
ನಮ್ಮ ಮನಸ್ಸು ಶುದ್ದವಿದ್ದರೆ ಜಗವೇ ಸುಂದರ!!!!{ if our heart and mind is pure everything is pure}
Saturday, February 27, 2010
ಕಳ್ಳನನ್ನು ಪೋಲಿಸ್ ಗೆ ಹಿಡಿದು ಕೊಟ್ರೆ !!ಪೊಲೀಸರು ಕಳ್ಳನನ್ನು ಹಿಡಿದದ್ದು ನಾವೇ ಅನ್ನೋದೇ??

Friday, February 26, 2010
ಮರಳಿನ ಮೇಲೆ ಆಟ ಮಕ್ಕಳಿಗೆ ತುಂಬಾ ಇಷ್ಟ !!




ಮೊನ್ನೆಬೆಂಗಳೂರಿನಲ್ಲಿ ನೆಂಟರ ಮನೆಯ ಗೃಹ ಪ್ರವೇಶ ವಿತ್ತು . ಎಲ್ಲರಿಗೂ ಸಂಬ್ರಮ ಸಡಗರ ಓಡಾಡ ನಡೆದಿತ್ತು.ಪೂಜೆ ಮಾತುಕತೆ ಯಲ್ಲಿ ಜೊತೆಯಲ್ಲಿ ಬಂದಿದ್ದ ಮಕ್ಕಳು ಎಲ್ಲಿ ಹೋದರು ಅಂತ ನೆನಪಿನಲ್ಲಿ ಇರಲಿಲ್ಲ .ನೆನಪಿಸಿಕೊಂಡು ಮಕ್ಕಳು ಯೆಲ್ಲಿಹೊದ್ರು ಅಂತ ನೋಡಿದ್ರೆ ಮನೆಯ ಮುಂದೆ ಅಂಗಳದಲ್ಲಿ ಹರಡಿದ್ದ ಮರಳಿನ ಮೇಲೆ ಮಕ್ಕಳು ಆಟ ಆಡ್ತಾ ಮಕ್ಕಳು ಆನಂದದಿಂದ ಮೈಮರೆತಿದ್ರು!!! ಮಕ್ಕಳ ಮೈ ಮೇಲೆ ಮರಳಿನ ಕಣಗಳು ಸವಾರಿ ಮಾಡಿದ್ದವು.ಏ ಮಕ್ಕಳೇ ಇತ್ತ ಬನ್ರೋ ಮೈ ಮೇಲೆಲ್ಲಾ ಮಣ್ಣು ಹಾಕೊಂಡು ನೋಡ್ರಿ ಬಟ್ಟೆ ಎಲ್ಲ ಕೊಲೆ ಮದ್ಕೊಂಡಿವೆ ಅಂತ ಹಲವರ ದೂರು ಬೇರೆ !! ಆದ್ರೆ ಅಪ್ಪಂದಿರ,ದೊಡ್ಡಪ್ಪಂದಿರ ,ಚಿಕ್ಕಪ್ಪಂದಿರ ಸಪೋರ್ಟು ಮಕ್ಕಳಿಗೆ ಸಿಕ್ಕೆ ಬಿಡೋದೇ. ನಾವು ಹೇಳಿದ್ದು ಇಷ್ಟು ಅಲ್ರಿ ಮಕ್ಕಳಿಗೆ ಬೆಂಗಳೂರಿನಲ್ಲಿ ಮಕ್ಕಳಿಗೆ ಮರಳು ಸಿಕ್ಕಿ ಆಟ ಆಡೋದೇ ಕಷ್ಟ ಅಂತಾದ್ರಲ್ಲಿ ತಡೆಯೋದೆ ಅಂತ ವಾದಿಸಿದ್ವಿ .ಅಲ್ರಿ ನಾವೂ ಮಕ್ಕಳಾಗಿದ್ದಾಗ ಮಣ್ಣು, ನೀರು, ಮರ ಅಂತ ಎಲ್ಲ ತಾರಾ ಆಟ ಆಡಿದ್ವಿ, ಇವರಿಗೆ ಯಾಕೆ ನಿರ್ಭಂದ ವಿಧಿಸಿ ನೀರು ಹತ್ರ ಹೋಗಬೇಡ,ಮಣ್ಣಿನಲ್ಲಿ ಆಡಬೇಡ ,ಮರ ಹತ್ತ ಬೇಡ ಅಂತ ಹೇಳಿ ಎಲ್ಲದರ ಬಗ್ಗೆ ಹೆದರಿಕೆ ಹುಟ್ಟಿಸಿ ಅವರನ್ನು ಹೆದರಿಸಿ ಪುಕ್ಕಲ ರನ್ನಾಗಿ ಮಾಡ್ಬೇಕು ಅಂದದ್ದು ಕೆಲವರಿಗೆ ಆಶ್ಚರ್ಯ ವಾಗಿತ್ತು .ನೀವೇ ಹೇಳಿ ನಾವು ಮಾಡಿದ್ದು ಸರಿನಾ ಅಂತ ??? ಪುಟ್ಟ ಪೋರರು ಮಾಡಿದ ತುಂಟಾಟದ ಚಿತ್ರ ನಿಮಗಾಗಿ.ಎಚ್ಚರ ನಿಮ್ಮ ಬಾಲ್ಯ ನೆನಪಿಗೆ ಬಂದೀತು !!1
Friday, February 19, 2010
ಕಂದು ಬಣ್ಣದ ಹೆಜ್ಜಾರ್ಲೆ [ಸ್ಪಾಟ್ ಬಿಲ್ಲಡ್ ಪೆಲಿಕನ್ ]
ಕಂದು ಬಣ್ಣದ ಹೆಜ್ಜಾರ್ಲೆ ನೋಡದವರು ಯಾರು ಇಲ್ಲ !!ಸಾಮಾನ್ಯ ವಾಗಿ ಈ ಹಕ್ಕಿಯನ್ನು ಬಾತು ಕೋಳಿ ಅಂತ ಭಾವಿಸಿ ನೋಡಿರುತ್ತೇವೆ. ಆದ್ರೆ ಇದು ಕಂದು ಹೆಜ್ಜಾರ್ಲೆ [ಸ್ಪಾಟ್ ಬಿಲ್ಲಡ್ ಪೆಲಿಕನ್] ಅಂತ ಕರೆಯುತ್ತಾರೆ.ಗಂಡು ,ಹೆಣ್ಣು ನೋಡಲು ಒಂದೇ ತರವಿದ್ದು ಸಾಮಾನ್ಯ ವಾಗಿ ಗುಂಪಿನಲ್ಲಿ ವಾಸಿಸುತ್ತವೆ . ವಾಸಕ್ಕೆ ನೀರಿನ ಆಸರೆ ಬೇಕೇ ಬೇಕು.ಇವುಗಳಲ್ಲಿ ಎರಡು ಬಗೆಯ ಪ್ರಬೇದಗಲಿದ್ದು ಇನ್ನೊಂದು ಬಿಲಿಹೆಜ್ಜಾರ್ಲೆ [ಗ್ರೇಟ್ ವೈಟ್ ಪೆಲಿಕನ್] ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.ನಮ್ಮಲ್ಲಿ ಹೆಚ್ಚಾಗಿ ಕಂದು ಹೆಜ್ಜಾರ್ಲೆ ಕಂದು ಬರುತ್ತವೆ.ಇವು ಮೀನಾ ಹಾರಿ ಮೀನು ಬಿಟ್ಟು ಬೇರೆ ಏನನ್ನು ತಿನ್ನಲು ಒಲ್ಲವು.ಭಾನಿನಲ್ಲಿ ಅತಿ ಎತ್ತರಕ್ಕೆ ಹಾರಿ ದೂರದ ಕೆರೆಗಳಿಗೆ ಹೋಗಿ ಮೀನು ಶಿಖಾರಿ ಮಾಡಿ ಜೀವಂತ ಮೀನನ್ನು ತಾಣ ಗಂಟಲ ಬಳಿ ಇರುವ ಚೀಲದಲ್ಲಿ ಇಟ್ಟುಕೊಂಡು ಬಂದು ತನ್ನ ಮರಿಗಳಿಗೆ ಜೀವಂತ ಮೀನಿನ ಗುಟುಕು ಕೊಡುತ್ತದೆ.ನೋಡಲು ಸುಂದರ ಮನೋಹರ ಈ ಹೆಜ್ಜಾರ್ಲೆ ನೀರಿನಲ್ಲಿ ತೇಲುವಾಗ ನೋಡಲು ಅಮೊಘವಾಗಿರುತ್ತದೆ.ನೀವು ನೋಡಿ ಆನಂದಿಸಿ.
Thursday, February 18, 2010
ಹಕ್ಕಿ ಹುಡುಕಾಟ ...೦೩ ನೀಲಿ ಮಿಂಚುಳ್ಳಿ .[ ಕಿಂಗ್ ಫಿಷೆರ್ ]

ಸಾಮಾನ್ಯ ವಾಗಿ ನಿಮ್ಮ ಊರಿನ ಕೆರೆಯ ಬಳಿ ಯಾವುದಾದರು ಮರದ ರೆಂಬೆಯ ಕವಲು, ಅಥವಾ ಕಲ್ಲು ಬಂದೆ ಯಾ ಮೇಲೆ ಇದು ಕುಳಿತಿರುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ.ಇದರದೇ ಜಾತಿಯ ಬೇರೆ ಹಕ್ಕಿಗಳಿಗಿಂತ ಧೈರ್ಯವಂತ ಇದು. ನೀರಮೇಲೆ ಹೆಲಿಕಾಪ್ಟರ್ ನಂತೆ ನಿಂತು ನೀರಿನ ಒಳಗಡೆ ಮೀನು ಕಂಡು ಬಂದ ತಕ್ಷಣ ಮಿಂಚಿನಂತೆ ನೀರಿನೊಳಗೆ ನುಗ್ಗಿ ಕ್ಷಣದಲ್ಲಿ ಮೀನು ಹಿಡಿಯುವ ಚಾಣಾಕ್ಷ ಇದು.ಕ್ಯಾಮರಾಗೆ ಅಪರೂಪಕ್ಕೆ ಸಿಗುವ ಇದು ಮಿಂಚುಳ್ಳಿ ಜಾತಿಯ ಪಕ್ಷಿಗಳಲ್ಲಿ ಇತರ ವರ್ಗದ ಹಕ್ಕಿ ಗಳಿಗಿಂತ ಚಿಕ್ಕದು. ನಿಮ್ಮೂರಲ್ಲಿ ಕಂಡರೆ ನೀವು ನೋಡಿ ಆನಂದಿಸಿ ನಮಗೂ ತಿಳಿಸಿ.
Sunday, February 14, 2010
ಮೈಸೂರಿನ ಕನ್ನಡ ಪುಸ್ತಕ ಜಾತ್ರೆ !! ಅಜ್ಞಾನದ ಜ್ವರಕ್ಕೆ ಒಳ್ಳೆಯ ಮಾತ್ರೆ!!! ಪ್ರಕಾಶಕರೇ ನಿಮ್ಮ ನಗು ಎಲ್ಲಿ??
ಮೈಸೂರಿನಲ್ಲಿ ೨೦೧೦ ರ ಫೆಬ್ರವರಿ ೧೦ ರಿಂದ ೧೪ ರವರೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕನ್ನಡ ಪುಸ್ತಕ ಪ್ರದರ್ಶನ ಹಾಗು ಮಾರಾಟ ಮೇಳ ಏರ್ಪಡಿಸಲಾಗಿತ್ತು. ಕರ್ನಾಟಕದ ಪ್ರಸಿದ್ದ ಪ್ರಕಾಶಕರುಗಳು ಇಲ್ಲಿ ಭಾಗವಹಿಸಿ ಮೈಸೂರಿನ ಜನಕ್ಕೆ ಜ್ಞಾನ ಭಂಡಾರ ತೆರೆದಿಟ್ಟರು.ಸ್ವಾಮೀ ನಾನು ಸಹ ಈ ಮೇಳದಲ್ಲಿ ಪುಸ್ತಕ ಖರೀದಿಸಲು ತೆರಳಿದ್ದೆ , ಅಲ್ಲಿ ನನಗೆ ಕಂಡದ್ದು ಸೋಜಿಗವಾಗಿತ್ತು!!.
--------------------------------------------------------------------------------
ಅಲ್ಲ ಸ್ವಾಮೀ ಪುಸ್ತಕ ಪ್ರದರ್ಶಿಸಲು ಬಂದಿದ್ದ ಅಂಖಿತ ಪ್ರಕಾಶನ, ನವಕರ್ನಾಟಕ ಪ್ರಕಾಶನ , ಸ್ವಪ್ನ ಬುಕ್ ಸ್ಟಾಲ್, ಗೀತ ಬುಕ್ ಹೌಸ್ , ಸಾಹಿತ್ಯ ಭಂಡಾರ, ಪ್ರಸಾರಾಂಗ,ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ದೂರದ ಹುಬ್ಬಳ್ಳಿ,ಧಾರವಾಡ, ಬೆಳಗಾವಿ, ಮಂಗಳೂರು, ಮುಂತಾದ ಕಡೆಗಳಿಂದ ಪ್ರಕಾಶಕರು ಬಂದಿದ್ದು ಮೈಸೂರಿನ ಪುಸ್ತಕ ಪ್ರೇಮಿಗಳಿಗೆ ಹಬ್ಬವಾಗಿತ್ತು!!ಒಟ್ಟಿನಲ್ಲಿ ನಮ್ಮ ಅಜ್ಞಾನದ ಜ್ವರಕ್ಕೆ ಈ ಪುಸ್ತಕ ಜಾತ್ರೆ ಒಳ್ಳೆಯ ಮಾತ್ರೆ !!! ಖಂಡಿತ ಹೌದು. ನಾನು ಸಹ ಪುಸ್ತಕ ಲೋಕದೊಳಗೆ ಒಂದುಸುತ್ತು ಬಂದೆ!! ಒಳಬಂದ ನಾನು /ನನ್ನಂತೆ ಹಲವರು ಸ್ಟಾಲ್ ಗಳೊಳಗೆ ಹೊಕ್ಕರೆ ಮಾನ್ಯ ಪ್ರಕಾಶಕರು /ಅಥವಾ ಅಲ್ಲಿದ್ದ ಮಹನೀಯರು ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ !!ಇನ್ನು ಹೇಳಬೇಕೆಂದರೆ ಅವರಿಗೆ ಅವರ ಪ್ರಕಾಶನದ ಪ್ರಕಟಣೆಯ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಯಾವುದೇ ಉತ್ಸಾಹ ಇರಲಿಲ್ಲ [ನಾನು ಹಲವು ಭಾರಿ ಹೋದಾಗ ಕಂಡುಬಂದ ಸಾಮಾನ್ಯ ದೃಶ್ಯ ], ಅವರ ಹೆಮ್ಮೆಯ ಪ್ರಕಟಣೆಗಳ ಬಗ್ಗೆ ಅವರಿಗೆ ಹೆಮ್ಮೆ ಇರಲಿಲ್ಲ !! ಸಾಮಾನ್ಯ ಓದುಗರ ಪ್ರಶ್ನೆಗಳಿಗೆ ಅಸಹನೆಯ ಉತ್ತರ ಮಾರಾಟಗಾರರಿಂದ ಬರುತಿತ್ತು.ಇಷ್ಟೆಲ್ಲಾ ಅದ್ವಾನಗಳ ನಡುವೆಯೂ ಇದು ಒಂದು ವ್ಯವಸ್ತಿತ ಪ್ರದರ್ಶನವಾಗಿ ಮೈಸೂರಿಗರ ಮನ ಗೆದ್ದಿತು.ಪ್ರದರ್ಶನದ ಒಂದು ನೋಟ ನಿಮಗಾಗಿ.ಮರೆತು ಹೋಗುವ ಮುನ್ನ ಒಂದು ಹಾಸ್ಯ ಸನ್ನಿವೇಶ ನಿಮಗೆ ಹೇಳ್ತೀನಿ ಕೇಳಿ ನಾನು ಹಾಗೆ ಮೈಸೂರಿನ ಪ್ರಸಾರಾಂಗ ಮಳಿಗೆಯಲ್ಲಿ ಪುಸ್ತಕ ನೋಡುತ್ತಿದ್ದ ವೇಳೆ ಅಲ್ಲಿದ್ದ ಮಳಿಗೆಯವರು ''ಸಾರ್ ಪುಸ್ತಕ ತಗೊಳ್ಳಿ ಸಾರ್ ಸಾರ್ ತಗೊಳ್ಳಿ ನಮ್ಮ ಪುಸ್ತಕ !!ನಿಮಗೆ ಅರ್ಥ ಆಗದಿದ್ರೆ ಬೇರೆಯವರಿಗೆ ಗಿಫ್ಟ್ ಕೊಡಿ '' ಅಂದ್ರೂ!!ಹೇಗಿದೆ ಅವರ ಪ್ರಕಟಣೆ ಬಗ್ಗೆ ತಿಳುವಳಿಕೆ ??ಹೆಮ್ಮೆ??/ನೋಡಿ ಸಾರ್!!!
--------------------------------------------------------------------------------
ಅಲ್ಲ ಸ್ವಾಮೀ ಪುಸ್ತಕ ಪ್ರದರ್ಶಿಸಲು ಬಂದಿದ್ದ ಅಂಖಿತ ಪ್ರಕಾಶನ, ನವಕರ್ನಾಟಕ ಪ್ರಕಾಶನ , ಸ್ವಪ್ನ ಬುಕ್ ಸ್ಟಾಲ್, ಗೀತ ಬುಕ್ ಹೌಸ್ , ಸಾಹಿತ್ಯ ಭಂಡಾರ, ಪ್ರಸಾರಾಂಗ,ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ದೂರದ ಹುಬ್ಬಳ್ಳಿ,ಧಾರವಾಡ, ಬೆಳಗಾವಿ, ಮಂಗಳೂರು, ಮುಂತಾದ ಕಡೆಗಳಿಂದ ಪ್ರಕಾಶಕರು ಬಂದಿದ್ದು ಮೈಸೂರಿನ ಪುಸ್ತಕ ಪ್ರೇಮಿಗಳಿಗೆ ಹಬ್ಬವಾಗಿತ್ತು!!ಒಟ್ಟಿನಲ್ಲಿ ನಮ್ಮ ಅಜ್ಞಾನದ ಜ್ವರಕ್ಕೆ ಈ ಪುಸ್ತಕ ಜಾತ್ರೆ ಒಳ್ಳೆಯ ಮಾತ್ರೆ !!! ಖಂಡಿತ ಹೌದು. ನಾನು ಸಹ ಪುಸ್ತಕ ಲೋಕದೊಳಗೆ ಒಂದುಸುತ್ತು ಬಂದೆ!! ಒಳಬಂದ ನಾನು /ನನ್ನಂತೆ ಹಲವರು ಸ್ಟಾಲ್ ಗಳೊಳಗೆ ಹೊಕ್ಕರೆ ಮಾನ್ಯ ಪ್ರಕಾಶಕರು /ಅಥವಾ ಅಲ್ಲಿದ್ದ ಮಹನೀಯರು ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ !!ಇನ್ನು ಹೇಳಬೇಕೆಂದರೆ ಅವರಿಗೆ ಅವರ ಪ್ರಕಾಶನದ ಪ್ರಕಟಣೆಯ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಯಾವುದೇ ಉತ್ಸಾಹ ಇರಲಿಲ್ಲ [ನಾನು ಹಲವು ಭಾರಿ ಹೋದಾಗ ಕಂಡುಬಂದ ಸಾಮಾನ್ಯ ದೃಶ್ಯ ], ಅವರ ಹೆಮ್ಮೆಯ ಪ್ರಕಟಣೆಗಳ ಬಗ್ಗೆ ಅವರಿಗೆ ಹೆಮ್ಮೆ ಇರಲಿಲ್ಲ !! ಸಾಮಾನ್ಯ ಓದುಗರ ಪ್ರಶ್ನೆಗಳಿಗೆ ಅಸಹನೆಯ ಉತ್ತರ ಮಾರಾಟಗಾರರಿಂದ ಬರುತಿತ್ತು.ಇಷ್ಟೆಲ್ಲಾ ಅದ್ವಾನಗಳ ನಡುವೆಯೂ ಇದು ಒಂದು ವ್ಯವಸ್ತಿತ ಪ್ರದರ್ಶನವಾಗಿ ಮೈಸೂರಿಗರ ಮನ ಗೆದ್ದಿತು.ಪ್ರದರ್ಶನದ ಒಂದು ನೋಟ ನಿಮಗಾಗಿ.ಮರೆತು ಹೋಗುವ ಮುನ್ನ ಒಂದು ಹಾಸ್ಯ ಸನ್ನಿವೇಶ ನಿಮಗೆ ಹೇಳ್ತೀನಿ ಕೇಳಿ ನಾನು ಹಾಗೆ ಮೈಸೂರಿನ ಪ್ರಸಾರಾಂಗ ಮಳಿಗೆಯಲ್ಲಿ ಪುಸ್ತಕ ನೋಡುತ್ತಿದ್ದ ವೇಳೆ ಅಲ್ಲಿದ್ದ ಮಳಿಗೆಯವರು ''ಸಾರ್ ಪುಸ್ತಕ ತಗೊಳ್ಳಿ ಸಾರ್ ಸಾರ್ ತಗೊಳ್ಳಿ ನಮ್ಮ ಪುಸ್ತಕ !!ನಿಮಗೆ ಅರ್ಥ ಆಗದಿದ್ರೆ ಬೇರೆಯವರಿಗೆ ಗಿಫ್ಟ್ ಕೊಡಿ '' ಅಂದ್ರೂ!!ಹೇಗಿದೆ ಅವರ ಪ್ರಕಟಣೆ ಬಗ್ಗೆ ತಿಳುವಳಿಕೆ ??ಹೆಮ್ಮೆ??/ನೋಡಿ ಸಾರ್!!!
Wednesday, February 3, 2010
ಹುಲಿಯ ಗಣತಿ ಮುಗಿಸಿಬಂದ ಸ್ನೇಹಿತ !!! ಹೊತ್ತುತಂದ ಮಾಹಿತಿಯ !!!
ನನ್ನ ಸ್ನೇಹಿತ ದತ್ತ ಹುಲಿ ಗಣತಿ. ಮುಗಿಸಿಬಂದ .ಹೊಗೊಮೊದ್ಲು ಬಾಲು ಬರ್ತಿಯೇನೋ ''ಟೈಗೆರ್ ಸೆನ್ಸಸ್ ''ಗೆ ಅಂತ ಕರೆದಿದ್ದ ಆದ್ರೆ ನನ್ನ ಕಾರ್ಯಗಳ ಒತ್ತಡ ದಿಂದ ಹೋಗಲಾಗಲಿಲ್ಲ .ಹಿಂತಿರುಗಿ ಬಂದವ ಬಾಲು ನಿಮ್ಮನೆಗೆ ಬರ್ತೀನಿ ಕಣೋ ಫೋಟೋ ನಿಂಗೆ ತೋರ್ಸ್ಬೇಕು ಅಂತ ಫೋನ್ ಮಾಡಿ ಉತ್ತರಕ್ಕೂ ಕಾಯ್ದೆ ಬಂದೇಬಿಟ್ಟ .ಹುಲಿಗಣತಿ ಪ್ರತಿ ನಾಲ್ಕು ವರ್ಷಕೊಮ್ಮೆ ನಡೆಸಲಾಗುತ್ತದೆ .ಕಾಡಿನ ರೇಂಜ್ ಗಳ ವ್ಯಾಪ್ತಿಯಲ್ಲಿ ಸುಮಾರು ಮೂರು ಅಥವ ನಾಲ್ಕು ಕಿ.ಮೀ ದೂರಕ್ಕೆ ಒಂದು ''ಬೀಟ್ ''ರೂಟ್ ಅಂತ ಮಾಡಿ ಪ್ರತಿ ಬೀಟ್ ನಲ್ಲಿ ಇಬ್ಬರು ಸ್ವಯಂಸಹಾಯಕರು ,ಒಬ್ಬ ಅರಣ್ಯ ಸಿಬ್ಬಂದಿ ಯಂತೆ ತಂದ ರಚಿಸಿ ಗಣತಿಕಾರ್ಯ ಕೈಗೊಳ್ಳುತ್ತಾರೆ.ಬೆಳಿಗ್ಗೆ ೬.30 ಗಂಟೆ ಯಿಂದ ೧೧ ಗಂಟೆ ವರೆಗೆ ಪ್ರತಿದಿನ ಈ ಕಾರ್ಯ ೨೦೦೯ ಡಿಸೆಂಬರ್ ೨೧ ರಿಂದ ೨೭ ರ ವರೆಗೆ ನಡೆದಿತ್ತು
ಗಣತಿ ದಾರರು ತಮ್ಮ ವ್ಯಾಪ್ಪ್ತಿಯ ಬೀಟಿನಲ್ಲಿ ಕಂಡು ಬಂದ ಪ್ರಾಣಿಗಳು, ಅವಗಳು ಓಡಾಡಿದ ಜಾಗಗಳು, ಪ್ರಾಣಿಗಳ ಪಾದದ ಗುರುತು, ಪ್ರಾಣಿಗಳು ತಿಂದು ಉಳಿದ ಜೀವಿಗಳ ಅವಶೇಷಗಳು, ವನ್ಯ ಜೀವಿಗಳ ವಿಸರ್ಜಿತ ಮಲ,ಹಿಕ್ಕೆ ಅಧ್ಯಯನ ,ಇಂತಹ ಹಲವಾರು ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಗೆ ನೀಡಿದ್ದಾರೆ .ಇದು ವನ್ಯ ಜೀವಿಗಳ ಜೀವನ ಶೈಲಿಯ ಬಗ್ಗೆ ನಾವು ಯಾವುದೇ ವಿಶ್ವವಿದ್ಯಾಲಯ ಕಲಿಸಿಕೊಡದ ವಿಚಾರಗಳನ್ನು ತಿಳಿಯ ಬಹುದಾಗಿದೆ.ಕಾಡಿನಲ್ಲಿ ಸುತ್ತಾಟ ,ಒಳ್ಳೆಯ ಗಾಳಿ ,ಇವುಗಳು ಮನಸನ್ನು ಮುದಗೊಳಿಸುತ್ತವೆ.ನಮ್ಮ ದತ್ತ ಬಂದವನೇ ನನ್ನ ಮುಂದೆ ಕ್ಯಾಮರ ಬಿಸಾಡಿ ನನ್ನ ಫೋಟೋ ಗಳನು ಸಿ.ದಿ.ಗೆ ಹಾಕಿಕೊಡು ಅಂತ ಆರ್ಡೆರ್ ಮಾಡ್ದ .ಹಾಗೆ ಅವನ ಚಿತ್ರಗಳನ್ನು ನೋಡ್ತಾ ಒಂತರ ಖುಷಿಯಾಯ್ತು .ಲೋ ಗುರು ನಿನ್ನ ಫೋಟೋ ಉಪಯೋಗಿಸಿ ಕೊಳ್ಳೋಕೆ ಅನುಮತಿ ಕೊಡು ಅಂತ ಹೇಳಿ ಅನಾಮತ್ತಾಗಿ ಈ ಬ್ಲಾಗ್ನ ಒಳಗೆ ತೋರ್ಸಿ ಬಿಟ್ಟಿದ್ದೀನಿ .[ಆದ್ರೆ ಫೋಟೋ ತೆಗೆದ ಸ್ನೇಹಿತ ದತ್ತಾತ್ರೇಯ ನಿಗೆ ಧನ್ಯವಾದ ಹೇಳಲೇ ಬೇಕು ]ಅವನು ಹೇಳಿದ ಮಾಹಿತಿ ನಿಮ್ಮ ಮುಂದೆ ಸುರ್ದಿದ್ದಿನಿ !!.ಬನ್ನಿ ಫೋಟೋ ನೋಡುವ...!
Tuesday, February 2, 2010
ಸ್ವಿಫ್ಟ್ ಇದು ತುಂಬಾ ಫಾಸ್ಟ್ !!! ಗೃಹ ವೇಗಿ ಹಕ್ಕಿಯ ನಲಿದಾಟ !! ಹಕ್ಕಿ ಹುಡುಕಾಟ ..02

.
Monday, February 1, 2010
ಮಿಂಚಿನ ಬಳ್ಳಿ ಈ ಬಿಳಿ ಮಿಂಚುಳ್ಳಿ !!! ಹಕ್ಕಿ ಹುಡುಕಾಟ ....01
Subscribe to:
Posts (Atom)