Tuesday, December 29, 2009

ಈ ಹಾದುಗಾರ ಗಾರುಡಿ ನಿಲ್ಲಿಸಿ ಕವಿತೆಗಳನ್ನು, ಕವಿಗಳನ್ನು ಬಿಟ್ಟು ಹೊರಟೇಬಿಟ್ಟ !!!



[ಚಿತ್ರ ಕೃಪೆ ಚಿತ್ರಲೋಕ .ಕಾಂ.] ಸೋರುತಿಹುದು ಮನೆಯ ಮಾಳಿಗೆ ಎಂದು ಶಿಶುನಾಳ ಶರೀಫರ ಗೀತೆಗಳಿಗೆ ಜೀವ ನೀಡಿ, ಶ್ರಾವಣ ಬಂತು ನಾಡಿಗೆ ಅಂತ ಕವಿಗಳ ಕವಿತೆಗಳಲ್ಲಿ ಮಿಂದು ಹಾಡು ಹಾದಿ ನಲಿದಿದ್ದ ,ಹಲವು ಪ್ರತಿಭೆಗಳಿಗೆ ಆಸರೆಯಾಗಿ ಪೊರೆದು ಕನ್ನಡಮ್ಮನ ಸೇವೆಗೆ ಅರ್ಪಿಸಿದ್ದ ,ಕನ್ನಡವೇ ಸತ್ಯ ಎಂದು ನಾಡಿನ ಮೂಲೆ ಮೂಲೆಗಳಿಗೆ, ದೇಶ ವಿದೇಶಗಳಿಗೆ ತೆರಳಿ ಕನ್ನಡ ಡಿಂಡಿಮ  ಭಾರಿಸಿ ಕನ್ನಡ ಕೀರ್ತಿದೀಪ  ಬೆಳಗಿ ಹಚ್ಚೇವು ಕನ್ನಡದ ದೀಪ ಎಂದು ಹೆಮ್ಮೆ ಪಟ್ಟಿದ್ದ  ಈ ಚೇತನ ಜವರಾಯನ ಲೋಕದಲ್ಲಿ ಹಾಡಲು ಕನ್ನಡದ ಕಂಪು ಬೀರಲು ಹೊರಟಿದೆ!!!ತನು ಕನ್ನಡ ,ನುಡಿ ಕನ್ನಡ , ಸರ್ವವು ಕನ್ನಡ ಎಂದು ಬಾಳಿದ ಈ ಚೇತನಕ್ಕೆ ನನ್ನ ಕಂಬನಿ ತುಂಬಿದ ಹೃದಯ ಪೂರ್ವಕ ನಮನಗಳು.

No comments: