Sunday, September 30, 2012

ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.2 ,ಸಿರ್ಸಿಯ[ ಶಿರಸಿಯ ] ಒಡಲಲ್ಲಿ ನಾನು..

ಸಿರ್ಸಿ  ಹಳೆಯ ಬಸ್ ನಿಲ್ದಾಣ.


 ಬಾರೋ  ಮಹಾರಾಜ ಬಂದ್ಯಾ  !!! ಎಷ್ಟು ವರ್ಷಾ ಆಗಿತ್ತು ನಿನ್ನ ನೋಡಿ? ಅಂತಾ ಉಪಚಾರ ಮಾಡಿ  ಬಿಸಿ ಬಿಸಿ ಕಾಫಿ ಕೊಟ್ಟು. ಸ್ವಲ್ಪ ಹೊತ್ತು ಮಲಗು ಅಂದಳು.  ..............ಆಗ ವೇಳೆ  ಬೆಳಿಗ್ಗೆ ಆರು ಘಂಟೆ ಆಗಿತ್ತು. ..............................!!!! ಹಾಗೆ ಮಲಗಿದೆ ನಿದ್ದೆ ಬರಲಿಲ್ಲ , ಮನೆಯ ಸುತ್ತ  ತೋಟದಲ್ಲಿನ ಮರಗಳಿಂದ ಮುಂಜಾವಿನ  ಚಿಲಿಪಿಲಿ  ಹಕ್ಕಿಗಳ ಗಾನ , ಹಿತವಾಗಿತ್ತು. ಕೇಳುತ್ತಾ ರಾತ್ರಿ ಪ್ರಯಾಣದ  ಆಯಾಸ ಮಾಯವಾಗಿತ್ತು. ಮನದಲ್ಲಿ ಹೊಸ ಚೈತನ್ಯ  ಮೂಡುತ್ತಿತ್ತು. ಯಾಕೋ ಕಾಣೆ  ಶಿರಸಿಯ  ಇತಿಹಾಸ ತಿಳಿಯಲು ಮನ ಹಾ ತೊರೆಯುತ್ತಿತ್ತು. 
ಸಿರ್ಸಿ  ಮಾರಿಕಾಂಬೆ  ಜಾತ್ರೆ ಮಾಳದಲ್ಲಿ  ದರ್ಶನ ನೀಡಿದ್ದು ಹೀಗೆ.



ನನಗೆ ಇದೊಂದು ಕೆಟ್ಟ ಕುತೂಹಲ, ಯಾವುದೇ ಊರಿಗೆ ಬಂದರೂ ಅಲ್ಲಿನ ಇತಿಹಾಸ ಜಾಲಾಡುವ ಆಸೆ , ಈ ಆಸೆ ಹಲವು ಸಾರಿ ಫಜೀತಿ ತಂದಿದೆ  ಆದರೂ  ಇಲ್ಲಿಗೆ ಬರುವ ಮೊದಲು  "ಇಟ್ಟಿಗೆ ಸಿಮೆಂಟ್ " ಪ್ರಕಾಶ್ ಹೆಗ್ಡೆ ಸೇರಿದಂತೆ ಹಲವರನ್ನು  ಶಿರಸಿಯ ಇತಿಹಾಸ ತಿಳಿಸಲು ಪೀಡಿಸಿದ್ದೆನಾದರೂ , ನನಗೆ ತಿಳಿಸಲು ಅವರುಗಳಿಗೆ ತಿಳಿದಿದ್ದ ವ್ಯಕ್ತಿಗಳ ಬಗ್ಗೆ  ಮಾಹಿತಿ ಸಿಗುವ ಆಸೆ ಕಾರಣಾಂತರದಿಂದ  ತಪ್ಪಿ ಹೋಯಿತು. ಅಂತರ್ಜಾಲದಲ್ಲಿ ತಡಕಾಡಿದರೂ  ಪ್ರಯೋಜನ ವಾಗಲಿಲ್ಲ. ಅರೆ ಈ ಊರು ತನ್ನ  ಇತಿಹಾಸವನ್ನೇ ಜಗತ್ತಿಗೆ ಬಿಟ್ಟುಕೊಡುತ್ತಿಲ್ಲವಲ್ಲಾ  ಎನ್ನುವ ವಿಸ್ಮಯ ನನಗೆ  ಆದರೂ ತಣಿಯದ ದಾಹ ಹುಡುಕುತ್ತಲೇ ಹೊರಟೆ.  ಹತ್ತಿರದಲ್ಲೇ ಐತಿಹಾಸಿಕವಾಗಿ  ಮೆರೆದಿದ್ದ ಬನವಾಸಿ,  ಸೋಂದೆ  ಊರುಗಳ ಸನಿಹದಲ್ಲಿದ್ದ ಶಿರಸಿ ಅಷ್ಟಾಗಿ ಅಂದಿನ  ದಿನದಲ್ಲಿ  ಪ್ರಾಮುಖ್ಯತೆ ಹೊಂದಿರಲಿಲ್ಲವೇನೋ ಅನ್ನಿಸುತ್ತದೆ. ಅಥವಾ ಈ ಊರು ಅಂದು ಒಂದು ಕುಗ್ರಾಮ  ಆಗಿರಬಹುದು.ಈ ಊರನ್ನು, ಶತವಾನರು, ಚುತು ವಂಶಸ್ಥರು , ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಬನವಾಸಿ  ಕದಂಬರು, ವಿಜಯನಗರ ರಾಜರು, ತಲಕಾಡಿನ  ಗಂಗರು,  ಪಲ್ಲವರು, ಹೊಯ್ಸಳರು, ಸೋಂದಾ ಅರಸರು, ಮೈಸೂರಿನ ಅರಸರು, ಶ್ರೀ ರಂಗ ಪಟ್ಟಣದ  ಹೈದರ್  ಹಾಗು ಅವನ ಮಗ ಟಿಪ್ಪೂ  , ಮತ್ತೆ ಮೈಸೂರ ಅರಸರು, ನಂತರ  ಬ್ರಿಟೀಷರು  ಆಡಳಿತ ನಡೆಸಿದ್ದಾರೆ.. ಆದರೆ  ಅಂದು ಈ ಊರು, ಆರ್ಥಿಕವಾಗಿಯೂ, ಆಡಳಿತ ಹಿತದೃಷ್ಟಿ ಯಿಂದ, ಬನವಾಸಿ ಹಾಗು  ಸೋಂದೆ ಯಷ್ಟು ಪ್ರಾಮುಖ್ಯತೆ ಪಡೆಯಲಿಲ್ಲ  ಹಾಗಾಗಿ ಅಂದಿನ ದಿನದಲ್ಲಿ ಈ ಊರಿನ ಇತಿಹಾಸ  ಹೆಚ್ಚಾಗಿ ಕಾಣಲು ಸಿಗುವುದಿಲ್ಲ  ಈ ಊರಿನ ಇತಿಹಾಸದ ಬಗ್ಗೆ  ಯಾವುದೇ  ಶಾಸನ, ಲಿಖಿತ ದಾಖಲೆಗಳ ಮಾಹಿತಿ  ಹಾಲಿ ಇರುವುದಿಲ್ಲ  , ಬನವಾಸಿಯ, ಹಾಗು ಸೋಂದೆ ಇತಿಹಾಸ ಹೇಳುವಾಗಲೂ ಶಿರಸಿಯ  ಬಗ್ಗೆ ಎಲ್ಲೂ ಉಲ್ಲೇಖ ಇರುವುದಿಲ್ಲ.ಈ ಬಗ್ಗೆ  ಬಹಳಷ್ಟು ಸಂಶೋಧನೆ ಅಗತ್ಯವಿದೆ. "ವಿಚಿತ್ರವೆಂದರೆ ಉತ್ತರಪ್ರದೇಶ ರಾಜ್ಯದ ಮೊರಾದಾಬಾದ್ ಜಿಲ್ಲೆಯಲ್ಲಿ ಸಿರ್ಸಿ ಎಂಬ ಹೆಸರಿನ  ಮತ್ತೊಂದು ಪಟ್ಟಣ ಇದೆ"     ಈ ಸಿರ್ಸಿಗೂ ನಮ್ಮ ನಾಡಿನ ಶಿರಸಿಗೂ  ಯಾವುದಾದರೂ  ಐತಿಹಾಸಿಕ ಸಂಬಂಧ ಇದೆಯೇ ಎಂಬ ಬಗ್ಗೆ  ಸಂಶೋಧನೆ ಅಗತ್ಯವಿದೆ.


ಮಾರಿಕಾಂಬಾ ದೇವಾಲಯದ ಒಂದು ಚಿತ್ರ 


ಶಿರಸಿಯ   ಇತಿಹಾಸ ಗೋಚರಿಸುವುದು  ಹದಿನೇಳನೆ ಶತಮಾನದಲ್ಲಿ  ಸೋಂದಾ ರಾಜ ಇಮ್ಮಡಿ  ಸದಾಶಿವ ರಾವ್ ನಿರ್ಮಿಸಿದರೆಂದು  ಹೇಳಲಾಗುವ  ಮಾರಿಕಾಂಬೆ ದೇವಾಲಯದ ಮೂಲಕವೇ. ಸ್ವಾತಂತ್ರ್ಯಾ ನಂತರ ಆರ್ಥಿಕವಾಗಿ ಬೆಳವಣಿಗೆ ಕಂಡು  ತನ್ನ ನೆಲದಲ್ಲಿ  ಅಡಿಕೆ, ವಿಳ್ಳೆದೆಲೆ , ಏಲಕ್ಕಿ, ಮೆಣಸು,  ಇವುಗಳನ್ನು  ಬೆಳೆದು, ತನ್ನ ಸ್ಥಾನ ಗಳಿಸಿಕೊಂಡಿತು,  ಶಿರಸಿಯು  ಇಂದು ಉತ್ತರ ಕನ್ನಡ [ ಕಾರವಾರ ]  ಜಿಲ್ಲೆಯ ಒಂದು ಪ್ರಮುಖ ತಾಲೂಕು ಹಾಗು  ವಾಣಿಜ್ಯ ಕ್ಷೇತ್ರ,  "ಪತ್ರಕರ್ತ ", "ಜನಮಾಧ್ಯಮ ", ಹಾಗೂ "ಲೋಕಧ್ವನಿ"  ಎಂಬ ಮೂರು ಸ್ಥಳೀಯ ಪತ್ರಿಕೆಗಳು  ಸಿರಸಿಯ ಸುತ್ತ ಮುತ್ತಲಿನ  ಸುದ್ದಿ ಗಳನ್ನೂ ಪ್ರಕಟಿಸುತ್ತಾ ಜನರ  ಧ್ವನಿಗಳಾಗಿವೆ . ಇನ್ನು ಸಿರಸಿಯ ವಿಶೇಷ  ಹೋಳಿಗೆ, ತೊಡದೇವು ದೋಸೆ, ಕಡುಬು , ಜಿಲೇಬಿ  ಬಾಯಲ್ಲಿ ನೀರು ಬರಿಸುತ್ತಿದ್ದರೆ,  "ಅಪ್ಪೆ ಹುಳಿ"   ಮುಂತಾದ ಹವ್ಯಕ  ಅಡಿಗೆಗಳು ರುಚಿಯಾಗಿ ನಿಮ್ಮ ನಾಲಿಗೆಯನ್ನು ಮುದಗೊಳಿಸುತ್ತವೆ .ಇಲ್ಲಿನ  ಮಾವು, ಹಾಗು ಹಲಸಿನ ಹಣ್ಣುಗಳು  ಹಾಗು ಅವುಗಳಿಂದ ಮಾಡುವ ಖಾದ್ಯ  ಬಾಯಲ್ಲಿ ನೀರು ತರಿಸುವುದು ಸುಳ್ಳಲ್ಲ.
ಶಿರಸಿಯ ದೇವಿಕೆರೆ 


ಇದನ್ನೆಲ್ಲಾ ಹೇಳುತ್ತಾ ನಿಂತಲ್ಲೇ ನಿಂತು ಬಿಟ್ಟೆ ಕ್ಷಮಿಸಿ, ಬನ್ನಿ ನನ್ನ ಪುರಾಣಕ್ಕೆ , ಮಲಗಿದ್ದವ ಹಕ್ಕಿಗಳ ಗಾನ ಕೇಳುತ್ತಾ  ಆಯಾಸ ಪರಿಹರಿಸಿಕೊಂಡು , ಸಿದ್ಧನಾದೆ. ನನ್ನ ಸೋದರತ್ತೆ  "ಬಾರೋ ಬೇಗ ತಿಂಡಿ ಆರಿಹೊಗುತ್ತೆ"  ಅಂತಾ ಕರೆದಳು. {ಇವಳು ನಮ್ಮ ಕುಟುಂಬ ದಿಂದ ಸುಮಾರು ಮೂವತ್ತು ವರ್ಷಗಳ ಹಿಂದೆ,    ಇಲ್ಲಿನ ಹವ್ಯಕ  ಹುಡುಗನನ್ನು ವಿವಾಹವಾಗಿ  ಸಿರ್ಸಿಗೆ  ಬಂದು ನೆಲಸಿದ್ದಾಳೆ, ಪತಿಯೂ ಅಷ್ಟೇ  ಶಿರಸಿಯಲ್ಲಿ  ಬಹಳ ಕಾಲದಿಂದಲೂ   ಪ್ರಸಿದ್ದ ವೈಧ್ಯರು  "ಕೊಪ್ಪಳ್ ಡಾಕ್ಟರ್ "  ಅಂತಾನೂ ಕರೀತಾರೆ. ದೇವಿಕೆರೆ  ಬಳಿ ಇವರ ದವಾಖಾನಿ ಇದೆ, ಮಗ ಹಾಗು  ಸೊಸೆ  ಯೂ ಸಹ ವೈಧ್ಯರೆ ಅವರೂ ಸಹ ಸಿರಸಿಯ ಲ್ಲೇ ಇದ್ದಾರೆ.} ನಾನೂ ಬೇಗ ನನ್ನ ನಿತ್ಯ ಕರ್ಮಗಳನ್ನು ಮುಗಿಸಿ  ತಿಂಡಿಯ ತಟ್ಟೆಯ ಮುಂದೆ ಹಾಜರು, ಬಿಸಿ ಬಿಸಿ ದೋಸೆ ತಿನ್ನಲು ಕೊಡುತ್ತಾ  "ಲೋ ಇವತ್ತು ಎಲ್ಲೂ ಅಲೆಯಲು  ಹೋಗಬೇಡ ಮನೆಯಲ್ಲೇ   ಇರು ನಿನ್ನ ಜೊತೆ ಬಹಳ ಮಾತಾಡೋದು ಇದೆ " ಅಂತಾ  ಹೇಳಿದಳು,  ನಾನು "ನೋಡೇ ನಾಗು , ನನಗೆ ಸ್ವಲ್ಪ ಕೆಲಸವಿದೆ, ದಯವಿಟ್ಟು ತಪ್ಪು ತಿಳಿಯ ಬೇಡ  ರಾತ್ರಿ ಖಂಡಿತ ನಿಮ್ಮೆಲ್ಲರ ಜೊತೆ ಊಟ ಮಾಡಿ ಹರಟೆ ಹೊಡೆಯುತ್ತೇನೆ" ಅಂದೇ, ಪಾಪಿ  ಅಪರೂಪಕ್ಕೆ ಮನೆಗೆ ಬಂದು  ಅಲೆಯೋಕೆ ಹೋಗ್ತೀಯ ಅಂತಾ  ಪ್ರೀತಿಯ ಶಾಪ ಹಾಕಿದಳು. ಶಾಪದ ಪ್ರೀತಿಯಲ್ಲಿ ಸುಮಾರು ಆರು ರುಚಿ ರುಚಿಯಾದ  ದೋಸೆಗಳು  ತೆಂಗಿನ ಕಾಯಿ ಚಟ್ನಿಯೊಂದಿಗೆ ಹೊಟ್ಟೆ ಸೇರಿ ಸದ್ಗತಿ ಪಡೆದಿದ್ದವು. ಜೊತೆಗೆ ಬಿಸಿ ಕಷಾಯ   . ಹಬೆಯಾಡುತ್ತಾ  ಹೊಟ್ಟೆ ಸೇರಿತ್ತು.
ಶಿರಸಿಯ  ಬೀದಿಯಲ್ಲಿ   ಸಿಕ್ಕ ಉರುಮಾರಮ್ಮಗಳು 


ಅಷ್ಟರಲ್ಲಿ ನನ್ನ ಮೊಬೈಲ್ಗೆ  ಒಂದು ಕರೆ ಬಂದು ........!!! "ಬಾಲೂಜಿ   ಇನ್ನು ಹತ್ತು  ನಿಮಿಷಕ್ಕೆ ನಿಮ್ಮ ನೆಂಟರ  ಮನೆಯ ಬಳಿ ಬರುತ್ತೇನೆ ರೆಡಿ ಇರಿ ಹೊರಟು  ಬಿಡೋಣ ನನ್ನ ಬೈಕಿನಲ್ಲಿ " ಅಂತಾ ನಮ್ಮ "ಆರ್ಕುಟ್ ತಾಣದ ಗೆಳೆಯ  ಹರ್ಷಾ ಹೆಗ್ಡೆ   " ಸೂಚನೆ. ನನ್ನ ಅತ್ತೆ "ಯಾರೋ ಅದು? ಅಂದಳು"  "ಹರ್ಷ ಹೆಗ್ಡೆ  ಅಂತಾ ಕಣೆ " ನನ್ನ ಸ್ನೇಹಿತರು ಅಂದೇ, ಸರಿ ಸರಿ ನಿನಗೇನೂ  ಯಾವ ಮರಳು ಗಾಡಿಗೆ ಹೋದರೂ ಯಾರಾದ್ರೂ ಸಿಗ್ತಾರೆ ಕಣಪ್ಪಾ ಅಂತಾ ಸಂತಸದ ಮಾತುಗಳನ್ನು ಆಡಿದಳು.ಅಷ್ಟರಲ್ಲಿ ಮನೆಯ ಹೊರಗೆ ಬೈಕ್ ಸದ್ದಾಗಿ ಹೊರಗೆ ಬಂದೆ  ಬೈಕಿನ ಮೇಲೆ ನಗು ನಗುತ್ತಾ ನಿಂತಿದ್ದಾ  ಆ ಹುಡುಗ.



ಪ್ರೀತಿಯ ಗೆಳೆಯ  ಹರ್ಷ ಹೆಗ್ಡೆ 



ಹರ್ಷ ಹೆಗ್ಡೆ ನನಗೆ ಆರ್ಕುಟ್ ತಾಣದ ಗೆಳೆಯ ವಯಸ್ಸಿನಲ್ಲಿ ನನಗಿಂತಾ ಸುಮಾರು ಇಪ್ಪತ್ತು ವರ್ಷ ಚಿಕ್ಕವನು  , ಆರ್ಕುಟ್ ಸಾಮಾಜಿಕ ತಾಣದ  ಮೂಲಕ ಪರಿಚಯವಾಗಿ , ಗೆಳೆತನ ಬೆಳೆಯಿತು. ಒಮ್ಮೆ ಮೈಸೂರಿಗೆ ಗೆಳೆಯರೊಡನೆ ಬಂದು ನನ್ನ ಜೊತೆ ಇದ್ದ ಸ್ವಲ್ಪ ಸಮಯದಲ್ಲೇ  ಖುಷಿಪಟ್ಟು ಹೋಗಿದ್ದ  ,  ನಾನೂ ಸಿರ್ಸಿಗೆ ಬರುವ ವಿಚಾರ ತಿಳಿದು  ತಾನೂ ನನ್ನ ಜೊತೆ ಸುತ್ತಲು ತಯಾರಾಗಿ ಬಂದಿದ್ದ, ಸುತ್ತಲು ಕಾರು ಮಾಡೋಣ ಎಂದರೂ ಕೇಳದೆ  ತನ್ನ "ಯಮಹಾ ಬೈಕ್" ತಂದು , ಇಡೀ ಪ್ರವಾಸದಲ್ಲಿ  ನನಗೆ  ಅವಕಾಶವನ್ನೇ ಕೊಡದೆ  ಎರಡು ದಿನ ಪೆಟ್ರೋಲ್ ಸಹಿತ ತಾನೇ ಹಾಕಿಸಿಕೊಂಡು  ಸುತ್ತಾಡಿಸಿ  ಸಿರಸಿಯ ಪರಿಚಯ  ಮಾಡಿಕೊಟ್ಟ  ಪ್ರೀತಿಯ ತಮ್ಮ , ವಯಸಿನ ಅಂತರ ವಿಲ್ಲದೆ  ಬೆರೆತು   ಎರಡು ದಿನ ಶಿರಸಿ  ತಾಲೂಕಿನ  ಸುತ್ತಾಟದಲ್ಲಿ  ನನ್ನ ಜ್ಞಾನ ದಾಹ ಇಂಗಿಸಿದ . ಮುಂದೆ  ಈ ತಮ್ಮನೇ ನನಗೆ ಶಿರಸಿಯ  ದರುಶನ ಮಾಡಿಸಿ ತಾನು ಸಂತಸ ಪಟ್ಟ, ವಯಸ್ಸಿನ  ಹುಡುಗಾಟಿಕೆ, ಹುಮ್ಮಸ್ಸು, ಜೊತೆಗೆ  ತನ್ನ ಊರನ್ನು ತೋರಿಸುವ  ಹೆಮ್ಮೆಯ  ಮುಖಭಾವ ಹೊಂದಿದ್ದ  ಹುಡುಗ ಅವನು." ಸಾರ್ ನಿಮ್ಮ  ಪ್ಲಾನ್ ಏನಾದರೂ ಇದೆಯಾ ??" ಎಂದಾ, ನಾನು" ಇಲ್ಲಾ ಹರ್ಷ "ಕೊಳ್ಗೀ ಬೀಸ್ " ನಲ್ಲಿ  ನಾಳೆ ವಿವಾಹ ಕಾರ್ಯಕ್ರಮ  ಇದೆ ಆದ್ರೆ  ಇವತ್ತು ಎಷ್ಟು ಒಳ್ಳೆಜಾಗ ನೋಡ ಬಹುದು ಅಷ್ಟನ್ನು ನೋಡೋಣ  ನಿಮಗೆ ತೊಂದರೆ ಆಗದಂತೆ " ಅಂದೇ. ಸಾರ್ ದಯವಿಟ್ಟು ಸಂಕೋಚ ಬೇಡ  ಬನ್ನಿ  ಹೊರಡೋಣ  ಎನ್ನುತ್ತಾ ......ತನ್ನ ಬೈಕನ್ನು  ಸ್ಟಾರ್ಟ್  ಮಾಡಿದ   ಪ್ರೀತಿಯ ತಮ್ಮ.............!!! ಬೈಕು  ಜೋರಾಗಿ  ಮುನ್ನುಗ್ಗುತ್ತಿತ್ತು.........ಅಂಕು ಡೊಂಕು ರಸ್ತೆಯಲ್ಲಿ  ............



ಸಹಸ್ರ ಲಿಂಗ ಕ್ಷೇತ್ರ 

."ಸಹಸ್ರ ಲಿಂಗ"   ಕ್ಷೇತ್ರ ದೆಡೆಗೆ ...........!!!







Monday, September 24, 2012

ಸಿರ್ಸಿ ನೆನಪು ಕಾಡ್ತಾ ಇದೆ.....ಪಯಣ.1 ಬನ್ನಿ ಹೊರಡೋಣ ಸಿರ್ಸಿಗೆ.

ಸಿರ್ಸಿಯಲ್ಲಿ ಸ್ವಾಗತ ನೀಡಿದ ಹೂ 
2012 ರ ಫೆಬ್ರವರಿ  ತಿಂಗಳ ಒಂದು ದಿನ  ಹಾಗೆ ಕಂಪ್ಯೂಟರ್ ಮುಂದೆ ಕುಳಿತಿದ್ದೆ , ನಮ್ಮ "ಸಾಗರದಾಚೆಯ  ಇಂಚರ"  ಬ್ಲಾಗಿನ ಒಡೆಯ ಗುರು ಮೂರ್ತಿ ಹೆಗ್ಡೆ ಚಾಟ್ ಗೆ ಬಂದರೂ , ಅದು ಇದು ಹರಟುತ್ತಾ  ಮಾರ್ಚ್ 11 ರಂದು ತಮ್ಮ ಸಹೋದರನ ವಿವಾಹ ಕಾರ್ಯಕ್ರಮಕ್ಕೆ  ಬರಲು ಪ್ರೀತಿಯ ಆಮಂತ್ರಣ  ನೀಡಿದರು. ಸಿರ್ಸಿಗೆ ಬಂದು ಫೋನ್ ಮಾಡಿ ನಂತರ  ವಿವಾಹ ನಡೆಯುವ "ಕೊಳ್ಗಿ  ಬೀಸ್" ಗೆ  ಬರುವ ದಾರಿ ಹೇಳ್ತೀನಿ, ಅಥವಾ  ಅಲ್ಲಿಂದ ನಿಮ್ಮನ್ನು ಕರೆಸಿ ಕೊಳ್ಳುತ್ತೇನೆ ಅಂತಾ ಬೇರೆ ಹೇಳಿದ್ರೂ. ಬ್ಲಾಗ್ ಲೋಕದಲ್ಲಿ ನಮ್ಮಿಬ್ಬರದು  ಇತ್ತೀಚಿನ ಅಂದರೆ ಒಂದೆರಡು ವರ್ಷಗಳ ಪರಸ್ಪರ ಭೇಟಿ ಆಗಿದ್ರೂ  ಆತ್ಮೀಯತೆ ಬಹಳಷ್ಟಿದೆ.  ಹಿಂದೆ ಅವರು ಕರೆದಿದ್ದ ಒಂದೆರಡು ಕಾರ್ಯಕ್ರಮಗಳಿಗೆ ಕೈಕೊಟ್ಟ ಕೀರ್ತಿ ನನಗಿದ್ದ ಕಾರಣ, ಅವರಿಗೂ  ನಾನು  ಬರುವ ಗ್ಯಾರಂಟೀ ಇರಲಿಲ್ಲ.  ಆದರೆ ಈ ಮಾತನ್ನು ಪ್ರಕಾಶ್ ಹೆಗ್ಡೆ ಗೆ ಹೇಳಿದಾಗ  ನಾನೂ  ಟ್ರೈ ಮಾಡ್ತೀನಿ  ಬಾಲಣ್ಣಾ  ಆದ್ರೆ ನೀವು ಹೋಗಿ ಬನ್ನಿ ಅಂದು ಪ್ರೋತ್ಸಾಹಿಸಿದರು.

ಮನದಲ್ಲಿ ಯೋಚಿಸುತ್ತಾ ನನ್ನ  ಸೋದರತ್ತೆ  ನಾಗಲಕ್ಷ್ಮಿ  ಗೆ ಫೋನ್ ಮಾಡಿ "ನಾಗೂ ಸಿರ್ಸಿಗೆ ಬರ್ತಾ ಇದ್ದೀನಿ ಕಣೆ"  ಅಂದೇ.
 "ಲೋ ದೊಡ್ಡ ಮನ್ಷಾ  ಎಷ್ಟು ವರ್ಷ ನಾನೂ ಕರೆದರೂ ಬರದಿದ್ದವ ಈಗ ಬರ್ತಾ ಇದ್ದೀಯ ಬಾ"  ಅಂತಾ  ಹೇಳಿ ಫೋನ್ ಇಟ್ಟಳು .  ನಾನೂ ಸಹ ಮಾರನೆಯ ದಿನ ಸಿರ್ಸಿ  ಗೆ ಹೋಗಲು  ಬಸ್ಸಿಗೆ ರಿಸರ್ವೇಶನ್   ಮಾಡಿಸಲು ಹೋದೆ.ನಮ್ಮ ಮನೆಯ ಬಳಿ ಇರುವ  ಕೌಂಟರ್ನಲ್ಲಿ  ಹೋಗಿ ವಿಚಾರಿಸಿದೆ, ಸಿರ್ಸಿಗಾ ಸಾರ್  ಇರೋ ಎರಡು ಗಾಡಿನೂ ಲಡಾಸು  , "ನಮ್ಮನ್ನ ಬೈಕೋಬೇಡಿ   ಸಾರ್   ರಾತ್ರಿ ಹತ್ತುವರೆಗೆ  ಮೈಸೂರು ಎಲ್ಲಾಪುರ  ಗಾಡಿಗೆ ಕೊಡ್ತೀನಿ , ಇದ್ದದ್ರಲ್ಲಿ ಸುಮಾರಾಗಿದೆ" , ಅಂತಾ ಹೇಳಿ ಕಿಟಕಿ ಪಕ್ಕದ ಸೀಟ್  ಕಾಯ್ದಿರಿಸಿದ . ಹಾಗು ಹೀಗೂ ದಿನಗಳು ಕಳೆದು  ಹೊರಡುವ ದಿನ ಬಂತು.
ಚಿತ್ರ ಕೃಪೆ  ಕೆ.ಎಸ .ಆರ್.ಟಿ .ಸಿ. ವೆಬ್ 


ರಾತ್ರಿ ಸರಿಯಾಗಿ ಬಸ್ ನಿಲ್ದಾಣದಲ್ಲಿ    ಲಡಾಸ್ ಬಸ್ಸಿನ  ಹುಡುಕಾಟದಲ್ಲಿ ತೊಡಗಿದೆ.  ಬಸ್ ನಿಲ್ದಾಣದ  ಪ್ಲಾಟ್ ಫಾರಮ್ಮಿನ  ಬಳಿ ಬಂದ ನನಗೆ  ಅಚ್ಚರಿ   ಹೊಚ್ಹ ಹೊಸ  ರಾಜ ಹಂಸ ಬಸ್ಸೊಂದು   ಯಲ್ಲಾಪುರ ಬೋರ್ಡ್ ತಗಲಿಸಿಕೊಂಡು  ನಿಂತಿತ್ತು. ಕಂಡಕ್ಟರ್  ಬಳಿ ಹೋಗಿ ನನ್ನ ಟಿಕೆಟ್ ತೋರಿಸಿ ಒಳಗೆ ತೂರಿಕೊಂಡು  ನನ್ನ ಸೀಟ್ ನಲ್ಲಿ  ಲಗೇಜ್ ಇಟ್ಟು . ಕೆಳಗೆ ಇಳಿದು ಕಂಡಕ್ಟರ್ ಬಳಿ ಮಾತಿಗೆ ತೊಡಗಿದೆ. "ಇದೇನ್ರೀ  ಹಳೆ ಬಸ್ಸು ಇಲ್ವಾ?"  ಅಂದೇ "ಇಲ್ಲಾ ಸಾರ್ ಈ ಗಾಡಿ ಲೈನಿಗೆ ಈಗ ಎರಡೂ ಕಡೆ ಹೊಸ ಬಸ್ಸಿದೆ , ನಮಗೂ ಸಾಕಾಗಿ ಹೋಗಿತ್ತು ಜನಗಳ ಕೈಯಲಿ ಬೈಗಳ ಕೇಳಿ , ಪುಣ್ಯಕ್ಕೆ ಹೊಸ ಬಸ್ಸು ಕೊಟ್ಟರು. ಒಂದುವಾರದಿಂದ ಹೊಸ ಬಸ್ಸು   ಶುರುಆಗಿದೆ. ಆರಾಮಿದೆ ನೀವು ಬೇಕಾದ್ರೆ ಮಲಗ ಬಹುದು"  ಅಂದರು. ಹೊಚ್ಹ ಹೊಸ ಬಸ್ಸಿನಲ್ಲಿ  ಪಯಣಿಸುವ ಯೋಗ ನನ್ನದಾಗಿತ್ತು. ರಾತ್ರಿ ಹತ್ತೂವರೆಗೆ  ಹೊರಟ  ಬಸ್ಸು  ತುಂಬಿ ತುಳುಕುತ್ತಿತ್ತು.


ಕತ್ತಲಿನ ಬಸ್ಸು  ನಿದ್ದೆ ಮಾಡಲು ಪ್ರಯತ್ನಿಸಿದೆ. ನನ್ನ ಪಕ್ಕ ಇದ್ದ ಒಬ್ಬ ಟೆಕ್ಕಿ ಮೊಬೈಲಿನಲ್ಲಿ ತನ್ನ ಗೆಳತಿಯೊಡನೆ   ನನಗೆ ಕೇಳಿಸುವಷ್ಟು  ಪಿಸುಮಾತಿನಲ್ಲಿ   ಸಲ್ಲಾಪದಲ್ಲಿ ತೊಡಗಿದ , ಇನ್ನು ನಿದ್ದೆಗೆ ಕಲ್ಲುಬಿತ್ತು.  ಚಲಿಸುತ್ತಿದ್ದ ಬಸ್ಸಿನಲ್ಲಿ  ಊರುಗಳ ದರ್ಶನ  ಮಾಡುತ್ತಾ  ಸಾಗಿದೆ.  ಶ್ರೀ ರಂಗಪಟ್ಟಣ ,  ಪಾಂಡವಪುರ  ರೈಲು ನಿಲ್ದಾಣ, ಕೆ.ಆರ್.ಪೇಟೆ,  ಚನ್ನರಾಯ ಪಟ್ಟಣ,  ಅರಸೀಕೆರೆ, ರಾತ್ರಿ  ಒಂದು ಘಂಟೆಗೆ , ಅಲ್ಲೇ ಸ್ವಲ್ಪ ಹೊತ್ತು ನಿಂತ ಬಸ್ಸಿನಿಂದ ಇಳಿದು ಬಾಯಿ ತೊಳೆದು ಸ್ವಲ್ಪ ಕಾಫಿ ಕುಡಿದೆ. ಮನಸಿಗೆ  ಹಿತವಾಯ್ತು   ನಂತರ    ಕಡೂರು, ಬೀರೂರು, ತರೀಕೆರೆ,  ಭದ್ರಾವತಿ, ಶಿವಮೊಗ್ಗ,ತಲುಪಲು  ಸಹ ಪ್ರಯಾಣಿಕ  ಮೊಬೈಲಿನಲ್ಲಿ ಕಿರಿ ಕಿರಿ ಮಾಡಿ ಶಿವಮೊಗ್ಗ ದಲ್ಲಿ ಇಳಿದು ಹೋಗಿದ್ದ. ಪುಣ್ಯಾತ್ಮ ತನ್ನ ಜನ್ಮದ  ಆಸೆಯನ್ನೆಲ್ಲಾ  ಸುಮಾರು ಘಂಟೆಗಳ ಕಾಲ ಮೊಬೈಲ್ ಫೋನಿನಲ್ಲಿ  ಪೂರೈಸಿಕೊಂಡಿದ್ದ. ಜೊತೆಗೆ  ನನ್ನ ನಿದ್ದೆಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದ . ಶಿವಮೊಗ್ಗದಲ್ಲಿ  ಮತ್ತೆ ಜನಗಳ ದಂಡು  ಬಸ್ಸಿಗೆ ಲಗ್ಗೆ ಹಾಕಿತು, "ಇವರೆಲ್ಲಾ  ಸಿರ್ಸಿ ಜಾತ್ರೆಗೆ ಹೊರಟವರು ಸಾರ್ " ಅಂದರು ಒಬ್ಬರು, ಆ ಗಲಾಟಿ ಯಲ್ಲಿ  ನಿದ್ದೆಗೆ ಮತ್ತೆ ಕತ್ತರಿ ಬಿತ್ತು . ಸರಿ ಮತ್ತೆ   ಊರುಗಳ ಎಣಿಕೆ ಪ್ರಾರಂಭ ಆಯಿತು. ಸಾಗರ ದಾಟಿ  ತಾಳಗುಪ್ಪ ರೈಲು ನಿಲ್ದಾಣ ಕಂಡೊಡನೆ  ಕೊಳಲು ಬ್ಲಾಗಿನ  ಒಡೆಯ ಡಾಕ್ಟರ್ ಕೃಷ್ಣ ಮೂರ್ತಿ  ಯವರ ನೆನಪಾಯಿತು. ಸರೀ ರಾತ್ರಿಯಲ್ಲಿ  ತೊಂದರೆ ಕೊಡುವುದು ಸರಿಯಲ್ಲ ವೆಂದು   ಮುಂದುವರೆದೆ. ಮಬ್ಬಾದ ಬೆಳಕಿನಲ್ಲಿ  ಸಿದ್ದಾಪುರ  ನನ್ನನ್ನು ಸ್ವಾಗತಿಸಿತು.   ಬೆಳಿಗ್ಗೆ ಸರಿಯಾಗಿ ಐದು ಕಾಲಿಗೆ ಸಿರಸಿಯ  ಹೊಕ್ಕ ಬಸ್ಸಿನ ಕಂಡಕ್ಟರ್  " ಯಾರುಸಾರ್   ಜೂ ಸರ್ಕಲ್ ಬೇಗ ಬನ್ನಿ "  "ನೋಡ್ರೀ ಇಲ್ಲಿ ಬಿಟ್ರೆ  ಜಾತ್ರೆ  ಬಸ್ ಸ್ಟ್ಯಾಂಡ್  ಮಾತ್ರಾ"    ಎಂದು ಕೂಗಿ ಕರೆದರು . ನಾನೂ ತಡಬಡಾಯಿಸಿ  ಜೂ ಸರ್ಕಲ್ಲಿನಲ್ಲಿ    ಇಳಿದೆ.  ಇಳಿದ ತಾಣದಲ್ಲಿಯೇ  ಕಣ್ಣಿಗೆ ಬಿದ್ದದ್ದು  ನಾನು ತಲುಪಬೇಕಿದ್ದ  "ಗಂಗಾ ವನ  ಎಸ್ಟೇಟು"   ಸರಿ ಅಂತಾ ಇಳಿದು  ಹೊರಟೆ.
 ಎಸ್ಟೇಟ್ ಗೆ ಸಾಗಿದ್ದ ಹಾದಿ 

 ಕಾಲು ಹಾದಿಯಲ್ಲಿ  ಆಗ ತಾನೇ ಬಿಸಿಲಿನ ಕಿರಣ  ಭೂಮಿಗೆ ಬೀಳುವ ಸಮಯವಾಗಿತ್ತು , ಹಕ್ಕಿಗಳ ಚಿಲಿಪಿಲಿ ಶಬ್ದ  , ತಂಗಾಳಿ   ಮನಸಿಗೆ ಸಂತಸ ತಂದಿತ್ತು.  ಹಾಡನ್ನು ಗುನುಗುತ್ತಾ  ಇಳಿಜಾರಿನಲ್ಲಿ   ಸಾಗಿದೆ. ಹಾದಿಯ ಎರಡೂ  ಬದಿಯಲ್ಲಿ  ಹಸಿರು  ತೋಟಗಳ  ಅಡಿಕೆಮರಗಳು  ಹೊಯ್ದಾಡುತ್ತಿದ್ದವು .  ಸೋದರತ್ತೆ  ಮನೆ  ಸುಮಾರು ಒಂದೂ ವರೆ ಕಿ.ಮೀ ಇತ್ತು.  ., ಮನೆಯ ಬಳಿ ಬಂದು ಬಾಗಿಲ ಬಳಿ ನಿಂತೇ  ಬಾಗಿಲು ಬಡಿಯುವ ಮುಂಚೆ  ಬಾಗಿಲ ತೆಗೆದ ಸೋದರತ್ತೆ   ಬಾರೋ  ಮಹಾರಾಜ ಬಂದ್ಯಾ  !!! ಎಷ್ಟು ವರ್ಷಾ ಆಗಿತ್ತು ನಿನ್ನ ನೋಡಿ? ಅಂತಾ ಉಪಚಾರ ಮಾಡಿ  ಬಿಸಿ ಬಿಸಿ ಕಾಫಿ ಕೊಟ್ಟು. ಸ್ವಲ್ಪ ಹೊತ್ತು ಮಲಗು ಅಂದಳು.  ..............ಆಗ ವೇಳೆ  ಬೆಳಿಗ್ಗೆ ಆರು ಘಂಟೆ ಆಗಿತ್ತು. ..............................!!!!

Thursday, September 20, 2012

ನಮ್ಮನ್ಯಾಕ್ ಹಿಂಗ್ ಕರೀತೀರಿ ......????

ಶ್ರೀ ಕೃಷ್ಣ ದೇವರಾಯರು  [ ಚಿತ್ರ ಕೃಪೆ ಅಂತರ್ಜಾಲ]
ಮಹಾ ಕವಿ ಕಾಳಿದಾಸ [ಚಿತ್ರ ಕೃಪೆ ಅಂತರ್ಜಾಲ.]


ಗಣೇಶನ ಹಬ್ಬ ಆಚರಿಸಿ  ಮಾಡಿದ ಹಬ್ಬದ ಅಡಿಗೆ ಗಡದ್ದಾಗಿ  ಹೊಟ್ಟೆ ಸೇರಿತ್ತು,  ದೂರದಲ್ಲಿ  ಯಾವುದೋ ಗಣಪತಿ ಪೆಂಡಾಲ್ ನಿಂದಾ   "ಕರಿಯಾ ಐ  ಲವ್ ಯೂ"         ಅಂತಾ ಹಾಡು ಬರುತ್ತಿತ್ತು, ಹಾಗೆ  ಕುಳಿತಲ್ಲಿಯೇ  ಯಾವುದೋ ಲೋಕ ಹೊಕ್ಕೆ.

ದಾರಿ ದಾರಿ ಬಿಡಿ  ವಿಜಯ ನಗರ  ಸಾಮ್ರಾಟ ಶ್ರೀ ಕೃಷ್ಣ ದೇವರಾಯರು  ಬಿಜಂಗೈಯ್ಯುತ್ತಿದ್ದಾರೆ  ಅಂತಾ ಬೋಪರಾಕ್ ಹಾಕುತ್ತಿದ್ದರು , ನನ್ನ ಕಣ್ಣನ್ನು ನಾನೇ ನಂಬಲು ಆಗುತ್ತಿಲ್ಲಾ, ಅರೆ ಹೌದು  ಸಾಕ್ಷಾತ್   ಶ್ರೀ  ಕೃಷ್ಣ ದೇವರಾಯರ  ಆಗಮನವಾಗುತ್ತಿತ್ತು.  ನಾನೂ ಸಹ ಬರುತ್ತಿದ್ದ ಹಾದಿಯಲ್ಲಿ  ಸಾಷ್ಟಾಂಗ  ಪ್ರಣಾಮ ಮಾಡಿ  ನಿಂತೇ.

 ಆ ದಂಡಿನ ಜೊತೆಯಲ್ಲೇ  ಇನ್ನೊಂದು  ಪಲ್ಲಕ್ಕಿಯಲ್ಲಿ  ಮತ್ತೊಬ್ಬರು ಕುಳಿತಿದ್ದರು  ,  ಮಹಾ ಕವಿ  , ಕಾಳಿಯ ವರ ಪಡೆದ ಮಹಾ ಭಕ್ತ , "ಅಬಿಜ್ಞಾನ ಶಾಕುಂತಲಾ " , "ಮೇಘ ಸಂದೇಶ " "ಕುಮಾರ ಸಂಭವ" ರಚಿಸಿದ "ಮಹಾ ಕವಿ ಕಾಳಿ ದಾಸರು" ಬರುತ್ತಿದ್ದಾರೆ  ಅಂತಾ ಮತ್ತೊಂದು ಪಲ್ಲಕ್ಕಿ ಬಂತು. ಅವರಿಗೂ ಪ್ರಣಾಮ ಸಲ್ಲಿಸಿ ನಿಂತೇ.

ನನ್ನನ್ನು  ಕಂಡ ಇಬ್ಬರೂ  .......  ಯಾರೀ ಮಾನವ , ಎಲ್ಲಿಂದ ಬಂದಾ , ಎಂದು ಅಚ್ಚರಿಪಟ್ಟು,
"ಅಯ್ಯಾ  ನಿನ್ನ  ನಾಮಧೇಯವೇನು, ಎಲ್ಲಿಂದ ಬಂದೆ?"
 ಕೃಷ್ಣ ದೇವರಾಯರು, ಕಾಳಿ ದಾಸರು, ಜೊತೆಯಾಗಿ  ಕೇಳಲಾಗಿ ,

ನಾನು ಇಬ್ಬರನ್ನು ಗೌರವದಿಂದ ಮತ್ತೊಮ್ಮೆ ನಮಿಸಿ
," ಸ್ವಾಮೀ  ನಾನು "ನಿಮ್ಮೊಳಗೊಬ್ಬ "  ಎಂಬ ಹೆಸರಿನವ. ಭಾರತ ದೇಶದ  ಕನ್ನಡನಾಡಿನ  ಮೈಸೂರಿನವ " ಎಂದೇ.
 ಮೈಸೂರು ಎಂಬ ಪದ ಕಿವಿಗೆ ಬಿದ್ದ ತಕ್ಷಣ  ಇಬ್ಬರ ಮುಖದಲ್ಲೂ ನೋವಿನ ಗೆರೆ ಹಾದುಹೋಗಿ. , ಬೇಸರದ ಛಾಯೆಯಿಂದ

"ಅಯ್ಯಾ ಮೈಸೂರಿನವನೇ  ಯಾಕಪ್ಪಾ ಇಲ್ಲಿಗೆ ಬಂದೆ ? , ನಮ್ಮನ್ನು ಇಲ್ಲಿಯೂ  ನೆಮ್ಮದಿಯಾಗಿ ಇಡಲು ಇಷ್ಟವಿಲ್ಲವೇ ? ದಯಮಾಡಿ  ಮೊದಲು  ಇಲ್ಲಿಂದ ತೆರಳು , ಇಲ್ಲದಿದ್ದರೆ   ನಮಗೆ ಬರುವ ಕೋಪದಲ್ಲಿ....... ನಿನಗೆ ಶಿಕ್ಷೆ ನೀಡ ಬೇಕಾದೀತು ಎಂದರು."

ನನಗೂ ಕೋಪ ಬಂದು
''ಅಲ್ಲಾ ಪ್ರಭು  ನಾನು ತಮ್ಮ ಬಗ್ಗೆ ಗೌರವ ದಿಂದ ನಮಿಸಿ  ನಿಂತು , ತಮ್ಮ ಪ್ರಶ್ನೆಗೆ ಉತ್ತರಿಸಿದೇ , ಮೈಸೂರು ಹೆಸರು ಹೇಳಿದ ತಕ್ಷಣ  ತಮಗೇಕೆ ಇಷ್ಟೊಂದು ಸಿಟ್ಟು?, ನಾವೇನು ಮಾಡಿದ್ದೇವೆ''        ಎಂದು ಕೇಳಿದೆ.

ಆಗ ಮತ್ತಷ್ಟು ಬೇಸರದಿಂದ  "ನೀವು ಆಧುನಿಕ ಜನಗಳಪ್ಪಾ  ಯಾರ ಮಾನವನ್ನಾದರೂ ಸುಲಭವಾಗಿ ಕಳೆಯುತ್ತೀರಿ  , ನಮ್ಮದನ್ನು ಕಳೆದಿರುವ ಹಾಗೆ "   ಅಂದರು.

ನನಗೋ ಅಚ್ಚರಿ

   "ಏನು ಸ್ವಾಮೀ  ನಾವು ನಿಮ್ಮ ಮಾನವನ್ನು  ಕಳೆದೆವೆ ? ತಮ್ಮ ಬಗ್ಗೆ ಕನ್ನಡಿಗರು  ಎಷ್ಟೊಂದು ಅಭಿಮಾನ ಇಟ್ಟುಕೊಂಡು  ತಮ್ಮ ಊರಿನ ರಸ್ತೆಗಳಿಗೆ,  ವೃತ್ತಗಳಿಗೆ  , ತಮ್ಮ ಹೆಸರನ್ನು ನಾಮಕರಣ ಮಾಡಿ ತಮ್ಮ ಹೆಸರನ್ನು ಅಜರಾಮರ ಗೊಳಿಸುತ್ತಿದ್ದೇವೆ ,   ಅಂತದ್ದರಲ್ಲಿ  ಸುಮ್ಮನೆ  ಕೋಪಾವೇಶದಿಂದ  ಅಪಾದನೆ ಮಾಡುತ್ತಿದ್ದೀರಿ."  ಎಂದೇ.

ನನ್ನನ್ನು ನೋಡಿ ವಿಷಾದದ  ನಗೆ ನಕ್ಕ ಇಬ್ಬರು

  "ಅಯ್ಯಾ  ಕನ್ನಡಿಗ  ಮೊದಲು ನಮ್ಮ ಹೆಸರನ್ನು  ನಿಮ್ಮ ಪಟ್ಟಣಗಳಲ್ಲಿ  ರಸ್ತೆಗಳಿಗೆ, ವೃತ್ತಗಳಿಗೆ , ಕಟ್ಟಡಗಳಿಗೆ, ಬಸ್ ನಿಲ್ದಾಣಗಳಿಗೆ  ನಾಮಕರಣ ಮಾಡುವುದನ್ನು  ನಿಲ್ಲಿಸಿ ನಮಗೆ ನೆಮ್ಮದಿ ಕೊಡಿ. ನಾವು ಬದುಕಿದ್ದಾಗ  ಕನ್ನಡಿಗರಿಗೆ,ಭಾರತೀಯರಿಗೆ ಯಾವ ಅನ್ಯಾಯವನ್ನೂ ಮಾಡಿಲ್ಲಾ , ಆದರೆ  ನೀವುಗಳು ಮಾತ್ರ ನಾವು  ಬದುಕಿಲ್ಲದಿದ್ದರು  ನಮ್ಮ ಹೆಸರನ್ನು  ನಿಮ್ಮ ಪಟ್ಟಣಗಳಲ್ಲಿ  ರಸ್ತೆಗಳಿಗೆ, ವ್ರುತ್ತಗಳಿಗೆ, ಕಟ್ಟಡಗಳಿಗೆ, ಬಸ್ ನಿಲ್ದಾಣಗಳಿಗೆ  ನಾಮಕರಣ ಮಾಡಿ  ಪ್ರತಿಕ್ಷಣಕ್ಕೂ  ನಿಮ್ಮಿಷ್ಟದಂತೆ ಕರೆದು   ನಮ್ಮ ಮಾನ ಕಳೆಯುತ್ತಾ ನಿತ್ಯವೂ   ಶಿಕ್ಷೆ ನೀಡುತ್ತಿದ್ದೀರ  ,ನಾವೇನು ನಿಮ್ಮ ಬಳಿ ಬಂದು ನಮ್ಮ ಹೆಸರನ್ನು ಇಡಲು  ಬೇಡಿದ್ದೆವೆ  ??   ದಯವಿಟ್ಟು ಅವುಗಳನ್ನು ಅಳಿಸಿ ಹಾಕಿ ನಮಗೆ ನೆಮ್ಮದಿ ನೀಡಿ ಎಂದು  ಕೈ ಮುಗಿದು ಬೇಡುತ್ತೇವೆ" ಎಂದರು.

ನನಗೆ ಏನೂ ಅರ್ಥವಾಗದ  ಮನಸ್ಥಿತಿ  ,

 "ದಯಮಾಡಿ ಸ್ವಾಮೀ  ನಿಮ್ಮ ಹೆಸರನ್ನು ನಾಮಕರಣ ಮಾಡಿದ್ದರ ನಮ್ಮ ಆಪರಾಧ  ಏನೂ ಎಂದು ಅರ್ಥ ಆಗುತ್ತಿಲ್ಲಾ??"  ಎನ್ನಲು.

"ಅಯ್ಯಾ ಮಂಕೆ , ನೋಡು ನಮ್ಮ ಹೆಸರನ್ನು  ಇಟ್ಟಿರುವ  ರಸ್ತೆಗಳಿಗೆ, ವೃತ್ತಗಳಿಗೆ   ನೀವು ಎಲ್ಲರೂ  ದಿನವೂ ಬಳಕೆಯಲ್ಲಿ   ಪ್ರತಿ ಕ್ಷಣ ದಲ್ಲೂ   ಕರೆಯುವ ಹೆಸರು  "ಕೃಷ್ಣ ದೇವರಾಯ ವೃತ್ತಕ್ಕೆ ಕೇಡಿ ಸರ್ಕಲ್ "  ಎಂದೂ, "ಕಾಳಿದಾಸ ರಸ್ತೆಗೆ  ಕೇಡಿ ರಸ್ತೆ"   ಹಾಗಾಗಿ ನಮ್ಮ ಹೆಸರನ್ನು  ನಾವು  ಬದುಕಿದ್ದಾಗ ಯಾವುದೇ ಅಪರಾಧ ಮಾಡದೆ ಇದ್ದರೂ  ನಮ್ಮನ್ನು  ಕೇಡಿ  ಗಳನ್ನಾಗಿ ಗುರ್ತಿಸಿ,  ನಮ್ಮ ಮರ್ಯಾದೆ ತೆಗೆಯುತ್ತಿದ್ದೀರಿ  , ನಿಮಗೆ ಯಾವ ಜನ್ಮದ ಸಿಟ್ಟು ನಮ್ಮಿಬ್ಬರ ಮೇಲೆ"  ಎಂದು  ಅಬ್ಬರಿಸಿದರು.  
ನಾನೂ ಅಚ್ಚರಿಯಿಂದ  ಬೆಪ್ಪಾಗಿ ನಿಂತೇ , 
ಅಷ್ಟರಲ್ಲಿ ನನ್ನ ಹೆಂಡತಿ " ರೀ  ಏಳ್ರೀ , ಇನ್ನೂ ಮಲಗೆ ಇದ್ದೀರಲ್ಲಾ , " ಎಂದು ಎಬ್ಬಿಸಿದಳು, ನಾನೆಲ್ಲಿದ್ದೇನೆ ಎಂದು  ವಾಸ್ತವಕ್ಕೆ ಬರುವಷ್ಟರಲ್ಲಿ ನನ್ನ ಮಗಾ  ಬಂದು "
 "ಅಪ್ಪಾ   ಕೇಡಿ  .ರೋಡಲ್ಲಿ  ಸ್ವಲ್ಪ ಕೆಲ್ಸಾ ಇದೆ  ನಿಮ್ಮ ಗಾಡಿ ತಗೊಂಡು  ಹೋಗ್ತೀನಿ ಅಂದಾ  ............!!!! "ನಾನು ಮತ್ತೆ ಬೆಪ್ಪನಾಗಿ ಶ್ರೀ ಕೃಷ್ಣ ದೇವರಾಯ ರಿಗೂ,  ಕಾಳಿದಾಸರಿಗೂ  ಮನದಲ್ಲೇ  ನೋವಿನಿಂದಾ ಕ್ಷಮೆ ಕೋರಿದೆ.    

"ನಾವು ಹೀಗೆ ನಾಯಿ ಬಾಲ ಡೊಂಕು ಆಲ್ವಾ " ನೀವೇನಂತೀರಿ ??

Sunday, September 16, 2012

ಗಣಪತಿ ಬಂದ ದಾರಿಬಿಡಿ......!!!ಕಡುಬು ತಿನ್ನೋಣ ಎಲ್ಲಾ ಬನ್ನಿ !!!

ಚಿತ್ರ ಕೃಪೆ ಅಂತರ್ಜಾಲ 




ಸುಮಾರು ಒಂದು ಹತ್ತು ದಿನಗಳ ಹಿಂದೆ  ಆಫಿಸ್ ನಿಂದಾ ಮನೆಗೆ ಬರುತ್ತಿದ್ದೆ. ಅಲ್ಲೊಂದು ಸಣ್ಣ ಜಗಳ , ಹೂ ಮಾರುವವನಿಗೂ ಮತ್ತೊಬ್ಬ ನಿಗೂ ......!
 ಮತ್ತೊಬ್ಬ :-ಅಲ್ಲಾ  ಕಣಯ್ಯ  ಅವತ್ತು  ಐದು ಸಾವ್ರಾ  ಇಸ್ಕಂದಲ್ಲಾ  ದೊಡ್ಮನ್ಸಾ  , ಎಲ್ಲಯ್ಯ  ಕಾಸೂ ಇಲ್ಲಾ ನೀನೂ ಇಲ್ಲಾ

ಹೂಮಾರುವವ :- ಇಲ್ಲಾ ಕಣಣ್ಣಾ ...... ಒಸಿ  ಪಿರಾಬ್ಲಾಮ್ಮು ,  ಗಣಪತಿ ಹಬ್ಬ ಆಗ್ಲಿ ಕೊಡ್ತೀನಿ  ಸುಮ್ಕಿರು , ಅವತ್ತು  ಹೂ       ಕೊಡೂಕೆ  ಐದುತವು   ಆಡ್ರೂ  ತಗಂದೀವ್ನಿ,  ಮತ್ತೆ ಇನ್ನೋದಷ್ಟು ಬತ್ತದೆ ಹೆಂಗೋ ಮಾಡಿ ಒಸಿ ಲಾಭಾ  ಮಾದ್ಕತೀನಿ  ಕಣಣ್ಣಾ  , ಒಸಿ ಅವಕಾಸ ಕೊಡು .


ಹೌದಲ್ವಾ  ಇಂತಹ ಘಟನೆಗಳು ನಿಮ್ಮ ಕಣ್ಣಿಗೂ  ಬಿದ್ದಿರುತ್ತೆ  , ಯಾವುದೇ ಹಬ್ಬಕಿಂತಾ  ಗಣಪತಿ , ಗೌರಿ  ಹಬ್ಬಕ್ಕೆ ಬಹಳಷ್ಟು ಜನ  ಕಾಯ್ತಾ ಇರ್ತಾರೆ. ಯಾಕೆ.?? ಉತ್ತರ ಹುಡುಕುತ್ತಾ ಹೋದಂತೆ ಹಲವು ವಿಚಾರಗಳು ಬೆಳಕಿಗೆ ಬಂತು. ಗೌರಿ ಹಬ್ಬಕ್ಕೆ  ಮನೆಯ ಮಗಳಿಗೆ  ಬಳೆ  ತೊಡಲು  ಸ್ವಲ್ಪ ಹಣ , ತವರು ಮನೆ ಯಿಂದ  ಸೀರೆ ಕಾಣಿಕೆ, ಗೌರಿ ಬಾಗಿನ ,  ಹೊಸ ಮೊರದ  ಖರೀದಿ, ಬಿಚ್ಚಾಲೆ , ಬಳೆಗಳ ಸರ , ಹೂ, ಹಣ್ಣು , ಇವುಗಳ ಬರಾಟೆ , ಗೌರೀ ಬಾಗಿನದ  ಪರಸ್ಪರ ವಿನಿಮಯ, ಇವುಗಳ
 ಸಂಪ್ರದಾಯ . ಮುಂತಾದ  ವಿವಿಧ ಚಟುವಟಿಕೆಗಳು. .

ಇನ್ನು  ಗಣಪತಿ ಹಬ್ಬ ಬಂದರೆ , ಕಲಾವಿದರು, ಹೂ, ಹಣ್ಣು, ತರಕಾರಿ, ಹಾಗೂ ಎಲ್ಲ ಬಗೆಯ ವ್ಯಾಪಾರಿಗಳು, ಪುರೋಹಿತರು, ಕ್ಯಾಸೆಟ್ , ಸಿ.ಡಿ ,ವ್ಯಾಪಾರಿಗಳು, ಟಿ .ವಿ . ಚಾನಲುಗಳು  ತಮ್ಮ  ತಮ್ಮ ಪ್ರತಿಭೆ  ತೋರಿ ಸ್ವಲ್ಪ ಲಾಭ ಮಾಡಿ ಕೊಳ್ಳುತ್ತಾರೆ , ಹಬ್ಬಕ್ಕೆ ಮೊದಲು  ಬೀದಿ ಬೀದಿಯಲ್ಲಿ ದುಡ್ಡು ಶೇಖರಿಸಿ  ಗಣೇಶನನ್ನು ಕೂರಿಸಿ ನಲಿಯುತ್ತಾರೆ.  ಹಾಗೂ ಹೀಗೂ ಯಾವುದೋ ಸಡಗರದಲ್ಲಿ  ನಮ್ಮದೇ ರೀತಿಯಲ್ಲಿ  ಗೌರಿ, ಗಣಪತಿ  ಹಬ್ಬ ಆಚರಣೆ ಆಗಿ  ಮರೆತು ಹೋಗುತ್ತದೆ . ಯಾವ ಹಬ್ಬಕ್ಕೂ ಇಲ್ಲದ  ವಿಶೇಷ  ಈ ಹಬ್ಬದಲ್ಲಿ ಕಾಣದೆ ಮರೆಯಾಗುತ್ತದೆ.

 ಇನ್ನು ಗಣಪತಿ ಹಬ್ಬಕ್ಕೆ, ಮನೆಯಲ್ಲಿನ ಪುಟ್ಟ ಮಕ್ಕಳಿಗೆ  ಬಟ್ಟೆ, ಹತ್ತಿಯಿಂದ ಮಾಡಿದ  ಇಪ್ಪತ್ತೊಂದು ಎಳೆಯ ಗೆಜ್ಜೆವಸ್ತ್ರ  ತಯಾರಿ , ಬಗೆ ಬಗೆಯ ಅಲಂಕಾರ ಕ್ಕೆ ತಯಾರಿ, ಹೂ, ಹಣ್ಣುಗಳ ಮೆರೆದಾಟ, ವಿವಿಧ  ಜಾತಿಯ ಪತ್ರೆಗಳ   ಸಂಗ್ರಹಣೆ,
ಗರಿಕೆ ಹುಲ್ಲಿನ ಹುಡುಕಾಟ, ಅಭಿಷೇಕಕ್ಕೆ, ಹಾಲೂ.ಮೊಸರು,, ತುಪ್ಪ, ಜೇನು,ಸಕ್ಕರೆ, ಇವುಗಳ ಸಂಗ್ರಹ,, ಬಗೆ ಬಗೆಯ ಹೂಗಳ ಸಂಗ್ರಹ,  ಜೊತೆಗೆ  ಗಣಪನಿಗೆ ವಿವಿಧ ಬಗೆಯ ಕಡುಬು, ಭಕ್ಷ್ಯ ಗಳ ಸಮರ್ಪಣೆ  ಇತ್ಯಾದಿ .ಇಡೀ ಮನೆಯೇ ಸಂಭ್ರಮದ ಸಾಗರವಾಗಿ ಬಿದುತ್ತದೆ .
ಚಿತ್ರ ಕೃಪೆ ಅಂತರ್ಜಾಲ.


 ಹೌದೂ ನೀವು ಗಮನಿಸಿದ್ದೀರಾ??  ಗಣಪತಿ ಹಬ್ಬದಲ್ಲಿ  ನಾವರಿಯದ  ಪುಷ್ಪಗಳು, ಪತ್ರೆಗಳ ವಿವರ ಇದೆ!! ಆದರೆ ನಾವು ಅವುಗಳ ಬಗ್ಗೆ ಅರಿಯದೆ  ಮಂತ್ರಕ್ಕೆ ತಕ್ಕಂತೆ  ಆ ಸಮಯಕ್ಕೆ ಸಿಗುವ ಯಾವುದೋ  ಒಂದನ್ನು ಅರ್ಪಿಸುತ್ತೇವೆ. ನಂತರ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ . ಬನ್ನಿ  ಮಂತ್ರದಲ್ಲಿ ಬರುವ  21 ಪುಷ್ಪಗಳಹಾಗು 21 ಪತ್ರೆಗಳ   ಬಗ್ಗೆ ತಿಳಿಯೋಣ, ಇವುಗಳಲ್ಲಿ ಕೆಲವು ಪುಷ್ಪಗಳ , ಪತ್ರೆಗಳ ಹೆಸರು ಮಾತ್ರ ನನಗೆ ಗೊತ್ತು ಆದರೆ ಕೆಲವು ಹೆಸರುಗಳ ಪುಷ್ಪ, ಪತ್ರೆಗಳನ್ನು ಅಡಿಗೆ , ಮುಂತಾದವುಗಳ ಬಗ್ಗೆ  ಅರಿತು ತಿಳಿದುಕೊಳ್ಳಬೇಕಾಗಿದೆ .



ಪತ್ರೆಗಳು :- 1]ಭ್ರುಂಗರಾಜ ಪತ್ರೆ  2] ಬಿಲ್ವಪತ್ರೆ   3] ಶ್ವೇತ  ದೂರ್ವಾಪತ್ರ  4] ಬದರೀ ಪತ್ರ, 5] ದತ್ತೂರ ಪತ್ರೆ, 6]  ತುಳಸಿ ಪತ್ರೆ  7] ಶಮಿಪತ್ರೆ   8] ಅಪಾಮಾರ್ಗ ಪತ್ರೆ, 9] ಬೃಹತಿ ಪತ್ರೆ, 10] ಕರವೀರ ಪತ್ರೆ 11] ಆರ್ಕ ಪತ್ರೆ, 12] ಅರ್ಜುನ ಪತ್ರೆ  13] ಮಾಲತಿ ಪತ್ರೆ, 14]ವಿಷ್ಣು ಕಾಂತ ಪತ್ರೆ, 15] ದಾಡಿಮೀ  ಪತ್ರೆ, 16] ದೇವದಾರು ಪತ್ರೆ, 17] ಮರುವಕ ಪತ್ರೆ  18] ಅಶ್ವತ್ಥ ಪತ್ರೆ, 19] ಜಾಜೀ ಪತ್ರೆ, 20] ಕೇತಕಿ ಪತ್ರೆ, 21] ಅಗಸಿ ಪತ್ರೆ

 ಪುಷ್ಪಗಳು :-1}  ದತ್ತೂರ ಪುಷ್ಪ, 2] ಕರವೀರ  ಪುಷ್ಪ, 3]  ಆರ್ಕ ಪುಷ್ಪ ,4] ಮಾಲತಿ ಪುಷ್ಪ  5]ದಾಡಿಮೀ ಪುಷ್ಪ, 6] ಜಾಜೀ  ಪುಷ್ಪ, 7] ಮಲ್ಲಿಕಾ ಪುಷ್ಪ, 8] ಸೇವಂತಿಕಾ ಪುಷ್ಪ, 9] ಸುಗಂಧರಾಜ ಪುಷ್ಪ,10] ಚಂಪಕ[ ಸಂಪಿಗೆ] ಪುಷ್ಪ, 11] ಕುರಂಟಕ  ಪುಷ್ಪ , 12] ಪೂಗ ಪುಷ್ಪ, 13] ಪುನ್ನಾಗ ಪುಷ್ಪ, 14] ವಕುಳ ಪುಷ್ಪ ,15] ಪದ್ಮ [ ತಾವರೆ] ಪುಷ್ಪ 16] ನೀಲೋತ್ಪಲ ಪುಷ್ಪ, 17] ತಮೂಲ  ಪುಷ್ಪ, 18] ಕುಂದ  ಪುಷ್ಪ  19] ಗಿರಿಕರ್ಣಿಕಾ  ಪುಷ್ಪ,20] ಜಪಾ ಪುಷ್ಪ, 21] ಪಾಟಲಿ ಪುಷ್ಪ,

ಇದರ ಜೊತೆಗೆ  ಗರಿಕೆ ಹುಲ್ಲು  ಗಳ ಸಮರ್ಪಣೆ  , ಇದೇನ್ರೀ ಇದು ಅಂತೀರಾ  ಇಪ್ಪತ್ತೊಂದು ಬಗೆಯ ಪತ್ರೆಗಳಲ್ಲಿ  ನಮಗೆ ಗೊತ್ತಿರೋದು  ಒಂದೋ ಎರಡೋ, ಅಥವಾ ಐದೋ ಇರಬಹುದು  ಉಳಿದವು  .....??? ಗೊತ್ತಿಲ್ಲಾ , ಇನ್ನುಪುಷ್ಪ ಗಳಿಗೂ ಇದೆ ಅನ್ವಯಿಸುತ್ತೆ   21 ರಲ್ಲಿ ಅತೀ ಹೆಚ್ಚೆಂದರೆ 8 ರಿಂದಾ ಹತ್ತು ಮಾತ್ರ  ಉಳಿದವು  ಗೊತ್ತಿಲ್ಲಾ .

ಇನ್ನು  ಗಣಪತಿಗೆ ಪ್ರಿಯವಾದ  ಭಕ್ಷಗಳ ಬಗ್ಗೆ ತಿಳಿಯೋಣ ಬನ್ನಿ:- 1]  ಪಾಯಸ, 2] ಪರಮಾನ್ನ , 3] ಮೋದಕ ,4] ಚಕ್ಕುಲಿ, 5] ಫೇಣಿ, 6] ಮಂಡಕಾ ,  7] ಲಡ್ಡು, 8] ಪಾನಕಾ , 9] ಮಧು ಪರ್ಕಂ , 10] ಪಂಚ ಕಜ್ಜಾಯ11] ಅತೀರಸ 12] ಮಹಾ ರಸ[ ಇವುಗಳಲ್ಲಿ ಕೆಲವು ಮಾತ್ರ ಗೊತ್ತು ]

ಹಣ್ಣುಗಳು :- 1]  ಕದಳೀ ಫಲ , 2] ನಾರಿಕೇಳ 3] ಜಂಬೀರ 4] ಇಕ್ಷುರಸ 5] ಲಾಜಾ 6]  ಚಿಪಿಟ  7]  ದ್ರಾಕ್ಷಾ  ಫಲ, 8] ರಂಭಾ ಫಲ  9] ಬಹು ಬೀಜ ಫಲ, 10] ನಾರಂಗ ಫಲ, 11] ಚಕ್ಕೋತ ಫಲ, 12] ಆಮ್ರ ಫಲ,[ ಇವುಗಳಲ್ಲಿ 5 ಮಾತ್ರಾ ಗೊತ್ತು]


ಮೇಲೆ ಹೇಳಿದ ಎಲ್ಲವನ್ನೂ ಪೂರ್ಣವಾಗಿ ತಿಳಿದು ಕೊಳ್ಳುವ ಗೋಜಿಗೆ ಯಾರೂ ಹೋಗಿಲ್ಲಾ  , ಈ ಹಬ್ಬದಲ್ಲಿ  21 ಬಗೆಯ ಪತ್ರೆಗಳು  ನಮ್ಮ ನೆಲದಲ್ಲಿ ಬೆಳೆಯುವ  ನಮ್ಮ ಪರಿಸರದ  ಗಿಡ ಮರಗಳ ಎಲೆಗಳು ,  21 ಬಗೆಯ ಹೂಗಳು ,  ನಮ್ಮದೇ ನೆಲದ ಪ್ರಕೃತಿಯ ಕೊಡುಗೆ, 12 ಬಗೆಯ ಹಣ್ಣುಗಳು ನಮ್ಮ ನೆಲದ ಗಿಡ ಮರಗಳಿಂದ ಹೊಮ್ಮಿದ  ಫಲಗಳು, ಇನ್ನು  ಅಡಿಗೆಗೆ ಉಪಯೋಗಿಸುವ  ಧಾನ್ಯ, ಹಾಗು ಪತ್ರೆ , ಪದಾರ್ಥಗಳು  ನಮ್ಮ ರೈತರು  ಬೆವರು ಹರಿಸಿ ಬೆಳೆದ  ಬೆಳೆಯ  ಕೊಡುಗೆಗಳು.  ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ   ಯಾವುದೋ ರೀತಿಯಲ್ಲಿ  ಹಬ್ಬವನ್ನು ಆಚರಣೆ ಮಾಡುತ್ತೇವೆ.
ಪ್ರತಿ ನಿತ್ಯ ಆಗಸದಲ್ಲಿ ಚಂದ್ರನನ್ನು ನೋಡದಿದ್ದರೂ ಅಂದು ಮಾತ್ರ  ಚೌತಿ ಚಂದ್ರನ  ದರ್ಶನ  ಹೆದರಿಕೆಯಿಂದಾ  ಆಗಸ ನೋಡದಂತೆ  ತಲೆಯನ್ನು ಬಲವಂತ ವಾಗಿ ತಗ್ಗಿಸಿ ನಡೆಯುತ್ತೇವೆ. ಇನ್ನು ಅಪ್ಪಿ ತಪ್ಪಿ ನೋಡಿಬಿಟ್ರೆ  ಮುಂದೆ ಹೇಳೋದೇ ಬೇಡಾ ..........!!!ಆಲ್ವಾ ನಮ್ಮ ಮನಸನ್ನು ಸಮಾಧಾನ ಗೊಳಿಸಲು ಆ ಗಣಪನೆ ಬರಬೇಕು.


 ಬನ್ನಿ ಈ ಸಾರಿಯಾದರೂ  ಬಲ್ಲವರಿಂದ ಪೂಜೆಯಲ್ಲಿ ಉಪಯೋಗಿಸುವ  ಪತ್ರೆಗಳ ಬಗ್ಗೆ, ಫಲಗಳ ಬಗ್ಗೆ, ಪುಷ್ಪಗಳ ಬಗ್ಗೆ,  ಮುಂತಾದ ವಿಚಾರಗಳ ಬಗ್ಗೆ ತಿಳಿದು ಜ್ಞಾನವಂತರಾಗಿ  ಸೌಹಾರ್ಧದಿಂದ   ಗೌರಿ, ಗಣಪತಿ  ಹಬ್ಬ ಆಚರಿಸಿ ಧನ್ಯರಾಗೋಣ.  ಪರಿಸರಕ್ಕೆ ಹಾನಿಯಾಗದಂತೆ  ಮಣ್ಣಿನ ಗಣಪತಿ ಗೌರಿ ಕೂರಿಸಿ  ಪರಿಸರ ರಕ್ಷಿಸಿ  ಸಿಹಿ , ಖಾರ ಕಡುಬು ತಿನ್ನುತ್ತಾ  ಸಂತಸದ  ಹಬ್ಬ ಆಚರಿಸೋಣ. ಎಲ್ಲರಿಗೂ  ಒಳ್ಳೆಯದಾಗಲೆಂದು ಪ್ರಾರ್ಥಿಸೋಣ

ಚಿತ್ರ ಕೃಪೆ ಅಂತರ್ಜಾಲ 

 "ತಮಗೆ ಹಾಗು ತಮ್ಮ ಕುಟುಂಬಕ್ಕೆ  ಗೌರಿ ಹಾಗು ಗಣಪತಿ ಹಬ್ಬದ ಶುಭಾಶಯಗಳು."




Sunday, September 9, 2012

ಎಲ್ಲ ಬಲ್ಲವರಿಲ್ಲ , ಬಲ್ಲವರು ಯಾರಿಲ್ಲಾ , ಎಲ್ಲವನು ಬಲ್ಲೆನೆಂದು ಹೇಳುವೆವಲ್ಲಾ!!!!

ಇವತ್ತು ಭಾನುವಾರ  ಎಲ್ಲವೂ ನಿಧಾನ , ಸರಿ  ಅಂತಾ  ಕಂಪ್ಯೂಟರ್ ಆನ್ ಮಾಡಿ ಬ್ಲಾಗ್ ಗೆಳೆಯರ  ಬ್ಲಾಗ್ ಬರಹಗಳನ್ನು ಓದೋಣ ಅಂತಾ ಕುಳಿತೆ. ಜೊತೆಗೆ ನನ್ನ ಕಂಪ್ಯೂಟರ್ ನಲ್ಲಿ ಹಳೆಯ ಕನ್ನಡ ಚಿತ್ರ ಗೀತೆಗಳ  ಹಾಡುಗಳು ಮನಸನ್ನು ಪ್ರಸನ್ನ ಗೊಳಿಸಿತ್ತು. ಹಲವರ ಬರಹಗಳು  ಜ್ಞಾನದೀಪಗಳಾಗಿದ್ದವು . ಮತ್ತೆ  ಕೆಲವರು ಕೆಲವು ಜಾತಿಗಳ , ಪಂಗಡಗಳ , ವಿರುದ್ಧ  ಕೆಂಡ ಕಾರಿದ್ದರು, ಓದಿ ಮನಸ್ಸು ರಾಡಿಯಾಯಿತು . ಯಾಕೋ ಕಾಣೆ  ನನ್ನಂಥ  ಕೆಲವರಿಗೆ ತಾನು ಎಲ್ಲವನ್ನೂ   ತಿಳಿದು ಬಿಟ್ಟಿದ್ದೇನೆ , ಜ್ಞಾನದಲ್ಲಿ ನನ್ನನ್ನು ಮೀರಿಸುವವರಿಲ್ಲಾ ಎಂಬ ಅಹಂ.......!! ನಾನೊಬ್ಬ ಮಾತ್ರಾ ಸರಿ  ಉಳಿದವರೆಲ್ಲಾ  ದಡ್ಡರು,  ನಾನು ತಿಳಿದು ಕೊಂಡದ್ದು ಮಾತ್ರಾ  ಸತ್ಯ, ಉಳಿದವರು  ಅಜ್ಞಾನಿಗಳು ಎನ್ನುವ  ಭಾವನೆ ಮೂಡತೊಡಗಿ, ಪ್ರವಾಧಿಗಳಂತೆ ಆಡುತ್ತಾರೆ. ತಮ್ಮಷ್ಟಕ್ಕೆ  ತಾವೇ  ಸಮಾಜದ ಗುತ್ತಿಗೆ ಪಡೆದ ಇವರು ತಾಯಿ ಸರಸ್ವತಿ ನೀಡಿದ ಅಮೃತದಂತ   ಜ್ಞಾನವನ್ನು ವಿಷವಾಗಿ ಕಕ್ಕಿ  ಸಮಾಜ ಒಡೆಯಲು ಉಪಯೋಗಿಸುತ್ತಾ , ವಿಕೃತ ಆನಂದಾ ಅನುಭವಿಸುತ್ತಾರೆ.  "ಯಾವ ಧರ್ಮವೂ ಹಿಂಸೆ ಯನ್ನು ಪ್ರಚೋದಿಸುವುದಿಲ್ಲಾ ", ಹಾಗು ದೈಹಿಕ ಹಿಂಸೆ ಮಾತ್ರವೇ ಹಿಂಸೆ ಯಲ್ಲಾ ವಿಕೃತ ಜ್ಞಾನದ ಬರವಣಿಗೆ ಮೂಲಕ  ಸಮಾಜವನ್ನು ಒಡೆಯುವುದೂ  ಸಹ  ಹಿಂಸೆಯೇ..  ಪ್ರತಿಯೊಂದು  ಧರ್ಮವೂ ಸಹ ಒಂದೊಂದು ಪವಿತ್ರ  ನದಿಯಂತೆ  ಅದು ತನ್ನದೇ ಆವಿಷ್ಕಾರದ  ಹಾದಿಯಲ್ಲೇ ಸಾಗಿ  ಜ್ಞಾನ ಸಾಗರವನ್ನು ತಲುಪುತ್ತದೆ. ಎಲ್ಲಾ ನದಿಗಳು ಒಂದೇ ರೀತಿ ಹರಿಯುವುದಿಲ್ಲಾ , ಆದರೆ ಸೇರುವ ತಾಣ ಮಾತ್ರ ಭೂಮಿಯಲ್ಲಿನ  ಮಹಾ ಸಾಗರಗಳನ್ನೇ , ಹಾಗೆ ನಮ್ಮ  ಎಲ್ಲಾ ಧರ್ಮಗಳೂ ಕೂಡ  ತಮ್ಮದೇ ಹರಿವಿನಲ್ಲಿ ಹರಿದು ಕೊನೆಗೆ ಜನರಿಗೆ ನೀಡುವುದು ಜ್ಞಾನದ ಬೆಳಕನ್ನೇ......  ಇದನ್ನು ಅರಿಯದೆ  ತಾವೇ ಮಹಾ ಜ್ಞಾನಿಯಂತೆ  ಬೀಗುತ್ತಾ  ಯಾವುದೋ ಧರ್ಮದ, ಜಾತಿಯ  , ಏಜೆಂಟ್  ರಂತೆ   ಸಮಾಜದ ಸ್ವಾಸ್ಥ್ಯ  ಕದಡುವ ಬರಹ ಬರೆಯುವುದು ಸಾಮಾಜಿಕ ತಾಣಲ್ಲಿ  ಕಂಡು ಬರುತ್ತಿದೆ. ಬ್ಲಾಗ್ ತಾಣದಲ್ಲಿ ವ್ಯಕ್ತಿಯ  ಜ್ಞಾನಕ್ಕೆ, ಪ್ರೀತಿಯ ಹೃದಯಕ್ಕೆ ,  ಸಮಾಜ ಕಟ್ಟುವ ಕೆಲಸಕ್ಕೆ,  ಮಾತ್ರ ಬೆಲೆ ಇರಬೇಕೆ ಹೊರತು ಪಡಿಸಿ, ಸಮಾಜ ಒಡೆದು  ತನ್ನ ಜ್ಞಾನ ಪ್ರದರ್ಶನ ಮಾಡಿ  ದೇಶವನ್ನು ದುರ್ಬಲ ಗೊಳಿಸುವುದಲ್ಲಾ .  ಒಳ್ಳೆಯ ಭಾನುವಾರ  ಒಳ್ಳೆಯ ಯೋಚನೆ ಮೂಡಿಸುವ ಬದಲು  ಇಂತಹ ಬರಹ  ಕಟ್ಟ ಮುನ್ನುಡಿ ಬರೆದಿತ್ತು.  ಅಷ್ಟರಲ್ಲಿ  ನನ್ನ ಗೆಳೆಯ  ಲೆಫ್ಟಿನೆಂಟ್  ನಂದಕುಮಾರ್ ಕರೆ ಬಂತೂ   ಮೊಬೈಲ್  ನಲ್ಲಿ ಮಾತಾಡುತ್ತಾ  ಇದೆ ವಿಚಾರ ಪ್ರಸ್ಥಾಪ  ಮಾಡಿದೆ , ಅವನೂ ಒಂದೇ ಮಾತಿನಲ್ಲಿ ನನ್ನ  ಮುಖದ ನೀರಿಳಿಸಿದ. ಅಲ್ಲಾ ಕಣೋ  ನೀವೆಲ್ಲಾ  ಏನಂತಾ ಭಾವಿಸಿದೀರ  ನಾನು,ನನ್ನಂತಾ ಹಲವರು , ನಮ್ಮ  ಲಕ್ಷಾಂತರ  ಸೈನಿಕರು   ದೇಶದ ಗಡಿಯಲ್ಲಿ  ಕಷ್ಟಪಟ್ಟು  ಹಗಲೂ ರಾತ್ರಿ  ದೇಶದ ವೈರಿಗಳ ಜೊತೆ  ಸೆಣೆಸಾಡುತ್ತಿದ್ದರೆ , ನೀವಿಲ್ಲಿ  ಒಬ್ಬರಿಗೊಬ್ಬರು  ಕಿತ್ತಾಡುತ್ತಾ  ದೇಶವನ್ನು  ಕಾಡುತ್ತಿದ್ದೀರಾ , ನೀವು ಯಾವ ವೈರಿಗಳಿಗೂ  ಕಮ್ಮಿಯಿಲ್ಲಾ  ಬಿಡಿ,  ಗಡಿ ಕಾಯುತ್ತಿರುವ  ಒಬ್ಬೊಬ್ಬ ಸೈನಿಕನೂ  ಇಂತಹ ಕೆಟ್ಟ ಮನಸಿನ ಜನಗಳನ್ನು ನಾವು ಯಾಕೆ ಕಾಯಬೇಕೂ ಅಂತಾ ವಾಪಸ್ಸು ಬಂದರೆ ದೇಶ  ಕಾಯುವ ತಾಕತ್ತು ನಿಮಗಿದೆಯಾ ???  ಮೊದಲು ದೇಶ ನಂತರಾ ಮಿಕ್ಕೆಲ್ಲಾ  ಆಲ್ವಾ ....!!! ಮೊದಲು  ಎಲ್ಲರೂ ಸಂತೋಷದಿಂದಾ  ಬಾಳಲು  ಕಲಿಯೋಣ ಆಲ್ವಾ .....??? ಅಂತಾ ಹೇಳಿ  ಚಾಟಿ ಬೀಸಿದ.  ಮಾತು ಕೇಳಿದ ಮನಸ್ಸು ನಾಚಿ ನೀರಾಯಿತು, ನನ್ನ ಬಗ್ಗೆ  ಹೇಸಿಗೆಯಾಗಿ .........ತಲೆ ತಗ್ಗಿಸಿದೆ . ಕಂಪ್ಯೂಟರ್ ನಲ್ಲಿ  ತ್ರಿಮೂರ್ತಿ ಚಿತ್ರದಲ್ಲಿ  ರಾಜ್ ಕುಮಾರ್  ಹಾಡಿದ "ಎಲ್ಲ  ಬಲ್ಲವರಿಲ್ಲಾ , ಬಲ್ಲವರು ಯಾರಿಲ್ಲ ...., ಎಲ್ಲವನ್ನು ಬಲ್ಲವರು  ...ಎಲ್ಲವನು  ಬಲ್ಲವರು ಇಲ್ಲವೇ ಇಲ್ಲಾ "   ಹಾಡು ಬಂದು ನನ್ನನ್ನು ಅಣಕಿಸುತ್ತಿತ್ತು,.....!!!!!!!!!!!!   ಮನಸು ಭಾರವಾಗಿ  ಎಲ್ಲವನ್ನು  ನುಂಗಿ   ಮನಸಿನಲ್ಲಿ ನನ್ನ ಬಗ್ಗೆ ನಾನೇ    "ಆಚಾರವಿಲ್ಲದ ನಾಲಿಗೆ  ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ " ಎಂಬ  ಹಾಡನ್ನು ಗೊಣಗುತ್ತಾ   ಕಂಪ್ಯೂಟರ್ ಆಫ್ ಮಾಡಿದೆ.

Sunday, September 2, 2012

ಪಂಚ ಪುಸ್ತಕ ಬಿಡುಗಡೆಯಲ್ಲಿ ಬ್ಲಾಗರ್ಸ್ ತುಂಟಾಟ !!!! ಪ್ಲೀಸ್ ಯಾರಿಗೂ ಹೇಳ್ಬೇಡಿ !!!!



ಕಳೆದ ಶನಿವಾರ 25/08/2012 ರಂದು  ಬೆಂಗಳೂರಿನ   ಬಸವನಗುಡಿ "ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್  ಕಲ್ಚರ್ " ವಾಡಿಯಾ ಹಾಲ್ ನಲ್ಲಿ   ಎಂಥಾ ಮಜಾ ಗೊತ್ತಾ ......???  ಬ್ಲಾಗ್ ಲೋಕದ ಐದು ಜನ  ಗೆಳೆಯರ  ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ. ಐದೂ ಜನರೂ ಬ್ಲಾಗ್ ಲೋಕದಲ್ಲಿ ಅಸಮಾನ್ಯರೆ ಬಿಡಿ. ಅಲ್ಲಿ ನಡೆದ ಕಾರ್ಯಕ್ರಮದ ನಗೆ ನೋಟ ಇಲ್ಲಿದೆ. ಎಲ್ಲರ ಫೋಟೋಗಳಿಗೆ ನಗೆ ಶೀರ್ಷಿಕೆ ನೀಡುವ ಪ್ರಯತ್ನ  ದಯಮಾಡಿ ಯಾರೂ ತಪ್ಪು ತಿಳಿಯದೆ ನಕ್ಕು ನನ್ನನ್ನು ಮನ್ನಿಸಿ.ನಗು ಬರದಿದ್ದರೆ ಸುಮ್ಮನೆ ಕಂಪ್ಯೂಟರ್ ಸ್ಕ್ರೀನ್ ಗೆ ಒಂದು ಗುದ್ದು ಕೊಟ್ಟು ಚಿಂದಿ ಉಡಾಯ್ಸಿ . ನೀವ್ ರೆಡಿನಾ ?????......ಬನ್ನಿ ಹೀಗೆ  ಜೊತೆಯಾಗಿ ಸಾಗೋಣ. .......................................






ಹಾಯ್  ನಿಮಗೆ ಸ್ವಾಗತ



 

 

ಶಿಡ್ಲಘಟ್ಟದಲ್ಲಿ  ಎಲ್ಲಾ ಓ.ಕೆ.ನಾ




 

ಏನ್ಮಾಡೋದು  ಆಫಿಸ್ಗೆ ರಜಾ ಇಲ್ಲಾ ಸಾರ್







ಯಾರಿಗೆ ಸಹಾಯ ಮಾಡ್ಲಿ ಸಾರ್







ದೂರದಲ್ಲಿ ಪಿಸುಮಾತಾಡಿದ  ಮಂಜು





ನೀವ್ ನೋಡೋ ಫೋಟೋ ಇಲ್ಲಿಲ್ಲಾ







 
ಸಧ್ಯ ಬಜಾವಾದೆ







ಪ್ರೀತಿಯ ಅಳಿಮಯ್ಯ  ಹೂ ಕೊಟ್ಟ ಸಮಯ.




ನಂ ಕ್ಯಾಮರ ಕೈ ಕೊಟ್ಟಿದೆ ಸಾರ್









ಯಾರ್ಯಾರ್  ಫೋಟೋದಲ್ಲಿ ಹ್ಯಾಗೆ ಹ್ಯಾಗೆ ಬರ್ತೀವೋ ಯಾರಿಗ್  ಗೊತ್ತು




 


ಪಕ್ಕದಲ್ಲಿರುವ  ಸುಂದರ ಹುಡುಗರ ಬದಲು  ಇನ್ಯಾರ ಫೋಟೋ ಕ್ಲಿಕ್ಕಿಸಿದಿರೀ  ಮಲ್ಲಿಕ್








ನಮ್ಮ ಬದರಿ ಎಲ್ಲರ ಅಚ್ಚು ಮೆಚ್ಚು








ಏನ್ ಮಾಡೋದು ಬೇಗ ಹೋಗ್ಬೇಕೂ ಸಾರ್  ಬೇಜಾರ್ ಆಗುತ್ತೆ ಅಂದಾ ಇಬ್ಬರು


















ಎತ್ತಣ ''ಇಟ್ಟಿಗೆ ಸಿಮೆಂಟು''  ಎತ್ತಣ " ಜಲನಯನ '' ಆದರೂ ನಾವ್ ಹಿಂಗೆ ಸಾರ್ .










ಏನ್ ಸಾರ್ ಸಮಾಚಾರ .....









ನಿಮ್ಮ  ಹೊಟ್ಟೆ ಫೋಟೋ ತೆಗೀಲಾ  ಬದರಿ ಸರ್






ನೋಡಿ ಸಾರ್  ಬಡವರ ಹೊಟ್ಟೆ ಮೇಲೆ ಕಣ್ಣು ಇವರಿಗೆ






ಯಾಕ್ರೀ  ಶ್ರೀಕಾಂತ್  ಹೊಟ್ಟೆ ಫೋಟೋ ತೆಗೆದ್ರೀ ??






ನಿಮ್ಮ ಫೋಟೋಗೆ ನನ್ನ ದೊಡ್ಡ ನಮಸ್ಕಾರ








3 ಕೆ.ರೂಪ ಸತೀಶ್   ಬಂದ್ರೂ  ಜಾಗಾ ಬಿಡಿ






ಫೋಟೋ ತೆಗೀತಾರೆ  ಈ ಕಡೆ ನೋಡ್ರಪ್ಪಾ








ಎಲ್ಲಾ  ಹೊಸ ಮುಖಗಳೇ ಆಲ್ವಾ ....??






ಏನಿದು  ಕುಚುಕೂ ಕುಚುಕೂ ........ಇವರಿಬ್ಬರ್ದೂ






ಯಾರೋ ಬ್ಲಾಗ್ ಮಂದಿ ಅಂತೆ  ಪುಸ್ತಕ ಬಿಡುಗಡೆ ಮಾಡ್ತಾರಂತೆ







ಜಾಲಿ ಬಾರಿನ ಹುಡುಗ  ನನ್ನ ಹಿಂದೆ ಇದ್ದಾನೆ  ಹುಷಾರು







ನಾವಿದ್ದೀವಿ  ಏರ್ಸಿ ಬಿಡಿ  ಬದರಿ ಸಾರ್







ಆಹಾ ..... ಖಾಲಿ ಪ್ಲಾಸ್ಟಿಕ್  ಲೋಟವೆ  ......, ಏನೀ ನಿನ್ನಯ ಮಾಯೆ







ಹೆದರ್ ಬೇಡಾ ಅಜಾದು ......ನಾನಿದ್ದೇನೆ .ಒಂದ್  ಕೈ  ನೋಡೇಬಿಡೋಣ










ರೂಪಕ್ಕನ 3 ಕೆ ಗುಂಪಿನ ಜೊತೆ ದಿನಕರ @ ಪದೆಯಪ್ಪನ್
\





 ನನ್ನ ಆಸೆ ಚೌಚೌಬಾತು  ..............ಅದನು ತಿಂದೂ ನೀವು ಆಡಿ  ಕನ್ನಡ ಮಾತು.








ನಮ್ ಫೋಟೋ ಯಾಕೆ..?ಬೇಡ ಬಿಡೀ ಸಾರ್ ಅಂದ್ರೂ  ನಮ್ಮ ಆಹಾರ  ಮಂತ್ರೀ





ಫೋಟೋ ನೋಡಿ ಬೇಸರ  ಆಯ್ತಾ  ಸ್ವಲ್ಪ ಬ್ರೇಕ್ ತಗೋಳಿ.









ಈ ದೊಡ್ಡವರ ಸಹವಾಸ ಸಾಕೋ ಸಾಕು.





ಬಾಳ್ ಚಲೋ   ಮಂದಿ ಬರ್ತಾರ್ರೀ





ಯಾರಾದ್ರೂ  ಬೇಗ ಬಂದು ಕಾರ್ಯಕ್ರಮ ಶುರುಮಾಡಿ ಸಾರ್








ಕಾರ್ಯಕ್ರಮ ಪ್ರಾರಂಭ  ಆಗ್ತಾ ಇದೆ ದಯವಿಟ್ಟು ಒಳಗೆ ಬನ್ನಿ








ನಾವ್ ಬಂದ್ವಿ ಕಾರ್ಯಕ್ರಮ ಶುರು ಮಾಡಿ ಮತ್ತೆ







ಏನ್ ಸಮಾಚಾರ  ...??ಖುಷಿಯಾಯ್ತು ನಿಮ್ಮನ್ನು ನೋಡಿ







ಒಂದ್ಸಾರಿ  ಹೇಳಿದ್ರೆ ಗೊತ್ತಾಗಲ್ವಾ ....? ಹುಸಿಮುನಿಸು







ಬಹಳ ಸಂತೋಷ ನಿಮ್ಮನ್ನು ಕಂಡಿದ್ದು.... ಸಿರ್ಸಿ ಮಾರಿಕಾಂಬೆ ಕೃಪೆ ನಿಮಗಿರಲಿ.












ನಮ್ ಹೆಂಡ್ರು ಎಲ್ಲಿ .......??







ಇವ್ರು  ಹಾಗೆ......!!!! ಯಾವಾಗಲೂ  ನನ್ನ ಹುಡುಕ್ತಾನೆ ಇರ್ತಾರೆ ....










 ಸದ್ದಿಲ್ಲದೇ  ಬಂದ ಡೀಸೆಂಟ್  ಜೋಡಿ







ಅಮ್ಮಾ  ಪುಸ್ತಕ ಬಿಡುಗಡೆ ಅಂದ್ರೆ   ಲಾಲಿ ಪಪ್  ತಿಂದ ಹಾಗೆ ಆಲ್ವಾ ..??









 
ನಮ್ ಪ್ರಕಾಶ  ಏನೇ ಮಾಡಿದರೂ ಖುಷಿನೇ





ಗಾನ ಕೋಗಿಲೆಗಳ  ನಗುವಿನ ಮೋಡಿ 










ಕಾರ್ಯಕ್ರಮಕ್ಕೆ ನಾವ್ ರೆಡಿ






ಒಂದಾಗಿ ಬಿಡುಗಡೆ ಮಾಡೋಣ ಬನ್ನಿ






ಬಂದ್ವೂ ನೋಡಿ!!!ನೀವ್ ಕಾಯುತ್ತಿರುವ  ಪುಸ್ತಕಗಳು  ಹೊರಗೆ




ತಗೋಳಿ ಎಲ್ಲರೂ......   ಪುಸ್ತಕ ಬಿಡುಗಡೆ ಮಾಡೋಣ


 ಯಾವ್  ಯಾವ್ ಪುಸ್ತಕ  ಬಿಡಗಡೆ ಆದ್ವೂ .....???






ನಾವ್ ಬಿಡುಗಡೆ ಮಾಡಿದ ಪುಸ್ತಕಗಳು ಇವು






ಪ್ರಕಾಶ  ನನ್  ಬಟಾಣಿ      ಎಲ್ಲಿ .....??





ಎಲ್ಲರಿಗೂ ಎರಡು ಕೈ ಬೇಕಾದ್ರೆ  ನನಗೆ ಮಾತ್ರಾ ಒಂದೇ ಕೈ ಸಾಕು




ನಮ್ ಪುಸ್ತಕ ನಮ್ಮ ಖುಷಿ








ಬ್ಲಾಗ್  ಜಗತ್ತು ನನಗೆ ಹೊಸದು ... ಆದರೂ ಒಳ್ಳೆ ಕಾರ್ಯಕ್ರಮ






ಜಾಲಿ ಬಾರಲ್ಲಾ  ಬಿಡಿ  ಇವರು ಜಾಲಿ ಬ್ಲಾಗರ್ಸ್







ಪ್ರಕಾಶನ  ತಿಳಿ ಹಾಸ್ಯ   ಜೀವನದ  ನೈಜ ಘಟನೆಗಳ ಹೂರಣ.




ಲಾಲಿ ಪಪ್  ತಿಂತಾ  ಯಾವ್ ಯಾವ್ ಪುಸ್ತಕಾ ಅಂತಾ ನೋಡೋಣ ಬನ್ನಿ






ಈ ಪುಸ್ತಕ ಓದಿದರೆ  ಪ್ರೀತಿ , ಸ್ನೇಹ ಮೂಡೋದು  ಗ್ಯಾರಂಟೀ






ದೇಸಾಯರ ಕನವರಿಕೆ  ಹನಿ ಹನಿಗಳಾಗಿ  ಮೂಡಿ ಬಂದಾಗಿನ ಕಿಕ್




ಪ್ರೀತಿಯಿಂದ  ಬ್ಲಾಗಿಸಿ  ಭಾರಿಸೋಣ ಕನ್ನಡ ಡಿಂಡಿಮ







ಅಜಾದಣ್ಣನ  ಬಟಾಣಿ ಚಿಕ್ಕಿ ,,ಆಹಾ  ಕಟುಂ  ಕಟುಂ   ಬೊಂಬಾಟ್





ಪ್ರಕಾಶಣ್ಣನ ತಿಳಿ ಹಾಸ್ಯಕ್ಕೆ  ಯಾವ ಹೆಸರೂ ಇಲ್ಲ







ಸುಗಂದ ತೀಡುವ ವಸಂತ ಪವನ



ಪಾತರಗಿತ್ತಿಯ  ಪಕ್ಕವನೇರಿ .............!!!







ಜುಳು ಜುಳು ಹರಿಯುವ ಕಾಲದ  ಹೊಳೆಯಲ್ಲಿ








ನಿಮ್ಮ  ಜ್ಞಾನದ ಹಣತೆ ನಿರಂತರ ಬೆಳಗಲಿ 






ನಿಮ್ಮ ಜ್ಞಾನದ  ಸಿರಿ ಎಲ್ಲರಿಗೂ ಸಿಗಲಿ





ಕಲಾದೇವಿಯ ಹೆಮ್ಮೆಯ ಪುತ್ರಿಗೆ  ಪ್ರೀತಿಯ ನಮನ





ಬನ್ನಿ ಲೇಖಕರೆ  ಮಾತಾಡಿ







ಇರಪ್ಪಾ  ಇನ್ನೂ ಇದೆ    ಮೈಕ್ ತೆಗೀಬೇಡಾ







 ನನ್ನೆಲ್ಲಾ  ಸುಂದರ ಕನವರಿಕೆ  ನಿಮ್ಮದಾಗಲಿ






 ನಮ್ಮ  ಬರವಣಿಗೆಯ  ಇಟ್ಟಿಗೆಗೆ  ಬೇಕು ನಿಮ್ಮೆಲ್ಲರ ಪ್ರೋತ್ಸಾಹದ ಸಿಮೆಂಟು






ಪ್ರೀತಿಯಿಂದ ಬ್ಲಾಗಿಸೋಣ  ಬನ್ನಿ







ನಾವಿಬ್ಬರೂ  right  selection ನೇ





ನಿಮ್ಮ  ಪ್ರತಿಭೆ  ಮತ್ತಷ್ಟು ಬೆಳಗಲಿ





ದಿಗ್ವಾಸ  ಸ್ವಲ್ಪ ಬೀರು ಮಂದಹಾಸ



ಈ ಹುಡುಗ  ಪ್ರತಿಭಾವಂತಾ ಸಾರ್




ನಿಮ್ಮಿಂದ  ಮತ್ತಷ್ಟು ಹಾಡು ಹುಟ್ಟಿಬರಲಿ .....ಮಣಿಕಾಂತಾ








ನಿಮ್ಮ ಚಂದದ  ನಿರೂಪಣೆಗೆ ನಮ್ಮ ಸಲಾಂ






ಇದೊಂದು ಸುವರ್ಣ ಗಳಿಗೆ





ಅಮ್ಮಾ  ............ಬೇಜಾರು





ಬನ್ನಿ ಸ್ವಲ್ಪ ತರ್ಲೆ ಮಾಡೋಣ 






 ದಿನಕರ್  ಮೊಗೆರಾ ತಲೆಗೆ ಇಲ್ಲಿ ನಡೆದಿದೆ  ಜ್ಞಾನ ಸಿಂಚನ






 ಕ್ಯಾಮರ ಹಿಂದಿನ ಅನಿಲ್...... ನಗು  ಯಾರಿಗೆ






 
ನಾ ಇಟ್ಟಿಗೆ ಆದರೆ  ಅವಳೇ ಸಿಮೆಂಟು  ಇದಕ್ಕೆ ಬೇಡಾ ಯಾವ ಸೆಂಟಿಮೆಂಟು 







 ಇಲ್ಲಿ ನೋಡಿ ಮ್ಯಾಚಿಂಗ್ ಮ್ಯಾಚಿಂಗ್[ ತಲೆಗಳನ್ನ ಮಾತ್ರಾ  ನೋಡಿ ]






ಯಾಕೋ ಗ್ಯಾಸ್ ಮಹಾದೇವ ಜ್ಞಾಪಕಕ್ಕೆ ಬಂದಾ 







ನನ್ನೆತ್ತರಕ್ಕೆ ನೀ ಬೆಳೆಯಬಲ್ಲೆಯಾ ...................!!!

 

 

 

 

 

 




ದೊಡ್ಡವರೆಲ್ಲಾ  ಜಾಣರಲ್ಲಾ .........!!!








ಕದ್ದು  ನೋದೊದ್ರಾಗೆ  ಮಜಾ ಐತೆ











ಬಾ ಗೆಳೆಯ  ಬಾಂಗ್ರಾ  ಡ್ಯಾನ್ಸ್  ಮಾಡೋಣ .........ಬಲ್ಲೆ ಬಲ್ಲೆ 

 

 

 








ನಮ್ಮ  ಸಂ ..................ಸಾರ  ನನ್ನ ಕೈಲಿದೆ






ನಗೆಯ ಕಾಂತಿ   ಚೆಲ್ಲಿದೆ ನೋಡಿ







ಬ್ಲಾಗ್ ಲೋಕ ಅಂದ್ರೆ ಇದೆಲ್ಲಾ ಇದ್ಯಾ ...........!!!












ಇವರೆಲ್ಲಾ ಯಾರೂ  ಒಂದೂ ಅರ್ಥಾ ಆಗ್ತಿಲ್ಲಾ ರೀ







ಮಂಜು ಕರಗುವ ಸಮಯ








ಆಯ್ತು ಮಣಿಕಾಂತ್  ಸಾರ್ ಹಾಗೆ ಮಾಡ್ತೀನಿ 







ನಮ್ ಹುಡುಗರೂ  ರೀ





 

ಕೀಟ್ಲೆ  ಪ್ರಕಾಶಣ್ಣನ  ಜೊತೆ  ಯುವ ಜೋಡಿ








 

ಇದು ಮಾತೋ ..... ಅಥವಾ  ರೂಪೋ  ಹೇಳಿ






 

ಹ ಹ ಹ  ನಾವು ಮಾತಾಡಿದ್ದು ಮಾತು  ಆಲ್ವಾ ...........!!








ಕೈ ಕೊಟ್ಟ ನಮ್ ಮಾವ ನೋಡಿ ಕೊಡುವ ಪೋಸು ......!!!!









ಕಿವಿ  ಹಿಂಡೋದು  ಹೀಗೆ .....!!!!







 

ಭಲೇ  ಪ್ರಕಾಶ









ಹೂ ಕೊಡೋಕೆ   ನಮ್ಮಾಕಿ  ಸಿಕ್ತಿಲ್ಲಾ








 

ಹೂ ಕೊಡೋಕೆ ಹುಡುಕಿದ್ದು ನಮ್ಮ ಶ್ರೀಮತೀನ  ಸಾರ್








ವಾವ್  ವಾವ್  ಕ್ಯಾ ಕಮಾಲ್  ಕರ್ದಿಯಾ  ಮೈನೆ







ನಂಬರ್ ಸರಿಯಿದೆ ಆದ್ರೆ   ......ನಿಮ್ಮಿಂದಾ .ಕಾಲ್ ಬರೋಲ್ಲಾ  ಯಾಕೆ.???










ಇವರ ಸಹವಾಸ ಸರಿಯಿಲ್ಲಾ  ಸಾರ್ ... ಫೋಟೋ ದಲ್ಲಿ ಅಣಕಿಸ್ತಾರೆ







ನಮಸ್ಕಾರ ಶಿವೂ ಸರ್  ನಿಮ್ಮದು ವಂಡರ್ ಕಣ್ಣು ಸಾರ್








3.ಕೆ  ಬಳಗ  ಕರೆಯಿತು  ಶಿವೂ  ಬನ್ನೀ ಅಂತಾ









 

ಇವ್ರು  ಸುಮ್ನೆ ಹೀಗೆ ನಿಂತರೆ??  ............ಡೌಟು  ... ಸಾರ್

ಅದ್ಸರಿ ಇಲ್ಲಿ ನಡೆದದ್ದು ಏನು........!!!!!! ಇವರೆಲ್ಲಾ ಏನ್ ಮಾಡಿದ್ರೂ ....??

 

 







ವಂಡರ್  3.ಕೆ  ಗ್ರೂಪ್  ವಿತ್  ವಂಡರ್ ಕಣ್ಣು







ಆಪತ್ಕಾಲದ  ನೆಂಟರು  ಇವರು






 

ಸದ್ದಿಲ್ಲದೇ  ವರದಿ ಬರೆದವರು ಇವರು






ಹಲವು ಪ್ರತಿಭೆಗಳ ಆತ್ಮೀಯ  ಸಂಗಮ







ಬಾರೋ ರಾಜ ಕುಮಾರ .............!!!......ಅಮ್ಮ  ಏನ್ ಮಾಡ್ತಿದೆ??







 

ಕಾರ್ಯಕ್ರಮ ಮುಗಿದರೂ  ಯಾರೂ ಜಾಗ ಬಿಡಲೊಲ್ಲರು








ಇವರ ಬಗ್ಗೆ  ಆಮೇಲೆ ಹೇಳ್ತೀನಿ ಅಂದ ಪ್ರಕಾಶಣ್ಣ  ಕೊನೆಗೂ ಹೇಳಲಿಲ್ಲಾ










ಮತ್ತೊಮ್ಮೆ  ನಾವು ಪುಸ್ತಕ ಬಿಡುಗಡೆ ಮಾಡಿದ್ದು ಹೀಗೆ 







ಗುಬ್ಬಚ್ಚಿ  ಗೆಳೆಯನಿಗೆ ಗುಬ್ಬಚ್ಚಿ  ನೆನಪಿನ ಕಾಣಿಕೆ ನೀಡಿದ ಪ್ರಚಂಡರು





3.ಕೆ ಬಳಗದ ನಲಿವು






 

ಈ ಕಾರ್ಯಕ್ರಮ  ಯಾರೂ ಕೆಮ್ಮನ್ಗಿಲ್ಲಾ ಸಾರ್






 ಈ ಕಾರ್ಟೂನ್ ನನಗೆ ಇಷ್ಟಾ  ಆಯ್ತು........!!!!




ಗೆಳೆಯನ ಬೆನ್ನಹಿಂದೆ  ಸಂತಸದಿ ಸದ್ದಿಲ್ಲದೇ ನಿಂತ  ಸತ್ಯಣ್ಣನ  ಕುಟುಂಬ





ಇಟ್ಟಿಗೆ , ಸಿಮೆಂಟು,  ಜಲ, ನಯನ   ಎಲ್ಲದರ  ಸಮ್ಮಿಲನ.





 

ಪುಸ್ತಕ ಬರೆದ ತಪ್ಪಿಗೆ ಹಸ್ತಾಕ್ಷರ ನೀಡುವ ಶಿಕ್ಷೆ






 

 ನಿಜವಾಗಲೂ ಬರೆದದ್ದು ಇದೆ ಗೊತ್ತಾ







 ನೋಡೀ ಸ್ವಾಮೀ ನಾ ಬರೆಯೋದು ಹೀಗೆ 






 

 

ಉಮೇಶ್ ದೇಸಾಯರ  ಅಂಬೋಣ ಇಲ್ಲಿದೆ











 ನಾವೆಲ್ಲಾ ಖುಶಿ ಪಟ್ಟೆವು ಗೊತ್ತಾ








ಪುಸ್ತಕ ಬಿಡುಗಡೆ  ಆಯ್ತು ,ಈಗ ಚೆಕ್ ಬರೆಯುವ ಸಮಯ








 

ಈಗಲಾದರೂ   ಪ್ಲೀಸ್   ಮದುವೇ    ಮಾಡ್ಸಿ ಮಾವ







ಎಲ್ಲಾ  ಅಳಿಯಂದಿರೂ  ಮದುವೇ ಆದ್ರೆ  ನನ್ಕಥೆ ಏನು....  ಹೋಗ್  ಹೋಗು   ಅಳಿಯ







 

ಇಲ್ಲಿ ಓದಿದ್ದನ್ನು  ಯಾರಿಗೂ ಹೇಳ್ಬೇಡಿ ಪ್ಲೀಸ್








ಹೋಗಿ ಬರ್ತೀವಿ ಎಲ್ಲರಿಗೂ ಥ್ಯಾಂಕ್ಸ್



 

ಫೋಟೋಗಳು  ಚೆನ್ನಾಗಿದ್ಯಾ ....??? ಖುಶಿಆಯ್ತಾ ...??? ಮತ್ತೆ ಸಿಗೋಣ  .... !!!

ಹೇಗಿತ್ತು ನಮ್ಮ ಬ್ಲಾಗರ್ಸ್ ತುಂಟಾಟ  ಸ್ವಲ್ಪ  ಐಸೀ  ಸ್ವಲ್ಪ ಸ್ಪೈಸೀ  ಆಲ್ವಾ , ಆದ್ರೆ ಪ್ಲೀಸ್ ಇದನ್ನು  ಯಾರಿಗೂ  ಹೇಳ್ಬೇಡಿ .....ಆಯ್ತಾ  ?