Wednesday, August 24, 2011

ಮೂರು ಪುಸ್ತಕಗಳ ಬಿಡುಗಡೆಯಲ್ಲಿ, ನೂರಾರು ತುಂಟಾಟ ಮಾಡುವ ಜನ ಸೇರಿದ್ದರಲ್ಲಿ!!!!





ಬನ್ನಿ ನಮಸ್ಕಾರ ನಿಮ್ಮನ್ನ ಇದ್ರಲ್ಲಿ ಕೂಡಿಹಾಕ್ತೀನಿ !!!
ಏನೇ ಅನ್ನಿ ಈ ಅಗಸ್ಟ್ ತಿಂಗಳು ಬಂದ್ರೆ ಏನೋ ಒಂತರ ಮಜಾ ಕಣ್ರೀ. ಯಾರಿಗೂ ಗೊತ್ತಿಲ್ಲದ ನಾನು ಕಳೆದ ವರ್ಷ  ಆಗಸ್ಟ್ ತಿಂಗಳಲ್ಲಿ ನಡೆದ  ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಾಗು ಬ್ಲಾಗ್ ಮಿತ್ರರ ಕೂಟದಲ್ಲಿ  ಸಿಲುಕಿ  ಎಲ್ಲರೊಳಗೆ ಒಬ್ಬನಾದೆ.!!!ಬಹಳಷ್ಟು ಜನ ಆತ್ಮೀಯ ಗೆಳೆಯರನ್ನು ತಂದು ಕೊಟ್ಟ ಆ ದಿನ ಮರೆಯಲಾರೆ. ಹಾಗೆ ಈ ಬಾರಿಯೂ  ಸೃಷ್ಟಿ-ತುಂತುರು ಸಂಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ  ಕಳೆದ  ಭಾನುವಾರ "ಪ್ರೀತಿ ಏನನ್ನಲಿ ನಿನ್ನ, ಹೆಜ್ಜೆ ಮೂಡದ ಹಾದಿಯಲ್ಲಿ, ಮಂಜು ಕರಗುವ ಮುನ್ನ" ಮೂರು ಪುಸ್ತಕಗಳ ಲೋಕಾರ್ಪಣೆಯಾಯ್ತು. ಸಮಾರಂಭದಲ್ಲಿ ನಾ ಕಂಡ ದೃಶ್ಯಗಳನ್ನು ನಿಮ್ಮೊಡನೆ ಹಂಚಿಕೊಂಡಿರುವೆ."ನಗು ಬಂದರೆ ಚೌಕಾಸಿ ಮಾಡದೆ ನಕ್ಕು ಬಿಡಿ" ಇಲ್ಲದಿದ್ದರೆ  ನಿಮ್ಮ ಮುಂದಿರುವ ಕಂಪ್ಯೂಟರ್ ಸ್ಕ್ರೀನ್ಗೆ  ಕೋಪದಿಂದ ಒಂದು ಗುದ್ದು ಕೊಡಿ!!! ಒಟ್ಟಿನಲ್ಲಿ ಏನಾದರೂ ಮಾಡಿ ಬನ್ನಿ ನನ್ನ ಜೊತೆ  ದೃಶ್ಯ ಹಾಸ್ಯ ಮೇಳಕ್ಕೆ.[ ದಯಮಾಡಿ ಯಾರೂ ಇದನ್ನು ವಯಕ್ತಿಕವಾಗಿ ತೆಗೆದುಕೊಳ್ಳದೆ ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ನಕ್ಕು ಬಿಡಿ.]  
           ಹೆಜ್ಜೆ  ಮೂಡದ ಹಾದಿಯಲ್ಲಿ,"ಮಂಜು ಕರಗುವ ಮುನ್ನ ,ಪ್ರೀತಿ ಏನೆನ್ನಲಿ ನಿನ್ನ !!!!"
ಯಾರ್ಯಾರು ಬರ್ತಾರೋ ಗೊತಾಗ್ತಿಲ್ವಲ್ಲಾ !!!
ಕುಂ.ವೀ ಬಂದ್ರೂ, ಕುಂ. ವೀ. ಬಂದ್ರೂ  ದಾರಿ ಬಿಡಿ.
ಪ್ರಕಾಶಕರ  ಸ್ಟೈಲು ನೋಡಿ ಸ್ವಾಮೀ.!!!!
ಗಾದೆ  ಸಾಮ್ರಾಜ್ಯದ ಮಹಾರಾಣಿ  , ಯುವರಾಣಿ ಯೊಂದಿಗೆ !!!
 ಇಬ್ಬರು ಹೆಗ್ಡೆ ಗಳು  ಹಿಂಗೆ ಬಂದ್ರೆ ಹೆದರ್ಕೆ ಆಗಲ್ವಾ !!!!ಸರ್
ಪ್ರಕಾಶಣ್ಣ ಬಂದ ರಭಸಕ್ಕೆ ಹೆದರಿದ ಡಿ.ಜಿ.ಮಲ್ಲಿಕಾರ್ಜುನ್ 
ನಲ್ಲೆಯ ನೆನಪಿನಲ್ಲಿ ಸುಂದರ ಕನಸು !!!! ಸಧ್ಯದಲ್ಲೇ ಆಗುವುದು ನನಸು.
ದೊಡ್ಡಮನಿ ಮಂಜು ಕರಗಿದ ಸಮಯ!!!
ಒಳ್ಳೆ ಕಾಫಿ ಕುಡೀತಾ  ನಕ್ಕರೆ ಒಳ್ಳೆ ಮಜಾ !!! ಆಲ್ವಾ ಸತ್ಯನಾರಾಯಣ್ ಸರ್ ??
ಮಕ್ಕಳ ಪ್ರಾರ್ಥನೆ  ಗಣಪನಿಗೆ ಅರ್ಪಣೆ !!!
ನಿರೂಪಕರೆ ಬನ್ನಿ ನಿಮಗೆ ಸ್ವಾಗತ !!!
ಇನ್ನೂ ಯಾಕ ಬಲಿಲ್ಲವ್ವಾ  ಪುಸ್ತಕದವಾ  !!!
ಈ ದೀಪ ಹಚ್ಚಿದ ಗಳಿಗೆಯಲ್ಲಿ  ಮೂರೂ ಪುಸ್ತಕಗಳು ಪ್ರಸಿದ್ದಿಯಾಗಲಿ  !!!! ಅಂದ್ರೂ ಅತಿಥಿಗಳು .
ಯಾವ ಹಾಡ ಹಾಡಲಿ  ಎಂದಿದ್ದಾರೆ ಶಶಿಧರ್ ಕೋಟೆ!!!
ನಮ್  ಹುಡುಗನ  ಪುಸ್ತಕ ಕಣ್ರೀ !!!!
ಹುಚ್ಚು ಪ್ರೇಮದ ಹತ್ತಾರು ಕಥೆಗಳನ್ನು ಹೇಳಿದ  ರೂಪ .ಎಲ್.ರಾವ್.!!!! 
ವೇದಿಕೆಯಲ್ಲಿ  ಮಿಂಚಿದ ಪುಟ್ಟ ಬೊಂಬೆಗಳು  ಈ  ಮಕ್ಕಳು!!!!
ಮಕ್ಕಳೇ  ಈ ಹಣ್ಣುಗಳು ನಿಮಗೆ ಸೇರಬೇಕಾಗಿತ್ತು !!! ಆದರೂ ನನಗೆ  ಕೊಟ್ಟಿದ್ದೀರ  ಥ್ಯಾಂಕ್ಸ್.
 ಹೊಸ ಪುಸ್ತಕಗಳು ಇಲ್ಲಿವೆ ನೋಡಿ, ಆದ್ರೆ ಬಿಟ್ಟಿ ಓದಬೇಡಿ!!!!
ಫೋಟೋ ತೆಗೆಯಲು ಗುದ್ದಾಟ  ಇಲ್ಲಿ !!!!!
ಅದ್ಸರಿ,  ಇಲ್ಲೇನ್ ನಡೀತಿದೆ  ಅಂಕಲ್ ಅಂದ್ವು  ಈ ತುಂಟ ಮಕ್ಕಳು !!!
ಅಂತೂ ನಾನೂ ಒಂದ್ ಫೋಟೋ ತೆಗ್ದೆ  ಸರ್ !!! ಅಂದ್ರೂ ಇವರೂ .
ಈ ಸಾಹಿತ್ಯ ಇದ್ಯಲ್ಲಾ , ಒಂತರಾ ರುಚಿಯಾದ ಕಾಫಿ ಇದ್ದಹಾಗೆ !!!

ತುಂಬಾ ಖುಷಿ  ಆಗಿದೆ ಗೊತ್ತಾ!!!!!!
ಎಲ್ಲಿದ್ದೀಯ?? ಕಾಣಿಸ್ತಾ ಇಲ್ಲಾ!!!
ಈ ಬ್ಲಾಗು, ಫೋಟೋ, ಅಳಿಯಂದ್ರ ಕಾಟ ಎಲ್ಲಾ ಸಾಕಾಯ್ತು ಮಾರ್ರೆ !!!
ಕೋರಿಕೆ ಮೇರೆಗೆ ಮತ್ತೊಮ್ಮೆ ಬಿಡುಗಡೆ !!!!
"ಈ ಮಾತಲಿ ಏನೋ ಇದೆ" ಅಂತಾ ಭಾಷಣ ಕೇಳಿದ ಶಶಿ ಮೇಡಂ, ಅಜಾದ್, ಶಿವೂ 
ಬರೆಯೋಕಿಂತಾ ವೇದಿಕೆಯಲ್ಲಿ ಬಹಳ ಹೊತ್ತು  ಕುಳಿತು  ಮಾತಾಡೋದು ಕಷ್ಟಾ ಕಣ್ರೀ ಅಂದ್ರೂ ಅತಿಥಿಗಳು. !!!
ಕುಂ. ವಿ. ಮಾತಿನ ಲಹರಿ ಹೀಗಿತ್ತು !!!
ಈ ಐ.ಟಿ. ಮಂದಿನೂ ಚೆನ್ನಾಗೆ  ಸಾಹಿತ್ಯ ಕೃಷಿ ಮಾಡ್ತಾರೆ ರೀ!!!
ರಮೇಶ್ ಕಾಮತ್ ಸರ್ ಭಾಷಣ ವೈಭವ.
ನಮ್ಮ ಪುಟ್ಟ  ಸಂಸಾರ ಇದೆ ಸರ್  ಅಂದ್ರೂ ಪರಾಂಜಪೆ!!!!
ಅಲ್ಲೇನ್  ನಡೀತಾ ಇದೆ  ಗೊತ್ತಾಗ್ತಿಲ್ಲಾ !!!
ಅಂಕಲ್ ಪುಸ್ತಕ ಬಿಡುಗಡೆ ಅಂದ್ರೆ ಏನು???
ಹೋಗಿ ಅಂಕಲ್ ನನಗೇನೂ ಅರ್ಥಾ ಆಗ್ತಿಲ್ಲಾ !!!
ಅಂಕಲ್ ಎಲ್ರೂ ಯಾಕೆ ಬಂದಿದ್ದಾರೆ ಇಲ್ಲಿ???
 ನಂಗೆ ಅಂತಾ ಯಾವ್ದು ಪುಸ್ತಕ ಇಲ್ಲಿಲ್ವಾ???
ಎಲ್ಲೋದ್ಲು ನಮ್ಮ ಪುಟ್ಟೀ??  ಇದು ಉಮೇಶ್ ವಶಿಸ್ಟ್ ಸ್ಟೈಲು. !!!

Monday, August 15, 2011

ಈ ಹಳ್ಳಿ ಕಾಲೇಜಿನಲ್ಲಿ ಸದ್ದಿಲ್ಲದೇ ಸಾಗಿದೆ ಜ್ಞಾನ ಸಿಂಚನದ ರಥ !!!ಚಿಕ್ಕ ಗಣೇಶ , ಅಂಬಿಕ ಮೇಡಂ ತೋರುತ್ತಿದ್ದಾರೆ ಅದಕ್ಕೊಂದು ಪಥ!!!!!



"ಗೊಮಟಗಿರಿ  ಬೆಟ್ಟ "

ಕಳೆದ ಶನಿವಾರ ರಜಾದಿನವಾಗಿತ್ತು. ನಮ್ಮ ಸತ್ಯ ರವರು ಫೋನ್ ಮಾಡಿ , ಬಾಲಣ್ಣ ಫ್ರೀ ನಾ , ಅಂದ್ರೂ , ನಾನು ಯಾಕೆ ಸಾರ್?? ಅಂದೆ, ಇನ್ನರ್ಧ ಘಂಟೆಯಲ್ಲಿ ನಿಮ್ಮ ಮನೆಯಲ್ಲಿರುತ್ತೇನೆ ರೆಡಿ ಇರೀ , ಒಳ್ಳೆ ನೀರು ಬಂದಿದ್ಯಂತೆ  "ಚುಂಚನಕಟ್ಟೆ" ಗೆ ಹೋಗಿಬರೋಣ    ಅಂದ್ರೂ. ಕಟ್ ಮಾಡಿದ್ರೆ  ನಾವು ನನ್ನ ಆಕ್ಟಿವಾ ದಲ್ಲಿ  ಚುಂಚನಕಟ್ಟೆ  ಹಾದಿ ಹಿಡಿದಿದ್ದೆವು. ಮೋಡಗಳ ಮುಸುಕಿನ ವಾತಾವರಣದಲ್ಲಿ ಮಳೆರಾಯನ   ಕಣ್ಣಾ ಮುಚ್ಚಾಲೆ , "ಇಲವಾಲ" ಬರುತ್ತಿದಂತೆ  ಮಳೆರಾಯನ ಆಗಮನ ವಾಗಿತ್ತು. ಎಂತಾ ಕೆಲ್ಸಾ ಸರ್ ಏನ್ಮಾಡೋದು??? "ನನ್ನ ಬಳಿ ಜಾಕೆಟ್ ಇದೆ ನಿಮ್ಮ ಬಳಿ ಇಲ್ಲ ಮುಂದೆ ಹೋದ್ರೆ ನೀವು ಮಳೆಯಲ್ಲಿ ನೆನೆದು ತೊಪ್ಪೆ ಆಗ್ತೀರಿ" ಅಂದೇ. ಇರಿ ಬಾಲಣ್ಣ  ಅಂದಾ ಸತ್ಯ ಇಲ್ಲೇ ಹತ್ತಿರದಲ್ಲಿ ಎಲ್ಲಾದ್ರೂ ನೋಡದೆ ಇರೋಜಾಗಕ್ಕೆ ಹೋಗೋಣ ಅಂದ್ರೂ . ಆಗ ಹೊಳೆದದ್ದು  ಹತ್ತಿರದಲ್ಲೇ ಇದ್ದ ಜೈನ ಕ್ಷೇತ್ರ  "ಗೊಮಟಗಿರಿ"  
"ಸುಂದರ ಬಾಹುಬಲಿ ಮೂರ್ತಿ"
                   ತುಂತುರು ಮಳೆಯಲ್ಲೇ ಅಲ್ಲಿಗೆ ತಲುಪಿದೆವು. ಕೆಳಗಡೆ ಬೆಟ್ಟದ ತಪ್ಪಲಿನಲ್ಲಿ ನಮ್ಮನ್ನು ಸ್ವಾಗತ ಮಾಡಿದ್ದು  ಚಪ್ಪಲಿಗಳ ಸಾಲು ಸಾಲು. ಮಾಮೂಲಿನಂತೆ  ಅದೇ ಸಿಟಿ ಹೈಕಳು   ಪಿಕ್ನಿಕ್  ಗೆ ಬಂದಿರ್ತವೆ ಅಂತಾ  ಅನ್ಕೊಂಡು  ಬೆಟ್ಟ ಹತ್ತಲು  ಹತ್ತಿರ ಹೋಗುತ್ತಿದ್ದಂತೆ   ಶಂಕರ್  ಎನ್ನುವ  ಇತಿಹಾಸ ಪ್ರಾಧ್ಯಾಪಕರ ಪರಿಚಯವಾಯಿತು. ಇವರು ಸಹ ಖುಷಿಯಾಗಿ ಪರಿಚಯಮಾಡಿಕೊಂಡು  ಮೇಲೆ ಒಳ್ಳೆಯ ಕಾರ್ಯಕ್ರಮ ನಡೀತಿದೆ ಹೋಗಿ ಸಾರ್ ಅನ್ನುತ್ತಾ  ಹೊರಟರು  . ಬೆಟ್ಟ  ಏರಿದ  ನಮಗೆ  ದರ್ಶನ ನೀಡಿದ ಸುಂದರ ಬಾಹುಬಲಿ ಮೂರ್ತಿಯ ಜೊತೆಗೆ  ಒಂದು ಗುಂಪಿಗೆ  ಯಾರೋ ಸಾಹಿತ್ಯದ ಪಾಠ ಮಾಡುತ್ತಿರುವ ಹಾಗೆ ಅನ್ನಿಸಿ  ಪ್ರವೇಶ  ಮಾಡಿದೆವು. ಒಬ್ಬ ಹೆಣ್ಣುಮಗಳು  ತನ್ನ ಮುಂದೆ ಕುಳಿತ  ಹಲವು ಹುಡುಗ ಹುಡುಗಿಯರಿಗೆ  ಏನನ್ನೋ  ವರ್ಣಿಸುತಿದ್ದರು. ಹಾಗೆ ಒಳಗಡೆ ಹೋದ ನಾವು ಅಲ್ಲಿ ನಡೆಯುತ್ತಿರುವ  ಘಟನೆಯನ್ನು ಮೌನವಾಗಿ ವೀಕ್ಷಿಸಲು  ತೊಡಗಿದೆವು. ಅಲ್ಲಿ ಕಂಡಿದ್ದೆ ಇಂದಿನ ಸಂಚಿಕೆಯ ವಿಶೇಷ.

Sunday, August 7, 2011

ಕನ್ನಡ ನಾಡಿಗೆ ಅನರ್ಘ್ಯ ರತ್ನವ ಕೊಡುಗೆ ನೀಡಿದ ಈ ವಿದೇಶಿ ಕವಿ !!!!!!

ಮೊನ್ನೆ ಶ್ರೀ ರಂಗ ಪಟ್ಟಣಕ್ಕೆ ಹೋಗಿದ್ದೆ ಸ್ನೇಹಿತರೊಬ್ಬರು ಸಿಕ್ಕಿದರು  ಹಾಗೆ ಮಾತಾಡುತ್ತ ಅಚ್ಚರಿ ಹುಟ್ಟಿಸುವ ವಿಚಾರ ತಿಳಿಸಿದರು. ಮನೆಗೆ ಬಂದು ಜಾಲಾಡಿದಾಗ ಒಂದಷ್ಟು ವಿಚಾರ ತಿಳಿಯಿತು.  ಹೌದು ಕನ್ನಡ ನಾಡಿನ ಮಣ್ಣಿನ ಲಕ್ಷಣವೇ ಹಾಗೆ ಅನ್ಸುತ್ತೆ. ಯಾರೇ ವಿದೇಶಿಯರು ಬಂದರು ಕನ್ನಡ ತಾಯಿಯ ಮಡಿಲಿನ ಪ್ರೀತಿಗೆ ಮನಸೋತು ಇಲ್ಲಿಗೆ ಯಾವುದಾದರು ಮರೆಯದ ಕೊಡುಗೆ ನೀಡುತ್ತಾರೆ. ಅದು ಅಂದಿಗೂ ಇತ್ತು ಇಂದಿಗೂ ಇದೆ ಆದರೆ ಇಂತಹ ಮಹನೀಯರನ್ನು ಗುರುತಿಸಿ ನೆನೆಯುವಷ್ಟು  ಸಮಯ ಕನ್ನಡ ತಾಯಿಯ ಮಕ್ಕಳಾದ ನಮಗೆ ಇಲ್ಲಾ .ಬನ್ನಿ ಇಲ್ಲೊಬ್ಬ ಮಹನೀಯರನ್ನು ಪರಿಚಯ ಮಾಡಿಕೊಳ್ಳೋಣ.

Monday, August 1, 2011

ನೀವು ಕುಟುಂಬ ದೊಡನೆ /ಅಥವಾ ಸ್ನೇಹಿತರೊಡನೆ ರಿಲಾಕ್ಸ್ ಮಾಡಲು ಏನುಅನುಕೂಲತೆ ಬೇಕು ????

ಹೌದಲ್ವಾ ಇದೆ ಪ್ರಶ್ನೆ ನನ್ನನ್ನು ಹಲವಾರು ಸರಿ  ಕಾಡುತ್ತಿದೆ. ಎಲ್ಲರಿಗೂ ಗೊತ್ತು ಮನುಷ್ಯನ ಮನಸ್ಸುಹಾಗು ದೇಹ  ದೈನಂದಿನ ದಿನಚರಿ ಯಿಂದ, ಕೆಲಸ ಕಾರ್ಯಗಳ ಒತ್ತಡದಿಂದ , ಪಟ್ಟಣದ ಗದ್ದಲದ ಜಂಜಾಟದ  ವಾತಾವರಣದಿಂದ , ಬಿಡುವಿಲ್ಲದ ದಣಿವಿನಿಂದ  ಮುಕ್ತಿ  ಪಡೆಯಲು  ವಿಶ್ರಾಂತಿ ಪಡೆಯಲು ಬಯಸುತ್ತದೆ. ಸ್ವಲ್ಪ ದಿನ ಈ ಜಂಜಾಟ ಗಳನ್ನು ಮರೆತು ಹಾಯಾಗಿ  ಹೊರಗಡೆ ಎಲ್ಲಾದ್ರೂ ಕುಟುಂಬದೊಡನೆ / ಸ್ನೇಹಿತರೊಡನೆ / ಅಥವಾ ಒಬ್ಬರೇ  ನೆಮ್ಮದಿಯಾಗಿ ಹೋಗಬೇಕೆನ್ನಿಸುತ್ತದೆ. ಈ ರೀತಿಯ ಮಾತುಗಳನ್ನು ನಾವು ಪಡೆ ಪಡೆ ಆಡುತ್ತೇವೆ. "ನನಗಂತೂ ಸಾಕಾಗಿ ಹೋಗಿದೆ  ಎಲ್ಲಾದ್ರೂ ಆಚೆ ಹೋಗಿ ರಿಫ್ರೆಶ್ ಆಗಬೇಕೂ ರೀ "  ಎನ್ನುವ ಮಾತುಗಳು ನಮ್ಮ ಬಾಯಿಂದ ಬರುತ್ತದೆ. ಆದರೆ ಹಲವು ಸಾರಿ ಈ ನಿರೀಕ್ಷೆ ತಪ್ಪಾಗಿ  ಯಾಕಾದ್ರೂ ಹೊರಗೆ ಹೊಫಿದ್ವೋ ಅನ್ನಿಸುತ್ತದೆ. ಇದಕ್ಕೆ ಉತ್ತರ ಕಂಡು ಹಿಡಿಯುವ ಒಂದು ಪ್ರಯತ್ನ ಮಾಡೋಣ ಬನ್ನಿ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.೧] ನೀವುಹೊರಗಡೆ ಕುಟುಂಬ ದೊಡನೆ / ಸ್ನೇಹಿತರೊಡನೆ/ ಒಬ್ಬರೇ ಯಾವ ಜಾಗದಲ್ಲಿ ರಿಲಾಕ್ಸ್ ಮಾಡಲು ಬಯಸುತ್ತೀರಿ? ೨] ನೀವು ಉಳಿಯುವ ಸ್ಥಳದಲ್ಲಿ ನೀವು ನಿರೀಕ್ಷಿಸುವ ಸೌಲಭ್ಯ ಗಳೇನು ??  3 ] ನಿಮ್ಮ ಕಲ್ಪನೆಯ ಪ್ರದೇಶ ಹೇಗಿರ ಬೇಕು ?? ೪] ಯಾವ ಚಟುವಟಿಕೆಯಿಂದ ನಿಮ್ಮ ಮನಸ್ಸು  ಉಲ್ಲಾಸವಾಗಿ ಆ ಜಾಗಕ್ಕೆ ಮತ್ತೊಮ್ಮೆ ಕುಟುಂಬ ದೊಡನೆ / ಸ್ನೇಹಿತರೊಡನ / ಒಬ್ಬರೇ ಹೋಗಬೇಕು ಎನ್ನಿಸುತ್ತದೆ?? ೫]  ಈ ಗಿನ ರೆಸಾರ್ಟ್/ ಹೋಂ ಸ್ಟೇ  ಸಂಸ್ಕೃತಿ ನಿಮಗೆ  ಒಪ್ಪಿಗೆಯಾಗಿದೆಯೇ ??  ನಿಮ್ಮ ಕಲ್ಪನೆಯ ರೆಸಾರ್ಟ್ / ಹೋಂ ಸ್ಟೇ ಹೇಗಿರ ಬೇಕು ?? ಇವುಗಳ ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ .  ಬನ್ನಿ ಒಂದು ಪ್ರಯತ್ನ ಮಾಡೋಣ!!!