Thursday, October 15, 2015

ಮನಸುಗಳನ್ನು ಅರ್ಥ ಮಾಡಿಕೊಳ್ಳದ ನೀವು ಹೋಗಿ ಬನ್ನಿ ನಿಮಗೆ ಶುಭವಾಗಲಿ ......!

ಜೀವನದ ಅಜ್ಞಾನದ  ಕತ್ತಲಿಗೆ  ಜ್ಞಾನ ಹಾಗು  ಪ್ರೀತಿ ವಿಶ್ವಾಸದ  ಬೆಳಕಿನ ಅಗತ್ಯ ಇದೆ

ಸಾಮಾಜಿಕ ತಾಣಗಳಲ್ಲಿ  ಬಹಳಷ್ಟು ಜನ ಸಿಗುತ್ತಾರೆ  ಆದರೆ  ಕೆಲವರು ಮಾತ್ರ  ತಮ್ಮ ಸನ್ನಡತೆಯ ಕಾರಣ  ನಮಗೆ ಬಹಳ ಹತ್ತಿರವಾಗುತ್ತಾರೆ ,   ಇವರನ್ನು ನಾವು ನಮ್ಮ ಮನೆಯ ಜನಗಳು ಎಂಬಂತೆ  ಭಾವಿಸಿ  ವಿಶೇಷ ಸ್ಥಾನ  ನೀಡುತ್ತೇವೆ, ಅವರ ಕಷ್ಟ ಸುಖಗಳಲ್ಲಿ  ಭಾಗಿಯಾಗುತ್ತೇವೆ ಸಹ.  ಇಂತಹವರಲ್ಲೂ ಕೂಡ  ಕೆಲವರು  ನಿಷ್ಕಲ್ಮಶ  ಪ್ರೀತಿಯನ್ನು   ಅರ್ಥ ಮಾಡಿಕೊಳ್ಳದೆ ಸಹೋದರ  ಪ್ರೀತಿಗೆ  ಬೆಂಕಿ ಹಚ್ಚಿ   ದೂರಸರಿದು  ತಾವು ಮಹಾ  ಜ್ಞಾನಿಗಳು ಎಂಬಂತೆ  ನಡೆದುಕೊಳ್ಳುತ್ತಾರೆ . ನನ್ನ ಗೆಳೆಯರಿಗೆ  ಅನುಭವಕ್ಕೆ ಬಂದ ಒಂದೆರಡು ಉದಾಹರಣೆ ಇಲ್ಲಿದೆ ನೋಡಿ.

ಘಟನೆ ೧ :-)  ನನ್ನ ಗೆಳೆಯರೊಬ್ಬರು  ನಿಜಕ್ಕೂ   ಪ್ರೀತಿ ವಿಶ್ವಾಸಕ್ಕೆ  ಹೆಸರುವಾಸಿ,  ನಿಜಕ್ಕೂ  ಅಜಾತ ಶತ್ರುವೇ ಈತ , ಸಾಮಾಜಿಕ ತಾಣದಲ್ಲಿ  ಇವರನ್ನು ಇಷ್ಟಪಡದೆ ಇರಲು ಸಾಧ್ಯವೇ ಇಲ್ಲಾ, ಎಲ್ಲರೊಡನೆ ನಗು ನಗುತ್ತಾ ಬೆರೆತು  ಪ್ರೀತಿ ವಿಶ್ವಾಸ ದಿಂದ ಸಹೋದರ  ಪ್ರೀತಿಗೆ ಹೊಸ ಭಾಷ್ಯ ಬರೆದ  ಮಹನೀಯ,  ಅವರ ಪತ್ನಿ ಹಾಗು ಮಕ್ಕಳೂ ಸಹ  ಇದಕ್ಕೆ ಒತ್ತಾಸೆ ನೀಡುತ್ತಿದ್ದಾರೆ ,   ಸಾಮಾಜಿಕ ತಾಣದ ಹಲವು ಹೆಣ್ಣು ಮಕ್ಕಳು  ಇವರ ಮನೆಯ  ಅಕ್ಕ ತಂಗಿಯರೇ ಆಗಿ ಹೋಗಿದ್ದಾರೆ ,   ಇನ್ನು ಆ ಹೆಣ್ಣುಮಕ್ಕಳು  ಪಟ್ಟಣದ  ಒತ್ತಡದ ಬದುಕಿಗೆ ಹರುಷ ತುಂಬಲು  ನನ್ನ  ಗೆಳೆಯನ ಕುಟುಂಬದೊಡನೆ  ಭೇಟಿ ನೀಡಿ  ಖುಷಿಯಿಂದ ಕಾಲ ಕಳೆದು  ತೆರಳುತ್ತಿದ್ದರು,  ಒಬ್ಬ  ತಂಗ್ಯವ್ವ  ಕೂಡ ಇವರಲ್ಲಿ ಒಬ್ಬಳು  , ಅವಳಿಗೆ ಆರೋಗ್ಯ ಸರಿ ಇಲ್ಲದಾಗ   ತಮ್ಮ ಮನೆಯಲ್ಲಿಯೇ  ಇರಿಸಿಕೊಂಡು  ವೈಧ್ಯಕೀಯ  ಶುಶ್ರೂಷೆ  ಕೊಡಿಸಿ , ಅವಳ ಆರೋಗ್ಯ ಸರಿಹೊಗುವವರೆಗೂ   ಅವಳ ಜೊತೆಯಾಗಿ ನಿಂತು  ತಮ್ಮ ಮಗಳಂತೆ  ಉಪಚಾರ  ಮಾಡಿದ್ದರು , ಯಾವುದೋ ದೂರದ ಊರಿನಿಂದ  ಬಂದಿದ್ದ ಆಕೆ  ಇವರ  ಈ ಕಾರ್ಯಕ್ಕೆ  ಬಹಳ  ಹರುಷ ಗೊಂಡಿದ್ದಳು, ನನ್ನ ಗೆಳೆಯನ ಪತ್ನಿಯನ್ನು ತನ್ನ ತಾಯಿಯಂತೆ ಅನ್ನುತ್ತಾ  ಹೋಗಳಿದ್ದಳು, ಆದರೆ  ಇದ್ದಕಿದ್ದಂತೆ  ಅಚ್ಚರಿ ಎಂಬಂತೆ   ಕಳೆದ  ಕೆಲವು ತಿಂಗಳಿಂದ   ಪಡೆದ ಉಪಕಾರವನ್ನು  ಮರೆತು  , ತನಗೂ ಈ ಮನೆಗೂ  ಯಾವುದೇ  ಸಂಬಂಧವೇ  ಇರಲಿಲ್ಲ ಎನ್ನುವರೀತಿ ನಡೆದುಕೊಳ್ಳುತ್ತಾ  ಇದ್ದಾಳೆ .

ಘಟನೆ ೨ :-) ಇನ್ನು ಮತ್ತೊಬ್ಬ ತಂಗ್ಯವ್ವನ ಕಥೆಯೂ ಇದೆ,  ಈ ಹೆಣ್ಣುಮಗಳು  ಬಹಳ  ದೂರದ  ಊರಿನವಳು , ಬೆಂಗಳೂರಿಗೆ ಬಂದಾಗ ನನ್ನ ಗೆಳೆಯನ ಕುಟುಂಬದ  ಭೇಟಿ ಅವಳ  ತವರು ಮನೆಯಷ್ಟೇ  ಹಿತನೀಡುತ್ತಿತ್ತು , ಮನೆಯವರೆಲ್ಲರೂ ಅವಳನ್ನು ಮನೆಯ ಮಗಳೆಂದು ಭಾವಿಸಿದ್ದರು , ತಮ್ಮ ಕುಟುಂಬದ ಎಲ್ಲರೂ ಆ ಹುಡುಗಿಯ ಜೊತೆ  ಚಿತ್ರವನ್ನು  ತೆಗೆಸಿಕೊಂಡು  ಮನೆಗೆ ಬಂದವರಿಗೆ ತಮ್ಮ ಹೆಮ್ಮೆಯ ಮಗಳೆಂದು  ಹೇಳಿಕೊಳ್ಳುತ್ತಿದ್ದರು , ಕೆಲವೊಮ್ಮೆ ಪ್ರವಾಸಕ್ಕೆ ತಮ್ಮೊಡನೆ ಕರೆದು ಕೊಂಡು ಹೋಗುತ್ತಿದ್ದರು , ಹಾಗೆ ಬರುವಾಗ ಎಷ್ಟೇ ತಡರಾತ್ರಿಯಾದರೂ ಸರಿಯೇ  ಆ ಹುದುಗಿಯನ್ನು  ಅವಳು ಓದುತ್ತಿದ್ದ  ಊರಿನ ಮನೆಗೆ  ಸುರಕ್ಷಿತವಾಗಿ ಬಿಟ್ಟುಬರುತ್ತಿದ್ದರು , ಕೆಲವೊಮ್ಮೆ ನನ್ನ ಗೆಳೆಯ ತನ್ನ ಕುಟುಂಬದೊಡನೆ  ಇದಕ್ಕಾಗಿ ರಾತ್ರಿಯಿಡೀ  ಕಾರನ್ನು ಚಲಾಯಿಸಿಕೊಂಡು  ಹೋಗಿ  ಆ ಮಗಳನ್ನು  ಬಿಟ್ಟು ಬಂದಿದ್ದಾನೆ , ವಾರಕ್ಕೆ ಒಂದೆರಡು ಬಾರಿ ಅವಳು ಫೋನ್ ಮಾಡದೆ ಇದ್ದರೆ  ಏನಾಯ್ತೋ ಎಂಬಂತೆ ಆ ಕುಟುಂಬ ತಾವೇ ಫೋನ್  ಮಾಡಿ ಅವಳ ಯೋಗಕ್ಷೇಮ  ವಿಚಾರಿಸಿದ್ದು ಸಹ ಉಂಟು,   ಅವಳ ತಮ್ಮನಿಗೆ  ಮತ್ತೊಂದು ಊರಿನಲ್ಲಿ  ದೊರೆತ ಸನ್ಮಾನದ  ಕಾರ್ಯಕ್ರಮದ   ವೀಡಿಯೊ  ಸಿ.ಡಿ  ದೊರಕಿಸಿಕೊಡಲು , ಅವಳ ಕೋರಿಕೆಯ ಮೇರೆಗೆ  ನೂರಾರು ಮೈಲು ಕಾರು ಮಾಡಿಕೊಂಡು  ಹೋಗಿ ಸಾಹಸ ಪಟ್ಟು ವೀಡಿಯೊ  ಸಿ.ಡಿ ಗೆ ತಾನೇ ಹಣ ಪಾವತಿಸಿ  ಅವಳಿಗೆ ತಲುಪಿಸಿದ್ದಾನೆ ,     ಆದರೆ ಇದೂ  ಸಹ ಅದೇ  ರಾಗ ಆಯ್ತು  ಈಕೆಯೂ ಸಹ   ಸಹೋದರ ಪ್ರೀತಿ ಹಾಗು ಒಂದು ಕುಟುಂಬದ  ವಿಶ್ವಾಸವನ್ನು  ಧಿಕ್ಕರಿಸಿ  , ತನಗೂ ಆ ಕುಟುಂಬಕ್ಕೂ  ಪರಿಚಯವೆ  ಇಲ್ಲ ಅನ್ನುವಂತೆ  ಇದ್ದಾಳೆ.




ಮೇಲಿನ ಎರಡು ಘಟನೆಗಳು  ನಿಜಕ್ಕೂ ಅಚ್ಚರಿ ಮೂಡಿಸಿದ  ವಿಚಾರಗಳು , ಸಾಮಾಜಿಕ ತಾಣದಲ್ಲಿನ   ಇಂತಹ  ವ್ಯಕ್ತಿಗಳು ಹೀಗೇಕೆ ?   ಎಂಬ ಪ್ರಶ್ನೆಗೆ ಉತ್ತರ  ಸಹ ದೊರೆಯುತ್ತಿಲ್ಲ,  ಇನ್ನು ನನ್ನ ಗೆಳೆಯನ ನಡತೆ ಬಗ್ಗೆ ಎರಡು ಮಾತಿಲ್ಲ ಅದು  ನನ್ನ ಗೆಳೆಯರ ಬಳಗದಲ್ಲಿರುವ  ನೂರಾರು  ಸಹೋದರ ಸಹೋದರಿಯರಿಗೆ ಗೊತ್ತಿರುವ ವಿಚಾರ . ಅವರೆಲ್ಲರೂ ಸಹ ಈ ವಿಚಾರದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ  ಇದೆಲ್ಲದರ ನಡುವೆಯೂ  ಸಾಮಾಜಿಕ ತಾಣದಲ್ಲಿ ದೊರೆತ  ಸಹೋದರಿಯರ  ವಿಚಾರದಲ್ಲಿ  ನನ್ನ ಗೆಳೆಯನ  ಪ್ರೀತಿ ವಾತ್ಸಲ್ಯ ಕಡಿಮೆಯಾಗಿಲ್ಲ , .    ಯಾಕ್ರೀ ಹೀಗೆ ಅಂತಾ ಕೇಳಿದ್ರೆ ಅದೇ ನಗುವಿನ ಉತ್ತರ   ಸಹೃದಯ ಪ್ರೀತಿಗೆ  ಸಾವಿಲ್ಲಾ   ಸರ್ಜಿ ,  ಅವರ ಮೇಲೆ ನಿಜಕ್ಕೂ ಕೊಪವಿಲ್ಲಾ  ಆದರೆ  ಮನಸಿನಲ್ಲಿ  ಒಂದೆಡೆ ನೋವಿರುತ್ತೆ ಅದಕ್ಕೆ  ವೆಂಗ್ಯದ  ನಗೆ ನಕ್ಕು ನನ್ನ ಕೆಲಸ ಮುಂದುವರೆಸುವೆ ಅಷ್ಟೇ ,  ಪ್ರೀತಿ ವಾತ್ಸಲ್ಯ  ಬಯಸಿದಾಗ ಕೊಡೋದು ತಪ್ಪಲ್ಲ , ಆದರೆ ಉಳಿಸಿಕೊಳ್ಳೋದು  ನಮ್ಮ  ನಮ್ಮ ಅರಿವಿಗೆ ಬಿಟ್ಟ ವಿಚಾರ ಅಂದರು .  ನನಗಂತೂ  ಪ್ರೀತಿಯ ಗೆಳೆಯನ  ಹೃದಯ ವೈಶಾಲ್ಯತೆಯ  ದರ್ಶನ ಆಯ್ತು .  ನನ್ನೊಳಗಿನ ಮನಸು   ಕೂಗಿ ಕೂಗಿ ಹೇಳ್ತಾ  ಇತ್ತು   ," ಸಾಮಾಜಿಕ ತಾಣದ ಮಹಾನ್  ಗೆಳೆಯರೇ   ನೀವು ಯಾರೇ ಆಗಿರಿ ಮೊದಲು ಪ್ರೀತಿ ವಾತ್ಸಲ್ಯಕ್ಕೆ  ಗೌರವಕೊಟ್ಟು ವಿಶ್ವಾಸ  ಉಳಿಸಿಕೊಳ್ಳಿ,  ಇಲ್ಲದಿದ್ದಲ್ಲಿ ಮನಸುಗಳನ್ನು ಅರ್ಥ  ಮಾಡಿಕೊಳ್ಳದ  ನೀವು ಹೋಗಿ ಬನ್ನಿ  ನಿಮಗೆ ಶುಭವಾಗಲಿ ......! "  ಈ ಮಾತು ಎಷ್ಟು ನಿಜಾ ಆಲ್ವಾ,



3 comments:

ಸಂಧ್ಯಾ ಶ್ರೀಧರ್ ಭಟ್ said...

ಯಾಕೆ ಹೀಗೆ? ಯಾಕೆ ಹಾಗೆ? ಎಂದು ಪ್ರಶ್ನೆ ಮಾಡುವ ಹಾಗೆ ಇಲ್ಲ. ಜಾಲ ತಾಣದ ಬಲೆಯೊಳಗೆ ಗಟ್ಟಿ ಕಾಳುಗಳು ಮಾತ್ರ ನಿಲ್ಲುತ್ತವೆ. ಜೊಳ್ಳು ಕಾಳುಗಳು ಇಳಿದು ಹೋಗಲೇ ಬೇಕು. ವಿಪರ್ಯಾಸ ವೆಂದರೆ ಇಲ್ಲಿ ಜೊಳ್ಳೆ ಹೆಚ್ಚು ...

vijaya aditya said...

ಬಾಲು ಸ್ವಾಮೀ ನಿಮ್ಮ ಬರಹ, ಅನಿಸಿಕೆ ನಮ್ಮೆಲ್ಲರ ಜೀವನದಲ್ಲಿ ನಡೆದಿರುತ್ತೆ. ಎಲ್ಲರಿಗೂ ಇಂಥ ಒಂದು ಅನುಭವ ಆಗಿರುತ್ತೆ. ನನ್ನ ಮನಸಲ್ಲಿ ಕೂಡ ಮೂಡುವ ಪ್ರಶ್ನೆ ಇದೆ... ಇವರೆಲ್ಲರೂ ಯಾಕೆ ಹೀಗೆ? ಇವರಿಗೆ ಪ್ರೀತಿ, ವಾತ್ಸಲ್ಯ, ಸ್ನೇಹದ ಬೆಲೆ ಗೊತ್ತಿಲ್ಲವೇ? ಇವೆಲ್ಲವೂ ಕೇವಲ ೨ ನಿಮಿಷದಲ್ಲಿ ಮುರಿದು ಹೋಗುವಂತದ್ದು ಅಲ್ಲ.. ಎಷ್ಟೋ ಮಂದಿ ನಿಷ್ಕಲ್ಮಶವಾದ ಪ್ರೀತಿ ತೋರಿದ್ದರೂ ಅದು ಯಾವ್ದಕ್ಕೂ ಬೆಲೆ ಇಲ್ಲದಂತಾಗಿದೆ.

manjunath said...

ನೋಡಿ ಸ್ವಾಮಿ ನಾವಿರೋದು ಹೀಗೇ