Tuesday, March 12, 2013

ಇಂಗಾದ್ರೆ ಎಂಗೆ ಸಾ ......?

ಸಾಂದರ್ಬಿಕ ಚಿತ್ರ [ ಕೃಪೆ ಅಂತರ್ಜಾಲ]

ಇದೊಂದು ಕಾಡುತ್ತಿರುವ ಪ್ರಶ್ನೆ , ನನಗೂ ಯೋಚಿಸಿ ಯೋಚಿಸಿ ಸಾಕಾಯ್ತು. ನೀವಾದ್ರೂ ಉತ್ತರ ಕೊಡಿ ಬಾಲೂ ಅಂದ್ರು  ಮಲ್ಲಿಕಾರ್ಜುನ್  ಮೇಷ್ಟ್ರು. ಯಾಕೆ ಸಾರ್ ಏನಾಯ್ತು?. ಏನ್ ಸಮಾಚಾರ?  ಅಂದೇ ,

ಅಯ್ಯೋ    ಬಾಲೂ  ಯಾಕೆಳ್ತೀರ ನನ್ನ ಕಥೆ  ಈ ಹಳ್ಳಿ ಹೈಕಳ ಸಾವಾಸ ಬಲು ಕಷ್ಟಾ ಕಣ್ರೀ , ಬನ್ನಿ ವಿಚಾರ ಹೇಳ್ತೀನಿ ಅಂತಾ ವಿಚಾರ ಹೇಳಿದ್ರೂ  ಬನ್ನಿ ಈ ಕಥೆ ಓದಿ.

ನಮ್ಮ ಮಲ್ಲಿಕಾರ್ಜುನ್ ಒಳ್ಳೆಯ ಉತ್ಸಾಹಿ ಮೇಷ್ಟ್ರು , ಒಂದು ಹಳ್ಳಿಯಲ್ಲಿ ಪ್ರೌಡ ಶಾಲೆ ಮಕ್ಕಳಿಗೆ  ವಿಜ್ಞಾನ ಭೋದನೆ ಮಾಡುತ್ತಾರೆ. ಹಳ್ಳಿಯ ಮಕ್ಕಳಿಗೆ ಅಂತರ್ಜಾಲ  ಸೌಲಭ್ಯ ಇಲ್ಲಾ  , ಮಾಹಿತಿ ಸಿಗೋಲ್ಲಾ ಎನ್ನುವ  ಕಾರಣಕ್ಕೆ ತಾವೇ ಅಂತರ್ಜಾಲ ಹುಡುಕಾಡಿ ವೈಜ್ಞಾನಿಕ  ವಿಷಯಗಳಿಗೆ   ಸಂಬಂಧಿಸಿದ ವಿಚಾರಗಳನ್ನು ಶಾಲೆಯಲ್ಲಿ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಮಕ್ಕಳಿಗೆ ಹೆಚ್ಚು ವಿಚಾರ ತಿಳಿದು, ಹೆಚ್ಚಾಗಿ  ಪ್ರಶ್ನೆ ಕೇಳಿ  ಹೊಸ ವಿಚಾರಗಳನ್ನು ತಿಳಿದು ಪಟ್ಟಣದ ಮಕ್ಕಳಿಗೆ ಸರಿಸಮನಾಗಿ  ಜ್ಞಾನ ಪಡೆಯಲಿ ಎನ್ನುವ ಸದುದ್ದೇಶ ಅವರದು, ಮಕ್ಕಳನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ, ಮಕ್ಕಳಿಗೂ ಸಹ  ಇವರಂದ್ರೆ  ಬಹಳ ಪ್ರೀತಿ ಹಾಗು ಸಲಿಗೆ ಜಾಸ್ತಿ.ಇವರ ಕ್ಲಾಸು ಅಂದ್ರೆ ಅದೊಂದು ವಿಚಾರ ಘೋಷ್ಠಿ  ಇದ್ದಂತೆ , ಪ್ರಶ್ನೆ ಕೇಳುವ ಅಧಿಕಾರ ಮಕ್ಕಳಿಗೂ ಇರುತ್ತದೆ. ಆದರೆ ಇವರ ಓರಿಗೆಯ ಸಹೋದ್ಯೋಗಿ ಮೇಷ್ಟರುಗಳಿಗೆ ಇವರೊಬ್ಬ ವಿಚಿತ್ರ ವ್ಯಕ್ತಿ.  ಇರಲಿ ಬನ್ನಿ  ಮುಖ್ಯ ವಿಚಾರಕ್ಕೆ ಸಾಗೋಣ.

ಒಮ್ಮೆ ಹೀಗಾಯ್ತು ನಮ್ಮ ಮಲ್ಲಿಕಾರ್ಜುನ್ ಮೇಷ್ಟ್ರು ಕ್ಲಾಸಿನಲ್ಲಿ ಪಾಠ  ಮಾಡುತ್ತಿದ್ದರು, ಅವರ ತರಗತಿಯಲ್ಲಿ ವಿಷಯ  ಮಂಡನೆ ಆಗುತ್ತಿತ್ತು, ವಿಜ್ಞಾನದ ಕೌತುಕಗಳ ಬಗ್ಗೆ ಪ್ರಶ್ನೋತ್ತರಗಳ  ನಡೆದಿತ್ತು,

ಮಲ್ಲಿಕ್ :-  ಲೇ ಪರಮೇಶ   ಪ್ಲಾನೆಟ್ [ಗ್ರಹ ]ಎಂಬ ಪದ ಯಾವ ಭಾಷೆ ಯಿಂದ ಉದ್ಭವಿಸಿದೆ ? ಹೇಳೋ

ಪರಮೇಶ :- ಸಾ ಅದು ಗಿರೀಕ್[ ಗ್ರೀಕ್]  ಭಾಸೆ ಯಿಂದ ಆಲ್ವಾ ಸಾ ............ .?

ಮಲ್ಲಿಕ್ :- ಲೇ ಅದು ಗಿರೀಕ್  ಅಲ್ವೋ ಗ್ರೀಕ್ ಭಾಷೆ  ಉತ್ತರ ಸರಿ ಕೂತ್ಕೋ

ಪರಮೇಶ :- ಊ  ಕ ಸಾ , ಅಂತಾ ಕುಳಿತ.

ಮಲ್ಲಿಕ್ :-ಲೇ ಬಸವ  ನೀ ಹೇಳೋ  ಟೈರ್ ಕಂಡು ಹಿಡಿದವರು  ಯಾರೋ ??

 ಪರಮೇಶ :- ಅದೇ ಅದೇ  ಟೈರು  ..... ಕಂಡು  ಹಿಡಿದವರು  ........ ಅದೇಯ  ಊ     ಅಂತಾ ತಡಕಾಡಿ ತಲೆ ಕೆರೆಯುತ್ತಾ ನಿಂತ.

ಮಲ್ಲಿಕ್ :- ಲೇ ಲೇ ಮೊನ್ನೆ ತಾನೇ  ಅವನ ಚಿತ್ರ ತೋರ್ಸಿ   ಹೇಳಿರ್ಲಿಲ್ವ ..... ಬರೀ...... ಊ .ಮ. ಹೇ. ಗೆ ಲಾಯಕ್ಕೋ ನೀನು                ಲೇ  ಕೆಂಪ ನೀನೆಳ್  ಲೇ  ಅಂದ್ರೂ

ಕೆಂಪ :- ಸಾ ಸಾ   ಅದೇಯಾ , ಅದೇಯಾ  ಬೆಂಡ್ಲಪ್ ........ಸಾ , ಅಂದಾ ಲೇ ಲೇ ಅದು  "ಡನ್ಲಪ್" ಕಣೋ   ಓ   ಕೂತ್ಕೋ                         ಅಂದ್ರು,

ಮಲ್ಲಿಕ್ :- ಏಳಮ್ಮಾ  ಸರೋಜಾ   ಜಗತ್ತಿನ ಅತ್ಯಂತ  ಶೀತ ಪ್ರದೇಶ ಯಾವುದು ....??

ಸರೋಜಾ :- ಹಿಮಾಲಯ ಸಾ

ಮಲ್ಲಿಕ್ : - ಏನಮ್ಮ  ನೀನೂ  ಹಿಂಗೆ ಹೇಳ್ತಿಯಾ , ಉತ್ತರ ತಪ್ಪು,  ನೋಡು ಮರಿ  ಭಾಗ್ಯ  ನೀನು ಹೇಳಮ್ಮ .

ಭಾಗ್ಯ :- ಸಾ ಅದು  ಅಂಟಾರ್ಟಿಕಾ  ಸಾ,

ಮಲ್ಲಿಕ್ :-ಭೇಷ್ ಭೇಷ್  ಒಳ್ಳೆಯ ಮಗು ನೀನು ಗುಡ್, ಕೂತ್ಕೋ ಮರಿ , ಲೇ  ಶಂಭೂ  ಅವುತ್ಕೊತೀಯ  ಎದ್ದೇಳು

ಶಂಭು  :- ಇಲ್ಲಾ ಸಾ  ಅಂಗೆನಿಲ್ಲ  ಸಾ,  ಅಂತಾ ನಿಂತು ಕೊಂಡಾ

ಮಲ್ಲಿಕ್ :- ಲೇ ಶಂಭೂ ತರ್ಲೆ ಮಾಡ ಬ್ಯಾಡ  ಹೇಳೋ  ನ್ಯೂಟನ್  ನಿಯಮಾವಳಿ  ಯಾವ ವಿಚಾರದ ಬಗ್ಗೆ  ಹೇಳೋ

ಶಂಭು:-   ನ್ಯೂಟನ್  ಗುರ್ತ್ವಾ ಕರ್ಸಣೆ   ನಿಯಮ ಆಲ್ವಾ  ಸಾ.?

ಮಲ್ಲಿಕ್ :- ಲೇ ನನ್ನೇ ಪ್ರಶ್ನೆ ಕೇಳ್ತೀಯ , ಅದು ಗುರುತ್ವಾಕರ್ಷಣೆ  ಕಣಯ್ಯ   ಗುರ್ತ್ವಾ ಕರ್ಸಣೆ ಅಲ್ಲಾ ತಿಳೀತ

ಶಂಭು :- ಸಾ ಒಂದು ಪಸ್ನೆ  ಕೇಳ ಬೇಕೂ ಅಂತೀವ್ನಿ  ತಪ್ಪು ತಿಳಕಾ ಬ್ಯಾಡಿ?? ಅಂದಾ

ಮಲ್ಲಿಕ್ :- ಅಯ್ಯೋ ದಡ್ಡ.... ಅದಕ್ಕೆ ಯಾಕೆ  ಸಂಕೋಚ? ಕೇಳೋ ಪ್ರಶ್ನೆ , ಮಕ್ಕಳು ಹೊಸ ವಿಚಾರ ತಿಳಿದು ಕೊಳ್ಳ ಬೇಕು,               ಕೇಳು ಕೇಳು ನಿನ್ನ ಪ್ರಶ್ನೆ ...ಅಂದ್ರೂ

ಶಂಭು :- ಪ್ರಶ್ನೆ ಕೆಲಿದ್ಮ್ಯಾಲೆ  ನನ್ನ ಬೋಯ್ಯಕಿಲ್ಲ ,  ಒಡಿಯಾಕಿಲ್ಲ  ಅಂತಾ ಯೋಳಿ , ಆಮೇಕೆ ಪಶ್ನೆ  ಕೇಳ್ತೀನಿ ಅಂದಾ

ಮಲ್ಲಿಕ್ :- ಲೇ ಪ್ರಶ್ನೆ ಕೇಳೋ  ನಿನಗೆ  ಏನೂ ಮಾಡೋಲ್ಲ  ಹೆದರ ಬೇಡ ಪ್ರಶ್ನೆ ಕೇಳೂ  ಅಂದ್ರು.
                                                                                                                                                          

ಶಂಭು :- ನಮ್ಮ  ಹಟ್ಟಿ [ ಮನೆ]  ಪಕ್ಕ ಇರೋ  ಲಾರೀ ತೂಕ ಮಾಡೋ ಮಿಶಿನಿನಲ್ಲಿ ನಮ್ಮ ಎಮ್ಮೆ ಯ ಹತ್ಸಿ  ತೂಕ  ಮಾಡ್ದೆ       ಸಾ                ೩೦೦      ಕೆ.ಜಿ.ಅದೇ[ ಆಹಾರ ಸೇವಿಸುವ ಮೊದಲು ]   , ಅದು  ಹುಲ್ಲು, ಹೊಟ್ಟು , ಭೂಸ  ಎಲ್ಲಾ                ಸೇರಿ           ಸುಮಾರು  ಹತ್ತು ಕೆ.ಜಿ. ಆಹಾರ  ತಿನ್ನುತ್ತೆ , ಆದ್ರೆ ಅದರ ತೂಕ   ಆಹಾರ ತಿಂದ ಮ್ಯಾಲೆ  ೩೧೦ ಕೆ.ಜಿ.  ಆಗಬೇಕು ಆದರೆ  ತೂಕ  ಹಾಕುದ್ರೆ  ೩೦೦ ಕೆ.ಜಿ. ನೆ ತೂಗ್ತು  ಸಾ,

ಆಮ್ಯಾಕೆ ಬೆಳಿಗ್ಗೆ  ನಮ್ಮ ಎಮ್ಮೆನ  ಮತ್ತೆ  ತೂಕ ಮಾಡ್ದೆ  ಆಗಲೂ ೩೦೦ ಕೆ.ಜಿ. ಬತ್ತು,  ಆಮ್ಯಾಕೆ  ಒಸಿ ಒತ್ತಾದ್ಮ್ಯಾಕೆ  ಎಮ್ಮೆ    ಗಂಜ್ಲಾ  ಸುರಿಸಿ , ತೊಪ್ಪೆ ಹಾಕ್ತು  ಎಲ್ಲಾ ಅಂದಾಜು ಒಂದು ಐದು ಕೆ.ಜಿ ಇರ್ಬೈದು   , ತಾಳು ಈಗಲಾದರೂ ತೂಕ ಕಡಿಮೆ ಇದ್ದಾತಾ ಅಂತಾ ತೂಕ ಮಾಡ್ದೆ  ಆಗಲೂ  ೩೦೦ ಕೆ.ಜಿ.ನೆ ಬತ್ತು ಸಾ  ಇದ್ಯಂಗೆ ಅಂತಾ  ಗೊತ್ತಾಯ್ತಿಲ್ಲ  ಒಸಿ ನೀವೇ  ಯೋಳ್ಕೊಡೀ  ಸಾ , ಅಂದಾ

ಮುಂದುವರೆದು  ಸಾ  ನಮ್ಮ ಎಮ್ಮೆ ಅಂಗೆ ಮನ್ಸುರ್ದೂ ಅದೇ ಕಥೆ ಆಲ್ವಾ ಸಾ ಅಂದಾ ............!!! ಯಾಕೋ ಅಂದೇ  ನಮ್ಮ ಎಮ್ಮೆ  ತೂಕ ಮಾಡಿದಂಗೆ  ನನ್ನ ಮ್ಯಾಲೋ ಪ್ರಯೋಗ ಮಾಡ್ಕಂಡೆ   ಆಗಲೂ ಎತ್ವಾಸ ಕಾಣಲಿಲ್ಲ ಸಾ, ಮನ್ಸರು  ಊಟ ಮಾಡಾಕೆ ಮೊದ್ಲು  ಎಷ್ಟು ತೂಕ ಇರ್ತಾರೋ  ಹೊಟ್ಟೆ ಒಳಗಿನ  ಕಸ ಆಚೆಗೆ ಹೊದ್ಮ್ಯಾಕೆ  ತೂಕ ಅಷ್ಟೇ ಯಾಕೆ ಇರ್ತದೆ  ಅಂತಾ  ಗೊತ್ತಾಯ್ತಿಲ್ಲ  ಅಂದಾ .
  ಕ್ಲಾಸಿನ ಮಕ್ಕಳು  ಗೊಳ್  ಅಂತಾ ನಕ್ಕರು.

ಮಲ್ಲಿಕ್ :- ಲೇ  ತಲೆ ಹರಟೆ   ಕೂತ್ಕೋ ಸುಮ್ನೆ , ಅಂದವನೇ   ಗದರಿದೆ

             ಪಾಪದ ಹುಡುಗ ಹೆದರಿಕೊಂಡು ಕುಳಿತ. ಲೇ ಇವತ್ತಿಗೆ ಇಷ್ಟೇ ಸಾಕು,   ನಾಳೆಗೆ   ಹೋಂ ವರ್ಕ್ ತಗೊಳ್ಳಿ ಅಂತಾ  ಸಿಟ್ಟಿನಲ್ಲಿ  ಹೊರಲಾರದಷ್ಟು  ಹೋಂ ವರ್ಕ್ ನೀಡಿದೆ.  ಶಾಲೆ ಮುಗಿಸಿ ಬಸ್ಸಿನಲ್ಲಿ ಕುಳಿತು ಯೋಚಿಸಿದಾಗ  ಶಂಭು  ಪ್ರಶ್ನೆ  ಕಾಡತೊಡಗಿತು.  ಹೌದಲ್ವಾ  ಆ ಹುಡುಗ ಕೇಳಿದ ಪ್ರಶ್ನೆಯಲ್ಲಿ ತಪ್ಪೇನಿದೆ ?  ಈ ಪ್ರಶ್ನೆಯ ಉತ್ತರ ನನಗೂ ಗೊತ್ತಿಲ್ಲ , ಅಂದವನೇ  ಅಂತರ್ಜಾಲ ಹುಡುಕಿದೆ ಈ ಪ್ರಶ್ನೆಗೆ   ಉತ್ತರ ಸಿಕ್ಕಲಿಲ್ಲ  ಅದಕ್ಕೆ ನೀವಾದ್ರೂ ಏನಾದರೂ ಮಾಡ್ರೀ ಅಂದ್ರು.



ಹಳ್ಳಿ ಹೈದ 



ನಮ್ಮ ಮಲ್ಲಿಕಾರ್ಜುನ್ ಮೇಷ್ಟ್ರ  ಪ್ರಶ್ನೆ  ನನ್ನನ್ನೂ ಕಾಡತೊಡಗಿತು , ನನ್ನಲ್ಲೂ ಉತ್ತರ ವಿಲ್ಲಾ, ಉತ್ತರ ಸಿಗದೇ ನಾನೂ ಅವರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದೇನೆ. ದಯವಿಟ್ಟು ಈ ಲೇಖನ ಓದಿದ ನೀವಾದ್ರೂ ಉತ್ತರ ಹೇಳ್ತೀರಾ ಪ್ಲೀಸ್ .







Saturday, March 2, 2013

ದೊಡ್ಡವರೆಲ್ಲಾ ಜಾಣರಲ್ಲಾ ...............!!! ಮಗ ಕಲಿಸಿದ ಜೀವನ ಪಾಠ


ಜ್ಞಾನದ ಹಣತೆ  ಬೆಳಗಿಸಲು ಕಿರಿಯರಾದರೇನು  ??


ನಮಸ್ತೆ ಬಹಳ ದಿನಗಳ ನಂತರ ಮತ್ತೆ ಬರೆಯಲು ಕುಳಿತೆ. ಹೌದು ಎರಡು ವಾರಗಳ ಹಿಂದೆ  ಪ್ರೀತಿಯ ಗೆಳೆಯ ಮಣಿಕಾಂತ್ ರವರ ಪುಸ್ತಕ ಬಿಡುಗಡೆ  ಕಾರ್ಯಕ್ರಮ ಮುಗಿಸಿ ಬೆಂಗಳೂರಿನಿಂದ ಬ್ಲಾಗ್ ಮಿತ್ರರ ಸ್ನೇಹದಲ್ಲಿ ಮಿಂದು ಹೊಸ ಹುರುಪಿನಿಂದ ಮೈಸೂರಿಗೆ ಬಂದೆ. ಮನೆ ಪ್ರವೇಶಿಸುತ್ತಿದ್ದಂತೆ ನನ್ನ ಸಹೋದರ ಭಾನು ಪ್ರಸಾದ್ ಕಾಣಿಸಿದ. ಉಭಯ  ಕುಶಲೋಪರಿ ಮುಗಿಸಿ , ಮಾತಾಡುತ್ತಾ ಕುಳಿತೆವು. ಆ ಮಾತಿನ ನಡುವೆ ಅವನು ಒಂದು ಸನ್ನಿವೇಶವನ್ನು  ಬಿಚ್ಚಿಟ್ಟ. ಮನಸಿಗೆ ಹೌದಲ್ವಾ ಅನ್ನಿಸಿತು, ಹಾಗಾಗಿ ಇದಕ್ಕೆ ಒಂದು ಕಥಾ ರೂಪ ಕೊಟ್ಟಿದ್ದೇನೆ , ಒಮ್ಮೆ ಓದಿ ನಿಮಗೆ ಇಷ್ಟವಾಗಬಹುದು.


ಆಗತಾನೆ ಕಂಪನಿಯ ಕೆಲಸ ಮುಗಿಸಿ ಮನೆಗೆ ಬಂದು ಕುಳಿತೆ, ಬೆಳಗ್ಗಿನಿಂದಾ ಒಂದೇ ಸಮಾ ಕೆಲಸ  ಒತ್ತಡ ಒತ್ತಡ  ಒತ್ತಡ , ಹೌದು ನನ್ನ ಕೆಲಸವೇ ಹಾಗೆ ನನ್ನ ಕಂಪನಿಯವರು ಹೆಚ್ಚಿನ ಹೊರೆ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದಾರೆ. ಮೊದಲೇ ನಮ್ಮ ಕಂಪನಿ  ಒಂದು. ಎಂ. ಏನ್. ಸಿ.  ನನ್ನ ಒಡನಾಟ ಹಲವಾರು ವಿದೇಶಿ ಕಂಪನಿಗಳೊಂದಿಗೆ ,  ಗ್ರಾಹಕರ ಬೇಡಿಕೆ ಪೂರೈಸುವ , ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜವಾಬ್ದಾರಿ ನನ್ನದು. ನನ್ನ ಕೆಲಸದ ಬಗ್ಗೆ ನನ್ನ ಕಂಪನಿಯವರಿಗೆ ಅತೀವ ನಂಬಿಕೆ, ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತೇನೆ ಎಂಬ ಭರವಸೆ ಹಾಗಾಗಿ  ನನಗೆ ಹೆಚ್ಚಿನ ಹೊರೆ ಹೊರಿಸಿದ್ದಾರೆ. ನಾನೂ ಸಹ ನನ್ನ ಕೆಲಸದ ಬಗ್ಗೆ ಅತೀವ ಕಾಳಜಿ ವಹಿಸುತ್ತೇನೆ, ನನ್ನ ಕೆಲಸದಲ್ಲಿ ನನ್ನನ್ನೇ ಮರೆಯುತ್ತೇನೆ. ಇಂತಹ ಸನ್ನಿವೇಶದಲ್ಲಿ ಮನೆಗೆ ಬರುವ ವೇಳೆ ನಿರ್ದಿಷ್ಟ ವಾಗಿರುವುದಿಲ್ಲ .ಈ ಎಲ್ಲಾ ವರ್ತುಲದಲ್ಲಿ ಜೀವಿಸುತ್ತಿರುವ ಇರುವ ನನ್ನ ಹೆಸರು "ಆನಂದ"  .


ಮನೆಗೆ  ಸುಸ್ತಾಗಿ ಬಂದ  ನಾನು  ಲ್ಯಾಪ್ ಟಾಪ್  ಕಿಟ್ಟನ್ನು ಒಂದೆಡೆ  ಬಿಟ್ಟು , ಅಲ್ಲೇ ಇದ್ದ ಸೋಫಾದ ಮೇಲೆ ಒರಗಿದೆ. ಒಳಗಿಂದ ಬಂದ  ನನ್ನ ಪ್ರಿಯ ಪತ್ನಿ     ಅನುರೂಪ   ನಗು ನಗುತ್ತಾ ಬಂದು ಪಕ್ಕದಲ್ಲಿ ಕುಳಿತು  ರಮಿಸಿ , "ಆನಂದ್ ಫ್ರೆಶ್ ಆಗಿಬನ್ನಿ  ಕಾಫಿ ಕೊಡ್ತೀನಿ'  ಅಂದಳು . ನಾನೂ ಸಹ ಯಾಂತ್ರಿಕವಾಗಿ  ಬಾತ್ ರೂಂ ಗೆ ಹೋಗಿ ಫ್ರೆಶ್ ಆಗಿ ಬಂದೆ ,

ಡೈನಿಂಗ್ ಟೇಬಲ್ ಮೇಲೆ ಬಿಸಿ ಬಿಸಿ ಪಕೋಡ  ಜೊತೆ ನಮ್ಮ ಹರಟೆ ನಡೆದಿತ್ತು. ಬಿಸಿ ಬಿಸಿ ಪಕೋಡದ ಜೊತೆ ಕಾಫಿಹೀರುತ್ತಿದಂತೆ  ಕಂಪನಿಯ ಕೆಲಸದ ಆಯಾಸ  ಆವಿಯಾಗಿ ಮಾಯವಾಗಿತ್ತು. ಅಷ್ಟರಲ್ಲಿ ನನ್ನ ಒಬ್ಬನೇ ಮಗ "ಅನೂಪ್ " ಒಳಗೆ ಬಂದವನೇ  ಪಪ್ಪಾ ಅಂತಾ ಬಂದು ಅಪ್ಪಿ ಕೊಂಡ ,


          ಅನೂಪ್ :-) "ಏನ್ ಪಪ್ಪಾ ಎಷ್ಟು ದಿನ ಆಯ್ತು ನಿಮ್ಮನ್ನ ನೋಡಿ   , ಕಳೆದ ಒಂದು ವಾರದಿಂದ    ನೀವು                   ನನಗೆ       ಸಿಕ್ತಾ ಇಲ್ಲ.                           ನಿಮ್ಮಬಳಿ  ಅರ್ಜೆಂಟ್  ಮಾತಾಡ್  ಬೇಕಾಗಿತ್ತು , ನಿಮ್ಮ ಮೊಬೈಲ್ ಗೆ ಟ್ರೈ ಮಾಡಿದೆ ನೀವು ಸಿಗಲಿಲ್ಲ ಅದಕ್ಕೆ                    ಮೇಲ್  ನಲ್ಲಿ ಮೆಸೇಜ್ ಇಟ್ಟೆ"        

ನಾನು :-)  
                "ಸಾರಿ ಮಗನೆ , ಬಹಳ ಬ್ಯುಸಿ ಕಣೋ  , ಟೈಮ್ ಸಿಕ್ತಾಇಲ್ಲ , ಕಂಪನಿ  ಮ್ಯಾನೇಜ್ಮೆಂಟ್  ಬಹಳ ಕಷ್ಟ ಆಗಿದೆ.                         ಅದಕ್ಕೆ ನೋಡು ಮನೆ ಕಡೆ ಬರೋಕೆ ಆಗ್ತಾ ಇಲ್ಲ. " ಮತ್ತೆ ಏನ್ ಸಮಾಚಾರ ?


ಅನೂಪ್ :-) 
                 "ಪಪ್ಪಾ  ನಮ್ಮ ಶಾಲೆಯಲ್ಲಿ  ಸ್ಟೂಡೆಂಟ್ಸ್ ಅಪ್ಪಂದಿರ  ಒಂದು ಮೀಟಿಂಗ್ ಕರೆದಿದ್ದಾರೆ , ಅಪ್ಪಂದಿರು ಮಾತ್ರಾ                         ಬರಬೇಕಂತೆ"  
                 
ನಾನು:-)  
              "ನಿಮ್ಮ ಸ್ಕೂಲ್ ನವರಿಗೆ ಬೇರೆ ಕೆಲಸ ಇಲ್ವಂತಾ  , ಮನೆಯಲ್ಲಿ  ಇರುವ ಪೇರೆಂಟ್ಸ್ ಪೈಕಿ  ಅಪ್ಪ ಅಥವಾ ಅಮ್ಮ                 ಇಬ್ಬರಲ್ಲಿ  ಒಬ್ಬರು ಬಂದ್ರೆ  ಸಾಲದಂತಾ ?? "

ಅನೂಪ್ :-) 
               "ಇಲ್ಲಾ ಪಪ್ಪಾ  ಅಪ್ಪಂದಿರು ಮಾತ್ರ ಬರಬೇಕಂತೆ , ಮುಂದಿನ ಶುಕ್ರವಾರ, ಪ್ಲೀಸ್ ಪಪ್ಪಾ ಇಲ್ಲಾ ಅಂತ  ಅನ್ನ                           ಬೇಡಿ  , ನೀವು ಬರಲೇ ಬೇಕು" 

ನಾನು :-)              
                "ಇಲ್ಲಾ ಅನೂಪ್  ನನಗೆ ಸಾಧ್ಯವಿಲ್ಲ  ನಿಮ್ಮ ಸ್ಕೂಲ್ ನವರಿಗೆ ಒಂದು ಲೆಟರ್ ಕೊಡ್ತೀನಿ  ಅದನ್ನು ಅವರಿಗೆ ಕೊಡು                  , ನನಗೆ ಕಂಪನಿಯ ಕೆಲಸ ಜಾಸ್ತಿ  ಬಿಡುವು ಸಿಗೋಲ್ಲ. ಕಂಪನಿ ಮ್ಯಾನೇಜ್ಮೆಂಟ್ ಬಗ್ಗೆ  ನಾನು                                            ಒಂದುಟ್ರೇನಿಂಗ        ಕೊಡಬೇಕಾಗಿದೆ,  ವಿದೇಶಿ ಕಂಪನಿಯ ಹಲವರು ಬರುತ್ತಾರೆ. ಮುಂದೊಮ್ಮೆ ನೋಡೋಣ ಸಾಧ್ಯಾ ಆದಾಗ. " ಅಂದೆ .

ಅನೂಪ್ :-)  
               ಇಲ್ಲಾ ಪಪ್ಪಾ ನೀವು ಬರದಿದ್ದರೆ , ನನಗೆ ಕಷ್ಟಾ ಆಗುತ್ತೆ, 

ನಾನು:-)
            " ಯಾಕೋ ಸ್ಕೂಲಿನಲ್ಲಿ ಏನಾದ್ರು ಯಡವಟ್ಟು ಮಾಡಿಕೊಂಡ್ಯ ?? ಏನ್ ಸಮಾಚಾರ ,                                          ಸ್ಕೂಲಿನವರು ಯಾಕೆ     ನನ್ನನ್ನು ಕರೆಯುತ್ತಿದ್ದಾರೆ"?  ಅಂದೇ ,
                ಮಗ ರಾಯ ಕೋಪ ಮಾಡಿಕೊಂಡು ಅಳುತ್ತಾ ತನ್ನ ರೂಮಿಗೆ ಹೋಗಿ  ಬಾಗಿಲನ್ನು  ರಪ್                                                 ಅಂತಾ ಬಾಗಿಲು ಮುಚ್ಚಿಕೊಂಡಾ 

ಇದನ್ನು ಗಮನಿಸಿದ ಪತ್ನಿ " ರೀ ನಿಮಗೆ ಮಗನಿಗಿಂತಾ  ನಿಮ್ಮ ಕಂಪನಿಯೇ ಜಾಸ್ತಿಯಾಯ್ತಾ ?"
ಅಂತಾ ನನ್ನನ್ನು  ಗದರಿ ಪಾಪ ಅನೂಪ್  ಇನ್ನೂ ಏನೂ ತಿಂದಿಲ್ಲ  ಅದೇನ್ ಮಾಡ್ತೀರೋ ಗೊತ್ತಿಲ್ಲಾ  ನೀವು ಶುಕ್ರವಾರ ಅನೂಪ್ ಸ್ಕೂಲಿಗೆ ಹೋಗ್ತೀರಾ ಅಷ್ಟೇ  ಅನ್ನುತ್ತಾ  ಮಗನನ್ನು  ಸಂತೈಸಲು  ನಡೆದಳು.  ನಾನೂ ಸಹ ಅವಳ ಹಿಂದೆ ನಡೆದೇ. 

ಮಗನನ್ನು ಸಂತೈಸಿ  ಊಟ ಮಾಡಿಸಿ ಸ್ಕೂಲಿಗೆ ಬರುವುದಾಗಿ ಮಾತುಕೊಟ್ಟೇ .ಮಾರನೆಯ ದಿನ  ಮಗನ ಸ್ಕೂಲಿಗೆ  ಫೋನ್ ಮಾಡಿ  ಅಪ್ಪಂದಿರ ಭೇಟಿ ಕಾರ್ಯಕ್ರಮದ ವಿವರ ಪಡೆದೆ. ಮಧ್ಯಾಹ್ನ  ಹನ್ನೆರಡಕ್ಕೆ  ಕಾರ್ಯಕ್ರಮ ಇರುವುದಾಗಿ ತಿಳಿಸಿದರು.   ಮುಂದಿನ ಶುಕ್ರವಾರ  ಬೆಳಿಗ್ಗೆ  ಇದ್ದ  ಮೀಟಿಂಗ್ ಗಳನ್ನೂ  ಮೂರು ಘಂಟೆಗೆ  ಮುಂದೂಡಲು ಕಂಪನಿಯ ನಿರ್ವಾಹಕರಿಗೆ ಹೇಳಿದೆ. ಆದರೆ ಮನದಲ್ಲಿ ಮಗನ ಶಾಲೆಯಲ್ಲಿ  ಸ್ಟೂಡೆಂಟ್ ಅಪ್ಪಂದಿರನ್ನು  ಯಾಕೆ  ಕರೆದಿದ್ದಾರೆ ? ಎಂಬ ಬಗ್ಗೆ ಅಚ್ಚರಿಯಾಗಿತ್ತು.

ಹಾಗು ಹೀಗೂ ದಿನಗಳು ಸರಿದವು, ಶುಕ್ರವಾರ ಬಂದಿತು  ಮಗನ ಸ್ಕೂಲಿಗೆ ತೆರಳುವ ಸಮಯ ಬಂತು. ಮಗನೂ ಸಹ   ಬಹಳ  ಖುಷಿಯಿಂದ  ಸಿದ್ಧನಾದ , ಸರಿ ನಾನೂ ಮತ್ತು ಅನೂಪ್  ನನ್ನವಳಿಗೆ ವಿಶ್ ಮಾಡಿ ಕಾರಿನಲ್ಲಿ ಹೊರಟೆವು.  ದಾರಿಯಲ್ಲಿ  ಸಾಗುತ್ತಿದ್ದ ಒಂದು ಕಡೆ  ಅನೂಪ್ ಕಾರನ್ನು ನಿಲ್ಲಿಸಲು  ಹೇಳಿದ.  ನನಗೆ ಅಚ್ಚರಿ!   "ಯಾಕೆ ಅನೂಪ್  ಅಂದೇ'.

ಅನೂಪ್ :-) 
                  "ಪಪ್ಪಾ  ಬನ್ನಿ ಪಪ್ಪಾ ಇನ್ನೂ ಟೈಮಿದೆ  , ನಿಮ್ಮ ಹತ್ತಿರ ಸ್ವಲ್ಪ ಮಾತಾಡ ಬೇಕೂ "                                          ಅಂದಾ ಇಬ್ಬರೂ  ಅಲ್ಲೇ ಇದ್ದ ಒಂದು ಪಾರ್ಕಿನಲ್ಲಿ ಕುಳಿತೆವು  ನನಗೆ ಇದೆಲ್ಲಾ  ವಿಚಿತ್ರವಾಗಿತ್ತು. 


ನಾನು  :-) 
                "ಅಲ್ಲಾ ಕಣೋ  ಅನೂಪ್  ಇದೇನು ಇವತ್ತು ನಿನ್ನ ವರ್ತನೆ  ವಿಚಿತ್ರವಾಗಿದೆ, ನೀನಿನ್ನೂ ಹೈಸ್ಕೂಲು ಹುಡುಗ                           ಒಂಬತ್ತನೇ  ಕ್ಲಾಸು , ಏನ್ ವಿಚಾರ  ಹೇಳಪ್ಪ ಅಂದೇ "

ಅನೂಪ್ :-) 
                  ಪಪ್ಪಾ   ನನ್ನ ಸ್ಕೂಲಿನಲ್ಲಿ  ಅಪ್ಪಂದಿರನ್ನು  ಯಾಕೆ ಕರೆಸುತ್ತಿದ್ದಾರೆ ? ಅಂತಾ ತಿಳಿದು ಕೊಳ್ಳುವ ಆಸಕ್ತಿ ಇಲ್ಲವ                         ಪಪ್ಪಾ  ?              ಅಂದಾ 

ನಾನು:-) 
                ಯಾಕೆ ಕರೆಸುತ್ತಾರೆ ಎಲ್ಲೋ  ಫೀಸ್ , ಅಥವಾ ಡೊನೆಶನ್  ಕೇಳೋಕೆ ಇರಬೇಕೂ, ಇನ್ಯಾಕೆ ? ಕರೆಸುತ್ತಾರೆ .