Monday, May 24, 2010

ಬನ್ನಿ ಬ್ಲಾಗಿನ ಹಕ್ಕಿಗಳೇ ಗುಂಪು ಸೇರೋಣ !!! ಜೊತೆಯಾಗಿ ಹಾರೋಣ!!

ಬನ್ನಿ ಬ್ಲಾಗಿನ ಹಕ್ಕಿಗಳೇ ಗುಂಪು ಸೇರೋಣ !! ಜೊತೆಯಾಗಿ ಹಾರೋಣ ,ಅತ್ತ ಅಕ್ಕ ಪಕ್ಕದ ಕಾನನದಲ್ಲಿ  ಗುಂಪು ಸೇರುವ ಬಗ್ಗೆ ಚರ್ಚೆ ಶುರುವಾಗಿದೆ .ನೀವು ಯಾವದಿಕ್ಕಿನ ಹಕ್ಕಿಯಾಗಿದ್ದರೂ ನಿಮಗೆ ಇಲ್ಲಿ ತೆರೆದ ಹೃದಯದ  ಸ್ವಾಗತ!!!  .ಮೈಸೂರು ,ಚಾಮರಾಜನಗರ ಹಾಗು  ಮಂಡ್ಯ ಜಿಲ್ಲೆಯ  ಬ್ಲಾಗ್ ಹಕ್ಕಿಗಳು  ನನ್ನ ಮೇಲ್ ಗೆ [balusmiles@gmail.com] ಸಂಪರ್ಕ ಬೆಳೆಸ ಬಹುದು .ಪರಸ್ಪರ ಸೇರಿ ನಂತರ ಮಾತಾಡಿ ಒಂದು ಬ್ಲಾಗಿಗರ ಕೂಟ ರಚಿಸೋಣ , ಹಾಗು ಹಲವಾರು ಬ್ಲಾಗ್ ಗೆಳೆಯರು ಈ ಗಾಗಲೇ ಈ ಕಾರ್ಯ ಹಮ್ಮಿಕೊಂಡಿದ್ದು ನಾವು ಅವರೊಡನೆ ಸಾಗೋಣ .
ಬನ್ನಿ ನಿಮ್ಮ ಆಲೋಚನೆಗಳನ್ನು ,ಜ್ಞಾನವನ್ನು ಹಂಚಿಕೊಂಡು ನಿಮ್ಮ ಸ್ನೇಹಲೋಕವನ್ನು  ವಿಶಾಲ ಒಂದು ಉತ್ತಮ ವೇದಿಕೆ ಇದು .ಬನ್ನಿ ಗುಂಪು ಕಟ್ಟೋಣ ಜೊತೆಯಾಗಿ ಸೇರೋಣ. ಬ್ಲಾಗ್ ಗೆಳೆಯರ ಲೋಕಕ್ಕೆ ನಿಮಗೆ ಸ್ವಾಗತ.ಸೇರಬಯಸುವವರು  ಮೊದಲ ಕಂತಿನ ಪ್ರೀತಿ ತುಂಬಿದ ಮಾತುಗಳನ್ನು ನನ್ನ ಮೇಲ್  ವಿಳಾಸಕ್ಕೆ ತಕ್ಷಣ ಭರ್ತಿಮಾಡಿ.ನಿಮ್ಮ ಆಗಮನಕ್ಕೆ ಕಾದವ .... ಬಾಲು

Tuesday, May 11, 2010

ಮೈಸೂರು ಬೆಂಗಳೂರು ಪಯಣದ ಹಾದಿಯಲ್ಲಿ!!! ನೋಡಿಸ್ವಾಮಿ ನಾವಿರೋದೆ ಹೀಗೆ ಭಾಗ-೦೨








ಚೆನ್ನಪಟ್ಟಣದಲ್ಲಿ ನಮ್ಮ ಪಯಣ ಮುಂದುವರೆದು ಸಾಗಿತು.ನೀವು ಯಾವ ಊರಿಗೆ ಪ್ರವೇಶಿಸಿ  ಅಲ್ಲಿ ನಿಮಗೆ ಕಾಣುವುದು ಸಾಮಾನ್ಯವಾಗಿ ತಯಾರಾಗುವ ಉತ್ಪನ್ನಗಳ ಅಂಗಡಿಗಳು.ಆದ್ರೆ ಮರದ ಬೊಂಬೆಗಳ ತಯಾರಿಕೆಯಲ್ಲಿ ಪ್ರಸಿದ್ದಿಹೊಂದಿದ , ಗೊಂಬೆಗಳ ನಗರ ಎಂದು ಕರೆಸಿಕೊಂಡ ಈ ಊರಿನಲ್ಲಿ ಇಂದು ಮೊದಲು ಕಂಡಕಂಡಲ್ಲಿ  ಗೊಂಬೆಗಳ  ಅಂಗಡಿಗಳು ಕಾಣಿಸುತ್ತಿದ್ದವು !!! ಆದ್ರೆ ಇತ್ತೀಚಿನ ದಿನಗಳಲ್ಲಿ ಚೀನಾ ದೇಶದ ಗೊಂಬೆಗಳು ಮಾರುಕಟ್ಟೆಗೆ ನುಗ್ಗಿ  ಈ ಊರಿನ ಗೊಂಬೆ ತಯಾರಕರ ಬಾಳನ್ನು ಸಂಕಷ್ಟಕ್ಕೆ ನೂಕಿವೆ !!!.ಮೊದಲಿದ್ದ ಗೊಂಬೆ ಅಂಗಡಿಗಳು ಒಂದೊಂದಾಗಿ  ಮರೆಯಾಗಿ ಹೋಗಿದ್ದು , ಈಗ ಅಲ್ಲೊಂದು ಇಲ್ಲೊಂದು ಅಂಗಡಿ ಜೀವ ಹಿಡಿದು ನಿಂತಿವೆ !!! ಭಾರವಾದ ಮನಸ್ಸಿನೊಡನೆ ಮುಂದುವರಿದು ಬಸ್ ನಿಲ್ದಾಣದ  ಬಳಿ ಬಂದಾಗ ಕಂಡುಬಂದ ದೃಶ್ಯ [ಚಿತ್ರ ೦೧]ಅದೇ ಗಡಿಬಿಡಿ, ಬೆಂಗಳೂರಿಗೆ ಜನರ ಕರೆದೊಯ್ಯಲು ಖಾಸಗಿ ಹಾಗು ಸರ್ಕಾರಿ ಬಸ್ಸುಗಳ ನಡುವೆ ಪೈಪೋಟಿ  ನಡೆದಿತ್ತು.ಸ್ವಾಮೀ ಕೆಲವೊಮ್ಮೆ ಬಸ್ಸಿನ ಸಿಬ್ಬಂದಿ ಗಳು ಹೊಡೆದಾಟ ಮಾಡಿ ಪ್ರಯಾಣಿಕರನ್ನುಎಳೆದಾಡುವುದು  ಉಂಟು!!ಹಾಗೆ ಮುಂದುವರೆದು ಹೋಗುವಾಗ
ತಾನುಬೇಳೆದ ತೆಂಗಿನ ಕಾಯಿಗಳ ಜೊತೆಯಲ್ಲಿ ಯಾವ ಹಳ್ಳಿ ಇಂದಲೋ ಬೆಂಗಳೂರಿಗೆ ಕಾರ್ಗೋ ಮಿನಿ ಲಾರಿಯಲ್ಲಿ  ಹೋರಾಟ ರೈತ ಕಾಣಿಸಿದ
ಈ ಬೆಂಗಳೂರೆಂಬ ಮಾಯದ ರಕ್ಕಸನ ಹೊಟ್ಟೆಗೆ ಇಂತಹ ಎಷ್ಟು ಮೂಟೇಗಳಲ್ಲಿ ತೆಂಗಿನ ಕಾಯಿ ಬಂದರೂ ಸಾಲದೆಂದು ಅನ್ನಿಸಿತು.[ಚಿತ್ರ ..೦೨]ಮುಂಜಾನೆ ಹಳ್ಳಿಬಿಟ್ಟು ತಾನು ಬೆಳೆದ ತೆಂಗಿಕಾಯಿಯನ್ನು ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಾರಿದಾಗ ಬರುವ ಲಾಭದ ಬಗ್ಗೆ ಕನಸ ಹೊತ್ತು  ಈ ಜೀವ ಪಟ್ಟಣದ ಕಡೆಗೆ ಹೊರಟಿತ್ತು!!!.ಕೂರಲು ಜಾಗವಿಲ್ಲದಿದ್ರೂ  ಇರುವಷ್ಟರಲ್ಲೇ ಮುದುರಿ ಕುಳಿತು ಕನಸಿನ ಬೆನ್ನಟ್ಟಿ ಹೋಗುತ್ತಿರುವ ಇವನಿಗೆ ದಲ್ಲಾಳಿಗಳಿಂದ ಮುಕ್ತಿಸಿಕ್ಕಿ ಲಾಭವಾದರೆ ಅದೇ ಪುಣ್ಯ ಅನ್ನಿಸಿತು.ಅರೆ ಇದೇನಿದು
ಇಲ್ಲೊಂದು  ತಳ್ಳೋ ಕಾರ್ ಹೋಗುತ್ತಿದೆ ಹೌದು ಸ್ವಾಮೀ ವಾಹನಗಳು ಯಾವಾಗ ಕೈಕೋಡುತ್ತೋ ಗೊತ್ತಾಗೊಲ್ಲ ಕಾರ್ ಕೈಕೊಟ್ಟು ಪಾಪ [ಚಿತ್ರ ..೦೩]ಮನೆಯ ಗಂಡಸರು ತಳ್ಳುತಿದ್ದರೆ ಪಾಪ ಮನೆಯ  ಹೆಂಗಸು ಕಾರು ಸ್ಟಾರ್ಟ್ ಆದ್ರೆ ಸಾಕಪ್ಪಾ ಅಂತ ಹಿಂಬಾಲಿಸುತ್ತಿದ್ದಾಳೆ !!! ಜೀವನವೂ ಹಾಗೆ ಅಲ್ವೇ  ಚೆನ್ನಾಗಿದ್ರೆ ಸರಿ ಈ ಕಾರಿನಂತೆ ಕೈಕೊಟ್ರೆ??? ಅದೊಗತಿ ಆಲ್ವಾ???ಅಂತ ಮುಂದೊದ್ವಿ  ಅಗೋ ಅಲ್ಲಿ ಕಾಣಿಸಿತು ನನ್ನ ಬಾಲ್ಯದ ನೆಚ್ಚಿನ ಐಸ ಕ್ಯಾಂಡಿ ಮಾರುವವನು!!![ಚಿತ್ರ ..೦೪]
ನಾನು ಚಿಕ್ಕವನಾಗಿದ್ದಾಗ ಸೈಕಲ್ಲಿನ ಮೇಲೆ ಐಸ ಕ್ಯಾಂಡಿ ಮಾರುವವನು ಬಂದು ಪೊಂ ಪೊಂ ಅಂತ ಹಾರ್ನ್ ಮಾಡಿದ್ರೆ ಸಾಕು ಹಳ್ಳಿ ಮಕ್ಕಳೆಲ್ಲ ಅವನ ಸುತ್ತ ಹಾಜರ್ ಕೆಂಪು, ಹಳದಿ ,ಬಿಳಿಬಣ್ಣದ ಮೋಹಕ ಐಸ ಕ್ಯಾಂಡಿಗಳನ್ನು ಪೆಟ್ಟಿಗೆ ಯೋಳಗಿನಿಂದ ತೆಗೆದು ಕೊಟ್ಟಾಗ ನಮಗೆ ಹಿಗ್ಗೋ ಹಿಗ್ಗು ಅಂದು ಸೈಕಲ್ಲು ಮೇಲೆ ಏರಿದ್ದ ಐ ಸ ಪೆಟ್ಟಿಗೆ ಇಂದು ಟಿ.ವಿ.ಎಸ  ಮೊಪೆಡ್ ಏರಿಕುಳಿತು ಯಾವ ಹಳ್ಳಿಗೋ  ಸವಾರಿ ಹೊಂಟಿತ್ತು.!!! ಎಷ್ಟು ಮಕ್ಕಳು ಕಾದುಕುಳಿತ್ತಿದ್ದರೋ ಕಾಣೆ!! ಹೀಗೆ  ನೋಡುತ್ತಾ ಬರುವಾಗ ರಾಮನಗರ ಪ್ರವೇಶ ಮಾಡಿದ್ದು ಗೊತ್ತೆಆಗ್ಲಿಲ್ಲ
ಯಾಕೋ ತಲೆ ತೆತ್ತಿನೋಡಿದರೆ ವಿದ್ಯುತ್ ತಂತಿಗಳ ಬಲೆ  ಕಾಣಿಸಿತು [ಚಿತ್ರ..೦೫]ಇಡಿ ರಾಮನಗರ ಪಟ್ಟಣವನ್ನು ವಿದ್ಯುತ್ ತಂತಿಗಳ ಬಲೆಯಲ್ಲಿ ಬಂಧಿಸಿದಂತೆ  ಭಾಸವಾಯಿತು.ಅರೆ ಇದೂ ಕೂಡ ನಮ್ಮ ವಿಜ್ಞಾನದ ಕೊಡುಗೆ ಅಲ್ವೇ ಅಂತ ಅನ್ನಿಸಿ ನಾವೆಲ್ಲಾ ಇಂಥಹ ಹಲವಾರು ಬಳೆಗಳಲ್ಲಿ ಬಂಧಿಗಳಲ್ವೆ !! ಅನ್ನಿಸಿ ನಗು ಬಂದಿತ್ತು!! ಈ ನಡುವೆ ಮಲೆ ಮಾದೇಶ್ವರ  ಬಸ್ಸು
ಎತ್ತಲಿಂದಲೋ ಅಡ್ಡಾದಿಡ್ಡಿ ಬಂದು ಅಡ್ಡಲಾಗಿ ನುಗ್ಗಿ ಬಿಡೋದೇ!!ಪುಣ್ಯ ನಮ್ಮ ಚಾಲಕ ಚಾಲಾಕಿನಿಂದ ಅದನ್ನು ತಪ್ಪಿಸಿದ್ದ [ಚಿತ್ರ..೦೬]ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಗೆ ಪ್ರಸಿದ್ದಿ
ದೂರ ದೂರದ ಊರುಗಳಿಂದ ಬಹಳ ಹಿಂದಿನಿಂದಲೂ ರೈತರು ರೇಷ್ಮೆ ಗೂಡನ್ನು ತಂದು ಮಾರುತ್ತಾರೆ.ಹಲವಾರು ಊರುಗಳಲ್ಲಿ ರೇಷ್ಮೆ ಮಾರುಕಟ್ಟೆ ಈಗ ನಿರ್ಮಿಸಿದ್ದರೂ ಕೂಡ ಇಂದೂ ಸಹ ರಾಮನಗರದ ರೇಷ್ಮೆ ಮಾರುಕಟ್ಟೆ  ಮೇಲೆ ವಿಶ್ವಾಸವಿರಿಸಿ ಇಲ್ಲಿಗೆ ಬರುವ ರೈತರು ಬಹಳ ಇದ್ದಾರೆ.ಅಗೋ ಅಲ್ಲಿ ನೋಡಿ [ಚಿತ್ರ೦೭]ಹಳ್ಳಿ ಇಂದ ರೇಷ್ಮೆ ಗೂಡನ್ನು ತಂದಿರುವ ರೈತರು ಮಾರುಕಟ್ಟೆ ತೆರೆಯುವುದನ್ನು ಕಾಯುತ್ತಾ ರಸ್ತೆ ಬಳಿಯಲ್ಲಿ ಕುಳಿತು ಲಾಭದ ಲೆಕ್ಕಾ ಹಾಕುತ್ತಿದ್ದಾರೆ!! ಈ ಮಧ್ಯೆ ನರಿ ಬುದ್ದಿಯ ದಲ್ಲಾಳಿಗಳು ಹೊಂಚು ಹಾಕಿ ಕಾಯುವವರಿಗೆನೂ ಬರ  ಇಲ್ಲಾ !!!ಒಟ್ಟಿನಲ್ಲಿ ರೇಷ್ಮೆ ಗೂಡಿನ ವ್ಯವಹಾರ ಇಲ್ಲಿ ಭರದಿಂದ ನಡೆಯುತ್ತದೆ.ಮುಂದೆ ಸಾಗಿದ ನಮಗೆ ದಾರಿಯಲ್ಲಿ
ಕೆಟ್ಟು ನಿಂತಿದ್ದ ಒಂದು ಲಾರಿ ಕಣ್ಣಿಗೆ ಬಿತ್ತು!![ಚಿತ್ರ ೦೮]ಲಾರಿ ಕೆಟ್ಟಿದೆ ಎಂದು ಬೇರೆ ವಾಹನದವರಿಗೆ ತಿಳಿಸಲು ಪಕ್ಕದ ಮರದ ಕೊಂಬೆ ಮುರಿದು ಲಾರಿಗೆ ಸಿಕ್ಕಿಸಿ  ಲಾರಿ  ಸುತ್ತ ಕಲ್ಲನ್ನು ಇಟ್ಟು  ಹೋಗಿದ್ದರು!! ಅಲ್ಲ ಈ ರೀತಿ  ಸಿಗ್ನಲ್ ಬಗ್ಗೆ ಮೋಟಾರ್ ವೆಹಿಕಲ್  ಆಕ್ಟ್ ನಲ್ಲಿ ಹೇಳಿಲ್ಲವಲ್ಲ ಅಂತ ಅನ್ನಿಸಿ ಸೋಜಿಗವಾಯಿತು!!ಸ್ವಲ್ಪ ದೂರ ಕ್ರಮಿಸಿದ ನಮಗೆ ಯಾವುದೋ ಫಾರಂ ನಿಂದ
ಕೋಳಿಗಳು ಪಂಜರದಲ್ಲಿ ಕುಳಿತು ಬೆಂಗಳೂರಿಗೆ ಪಯಣ ಬೆಳಸಿದ್ದವು!!!ಪಾಪ ಕೋಳಿಗಳಿಗೆ ಏನು  ಗೊತ್ತು ಬೆಂಗಳೂರಿಗರ ಹೊಟ್ಟೆ ತುಂಬಿಸಲು ತಾವು ಬಲಿಯಾಗಬೇಕೆಂದು!!. ಪ್ರತಿನಿತ್ಯ ಎಷ್ಟು ಸಾವಿರ  ಕೋಳಿಗಳು ಹಿಂಗೆ ಮರಣದೆಡೆಗೆ ಪಯಣ ಬೆಳಸುತ್ತವೋ ಯಾರಿಗೆ ಗೊತ್ತು???ಹಾಗೆ ಈ ವಾಹನ ಹಿಂದಿಕ್ಕಿ ಹೋರಾಟ ನಮಗೆ ಅಡ್ಡಲಾಗಿ[ಚಿತ್ರ೦೯] ಒಂದು  ಗ್ರಾಮ ಸಿಂಹ ಓಡಿತ್ತು ಪ್ರತಿದಿನ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನಗಳಿಗೆ ಸಿಕ್ಕಿ  ಹಲವಾರು ನಾಯಿಗಳು,ಕೋಳಿಗಳು,ಕುರಿಗಳು, ಜಾನುವಾರುಗಳು,ಸಾಯುವುದು ನಡದೇ ಇದೆ !!! ಅಲ್ಲ ಈ ರಸ್ತೆ/ವಾಹನಗಳಿಗೂ ಒಮ್ಮೊಮ್ಮೆ ಮಾಂಸ ತಿನ್ನುವ ಆಸೆ ಆಗಿ ಬಲಿ ತೆಗೆದುಕೂಳುತ್ತಲೇ ಇರುತ್ವೆ!!ಬಿಡದಿ ತಲುಪಿದ
ನಮಗೆ ಎದುರಾದದ್ದು  ವಾಹನ ಗಳ ವೇಗ ನಿಯಂತ್ರಿಸಲು ಹಾಕಿದ್ದ  ಈ ಬ್ಯಾರಿಕೇದುಗಳು!![ಚಿತ್ರ..೧೦]ನೀವು ಯಾವ ಊರಿಗೆ ಹೋಗಿ ಈ ಬ್ಯಾರಿಕೇದುಗಳು ಅಡ್ಡ ದಿಡ್ಡಿ ನಿಂತು ನಿಮ್ಮ ಪಯಣಕ್ಕೆ ಅಡ್ಡಿ ಉಂಟು ಮಾಡುತ್ತವೆ.ಇಂತಹ ಬ್ಯಾರಿಕೆದುಗಳಿಂದ ಅಪಘಾತ ಸಂಭವಿಸಿದ ಘಟನೆಗಳು ಬಹಳಷ್ಟಿವೆ !! ಆದರೂ ಇದಕ್ಕೆ ಪರ್ಯಾಯ ಇನ್ನೂ ಪೋಲಿಸ್ ಇಲಾಖೆ ಕಂಡು ಕೊಂಡಿಲ್ಲ.ಬಿಡದಿ ಯಲ್ಲಿ ಪ್ರಸಿದ್ದ  ಬಿಸಿಬಿಸಿ ತಟ್ಟೆ  ಇಡ್ಲೀ ಬೆಣ್ಣೆ ತಿಂದ ನಾವು [ಹೌದೂ ರೀ ಈ ಊರಿಗೆ ಬಂದ್ರೆ ನೀವು ಮಿಸ್ ಮಾಡಿಕೊಳ್ಳ ಬೇಡಿ ] ಮುಂದೆ ಹೊರಡಲು ಕಾಣಿಸಿತು[ಚಿತ್ರ ..೧೧]
ಈ ಕಾರು ಹಿಂಬದಿಯ ಗಾಜಿನ ಮೇಲೆ ಮುದ್ದು ಗಣಪ ಛತ್ರಿ ಹಿಡಿದು ಮೂಷಿಕ ದೊಡನೆ ವಾಕಿಂಗ್ ಹೊರಟಿದ್ದ!!ಇಲಿಯ ವೇಗಕ್ಕೆ ಗಣಪ ಓಡುವನೇ ಅಂತ ಅನ್ನಿಸಿ ನಗು ಬಂತು.ಅನತಿ ದೂರದಲ್ಲಿ[ಚಿತ್ರ..೧೨]
  ಒಂದು ಮರಳಿನ ಲಾರಿ ಹಿಂದಿನ ವಾಹನ ಸವಾರರ ಕಣ್ಣಿಗೆ ಮರಳನ್ನು ಯೆರಚುತ್ತಾ ಸಾಗಿತ್ತು!!!ಅಲ್ಲ ಈ ಹೆದ್ದಾರಿಯಲ್ಲಿ ಹೀಗೆ ಮರಳಿನ ಕಣಗಳು ಹಿಂದಿನ ದ್ವಿಚಕ್ರ ಸವಾರರ ಕಣ್ಣಿಗೆ ಬಿದ್ದು ಕಣ್ಣು ಕಳೆದುಕೊಳ್ಳುವ ಸಂಭವದ  ಬಗ್ಗೆ ಯಾರಿಗೂ ಚಿಂತೆ ಇರಲಿಲ್ಲ ಇದು ಸಹ ಹೆದ್ದಾರಿ ಮಹಿಮೆ ಸ್ವಾಮೀ!!!.ಹಾಗು ಹೀಗೂ ಬೆಂಗಳೂರು ಹತ್ತಿರ ವಾಗುತ್ತಿತ್ತು ವಾಹನಗಳ ದಟ್ಟನೆ ರಸ್ತೆಯಲ್ಲಿ ಹೆಚ್ಚಾಗುತ್ತಿತ್ತು[ಚಿತ್ರ ..೧೩]
.ಮುಂದೆ ಒಬ್ಬ ಬೈಕ್  ಸವಾರ ವಾಹನಗಳ  ಮಧ್ಯೆ ಸಿಲುಕಿ ಚಕ್ರವ್ಯುಹದೊಳಗೆ ಸಿಲುಕಿದ ಅಭಿಮನ್ಯುವಿನಂತೆ  ಪರದಾಟ ನಡೆಸಿದ್ದ!!ವಾಹನಗಳಿಂದ ಹೊಮ್ಮಿಬರುತ್ತಿದ್ದ ಹೊಗೇ ಅವನನ್ನು ಆವರಿಸಿ  ಬೆಂಗಳೂರಿನ ಟ್ರಾಫಿಕ್ ದರ್ಶನ ಮಾಡಿಸಿತ್ತು.ಅಷ್ಟರಲ್ಲಿ ನಾವು ಕುಂಬಳಗೊಡು ದಾಟಿ ಕೆಂಗೇರಿ ಬಳಿಯ ನೈಸ್  ರಸ್ತೆಗೇಟಿನ ಬಳಿ ಬಂದಿದ್ದೆವು.ನೈಸ್ ರಸ್ತೆಯಲ್ಲಿ ಶುಲ್ಕ ತೆತ್ತು ಹೊರಟ  ನಮಗೆ ಪಯಣ ಸುಗಮವಾಗಿ ಸಾಗಿತ್ತು.[ಚಿತ್ರ ..೧೪]
ಶಿಸ್ತು ಬದ್ದ ಲೈನಿನಲ್ಲಿ ವಾಹನಗಳು ಶಿಸ್ತಾಗಿ ಸಾಗಿದ್ದವು!!ಮುಂದೆ ಹೋದ ನಮಗೆ ರಸ್ತೆಗೆ
ಅಡ್ಡಲಾಗಿ ಸರ್ರನೆ ವಾಹನ ನಿಲ್ಲಿಸಿ ತಳ್ಳುವ ಬ್ಯಾರಿಕೆಡನ್ನು ಅಡ್ಡ ಹಾಕಿ ದನ ಕಾರುಗಳನ್ನು ರಸ್ತೆ ದಾಟಲು ಒಬ್ಬ ವ್ಯಕ್ತಿ  ಅನುವು ಮಾಡಿ ಕೊಟ್ಟ !! [ಚಿತ್ರ ..೧೫] ಖಂಡಿತ ಇದು ನಮ್ಮ ಮಾಜಿ ಪ್ರಧಾನಿ ದೇವೇಗೌಡರ ಎಫೆಕ್ಟ್ ಇರಬೇಕು ಅನ್ನಿಸಿತು.ನಂತರ ಮುಂದೆ ಚಲಿಸಿದ ನಮಗೆ  ಒಂದು ಲಾರಿ ನಿಧಾನವಾಗಿ ಸಾಗುತ್ತ ಇದ್ದದ್ದು ಕಣ್ಣಿಗೆ ಬಿತ್ತು .[ಚಿತ್ರ..೧೬]
ಸ್ವಾಮೀ ಯಾಕೆ ಹೇಳ್ತೀರಿ!!! ಲಾರಿ ದಾಟಿ ಮುಂದೆ ಹೋಗೋ ಅಷ್ಟರಲ್ಲಿ ಎಲ್ಲರೂ ಕೆಮ್ಮಿದ್ದೆ ಕೆಮ್ಮಿದ್ದು  ಅಷ್ಟರ ಮಟ್ಟಿಗೆ ಹೊಗೇ ಕಾರುತ್ತ  ಈ ಲಾರಿ ಸಾಗಿತ್ತು!!!!.ಪಾಪ ಬೆಂಗಳೂರಿನ ಜನತೆಗೆ ಇಂತಹ ಎಷ್ಟು ಸಾವಿರ ವಾಹನಗಳು ಹೀಗೆ ಹೊಗೆಕುಡಿಸಿ ನರಳಾಟ ಆಡಿಸುತ್ತವೆಯೋ  ಅಂತ ಅನ್ನಿಸಿ ಸಂಕಟವಾದರೂ!!  ಇದೂ ಒಂತರ ಹೈ ಟೆಕ್ ಜೀವನದ ಒಂದು ಭಾಗ ಅಂತ ಸಮಾಧಾನ ಪಡೆದೆ.ನೈಸ್ ರಸ್ತೆ ಇಂದ ಬನ್ನೇರುಘಟ್ಟ  ರಸ್ತೆ ತಲುಪಿ ಹುಳಿಮಾವು ಪ್ರವೇಶಿಸುತ್ತಿದಂತೆ  ಮುಂದೆ ಒಂದು ನೀರಿನ ಟ್ಯಾಂಕರ್ ರಸ್ತೆ ಯುದ್ದಕ್ಕೂ ನೀರು ಸುರಿಸಿಕೊಂಡು ತೆವಳುತ್ತಿತ್ತು!![ಚಿತ್ರ ..೧೭]
"ನೀರು ಅಮೂಲ್ಯ ಅದನ್ನು ಪೋಲು ಮಾಡಬೇಡಿ" ಎನ್ನುವ ಘೋಷಣೆ ಕಣ್ಣ ಮುಂದೆ ಅಣಕಿಸಿ ನಕ್ಕಿತ್ತು.ಒಟ್ಟಿನಲ್ಲಿ ದಾರಿಯುದ್ದಕ್ಕೂ ನಾನು ಕಂಡ ದೃಶ್ಯಗಳು ಹೇಳಿದ್ದು ಇಷ್ಟೇ ,ನಮ್ಮ ದೇಶದಲ್ಲಿ ಯಾರಿಗೂ ಯಾರು ಕೇರ್  ಮಾಡಲ್ಲ,ಯಾವುದೇ ನಿಯಮಗಳ ಹಂಗು ನಮಗೆ ಬೇಕಿಲ್ಲಾ!! ನಮಗೆ ನಮ್ಮದೇ ಕಾನೂನು.ಅಂತ ಅನ್ನಿಸಿತು ಕಾರಿನೊಳಗೆ  ಎಫ್ ಎಂ ರೇಡಿಯೋ ದಲ್ಲಿ ''ನೋಡಿ ಸ್ವಾಮೀ ನಾವಿರೋದೆ ಹೀಗೆ "ಅಂತ  ಹಾಡು ಬಂದಿತ್ತು..ನಾನು ತಲುಪಬೇಕಾದ ಜಾಗ ಬಂದು ಬೆಂಗಳೂರಿನ ಜನಸಾಗರದಲ್ಲಿ ಲೀನವಾಗಿ ಹೋದೆನು!!!ನನ್ನ ಆ ದಿನದ ಈ ಯಾನದ ನೆನಪು ನಿಮಗಾಗಿ ತಂದಿದ್ದೇನೆ . ಓದಿ ಇಷ್ಟ ಆದ್ರೆ ನನಗೆ ತಿಳಿಸಿ..ನಮಸ್ಕಾರ .

Sunday, April 25, 2010

ಮೈಸೂರು ಬೆಂಗಳೂರು ಪಯಣದ ಹಾದಿಯಲ್ಲಿ !!!ನೋಡಿಸ್ವಾಮಿ ನಾವಿರೋದೆ ಹೀಗೆ!!!ಭಾಗ -೦೧











ಬ್ಲಾಗಿನ ಬರಹಗಳ ಹುಚ್ಚು ಹತ್ತಿದ ನನಗೆ ನನ್ನ ಸುತ್ತಲಿನ ಪ್ರಪಂಚ ನೋಡುವ ರೀತಿಯೇ ಬದಲಾಗಿ ಹೋಗಿದೆ. ನೋಡಿದ್ದನ್ನು ನಿಮಗೆ ತಲುಪಿಸಬೇಕೆಂಬ ಹಂಬಲ ಹೆಚ್ಚಾಗಿ ನನ್ನ ತಲೆಗೆ ಹಾಗು ಕ್ಯಾಮರಾಗೆ ಬಿಡುವಿಲ್ಲದ ಕೆಲಸ!!! ಬಹಳ ದಿನಗಳಿಂದ ನಾವು ಓಡಾಡುವ ಹೆದ್ದಾರಿಯಲ್ಲಿನ ವಾಹನ ಚಾಲಕರ ಬವಣೆ ,ಅಡಿಗಡಿಗೆ ಚಾಲನೆ ಮಾಡುವ ವಾಹನ ಚಾಲಕರು ಎದುರಿಸುವ ಸಮಸ್ಯೆ ಗಳು, ಹೆದ್ದಾರಿಯಲ್ಲಿನ ಅನಿರೀಕ್ಷಿತ ಘಟನೆಗಳು , ಇವುಗಳಬಗ್ಗೆ ಲೇಖನ ಬರೆಯಬೇಕೆಂಬ ಹಂಬಲ ಹಲವುಭಾರಿ ಅನ್ನಿಸಿತ್ತು.ಅದಕ್ಕೆ ಕಾಲ ಕೂದಿಬಂದು ಈ ಲೇಖನ ರೂಪುಗೊಂಡಿದೆ.ಮೊನ್ನೆ ಶನಿವಾರ ೨೪/೦೪/೨೦೧೦ ರಂದು ಕಾರ್ಯನಿಮಿತ್ತ  ಕುಟುಂಬ ದೊಡನೆ ಕಾರಿನಲ್ಲಿ  ಮೈಸೂರಿನಿಂದ ಬೆಂಗಳೂರಿಗೆ  ಪಯಣಶುರುವಾಯಿತು ,ಕಾರಿನ ಚಾಲಕ ಮಿತ ಭಾಷಿ !! ಸುಮ್ಮನೆ ಎಫ್.ಎಂ ನಲ್ಲಿ  ಹಾಡು ಹಾಕಿಕೊಂಡು ಚಾಲನೆ ಶುರುಮಾಡಿದ ,  ಹಾಗೆ  ಮನೆಯವರಜೊತೆ  ಮಾತಾಡುತ್ತಾ  ಮುಂದೆಸಾಗಿದ್ದ ನಾನು ಸ್ವಲ್ಪ ಸಮಯ ಕಳೆದು ಹಿಂದೆ ತಿರುಗಿ ನೋಡಿದರೆ ಎಲ್ಲ ನಿದ್ರಾದೇವಿಯ ವಶವಾಗಿದ್ದರು!!.ಇನ್ನೇನು ಮಾಡ್ಲಿ ಅಂತ ಕ್ಯಾಮರ ತೆಗೆದು ಕ್ಲಿಕ್ಕಿಸಲು ಸಿದ್ದತೆ ಮಾಡಿದೆ ,ಇಲ್ಲೇನು ಸಿಗ್ತದೆ ಅಂತ ಕ್ಯಾಮರ ತೆಗಿತೀರಿ ಸಾರ್ !!ಬರಿ ದರಿದ್ರ ಬಸ್ಸು,ಲಾರಿ  ಕಾರೆ ಸಿಗ್ತವೆ !!!ಅಂತ ಡ್ರೈವರ್ ಹೇಳಿ ನನ್ನನ್ನು ಚಕಿತ ಗೊಳಿಸಿದ .ನೋಡೋಣ ತಡೀರಿ ಅಂತ ಹೇಳಿ ಅಂತ ನನ್ನ ಕ್ಯಾಮರ ಕ್ಲಿಕ್ಕಿಸಲು  ತಯಾರಿ ಮಾಡಿದೆ.ಏನೆ ಹೇಳಿ , ಚಲಿಸುವ ಕಾರಿನಲ್ಲಿ  ಸುಮಾರು ಅರವತ್ತರಿಂದ ಎಂಭತ್ತು ಕಿ.ಮಿ. ವೇಗದಲ್ಲಿ ಕ್ಯಾಮರ ಕ್ಲಿಕ್ಕಿಸುವುದು ಸವಾಲೇ ಸರಿ.!!!! ನಿಮಗೆ ಏನೂ ಸ್ವಾತಂತ್ರ ಇರಲ್ಲ ಕ್ಲಿಕ್ಕಿಸಿದ ಎಲ್ಲ ಚಿತ್ರಗಳೂ ಚೆನ್ನಾಗಿಬರಲ್ಲಾ!!! ಆದರೂ ನನ್ನ ಹಠ ಬಿಡದೆ ಮುಂದುವರೆಸಿದೆ.ನಂತರ ನೋಡಿದ್ರೆ ಆಶ್ಚರ್ಯಕರ ಸಂಗತಿಗಳು ಸೆರೆಯಾಗಿ ಹರಡಿಕೊಂಡವು!!!.
ಮುಂಜಾನೆ  ನಿರ್ಜನ ವಾಗಿದ್ದ ರಸ್ತೆಯಲ್ಲಿ ಜನಜೀವನ ನಿಧಾನವಾಗಿ ತೆರೆದುಕೊಳ್ಳುತಿತ್ತು!!.ರಸ್ತೆಯ ಅಕ್ಕಪಕ್ಕದ ಹಳ್ಳಿಯ ಜನ ರಸ್ತೆಯಲ್ಲಿ ಅಡ್ಡಾಡಿ ದಿನದ ಪ್ರಾರಂಭ ಮಾಡುತ್ತಿದ್ದರು.[ಚಿತ್ರ -೦೨].ಬಸ್ಸೂ, ಲಾರಿ,ಬೈಕು ಇತ್ಯಾದಿ ಬೆಳಗಿನ ಹುಮ್ಮಸ್ಸಿನಲ್ಲಿ ಸಾಗಿದ್ದವು.ಜನಗಳು ಇದಕ್ಕೂ ನಮಗೂ ಸಂಭಂದ ಇಲ್ಲವೆಂದು ತಮ್ಮ ಲೋಕದಲ್ಲಿ ಜೀವನ ಶುರುಮಾಡಿದ್ದರು.ಮುಂಜಾವಿನ ಭರಾಟೆಯಲ್ಲಿ ಹಕ್ಕಿಗಳ ಕಲರವ  ಮರೆಯಾಗಿ ದಿನ ಪ್ರಾರಂಭವಾಗಿತ್ತು.ರೈತರು  ತಮ್ಮ ಎತ್ತಿನ ಗಾಡಿ ಹಾಗುಎತ್ತು ಗಳೊಡನೆ  ಹೆದ್ದಾರಿಯಲ್ಲಿ ಸಾಗುತ್ತ ತಮ್ಮ ಹೊಲಗಳ ಕಡೆಗೆ ಸಾಗಿದ್ದರು.[ಚಿತ್ರ-೦೩]. !....ಹಾಗೆ ಸಾಗಿದ್ದ ನಮಗೆ ಮದ್ದೂರು ಬಂದಿದ್ದೆ ಗೊತ್ತಾಗಲಿಲ್ಲ !ಮದ್ದೂರಿನಲ್ಲಿ ದನಗಳ ಜಾತ್ರೆ ಇತ್ತೂ ಅಂತ ಕಾಣುತ್ತೆ ರಸ್ತೆಯ ಅಕ್ಕ ಪಕ್ಕದಲ್ಲಿ ದನಗಳನ್ನು ಸಾಲಾಗಿ ಕಟ್ಟಿಹಾಕಿದ್ದರು.ದನಗಳ ಮಾರುವವರ ಹಾಗು ಕೊಳ್ಳುವವರ ಮಧ್ಯೆ ವ್ಯವಹಾರ ಜಾರಿಯಲ್ಲಿತ್ತು.ಮಾರಾಟವಾದ ಕೆಲವು ದನಗಳು ಮಿನಿ ಲಾರಿಯೇರಿ ಪಯಣ ಬೆಳೆಸಲು ಸಿದ್ದವಾಗಿದ್ದವು.[ಚಿತ್ರ-೦೪]ದನಗಳಿಗೆ ತಂದಿದ್ದ ಒಣ ಹುಲ್ಲು ರಸ್ತೆಯಲ್ಲಿ ಚೆಲ್ಲಾಡಿತ್ತು.ರೈತನ ಬಾಳಿನ
ಒಂದು ಅಧ್ಯಾಯ ರಸ್ತೆಯಲ್ಲಿ ಅನಾವರಣ ಗೊಂಡು, ರಸ್ತೆಗಳುಮನುಷ್ಯನ ಜೀವನದಲ್ಲಿ ಯಾವ ಪಾತ್ರ  ವಹಿಸುತ್ತಿವೆ ಎಂಬ ವಿಚಾರ ಗೋಚರವಾಗಿ ಅಚ್ಚರಿಯಾಯಿತು.

Sunday, April 18, 2010

ಖಾಜಿ ರಂಗ ನ್ಯಾಷನಲ್ ಪಾರ್ಕ್ ಅಡವಿಯಲ್ಲಿ ಹುಲಿ ಮಾಡಿದ ಅನಾಹುತ !!! ಸತ್ಯ ದರ್ಶನ !!

ಭಾರತದ ಖಾಜಿರನ್ಗ ಅಭಯಾರಣ್ಯ ದಲ್ಲಿ ದಿನಾಂಕ ೧೯ /೦೫/೨೦೦೪ ರಂದು ಒಂದು ಹೆಬ್ಬುಲಿ ಆನೆಯ ಮಾವುತನ ಮೇಲರಗಿ ಮಾಡಿದ ಅನಾಹುತದ ದರ್ಶನ ಇಲ್ಲಿದೆ. ಕಾಡಿನಲ್ಲಿ ಹುಲಿ ಹೇಗೆ ಚಾಣಾಕ್ಷ ತಾಣದಿಂದ ತನಗೆ ಒದಗಿಬರುವ ಅಪಾಯವನ್ನು ಎದುರಿಸುತ್ತದೆ ಎಂಬ ಬಗ್ಗೆ ಈ ವೀಡಿಯೊ ಚಿತ್ರಣ ನೀಡಿದೆ. ಕ್ಷಣಾರ್ಧದಲ್ಲಿ ಮೇಲೆರಗಿ ಆನೆಯ ಮೇಲೆ ಕುಳಿತಿದ್ದ ಮಾವುತನ ಮೇಲೆ ನಡೆಸಿದ ಹಲ್ಲೆ ನಿಜಕ್ಕೂ ಭಯಂಕರವಾಗಿದೆ. ಹುಲಿ ಎಷ್ಟಾದರೂ ಹುಲಿಯೇ ಅದಕ್ಕೆ ಧೈರ್ಯವನ್ತರನ್ನು ಹುಲಿಗೆ ಹೋಲಿಸುತ್ತಾರೆ ಆಲ್ವಾ!! ಬನ್ನಿ ನೀವು ನೋಡಿ ಈ ಹುಲಿಯ ಪ್ರತಾಪ!!

Wednesday, April 14, 2010

ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ರಸ್ತೆ !!!!! ಇದಕ್ಕೆ ಸರಿಸಾಟಿ ಯಾವುದೂ ಇಲ್ಲಾ !!!

ಮಾಚಿಕೊಪ್ಪ ಬ್ಲಾಗಿನ ಗೆಳೆಯ ,ಸುಬ್ರಮಣ್ಯ ಮಾಚಿ ಕೊಪ್ಪ ಇತ್ತೀಚಿಗೆ ಈ ರಸ್ತೆಯ ಬಗ್ಗೆ ಒಂದು ಸುಂದರ ಚಿತ್ರ ಲೇಖನ ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದರು.ನನಗೆ ಆಶ್ಚರ್ಯ !!! ಅಲ್ಲ ಈ ಯಪ್ಪಾ ನಾನು ಹೇಳ್ಬೇಕಾಗಿದ್ದ ರಸ್ತೆ ಬಗ್ಗೆ ಬರ್ದೇ ಬಿಟ್ರಲ್ಲಾ ಅಂತ ಅನ್ಕೊಂಡೆ.ಆದರೂ ಅದನ್ನೇ ಇನ್ನೊಂತರ ಹೇಳಬೇಕೂ ಅಂತ ಭಂಡ ಧೈರ್ಯ ಮಾಡಿ ಯೂ ಟ್ಯೂಬಿನಿಂದ ಕಾಪಿ ಮಾಡಿ ಈ ಐದು ಮುಕ್ಕಾಲು ನಿಮಿಷದ ವೀಡಿಯೊ ಹಾಕಿದ್ದೇನೆ.ನಿಜಕ್ಕೂ ಅದ್ಭುತವಾದ ಮಾಹಿತಿ ಈ ರಸ್ತೆಯ ಬಗ್ಗೆ ಇದೆ. ರಸ್ತೆಯ ಭೀಕರತೆ ,ಸೌಂದರ್ಯ ತುಂಬಿದ ನಿಸರ್ಗದ ಮಧ್ಯೆ ಚಲಿಸುವ ವಾಹನಗಳು ಅಡಿಗಡಿಗೆ ಸಾವು ಬದುಕಿನ ಆಟಾ ಆಡುತ್ತಾ ಹೋಗಬೇಕಾದ ಅನಿವಾರ್ಯತೆ. ಸತ್ತ ಜನರ ಬಗ್ಗೆ ಸಾಕ್ಷಿನುಡಿಯಲು ನಿಂತಿರುವ ಶಿಲುಬೆಗಳು ಹಲವಾರು ನಿಘೂಡ ಕಥೆಗಳನ್ನು ಒಡಲಲ್ಲಿ ಇಟ್ಟುಕೊಂಡು ಮೂಕವಾಗಿ ನಿಂತಿರುವ ರೀತಿ , ವಿಸ್ಮಯ ಗೊಳಿಸಿ ಎದೆ ಜ್ಹಲ್ ಎನ್ನಿಸುವ ಅನುಭವ ನೀಡುತ್ತದೆ.ಬನ್ನಿ ಒಮ್ಮೆ ನೋಡಿ ಅನುಭವ ಪಡೆಯುವ.!!!!!!!!!!!

Tuesday, April 13, 2010

ಶಾಲೆಯ ಮುಖ ನೋಡದ ಈ ಪೋರ ಜಗತ್ತಿನ ಹಲವು ಭಾಷೆ ಮಾತಾಡುತ್ತಾನೆ!!~!!!ಅಂತರ್ಜಾಲದಲ್ಲಿ ಜಗತ್ತಿನ ಜನರ ಮನಸೆಲೆದಿದ್ದಾನೆ!!!

ಇವನು ರವಿ ಉತ್ತರ ಭಾರತದ ಹುಡುಗ ತನ್ನ ಊರಿನಲ್ಲಿ ನವಿಲುಗರಿಯ ಬೀಸಣಿಗೆ ಮಾರುತ್ತಾನೆ.ಯಾವ ದೇಶದ ಜನ ಬಂದರೂ ಅವರ ಭಾಷೆಯಲ್ಲಿ ಮಾತನಾಡಿ ಅವರಿಗೆ ತನ್ನ ಬೀಸಣಿಗೆ ಮಾರುತ್ತಾನೆ.ಯಾವನನ್ನು ಅಂತರ್ಜಾಲ ಸಂಸ್ಥೆ ಯೂ ಟ್ಯೂಬ್
ತನ್ನ ಜಾಲದಲ್ಲಿ ಇವನ ಬಗ್ಗೆ ಹೆಮ್ಮಯಿಂದ ವೀಡಿಯೊ ಸಂದರ್ಶನ ಮಾಡಿ ಪ್ರಕಟಸಿದೆ. ಬನ್ನಿ ಇವನ ಪ್ರತಿಭೆ ನೋಡೋಣ.ಇವನನ್ನು ಅಭಿನಂದಿಸೋಣ!!!

Monday, April 12, 2010

ಸಣ್ಣ ಮನಸ್ಸಿನ ದೊಡ್ಡ ಮನುಷ್ಯರು !!! ಇವರಿಗೆ ಬುದ್ದಿ ಹೇಳೋರು ಯಾರು???

 
 
 
Posted by Picasa
ಅಂದು ಹಾಗೆ ನನ್ನ ಕೆಲಸದ ನಿಮಿತ್ತ ಹೊರಟಿದ್ದೆ , ಮೈಸೂರಿನ ಸರಸ್ವತಿಪುರಂ ದಾಟಿ ನನ್ನ ಆಕ್ಟಿವ ಸ್ಕೂಟರ್ ರಾಮಸ್ವಾಮಿ ವೃತ್ತದ ಕಡೆ ಹೊರಟಿತ್ತು !!! ಮುಂದೆ ಒಂದು ಬಿಳಿಬಣ್ಣ ದ ಮಾರುತಿ ಹೋಗುತ್ತಿತ್ತು ಅದರೊಳಗಿಂದ ಒಂದು ಕೈ ದಾರಿ ಉದ್ದಕ್ಕೂ ಸಿಗರೇಟಿನ ಕಿಡಿ ಹಾಗು ಭೂದಿ ಹೊಗೆ ಹರಡಿಕೊಂಡು ಚಲಿಸಿತ್ತು. ಸ್ಕೂಟರಿನಲ್ಲಿದ್ದ ನನ್ನ ಕಣ್ಣಿಗೆ ಕಿಡಿ ಬಂದು ತಗುಲಿ ಸ್ವಲ್ಪ ಉರಿಯಿತು , ಹಾಗೆ ಮುಂದೆ ರಾಮ ಸ್ವಾಮೀ ಸರ್ಕಲ್ ಸಿಗ್ನಲ್ ಹತ್ತಿರ ಈ ಪುಣ್ಯಾತ್ಮನಿಗೆ ಸ್ವಲ್ಪ ಪೂಜೆ ಮಾಡಿದೆ ಅನ್ನಿ !! ಆದ್ರೆ ಆ ಪುಣ್ಯಾತ್ಮನಿಗೆ ಏನು ಅನ್ನಿಸಿದ ಹಾಗೆ ಕಾಣಲಿಲ್ಲ !!! ಹಾಗೆ ನನ್ನ ಮೊಬೈಲ್ ನಿಂದ ಅವನ ಕೈ ಮಾಡಿದ ಕೆಲಸ ಸೆರೆಯಾಗಿತ್ತು . ಇಂತಹ ಸಣ್ಣ ಮನಸ್ಸಿನ ದೊಡ್ಡ ಮನುಷ್ಯರಿಗೆ ತಮ್ಮ ಇಂತಹ ಕ್ರಿಯೆ ಯಿಂದ ಅದರಲ್ಲೂ ವಾಹನ ಚಾಲನೆ ಮಾಡುವಾಗ ಹಿಂದಿನ ದ್ವಿಚಕ್ರ ಸವಾರರಿಗೆ ,ಪಾದ ಚಾರಿಗಳಿಗೆ ಸಿಗರೇಟಿನ ಕಿಡಿ, ಬೂದಿ ಹಾರಿ ಆಗುವ ಹಾನಿಯ ಅರಿವು ಇಲ್ಲದೆ ಇರುವುದು ಶೋಚನೀಯ .ಕೆಲವೊಮ್ಮೆ ವೇಗವಾಗಿ ಬರುವ ಇಂತಹ ಕಿಡಿಗಳು ಕಣ್ಣನ್ನು ಹಾಳು ಮಾಡಬಹುದು ಆದ್ದರಿಂದ ಬ್ಲಾಗಿಗರೇ ನೀವು ಧೂಮಪಾನಿಗಳಾಗಿದ್ದರೆ ದಯಮಾಡಿ ಇವನಂತೆ ದಾರಿ ಉದ್ದಕ್ಕೂ ಹೀಗೆ ಸಿಗರೇಟಿನ ಕಿಡಿ,ಭೂದಿ ಉದುರಿಸಿಕೊಂಡು ಹೋಗಿ ಬೇರೆಯವರ ಕಣ್ಣು ಕೀಳದಿರಿ !!!ಏನಂತಿರಾ ಸ್ವಾಮೀ???