Wednesday, June 20, 2012

ಮೈ ದಿಲ್ಲಿ ಹೂ.....ಪಯಣ 3.... ಕೌತುಕ ಮೂಡಿಸಿದ ಚಾಂದನಿ ಚೌಕ!!! !!!




ದಿಲ್ಲೀ ಯಲ್ಲಿ ಕಂಡ ಬುದ್ದನ  ಕಲಾಕೃತಿ

ಲೇ .ಕರ್ನಲ್ ನಂದಕುಮಾರ್ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಾ  "ಕುತಬ್ ಮಿನಾರ್" ನಿಂದಾ ಹೊರಗೆ ಬಂದು  ಮಾತುಮುಗಿಸಿದೆ ..ನಂತರ  ಕರ್ನಾಟಕ ಭವನದತ್ತಾ  ಮೆಟ್ರೋ ರೈಲು  ಹಿಡಿದು ದಾವಿಸಿ ಬಂದೆವು.ಬಂದ ಸ್ವಲ್ಪ ಸಮಯಕ್ಕೆ ಗೆಳೆಯ ನಂದಕುಮಾರ್ ತನ್ನ ಮಿಲಿಟರಿ ವಾಹನದಲ್ಲಿ ಬಂದು ನಮ್ಮನ್ನು ಕರೆದುಕೊಂಡು ಅವರ ಮನೆಗೆ ಹೊರಟರು ದಾರಿಯಲ್ಲಿ ಉಭಯ ಕುಶಲೋಪರಿ, ನನ್ನ ಜೊತೆಯಲ್ಲಿದ್ದವರ ಪರಿಚಯ ಇತ್ಯಾದಿ ನಡೆಯಿತು. ನನ್ನ ಜೊತೆಯಲ್ಲಿದ್ದವರ  ಹೊಟ್ಟೆ ಹಸಿದು ನನ್ನ ಕಡೆ ಕೆಕ್ಕರಿಸಿಕೊಂಡು ನೋಡುತ್ತಿದ್ದರು..........!.ನನಗೆ ಪೀಕಲಾಟ ಶುರುವಾಗಿ......... ದೇವ್ರೇ ಬೇಗ ಊಟ ಕೊಡಿಸಪ್ಪಾ ಅಂತಾ ಮನದಲ್ಲಿ ಬೇಡಿಕೊಳ್ಳುತ್ತಿದ್ದೆ.......ನಂದಕುಮಾರ್ ಮನೆಗೆ ತಲುಪಿ ಉಸ್ಸಪ್ಪಾ ಅಂತಾ ನಿಟ್ಟುಸಿರು ಬಿಟ್ಟ ನಮಗೆ ತಕ್ಷಣ ಕುಡಿಯಲು ತಣ್ಣನೆ ನೀರು ಬಂತು,   ಆದರೆ ಆ ಬಿಸಿಲ ಜಳಕ್ಕೆ ಎಷ್ಟು ಹೊತ್ತು ತಡೆದೀತು?ಮತ್ತೆ ಸಂಕಟ ಶುರು ಆಗಿ ಗೆಳೆಯನ ಯಾವ ಮಾತುಗಳೂ ಕಿವಿಗೆ ತಲುಪುತ್ತಿರಲಿಲ್ಲ.ಅಷ್ಟರಲ್ಲಿ ಊಟಕ್ಕೆ ಏಳಿ ಅಂತಾ ಹೇಳಿದ್ದೆ ತಡಾ ದಡಕ್ಕನೆ ಊಟದ ಟೇಬಲ್ ಮುಂದೆ ಹಪಹಪಿಸಿ ಕುಳಿತೆವು. ಆಗ ಬಂದಿತ್ತು ರುಚಿ ರುಚಿಯಾದ ಬೆಂಗಳೂರಿನ ಊಟ. ಹಸಿದಿದ್ದ ಹೊಟ್ಟೆಗೆ ರುಚಿಯಾದ ಕರ್ನಾಟಕದ ಊಟ ತೃಪ್ತಿ ನೀಡಿತು.ಲೇ ಕರ್ನಲ್ ನಂದಕುಮಾರ್ ಕುಟುಂಬ ನನ್ನ ಪರಿಚಯ ಇದ್ದ ಕಾರಣ ಸ್ವಲ್ಪ ಹೊತ್ತು ಹರಟೆ ಹೊಡೆದು , ಅವರ ಕಾರಿನಲ್ಲಿ ಡೆಲ್ಲಿ ಸುತ್ತಲು ಹೊರಟೆವು.ಕಾರು ಹೊರಟಿತು ಬನ್ನಿ ನಮ್ಮ "ಡಿಫೆನ್ಸ್ ಆಫಿಸರ್ಸ್ ಕ್ಲಬ್ "ನೋಡೋರಂತೆ ಅಂತಾ ಕಾರನ್ನು ಅಲ್ಲಿಗೆ ತಿರುಗಿಸಿದರು.ರಕ್ಷಣಾ ಅಧಿಕಾರಿಗಳು ತಮ್ಮ ಕಷ್ಟದ ಕೆಲಸದ ನಡುವೆ ಮನರಂಜನೆ ಹೊಂದಲು ಇರುವ ಒಂದು ಪ್ರಶಾಂತವಾದ ಸ್ಥಳ. ಬಹಳ ಅಚ್ಚುಕಟ್ಟಾದ ನಿರ್ವಹಣೆಯಿಂದ  ಕಂಗೊಳಿಸಿತ್ತು. ಒಳಗೆ ಅದ್ಭುತವಾದ ಕಲಾಕೃತಿಗಳು ,ಮುಂತಾದವು ಮನಸೂರೆಗೊಂಡವು.{ರಕ್ಷಣಾ ಹಿತದೃಷ್ಟಿಯಿಂದ ಕೆಲವು ಫೋಟೋಗಳನ್ನು ಹಾಕಿಲ್ಲ.}ಎಲ್ಲವನ್ನೂಕಣ್ ತುಂಬಿಕೊಂಡು  ಹೊರಡಲು ಆಚೆ ಬಂದ ನನಗೆ ಕಾಣಿಸಿದ್ದು  ಚೈನಾ ಸರ್ಪ ನೋಡಿದವನೇ ಕ್ಯಾಮರಾದಲ್ಲಿ ಕ್ಲಿಕ್ಕಿಸಿದೆ ಅದರ ಎದುರು ನಗಾರಿ ಭಾರಿಸುತ್ತಿರುವ ಮಾನವನ ಮತ್ತೊಂದು ಆಕೃತಿ ನೋಡಿ ಅದನ್ನೂ ನನ್ನ ಕ್ಯಾಮರಾದಲ್ಲಿ ಹಿಡಿದಿಟ್ಟೆ.
ಚೈನಾ ಸರ್ಪದ ಪ್ರತಿಮೆ 

ತುಂಬಿದ ಹೊಟ್ಟೆಯ ಮನಗಳಿಗೆ ಅದ್ಭುತ ಕಲಾಕೃತಿಗಳ ದರ್ಶನ ಭಾಗ್ಯ ಸಿಕ್ಕಿತ್ತು.ಸವಾರಿ ಮುಂದೆ ಹೊರಟಿದ್ದು " ಚಾಂದನಿ ಚೌಕ " ಕಡೆಗೆ.

Friday, June 15, 2012

ಮೈ ದಿಲ್ಲಿ ಹೂ.....ಪಯಣ .2 .... ವಿಸ್ಮಯ ಕುತಬ್ ಮಿನಾರ್ !!!


ಹಳೆಯ ದುಃಖದ ನೆನಪುಗಳನ್ನು ದಾಟಿ ಮುಂದುವರೆದೆ, ಕುತುಬ್ ಮಿನಾರ್ ತನ್ನ ಚೆಲುವನ್ನು ನನ್ನ ಕ್ಯಾಮರಾದ ಎದುರು ಅನಾವರಣ ಮಾಡುತ್ತಾ ಹೋಯ್ತು.ಬನ್ನಿ ಈ  "ಕುತಬ್  ಮಿನಾರ್" ಬಗ್ಗೆ ಸ್ವಲ್ಪ ತಿಳಿಯೋಣ  , ಈ ಸ್ಮಾರಕ ಯುನೆಸ್ಕೋ ಗುರುತಿಸಿರುವ ಒಂದು "ಅಂತರಾಷ್ಟೀಯ  ಸ್ಮಾರಕ "  ಇದನ್ನು ಕೆಂಪು ಇಟ್ಟಿಗೆ ಹಾಗು ಮಾರ್ಬಲ್ ನಿಂದ ನಿರ್ಮಾಣ ಮಾಡಲಾಗಿದೆ , ಕುತಬ್ ಮಿನಾರ್ ಭಾರತದ ಅತ್ಯಂತ ಎತ್ತರದ ಗೋಪುರ ವಾಗಿದೆ.   72.5 meters (237.8 ft), ಎತ್ತರ , ಕೆಳಮಟ್ಟದಲ್ಲಿ 14.3 meters ಹಾಗು ತುದಿಯಲ್ಲಿ2.7 meters.  ಸುತ್ತಳತೆಯ ಈ ಗೋಪುರದ  ತುತ್ತ ತುದಿ  ಏರಲು 379  ಮೆಟ್ಟಿಲುಗಳಿವೆ.1981 ರ ಡಿಸೆಂಬರ್ 4  ರ ಘಟನೆಯ ನಂತರ ಪ್ರವಾಸಿಗಳನ್ನು ಕುತಬ್ ಮಿನಾರ್ ಹತ್ತಿ ನೋಡಲು ಬಿಡುತ್ತಿಲ್ಲಾ, ಆದರೆ ಅದಕ್ಕಿಂತ ಮೊದಲು ಅಂದರೆ ಘಟನೆಯ  ಹಿಂದಿನ ದಿನ ನಾನೂ  ಸಹ ಅದನ್ನು ಹತ್ತಿ ದೆಹಲಿಯ ಸೌಂದರ್ಯ ಸವಿದಿದ್ದೇನೆ.1192  ರಲ್ಲಿ "ಕುತುಬುದ್ದೀನ್  ಐಬಕ್ "  ಇದರ ನಿರ್ಮಾಣ ಪ್ರಾರಂಭಿಸಿ ಹಾಗೂ"ಶಂಸ್ -ಉದ್  -ದಿನ್-   ಇಲ್ತುತ್ಮಿಶ್" ಮುಕ್ತಾಯ ಗೊಳಿಸುತ್ತಾನೆ ಆದರೆ ಯಾವಾಗ  ಪೂರ್ಣ ಗೊಳಿಸಲಾಯಿತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲಾ. ಇದರ ನಿರ್ಮಾಣಕ್ಕೆ ಮೊದಲು ಜೈನ ಹಾಗು ಹಿಂದೂ  ದೇವಾಲಯಗಳನ್ನು  ಕೆಡವಲಾಯಿತೆಂದು  ಹೇಳುತ್ತಾರೆ. ಇಂದಿಗೂ  ಹಳೆಯ ಕುರುಹುಗಳನ್ನು ಅಲ್ಲಿ ಕಾಣಬಹುದಾಗಿದೆ.ಬನ್ನಿ ಚಂದದ ಕುತಬ್ ಮಿನಾರ್ ದರ್ಶನ ಮಾಡೋಣ
ಕಲೆಯ ಆಗರ ಈ ಮಿನಾರು
ಕಲೆಯ ಮೆರುಗು ಹೆಚ್ಚಿಸಿದ ನಕ್ಷತ್ರ ದ ಆಕಾರ
ಸೌಂದರ್ಯದ ಕಲೆಯ ಅನಾವರಣ ಇಲ್ಲಿದೆ.
ಮತ್ತೊಂದು ಅಮೋಘ ನೋಟ.

  ಬನ್ನಿಮುಂದಕ್ಕೆ ಹೋಗೋಣ , ಅಲ್ಲಿ ಕಾಣುತ್ತಿದೆ ನೋಡಿ ಒಂದು ಸ್ಥಂಭ .


Sunday, June 10, 2012

ಮೈ ದಿಲ್ಲಿ ಹೂ ..............ಪಯಣ.1

ಮೈ ದಿಲ್ಲಿ ಹೂ  ದೆಹಲಿಯ ಲೋಗೋ [ ಚಿತ್ರ ಕೃಪೆ ಅಂತರ್ಜಾಲ.]

ಕಳೆದ ತಿಂಗಳು ಅಂದರೆ ಮೇ ನಲ್ಲಿ ಒಂದು ದಿನ ಹೀಗೆ ಆಫಿಸ್  ಕೆಲಸ ನಡೆದಿತ್ತು. ನನ್ನ ಸಹಚರ ಒಬ್ಬ ಅಣ್ಣಾ ಬಾಸ್  ಕರೀತಿದಾರೆ ನೋಡು ಅಂದಾ. ಯಾಕೆ ಅಂತಾ ಒಳಗೆ ಹೋದೆ , ಬಾಲು,   ಡೆಲ್ಲಿಗೆ ಹೋಗ ಬೇಕು ಈಗಲೇ ರೆಡಿ ಯಾಗಿ ಬಂದುಬಿಡಿ ಅನ್ನೋದೇ!!!.ಅಲ್ಲಾ ಸಾರ್ ಅಂದೇ , ಇಲ್ಲಾ ಅರ್ಜೆಂಟಾಗಿ ಸುಪ್ರೀಂ ಕೋರ್ಟ್ ನಲ್ಲಿ ಕೆಲಸ ಇದೆ ಅದಕ್ಕೆ  ಫ್ಲೈಟ್ ಟಿಕೆಟ್ ಕೂಡಾ ಬುಕ್ ಆಗಿದೆ ಕೂಡಲೇ ಸಿದ್ದರಾಗಿ, ನಾಳೆ  ಬೆಳಿಗ್ಗೆ ಆರು ಘಂಟೆಗೆ ಫ್ಲೈಟು ,ಇವತ್ತು  ರಾತ್ರಿ  ಹನ್ನೊಂದು ಘಂಟೆಗೆ ನಿಮ್ಮ ಮನೆಗೆ ಕಾರ್ ಬರುತ್ತೆ ಅದರಲ್ಲಿ ಬಂದುಬಿಡಿ, ಅಂದ್ರೂ, ವಿಷಯ ಕಟ್ ಮಾಡಿದ್ರೆ ನಾನೂ , ನನ್ನ ಇನ್ನೊಬ್ಬ ಸಹ ಪಾಟಿ, ಹಾಗು ನನ್ನ ಆಫಿಸರ್  ಮುಂಜಾವಿನ  ಫ್ಲೈಟ್ ನಲ್ಲಿ  ಬೆಂಗಳೂರಿನಿಂದ ಹೊರಟೆವು, ರಾತ್ರಿ ನಿದ್ದೆಗೆಟ್ಟ ಪರಿಣಾಮ ವಿಮಾನದಲ್ಲಿ ನಿದ್ದೆ ಬಂದು ಕಣ್ತೆರೆದಾಗ ವಿಮಾನ  ದೆಹಲಿ ನಿಲ್ದಾಣದಲ್ಲಿ ಇಳಿದಿತ್ತು. ಸರಿ ಉಳಿದು ಕೊಳ್ಳಲು ವ್ಯವಸ್ತೆ ಇದ್ದ ಕಾರಣ "ಕರ್ನಾಟಕ ಭವನ -3 " ಕ್ಕೆ ಹೊರಟೆವು, ವಕೀಲರಿಗೆ ಫೋನ್ ಮಾಡಿ ಅವರ ಭೇಟಿಗೆ ವೇಳೆ ನಿಗದಿ ಪಡಿಸಿಕೊಂಡೆವು.ಅವರು ತಾವೂ ಸಹ ಯಾವುದೋ ವಿಚಾರದಲ್ಲಿ ಬ್ಯುಸಿ ಆಗಿದ್ದು ನಾಳೆ ಸಿಗುತ್ತೇನೆ ಅಂತಾ ಹೇಳಿ ಸಮಯ ನಿಗದಿ ಮಾಡಿದರು. ಅಲ್ಲಿಯ ವರೆಗೆ ?? ಏನು ಮಾಡೋದು, ನನ್ನ ಸಹಪಾಟಿ  ವಾಸು ಸಾರ್ ಬನ್ನಿ ಮೆಟ್ರೋದಲ್ಲಿ ಪ್ರಯಾಣ ಮಾಡಿ ಕುತಬ್ ಮಿನಾರ್ ನೋಡೋಣ ಅನ್ನೋದೇ!!
ದೆಹಲಿಯ ಮೆಟ್ರೋ ರೈಲು [ ಕೃಪೆ ಅಂತರ್ಜಾಲ ]
ದೆಹಲಿ ಮೆಟ್ರೋ ಟಿಕೆಟ್ ಕೌಂಟರ್


"ರೋಗಿ ಬಯಸಿದ್ದೂ ಹಾಲು ಅನ್ನಾ" "ವೈಧ್ಯಾ ಹೇಳಿದ್ದೂ  ಹಾಲೂ ಅನ್ನಾ " ಅನ್ನೋ ಹಾಗೆ ಎಲ್ಲರೂ ಜೈ ಅಂದ್ವಿ,ನಾನೂ ದೆಹಲಿಗೆ ಹಲವು ಸಾರಿ ಬಂದಿದ್ದರೂ  ಮೆಟ್ರೋ ಆದಮೇಲೆ ಬಂದಿರಲಿಲ್ಲ.ನಾವಿದ್ದ ಜಾಗದ ಸಮೀಪವೇ ಸುಮಾರು ಎರಡು ಕಿ.ಮೀ. ದೂರದಲ್ಲಿ  "ಮೆಟ್ರೋ  ನಿಲ್ದಾಣ "[A.I.I.M.S] ಇತ್ತು. ಅಲ್ಲಿಂದ "ಕುತಬ್ ಮಿನಾರ್"  ಕಡೆಗೆ ಮೆಟ್ರೋ ಏರಿದೆವು.ನನಗೂ ಮೆಟ್ರೋ ಅನುಭವ ಹೊಸದಾಗಿತ್ತು.ಮೆಟ್ರೋ ನಿಲ್ದಾಣಕ್ಕೆ ಬಂದೆವು, ಬರುತ್ತಿದ್ದಂತೆ ಹೊಸ ಅನುಭವ ನನಗೋ ಅಲ್ಲಿನ ಫೋಟೋ ತೆಗೆಯುವ ಖಯಾಲಿ ಕ್ಯಾಮರಾ ಕ್ಲಿಕ್ಕಿಸುತ್ತ ನಡೆದೇ  ಟಿಕೆಟ್ ಕೌಂಟರ್ ಬಳಿ ಬಂದು ಟಿಕೆಟ್ ಪಡೆದು ಅಲ್ಲಿನ  ಫೋಟೋ ತೆಗೆಯಲು ಶುರುಮಾಡಿದೆ. "ಎ ಬೈ ಇದರ್ ಫೋಟೋ ನಹಿ ಕೀಚ್ ಸಕ್ತ  " ಇಲ್ಲಿ ಫೋಟೋ ತೆಗೆಯ ಬಾರದು ಅಂತಾ ಒಬ್ಬರು ರಕ್ಷಣಾ ಸಿಬ್ಬಂದಿ ಹೇಳಿದರು . ಸರಿ ಅಂತಾ ಹೇಳಿ ಅಲ್ಲಿಂದ ಒಳಗಡೆ ಪ್ರವೇಶ ಪಡೆದು ಮೆಟ್ರೋ ರೈಲು ಹತ್ತಿದ್ದಾಯಿತು. ರೈಲಿನಲ್ಲಿನ ಅನುಭವ ಚೆನ್ನಾಗಿತ್ತು.
ದೆಹಲಿ ಮೆಟ್ರೋ ರೈಲಿನ ಒಳ ನೋಟ


ಶುಚಿಯಾದ ರೈಲುಗಳು, ಅಚ್ಚುಕಟ್ಟಾದ ನಿರ್ವಹಣೆ , ಸಮಯ ಪಾಲನೆ ಯಾವುದೇ ಅಂತರಾಷ್ಟ್ರೀಯ ಗುಣಮಟ್ಟಕ್ಕೂ ಕಡಿಮೆ ಇಲ್ಲದ ವ್ಯವಸ್ತೆ ಮನ ಸೂರೆಗೊಂಡಿತು.ದೆಹಲಿಯ ಸ್ಥಳೀಯ ಪ್ರಯಾಣಕ್ಕೆ ಮೆಟ್ರೋ ಬಹಳ ಸೂಕ್ತ ವಾಗಿದ್ದು ಪ್ರವಾಸಿಗರು ಇದರ ಉಪಯೋಗ ಬಳಸಿಕೊಳ್ಳಬಹುದು. ನಾವಂತೂ ಬಹಳಷ್ಟು ಜಾಗಗಳಿಗೆ ಮೆಟ್ರೋ ಉಪಯೋಗ ಮಾಡಿಕೊಂಡೆವು.ನಮ್ಮ ಬೆಂಗಳೂರಿಗೆ ಪೂರ್ಣ ಪ್ರಮಾಣದ ಮೆಟ್ರೋ ಬಂದಲ್ಲಿ ಜನರಿಗೆ ಆಗುವ ಉಪಯೋಗ ನೆನೆದರೆ ಬಹಳ ಸಂತಸ ವಾಗುತ್ತದೆ.ಇದನ್ನೆಲ್ಲಾ ಮನದಲ್ಲಿ ಕನಸು ಕಾಣುತ್ತಾ  ಇರುವಾಗಲೇ ಕುತಬ್ ಮಿನಾರ್ ಹತ್ತಿರ ಬಂದಿದ್ದೆವು.
ಕುತಬ್ ಮಿನಾರ್ ನ ಒಂದು ನೋಟ.