಗಳ ಸುಂದರ ಫೋಟೊಗಳ ಜೊತೆಗೆ ಅಲ್ಲಿನ ವಿವರವನ್ನು ನೀಡಿದ್ದೀರಿ...ಮುಂದುವರಿಸಿ ಸರ್..

ಧನ್ಯವಾದಗಳು.
umesh desai said...
with your guidance sirsi looks different to me..so many places of interest as usual your narrative and photos score 10+
Badarinath Palavalli said...
ಹಲವು ಅರಸರು ಹರಕೆ ಮತ್ತು ಜನೋಪಯೋಗಿ ಕಾರಣಗಳಿಂದ ತಮ್ಮ ಸಮಸ್ತ ಭಂಡಾರವನ್ನು ಮಾರಿಯಾದರು ಕೆರೆ ಕಟ್ಟೆ ನಿರ್ಮಿಸಿಕೊಡುತ್ತಿದ್ದರು.

ಮುತ್ತಿನ ಕೆರೆ ಮತ್ತು ಕೃಷ್ಣರಾಜ ಸಾಗರ ಅಣೆಕಟ್ಟು ಇದಕ್ಕೆ ಉದಾಹರಣೆ.

ಮೈಸೂರು ಮಂಡ್ಯ ಭಾಗಕ್ಕೆ ನೀರುಣಿಸಲು ನಿರ್ಮಿಸಿದ ಕೆ.ಆರ್.ಎಸ್ ಇಂದು ತಮಿಳುನಾಡಿಗೆ ನೀರು ಹರೆಸಲು ಸಂಗ್ರಹಕವಾಗಿರುವುದು ಸೋಚನೀಯ!

ಸುಧಾಪುರ ಹೆಸರು ಅದೆಷ್ಟು ಶ್ರಾವ್ಯವಾಗಿದೆ ಸಾರ್.

ದೇಗುಲದ ವಿಶ್ಲೇಷಣೆ ಚೆನ್ನಾಗಿದೆ. ವಿಜಯನಗರ ಮತ್ತು ಕದಂಭ ಶೈಲಿಯ ಲಘು ಪರಿಚಯವಾಯಿತು.

ಮುತ್ತಿನಕೆರೆ ಶ್ರೀ ವೆಂಕರಮಣ ಸ್ವಾಮೀ ಬಲು ಮುದ್ದಾಗಿದ್ದಾರೆ.

ಮುಂದಿನ ಬಾರಿ ಪಿರಂಗಿ ಸಿಡಿಸಿರಿ, ಎದೆಯೊಡ್ಡಿ ಕಾಯುತ್ತಿದ್ದೇವೆ.
ಸಿಮೆಂಟು ಮರಳಿನ ಮಧ್ಯೆ said...
ಬಾಲಣ್ಣ...

ಇಂಥಹ ಹತ್ತು ಹಲವಾರು ಗುಡಿ ಗೋಪುರಗಳು ಅಲ್ಲಿವೆ...

ನಮಗೆ ಹಾಗು ಘನ ಸರಕಾರಕ್ಕೆ ಇಬ್ಬರಿಗೂ ಅವುಗಳ ಮಹತ್ವ ಗೊತ್ತಿಲ್ಲ..

ನಿಮಗೆ ಇನ್ನೊಂದು ಕುತೂಹಲಕರವಾದ ವಿಷಯ...

ಸಾಗರ ತಾಲೂಕಿನಲ್ಲಿ ಇರುವ ಹಲವಾರು ಹಳ್ಳಿಗಳ ಹೆಸರು ಸಿರ್ಸಿ.. ಸಿದ್ದಾಪುರ ತಾಲ್ಲೂಕುಗಳಲ್ಲಿವೆ...

ಇದು ಹೇಗೆ ಸಾಧ್ಯ ಎಂದು ನಮ್ಮಲ್ಲಿನ ಹಿರಿಯರೊಬ್ಬರನ್ನು ಕೇಳಿದೆವು..

"ಒಂದು ಕಾಲದಲ್ಲಿ ಸಾಗರ ತಾಲೂಕಿನಲ್ಲಿ ಭೀಕರ ಬರಗಾಲ ಬಂದಿತ್ತು..

ಅಲ್ಲಿನ ಜನರೆಲ್ಲ ಸಿರ್ಸಿ.. ಸಿದ್ದಾಪುರದ ಕಡೆ ಬಂದರು..

ತಮ್ಮ ಊರಿನ್ನ್ನು ಮರೆಯಲಾಗದೆ ಅದೇ ಹೆಸರನ್ನು ಇಟ್ಟುಕೊಂಡರು..

ಮುಂಡಿಗೆಸರ..
ಕಾನುಗೋಡು...
ಬಾಳೆಸರ..
ಭೀಮನ ಕೋಣೆ.. ಇತ್ಯಾದಿ ಸುಮಾರು ಇಪ್ಪತ್ತು ಊರುಗಳ ಹೆಸರು ಪಟ್ಟಿ ಮಾಡಿದ್ದೆವು..
(ಇದು ನಾವು ಕಾಲೇಜಿಗೆ ಹೋಗುವಾಗ..
ಆ ಹಿರಿಯರು ಈಗಿಲ್ಲ..
ಅವರು ಬರಗಾಲ ಬಂದ ವರ್ಷವನ್ನೂ ಹೇಳಿದ್ದರು.. ಈಗ ನೆನಪಿಲ್ಲ)

ಆ ಹಿರಿಯರು ನಿಮ್ಮ ಥರಹವೆ ಇದ್ದರು..

ಕೃಷಿ ಉದ್ಯೋಗವಾಗಿದ್ದರೂ..
ಅವರ ಇತಿಹಾಸ ಪ್ರೇಮದ ಬಗೆಗೆ ಎರಡು ಮಾತಿಲ್ಲ..

ನಿಮ್ಮನ್ನು ನಮ್ಮೂರಿಗೆ ಅಪಹರಿಸಿಕೊಂಡು ಹೋಗಿಬಿಡುತ್ತೇವೆ..
ನಮ್ಮೂರಿನ ಜಾಗಗಳನ್ನೆಲ್ಲ ತೋರಿಸಬೇಕಾಗಿದೆ...

ಜೈ ಹೋ ಬಾಲಣ್ಣ...
ಚಿನ್ಮಯ ಭಟ್ said...
ಈ ಲೇಖನವನ್ನು ಓದುತ್ತಾ ಹೋದರೆ ನಮ್ಮನೆಯನ್ನು ಬೇರೆಯಾರೋ "ಇದು ಅರಮನೆ ಕಣಪ್ಪಾ "ಎಂದಾಗ ಎಷ್ಟು ಸಂತೋಷವಾಗುತ್ತ್ತದೆಯೋ ಅಷ್ಟು ಖುಷಿ ಆಗ್ತಾ ಇದೆ....
ಏನಿಲ್ಲಾ ನನಗೊಂದೇ ಬೇಸರ್.... ೨೦ ವರ್ಷ ಅದೇ ಊರಿನಲ್ಲೇ ಇದ್ದರೂ ನನಗೆ ಒಂದು ದಿನವೂ ಇವನ್ನೆಲ್ಲಾ ಈ ತರಹ ಇತಿಹಾಸ ಕೆದಕಿ ನೋಡಬೇಕು ಅನಿಸಿರಲೇ ಇಲ್ಲ...ಒಂದು ಸ್ಥಳವನ್ನು ಹೇಗೆ ನೋಡಬೇಕು ಎಂದುದನ್ನು ತಿಳಿಸಿಕೊಡ್ತಾ ಇರೋದಕ್ಕೆ ನಿಮಗೆ ಅಭಾರಿಯಾಗಿದ್ದೇನೆ...

ಖುಷಿ ಆಗ್ತಿದೆ ಶಿರಸಿಯ ಬಗ್ಗೆ ಓದ್ತಾ ಇರೋದಕ್ಕೆ...ಜೊತೆಗೆ ಪ್ರವಾಸ ಕಥನವನ್ನೂ ಹೇಗೆ ಬ್ಲಾಗಿಸಬೇಕು ಎನ್ನುವುದೂ ಚೂರ್ಚೂರು ಗೊತ್ತಾಗ್ತಾ ಇದೆ...

ಧನ್ಯವಾದ ಬಾಲು ಸರ್..
ಮುಂದಿನ ಸಲ ಶಿರಸಿಗೆ ಬಂದಾಗ ಹೇಳಿ,ಸತ್ಕಾರ ಹೋಟೆಲ್ಲಿನಲ್ಲಿ "ಮಸಾಲೆ ದೋಸೆ"ಪಾರ್ಟಿ ನಿಮ್ಗೆ,ಶಿರಸಿಯವರೆಲ್ಲರ ಪರವಾಗಿ..ಹಾ ಹಾ....

ನಮಸ್ತೆ ....
ಮನಸು said...
ಸರ್ ಈ ಲೇಖನಗಳನ್ನು ಓದಿ ಬಹಳ ಖುಷಿ ಆಯ್ತು. ಎಷ್ಟೋಂದು ಮಾಹಿತಿಗಳನ್ನು ಕೊಡ್ತನೇ ಇದ್ದೀರಿ ಮುಂದುವರಿಸಿ ಸರ್ ಓದುವ ಆಸೆ ನಮಗಿದೆ.
Anitha Naresh Manchi said...
ಸೊಗಸಾಗಿ ಪರಿಚಯಿಸಿದ್ದೀರಿ ಮುತ್ತಿನಕೆರೆಯನ್ನು.. ಒಳ್ಳೆಯ ಚಿತ್ರಗಳು ಲೇಖನಕ್ಕೆ ಇನ್ನಷ್ಟು ಕಳೆ ನೀಡಿದೆ.. tnq :)
ಸಂಧ್ಯಾ ಶ್ರೀಧರ್ ಭಟ್ said...
ತುಂಬಾ ಚೆನ್ನಾಗಿದೆ ಸಚಿತ್ರ ಲೇಖನ..







ಸಂಚಿಕೆ 06






Srikanth Manjunath said...
ನಾವು ಚಿಕ್ಕವರಿದ್ದಾಗ (ಈಗಲೂ ಸಹ) ಬಾಣಲೆಯಲ್ಲಿ ಮಾಡಿದ ಉಪ್ಪಿಟ್ಟು ತೆಗೆದ ಮೇಲೆ..ತಳಕ್ಕೆ ಅಂಟಿಕೊಂಡ ರೊಟ್ಟಿಯಂತಾದ ಉಪ್ಪಿಟ್ಟಿನ ಚಕ್ಕಳವನ್ನು ಮಗಚುವ ಕೈಯಲ್ಲಿ ಎಬ್ಬಿ ಎಬ್ಬಿ ಕೆರೆದು ಹಾಕಿಸಿಕೊಳ್ಳುವುದು ಬಹು ಇಷ್ಟವಾದ ಕಾರ್ಯವಾಗಿತ್ತು..ನೀವು ಸೊಂದೆಯ ಇತಿಹಾಸವನ್ನು ಪದರ ಪದರವಾಗಿ ಎಬ್ಬುತ್ತಿರುವ ಪ್ರಯತ್ನ ನೋಡಿದಾಗ..ಆ ಚಕ್ಕಳದ ಉಪ್ಪಿಟ್ಟು ರುಚಿಯಾಗಿರುವ ಹಾಗೆ ಮನಕ್ಕೆ, ಕಣ್ಣಿಗೆ ಖುಷಿ ಕೊಡುತ್ತಿದೆ...ಪಿರಂಗಿಗಳು, ಹಳೆಯ ಭಾವಿ, ಅರಮನೆಯಿರಬಹುದಾದ ಅವಶೇಷಗಳು, ಕೋಟೆ ಕೊತ್ತಲಿನ ಪಳಯುಳಿಕೆಗಳು, ಕಲ್ಲಿನ ಪೀಠದ ಕುಸುರಿ ಕೆಲಸ.. ರಾಕ್ಷಸಾಕಾರದ ಮರಗಳು ಒಂದೇ ಎರಡೇ....ಅಮೋಘ...ನಮಗೆ ೪೫೦ಕಿ.ಮಿ. ದೂರದಿಂದಲೇ ಇತಿಹಾಸವನ್ನು ಮೊಗೆ ಮೊಗೆದು ಉಣಬಡಿಸುತ್ತಿರುವ ನಿಮಗೆ, ನಿಮ್ಮ ಕ್ಯಾಮೆರಾಕ್ಕೆ ಧನ್ಯವಾದಗಳು (ಈ ಪ್ರವಾಸದ ಶಿಲ್ಪಿಗೆ ನಿಮ್ಮ ಈ ಲೇಖನದ ಕೊನೆ ಕಂತಿನಲ್ಲಿ ಬೇರೆಯಾಗೇ ಬರೆಯುತ್ತೇನೆ..)......ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬೇಕು....
Badarinath Palavalli said...
ಶತಮಾನಗಳು ನಾಡನ್ನು ಆಳಿದ ಅರಸರ ಗುರುತುಗಳು ಅವಗಣನೆಗೆ ಗುರಿಯಾಗಿರುವುದು, ನಮ್ಮ ಇತಿಹಾಸವನ್ನು ಅಗೌರವದಿಂದ ಕಾಣುವುದಕ್ಕೆ ಮತ್ತು ಸರ್ಕಾರಗಳ ಕುರುಡುತನಕ್ಕೆ ಸಾಕ್ಷಿ.

ಕ್ರೇನು ಮತ್ತಿತರ ಆಧುನಿಕ ಎತ್ತು ಪರಿಕರಗಳಿಲ್ಲದೆ, ಪಿರಂಗಿ ಮತ್ತಿತರ ಭಾರವಾದ ಉಪಕರಣಗಳನ್ನು ದೂರದ ಪೋರ್ಚಗಲ್ಲಿನಿಂದ ಆಮದಿಸಿ, ಈ ಕಾನನದ ಮಧ್ಯೆ ಪ್ರತಿಷ್ಟಾಪಿಸಿದ ಹಿರಿಯರ ಶ್ರಮವು ಅಚ್ಚರಿ ತರಿಸುತ್ತದೆ.

ಅಲ್ಲಿನ ಶಿಲ್ಪ ಕಲೆ ಮತ್ತು ಪರಿಸರ ನನಗೆ ನೋಡುವ ಹುಚ್ಚೆಬಿಸಿತು.

ಶೀರ್ಷಿಕೆ ಕೊಡುವಷ್ಟು ಪಟು ನಾನಲ್ಲ ಬಾಲು ಸಾರ್, ಅದೇನಿದ್ದರು ನಿಮಗೆ ಚಿಟಿಕೆ ವಿದ್ಯೆ.

ಮುಂದುವರೆಯಲಿ...
ಚುಕ್ಕಿಚಿತ್ತಾರ said...
ಉತ್ತಮ ನಿರೂಪಣೆಯೊ೦ದಿಗೆ ಅತುತ್ತಮ ವಿಚಾರಗಳನ್ನು ಚಿತ್ರದ ಮೂಲಕ ಸಾಕ್ಷೀಕರಿಸಿದ್ದೀರಿ.. ಹತ್ತು ಹಲವು ಐತಿಹಾಸಿಕ ವಿಚಾರಗಳನ್ನು ಬಿಚ್ಚಿಡುವ ನಿಮ್ಮ ಪರಿಗೆ ಅನ೦ತ ಧನ್ಯವಾದಗಳು.
shivu.k said...
ಬಾಲು ಸರ್,
ಸೋಂದೆ ಅರಸರ ಸಂಪೂರ್ಣ ವಿವರ ಆಗ ಬಳಸುತ್ತಿದ್ದ ಪೋರ್ಚುಗೀಸರ ಪಿರಂಗಿಗಳು ಅಲ್ಲಿನ ಕೋಟೆ, ಅದೊಳಗಿನ ದೇವಾಲಯ... ಹೀಗೆ ಇನ್ನೂ ಅನೇಕ ನಮಗೆ ಗೊತ್ತಿಲ್ಲದ ಮಾಹಿತಿಗಳ ಕಲೆಹಾಕಿದ್ದೀರಿ...ಕುತೂಹಕರವಾಗಿದೆ ನಿಮ್ಮ ಈ ಲೇಖನಮಾಲೆ ಮುಂದುವರಿಸಿ ಸರ್..

ಸಂಧ್ಯಾ ಶ್ರೀಧರ್ ಭಟ್ said...
ತುಂಬಾ ಚೆನ್ನಾಗಿದೆ... ಮುಂದಿನ ಪೋಸ್ಟ್ ಯಾವಾಗ ಹಾಕ್ತಾರಪ್ಪ ಅಂತ ಕಾಯುವ ಹಾಗೆ ಮಾಡ್ತಿರಾ ಬಾಲಣ್ಣ..
ಮನಸು said...
ಅಬ್ಬಾ..!! ನಿಜಕ್ಕೂ ನಾವೂ ಹೋಗಿ ನೋಡಬೇಕು ಎನಿಸಿದೆ. ಅತ್ಯುತ್ತಮ ನಿರೂಪಣೆ ಮತ್ತು ಮಾಹಿತಿಗಳನ್ನು ಒಳಗೊಂಡಿದೆ ಹಾಗೆ ಇಂತಹ ಐತಿಹಾಸಿಕ ಸ್ಥಳಗಳು ನಶಿಶಿ ಹೋಗುತ್ತಿರುವುದು ನಿಜಕ್ಕೂ ವಿಷಾದನೀಯ.:(
ವೆಂಕಟೇಶ್ ಹೆಗಡೆ said...
ಬಾಲು ಸರ್ ನಿಜವಾಗಲೂ ಬೇಸರ ವಾಗುತ್ತಿದೆ .. ಇಷ್ಟೆಲ್ಲಾ ಪುರಾತನ ಮಹತ್ವದ ಸ್ಥಳಗಳಿದ್ದ್ದು ಯಾರಿಗೂ ಗೋಚರವಾಗದೆ ಇದೆಯಲ್ಲ .. ಸ್ತಳೀಯರೂ ಸಹ ಆಸಕ್ತಿ ತೆಗೆದುಕೊಂಡು ಪ್ರವಾಸೋದ್ಯಮವನ್ನ ಅಭಿವೃದ್ದಿ ಮಾಡಬಹುದಿತ್ತು ... ನಿಜವಾಗಿಯೂ ಹೇಳಲಾ ನಾನಿನ್ನೂ ಆ ಸ್ಥಳವನ್ನು ನೋಡಿಲ್ಲ ಅಲ್ಲೇ ಹತ್ತಿರದಲ್ಲಿದ್ದೂ ಸಹ ,.... ಮುಂದಿನ ಸಾರ್ತಿ ಊರಿಗೆ ಹೋದಾಗ ಖಂಡಿತ ಅಲ್ಲೆಲ್ಲ ತಿರುಗಿ ಬರುತ್ತೇನೆ
UMESH VASHIST H K. said...
ತುಂಬಾನೆ ಚೆನ್ನಾಗಿದೆ ಈ ಕಥನ ಈ ಸೋಂದೆ ಅರಸರಬಗ್ಗೆ ನನಗೆ ಮಾಹಿತಿಯೇ ಇರ್ಲಿಲ್ಲ ...... ಸುಮಾರಾಗಿ ಎಲ್ಲಾ ರಾಜರು ಗಳು ೨೫ ರಿಂದ ೩೦ ವರ್ಷ ಆಳಿದವರೇ...

ಆಶ್ಚರ್ಯ ವಾಯ್ತು ... ಮತ್ತು ಖುಷಿ ಆಯ್ತು .... ತುಂಬ ತುಂಬಾ ವಂದನೆಗಳು ........
ಚಿನ್ಮಯ ಭಟ್ said...
ಬಾಲು ಅಣ್ಣಾ,ಆ ಫಿರಂಗಿಯನ್ನು ನೋಡಿ ಮೊದಲು ಚಂದ್ರಗುತ್ತಿಯ ಬಗ್ಗೆ ಬರೆಯುತ್ತಿದ್ದೀರೇನೋ ಅಂದುಕೊಂಡೆ...
ಮತ್ತೆ ಸೋಂದೆಯಲ್ಲೆ ಓಡಾಡಿಸಿದಿರಿ..
ಅದೆಷ್ಟು ಚಂದದ ಪೋಟೋಗಳು..ಬಹುಷಃ ನೀವು ಬರ್ತೀರಾ,ಫೋಟೋ ತೆಗಿತೀರಾ, ಅಂತೇಳೇ ಕೋಟೆಯ ಕಲಾಮೂರ್ತಿಗಳೆಲ್ಲಾ ಸ್ನಾನ ಮಾಡಿ ಸಿದ್ಧವಾಗಿದ್ದವೇನೋ..

ಓದಿ ಖುಷಿ ಆಯ್ತು..ಬರಿತಾ ಇರಿ..ಓದ್ತಾ ಇರ್ತೀವಿ..
ನಮಸ್ತೆ..
ಗಿರೀಶ್.ಎಸ್ said...
ಸರ್,ಫೋಟೋ ಮತ್ತು ಮಾಹಿತಿ ತುಂಬ ಚೆನ್ನಾಗಿದೆ..... ನಿಜವಾಗಲು ಈ ಫಿರಂಗಿಯನ್ನೆಲ್ಲ ನೋಡಿದಾಗ ಆಶ್ಚರ್ಯ ಆಯಿತು.....ನ್ಯಾಯ ಕಟ್ಟೆ,ಅದರ ಕೆತ್ತನೆಗಳು ಎಲ್ಲ ಮನಸೂರೆಗೊಂಡಿತು....ಆದಷ್ಟು ಬೇಗ ಪೂರ್ತಿ ಶಿರಸಿಯನ್ನು ತೋರಿಸಿಬಿಡಿ ನಮಗೆ..
Anonymous said...
To facilitate was a impressive place of duty. It is inspiring on behalf of all. Credit on behalf of sharing to facilitate slice.
ಸಿಮೆಂಟು ಮರಳಿನ ಮಧ್ಯೆ said...
ಬಾಲಣ್ಣಾ...

ಎಷ್ಟೆಲ್ಲ ವಿಷಯ ಹುಡುಕಿದ್ದೀರಿ... !

ಒಂದು ಪುಸ್ತಕ ಮಾಡಿ... ದಯವಿಟ್ಟು....

ಆಸಕ್ತರಿಗೆ ಅನುಕೂಲವಾಗುತ್ತದೆ....

ಪ್ರೀತಿಯಿಂದ







ಸಂಚಿಕೆ:-) 07


umesh desai said...
ಬಹಳದಿನಗಳ ಹಿಂದೆ ಸ್ವರ್ಣವಲ್ಲಿಯಲ್ಲಿ ಒಂದು ರಾತ್ರಿ ಕಳೆಯುವ ಯೋಗಬಂದಿತ್ತು ಕುಟುಂಬ ಸಮೇತವಾಗಿ..
ಅಲ್ಲಿಯ ವಾತಾವರಣವೇ ವಿಶಿಷ್ಟವಾಗಿದೆ.ಅಲ್ಲಿಯ ವಟುಗಳ ವೇದಘೋಷ ಇನ್ನೂ ಕಿವಿಯಲ್ಲಿದೆ..
ನನ್ನ ಬ್ಲಾಗಿಗೂ ಬನ್ನಿ..ಹೊಸ ಕಥೆ ಇದೆ
Srikanth Manjunath said...
"ಸ್ನಾನ ಗೀನ ಎಲ್ಲ ದೇಹಕ್ಕಲ್ಲ ಕಂದ ಮನಸಿಗೆ" ಅರೆ ಇದು ಕವಿರತ್ನ ಕಾಳಿದಾಸದಲ್ಲಿ ಅಣ್ಣಾವ್ರು ಹೇಳಿದ ಸಂಭಾಷಣೆ...ಮೊದಲ ಆರು ಕಂತುಗಳಲ್ಲಿ ಕಣ್ಣಿಗೆ ತಂಪನ್ನು ಕೊಡುತಿದ್ದ ಲೇಖನ..ತಿರುವು ತೆಗೆದುಕೊಂಡು ಮನಸಿಕೆ ತಂಪನ್ನು ಕೊಡಲು ಬಂದಿದೆ...ಹೌದು (ಕೆಲವು) ಮಠಗಳು /ದೇವಸ್ಥಾನಗಳು ಕೊಡುವ ಮನಶಾಂತಿ ಅಪರೂಪವಾದದ್ದು..ಸೊಂದೆಯ ಮಠದ ವಿವರಗಳು ಸುಂದರವಾಗಿವೆ..ಅದರ ಚಿತ್ರಗಳು, ಅದರ ವಿವರಣೆಗಳು ಸೊಗಸು..ಆ ಪ್ರಶಾಂತ ಪರಿಸರದಲ್ಲಿ, ಆ ಹಸಿರು ಉಸಿರಿನಲ್ಲಿ ಮೀಸಲ ಬಾಜಿ ತಿನ್ನುವ ಬಯಕೆ ಕಾಡುತ್ತಿದೆ..
ಬರಲಿ ಬರಲಿ..ಮೀಸಲ ಬಾಜಿ..
ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ ಬಾಜಿ ಬೇಕು..:-)
Badarinath Palavalli said...
ಮಠವು ಕಾಲಾಂತರದಲ್ಲಿ ಅಲ್ಲಲ್ಲಿ ಸ್ಥಿತಿಗೊಂಡು ಇಲ್ಲಿ ನೆಲೆಸಿದ್ದು ವಿಚಿತ್ರವಾಗಿದೆ. ಇಂತಹ ಇತಿಹಾಸ ಬೇರೆ ಯಾವ ಮಠಕ್ಕಿದೆ ಹುಡುಕ ಬೇಕು.

ಹವ್ಯಕ ಭಾಷಾ ಸೊಗಡು ಕೇಳಿದ್ದೇನೆ.

ಮಠದ ಕೈಂಕರ್ಯ ಚೆನ್ನಾಗಿದೆ.

ಅಡಿಕೆ ಚಿತ್ರಗಳೂ ಸೂಪರ್ರು.

ಗೋ ಸಂರಕ್ಷಣೆ ಮಾಡುತ್ತಿರುವ ಮಟದ ಔಧಾರ್ಯ ಮೆಚ್ಚ ತಕ್ಕದ್ದು.

ನಮ್ಮನ್ನು ವಾಧಿರಾಜರ ಮಠ ಕಾಯುತ್ತಿದೆ.
shivu.k said...
ಬಾಲು ಸರ್,
ಸೋಂದೆ ಮಠದ ಇತಿಹಾಸವನ್ನು ಓದಿ ತುಂಬಾ ಖುಷಿಯಾಯ್ತು...ಅದರ ಚಿತ್ರಗಳು ಕೂಡ ಖುಷಿಕೊಟ್ಟವು.
Govinda Rao V Adamane said...
ಸುಮಾರು 9-10 ವರ್ಷಗಳ ಹಿಂದಿನ ಮಾತು.ಈ ಮಠದವರು ಪ್ರಾಯೋಜಿಸಿದ್ದ ಅಲ್ಲಿಯೇ ಜರಗಿದ ೨ ದಿನದ ತರಬೇತಿ ಶಿಬಿರವೊಂದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಗಿದ್ದಾಗಿನ ಅನುಭವಗಳನ್ನು ಪುನಃ ಮೆಲುಕು ಹಾಕುವಂತೆ ಮಾಡಿತು.
vandana shigehalli said...
ಸುಂದರ ಬರಹ ... ಇಷ್ಟ ವಾಯಿತು ಬೇರೆ ಬೇರೆ ಪ್ರವಾಸಿ ತಾಣಗಳ ಬೇಟಿ ಮಾಡುವವರಿಗೆ ನಿಮ್ಮ ಬ್ಲಾಗ್ ಸಹಕಾರಿ ಯಾಗಿದೆ ....
M.D.subramanya Machikoppa said...
ಇನ್ನಷ್ಟು ಇನ್ನಷ್ಟು!!!
nagaraj hegde said...
very nice sir,,,,
Asim Das said...
nice photos.....religious identity
ಸಾಗರದಾಚೆಯ ಇಂಚರ said...
Superb sir, sakattagide
Manjunatha Kollegala said...
Nice narratives... you must be having a very nice time roaming around... Nice pictures as well
Anonymous said...
I found your website perfect for my needs. It helped me, and I'll certainly install what you recommend. You have something good going here, keep it up!







ಸಂಚಿಕೆ :-) 08


11 comments:

Srikanth Manjunath said...
"ಮಹೇಶ..ನಿನಗೆ ಪುಸ್ತಕದ ಜ್ಞಾನ ಹೆಚ್ಚು..ಮಸ್ತಕದ ಜ್ಞಾನ ಕಮ್ಮಿ" ಕನ್ನಡ ಚಿತ್ರರಂಗದ ಭೀಷ್ಮ ಶ್ರೀ. ಆರ್.ನಾಗೇಂದ್ರ ರಾಯರು ಸಾಕ್ಷಾತ್ಕಾರ ಚಿತ್ರದಲ್ಲಿ ಹೇಳುವ ಸಂಭಾಷಣೆ..ಮಸ್ತಕದ ಜ್ಞಾನ ಹೆಚ್ಚಾಗ ಬೇಕಾದರೆ ದೇಶ ಸುತ್ತಬೇಕು..ಸ್ಥಳ ಪುರಾಣ ತಿಳಿಯಬೇಕು..ಹಂಚಬೇಕು..ಇದೆ ಸುಂದರ ಜೀವನದ ರಹಸ್ಯ..ಬಾಲು ಸರ್ ನಿಮ್ಮ ಸೋಂದೆ ಸ್ಥಳ ಪರಿಚಯ..ಈ ಮೇಲಿನ ಮಾತನ್ನು ನನಗೆ ತಿಳಿಸಿತು..ಎಂತಹ ಮಾಹಿತಿ ಸಂಗ್ರಹ..ಮತ್ತು ಚೂರು ಚೂರು ಉಣಬಡಿಸುವ ವಿಧಾನ ನಿಜಕ್ಕೂ ಶ್ಲಾಘನೀಯ...ಮಠ, ಸುಂದರ ಪರಿಸರ, ಅದರ ಇತಿಹಾಸ, ಶ್ರೀ ವಾದಿರಾಜರ ಸ್ಥೂಲ ಜೀವನ ಪರಿಚಯ, ದೇವರ ಸಾಕ್ಷಾತ್ಕಾರ ಎಲ್ಲವು ಸೊಗಸಾಗಿ ಮೂಡಿ ಬಂದಿದೆ..ಭಕ್ತಿ ರಸ ಉಕ್ಕಿಸುತ್ತ...ಕನ್ನಡ ನಾಡಿನ ಹೆಮ್ಮೆಯ ಆದಿ ಕವಿಯ ಹಾಗು ಮೊದಲ ರಾಜ ಪುರುಷ...ಇಂತಹವರು ಮೆಟ್ಟಿದ ಭೂಮಿಯ ಪರಿಚಯಕ್ಕೆ ಇಡ್ಲಿ ಸಾಂಬಾರಿಗೆ ಕಾದ ಹೊಟ್ಟೆಯ ರೀತಿ ನಾವು ಕಾಯುತ್ತಿದ್ದೇವೆ...
ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ...ದಯವಿಟ್ಟು ಬರಲಿ... :-)
ದಿನಕರ ಮೊಗೇರ said...
Navu nimma jote saaguttaa ennuva haage barediddiri sir...

hogi munde.... hinde naaviddeve...mundina stop elli....
ಸಿಮೆಂಟು ಮರಳಿನ ಮಧ್ಯೆ said...
ಬಾಲಣ್ಣ...

ಇಲ್ಲಿ ನಾನು ಹಲವಾರು ಬಾರಿ ಹೋಗಿದ್ದರು ಈ ಮಾಹಿತಿಗಳು ನನಗೆ ಗೊತ್ತಿರಲಿಲ್ಲವಾಗಿತ್ತು...
ಬಹಳ ಉಪಯುಕ್ತ ಮಾಹಿತಿಗಳು...

ಅಲ್ಲಿನ ಪ್ರಶಾಂತ ವಾತವರಣ...
ಭಕ್ತಿಯ ಅನನ್ಯತೆ ಅಲ್ಲಿ ಕಾಣಬಹುದು...

ಮುಂದಿನ ಕಂತಿಗಾಗಿ ಕಾಯುತ್ತಿರುವೆವು .....................
umesh desai said...
yes ur article is good i am reviving my memories too
Santosh Hegde Ajjibal said...
ಬಾಲಣ್ಣಾ ತುಂಬಾ ಚನ್ನಾಗಿದೆ ನಿಮ್ಮ್ವ್ ಮುಂದಿನ ಸಂಚಿಕೆಗೆ ಕಾಯ್ತಾ ಇದ್ದಿನಿ
ಗಿರೀಶ್.ಎಸ್ said...
ಸರ್,ಈ ಮಠದ ಬಗ್ಗೆ ಕೇಳಿದ್ದೆನಾದರೂ ಇದರ ಹಿನ್ನೆಲೆ ತಿಳಿದಿರಲಿಲ್ಲ....ಎಂದಿನ ಹಾಗೆ ಮುಂದಿನ ಕಂತಿಗೆ ಕಾಯುವ ಹಾಗೆ ಕುತೂಹಲ ಕೆರಳಿಸಿದ್ದಿರಾ..ಅದರಲ್ಲೂ ಬನವಾಸಿ ಬಗ್ಗೆ ಆದ್ದರಿಂದ ಸ್ವಲ್ಪ ಜಾಸ್ತಿಯೇ ಕುತೂಹಲ ಇದೆ ಅನ್ನಬಹುದು..
ಚಿನ್ಮಯ ಭಟ್ said...
ಬಾಲಣ್ಣ,

ಪ್ರವಾಸ ಮಾಡುವುದನ್ನು,ಅದನ್ನು ಸಾರ್ಥಕಗೊಳಿಸುವುದನ್ನು ನಮಗೆಲ್ಲಾ ತಿಳಿಸಿಕೊಡುತ್ತಿದ್ದೀರಿ..ವಂದನೆಗಳು ನಿಮಗೆ ಅದಕ್ಕಾಗಿ..

ಹಾಂ ಈ ಸಲದ ಪರೀಕ್ಷೆ ಮುಗಿದು ರಜೆಯಲ್ಲಿ ನಾನೂ ವಾದಿರಾಜ ಮಠಕ್ಕೆ ಹೋಗಿದ್ದೆ..ಅಲ್ಲಿಯೇ ಒಂದು ರಾತ್ರಿ ತಂಗಿದ್ದೆ..ತುಂಬಾ ಆಹ್ಲಾದಕವಾದ ವಾತಾವರಣ..

ಅಲ್ಲಿ ಇನ್ನೊಂದು ವಿಶೇಷವೆಂದರೆ ಶ್ರೀ ಭೂತರಾಜರಿಗೆ ಕಾಯಿಗಳನ್ನು ಉರುಳಿಸುವ ಸಂಪ್ರದಾಯ..ಎಲ್ಲರೂ ಒಂದೊಂದು ತೆಂಗಿನಕಾಯಿಯನ್ನು ತಂದು ದೇವರ ಬಳಿಯಿರುವ ಕಂಡಿಯಲ್ಲಿ ಉರುಳಿಸುತ್ತಾರೆ..
ಆ ಮೇಲೆ ಇನ್ನೊಂದೆಂದರೆ ಸಂಜೆ ಸುಮಾರು ೬:೪೫-೭ ಕ್ಕೆ ಶುರುವಾಗುವ ಪೂಜೆಯಲ್ಲಿ ಅಲ್ಲಿರುವ ಎಲ್ಲರೂ ಬಂದಿರುತ್ತಾರೆ..

ಅದಾದ ಮೇಲೆ ಊಟಕ್ಕೆ ಹೋದೆವು..ಅವತ್ತು ಅಮಾವಾಸ್ಯೆಯಾದುದರಿಂದ ಪಳಾರ(ಫಲಾಹಾರ)ವಿತ್ತು.. ಊಟದ ವ್ಯವಸ್ಥೆಯೂ ಕೂಡ ಇದ್ದುದರಿಂದ ನಾವು ಅಲ್ಲಿಗೇ ಹೋಗಿದ್ದೆವು.....ಇಲ್ಲಿ ಪ್ರವಾಸಿಗರಿಗೆ ತಂಗಲು ಅತ್ಯುತ್ತಮವಾದ ವಸತಿ ವ್ಯವಸ್ಥೆ ಇದೆ...ಇಲ್ಲಿಗೆ ಬರಲು ಉತ್ತಮ ಸಾರಿಗೆ ವ್ಯವಸ್ಥೆಯೂ ಕೂಡ ಇದೆ..ಬೆಂಗಳೂರಿನಿಂದ ಬಂದ ಒಂದು ಬಸ್ಸು ೬.೩೦ರ ಮುಂಜಾನೆ ಅಲ್ಲಿ ಕಾಣಿಸಿಕೊಂಡಿತ್ತು...

ಬಾಲು ಸರ್ ಲೇಖನ ಓದುತ್ತಾ ಹೋದಂತೇ ಇವೆಲ್ಲಾ ನೆನಪಾಯ್ತು...
ಧನ್ಯವಾದ ...
ಬರಿತಾ ಇರಿ...
ಹಾಂ..ಅಲ್ಲಿ ಕೊನೆಯಲ್ಲಿ " vittodam" ಅಂತ ಬರೆದಿದ್ದೀರಲ್ಲಾ,ಅದು ಬೆರಳಚ್ಚು ದೋಷವೋ ಅಥವಾ ಅದಕ್ಕೇನಾದರೂ ವಿಶೇಷ ಅರ್ಥವಿದೆಯೋ ತಿಳಿಯುತ್ತಿಲ್ಲ.. ದಯವಿಟ್ಟು ತಿಳಿಸಿ...

ನಮಸ್ತೆ....
ಸಂಧ್ಯಾ ಶ್ರೀಧರ್ ಭಟ್ said...
ತುಂಬಾ ಚೆನ್ನಾಗಿದೆ ಬಾಲಣ್ಣ ... ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ
ಸೀತಾರಾಮ. ಕೆ. / SITARAM.K said...
same as Sandhya
shivu.k said...
ಬಾಲು ಸರ್,
"ಶ್ರಿಮದ್ ವಾದಿರಾಜ" ಮತ್ತು ಮಠದ ಇತಿಹಾಸವನ್ನು ಓದಿ ತುಂಬಾ ಸಂತೋಷವಾಯ್ತು. ನಾಲ್ಕು ಬಾರಿ ಸಿರಸಿಗೆ ಹೋಗಿದ್ದರೂ ಒಮ್ಮೆಯೂ ಸೋಂದ ಮಠಕ್ಕೆ ಹೋಗಿರಲಿಲ್ಲ. ಮುಂದಿನ ಭಾರಿ ಖಂಡಿತ ಹೋಗಬೇಕೆನ್ನಿಸುತ್ತಿದೆ...
Anonymous said...
That's really interesting. Thanks for posting all the great information! Had never thought of it all that way before.







ಸಂಚಿಕೆ :-) 09


Anitha Naresh Manchi said...
ಇತಿಹಾಸದ ಪುಟಗಳು .. ಮಗುಚಿದಷ್ಟು ನೆನಪುಗಳ ಹರಿದಾಟ.
Prasad Hegde said...
ತುಂಬ ಸುಂದರವಾದ ನಿರೂಪಣೆ.. ನಮ್ಮೂರ ಬಗ್ಗೆ ನಮಗೇ ಗೊತ್ತಿರದ ಎಷ್ಟೋ ಅಚ್ಚರಿಯ ಸಂಗತಿಗಳು ಅನಾವರಣಗೊಂಡಿವೆ! ಧನ್ಯವಾದ ಬಾಲು ಸರ್ :)
ಚುಕ್ಕಿಚಿತ್ತಾರ said...
ಸುಂದರವಾದ ನಿರೂಪಣೆ.
ಧನ್ಯವಾದ
Shridhar Bhat said...
super..
ಮನಸು said...
ಅಬ್ಬಾ. ವಿಸ್ಮಯ ನಾಡು ಈ ಕರುನಾಡು.. ಸರ್ ನೀವು ನೀಡುವ ಇತಿಹಾಸ ಮಾಹಿತಿ ನಮಗೆ ಖುಷಿ ನೀಡುತ್ತೆ ಹೀಗೆ ಮತ್ತಷ್ಟು ಇತಿಹಾಸ ಪುಟವನ್ನು ತೆರೆದಿಡಿ.
mshebbar said...
ಸೊಗಸಾಗಿದೆ. ಶ್ರೀರಂಗ ಪಟ್ಟಣದಿಂದ ಬನವಾಸಿಗೆ ನೆಗೆದಿದ್ದೀರ. ಮಯೂರ ವರ್ಮ ನಂತರದಲ್ಲಿ ಮಯೂರ ಶರ್ಮನಾಗುತ್ತಾನೆ ಎಂದು ಕೇಳಿದ್ದೆ. ಸರೀನಾ? ದಕ್ಷಿಣ ಕನ್ನಡದಲ್ಲಿ ಬ್ರಾಹ್ಮಣರನ್ನು ಯಜ್ಞಯಾಗಾದಿಗಳಿಗೆ ಸ್ಥಾಪಪಿಸಿದ ನೆಂದು ಪ್ರತೀತಿ. ಇರಬಹುದೇ?
Wish to be a great Historian, one day or other.
Prabhu Iynanda said...
ಅನುಪಮ! ಧನ್ಯವಾದಗಳು, ಬಾಲು!
ಜಲನಯನ said...
ಬೈಕಲ್ಲೇ ಹೋಗಿಬಂದ್ರಾ ಸಿವಾ,,,??
ಸಕ್ಕತ್ತಾಗಿದೆ ಚಿತ್ರಗಳು ಮತ್ತು ವಿವವರಣೆ,,,
ಅದೇ. ಅಂದ್ಕೊಂಡೆ..ನೋಡಿ ಅಂದಾಗ ಏನೋ ವಿಶೇಷ ಬರೆದಿರ್ತಾರೆ ಬಾಲು ಅಂತ...!!! ಇತಿಹಾಸದ ಮೆಲುಕು ಚನ್ನಾಗಿತ್ತು.
Srikanth Manjunath said...
ಶಿವಸ್ಕಂದ ವರ್ಮ.ಇನ್ನು ನೀನು ಆಳಿದ್ದು, ಅಲಿಸಿದ್ದು ಮುಗಿಯಿತು..ಮಯೂರ ಶರ್ಮ ಬಂದಾಯಿತು...ಮಯೂರ ಶರ್ಮ ಈಗ ಮೈಸೂರಿನ ಬಾಲೂ ಸರ್ ಅವರಿಂದ ಎರಡನೇ ಮೂರನೇ ಶತಮಾನದ ಇತಿಹಾಸವನ್ನು ಕೆದಕಿಸುತ್ತ ವಿವರಿಸುತ್ತ ಹೊಗುತ್ತಾನೆ..
ಬಾಲೂ ಸರ್ ನಿಮ್ಮ ಬನವಾಸಿಯಾ ಬಗ್ಗೆ ಬ್ಲಾಗ್ ನೋಡಲು ಕುತೂಹಲದಿಂದ ಕಾಯುತಿದ್ದೆ.ಅಂಥಹ ಸುವರ್ಣ ಘಳಿಗೆ ಬಂದ ತಕ್ಷಣ.ಮನಸ್ಸಿಗೆ ಹೊಳೆದದ್ದು ಮೇಲಿನ ಸಾಲು..
ಬನವಾಸಿಯಾ ಉಪಗ್ರಹ ನೋಟ ಸೊಗಸಾಗಿದೆ..ಕಳೆದ ವಾರವಷ್ಟೇ ನೋಡಿದ ಈ ಜಾಗ ಇನ್ನಷ್ಟು ಹೊಸದಾಗಿ ಕಾಣುತ್ತಿದೆ...ನಿಮ್ಮ ಕೈಯಿಂದ ಚಿಕ್ಕ ಚಿಕ್ಕ ಸಂಗತಿಗಳು ಸೊಗಸಾಗಿ ಅಕ್ಷರ ರೂಪ ಪಡೆದುಕೊಳ್ಳುತ್ತವೆ.ಸುಂದರವಾಗಿದೆ ನಾವು ಕೈ ಮುಗಿದಿ ನಿಂತಿದ್ದೇವೆ..ಒಳಗೆ ಕರೆದು ಕೊಂದು ಹೋಗಿ ನಮ್ಮನ್ನು,,

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)
ಹರಿಹರಪುರ ಶ್ರೀಧರ್ said...
ಚಿತ್ರಗಳೆಲ್ಲಾ ಸುಂದರವಾಗಿವೆ. ಪ್ರವಾಸಿಗರಿಗೆ ಒಂದಿಷ್ಟು ವಿವರ ಕೊಡಬಹುದೇ? ಪ್ರಯಾಣಿಸಲು ಬಸ್,ಟ್ರೈನ್ ವೇಳಾಪಟ್ಟಿ. ಉಳಿಯಲು ಸೂಕ್ತ ಹೋಟೆಲ್ ,ಇತ್ಯಾದಿ ಮಾಹಿತಿ ಒದಗಿಸಿದರೆ ಉಪಕಾರವಾದೀತು
M.D.subramanya Machikoppa said...
ಉತ್ತಮ ನಿರೂಪಣೆ.
Badarinath Palavalli said...
ಬನವಾಸಿ ಎಂದರೆ ನನಗೆ ಮೊದಲಿಂದಲೂ ಯಾಕೋ ಮೈ ಪುಳಕ.

ವರದಾ ನದಿಗೆ ಅನ್ವರ್ಥವಾಗುವಂತಹ ವರ ಭೂಮಿ ಇದು.

ನನ್ನ ಮಯೂರ ವರ್ಮ ಕಟ್ಟಿದ ನಾಡು.

ಆದಿ ಕವಿ ಪಂಪನ ಸುಕ್ಷೇತ್ರ.

ಸಾಕ್ಷಾತ್ಮಕವಾಗಿ ಕೊಟ್ಟ ಗೂಗಲ್ ಚಿತ್ರಗಳು ಸ್ಪಷ್ಟವಾಗಿವೆ.

ಮಧುಕೇಶ್ವರ ನನಗೆ ಯಾವತ್ತು ದರ್ಶನ ಭಾಗ್ಯ ಕೊಡುತ್ತಾನೋ?

ನಾಗ ಮಂಡಲವಂತೂ ಅಮೋಘ.

ಮುಂದುವರೆಯಲಿ ಬನವಾಸಿಯಲ್ಲಿ.
UMESH VASHIST H K. said...
ನಿಜ ವಾಗಲೂ ಅದ್ಭುತ .... ಬಾಲು ಸಾರ್.... ನಾವು ಪಟ್ಯ ಪುಸ್ತಕ ಓದುವಾಗಲು
ಇಸ್ಟೊಂದು ವಿಷಯಗಳನ್ನ ತಿಳಿದಿರಲಿಲ್ಲ, .... ಮುಂದುವರೆಸಿ .....ಕುತೂಹಲಕರವಾಗಿದೆ
..... ವಂದನೆಗಳು....
UMESH VASHIST H K. said...
ನಿಜ ವಾಗಲೂ ಅದ್ಭುತ .... ಬಾಲು ಸಾರ್.... ನಾವು ಪಟ್ಯ ಪುಸ್ತಕ ಓದುವಾಗಲು
ಇಸ್ಟೊಂದು ವಿಷಯಗಳನ್ನ ತಿಳಿದಿರಲಿಲ್ಲ, .... ಮುಂದುವರೆಸಿ .....ಕುತೂಹಲಕರವಾಗಿದೆ
..... ವಂದನೆಗಳು....
Sathish MR said...
ಮುಂದಿನ ಕಥೆ ಯಾವಾಗ ಹೇಳುತ್ತಿರಾ ಸಾರ್......waiting .......
Sulatha Shetty said...
ಸುಂದರ ನಿರೂಪಣೆ Balanna:)
shivu.k said...
ಬಾಲು ಸರ್,
ಬನವಾಸಿ ಎರಡನೆ ಪುರಾತನ ನಗರವೆನ್ನುವ ವಿಚಾರ ವಿದೇಶಿಗರು ಅದರ ಬಗ್ಗೆ ಬರೆದಿರುವ ವಿಚಾರ ಮತ್ತು ಬನವಾಸಿ ಮದುಕೇಶ್ವರ ದೇವಾಲಯ ಇತ್ಯಾದಿ ವಿಚಾರಗಳು ಮತ್ತು ಫೋಟೊಗಳನ್ನು ನೋಡಿ ತುಂಬಾ ಖುಷಿಯಾಯ್ತು.







ಸಂಚಿಕೆ :-) 10






ISHWARA BHAT said...
ಸಚಿತ್ರ ಸವಿವರ ಪ್ರವಾಸ ಕಥನ. ತುಂಬಾ ಮಾಹಿತಿ.ಬಾಲಣ್ಣಾ ಸೋ ನೈಸ್ ಆಫ್ ಯು :) ಸುಂದರವಾಗಿದೆ.
M.D.subramanya Machikoppa said...
ಫೋಟೋಗಳು ಚನ್ನಾಗಿದ್ದವು ಬಾಲು ಅಣ್ಣ.
Badarinath Palavalli said...
೯ ಕಂತುಗಳೇ ಒಂದು ತೂಕವಾದರೆ ೧೦ನೇ ಕಂತೇ ಒಂದು ತೂಕ.

ಕಂಬದ ಮೇಲಿನ ತುದಿಯಲ್ಲಿ ಮಂಟಪ ಇದ್ದು ಅದರೊಳಗೆ ಒಂದು ನಂದಿ ವಿಗ್ರಹವು ಆ ಕಾಲದ ಅನನ್ಯ ಶಿಲ್ಪ ಕಲೆ ತಂತ್ರಗಾರಿಕೆಗೆ ಸಾಕ್ಷಿ.

ಶ್ರೀ ಮಧುಕೇಶ್ವರ ಸ್ವಾಮೀ ಬಲು ಮುದ್ದಾಗಿದ್ದಾರೆ.

ನಂದಿಯ ಕಣ್ಣಿನ ಶಿಲ್ಪ ಕಲೆ ಇಷ್ಟವಾಯಿತು.

ಹಲ ದೇವಾಲಯಗಳು ಮೊದಲು ವಿಷ್ಣುವಿನದಾಗಿದ್ದು ನಮ್ಟರ ಶಿವನದ್ದಾದ ಉದಾಹರಣೆಗಳಿವೆ.

ಪಂಪ ಮತ್ತು ಮಯೂರನ ಕುರುಹುಗಳು ಇನ್ನಾದರೂ ಹುಡುಕಬೇಕಿದೆ.

ಮುಂದುವರೆಯಲಿ...



mshebbar said...
Nice naration !
ಚಿನ್ಮಯ ಭಟ್ said...
ಇಷ್ಟ ಆಯ್ತು ಬಾಲಣ್ಣ...ಬನವಾಸಿಯ ಕಥೆ..
ನನ್ನ ಅಜ್ಜನಮನೆಯೂ ಕೂಡ ಬನವಾಸಿಯ ಹತ್ತಿರವೇ ಇದೆ..ಚಿಕ್ಕವರಿರುವಾಗ ಅದು ನಮ್ಮೆಲ್ಲರ ಪಾಲಿಗೆ ಶಿರಸಿಯನ್ನು ಬಿಟ್ಟರೆ ಕಂಡ ಸ್ವಲ್ಪ ದೊಡ್ಡ ಚಾಕಲೇಟುಗಳು ಸಿಗುವ ಜಾಗ..
ಹಾಗೇಯೇ ನಾನು ನನ್ನ ಜೀವನದ ಮೊದಲ ಪಾನೀಪುರಿಯನ್ನು ತಿಂದಿದ್ದು ಕೂಡಾ ಬನವಾಸಿಯ ತೇರಿನಲ್ಲಿಯೇ..ವರ್ಷಕ್ಕೊಮ್ಮೆ ನಡೆಯುವ ಈ ತೇರು ನೋಡಲು ತುಂಬಾ ಸುಂದರವಾಗಿರುತ್ತದೆ...ಹಾಗೇ ಅಲ್ಲಿಯ ಹೊರ ಆವರದ ಬಳಿ ಇರುವ ಒಂದು ವಿಗ್ರಹದ ಬಳಿ ನಿಂತು ಮೇಲೆ ನೋಡಿದರೆ(ಬಹುಶಃ ನಂದಿಯಿರಬೇಕು) ಗರ್ಭಗುಡಿಯ ದೇವರು(ಅಥವಾ ಗೋಪುರದ ದೇವತೆಯಿರಬೇಕು) ಕಾಣಿಸುತ್ತದೆಯಂತೆ ಎಂದು ಚಿಕ್ಕಂದಿನಲ್ಲಿ ಕೇಳಿದ ನೆನಪಷ್ಟೇ...ಸರಿಯಾಗಿ ನೆನಪಾಗುತ್ತ್ತಿಲ್ಲ....

ಇನ್ನು ಪ್ರಯಾಣಿಕರಿಗೆ ಬನವಾಸಿಗೆ ಶಿರಸಿಯಿಂದ ಕಾಲು ಘಂಟೆಗೊಂದು ಬಸ್ಸಿನ ಸೌಲಭ್ಯವಿದೆ.

ಹಾಂ,ಬಾಲಣ್ಣ ಅಲ್ಲೇ ಒಂದು ಮಣ್ಣಿನ ಮೂರ್ತಿಗಳ ಕಲಾ ಸಂಗ್ರಹಾಲಯ(ಮ್ಯುಸಿಯಂ ಗೆ ಈ ಶಬ್ಧ ಸರಿಯೋ ತಪ್ಪೋ ಗೊತ್ತಿಲ್ಲ)ವಿದೆ...ಸುಂದರವಾದ ಮಣ್ಣಿನ ಮೂರ್ತಿಗಳೂ ಅಲ್ಲಿವೆ..ಪುರಸೊತ್ತು ಇದ್ದಾಗ ಅಲ್ಲಿಗೂ ಹೋಗಿ ಬನ್ನಿ..ಜೊತೆಗೆ ಬರುವಾಗ ನಿಮ್ಮನ್ನು ಗುಡ್ನಾಪುರದ ವಿಶಾಲ ಕೆರೆಯೂ ಆಮತ್ರಿಸುತ್ತದೆ..ಅದನ್ನೂ ಒಮ್ಮೆ ನೋಡಿ,ಕೆರೆದಂಡೆಯಲ್ಲೆ ಇರುವ,ಜೋರು ಮಳೆಯಲ್ಲಿ ಮುಳುಗಿ ಹೋಗುವ ದೇವರನ್ನೂ ಒಮ್ಮೆ ನೋಡಿ ಚೆನಾಗಿದೆ...ಜೊತೆಗೆ ಅಲ್ಲಿ ಕ್ಯಾಮರಾ ಕಣ್ಣಿಗೂ ಕೈತುಂಬ ಕೆಲಸವಿದೆ!!!..
ಬನವಾಸಿಯ ಅಗ್ರಹಾರ, ಆ ಸೀಮೆಯಲ್ಲಿ ಹೆಚ್ಚು ಪುರೋಹಿತರಿರುವ ಸ್ಥಳವೂ,ಸಾಕಷ್ಟು ಪೂಜಾ ಕಾರ್ಯಗಳು ನಡೆಯುವ ಸ್ಥಳವೂ ಹೌದು....

ಮತ್ತೆ ಅಜ್ಜನಮನೆಯ ನೆನಪುಗಳನ್ನು ಕೆದಕಿದರಿ...ಖುಷಿಯಾಯ್ತು..

ಬಾಲಣ್ಣಾ...ನಡಿರಿ ಹೋಗುವಾ ಇವತ್ತು ಖಾನಾವಳಿಗೆ..ಆ ಊಟವನ್ನೂ ತೋರಿಸುತ್ತೇನೆ..
umesh desai said...
ನನ್ನ ನೆನಪು ತಾಜಾಆತು..ನಾವು ಹಿಂದೆ ಅಲ್ಲಿ ಹೋದಾಗ ಬೆಳಗಿನ ಆರೂವರೆ..ಪೂಜಾರಿ ಮೂಡ್ ನಲ್ಲಿದ್ರು..
ಅವರು ಅಂದಿದ್ದು ಅಲ್ಲಿನ ಕಲ್ಲಿನ ಮಂಟಪದಲ್ಲಿ ಅಲ್ಲಮಪ್ರಭು ಮತ್ತು ಶಿವ ಇಬ್ರೂ ನೃತ್ಯ ಮಾಡಿದ್ದರಂತೆ..
ನೀವು ಹೇಳಿದ ನಂದಿಯಬಗ್ಗೆಯೂ ಹೇಳಿದ್ರು..
ಗಿರೀಶ್.ಎಸ್ said...
ಅಂತು ಇಂತೂ ಶಿರಸಿ ಸುತ್ತ ಮುತ್ತ ಮತ್ತು ಬನವಾಸಿ ಎಲ್ಲವನ್ನೂ ಸವಿವರವಾಗಿ ತೋರಿಸಿಬಿಟ್ಟಿರಿ.... Totally it was good episodes...
ಮನಸು said...
ಹೇಗೋ ನಾನು ಕೂತಿರೋಕಡೆಯಿಂದನೇ ಬನವಾಸಿ ತೋರಿಸಿಬಿಟ್ಟಿರಿ.... ಸ್ಥಳ ಪರಿಚಯ ತುಂಬಾ ಚೆನ್ನಾಗಿ ಮಾಡಿದ್ದೀರಿ. ಬಹಳ ಧನ್ಯವಾದಗಳು ಸರ್
Anonymous said...
You actually make it seem so easy with your presentation but I find this matter to be actually something which I think I would never understand. It seems too complicated and very broad for me. I'm looking forward for your next post, I'll try to get the hang of it!
ganesh joshi said...
ಥ್ಯಾಂಕ್ಸ್ ಬಾಲು ಅಣ್ಣ.... ಮಧುಕೇಶ್ವರನ ದರ್ಶನ ಮಾಡಿದಂಗೆ ಆತು.....
Srikanth Manjunath said...
ಅಂಕುಶವಿಟ್ಟರು ಬನವಾಸಿಯನ್ನು ಮರೆಯೋಲ್ಲ ಅಂದರು ಆದಿ ಕವಿ ಪಂಪ..ಕಲ್ಲು ಕಲ್ಲನ್ನು ತಟ್ಟಿ ಎಬ್ಬಿಸಿ..ಕಥೆಯನ್ನು ಎಬ್ಬಿ ಹೇಳುತ್ತಾರೆ ನಮ್ಮ ಬಾಲೂ ಸರ್...ನಿಮ್ಮ ಇತಿಹಾಸ ಪ್ರಜ್ಞೆ ಪ್ರತಿಯೊಂದನ್ನು ಕೂಲಂಕುಷವಾಗಿ ನೋಡುವ ನಿಮ್ಮ ಕಣ್ಣುಗಳು...ಆಹಾ ನಾವೇ ಭಾಗ್ಯವಂತರು..ಪ್ರತಿಯೊಂದು ಚಿತ್ರವೂ ಒಂದು ಕಥೆ, ಇತಹಾಸವನ್ನು ಸಾರುತ್ತೆ..ತುಂಬಾ ಸುಂದರ ನಿರೂಪಣೆ ಮುಂದಿನ ಕಂತಿಗೆ ಕಾಯುವಂತೆ ಮಾಡುತ್ತದೆ ನಿಮ್ಮ ಬರವಣಿಗೆಯ ಮಾಯಾಲೋಕ..

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕೊಡಿಸಿ ಪ್ರಭು...:-)
shivu.k said...
ಬಾಲು ಸರ್,
ಬದರಿಸರ್ ಹೇಳಿದಂತೆ ೧೦ನೇ ಕಂತೇ ಒಂದು ತೂಕ. ಮದುಕೇಶ್ವರ ದೇವಾಲಯದ ಅನೇಕ ಸೂಕ್ಷ್ಮ ವಿಚಾರಗಳನ್ನು ಚಿತ್ರಗಳ ಸಹಿತ ತಿಳಿಸಿದ್ದೀರಿ..ಧನ್ಯವಾದಗಳು







manu said...
chennagide
Srikanth Manjunath said...
ಸಣ್ಣ ಕುಂಡದಲ್ಲಿ ಜನಿಸಿದ ನದಿ.ಸಿಕ್ಕಲೆಲ್ಲ ಓಲಾಡಿ ಹರಿದು..ನಂತರ..ಮತ್ತೆ ಶಕ್ತಿ ತುಂಬಿಕೊಳ್ಳಲು ಕೊಳ್ಳದಲ್ಲಿ ನಿಂತು..ಸುತ್ತ ಮುತ್ತ ತನ್ನ ಒಡಲಿಗೆ ಸೇರುವ ಝರಿಗಳನ್ನ ನೋಡುತ್ತಾ ನಲಿಯುವಂತೆ...ಸಿರ್ಸಿಯ ಉದ್ದಗಲಕ್ಕೂ ಹರಿದು ಬಂದು ಮೆಲುಕು ಹಾಕಲು ನಿಮ್ಮ ಸೋದರತ್ತೆ ಮನೆಯ ಸುತ್ತ ಮುತ್ತಲಿನ ಪರಿಸರ ಪರಿಚಯಿಸುತ್ತಾ, ನಮಗೆ ತಿಳಿಯದ ಎಷ್ಟು ಪದಾರ್ಥಗಳ ಜೀವನ ಚಕ್ರದ ಪರಿಚಯ ಸುಂದರವಾಗಿದೆ..ಮಾರಿಕಾಂಬೆ ಹರಸಿ ನಮ್ಮನ್ನು ಒಳಗೆ ಕರೆಯುತ್ತಿದ್ದಾಳೆ..

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವದೆಯ ಮಧ್ಯೆ ಸಿಕ್ಕರೆ ಆಹಾ ಅದರ ಸೊಗಸೇ ಸೊಗಸು...
ಚಿನ್ಮಯ ಭಟ್ said...
ಆಹಾ ಶಿರಸಿಯ ತೋಟವನ್ನೂ ತೋರಿಸಿದಿರಿ..ಯಾಕೋ ಮನೆಯ ನೆನಪು ಕಾಡ್ತಾ ಇದೆ..
ಚಿತ್ರಗಳು ಮುದ ನೀಡಿದವು..

ಮುಂದಿನ ಪ್ರಯಾಣಕ್ಕೆ ಸಿದ್ಧರಾಗಿದ್ದೇವೆ ನಾವೂ ಕೂಡ..
ನಮಸ್ತೆ,...
M.D.subramanya Machikoppa said...
ಚನ್ನಾಗಿದೆ ಬಾಲು ಅಣ್ಣ .
Badarinath Palavalli said...
ಈ ಕಷಾಯದ ರುಚಿ ನನಗೆ ಹತ್ತಿಸಿದ್ದು, ಬ್ಲಾಗ್ ಲೋಕದ ಡಾ|| ರಾಜ್ಕುಮಾರ್ ಪ್ರಕಾಶ್ ಹೆಘಡೆ ದಂಪತಿಗಳು. ಒಳ್ಳೆಯ ಆರೋಗ್ಯದಾಯಕ ಕಷಾಯ ಮಾರೇಯ್ರೇ.

ತೋಟದ ಹೂ ಗೊಂಚಲಿನ ಬಣ್ಣಗಳ ಗ್ರಹಿಕೆ ನಿಮ್ಮ ಛಾಯಾಗ್ರಹಣದ ಪಳಗಿದ ಕೈನ ಸೂಚಕ.

ಈ ಮನೆ ನೋಡಿ, ತೀರ್ಥಹಳ್ಳಿ ಬಳಿ ನಾನು ಸಿನಿಮಾ ಶೂಟಿಂಗಿಗೆ ಹೋದಾಗ ಕಂಡ ಮನೆ ನೆನಪಾಯ್ತು.

ಕಾಳು ಮೆಣಸಿನ ಬಗ್ಗೆ ನನಗೆ ಒಳ್ಳೆಯ ಪರಿಚಯ.

ಮಾರಿಕಾಂಬ ದೇಗುಲದಿಂದ ಆರಂಭವಾಗುವ ಮುಂದಿನ ಕಂತು ಬೇಗ ಬರಲಿ ಎಂದು ಆಶಿಸುತ್ತೇವೆ.
Anonymous said...
ನಿಮ್ಮ ಫೋಟೋಗ್ರಫಿ ಬಗ್ಗೆ ಮಾತಿಲ್ಲ...ತಿರುಗಾಟದ ಸವಿಯನ್ನ ನಮಗೂ ಉಣಬಡಿಸಿದ್ದಕ್ಕೆ ಧನ್ಯವಾದಗಳು...ನಿಮ್ಮೆಲ್ಲ ಫೋಟೋಗಳನ್ನ್ ಎತ್ತಿಟ್ಟುಕೊಂಡಿದ್ದೇನೆ.....ಎಂಥದೇ ಹೇಳಿ ನಮ್ಮ ಮಲೆನಾಡ ಸೊಬಗೆ ಹಾಗೆ ಪ್ರತಿಯೊಬ್ಬರನ್ನ ತನ್ನತ್ತ ಆಕರ್ಷಿಸುತ್ತದೆ..ಮುಂದಿನ ತಿರುಗಾಟಕ್ಕೆ ಶುಭ ಹಾರೈಕೆಗಳು

ಗಣೇಶ್ ಕಾಡೂರ್ ಕೆ
umesh desai said...
waiting for more
bhagya bhat said...
olleya photography ,,,modadalli mareyaada soorya nachikondu kempagiruvudu ossum !! ,,,tumbane chenagi sirsiya adike thotavannu torisiddiri ,yaako mane nenpagta ide
vandana shigehalli said...
ಚೆನ್ನಾಗಿದೆ ..... ಇವತ್ತಿಗೂ ಅಲ್ಲೇ ಹುಟ್ಟಿ ಬೆಳೆದ ನನ್ನ ಪಾಲಿಗೆ ಗಂಗಾವನ ಒಂದು "?" ಆಗಿಯೇ ಉಳಿದಿದೆ .... ಯಾಕೊ ಗೊತ್ತಿಲ್ಲ ಇ ಬಾರಿ ಊರಿಗೆ ಹೋದಾಗ ಹೋಗಿಯೇ ಬರುತ್ತೇನೆ ....
ಫೋಟೋ ಸುಂದರ ವಾಗಿದೆ ... ಒಂದು ಬದಲಾವಣೆ ಮಾಡಲ ..... "ಹಣ್ಣು ಅಡಿಕೆ = ಗೋಟು " ಅಂತ ಬಳಕೆಯಲ್ಲಿದೆ .... "ಗೋಟು" ಇನ್ನು ಆಪ್ತ ಆಗ ಬಹುದೇನೂ ಅನ್ನಿಸಿತು ...
ಗಿರೀಶ್.ಎಸ್ said...
First 2 fotos are beautiful.... So our next visit to Marikmabe Temple?
shivu.k said...
ಬಾಲು ಸರ್,

ಅಪರೂಪಕ್ಕೆ ಗೆಳೆಯನ ಅಥವ ಸಂಭಂದಿಗಳ ಮನೆಗೆ ಹೋಗಿ ಮುವತ್ತು ವರ್ಷಗಳ ಅನುಭವವನ್ನು ಮಾತಾಡುವುದು ಅಂದರೆ ನಿಜಕ್ಕೂ ಅದರ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ. ಮನೆ ಮತ್ತು ಸುತ್ತ ಆಡಿಕೆ, ಮೆಣಸು ತೋಟ ಅವುಗಳ ಚಿತ್ರಗಳು ಮುದ ನೀಡಿದವು.







ಸಂಚಿಕೆ :-) 12


Srikanth Manjunath said...
ನಾ ನೋಡಿದ ಮಾರಿಕಾಂಬೆ ಸುಂದರ..ನೀವು ನುಡಿದು ತೋರಿಸಿದ ಮಾರಿಕಾಂಬೆ ಇನ್ನಷ್ಟು ಸುಂದರ ಅಮೋಘ...ದೇವಾಲಯದ ಇತಿಹಾಸ, ಚಿತ್ರಗಳು, ಅದರ ಇತಿಹಾಸ, ನೋಡಿದಷ್ಟು ಸೊಗಸು, ನಿಮ್ಮ ಬರಹಗಾರಿಕೆ ಎಂಥಹವರನ್ನು ಸೆಳೆಯುತ್ತದೆ. ಚಿತ್ರಗಳು ಅದಕ್ಕೆ ತಕ್ಕ ಶೀರ್ಷಿಕೆಗಳು, ಅದಕ್ಕೆ ತಕ್ಕ ಇತಿಹಾಸ ಎಲ್ಲವು ತಾಳಕ್ಕೆ ಮೇಳ ಸೇರಿದಂತೆ ಸುಲಲಿತವಾಗಿದೆ.

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಬರಲಿ ಬರಲಿ ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ..
shishir said...
ನಾನು ಮೂಲತಹ ಸಿರಸಿಯವನಾದರೂ ಶ್ರೀ ಮಾರಿಕಾಂಬ ದೇವಾಲಯದ ಬಗ್ಗೆ ಇಷ್ಟೊಂದು ಯೋಚನೆಮಾಡಿರಲಿಲ್ಲ :)
ಅದ್ಭುತವಾದ ನಿರೂಪಣೆ, very informative.. :)
umesh desai said...
good info revived my visit some time back
ಚಿನ್ಮಯ ಭಟ್ said...
ಬಾಲು ಸರ್,

ಶಿರಸಿಯ ಮಾರಿಕಾಂಬೆಯ ಕಥೆ ಹೀಗೆದೆಯಂತೆ..ನನಗೂ ಪೂರ್ತಿಯಾಗಿ ನೆನಪಿಲ್ಲ ,ತಪ್ಪಿದ್ದಲ್ಲಿ ಕ್ಷಮಿಸಿ..ನಮಗೆ ಪ್ರಾಥಮಿಕ ಶಾಲೆಯ ಅಕ್ಕೋರು(ಶಿಕ್ಷಕಿಗೆ ನಮ್ಮ ಕಡೆ ಹೇಳುವ ಹೆಸರು) ಹೇಳಿದ್ದು...

"ಮಾರಿಕಾಂಬೆಯು ಬ್ರಾಹ್ಮಣರ ಕನ್ಯೆಯಾಗಿರುತ್ತಾಳೆ..ಆಕೆಯನ್ನು ಒಬ್ಬ ಸುಳ್ಳು ಹೇಳಿ ತಾನು ಬ್ರಾಹ್ಮಣನೆಂದು ನಂಬಿಸಿ ಮದುವೆಯಾಗುತ್ತಾನೆ..ಮುಂದೆ ಮಕ್ಕಳಾಗುತ್ತವೆ..ಒಮ್ಮೆ ಹೀಗೆ ಮಕ್ಕಳು ಆಟವಾಡುತ್ತಾ ಇರುವಾಗ ಅವರು ಹಲಸಿನ ಎಲೆಯಲ್ಲಿ ಚಪ್ಪಲಿಯನ್ನು ಹೊಲಿಯುತ್ತಿರುವುದನ್ನು ಕಂಡು ಏನಿದು ಎಂದು ಮಕ್ಕಳನ್ನು ಕೇಳಲಾಗಿ ಅವು ಅಪ್ಪನನ್ನು ನೋಡಿ ಕಲಿತುದದಾಗಿ ತಿಳಿಯುತ್ತದೆ..ಇದರಿಂದ ತನ್ನ ಪತಿಯು ಚಮ್ಮಾರನೂ,ತನಗೆ ಸುಳ್ಳು ಹೇಳಿದ್ದಾನೆಂದೂ ತಿಳಿದ ಆ ಕನ್ಯೆ ಮಾರಮ್ಮ ನಾಗುತ್ತಾಳೆ..ಆ ಮೇಲೆ ಆತ ಎಮ್ಮೆಯ ರೂಪವನ್ನು ಧರಿಸಲು ಆಕೆ ಆ ಎಮ್ಮೆಯನ್ನು ಕೊಲ್ಲುತ್ತಾಳೆ"

ಇದು ನನಗೆ ನೆನಪಿರುವ ಮಟ್ಟಿಗಿನ ಕಥೆ...ಇಲ್ಲಿ ಯಾವುದೇ ಜಾತಿಯನ್ನು ಕೀಳೆಂದು ಹೇಳುವ ಉದ್ದೇಶ ಇಲ್ಲ..

ಮತ್ತೆ ಇನ್ನು ಜಾತ್ರೆಯ ಹಿಂದಿನ ದಿನ ನಾಡಿಗರ ಗಲ್ಲಿಗೆ ಅಮ್ಮನವರು ಬರುತ್ತಾರೆ..ಅಲ್ಲಿ ಬಳೆತೊಡಿಸುವ ಶಾಸ್ತ್ರ ನಡೆಯುತ್ತದೆ,ಹೋಳಿಗೆಯ ಊಟವೂ ಇರುತ್ತದೆ..ಆಮೇಲೆ ಮರುದಿನ ಗದ್ದುಗೆಯ ಮೇಲಿರುತ್ತಾರೆ ಅಮ್ಮನವರು..

ಹಾಂ ಇದೊಂದು ನಮ್ಮ ಕಡೆ ಪ್ರಚಲಿತವಿರುವ ಸಂಗತಿ...ಅಮ್ಮನವರನ್ನು ಜಾತಾ ಮಂಟಪದಿಂದ ಕೆಳಗಿಳಿಸುವಾಗ ಮಂಟಪಕ್ಕೆ ತಾನಾಗಿಯೇ ಬೆಂಕಿ ಬೀಳುತ್ತದಂತೆ...ಮತ್ತೆ ದೇವರ ಕಣ್ಣುಗಳಿಗೆ ಬಣ್ಣ ಬಳಿಯುವಾಗ ನೇರವಾಗಿ ಅದನ್ನು ನೋಡಿದರೆ ಕಣ್ಣು ಕುರುಡಾಗುವುದಂತೆ,ಅದಕ್ಕಾಗಿ ಅವರು ಕನ್ನಡಿಯನ್ನಿಟ್ಟುಕೊಂಡು ಬಳಿಯುತ್ತಾರಂತೆ.. ಹೀಗೆ ಸುಮಾರು ಕಥೆಗಳು ಚಾಲ್ತಿಯಲ್ಲಿವೆ..
ಶಿರಸಿಯ ಈ ಜಾತ್ರೆ ಕರ್ನಾಟಕ ಅತೀ ದೊಡ್ಡ ಜಾತ್ರೆಯಂತೆ..ಸುಮಾರು ೨ ಲಕ್ಷಕ್ಕೂ ಹೆಚ್ಚು ಜನ ಸೇರುವ ಈ ಜಾತ್ರೆ ಎರಡು ವರುಷಕ್ಕೊಮ್ಮೆ ನಡೆಯುತ್ತದೆ...

ಜೊತೆಗೆ ದಸರಾ,ದೀಪಾವಳಿಯಲ್ಲಿಯೂ ಸಹ ವಿಶೇಷ ಕಾರ್ಯಕ್ರಮಗಳಿರುತ್ತವೆ...

ಕೊನೆಗೊಂದು ಮಾತು..."ಜಾತ್ರೆಯ ದಿನ"ಗಳನ್ನು ನೆನಪಿಸಿದರಿ...ಅದನ್ನು ಹೇಳಲು ಜಾಗ ಸಾಲದು ಇಲ್ಲಿ...

ಲೇಖನ ಇಷ್ಟವಾಯ್ತು...ಬರೆಯುತ್ತಿರಿ...
ಖುಷಿಯಾಯ್ತು ಓದಿ...
M.D.subramanya Machikoppa said...
ಅನೇಕ ವಿಷಯ ಗೊತ್ತಾಯಿತು
Manjunatha Kollegala said...
ಸೊಗಸಾದ ನಿರೂಪಣೆ, ಸುಂದರವಾದ ಚಿತ್ರಗಳು. ಮಾಹಿತಿಯುಕ್ತ ಬರಹ
ಸುಮ said...
ನನ್ನ ಹುಟ್ಟೂರಿನ ಪಕ್ಕದ ತಾಲೂಕಾದರೂ ಶಿರಸಿಯ ಬಗ್ಗೆ ಇಷ್ಟೊಂದು ವಿಚಾರಗಳು ತಿಳಿದಿರಲಿಲ್ಲ. ಒಳ್ಳೆಯ ಲೇಖನ ಮಾಲಿಕೆ ಬಾಲು ಸರ್ :)
Badarinath Palavalli said...
ಪಯಣ ೧೨ ವಿವರಗಳ ಹೂರಣ.

ಕಾವಿ ಕಲೆಯ ಬಗ್ಗೆ ನನಗೆ ತಿಳಿದಂತಾಯ್ತು. ಈ ಪ್ರಕಾರವು ತುಸು ಗಂಜೀಫಾ ಪದ್ಧತಿಯನ್ನು ಹೋಲುತ್ತದೆ ಅಲ್ಲವೇ ಸಾರ್?

ನಿಮ್ಮ ಅನುಮತಿ ಇಲ್ಲದೆ ಕನ್ಯಕಾ ಪರಮೇಶ್ವರಿ ಚಿತ್ರವನ್ನು ಡೌನ್ ಲೋಡ್ ಮಾಡಿಟ್ಟುಕೊಂಡೆ.

ಗ್ರಾಮ ದೇವತೆಗಳು ಹೇಗೆ ಕಾಲಾನಂತರ ಮಾರಿಕಾಂಬೆಯಾಯಿತು ಅಲ್ಲವೇ ಸಾರ್?

ಪ್ರಾಣಿ ಬಲಿ ನಿಂತ ಕಥೆ ಮತ್ತು ತತ್ಸಂಬಂಧಿ ಚಿತ್ರವೂ ಮನಮುಟ್ಟುವಂತಿದೆ.

ಕೊಳಗೀ ಬೀಸ್ ಬರಹಕ್ಕಾಗಿ ಕಾಯುತ್ತೇವೆ.

shivu.k said...
ಬಾಲು ಸರ್,
ಸಿರಸಿಯ ದೇವಸ್ಥಾನದ ಕಾವಿಕಲೆ ವಿಚಾರ ಗೊತ್ತಿರಲಿಲ್ಲ. ನಾನು ಅವುಗಳ ಅನೇಕ ಚಿತ್ರಗಳನ್ನು ಕ್ಲಿಕ್ಕಿಸಿದ್ದರೂ ಕೊಂಕಣಿ ಜನಾಂಗದವರ ಕಾವಿಕಲೆ ಈಮಟ್ಟಕ್ಕೆ ಅನ್ನುವ ವಿಚಾರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ದಿನಕರ ಮೊಗೇರ said...
Sirsi itihaasa nimma baraha odi toLiyitu.....

bartaa iddeve nimma jote....
munde hogi sir...

Anonymous said...
OMG ! I simply found a error within your site! Check if your plugins is configured correctly!
hejje gurutu said...
ನಮ್ಮ ಜಿಲ್ಲೆಯನ್ನು ತುಂಬಾ ಸುಂದರವಾಗಿ ಪರಿಚಯಿಸುತ್ತಿರುವ ನಿಮಗೆ ಅಭಿನಂದನೆ.... :)







ಸಂಚಿಕೆ :-) 13


Banavasi Somashekhar. said...
ಕೊಳಗಿ ಬೀಸಿನಲ್ಲಿ ನನ್ನ ಅನೇಕ ಸ್ನೇಹಿತರಿದ್ದರು.ಅವರೆಲ್ಲ ಮರೆತು ಹೋಗಿದ್ದಾರೆ.ಎಲ್ಲೆಲ್ಲಿದ್ದಾರೋ.ಅವರೇ ನಮ್ಮನ್ನು ಗುರುತು ಹಿಡಿಯಬೇಕಷ್ಟೇ.ನಿಮ್ಮ ಕೊಳಗಿ ಬೀಸಿನ ಪ್ರಯಾಣದ ಸನ್ನೀವೇಷ ಸಚಿತ್ರವಾಗಿ ಮಾಹಿತಿಯುಕ್ತವಾಗಿ ಮೂಡಿ ಬಂದಿದೆ.
Srikanth Manjunath said...
ಮದುವೆ ಎನ್ನುವುದೇ ಒಂದು ದಿವ್ಯ ಅನುಭವ, ಅದರಲ್ಲೂ ಕರುನಾಡಿನ ಅನೇಕ ಕಡೆ ನಡೆಯುವ ಪದ್ಧತಿಗಳು ಒಂದಕ್ಕಿಂದು ಒಂದು ಭಿನ್ನ ವಿಭಿನ್ನ. ಈ ಮಾಡುವೆ ಸಡಗರ, ಅದರ ಸಿಂಗಾರ, ಸಿದ್ಧತೆಗಳು, ವಧು ಹಾಗೂ ವರನ ಭೇಟಿ, ಸಪ್ತಪದಿ, ಹೆಣ್ಣನ್ನು ಒಪ್ಪಿಸಿಕೊಳ್ಳುವ ಶಾಸ್ತ್ರ ಇವೆಲ್ಲ ಒಂದು ಚಂದೊಬದ್ದವಾಗಿ ಹೆಣೆದಿರುವ ಸಂಪ್ರಾದಾಯಗಳು . ಅದರ ಅರ್ಥ, ಸ್ವಾರಸ್ಯ ತಿಳಿದುಕೊಂಡರೆ ಎಷ್ಟು ಸಂಪ್ರದಾಯಬದ್ಧವಾಗಿದೆ ನಮ್ಮ ಪೂರ್ವಜರ ಸಂಸ್ಕೃತಿ ಎಂದು ಹೆಮ್ಮೆಯಾಗುತ್ತದೆ. ಅದನ್ನು ದೃಶ್ಯ ಕಾವ್ಯಮಯವಾಗಿ ನಿರೂಪಿಸಿರುವ ನಿಮ್ಮ ಲೇಖನದ ಶೈಲಿಗೆ ನನ್ನ ನಮನಗಳು. ಮುಂದಿನ ಪ್ರಕೃತಿಯ ಮಡಿಲಲ್ಲಿ ತೇಲಾಡುವ ಕಂತಿಗೆ ಕಾಯುತಿದ್ದೇನೆ.

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ ಬಂದು ವಾತಾಪಿ ಜೀರ್ಣೋಭವವಾದಮೇಲೆ ..ಮದುವೆ ಮನೆಯಿಂದ ಹವ್ಯಕರ ಸಂಪ್ರದಾಯದ ಊಟ ಎಲೆ ಮೇಲೆ ಕಾದಿತ್ತು ರಸಗವಳ...ಬನ್ನಿ ಸಾರ್ ನಾವು ಬರ್ತೇವೆ..
vandana shigehalli said...
ಕೊಳಗಿಬಿಸ್ ನೋಡಿ ಕುಶಿಯಾಯಿತು ....
೩ ವರ್ಷ ದ ಹಿಂದೆ ಇದೇ ಜಾಗದಲ್ಲಿ...
ನಾನು ಪ್ರವೀಣ್ ಮದುವೆ ಯಾದದ್ದು..
ಆಮೇಲೆ ಶಿರಸಿ ಗೆ ಹೋದಾಗೆಲ್ಲ ಹೋಗಿ ಬರೋಣ ಅಂದು ಕೊಂಡರು...
ಅಮ್ಮ ಅಪ್ಪ ಎಲ್ಲರ ಜೊತೆ ೨ ದಿನ ವಿದ್ದು ಹೊರಡು ವಾಗ ಸಮಯ ಹೋದದ್ದೇ ಗೊತ್ತಾಗದೆ ...
ಇನ್ನು ಹೋಗಲಾಗಲಿಲ್ಲ ............... thank u
ಗಿರೀಶ್.ಎಸ್ said...
ಆ ಭಾಗದ ಮದುವೆಯ ಸಂಪ್ರದಾಯದ ಬಗ್ಗೆ ಕೂಡ ತಿಳಿದ ಹಾಗಾಯಿತು ನಿಮ್ಮ ಈ ಲೇಖನದಿಂದ...

ಅಘನಾಶಿನಿ ಹೆಸರು ಕೇಳಿದರೆ ಎಷ್ಟು ಚೆನ್ನಾಗಿದೆ.....ಅದರ ಬಗ್ಗೆ ತಿಳಿಯಲು ಕುತೂಹಲ...
Badarinath Palavalli said...
ಕೊಳಗಿ ಬೀಸ್ ಹೆಸರೇ ವಿಶಿಷ್ಟವಾಗಿದೆ.

ಪ್ರವಾಸ ಕಥನದ ಜೊತೆಗೆ ಇನ್ನಿತರ ಬ್ಲಾಗಿಗರ ಪರಿಚಯ ಮಾಡಿಸಿದಿರಿ.

ಶ್ರೀ ಶ್ರೀಧರ ಸ್ವಾಮಿಜಿಯವವರು ನಮ್ಮ ಇಟ್ಟಿಗೆ ಸೀಮೆಂತು ಬ್ಲಾಗಿನ ಪ್ರಕಾಶ ಹೆಗಡೆಯವರ ಆರಾಧ್ಯ ದೈವ.

ಹವ್ಯಕ ಮದುವೆ ವೈಶಿಷ್ಟ್ಯಗಳು ಮನ ಸೆಳೆಯಿತು.

(ಬಾಯಲ್ಲಿ ಜೊಲ್ಲು ತುಂಬಿಕೊಂಡು) ಊಟದ ವಿವರ ಕೊಡ ಬಹುದಿತ್ತೇನೋಪ್ಪಾ...
ಚಿನ್ಮಯ ಭಟ್ said...
ಬಾಲು ಸರ್ ಕ್ಷಮಿಸಿ...ನಾನು ಕ್ಯಾಂಪಸ್ ಅದು ಇದರಲ್ಲಿ ಮುಳುಗಿ ಹೋಗಿದ್ದೆ....

ಕೊಳಗೀಬೀಸಿನ ದೇವರಿಗೆ ಮೊದಲು ಒಂದು ವಾರ ಅಹೋರಾತ್ರಿ ಭಜನೆ ನಡೆಯುತ್ತಿತ್ತಂತೆ..ಆ ಸಮಯದಲ್ಲಿ ದೇವರು ಅಲ್ಲಿಯೇ ಸಮೀಪದ ನೇರ್ಲಹದ್ದದ ಹತ್ತಿರದ ದೇವಸ್ಥಾನಕ್ಕೆ ಹೋಗುತ್ತಿತ್ತಂತೆ...ಇದೀಗ ಒಂದು ದಿನ ರಾತ್ರಿ ಪೂರ್ತಿ ಭಜನೆ ನಡೆಯುತ್ತದೆಯಂತೆ...ಆಷ್ಟೆ ಗೊತ್ತಾಗಿರದು...

ಲೇಖನ ಚೆನಾಗಿತ್ತು...ಬರೆಯುತ್ತಿರಿ..
ಚುಕ್ಕಿಚಿತ್ತಾರ said...
ಸಚಿತ್ರವಾಗಿ ಉತ್ತಮವಾಗಿ ವಿವರಿಸಿದ್ದೀರಿ..
Swarna said...
ಮದುವೆ ಊಟದ ಚಿತ್ರನೂ ಹಾಕಬಹುದಿತ್ತು ಸರ್ :)
ಕೊಳಗಿ ಬೀಸ್ ಹೆಸರೇ ಒಂಥರಾ peculiar ಆಗಿದೆ.
ಅಘನಾಶಿನಿ ನದಿಯನ್ನ ನೋಡಿಲ್ಲ ಆದ್ರೆ ಆ ಹೆಸರು ನಂಗೆ ತುಂಬಾ ಇಷ್ಟ.
ಕಾಯ್ತಿರ್ತೇವೆ
ಸ್ವರ್ಣಾ
Dr.Gurumurthy Hegde said...
ಬಾಲು ಸರ್
ಆ ದಿನ ನಿಮ್ಮ ನೋಡಿ ನನ್ನ ಇನ್ನೊಂದು ಅಣ್ಣನ ನೋಡಿದ ಹಾಗೆ ಆಯಿತು
ಪ್ರೀತಿಯ ಕರೆಗೆ ಓಗೊಟ್ಟು ನೀವು ಬಂದಿದ್ದು ನಮ್ಮ ಮನೆಯವರಿಗೆಲ್ಲ ಸಂತಸ ಆಯ್ತು ಆದರೆ
ಸಮಯದ ಅಭಾವದಿಂದ ನಿಮ್ಮ ಜೊತೆ ಹೆಚ್ಚು ಮಾತಾಡೋಕೆ ಆಗ್ಲಿಲ್ಲ, ಅದ್ಕೆ ಬೇಸರಾನು ಆಯ್ತು
ಸುಂದರವಾಗಿ ನಿಮ್ಮ ಅನುಭವಗಳ ಬುತ್ತಿ ಬಿಚ್ಚಿಡ್ತಾ ಇದಿರಾ
ಓದೋಕೆ ಲೇಟ್ ಆದ್ರೆ ಕ್ಷಮಿಸಿ
ಸುಂದರ ಬರಹ ಎಂದಿನಂತೆ







ಸಂಚಿಕೆ :-) 14


ದಿನಕರ ಮೊಗೇರ said...
Bhimana guddakke naanU hogidde...

aadare ee drashya NODiralilla...

thank you very much...

mundenu.....?
Srikanth Manjunath said...
ಮದುವೆ ಮನೆಯ ಪವಿತ್ರ ಅನುಬಂಧದ ಬೆಸುಗೆಯನ್ನು ತುಸು ಅನುಭವಿಸಿ ಮತ್ತೆ ಪ್ರಕೃತಿಯ ಮಾತೆಯ ಬಳಿ ಓದಿದ ಸಾಹಸದ ದಾರಿಯ ಚಿತ್ರಗಳು, ನಿರೂಪಣೆ ಸೊಗಸಾಗಿದೆ. ಎತ್ತರದ ಪ್ರದೇಶದಲ್ಲಿ ಪ್ರಕೃತಿ ಮಾತೆಯ ಮಡಿಲಲ್ಲಿ ಕಾಣುವ ದೃಶ್ಯ ವೈಭೋಗ ಅನುಭವಿಸಿದರೆ ಮಾತ್ರ ಸಿಗುವ ರಸಗವಳ. ನಿಮ್ಮ ಲೇಖನದಲ್ಲಿ ಚಿಕ್ಕ ಚಿಕ್ಕ ವಸ್ತುಗಳು ನಾಯಕನ ಪಟ್ಟ ಅಲಂಕರಿಸುವ ಸೋಗ್ಜಿಗ ಬಲು ಅಪರೂಪ. ಬಸ್ ಇರಬಹುದು, ಹಾದಿ ಇರಬಹುದು, ಶಾಲೆ ಎಂಬ ಕಾಲೇಜಿಗೆ ಹೋಗುವ ಮಕ್ಕಳಿರಬಹುದು, ಟ್ರಾಫಿಕ್ ಜಾಮ್, ಎಲ್ಲವು ನಾವು ದಿನ ನಿತ್ಯ ಕಾಣುವ ದೃಶ್ಯಗಳೇ..ಆದ್ರೆ ಅದನ್ನು ಲೆಕಹನದಲ್ಲಿ ಪ್ರಸ್ತುತ ಅನ್ನಿಸುವಂತೆ ಪೋಣಿಸುವ ಚಾತುರ್ಯಕ್ಕೆ ನನ್ನ ಸಲಾಂ...

ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ ಬಂದು ವಾತಾಪಿ ಜೀರ್ಣೋಭವವಾದಮೇಲೆ ..ಮದುವೆ ಮನೆಯಿಂದ ಹವ್ಯಕರ ಸಂಪ್ರದಾಯದ ಊಟ ಎಲೆ ಮೇಲೆ ಕಾದಿತ್ತು ರಸಗವಳ...ರಸಗವಳ ಹೊಡೆದ ಮೇಲೆ ನಡೆಯಿರಿ ಸರ್ ಮಾರಿಕಾಂಬೆ ಜಾತ್ರೆಯಲ್ಲಿ ತಿನ್ನುವ ಚುರುಮುರಿ....
ಗಿರೀಶ್.ಎಸ್ said...
so next sirsi jaatrege karkand hogtiddira nammanna antaaythu...
Badarinath Palavalli said...
ಮೊದಲು ಮನ ಸೆಳೆಯುವುದು ಅಘನಾಶಿಸಿ ಎಂಬ ಸುಂದರ ಹೆಸರು.

ಇಂತಹ ಹರ್ಷ ನಮಗೂ ಸಿಗಲಿ ಎಂದುಆಶೀರ್ವಾದ ಮಾಡಿ ಸಾರ್.

ಸವಾಲಿನ ಹಾದಿಯು ನನ್ನ ಹಳ್ಳಿಯ ದಿನ್ನೆ ನೆನಪಿಸಿತು.

ಹಸಿರು ಹೊದ್ದ ಗಿರಿ ಶಿಖರಗಳನ್ನು ನೋಡಿ ತುಸು ಹೊಟ್ಟೆ ಉರಿಯಿತು, ಯಾಕೆಂದರೆ ನಮ್ಮ ಬೆಂಗಳೂರಿನ ಹಸಿರೆಲ್ಲ ಈಗ ಕಾಂಕ್ರಿಟ್ ಮಯ!

"ಹಸಿರ ಪ್ರಕೃತಿಯ ಮಡಿಲಲ್ಲಿ ಅಘನಾಶಿನಿಯ ಪಯಣ ದರ್ಶನ" ಕ್ಯಾಪ್ಷನ್ ಇಷ್ಟವಾಯಿತು.

ರಸ್ತೆಯಲ್ಲಿ ತೆಗೆದ ಚಿತ್ರಗಳೂ ಚೆನ್ನಾಗಿವೆ.

ಮುಂದುವರೆಯಲಿ ಪಯಣ...







ಸಂಚಿಕೆ :-)  15





Srikanth Manjunath said...
"ಕಾಡು ನೋಡ ಹೋದೆ..ಕವಿತೆಯೊಡನೆ ಬಂದೆ.." ಇದು ಸಿ.ಬಿ.ಐ ಶಂಕರ್ ಚಿತ್ರದ ಒಂದು ಗೀತೆ...ಹಾಗೆಯೇ ಸಿರ್ಸಿ ನೋಡ ಹೋದೆ...ಸಿಕ್ಕಾಪಟ್ಟೆ ಖುಷಿಯಾಗಿ ಬಂದೆ...ಇದು ನಿಮ್ಮ ಸಿರ್ಸಿ ಪ್ರವಾಸದ ಲೇಖನಗಳು ನನ್ನ ಮನಸಲ್ಲಿ ತಂದ ಭಾವನೆಗಳು..ಮಹಾಭಾರತದಲ್ಲಿ ಇಲ್ಲದೆ ಇರುವುದು ಪ್ರಪಂಚದಲ್ಲಿ ಇಲ್ಲ ಎನ್ನುವ ಮಾತಿದೆ.ಹಾಗೆ ಈ ಸುಂದರ ಸಿರ್ಸಿ ಪ್ರವಾಸದಲ್ಲಿ ಭಕ್ತಿಭಾವದ ಸಿಂಚನ, ಪ್ರಕೃತಿಯ ಮಡಿಲಲ್ಲಿ ನರ್ತನ, ಇತಿಹಾಸದ ನೋಟ, ದೇವಿಯ ಚರಿತ್ರೆ ಇದಕ್ಕೆಲ್ಲ ಕಳಶವಿಟ್ಟಂತೆ ಈ ಮಾಲಿಕೆಯಲ್ಲಿ ಮಾರಿಕಾಂಬೆ ಜಾತ್ರೆಯ ಪರಿಚಯ, ಜನವಿದ್ದರೆ ಜಾತ್ರೆ...ರೋಗವಿದ್ದಾಗ ಮಾತ್ರೆ..ಎನ್ನುವ ಹಾಗೆ ಎಂತಹ ಸಂಭ್ರಮದ ಕ್ಷಣಗಳನ್ನು ಸೆರೆ ಹಿಡಿದಿದೆ ನಿಮ್ಮ ಮೂರನೇ ಕಣ್ಣು ಜಾತ್ರೆಯಲ್ಲಿ ನಾವು ಇದ್ದೇವೆ ಅನ್ನುವಷ್ಟು ನೈಜತೆಯಿಂದ ನಮ್ಮನ್ನು ಆವರಿಸಿಕೊಳ್ಳುತ್ತದೆ ನಿಮ್ಮ ಲೇಖನ...ಅಭಿನಂದನೆಗಳು.


ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ ಬಂದು ವಾತಾಪಿ ಜೀರ್ಣೋಭವವಾದಮೇಲೆ ..ಮದುವೆ ಮನೆಯಿಂದ ಹವ್ಯಕರ ಸಂಪ್ರದಾಯದ ಊಟ ಎಲೆ ಮೇಲೆ ಕಾದಿತ್ತು ರಸಗವಳ...ರಸಗವಳ ಹೊಡೆದ ಮೇಲೆ ನಡೆಯಿರಿ ಸರ್ ಮಾರಿಕಾಂಬೆ ಜಾತ್ರೆಯಲ್ಲಿ ತಿಂದ ಚುರುಮುರಿ ಬಲು ಸೊಗಸು...ಪಾಪ ನನ್ನ ಮಗಳು ಜಾತ್ರೆಯಲ್ಲಿ ಸಿಗುವ ಮುಖವಾಡ. ಗೊಂಬೆಗಳು..ಪೀ ಎಂದು ಕಿರುಚುವ ಪೀಪಿ ಬೇಕು ಅಂತ ಹೇಳಿದ್ದಳು ನೆಡೀರಿ ಸರ್ ಅದನ್ನು ಕೊಳ್ಳುವ...ಹಾಗೆಯೇ ನೇಣಿಗೆ ಹಾಕಿರುವ ಜಿಲೇಬಿಯನ್ನು ತಿಂದು, ಖಾನಾವಳಿಯ ಊಟ ಮಾಡಿ..ಸಿರ್ಸಿಗೆ ವಂದನೆ ಹೇಳುವ..
ಚಿನ್ಮಯ ಭಟ್ said...
ಬಾಲು ಸರ್...
ಶಿರಸಿಯ ಜಾತ್ರೆ...
ಹಮ್.ಮೊದಲಿಗೆ ನಿಮಗೆ ಧನ್ಯವಾದ ನನಗೊಂದಿಷ್ಟು ಶಿರಸಿಯ ಜಾತ್ರೆಯ ಚಿತ್ರಗಳನ್ನು ಕೊಟ್ಟಿದ್ದಕ್ಕೆ...ಇದನ್ನು ನನ್ನ ಗಣಕದಲ್ಲಿ ಜೋಪಾನವಾಗಿಟ್ಟುಕೊಳ್ಳುತ್ತೇನೆ..
ಇನ್ನು ಜಾತ್ರೆಯ ಬಗ್ಗೆ..
ಏನು ಹೇಳ್ಳಿ??? ಎಲ್ಲರೂ ಜಾತ್ರೆಯ ಬಗ್ಗೆ ಬರ್ದಿರ್ತಾರೆ.ನನದೇನೂ ವಿಶೇಷವಿಲ್ಲ,ಆದರೆ ನನ್ನ ಪಾಲಿಗೆ ಜಾತ್ರೆ ವಿಶೇಷ ಅಷ್ಟೇ...
ನಮ್ಮೆಲ್ಲರ ಪಾಲಿಗೆ ಜಾತ್ರೆ ಎಂದರೆ ಅದೊಂದು ವರ್ಡಕಪ್ಪಿನಂತೆ...ಮತ್ತೆ ಯಾವಾಗ ಬರುತ್ತೇವೋ ಎಂದು ಕಾಯುತ್ತಿರುತ್ತೇವೆ..
ಮೊದಲ ಬಾರಿಗೆ ನಾನು ಜಾತ್ರೆ ನೋಡಿದ್ದು ಬಹುಷಃ ಒಂದನೇ ತರಗತಿಯಲ್ಲ್ಲೇನೋ...ಆಗ ತಗೋಂಡಿದ್ದ ಕೆಂಪು ಪಲ್ಟಿಹೊಡೆಯುವ ಜೀಪು ಇನ್ನೂ ನೆನಪಿದೆ ನನಗೆ..ಆಮೇಲೆ ಹಂಗೇ ನಂತರದಲ್ಲಿ ಏಳು ಸೌಡಿನ ಗನ್ನು ಮೂರನೇ ತರಗತಿಗೆ,ಐದಕ್ಕೆ ರಿಮೋಟ್ ಕಾರು, ಏಳಕ್ಕೆ ಅದೇನೋ ಒಂದು ರೀತಿಯ ಗನ್ನು,ಒಂಬತ್ತಕ್ಕೆ ಗುಳ್ಳೆ ಬಿಡುವ ಆ ಅಂಟು ,.ಹಾಂ ಅದೇ ಮೊದಲು ನಾನು ದೋಣಿ ಹತ್ತಿದ್ದು...
ಅಲ್ಲಿಯತನಕ ನಮ್ಮ ಜಾತ್ರೆ ಸಂಜೆಯ ತನಕವಷ್ಟೇ ಸೀಮಿತ,ಆಮೇಲೆ ಅಪ್ಪನ ಮೊಪೆಡ್ ಹತ್ತಿ ಮುಂದೆಕೂತು ಮನೆಗೆ ಬರುತ್ತಿದ್ದುದಷ್ಟೇ...
ರಾತ್ರಿ ಹೊತ್ತು ಜಾತ್ರೆಯ ಪರಿಚಯವಾಗಿದ್ದು ಮೊದಲ ಪೀಯುಸಿಯಲ್ಲಿ...ಶಿರಸಿಯ ಆದರ್ಶ ನಗರದಿಂದ ದಿನಾ ಸಂಜೆ ೬ಕ್ಕೆ ಒಂದು ಗ್ವಾಲೆ(ಗುಂಪು) ಹುಡುಗರೊಂದಿಗೆ ಅವರಿವರಿಗೆ ಕಿಚಾಯಿಸಿಕೊಳ್ಳುತ್ತಾ ಹೊರಟರೆ ೭ಕ್ಕೆ ದೇವಿಕೆರೆ ಸೇರಿದರೆ ಅಲ್ಲಿಂದ ಸುಮ್ಮನೆ ನಿಂತರೆ ಸಾಕು, ಜನರೇ ನಮ್ಮನ್ನು ದೂಕಿಕೊಂಡು ಜಾತ್ರೆ ಚಪ್ಪರ ಮುಟ್ಟಿಸುತ್ತಾರೆ!!!!!
ಆ ರಾತ್ರಿ ಓಡಾಟ ಮಾತ್ರ ಮರೆಯಲಿಕ್ಕಾಗದು...
ಮುಂದೆ ಮೊದಲ ವರುಷದ ಇಂಜಿನಿಯರಿಂಗಿನಲ್ಲಿ ಇನ್ನಷ್ಟು ಹೊಸ ಸ್ನೇಹಿತರೊಂದಿಗೆ ಸುತ್ತಾಟ,ಹಳೆಯ ಪಿ.ಯು.ಸಿ ಗೆಳೆಯರ ಜೊತೆ ಕಿತ್ತಾಟ..ಹಿಂಗೇ ನಡೆದಿತ್ತು...
ಮೂರನೇ ವರುಷ ಬೆಂಗಳೂರಿಗೆ ವಿ.ಟಿ.ಯು ಸಾಂಸ್ಕೃತಿಕ ಉತ್ಸವಕ್ಕೆ ಹೋಗಿದ್ದರಿಂದ ಜಾತ್ರೆ ತಪ್ಪಿಸಿಕೊಂಡೆ..

ಇನ್ನು ಜಾತ್ರೆಗೆ ಒಂದಷ್ಟು ದಿನವಿರುವಾಗಲೇ ಉಳಿದ ದಿನದಲ್ಲಿ ತರಕಾರಿ ಮಾರುಕಟ್ಟೆಯಾಗಿರುವ ಮಾರಿ ಚಪ್ಪರದ ಟೆಂಡರ್ ಪ್ರಕ್ರಿಯೆ ಶುರುವಾಗುತ್ತದೆ..ಆಮೇಲೆ ಸ್ವಲ್ಪ ದಿನ ಇದ್ದಾಗ ಹಳೆ ಬಸ್ಸು ನಿಲ್ದಾಣವೂ ವಿಕಾಸಾಶ್ರಮ ಬಯಲಿಗೆ ಸ್ಥಳಾಂತರವಾಗುತ್ತದೆ...ಟೆಂಪೋಸ್ಟಾಂಡು ಕೂಡ ಖಾಲಿಯಾಗುತ್ತದೆ...ಮಳಿಗೆಗಳು ಬಂದು ಕೂರುತ್ತವೆ..

ಹಾಂ ಪರೀಕ್ಷೆಗೂ ಜಾತ್ರೆಗೂ ಅವಿನಾಭಾವ ಸಂಭಂದ..ಸಾಧಾರಣವಾಗಿ ಮಾರ್ಚಿನಲ್ಲೇ ಇವೆರಡೂ ಬರುವುದಲ್ಲಾ!!!


ಏನೋ ಗೊತ್ತಿಲ್ಲ,ನನಗೆ
ಗೊತ್ತಿಲ್ಲದಂತೆ ಕೈಬೆರಳು ಇದನ್ನೆಲ್ಲಾ ಬರೆಳಚ್ಚಿಸಿದೆ...
ಬರೆಯುತ್ತಿರಿ ನಮಸ್ತೆ ಅಷ್ಟೇ...
ಮನಸು said...
ನಮ್ಮನ್ನು ಜಾತ್ರೆಗೆ ಕರೆದುಕೊಂಡು ಹೋಗಿದ್ದೀರಲ್ಲಾ ಸರ್. ಧನ್ಯವಾದಗಳು, ಶಿರಸಿ ಜಾತ್ರೆ ಬಹಳಷ್ಟು ಹೆಸರು ಮಾಡಿದೆ
Harihar Bhat said...
ಬಾಲು ರವರೆ ನೀವು ಸಂಜೆ 4 ರ ವರೆಗಸ್ಟೇ ಇದ್ರಿ. ಆಮೇಲೆ ನೀವು ಇದ್ದು ಜಾತ್ರೆಯ ಮಜಾ ನೋಡಬೇಕಿತ್ತು. ರವಿ ಮನೆ ಸೇರಿದ ಮೇಲೆ ಜಾತ್ರೆಗೆ ರಂಗೆeರುವದು. ನಾಟಕ ಕಂಪನಿಗಳು, ಯಕ್ಷಗಾನ ಡೆeರೆಗಳು ಎಲ್ಲ ಸುತ್ತಬೇಕಿತ್ತು. ರಾತ್ರೆಯಾದೊಡನೆ , ಅದೂ ಹನ್ನೊಂದರ ಮೇಲೆ ಸಭ್ಯರೆಲ್ಲ, ಮನೆಸೇರಿದ ಮೇಲೆ , ಜಾತ್ರೆಯಲ್ಲಿ ವಿಶೇಷಗಳೂ ನಡೆಯುತ್ತವೆ. ಮಹಾರಾಷ್ಟ್ರದ ಲಾವಣಿಗಳಂತೆ ಲಂಗ ದಾವಣಿಗಳು ಕುಣಿಯುತ್ತವೆ.

ಏನೇ ಇರಲಿ , ಸಿರ್ಸಿ ಜಾತ್ರೆಗೆ ಅದರದೇ ಆದ ಮಹತ್ವವಿದೆ. ಆಸ್ತಿಕರ ಮನೋಭಾವನೆಗೆ ಚ್ಯುತಿ ಬಾರದಂತೆ ದಶಕಗಳ ಆಚರಣೆಯ ಇತಿಹಾಸ ಈ ದೇವಿ ಜಾತ್ರೆಗಿದೆ.

ಹರಿಹರ ಭಟ್, ಬೆಂಗಳೂರು.
November 12 , 2012.







                                                                                                          








ಪ್ರೀತಿಯ ಮಾತುಗಳಿಗೆ ಕೃತಜ್ಞ .ಅನಿಸಿಕೆ ತಿಳಿಸಿದ ಎಲ್ಲರಿಗೂ  ಪ್ರೀತಿಯ ಶುಭ ಕಾಮನೆಗಳು.