Thursday, October 28, 2010

ಕನ್ನಡ ಹಬ್ಬ ಬಂದಿದೆ ನೋಡಾ !! ಕನ್ನಡ ಮನವು ನಲಿದು ಹಾಡಿದೆ ಹಾಡ !!!

ಕನ್ನಡ ನಾಡಿನ ಪ್ರತೀ ಕಾನನದಲ್ಲಿಯೂ ಪ್ರಕೃತಿ ಕನ್ನಡ ಕಂಪನ್ನು ಬೀರಿ ವನ ಸಿರಿಯ ಮೂಲೆಮೂಲೆಗಳಲ್ಲಿ ವನ್ಯ ಜೀವಿಗಳು ನಲಿದಿರಲು , ಕಣ್ಣಾರೆ ಕಂಡ ನನ್ನ ಜೀವನ ಪಾವನ ವಾಗಿದೆ."ಉದಯವಾಗಲಿ  ನಮ್ಮ  ಚೆಲುವಕನ್ನಡ ನಾಡು"  ಎಂದು  ಪಿ .ಕಾಳಿಂಗರಾಯರು  ಹಾಡಿದ  ಗೀತೆ  ಚಿಕ್ಕಂದಿನಲ್ಲಿ ಕೇಳುತ್ತಾ ಬೆಳೆದವನು  ನಾನು. ಕನ್ನಡದ ಕವಿಗಳ ಕವಿತೆಗಳು , ಕನ್ನಡ ಲೇಖಕರ ಕಥೆಗಳು  ,ಕನ್ನಡ ಸಂಸ್ಕೃತಿ , ಕನ್ನಡ ಭಾಷೆ ,ಕನ್ನಡ ಮಣ್ಣಿನ ಅನ್ನ, ನೀರು , ಕನ್ನಡ ನಾಡಿನ ಕಾನನ   ಕನ್ನಡ ಮಾತು ಇವೆಲ್ಲವೂ ನನ್ನನ್ನುಹೆಮ್ಮೆಯ  ಕನ್ನಡಿಗನನ್ನಾಗಿ ಮಾಡಿವೆ .ಇದು ನನ್ನ ಹೃದಯದಿಂದ ಬಂದ ಮಾತುಗಳು.ಕನ್ನಡ ಹಬ್ಬ ಬರುತ್ತದೆ  ಹೋಗುತ್ತದೆ  ಕನ್ನಡ ಮಾತಿಗೆ ನಲಿವ ನನ್ನ  ನಾಲಿಗೆ ನಿರಂತರ ಉಳಿಯುತ್ತದೆ.ನನ್ನ ಕನಸಿನಲ್ಲಿ ರಂಗನ್ನು ನೀಡುವ ಭಾಷೆ ನನ್ನ ಮುದ್ದಿನ ಕನ್ನಡ ಭಾಷೆ.ನನ್ನ ತಾಯಿ ನನಗೆ  ಕಲಿಸಿದ ಮಾತೃ ಹೃದಯದ  ಭಾಷೆ ಕನ್ನಡ ಭಾಷೆ, ಇವುಗಳಿಂದ ನಾನು ಕನ್ನಡಿಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ಎಂದು ಒಂದು ಸಮಾರಂಭದಲ್ಲಿ  ಕನ್ನಡ ದಲ್ಲಿ ಭಾಷಣ ಬಿಗಿಯುತ್ತಿದ್ದೆ ನೆರೆದಿದ್ದ  ಜೋರಾಗಿ ಚಪ್ಪಾಳೆ  ಹೊಡೆಯುತ್ತಿದ್ದರು . ಇನ್ನೇನು ನನಗೆ ಸನ್ಮಾನ ವಾಗಬೇಕು ಎನ್ನುವ ಸಮಯದಲ್ಲಿ ನನ್ನ ಪತ್ನಿ ರೀ ಎದ್ದೇಳಿ ಒಳ್ಳೆ ಮದ್ಯಾಹ್ನ ಮಲಗಿದ್ದೀರಲ್ಲಾ ಊಟ ಮಾಡಲ್ವಾ !! ಅಂತ ಎಬ್ಬಿಸಿ ನನಗೆ ಕನಸಿನಲ್ಲಿ  ನಡೆಯುತ್ತಿದ್ದ ಸನ್ಮಾನಕ್ಕೂ ಕಲ್ಲು ಹಾಕಿದಳು.ಎಂತಹ ಒಳ್ಳೆಯ ಕನಸು ಸ್ವಾಮೀ ಎಲ್ಲಾ ಹಾಳು ಮಾಡಿಬಿಟ್ಟಳೂ ಅಂತಾ ಮನದಲ್ಲಿ ಹೆಂಡತಿಯನ್ನು ಶಪಿಸಿಕೊಂಡು ಕ್ಯಾಲೆಂಡರ್ ನೋಡಿದ್ರೆ ಇನ್ನು ನಾಲ್ಕೇ ದಿನಕ್ಕೆ ನಮ್ಮ ನೆಚ್ಚಿನ ಕನ್ನಡ ಹಬ್ಬ ಬರುತ್ತಿದೆ. ಇದು ಎಷ್ಟನೆಯ ರಾಜ್ಯೋತ್ಸವ ಎಂಬ ಬಗ್ಗೆ ತಲೆಕೆಡಿಸಿಕೊಂಡು ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸಲು ಕೆಲವು  ಜನ ಒದ್ದಾಡುತ್ತಿದ್ದಾರೆ . ಅರೆ ಇದೇನು ??ಕನ್ನಡ  ರಾಜ್ಯೋತ್ಸವ ಬಂದೆ ಬಿಟ್ಟಿದೆ ಹೌದು ರೀ ಮರ್ತೆ ಬಿಟ್ಟಿದ್ದೆ ನಾನು!!! ನನ್ನ ಬ್ಲಾಗಿನ ಮಿತ್ರರಿಗೆ ಕನ್ನಡ ಹಬ್ಬದ ಶುಭಾಶಯಗಳನ್ನು ಈ ಕೆಳಗಿನ ನನ್ನ ಇಷ್ಟದ ವೀಡಿಯೊ ಮೂಲಕ ಅರ್ಪಿಸುತ್ತಿದ್ದೇನೆ. ಬ್ಲಾಗ್ ಮಿತ್ರರೇ ದಯಮಾಡಿ ಸ್ವೀಕರಿಸಿ . ತನು ಕನ್ನಡ ಮನ ಕನ್ನಡ ವಾಗಿ ಕನ್ನಡ ಕೀರ್ತಿ ಪತಾಕೆ ಹಾರಿಸಿ ಅನುದಿನವೂ ಕನ್ನಡಿಗರಾಗಿ ಬಾಳೋಣ. ಕನ್ನಡ ತಾಯಿಯ ಮಡಿಲಲ್ಲಿ ಎಷ್ಟೊಂದು ಪಡೆದ ನಾವು ಕನ್ನಡ ಭಾಷೆ ಮರೆತು , ನೆಲ ಮರೆತು ನಮ್ಮ ನೆಲದ ಸಂಸ್ಕೃತಿಯನ್ನು ಹಾಳು ಮಾಡುವುದು  ಉತ್ತಮ ಕನ್ನಡಿಗರ ಲಕ್ಷಣವಲ್ಲ.ಕನ್ನಡ ಸವಿ  ಭಾಷೆ ಮನದಲ್ಲಿ ಎಂದೆಂದೂ ಉಳಿಯಲಿ ನಮ್ಮ ನಾಲಿಗೆ ಮೇಲೆ ನಲಿಯಲಿ. ಇಲ್ಲಿ ಪ್ರಕಟಿಸಿರುವ ವೀಡಿಯೊ ಗಳು ನನಗೆ ತುಂಬಾ ಇಷ್ಟವಾದವು ಬಹುಷಃ ನಿಮಗೂ ಇಷ್ಟವಾಗುತ್ತವೆ. ಹೆಚ್ಚು ಪ್ರಚಾರವಿಲ್ಲದ ಈ ವೀಡಿಯೊ ಗಳು ಬಹಳ ಸುಂದರವಾಗಿ ಚಿತ್ರೀಕರಣ ಗೊಂಡು ಕರ್ನಾಟಕದ ಸೌಂದರ್ಯವನ್ನು ಉಣಬಡಿಸಿವೆ ಬನ್ನಿ ನೋಡಿ ನಲಿದು ಕನ್ನಡ ಹಬ್ಬದ ಸಂತಸ ಸವಿದು ನಿಜದ ಕನ್ನಡಿಗರಾಗೋಣ ಬನ್ನಿ.ಕನ್ನಡ ತಾಯಿಗೆ ನಮಿಸುತ್ತಾ ತಮ್ಮೆಲ್ಲರಿಗೂ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಗಳನ್ನು ಅರ್ಪಿಸಲು ಸಂತಸ ಪಡುತ್ತೇನೆ.ನಿಮ್ಮೆಲ್ಲರಿಗೂ ಕನ್ನಡ ಹಬ್ಬದ ಶುಭಾಶಯಗಳು.                                                                                                                                          

Friday, October 22, 2010

ಘಜಲ್ ಸಾಮ್ರಾಜ್ಯದ ಮಾಂತ್ರಿಕ ಹಾಡುಗಾರ ಜಗಜಿತ್ ಸಿಂಗ್ !!! ಮಾಂತ್ರಿಕ ಘಜಲ್ ಹಾಡುಗಾರ.!!! ಘಜಲ್ ಕೇಳಿದರೆ ಎಲ್ಲರ ಮನದಲ್ಲಿ ಕವಿತೆ ಅರಳುವುದು!!!

      ಕೆಲವೊಮ್ಮೆ ಪಟ್ಟಣದ ಜಂಜಾಟದಲ್ಲಿ  ಮನಸ್ಸು ರಾಡಿಯಾಗಿ ಏಕಾಂತ ಬಯಸಿದಾಗ  ಎಲ್ಲಾದರೂ ಹೊರಗೆ ಒಬ್ಬನೇ ಹೋಗಿ  ಶ್ರೀ ರಂಗ ಪಟ್ಟಣ ದ ಹಳ್ಳಿ ಗಳ ಕಾವೇರಿ ತೀರದಲ್ಲಿ ಕುಳಿತು ಕೊಳ್ಳುವುದು ನನ್ನ ವಾಡಿಕೆ. ತಿನ್ನೋಕೆ ಒಂದಷ್ಟು ತಿಂಡಿ,  ಓದೋಕೆ ಪುಸ್ತಕ,ನೆಚ್ಚಿನ ಕ್ಯಾಮರ , ಹಾಗೆ ನನ್ನ ಮೊಬೈಲ್ ನಲ್ಲಿ  ತುಂಬಿಕೊಂಡಿರುವ ಹಾಡುಗಳು. ಜನರಿಲ್ಲದ ತಾಣದಲ್ಲಿ ಕುಳಿತು ಮನದಣಿಯ ಓದಿ ,ಇಷ್ಟಾ ಬಂದ  ಚಿತ್ರಗಳನ್ನುಕ್ಲಿಕ್ಕಿಸಿ ,   ಹಾಡು ಕೇಳುತ್ತಾ ಮೈಮರೆತು ಬಿಡುತ್ತೇನೆ.ಜೀವನಕ್ಕೆ ಹೊಸ ಹುರುಪು ತುಂಬಿ ಕೊಳ್ಳುತ್ತೇನೆ.ನನ್ನ ಮೊಬೈಲ್ ನಲ್ಲಿ ಪದೇ ಪದೇ  ಕೇಳುವ ಹಾಡು ಜಗಜಿತ್ ಸಿಂಗ್ ನ ಘಜಲ್ ಗಳು,ಕನ್ನಡ ಭಾವಗೀತೆಗಳು,ಹಳೆಯ ಕನ್ನಡ, ಹಿಂದಿ, ಇಂಗ್ಲೀಶ್ ಹಾಡುಗಳು.ಆದರೂ ಜಗಜೀತ್ ಸಿಂಗ್ ನ ಘಜಲ್ ನಲ್ಲಿ ಏನೋ ಸೆಳೆತವಿರುತ್ತದೆ.ಕೆಲವೊಮ್ಮೆ ಅವರ ಘಜಲ್  ಕೇಳಿ ನಾನಿರುವ ಪರಿಸರಕ್ಕೆ ತಕ್ಕ ಹಾಗೆ  ಹಲವಾರು ಕವಿತೆಗಳು ಮನದಲ್ಲಿ ಉಕ್ಕಿಬರಲು ಕಾರಣ ವಾಗಿರುತ್ತದೆ.ಮಾಂತ್ರಿಕ  ಸ್ವರದ ಹಾಡುಗಾರ ಜಗಜಿತ್ ಸಿಂಗ್ ನನ್ನ ಏಕಾಂತ ದಲ್ಲಿ ಹಾಡಿ  ಮನಸನ್ನು ಪ್ರಸನ್ನ ಗೊಳಿಸಿದ್ದಾನೆ.ನೆಚ್ಚಿನ ಘಜಲ್ ಗಳ ವಿಡಿಯೋ ನಿಮಗಾಗಿ ಹಾಕಿದ್ದೇನೆ .ಹಿತವಾದ ವಾತಾವರಣ ನಿರ್ಜನ ಪ್ರದೇಶ ಕಾವೇರಿಯ ಜುಳು ಜುಳು ಹರಿವು,ಪಕ್ಷಿಗಳ ಕಲರವ,ಮನಸ್ಸಿಗೆ ಹಿತವಾಗುವ ಜಗಜಿತ್ ಸಿಂಗ್ ಹಾಡುಗಳು !!! ಆ ಕ್ಷಣ ನನಗೆ ಎಷ್ಟು ಕೋಟಿ ಕೊಟ್ಟರೂ ಪಟ್ಟಣದಲ್ಲಿ ಸಿಗಲಾರದು .!! ಆ ಪರಿಸರದಲ್ಲಿ ಮುಳುಗಿ ಹೊಸ ಮನುಷ್ಯನಾಗಿ  ಹೊಸ ಚಿತನ್ಯ ದೊಂದಿಗೆ ಪಟ್ಟಣದ ಜೀವನದ ಜಂಜಾಟ ಎದುರಿಸಲು ಬಂದಿರುತ್ತೇನೆ.  ಬನ್ನಿ    ಜಗಜಿತ್ ಸಿಂಗ್ ಬಗ್ಗೆ ಅಂತರ್ಜಾಲದಲ್ಲಿ ಸಿಕ್ಕ ಅವರ ಮಾಹಿತಿ ನಿಮಗೆ ನೀಡಿದ್ದೇನೆ ಬನ್ನಿ ಅವರ ಬಗ್ಗೆ ತಿಳಿಯೋಣ.Jagjit Singh (Punjabi: ਜਗਜੀਤ ਸਿੰਘ, Hindi: जगजीत सिंह, Urdu: جگجیت سنگھ) (born February 8, 1941) is a prominent Indian Ghazal singer, composer, music director, activist and entrepreneur. Popularly known as "The Ghazal King" he gained acclaim together with his wife, another renowned Indian Ghazal singer Chitra Singh, in 1970's and 80's, as the first ever successful duo (husband-wife) act in the history of recorded Indian music. Together, they are considered to be the pioneers of modern Ghazal singing and regarded as most successful recording artistes outside the realm of Indian film music. He has sung in Punjabi, Hindi, Urdu, Bengali, Gujarati, Sindhi and Nepali languages. He was awarded India's third highest civilian honour, the Padma Bhushan, in 2003.

Widely credited for the revival and popularity of Ghazal, an Indian classical art form, through his music in landmark films such as Prem Geet (1981), Arth and Saath Saath (1982), and TV serials Mirza Ghalib (1988) and Kahkashan (1991), Jagjit Singh is considered to be the most successful ghazal singer and composer of all time, in terms of both critical acclaim and commercial success. With a career spanning over four decades and a repertoire comprising 50 albums the range and breadth of his work has been regarded as genre-defining. He is the only composer and singer to have composed and recorded songs written by an incumbent Prime Minister - Atal Behari Vajpayee, also a critically acclaimed poet - in two albums, Nayi Disha (1999) and Samvedna (2002). India's current Prime Minister Manmohan Singh and his wife Gursharan Kaur are known to be his avid admirers.         

On May 10, 2007, in a milestone joint session held in the historic Central Hall of India's Parliament (Sansad Bhawan), Jagjit Singh rendered the last Moghul Emperor, Bahadur Shah Zafar's famous ghazal "Lagta nahin hai dil mera" to commemorate the 150th anniversary of India's First War of Independence (1857). President A P J Abdul Kalam, Prime Minister Manmohan Singh, Vice-President Bhairon Singh Shekhawat, Lok Sabha Speaker Somnath Chatterjee, Congress President Sonia Gandhi and dignitaries including former Prime Ministers, Members of Parliament, Foreign Ambassadors and High Commissioners were in attendance.

Jagjit Singh is the first Indian composer, and together with his wife Chitra Singh the first recording artist in the history of Indian music to use digital multi-track recording for their (India's first digitally recorded) album, Beyond Time (1987). He is regarded as one of India's most influential artistes. Together with sitar legend Ravi Shankar and other leading figures of Indian classical music and literature, Singh has voiced his concerns over politicisation of arts and culture in India and lack of support experienced by the practitioners of India's traditional art forms, particularly folk artists and musicians. He has lent active support to several philanthropic endeavors such as the library at St. Mary's School, Mumbai, Bombay Hospital, CRY, Save the Children and ALMA.

ಗುದ್ದಿಗೊಂದು ಸುದ್ದಿ: ಮೈಸೂರಿನ ಚಿತ್ರ ಸಂತೆ ಯಲ್ಲಿ ಬಣ್ಣಗಳ ಕಲರವ !!!!

ಗುದ್ದಿಗೊಂದು ಸುದ್ದಿ: ಮೈಸೂರಿನ ಚಿತ್ರ ಸಂತೆ ಯಲ್ಲಿ ಬಣ್ಣಗಳ ಕಲರವ !!!!: " ಕಳೆದ ಭಾನುವಾರ ದಿನಾಂಕ 03-10-2010 ರಂದು ಮೈಸೂರಿನಲ್ಲಿ ಚಿತ್ರಸಂತೆ ಏರ್ಪಡಿಸಲಾಗಿತ್ತು.ಅದ್ಭತ ಕಲಾವಿದರ ಸಂಗಮ ,ಅದ್ಭುತ ಕಲಾಕೃತಿಗಳ ಅನಾವರಣ ..."

Sunday, October 17, 2010

ಅಮ್ಮ ನಿನ್ನ್ನ ತೋಳಿನಲ್ಲಿ ಕಂದಾ ನಾನು !! ಎಂದಿತ್ತು ಈ ಮುದ್ದಿನ ಕೂಸು "ಅನಘ "!!!

ಹಾಯ್ !! ನಾನು ಅನಘ !!!

ಅಲ್ಲ ಮೈಸೂರಿನಲ್ಲಿ ಇದ್ದುಕೊಂಡು ದಸರಾ ಬಗ್ಗೆ ಬರೆಯಲ್ವಾ !! ಅಂತಾ ಕೆಲವು ಗೆಳೆಯರ ಹಕ್ಕೊತ್ತಾಯ . ಅದಕ್ಕೆ ಅವ್ರ ಹತ್ತಿರ ಹೇಳ್ದೆ  ಅಲ್ಲಾ ಕಣ್ರಯ್ಯ ಯಾವ ಪೇಪರ್ ತೆಗೆದರೂ , ಟೀ.ವಿ  ಚಾನಲ್ ಹಾಕಿದರೂ ದಸರಾ ದಸರಾ ಅಂಥಾ ವಿಶೇಷ  ಮಾಹಿತಿ ಬರುತ್ತಿರುವಾಗ ಮದ್ಯದಲ್ಲಿ ನನ್ನ ತುತ್ತೂರಿಲೂ ದಸರಾ ಅಂದ್ರೆ  ಇಂದೇ ಕೊನೆ ಆಟ ನಾಳೆ ಅದೇ ಆಟ ಅನ್ನೋ ಹಾಗೆ ಓದುಗರಿಗೆ ಬೇಸರ ವಾಗುತ್ತೆ !! ಈಗ ಬೇಡ ಸುಮ್ಮನಿರು ಅಂತಾ ಅಂದೇ .ಹಾಗೆ ಮಾತಾಡ್ತಾ  ಲೋ ಕಳೆದವಾರ ಬೆಂಗಳೂರಿಗೆ ಹೋಗಿದ್ಯಲ್ಲ ಆ ಮಗೂ ಬಗ್ಗೆ  ಒಂದು ಸಾರಿ ಬರಿ, ಚಿತ್ರಗಳು ಚೆನ್ನಾಗಿವೆ ಅಂದಾ ಗೆಳೆಯ.ಸರಿ ಬಿಡಪ್ಪಾ ಸಧ್ಯಕ್ಕೆ ನನ್ನ ತಲೇನೂ ಖಾಲಿ ಅದನ್ನೇ ಬರೀತೀನಿ ಅಂತಾ ಶುರುಮಾಡಿದೆ . ಹೌದು ನಮ್ಮ ಸುತ್ತ ಮುತ್ತ ಹಲವು ಮಕ್ಕಳು ಕಾಣ ಸಿಗುತ್ತವೆ . ಒಂದೊಂದು ಮಗುವಿಗೂ ಅದರದೇ ಆದ ವಿಶೇಷ ಗುಣಗಳಿರುತ್ತದೆ.ಆದರೆ ನಾವು ಮಾತ್ರ ಅದನ್ನು ಗಮನಿಸಿರುವುದಿಲ್ಲ.ಕೆಲವು ಮಕ್ಕಳು ಚಿನಕುರುಳಿ ಯಂತೆ ಪಟ ಪಟ ಅಂತಾ ಮಾತಾಡಿನಲಿದರೆ., ಇನ್ನು ಕೆಲವು ಮಕ್ಕಳು ಸೈಲೆಂಟಾಗಿ ತಮ್ಮ ಕಣ್ಣು ಗಳಲ್ಲೇ ಮಾತಾಡಿ ಅಚ್ಚರಿ ಮೂಡಿಸುತ್ತವೆ. ಇಂತಹ ಒಂದು ವಿಶೇಷದ ಮಗು ನನಗೆ ಕಳೆದವಾರ ಬೆಂಗಳೂರಿನಲ್ಲಿ ಸಿಕ್ಕಿತು
ಈ ಪೌಡರು ನಂಗಿಷ್ಟ !!

.ಅವಳೇ ನಮ್ಮ ಮುದ್ದಿನ ಕೂಸು ಅನಘ .ಈ ಮುದ್ದಿನ ಕಂದ ಕಣ್ಣಿನಲ್ಲೇ ಮಾತನಾಡಿ ಎಲ್ಲರ ಮನ ಗೆಲ್ಲುತ್ತದೆ .  ಮನೆಯ ಎಲ್ಲರ ಮುದ್ದಿನ ಕೂಸು . ತನ್ನ ತಾಯಿಯೊಡನೆ  ಸೈಲೆಂಟಾಗಿ  ಭಾವನೆಗಳ ಸಂಭಾಷಣೆ ನಡೆಸಿದ ಕೆಲವು ಅಮೂಲ್ಯ ಕ್ಷಣಗಳು  . ನನ್ನ ಕ್ಯಾಮರ ದಲ್ಲಿ ಸೆರೆಸಿಕ್ಕಿದ್ದು ಹೀಗೆ .
ನಮ್ಮಮ್ಮ ನಂಗೆ ಲ್ಯಾಪ್ ಟಾಪ್ ಕೊಡಲ್ಲಾ ಗೊತ್ತ !!
ದೊಡ್ಡವರೆಲ್ಲಾ ಜಾಣರಲ್ಲಾ !!!
ಅಮ್ಮನಿಗೆ  ನಾನೇ ಗುಡ್ ಮಾರ್ನಿಂಗ್ ಹೇಳೋದು ಗೊತ್ತ !!
ಅಮ್ಮ ಏಳಲ್ವಾ  ನಿನ್ ಸಂಗಾ ಟೂ ಟೂ !!
ಅಮ್ಮ ಒಂದು ಉಮ್ಮ ಕೊಡ್ಲಾ ??
ನಮ್ಮಮ್ಮ  ಒಳ್ಳೆವ್ರೂ!!
ಬೇಡ ದೊಡ್ಡಪ್ಪಾ  ನಂಗೆ ನಾಚ್ಕೆ ಆಗುತ್ತೆ !!!
ಅಮ್ಮ ಏತ ಏತ ಆಟ ಆಡಿಸ್ತಾರೆ ಗೊತ್ತ !!!!!
"ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು" ಅಂತಾ ಲಾಲಿ ಹಾಡ್ಲಾ ಅಮ್ಮ !!
ಅಮ್ಮ ಪಾಪ ಸುಸ್ತಾಗಿದೆ  ದೊಡ್ಡಪ್ಪಾ !!!
ಅಮ್ಮ ಏನಾಯ್ತು ಗೊತ್ತ ???
ಪ್ರೀತಿಯ ನಮ್ಮಮ್ಮ ನಂಗಿಷ್ಟ !!!
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು !!!
ಹೆಂಗಿತ್ತು ನಮ್ಮಮ್ಮನ ಜೊತೆ ನನ್ನ ಆಟ???
       ಮಕ್ಕಳು ಮಕ್ಕಳೇ ಇವರನ್ನು ಅನುಕರಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತಾ ನನ್ನ ತಾಯಿ ಹೇಳಿದ ಮಾತುಗಳು ನಿಜವೆನ್ನಿಸಿತು. ಸುಂದರ ಕ್ಷಣದ ಈ ಚಿತ್ರಗಳು ನನ್ನ ಬಾಲ್ಯದ ನೆನಪಿನ ದೋಣಿಯಲ್ಲಿ  ಪಯಣಿಸುವಂತೆ ಮಾಡಿತು. ಇದನ್ನು ನೋಡಿದರೆ ನಿಮಗೂ ನಿಮ್ಮ ಬಾಲ್ಯದ ದಿನಗಳಲ್ಲಿ ನಿಮ್ಮ ತಾಯಿ ಜೊತೆ ಕಳೆದ ಸುಂದರ ಕ್ಷಣಗಳ ನೆನಪು ಬರಬಹುದು ಆಲ್ವಾ !! ಬನ್ನಿ ಬಾಲ್ಯದ ನೆನಪಿನ ದೋಣಿ ಏರೋಣ.

Monday, October 11, 2010

10 -10 - 10 ರ ಆಟ !!ಅತ್ತ ಶಿವೂ ಜೊತೆ ಸುಂದರ ನೋಟ !!!ಇತ್ತಾ ಪ್ರಕಾಶ್ ಹೆಗ್ಡೆ ಹಾಗು ಗೆಳೆಯರ ಜೊತೆ ಆತ್ಮೀಯ ಊಟ !!!!

ಶಿವೂ ಹಾಗೂ ಆಯೋಜಕರು.
ಕಳೆದ ಭಾನುವಾರ ಒಂಥರಾ ಬಂಪರ್ ಕಣ್ರೀ !! ಬೆಂಗಳೂರಿನಲ್ಲಿ ನಾನು ಬ್ಯುಸಿಯೋ ಬ್ಯುಸಿ . ಒಂದು ಕಡೆ ಶಿವೂ ಮತ್ತೊಂದು ಕಡೆ ಪ್ರಕಾಶ್ ಹೆಗ್ಡೆ. ಒಬ್ಬರು ಬೆಂಗಳೂರಿನ ಒಂದು ತುದಿಯಲ್ಲಿ ಮತ್ತೊಬ್ಬರು ಬೆಂಗಳೂರಿನ ಮತ್ತೊಂದು ತುದಿಯಲ್ಲಿ. ಈ ಮಧ್ಯೆ ಬೆಂಗಳೂರಿನ ಭಾನುವಾರದ ಟ್ರಾಫಿಕ್ ನಲ್ಲಿ ಸಿಲುಕಿ ಒದ್ದಾಟ ಮಾಡಿದ್ದು ವಿಶೇಷ.ಇದೆಲ್ಲಾ ನಾನು ಸೃಷ್ಟಿಸಿಕೊಂಡ ಎಡವಟ್ಟು ಅನ್ನಿ.ಮೈಸೂರಿನಿಂದ ಶನಿವಾರ ಬೆಂಗಳೂರಿಗೆ ಪಯಣ ಆರಂಭ .ದಾರಿಯಲ್ಲಿ ನೆನಪಾಗಿ  ಛಾಯ ಕನ್ನಡಿ ಶಿವೂಗೆ ಮೊಬೈಲ್ ಫೋನ್ ಗೆ ಟ್ರೈ ಮಾಡಿದರೆ ಶಿವೂ ವ್ಯಾಪ್ತಿ ಪ್ರದೇಶದಿಂದ ಹೊರಗೆ!! ಇನ್ನು ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ಗೆ  ಫೋನ್ ಮಾಡಿದರೆ ಜೈ ಹೋ!!!   ಮಾರಾಯ್ರೆ ಸ್ವಲ್ಪ ಬುಸ್ಸಿ ಶನಿವಾರದ ಪೇಮೆಂಟು ಮತ್ತೆ ಕಾಲ್ ಮಾಡ್ತೀನಿ ಅಂದ್ರೂ !!ಸರಿ ಬೆಂಗಳೂರಿಗೆ ತಲುಪಿ ನನ್ನ ಬಳಗದವರ ಮನೆಯಲ್ಲಿ ಉಳಿದು ನನ್ನ ಕೆಲಸ ಮಾಡಿಕೊಂಡೆ. ಮಾರನೆಯ ದಿನ ಪ್ರಕಾಶ್        
ಈ ಜೀವನ ಬೇವು ಬೆಲ್ಲ !!1


ಹೆಗ್ಡೆ ಫೋನ್ ಬಾಲೂ ನಮ್ಮ ಮನೆಗೆ ಬರ್ರಿ ಮರೆಯದೆ ಊಟಕ್ಕೆ ಬರಬೇಕೂ ಅಂತ ಒತ್ತಾಯ.ತಾಳು ನಮ್ಮ ಶಿವೂ ಜೊತೇಲೆ ಹೋಗೋಣ ಅಂತ ತೀರ್ಮಾನಿಸಿ ಅವರಿಗೆ ಫೋನ್ ಮಾಡಿದ್ರೆ ಸಾರ್ ಚಿತ್ರ ಕಲಾ ಪರಿಷತ್ ನಲ್ಲಿ ಫೋಟೋಗ್ರಫಿ ವರ್ಲ್ಡ್ ಕಪ್ ಇದೆ ಬನ್ನಿ!! ತುಂಬಾ ಒಳ್ಳೆಯ ಅವಕಾಶ ಅಂದ್ರೂ.ನಾನು ಕೇಳೋ ಮುಂಚೆ ಸಾರ್ ಅಲ್ಲಿಂದ ಗೊತ್ತಲ್ಲ ನಮ್ಮ ಮನೆಯಲ್ಲಿ ಊಟ ಅನ್ನೋದೇ!!! ಶಿವೂ ಸರ್ ಪ್ರಕಾಶ್ ಮನೇಲೂ ಊಟ ಇದೆ ಅವರೂ ಕರ್ದಿದ್ದಾರೆ ಅಂದೇ.ನಿಮ್ಮಜೊತೆ ನೋಟ ನೋಡಿ ನಂತರ ಪ್ರಕಾಶ್ಮನೆಗೆ ಹೋಗುತ್ತೇನೆ ಅಂತಾ ಶಿವುಗೆ ಹೇಳಿ  ಸಮಾದಾನ    ಮಾಡಿಕೊಂಡೆ.   ಈ ಮದ್ಯೆ ಪ್ರಕಾಶ್ ಹೆಗ್ಡೆ ಫೋನ್ ಬಂತು ಬಾಲೂ ಜಿ ಪರಾಂಜಪೆ ಅವರೂ ನಮ್ಮ ಮನೆಗೆ ಬರ್ತಾರೆ ಅವರ ಜೊತೆ ಬನ್ನಿ ಅಂದ್ರೂ.ತಕ್ಷಣ ಪರಾಂಜಪೆ ಫೋನು ಅವರೂ ಸಹ ಪ್ರಕಾಶ್ ಹೆಗ್ಡೆ ಮನೆಗೆ ಹೋಗೋ ಬಗ್ಗೆ ತಿಳಿಸಿ ನಾನಿದ್ದ ಬಸವನ ಗುಡಿ ಕಾಮತ್ ಬ್ಯೂಗಲ್ ರಾಕ್ ಹೋಟೆಲ್ ಬಳಿ ಬರೋದಾಗೆ ಹೇಳಿದ್ರೂ.ಹೀಗೆ ಹಲವಾರು ಎಡವಟ್ಟುಗಳ ಮದ್ಯೆ  ಪರಾಂಜಪೆ ಸಾರ್ ಅವರಿಗೆ ಬದಲಾದ ಕಾರ್ಯದ ಬಗ್ಗೆ ತಿಳಿಸಿ ನಾನು ನೇರವಾಗಿ ಪ್ರಕಾಶ್ ಹೆಗ್ಡೆ ಮನೆಗೆ ಬರುವುದಾಗಿ ತಿಳಿಸಿ.ನನ್ನ ತಮ್ಮ [ಮರಿ ಬಾಲೂ ]ನ ಜೊತೆ ಚಿತ್ರಕಲಾ ಪರಿಷತ್ ಗೆ ದೌಡಾಯಿಸಿದೆ.ಹನ್ನೊಂದು ವರೆಗೆ ಬರುವುದಾಗಿ ಶಿವೂ ಗೆ ಹೇಳಿದ್ದ ಜೀವ ಬೆಂಗಳೂರಿನ ಟ್ರಾಫಿಕ್ ನಲ್ಲಿ ನಲುಗಿ  ಹನ್ನೆರಡಕ್ಕೆ ತಲುಪಿತ್ತು.ಶಿವೂ ಭೇಟಿ ಮಾಡಿದ ನಾನು ಪರಸ್ಪರ ಮಾತು ಕತೆ ನಡೆಸಿ ಪ್ರದರ್ಶನಕ್ಕೆ ಇಟ್ಟಿದ್ದ ಛಾಯ ಚಿತ್ರಗಳ ಲೋಕದಲ್ಲಿ ಲೀನವಾದೆ.ಬನ್ನಿನನಗೆ ಇಷ್ಟವಾದ ಕೆಲವು ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿ ಕೊಳ್ಳುತ್ತೇನೆ !!                                             




                                                                                                                                             


       ಹಲವು ದೇಶಗಳ ಅದ್ಭುತ ಚಾಯಚಿತ್ರಗಾರರ ಅಪರೂಪದ  ಚಿತ್ರಗಳ ಮೋಹಕ ಜಾಲದಲ್ಲಿ ನಾ ಸಿಲುಕಿದ್ದೆ!!   ಚಿತ್ರಕಲಾ ಪರಿಷತ್ ಗ್ಯಾಲರಿಯಿಂದ ಹೊರಗೆ ಬಂದ ನನಗೆ ಛಾಯ ಲೋಕದಿಂದ ಹೊರಗೆ ಬರಲು ಬಹಳ ಸಮಯ ಬೇಕಾಯಿತು. ಅದ್ಭುತ ಛಾಯ ಚಿತ್ರಗಳು. ಅದರಲ್ಲೂ ಕಾಡು ಪ್ರಾಣಿ ಪಕ್ಷಿಗಳ , ಪರಿಸರದ ಚಿತ್ರಗಳ ಸೆರೆ ಹಿಡಿಯಲು ಛಾಯಾ ಚಿತ್ರ ಗಾರರಿಗೆ ಒದಗಿರಬಹುದಾದ ಆತಂಕದ ಕ್ಷಣಗಳು,ಪ್ರಕೃತಿ ವೈಪರಿತ್ಯ , ಛಾಯ ಗ್ರಾಹಕರು ಕ್ಲಿಕ್ಕಿಸಲು  ತೆಗೆದು ಕೊಂಡಿರ ಬಹುದಾದ ಸಮಯ ,ಅದರ ಹಿಂದಿನ ಶ್ರಮ ಇವುಗಳು ಕಣ್ಣಿನ ಪರದೆಯಲ್ಲಿ ಮೂಡಿಬಂದವು. "ಸುಂದರ ಚಿತ್ರ ಛಾಯಾಗ್ರಹಣ ಮಾಡಲು ಛಾಯಗ್ರಾಹಕನೂ ಕವಿಯಾಗ ಬೇಕು" ಎಂಬ ಮಾತಿನಲ್ಲಿ ಸತ್ಯ ವಿದೆ ಅನ್ನಿಸಿತು.


           
     ಹೊರಗೆ ಬಂದರೆ ಕರ ಕುಶಲ ವಸ್ತುಗಳ ಮಾರಾಟ ಭರ್ಜರಿಯಾಗಿ ಸಾಗಿತ್ತು. ಆಗಲೇ ಸ್ವಲ್ಪ ಗಾಳಿ ಬೀಸಿ ವಾಸ್ತವದೆಡೆಗೆ ಬಂದೆವು.ಮುಂದೆ ಈ ತುದಿಯಿಂದ ಮತ್ತೊಂದು ತುದಿಗೆ ಪಯಣ ಸ್ವಲ್ಪ ಕಟ್ ಮಾಡಿದ್ರೆ ಪ್ರಕಾಶ್ ಹೆಗ್ಡೆ ಮನೆ ಪ್ರವೇಶದ ಸೀನು !!!                 

ಅರೆ ಇದೇನಿದು ನಮ್ಮ ಪರಾಂಜಪೆ ಸರ್ ಜೊತೆ ಚಂದ್ರು ಕ್ಷಣ ಚಿಂತನೆ ಮಾಡುತ್ತಿದ್ದಾರೆ!! ಬನ್ನಿ ಬನ್ನಿ ಅಂಥಾ" ನಮ್ಮನೆ " ಯ ಬಳಗದವರಿಂದ ನಗು ಮೊಗದ ಸ್ವಾಗತ .ಬನ್ನಿ ಕುಡಿಯಲು ಏನ್ ಕೊಡ್ಲಿ ಅಂತಾ ಮನೆಯೊಡತಿ ಕೇಳಿದರು ಸ್ವಲ್ಪ ನೀರು ಕುಡಿದು ಊಟದ ಮನೆಗೆ ತೆರಳಿದೆವು !!!  . ಪಾಯಸ, ಅಮಟೆಕಾಯಿ ಗೊಜ್ಜು, ಕೆಸುವಿನೆಲೆಯ ಚಟ್ಟಿ, ಬದನೆಕಾಯಿ ಪಲ್ಯ, ಹುಣಸೆ ತೊಕ್ಕು, ತಂಬುಳಿ, ತೊವ್ವೆ ಮತ್ತು ಹಪ್ಪಳ ಎಲ್ಲ ವ್ಯಂಜನಗಳನ್ನೂ ಸವಿದದ್ದಾಯಿತು   ಊಟದ ಮದ್ಯೆ ಆತ್ಮೀಯವಾದ ಪ್ರೀತಿ ತುಂಬಿದ ಉಪಚಾರ  ನಾನಂತೂ ದಿನನಿತ್ಯಕ್ಕಿಂತ ಸ್ವಲ್ಪ ಜಾಸ್ತಿ ತಿಂದೆ ಬಿಡಿ!! ಸಕ್ಕರೆಯ ಮಾತುಗಳ ನಡುವೆ ಅಕ್ಕರೆಯ ಊಟ ಮಾಡಿ ಈ  ಮ್ಯಾನ್ ನಲಿದಿತ್ತು.ಹಾಗೆ ಉತ್ತರ ಕನ್ನಡ ದ "ಅಪ್ಪೆ ಹುಳಿ "ನೆನಪಿಗೆ ಬಂದು ಅದರ ಬಗ್ಗೆ ಮಾತು ಮುಗಿಸಿ ಊಟ ಪೂರೈಸಿದೆವು .ನಂತರ ಉಭಯ ಕುಶಲೋಪರಿ ಮಾತಿನಲ್ಲಿ ಪ್ರಪಂಚಗಳ ವಿಧ್ಯಾಮಾನ ,ಸಾಹಿತಿಗಳ ಬಗ್ಗೆ ಸ್ವಾರಸ್ಯಕರ  ಮಾತುಗಳು ಪ್ರಕಾಶಣ್ಣನ             ಕಾಲೇಜು ದಿನಗಳಲ್ಲಿ ಕಡಲ ತೀರದ ಭಾರ್ಗವ 'ಶಿವರಾಮ ಕಾರಂತರ "ಒಡನೆ ಜರುಗಿದ ಘಟನಾವಳಿಗಳ ಮೆಲುಕು !!  ಹೊರಡುವ ವೇಳೆಗೆ ಮನೆಗೆ ಬಂದ ಆತ್ಮೀಯರನುಡಿ  ಬರೆಯಲು  ಪುಸ್ತಕ ಬಂತು ಇದು ನಾ ಕಂಡ ಅನುಕರಣೀಯ  ಹೊಸ ನಡವಳಿಕೆ ಏಕೆಂದರೆ ನಮ್ಮ ಭೇಟಿ ಬರಿ ನೆನಪಾಗಿ ಕಳೆದು ಹೋಗದಿರಲು ಇದು ಸಹಕಾರಿ .ಜೊತೆಗೆ ಪುಸ್ತಕ ದ ಉಡುಗೊರೆ ಬೇರೆ!!! ಸರಿ ಸ್ವಾಮೀ ನಿಮ್ಮ ಬಳಿ ಕಳೆದ ಸಮಯ ಅಮೂಲ್ಯ ಅಂತಾ ಹೊರಡುವ ತಯಾರಿಯಲ್ಲಿದ್ದ ನಮಗೆ ಪ್ರಕಾಶ್ ಹೆಗ್ಡೆ ಶ್ರೀಮತಿಯವರಿಂದ  ಅಲ್ಲ ಏನು ಕುಡೀದೆ ಹೊರಡೋದ  ನಿಮಗೆ ಕಾಫಿನೋ ,ಟೀನೋ ಅತ್ವ ಕಷಾಯ ಕೊಡಲೋ ಅನ್ನೋದೇ.!!!ಸರಿ ಮೇಡಂ ಕಶಾಯನೆ ಕೊಡಿ ಅಂದೇ. ಖಾರ ಮಿಕ್ಸ್ಚರ್ ಜೊತೆ ಕಷಾಯ ಹಾಜರ್ !!! ಕೃತಜ್ನತೆ ಇಂದ ಸ್ವೀಕರಿಸಿ ಹೊರಡಲು ಅನುವಾಗಲು ಹೊರಟಾಗ ಊಟ  ಬಡಿಸಿದ ಮಾನ್ಯ ಸದಸ್ಯರ ಫೋಟೋ ತೆಗೆದಿಲ್ಲ ಅನ್ನುವ ವಿಚಾರ          
ಜ್ಞಾಪಕಕ್ಕೆ ಬಂದಿತು ಬನ್ನಿ ಪ್ರಕಾಶಣ್ಣನ ಕುಟುಂಬ ನೋಡೋಣ!!
ನಮ್ಮ ಸಂಸಾರ  ಆನಂದ ಸಾಗರ .
ಪ್ರಕಾಶಣ್ಣನ  ಮನೆಯ ಸದಸ್ಯರ ನಗುಮುಖದ ಪ್ರೀತಿಗೆ ಕರಗಿ ಭಾರವಾದ ಹೊಟ್ಟೆಗಳನ್ನು ಹೊತ್ತು  ಸುಂದರ ವಾದ ಕ್ಷಣಗಳನ್ನು ಮನದಲ್ಲಿ ತುಂಬಿ ಕೊಂಡು ಹೊರ ಬಂದೆವು.ಆಗ  ಮನದಲ್ಲಿ ಮೂಡಿದ ಒಂದೇ ಪ್ರಶ್ನೆ ????? ಪ್ರಶ್ನೆ ಹೀಗೂ ಉಂಟೆ !!! ಬೆಂಗಳೂರಿನ ಸುಂದರ ಹೃದಯಗಳ ಮಧ್ಯದಿಂದ "ನಿಮ್ಮೊಳಗೊಬ್ಬ ಬಾಲೂ" ಮೈಸೂರು. [ ಶಿವೂ ಹಾಗು ಪ್ರಕಾಶಣ್ಣ ,ಪರಾಂಜಪೆ, ಚಂದ್ರು ಎಲ್ಲರಿಗೂ ನಮನಗಳು.ನಿಮ್ಮ ಸ್ನೇಹಕ್ಕೆ ನಾನು ಋಣಿ .]












Tuesday, October 5, 2010

ಅಡಗಿಕೊಂಡು ಕುಳಿತಿರುವ ವಿಸ್ಮಯ!!!! ಈ "ಭೀಮನಖಿಂಡಿ " ಕಲ್ಲಿನ ಕಮಾನು!!!




ಭೀಮನ ಖಿಂಡಿ ಬೆಟ್ಟದ ಸುಂದರ ನೋಟ.












ಗೂಗಲ್ ಆರ್ಥ್ ನಲ್ಲಿ ಭೀಮನ ಕಿಂಡಿಯ ಕಲ್ಲಿನ ಕಮಾನು ಕಾಣುವುದು ಹೀಗೆ!!
ಭೀಮನ ಖಿಂಡಿ ಬೆಟ್ಟದ ಪ್ರದೇಶ ದ ವಿವರ !!!
ಭೀಮನ  ಖಿಂಡಿ  ಬೆಟ್ಟದ ಲೋಕೇಶನ್ ಗೂಗಲ್ ಅರ್ಥ್ ನಲ್ಲಿ ಕಂಡಂತೆ.
ಶನಿವಾರ ಗಾಂಧೀ ಜಯಂತಿ ಮನೆಯ ಸನಿಹದಲ್ಲಿ ಗಾಂಧೀಜಿ ಪುತ್ತಳಿಗೆ ಮಾಲಾರ್ಪಣೆ ನಡೆಯುತ್ತಿತ್ತು.ಸಧ್ಯ ಇವತ್ತಾದ್ರೂ ಇವರನ್ನು ನೆನೆಯುತ್ತೆವಲ್ಲಾ ಅನ್ನಿಸಿ ಮನೆಗೆ ಬಂದೆ. ನನ್ನ ತಮ್ಮ ಅಣ್ಣ ರೆಡಿನಾ!!  ಅಂತಾ ಹೇಳಿ ನಮ್ಮ ಮನೆಗೆ ಬಂದೇಬಿಟ್ಟ.ನಾನು ರೆಡಿ ವಿನಯ್ ಅಂದು ಸಿದ್ದನಾದೆ. ಜೊತೆಗೆ ಅವನ ಇಬ್ಬರು ಸ್ನೇಹಿತರು ಗುರು ಹಾಗು ಉತ್ತಮ್  ನಮ್ಮ ಜೊತೆಗೂಡಿದರು .ಗೊತ್ತು ಗುರಿ ಇಲ್ಲದಪ್ರಯಾಣಕ್ಕೆ ಸಿದ್ದರಾದೆವು. ಅಣ್ಣ ಯಾವ್ ಕಡೆ ಅಂತಾ  ವಿನಯ್ ಹೇಳಿದಾಗ  ಸ್ವಲ್ಪ ಕಾರು ನಿಲ್ಸು ಹೇಳ್ತೀನಿ ಅಂತಾ ಹೇಳಿ ಯಾವ ಕಡೆಗೆ ಅಂತಾ ಯೋಚಿಸಿದೆ ,ಆಗ ಜ್ಞಾಪಕಕ್ಕೆ ಬಂದಿದ್ದು ಬಹಳ ಹಿಂದೆ ಹೋಗಿದ್ದ ಈ " ಭೀಮನ ಖಿಂಡಿ ಬೆಟ್ಟ " ಸರಿ ಅಲ್ಲಿಗೆ ಹೋಗಲು ತೀರ್ಮಾನಿಸಿ ಮೈಸೂರುನಿಂದ  ಬನ್ನೂರು,ಕಿರುಗಾವಲು,ಮಳವಳ್ಳಿ, ಹಲಗೂರು ಮಾರ್ಗವಾಗಿ ಲಿಂಗ ಪಟ್ಟಣ ಗ್ರಾಮದ ಸಮೀಪದ ಕಂಚನಹಳ್ಳಿ ಗ್ರಾಮ ತಲುಪಿದೆವು.ಈ ಗ್ರಾಮ ಕನಕಪುರ ತಾಲೂಕಿನ ಸಾತನೂರ್ ಹೋಬಳಿ ಗೆ ಸೇರಿದ್ದರೂ ಮಳವಳ್ಳಿ ತಾಲೂಕಿನ ಹಲಗೂರಿಗೆ ಕೇವಲ ಹತ್ತು ಕಿ.ಮಿ.ಇದೆ.ಕಂಚನಹಳ್ಳಿ ಯಲ್ಲಿ ಗ್ರಾಮಸ್ಥರನ್ನು ಭೇಟಿ ಮಾಡಿ ನಾವು ಭೀಮನ ಖಿಂಡಿ ಬೆಟ್ಟ ನೋಡಲು ಬಂದಿರುವುದಾಗಿ ತಿಳಿಸಿದೆವು. ಬಹಳ ಆತ್ಮೀಯವಾಗಿ ಬರಮಾಡಿಕೊಂಡ ಗ್ರಾಮದ ಜನರು ನಮ್ಮ ಕಾರನ್ನು ನಿಲ್ಲಿಸಲು ನೆರಳು ನೀಡಿ ,ಬೆಟ್ಟ ತೋರಿಸಲು ಇಬ್ಬರು ಶಾಲಾ ಬಾಲಕರನ್ನು ಜೊತೆಗೆ ಕಳುಹಿಸಿಕೊಟ್ಟು ತಮ್ಮ ಹಿರಿಮೆ ಸಾರಿದರು.ಗ್ರಾಮದಿಂದ ನಮ್ಮ ನಡಿಗೆ ಬೆಟ್ಟ ದೆಡೆಗೆ  ಸಾಗಿತು. ಗ್ರಾಮದ ದಾರಿಯಲ್ಲಿ ಸಾಗುತ್ತಿದ್ದಾಗ ಅಲ್ಲೇ ಇದ್ದ ಒಂದು ಸಣ್ಣ ಕೆರೆಯ ಸನಿಹ ಗೀಜಗ ಹಕ್ಕಿಗಳ ಗೂಡು ಕಣ್ಣಿಗೆ ಬಿತ್ತು. ಹೆಚ್ಚು ಸಮಯ ವಿಲ್ಲದ ಕಾರಣ ತರಾತುರಿಯಲ್ಲಿ ಗೀಜಗನ ಗೂಡಿನ ಕೆಲವು ಫೋಟೋ ತೆಗೆದೆ!!  ಮುಂದೆ ಜೋಳದಹೊಲ , ತೆಂಗಿನ ತೋಟಗಳ ನಡುವೆ ನಮ್ಮ ಚಾರಣ ಸಾಗಿತು.ಜೊತೆಗೆ ಬಂದಿದ್ದ ಇಬ್ಬರು ಮಕ್ಕಳು ನಮಗೆ ಮಾರ್ಗ ದರ್ಶಕರಾದರು.ಈ ಮಕ್ಕಳು ಬೆಟ್ಟ ಏರ ಬಲ್ಲರೆ ???ಎಂಬ ಅನುಮಾನ ನನ್ನನ್ನು ಕಾಡಿತ್ತು. ನಂತರ ಅವರೇ   ನಾವು    ಬೆಟ್ಟ ಹತ್ತಲು  ಏದುಸಿರು ಬಿಡುವುದನ್ನು ನೋಡಿ ನಕ್ಕರು ಬಿಡಿ !!ಅವರ ಉತ್ಸಾಹ ನಮಗೆ ಸ್ಪೂರ್ತಿಯಾಗಿತ್ತು.ನಡೆ ಮುಂದೆ ನಡೆ ಮುಂದೆ ಅನ್ನುವಂತೆ ನಮ್ಮ ನಡಿಗೆ ಸಾಗಿತು.ಪ್ಯಾಟೆ ಹೈಕಳ ಉತ್ಸಾಹ ಆರಂಭ ದಲ್ಲಿ ವೇಗ ಪಡೆದಿತ್ತು!!!ನಡಿಗೆಯ ಸಮಯದಲ್ಲಿ ಸೂರ್ಯ ತನ್ನ ಪ್ರತಾಪ ತೋರಿಸಲು ಶುರುಮಾಡಿದ. ದೇಹಕ್ಕೋ ಬೆವರಿನ ಸ್ನಾನ ವಾಗಿತ್ತು.ಬಿಸಲಿನ ತಾಪ ನಡಿಗೆಯನ್ನು ನಿಧಾನ ಗೊಳಿಸಲು ಶುರುಮಾಡಿತು, ದೂರದಲ್ಲಿ ಬೆಟ್ಟಗಳು ಸುಂದರವಾಗಿ ಗೋಚರಿಸಿ ಕೈಬೀಸಿ ಕರೆದಿದ್ದವು .       ಮೋಹಕ ಬೆಟ್ಟಗಳ ಸನಿಹ ಹೋಗಲು ನಡಿಗೆಯ ವೇಗ ಹೆಚ್ಚಿಸಿದೆವು.ಜೋಳದ ಮದ್ಯದ ದಾರಿಯಲ್ಲದ ದಾರಿಯಲ್ಲಿ ಪ್ರಕೃತಿಯ ಸೊಬಗ ನಡುವೆ ಬಿಸಿಲ ಜಾಲದಲ್ಲಿ ನಮ್ಮ ನದಿಗೆ ಸಾಗಿತ್ತು.ಜೋಳದ ಹೊಲದ ನಡುವೆ ನಡೆಯುವಾಗ ನನ್ನ ಬಾಲ್ಯ ನೆನಪಾಗಿ ಹಳ್ಳಿ ಹುಡುಗನಾಗಿ ಸಂಭ್ರಮಿಸಿದ್ದೆ.ತಮಾಷಿಯಾಗಿ ಮಾತನಾಡುತ್ತಾ ಬೆಟ್ಟದ ತಪ್ಪಲಿಗೆ ತಲುಪಿದ್ದು ತಿಳಿಯಲೇ ಇಲ್ಲ . ಸಾ ನಿಮ್ಮ ಸೂ ,ಚಪ್ಲಿ ಇಲ್ಲೇ ಬಿಡಬೇಕು!! ಅಂತ ನಮ್ಮ ಜೊತೆ ಬಂದಿದ್ದ ಮಕ್ಕಳು ಹೇಳಿದಾಗ  ನಮ್ಮ ಪ್ಯಾಟೆ ಹೈಕಳು ಆಅ!!! ಯಾಕೆ ಅಂದ್ರೂ ಹೌದು ಸಾ ಈ ಬೆಟ್ಟ ಹತ್ತಕ್ಕೆ ಬರಿ ಕಾಲಿನಿಂದ ಮಾತ್ರ ಪ್ರವೇಶ ಅಂದಾಗ ಒಲ್ಲದ ಮನಸಿನಿಂದ ಪಾದ ರಕ್ಷೆಗಳನ್ನು ಒಂದೆಡೆ ಬಿಟ್ಟರು.[ ನನಗೆ ಮೊದಲೇ ಈ ಅನುಭವ ಆಗಿತ್ತು]ಕಲ್ಲು ಮುಳ್ಳಿನ ಹಾದಿಯಲ್ಲಿ ,ಬೆಟ್ಟ ಹತ್ತೋದು ಹೇಗಪ್ಪಾ ಅಂತಾ ಎಲ್ಲರಿಗೂ ಪ್ರಶ್ನೆ ಕಾಡಿತ್ತು.ಬೆಟ್ಟದ ತಪ್ಪಲಿನಲ್ಲಿ ಮೊದಲು ಸಿಕ್ಕಶಿವನ ಪಾದುಕೆಗಳಿಗೆ ನಮಿಸಿ ಅಲ್ಲೇ ಇದ್ದ ಸಣ್ಣ ಗುಡಿಯ ದರ್ಶನ ಪಡೆದು ಸನಿಹದ ಕಟ್ಟೆಯಲ್ಲಿ ಕಲ್ಲುಗಳ ರಾಶಿ ನೋಡಿ ಏನೆಂದು ಕೇಳಿದಾಗ ಬೆಟ್ಟ ಇಳಿದು ವಾಪಸ್ಸು ಬರುವಾಗ ಅಲ್ಲಿ ಮೂರು ಕಲ್ಲುಗಳನ್ನು ಪ್ರತಿಯೊಬ್ಬರೂ ಹಾಕಬೇಕೆಂದು ಮಕ್ಕಳು ಹೇಳಿದರು. ಯಾಕೆ ಎಂದು ಮಕ್ಕಳುಹೇಳಲಿಲ್ಲ ನಾವೂ ಕೇಳಲಿಲ್ಲ.[ಅಲ್ಲಿನ ಆಚರಣೆ ಹಾಗೆ ಇರಲಿ ಬಿಡಿ ] ಮುಂದೆ ಶುರುವಾಯಿತು ಬೆಟ್ಟ ಹತ್ತುವ ಪರ್ವ.ಆಳೆತ್ತರ ಬೆಳೆದ ಹುಲ್ಲು ಅಲ್ಲಲ್ಲಿ ಸಿಗುವ ಬಂಡೆ ಕಲ್ಲುಗಳು, ಕರಡಿ ಗುಹೆಗಳು ಇವುಗಳ ನಡುವೆ ನಮ್ಮ ಬೆಟ್ಟ ಹತ್ತುವ ಕಾಯಕ !!ಸುಂದರ ಹಸಿರ ಮಡಿಲಲ್ಲಿ ಅಲ್ಲಲ್ಲಿ ಸಿಗುವ ಸುಂದರ ಹೂ ಗಳ                            ನೋಟ ಮೋಹಕವಾಗಿತ್ತು.ಏದುಸಿರು ಬಿಡುತ್ತ ಸಾಗುವ ನಾವು ಅಲ್ಲಲ್ಲಿ ಸಿಗುವ ಬಂಡೆಗಳ ನೆರಳಲ್ಲಿ ವಿಶ್ರಾಂತಿಪಡೆದು ಸಾಗಿದ್ದೆವು.ಧಣಿದ ದೇಹಕ್ಕೆ ಬಂಡೆಗಳ ನೆರಳು       ಆಸರೆ ನೀಡಿತ್ತು.ಅಂತೂ ಇಂತೂ ಬೆಟ್ಟ ಹತ್ತಿದ  ನಾವು ಭೀಮನ ಕಿಂಡಿ  ಪ್ರವೇಶ ಮಾಡಿದೆವು.ನಮ್ಮ ಹೈಕಳಂತೂ ಅಲ್ಲಿನ ದೃಶ್ಯ ನೋಡಿ ಪುಳಕಿತರಾಗಿ ಕುಣಿದು ಕುಪ್ಪಳಿಸಿದರು.ಅದ್ಭುತ ವಾತಾವರಣ  ತಣ್ಣನೆಯ ಗಾಳಿ ನಮ್ಮ ಧಣಿವನ್ನು ಮಾಯ  ಮಾಡಿತ್ತು.ಅಲ್ಲಿನ  ದೃಶ್ಯ  ಮನ ಮೋಹಕವಾಗಿ ಬೆಟ್ಟ ಹತ್ತಿದ್ದಕ್ಕೂ ಸಾರ್ಥಕ ಅನ್ನಿಸಿತು.ಸುಂದರ ಬೃಹದಕಾರವಾದ ಕಲ್ಲಿನ ಕಮಾನು ಅಚ್ಚರಿ ಹುಟ್ಟಿಸಿತ್ತು.ಮನದಣಿಯ ಅದರ ರಚನೆ ನೋಡಿ ಅಚ್ಚರಿ ಪಟ್ಟೆವು ಬನ್ನಿ ನೀವೂ ನೋಡಿ                                                                ಆಳೆತ್ತರದ ಬೃಹತ್ ಕಮಾನು ಸಣ್ಣ ದೇವಾಲಯ ಸುಂದರ ಪ್ರಶಾಂತ ಜಾಗ ಸ್ವರ್ಗ ಇಲ್ಲೇ ಇದೆ ಅನ್ನಿಸಿತ್ತು.     ವಾವ್ ಎಂಥಹ ಸುಂದರ ಲೋಕ ಆಲ್ವಾ !! ಬಹಳ ಹೊತ್ತು ಅಲ್ಲಿದ್ದ ನಗಾರಿ ಭಾರಿಸಿಕೊಂಡು ಹಾಡಿ  ಕುಣಿದು ತಂದಿದ್ದ ತಿಂಡಿ ತಿನಿಸು ಖಾಲಿ ಮಾಡಿ ಬೆಟ್ಟ ಇಳಿದೆವು ಆದರೂ ಈ ಕಲ್ಲಿನ ಕಮಾನು ಪೂರ್ತಿ ಯಾಗಿ ಫೋಟೋ ತೆಗೆಯುವ ಬಯಕೆ ಯಾಗಿ ಲೆಕ್ಕಾಚಾರ ಹಾಕಲಾರಂಭಿಸಿದ್ದೆ. ಗ್ರಾಮಕ್ಕೆ ವಾಪಸ್ಸು ಬಂದ ನಾವು ಸಹಕಾರ ನೀಡಿದ ಮಕ್ಕಳಿಗೆ ಹಾಗು ಗ್ರಾಮಸ್ಥರಿಗೆ ಕೃತಜ್ಞತೆ ಅರ್ಪಿಸಿ ಅಲ್ಲಿಂದ ಹೊರಟೆವು.ಮುಖ್ಯ  ರಸ್ತೆಗೆ ಬಂದ ನನಗೆ ಪಕ್ಕದ ಬೆನುಮನ ಹಳ್ಳಿ  ಗ್ರಾಮದಿಂದ ಈ ಕಲ್ಲಿನ ಕಮಾನಿನ ಪೂರಣ ಫೋಟೋ ತೆಗೆಯಬಹುದು ಅನ್ನಿಸಿ ನಮ್ಮ ಹುಡುಗರಿಗೆ ತಿಳಿಸಿದೆ. ಪಾಪ ಮೊದಲೇ ಧಣಿವು ಹಸಿವಿನಿಂದ ಕಂಗಾಲಾಗಿದ್ದ ಅವರು ಒಲ್ಲದ ಮನಸ್ಸಿನಿಂದ ನನ್ನ ಜೊತೆ ಬಂದರು.ಪಕ್ಕದ ಬೆನುಮನ ಹಳ್ಳಿ ಗ್ರಾಮ   ಪ್ರವೇಶಿಸಿ ಸುಮಾರು ಮೂರು ಕಿ.ಮಿ.ಕ್ರಮಿಸಿದ ನಮಗೆ ಸಿಕ್ಕ ದೃಶ್ಯ ಅಮೋಘ ವಾಗಿತ್ತು ಇಡೀ ಬೆಟ್ಟ ವಿವಿಧ ಆಕಾರದಲ್ಲಿ ಗೋಚರಿಸಲು ಸಿಕ್ಕಿತ್ತು.                     ಒಂದು ಹೆಬ್ಬುಲಿ ಬಾಯ್ತೆರೆದು ಏನನ್ನೋ ತಿನ್ನುತ್ತಿರುವಂತೆ ಕಂಡ ಈ ದೃಶ್ಯ ಮರೆಯಲಾಗದೆ ಉಳಿಯಿತು ಈ ಬೆಟ್ಟದ ಮಹಿಮೆಯೇ ಹೀಗೆ ಹಿಂದೊಮ್ಮೆ ಇಲ್ಲಿಗೆ ಬಂದಿದ್ದಾಗ ನನಗೆ ಸಿಕ್ಕ ದೃಶ್ಯ ಮರೆಯಲಾಗದ್ದು ಬನ್ನಿ ನೋಡೋಣ ಒಬ್ಬ ಹುಡುಗಿ ತನ್ನ ಪುರುಷನ ಹೆಗಲಮೇಲೆ ತನ್ನ ಕುತ್ತಿಗೆ ಇಟ್ಟಿರುವಂತೆ ಕಾಣುವ ಈ ವಿಚಿತ್ರ ಎಲ್ಲಿ ಸಿಕ್ಕೀತು ??? ಮತ್ತೊಂದು ವಿಶೇಷ ಇಲ್ಲಿಯವರೆಗೂ ಯಾವುದೇ ವೃತ್ತ ಪತ್ರಿಕೆಯಲ್ಲಿ, ವಾರ ,ಮಾಸಿಕ ಪತ್ರಿಕೆ ಗಳಲ್ಲಿ  ಟಿ.ವಿ.ಯಲ್ಲಿ ಈ ಭೀಮನ ಖಿಂಡಿ ಬೆಟ್ಟದ ಬಗ್ಗೆ  ಯಾವುದೇ ಮಾಹಿತಿ ಬಂದಿಲ್ಲ !!! ವರ್ಷಕ್ಕೊಮ್ಮೆ ಮೈಸೂರಿನಿಂದ ಯೂತ್ ಹಾಸ್ಟೆಲ್ ನಿಂದ ಚಾರಣ ಹೊರಟರೂ ಈ ಬೆಟ್ಟದ ಪೂರ್ಣ ಚಿತ್ರ ಎಲ್ಲೂ ಪ್ರಕಟವಾಗಿಲ್ಲ .ಅಂತರ್ಜಾಲದಲ್ಲೂ ಇದರಬಗ್ಗೆ ವಿಕಿ ಪೀಡಿಯ ಸೇರಿದಂತೆ ಮಾಹಿತಿ ಇಲ್ಲ. ಪ್ರವಾಸಿಗಳಿಗೆ ಮಾಹಿತಿಯೇ ಇಲ್ಲ !! ಈ ಭೀಮನ ಖಿಂಡಿ ಬೆಟ್ಟದ ಬಗ್ಗೆ ಮೊದಲ ಮಾಹಿತಿ ಎಲ್ಲರಿಗೂ ನೀಡುತ್ತಿರುವ ಬಗ್ಗೆ ನನಗಂತೂ ಹೆಮ್ಮೆ ಇದೆ .ಬಿಡುವಾದಾಗ ನೀವು ಒಮ್ಮೆ ಹೋಗಿ ಬನ್ನಿ. [ ಬೆಂಗಳೂರಿನಿಂದ ಹೋಗ ಬೇಕಾದವರು  ಬೆಂಗಳೂರು-ಕನಕಪುರ - ಸಾತನೂರು -ಹಲಗೂರು-[ಹಲಗೂರಿನಿಂದ ಚೆನ್ನಪಟ್ಟಣ ರಸ್ತೆ ಮೂಲಕ ] ಲಿಂಗ ಪಟ್ಟಣ -ಕಂಚನ ಹಳ್ಳಿ  ಅಡ್ಡ ರಸ್ತೆ -ಕಂಚನ ಹಳ್ಳಿ ]. ಎಚ್ಚರ ಆದರೆ ಈ ಬೆಟ್ಟವನ್ನು ಬರಿ ಕಾಲಿನಿಂದ ಮಾತ್ರ ಇರಬೇಕು !!! ಒಂದು ದಿನದ ಚಾರಣಕ್ಕೆ ಹೇಳಿ ಮಾಡಿಸಿದ ಪ್ರದೇಶ .ಬನ್ನಿ ನೋಡಿ ಆನಂದ ಪಡಿ !!! ನಮಸ್ಕಾರ.ಹೆಚ್ಚಿನ ಮಾಹಿತಿಗಾಗಿ ಗೂಗಲ್  ಅರ್ಥ್ ನಲ್ಲಿ ಭೀಮನ ಖಿಂಡಿ ಜಾಗ ಗುರುತಿಸಿದ್ದು  ಅದರ ಫೋಟೋ ಕೂಡ ನೀಡಿದ್ದೇನೆ.                                   ಗೂಗಲ್  ಅರ್ಥ್ ನಲ್ಲಿಯೂ ಈ ಬಗ್ಗೆ ಮಾಹಿತಿ ಈಗ  ಲಭ್ಯ ವಾಗಿದೆ.ನೀವು ಒಮ್ಮೆ ಹೋಗಿ ಬನ್ನಿ . ಅಡಗಿಕೊಂಡು ಕುಳಿತಿರುವ ವಿಸ್ಮಯ  ಭೀಮನ ಖಿಂಡಿ ವಿಚಾರ ಪ್ರಪಂಚಕ್ಕೆ ತಿಳಿಯಲಿ.