Monday, December 27, 2010

ಕೈಮರದ ಹಾದಿ !! ಕಾನನದ ಮಡಿಲಲ್ಲಿ ಹೀಗೂ ಉಂಟೆ !!!

ಓಡುತಿರುವ  ಜಿಂಕೆಗಳು


ಕಳೆದ ಸಂಚಿಕೆಯಲ್ಲಿ  ಡಿ.ಬಿ.ಕುಪ್ಪೆ ಬಗ್ಗೆ [ಎರಡೂ ರಾಜ್ಯಗಳ ನಡುವೆ ತೇಲಾಡಿದ ] ಬರೆದವನೇ , ಮತ್ತೆ ಕಾಡಿಗೆ ಎಸ್ಕೇಪ್ ಆಗಿದ್ದೆ.ಹೊಸ ಹುರುಪು ಉತ್ಸಾಹ ತುಂಬಿಕೊಂಡು ನಿಮ್ಮ ಮುಂದೆ ಹಾಜರಾಗಿದ್ದೇನೆ.ಬನ್ನಿ ಕೈಮರ ಎಂಬ ಕಾನನದ ಪ್ರದೇಶಕ್ಕೆ ಹೋಗೋಣ.


ಕೈಮರ  ಬಂಗಲೆ


ಈ ಪ್ರದೇಶ ಯಾಕೋ ಕಾಣೆ ಪ್ರತೀಬಾರಿಯೂ ನಮಗೆ  ವಿಚಿತ್ರ ಅನುಭವ ನೀಡಿದೆ.ಸುಮಾರು ಮೂರು ಬಾರಿ ಹೋದಾಗಲೂ ನಮ್ಮ ಕಾರು ಕೆಟ್ಟಿರುವುದು ವಿಶೇಷ ಹಾಗು ವಿಚಿತ್ರ




ಕೈಮರ ಬಂಗಲೆಯ ಒಂದು ನೋಟ



.ಕೈಮರ ಎಂಬ ಜಾಗ ದಲ್ಲಿ 1932 ರಲ್ಲಿ ನಿರ್ಮಿತವಾದ ಒಂದು ಹಳೆಯ ಬಂಗಲೆ ಇದ್ದು ಇದರಲ್ಲಿ ಹಿಂದೆ ಮಹಾರಾಜರು /ಆಂಗ್ಲ ಅಧಿಕಾರಿಗಳು  ಬೇಟೆಯಾಡಲು ಬಂದಾಗ  ಉಳಿಯುತ್ತಿದ್ದರೆಂದು ತಿಳಿದುಬಂತು.ದಟ್ಟ ಕಾನನದಲ್ಲಿ ಅಡಗಿ ಕುಳಿತಿರುವ ಇದು ಇಂದು ಒಂದು " anti poaching camp '' ಆಗಿದ್ದು ಕೇರಳ ರಾಜ್ಯದ ಗಡಿ ಇಲ್ಲಿಂದ ಸುಮಾರು ಇಪ್ಪತ್ತು ಅಡಿ ಅಷ್ಟೇ  ಇದಕ್ಕೆ ಪೂರಕವಾಗಿ ಬಹಳ ಹಿಂದೆ ಗಡಿ ಗುರುತಿಸಿ ನೆಟ್ಟ ಕಲ್ಲಿದ್ದು




ಎರಡು ಪ್ರಾಂತಗಳ ಗುರುತಿಸಲು  ಗಡಿ ಕಲ್ಲು


ಅದರಲ್ಲಿ ಕನ್ನಡ ಹಾಗು ಆಂಗ್ಲ ಭಾಷೆಯಲ್ಲಿ ವಿವರಣೆ ನೀಡಲಾಗಿದೆ. ಅದರಲ್ಲಿ ಕನ್ನಡದಲ್ಲಿ  "ಮೈಸೂರು ಹಾಗು ಮಲಬಾರು ಸೀಮೆ ಗಡಿ "ಎಂದಿದ್ದರೆ , ಇಂಗ್ಲೀಶ್ ನಲ್ಲಿ " boundary stone between mysore and malabaar " ಎಂದು ಬರೆಯಲಾಗಿದೆ. ಆದ್ರೆ ಅಚ್ಚರಿ ಎಂದರೆ ಇಲ್ಲಿ ಮಲೆಯಾಳಂ  ಭಾಷೆ ನಾಪತ್ತೆ!!!. ನಾವು ಸುಮ್ಮನೆ ಹಾಗೆ ನಡೆಯುತ್ತಾ  ಕೈಮರದಿಂದ ಈ ಗಡಿ ಗುರುತನ್ನು ದಾಟಿ ನಮಗೆ ಅರಿವಿಲ್ಲದೆ ಕೇರಳ ರಾಜ್ಯದ ಕಾಡಿಗೆ ಹೋಗಿದ್ದೆವು.ನಂತರ  ಸ್ವಲ್ಪ ದೂರ ಕ್ರಮಿಸಿ ವಾಪಸ್ಸು ಬಂದೆವು. ಈ ಪ್ರದೇಶದಲ್ಲಿ ಸುತ್ತ ಮುತ್ತ ಹಲವಾರು   "anti poaching camp"  ಅವುಗಳ ಹೆಸರು ವಿಚಿತ್ರವಾಗಿವೆ " ಕುದುರೆ ಸತ್ತ ಹಳ್ಳ ಕ್ಯಾಂಪು " "ಹತ್ತನೇ ಮೈಲಿ ಕ್ಯಾಂಪು" ಇತ್ಯಾದಿ .ಇನ್ನು ಇಲ್ಲಿಗೆ ಹೋಗಲು ಅಸಾಧ್ಯವಾದ ಕಾಡಿನ ದಾರಿ ಇದೆ. ಮೊದಲ ಬಾರಿ ಇಲ್ಲಿಗೆ ಬರುವಾಗ   ನಮ್ಮ ಜೀಪು ಕೆಟ್ಟು , ಹುಲಿಯ ಸನಿಹ  ಜೀಪಿನಲ್ಲಿ ಕುಳಿತು ಅನುಭವಿಸಿದ  ಅನುಭವದ ವಿವರ ಈಗಾಗಾಗಲೇ ನಿಮಗೆ ಹೇಳಿದ್ದೇನೆ. ಇನ್ನು ಎರಡನೇ ಸಾರಿಯದು ಮೊದಲನೆಯದಕ್ಕಿಂತ ಸ್ವಲ್ಪ ವಿಭಿನ್ನ . ನಮ್ಮ ಪ್ರತೀ ಭೇಟಿಯಲ್ಲೂ   ನಾವುಗಳು ಕೈಮರ ಜಾಗಕ್ಕೆ ಬರಲು ಪ್ರಯತ್ನಿಸುತ್ತೇವೆ. ಹಾಗೆ ಇಲ್ಲಿಗೆ  ಒಮ್ಮೆ ಬಂದಾಗ  ಇಲ್ಲಿ ಸಂಜೆಯಾಗಿತ್ತು.  .ಹಾಗೆ ಅಡ್ಡಾಡಿ ವಾಪಸ್ಸು ನಮ್ಮತಂಗುದಾಣ ತಲುಪಲು ಹೊರಟೆವು. ಕಾಡಿನ ಕತ್ತಲಲ್ಲಿ  ನಿಧಾನವಾಗಿ ದಾರಿಯಲ್ಲದ ದಾರಿಯಲ್ಲಿ ನಮ್ಮ ವಾಹನ ಚಲಿಸುತ್ತಿತ್ತು. ಸುಮಾರು ದೂರ ಕಾಡಿನ ಹಾದಿ ಸವೆಸಿದ್ದ ನಮಗೆ "ಬಾಲು, ಯಾಕೋ ಗಾಡಿ ಒಂದೇ ಕಡೆ ಎಳಿತಾ ಇದೆ "  ಅಂತಾ ವೇಣು ಕಾರನ್ನು ನಿಲ್ಲಿಸಿದಾಗಲೇ  ವಾಸ್ತವದ ಅರಿವಾಗಿದ್ದು. ನಮ್ಮ ಜೊತೆ ಇದ್ದ ಫಾರೆಸ್ಟ್ ಗಾರ್ಡ್  ಮೊದಲು ನಂತರ ನಾವು ಕಾರಿನಿಂದ ಇಳಿದು  ನೋಡಿದರೆ ಕಾರಿನ ಎಡಗಡೆ  ಮುಂದಿನ ಚಕ್ರ  ಅಪ್ಪಚ್ಚಿ ಯಾಗಿ ನಿಂತಿದೆ !!!,ಏನ್ಮಾಡೋದು  ಕಗ್ಗತ್ತಲೇ ಕಾಡಿನಲ್ಲಿ ನಿಧಾನವಾಗಿ ಸುತ್ತ ಮುತ್ತ ಪರೀಕ್ಷಿಸಿ ನಮ್ಮಲ್ಲಿದ್ದ  ಟಾರ್ಚ್ ಬೆಳಕನ್ನು ಹತ್ತಿಸಿ , ಕಾರಿನಲ್ಲಿದ್ದ ಸ್ಪೇರ್ ಚಕ್ರ ಬದಲಿಸಲು ಶುರು ಮಾಡಿದೆವು,ಮೂರು ಜನ ಚಕ್ರ ಬದಲಿಸುವ ಕಾರ್ಯ ಕೈಗೊಂಡರೆ ನಾನು ಹಾಗು ಫಾರೆಸ್ಟ್ ಗಾರ್ಡ್ ಇಬ್ಬರೂ  ಕಾವಲು ನಿಂತೆವು.ದಟ್ಟ ಕಾಡಿನಲ್ಲಿ  ನಮ್ಮ ವೀಕ್ಷಣೆ ಸಾಗಿತ್ತು. ನಮ್ಮ ಕಾರು ನಿಂತಿದ್ದ ಕಡೆ   ಕಗ್ಗತ್ತಲ ಕೋಟೆಯಂತೆ ಭಾರಿ ಮರಗಳಿದ್ದು  ಯಾವ ಮರದಲ್ಲಿ ಯಾವ ಪ್ರಾಣಿ ಇದೆಯೋ ಎನ್ನುವ ಯೋಚನೆ ಒಂದೆಡೆ, ಅಪ್ಪಿತಪ್ಪಿ ಮರದ  ಮೇಲಿಂದ  ಹೆಬ್ಬಾವು ಬಿದ್ದರೆ ಗತಿ ಏನು?? ಎನ್ನುವ , {ನಾವು ನಿಂತ ಜಾಗ ಆನೆ ಹುಲ್ಲಿನಿಂದ ಕೂಡಿದ್ದು ಪೊದೆಗಳಿಂದ ಸುತ್ತುವರೆದಿತ್ತು,ಅಪ್ಪಿತಪ್ಪಿ ಯಾವುದೇ ಪ್ರಾಣಿ ಅಲ್ಲಿ ಬಂದರೂ ನಮಗೆ ತಿಳಿಯುತ್ತಿರಲಿಲ್ಲಾ }ದೂರದಲ್ಲಿ ನಮ್ಮ ಟಾರ್ಚ್ ಬೆಳಕಿಗೆ ಹೊಳೆಯುವ  ಜಿಂಕೆಗಳ ಕಣ್ಣುಗಳು ಕಾಡಿಗೆ ಸೀರಿಯಲ್ ಲೈಟ್ ಹಾಕಿದಂತೆ ಅನೀಸಿದರೂ ಎಲ್ಲೋ ಮನದ ಮೂಲೆಯಲ್ಲಿ ಅಳುಕಿದ್ದರೂ ಸಹ ,ಯಾವುದೇ ಪ್ರಸಂಗ ಬಂದರೂ ಎದುರಿಸಲು ಸಿದ್ದವಾಗಿ ನಿಂತಿದ್ದೆ. ಸುಮಾರು ಅರ್ಧ ಘಂಟೆಗೂ ಮೀರಿ ಕಷ್ಟಪಟ್ಟು ಕಾರಿಗೆ ಜಾಕ್ ಹಾಕಿ ಮುಂದಿನ ಚಕ್ರ ಬದಲಿಸಿ  ಖುಷಿಯಿಂದ ಹೊರಟೆವು  ಸುಮಾರು ನೂರು ಅಡಿಗಳು ಮುಂದೆ ಹೋಗಿದ್ದೆವೂ ಅಷ್ಟೇ ಮತ್ತೆ ಕಾರು ಎಡಗಡೆ ಎಳೆಯಲು ಶುರು ಮಾಡಿತ್ತು!!!,ಒಳ್ಳೆ ರಾಮಾಯಣ ಆಯ್ತು ಅಂತಾ ಮತ್ತೆ ನಿಲ್ಲಿಸಿ ನೋಡಿದರೆ  ಎಡಗಡೆ ಹಿಂದಿನ ಚಕ್ರವೂ ಅಪ್ಪಚ್ಚಿಯಾಗಿತ್ತು.ಇದ್ದ ಒಂದು ಸ್ಪೇರ್ ಚಕ್ರ ಆಗಲೇ ಮುಂದೆ ಫಿಟ್ ಆಗಿಹೋಗಿತ್ತು , ಎರಡನೇ ಸ್ಪೇರ್ ಎಲ್ಲಿಂದ ತರೋದು,??ಅಂತಾ ಯೋಚಿಸಿದೆವು, ಈಗ ಏನು ಮಾಡಬೇಕೂ ಅಂತಾ ತಿಳಿಯದೆ ಬೆಪ್ಪಾಗಿ ನಿಂತೆವು. ರಾತ್ರಿವೇಳೆ ಕಾಡಿನಲ್ಲಿ ವಾಹನ ಇಲ್ಲೇ  ಬಿಟ್ಟು  ನಾವು ನಡೆದು ಹೋಗೋದೇ ?[  ಹೀಗೆ ಮಾಡಿದಲ್ಲಿ  ಆನೆಗಳ ಹೊಡೆತಕ್ಕೆ  ಸಿಕ್ಕಿ ಕಾರು ನಜ್ಜು ಗುಜ್ಜಾಗುವ ಸಂಭವ ಇತ್ತು ]ಅಥವಾ ನಾವು ಕಾರಿನ ಜೊತೆ ಇಲ್ಲೇ ಮಲಗುವುದೇ ? [ ಹೀಗಾಗಿದ್ದಲ್ಲಿ ಕೊರೆಯುವ ಚಳಿಯಲ್ಲಿ ನಮ್ಮ ಕಥೆ ಏನ್ ಆಗ್ತಿತ್ತೋ ಗೊತ್ತಿಲ್ಲಾ!! ]ಹೀಗೆ ಚರ್ಚೆಗಳ ಸರಮಾಲೆ, ಆಗಲೇ ರಾತ್ರಿ ಒಂಭತ್ತು ಸಮೀಪಿಸಿ ನಾವು ಏನಾದರೂ ಮಾಡಲೇ ಬೇಕಿತ್ತು.ಸರಿ ಆದದ್ದು ಆಗಲಿ ಅಂತಾ ಪಂಚರ್ ಆದ ಕಾರನ್ನು ನಿಧಾನವಾಗಿ ಚಲಾಯಿಸುತ್ತಾ ಸುಮಾರು ಎಂಟು ಕಿ.ಮಿ. ಕ್ರಮಿಸಿ  " ಬಳ್ಳೆ"   ಗೇಟಿನ ಹತ್ತಿರ ಬಂದು ಕಾರನ್ನು ನಿಲ್ಲಿಸಿದೇವು.



ನಮ್ಮನ್ನು ಎಲ್ಲ ಕಾಡಿಗೂ ಕರೆದುಕೊಂಡು ಹೋದ ಗೆಳೆಯ ಇವನು
 


ಅಲ್ಲೇ  ಇದ್ದ ಅರಣ್ಯ ಸಿಬ್ಬಂದಿ ಅವರ ಜೀಪಿನಲ್ಲಿ ನಮ್ಮನ್ನು ಡಿ.ಬಿ.ಕುಪ್ಪೆ  ಐ.ಬಿ.  ಗೆ ನಮ್ಮನ್ನು ತಲುಪಿಸಿದರು. ಮಾರನೆದಿನ ಒಂದು ಜೀಪನ್ನು ಬಾಡಿಗೆಗೆ ಪಡೆದು  ಬಂದು ನಮ್ಮ ಕಾರಿನ ಬಳಿ ಬಂದು ನೋಡಿದರೆ  ಹಿಂದಿನ ಚಕ್ರ ಅಪ್ಪಚ್ಚಿ ಯಾಗಿತ್ತು!!,ಅದರಲ್ಲಿ ನ ಟ್ಯೂಬು  ಪುಡಿ ,ಪುಡಿಯಾಗಿ ಹೋಗಿತ್ತು . ಸರಿ ಅಂತಾ ಚಕ್ರವನ್ನು ಜೀಪಿನಲ್ಲಿ ಹಾಕಿಕೊಂಡು ಕೇರಳದ  ಮಾನಂದವಾಡಿ ಕಡೆ ಹೊರಟೆವು !!!! ಕಾಡಿನ ಪಯಣದಲ್ಲಿ ಇಂತಹ ಹಲವಾರು ಘಟನೆಗಳು ಎದುರಾಗುವುದು ಸಾಮಾನ್ಯ ಇದನ್ನು ಎದುರಿಸಿ ಮುಂದೆ ಸಾಗಿದರೆ


ವನ ಸಿರಿಗಳು



ಕಾಡನ್ನು ನೋಡಲು ಸಾಧ್ಯ.  .............!!!!!!  ನಮ್ಮ ಕಾರಿಗೆ ಟೈರ್ ಬದಲಾಯಿಸಿ ನಂತರ ಮತ್ತೆ ಸಿಗುತ್ತೇನೆ ಓ.ಕೆ.             

Sunday, December 19, 2010

ಇತ್ತ ಕರ್ನಾಟಕ! ಅತ್ತ ಕೇರಳ!! ಎರಡು ರಾಜ್ಯಗಳನಡುವೆ ತೇಲುತ್ತಾ ನಾವು !!!ಡಿ.ಬಿ. ಕುಪ್ಪೆ ಮಹಿಮೆ !!!

ಬಾಲು ಬನ್ನಿ ಡಿ.ಬಿ. ಕುಪ್ಪೆಗೆ ಹೋಗಬೇಕಂತೆ ಅಂತಾ ವೇಣು ಕರೆದಾಗನೆನಪಿನ ಲೋಕದಿಂದ ಜಾರಿ ವಾಸ್ತವಕ್ಕೆ ಬಂದೆ 

" ಬಳ್ಳೆ"

  ಕ್ಯಾಂಪ್ ಬಿಟ್ಟು ಡಿ.ಬಿ.ಕುಪ್ಪೆ ಯಲ್ಲಿರುವ ಐ.ಬಿ.ಯಲ್ಲಿ  ಸಾಮಾನ್ಯ ವಾಗಿ ನಮಗೆ ವಾಸ್ತವ್ಯಕ್ಕೆ  ನೀಡಲಾಗುತ್ತದೆ.ಹೊರಡಲು ನಮ್ಮಲಗ್ಗೇಜುಗಳನ್ನು ಕಾರಿನಲ್ಲಿ ತುಂಬಿಸಿ ಹೊರಡಲು ಅನುವಾದೆವು. ಅಡಿಗೆ ಮನೆಯಲ್ಲಿ ಆನೆಗಳಿಗೆ ಮುದ್ದೆ ತಯಾರಿಸುವ   ತಯಾರಿ ನಡೆದಿತ್ತು ಇನ್ನೂ ಊಟ ರೆಡಿ ಇಲ್ವಾ ಅನ್ನೋತರಹ  ಒಂದು ಸಾಕಿದ ಆನೆ ಅಡಿಗೆ ಮನೆ ಹತ್ತಿರ ಬಂದು ನಿಂತಿತ್ತು !!    ಅತ್ತ ಅಡಿಗೆ ಮನೆಯಲ್ಲಿ ಆನೆಗೆ ಅಡಿಗೆ ತಯಾರಿ ನಡೆದಿತ್ತು.                                                                                                                                                                                                                                                                                                                                                                                                                   
ಏನಪ್ಪಾ  ಅಡಿಗೆ ಆಗಿಲ್ವಾ

ಅಡಿಗೆ ಮನೆ

                                                                                                                              ಇನ್ನೇನು ನಮ್ಮ  ಕಾರು ಹೊರಡ ಬೇಕು ಎನ್ನುವ ಸಮಯ ಇಬ್ಬರು ವ್ಯಕ್ತಿಗಳು ನಾವಿದ್ದಲ್ಲಿಗೆ ಬಂದು ಮಲಯಾಳಂ ನಲ್ಲಿ   ಪ್ರಶ್ನೆ ಕೇಳಲು ಶುರು ಮಾಡಿದರು!! ನಾವು ಕನ್ನಡ ದಲ್ಲಿ ನಿಮಗೆ ಏನು ಬೇಕು ಎಂದು ಕೇಳಿದಾಗಇಂಗ್ಲೀಶ್ ನಲ್ಲಿ ಮಾತಾಡಿ ತಾವು  "ಮಲೆಯಾಳ ಮನೋರಮಾ" ನ್ಯೂಸ್ ಚಾನಲ್  ರವರೆಂದು ಪರಿಚಯ ಮಾಡಿ ಕೊಂಡರು.ನಂತರ ನಾನು  ಇಲ್ಲಿ ಯಾವ ವಿಚಾರ ದ ವರದಿ ಬಗ್ಗೆ ನೀವು ಬಂದಿದ್ದೀರಿ ಎಂದು ಕೇಳಿದೆ [ ನನ್ನ ಉದ್ದೇಶ ಇವರು ಇಂತಹ ಕಾಡಿನ ಬಗ್ಗೆ ಜನರಿಗೆ ಮಾಹಿತಿ ನೀಡಲು ಬಂದಿರಬಹುದೆಂದು ಅನ್ನಿಸಿತ್ತು ] ಅದಕ್ಕೆ ಅವರು ನೋಡಿ ಈ ಊರಿನ ಮೂಲಕ ಹೋಗುವ ರಸ್ತೆ ಎಷ್ಟು ಕೆಟ್ಟದಾಗಿದೆ  ಇದರಿಂದ ಪ್ರತಿದಿನಾ ಕೇರಳದಿಂದ ಕರ್ನಾಟಕಕ್ಕೇ ಬರುವ ಜನರಿಗೆ ತುಂಬಾ ತೊಂದರೆಯಾಗಿದೆ.ನಮ್ಮ ಸರ್ಕಾರ ಎಷ್ಟೊಂದು ಮನವಿ ಮಾಡಿ ಕೊಂಡಿದೆ ಗೊತ್ತ .... ಅಂತಾ ? ಒಂದೇ ಸಮನೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆಯುತ್ತಾ  ಬಂದರು . 

 

 

ಇಲ್ಲೂ ಹಾಜರ್ ನಾವು

                                                                                                                                                   

ಇದು ಹೇಗಿದ್ದರೆ ಚೆನ್ನ

ಮುಂದುವರೆದು ಒಂದೇ ಸಮನೆ  ಕೇಳುತ್ತಾ , ಸಾರ್ವಜನಿಕರ ತೊಂದರೆ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಇದರಬಗ್ಗೆ ನೀವೇನಂತೀರಾ ??? ಅಂತ ನನ್ನ ಹತ್ತಿರ ಕ್ಯಾಮರ ತಿರುಗಿಸಿ ಮೈಕ್ ಹಿಡಿದ , ಕೆಟ್ಟ ಸಿಟ್ಟು ಬಂದರೂ ತಡೆದು ಕೊಂಡು ಅಲ್ಲಾ ನೀವು ಕೇರಳದ ಜನರ ಕಷ್ಟದ ಬಗ್ಗೆ ವರದಿ ಮಾಡಲು ಬಂದಿರುವುದು ಸ್ಪಷ್ಟವಾಯಿತು. ಆದರೆ ಈ ರಸ್ತೆಗೆ ಪರ್ಯಾಯವಾಗಿ  ಮಾನಂದವಾಡಿ ಯಿಂದ ಕಾಟಿಕುಲಂ ,ಕುಟ್ಟ, ಗೋಣಿಕೊಪ್ಪ ,ತಿತಿಮತ್ತಿ, ಹುಣಸೂರು  ಮೂಲಕ ಮೈಸೂರಿಗೆ ಬರಲು ದಾರಿಯಿದೆ.ಇಲ್ಲಿ ರಸ್ತೆ ಚೆನ್ನಾಗಿ ಮಾಡಿ ವಾಹನ ದಟ್ಟಣೆ ಹೆಚ್ಚಾದರೆ ಇಲ್ಲಿನ ಪ್ರಾಣಿಗಳ ಚಲನೆಗೆ ತೊಂದರೆ ಯಾಗದೆ ಅಂದೇ !!! ಇಲ್ಲ ಸಾರ್  "ನಮ್ಮ ರಾಜ್ಯದ ಸಾರ್ವಜನಿಕರಿಗೆ ಇಂದನ ಹಾಗು ಸಮಯ ಎಷ್ಟು ವೇಸ್ಟ್ ಆಗುತ್ತೆ ಗೊತ್ತ!!!!" ಅಂದ. "ಇಷ್ಟೆಲ್ಲಾ ನಿಮ್ಮ ರಾಜ್ಯದ ನಾಗರೀಕರ ಬಗ್ಗೆ ಕಾಳಜಿ ಇರುವ ನೀವು ಇಲ್ಲಿ ಇರುವ ವನ್ಯ ಜೀವಿಗಳ ಬಗ್ಗೆ ಯಾಕೆ ಯೋಚಿಸುತ್ತಿಲ್ಲಾ"!!!! ಅಂದೇ.ಆದ್ರೆ ಆ ಮಾತು ಕೇಳುವ ಸ್ಥಿತಿಯಲ್ಲಿ ಆ ಪುಣ್ಯಾತ್ಮ ಇರಲಿಲ್ಲ ." ಕ್ಯಾಮರ ಆಫ್ ಮೈಕ್ ಗಾನ್".  ಕಾಡಿನಲ್ಲಿ ಟಿ. ವಿ ಗೆ ಸಂದರ್ಶನ ನೀಡಿದ ಹಿಗ್ಗು ಇತ್ತಾದರೂ ಅದು ಪ್ರಸಾರ ವಾಗುವ ಸಾಧ್ಯವೇ ಇಲ್ಲವೆಂದು ಗೊತ್ತಾಗಿತ್ತು. ಅಲ್ಲಿಂದ ಡಿ.ಬಿ.ಕುಪ್ಪೆ ಗೆ ಹೊರಟೆವು."ಸಾ ಹುಸಾರು ಮುಂದೆ ದಾರಿಲೀ  ಒಂದು ಆನೆ ಅದೆ!! ಚಾರ್ಜ್ ಮಾಡ್ತದೆ ನಿದಾನಕ್ಕೆ ಹೋಗಿ "ಅಂದ ಅಲ್ಲಿದ್ದ ಒಬ್ಬ ವ್ಯಕ್ತಿ. ನಾವು ನಕ್ಕು ಮುಂದುವರೆದೆವು ನಾವು ಬರುವ ವೇಳೆಗೆ ಆ ಆನೆ ದಾರಿಯಲ್ಲಿ ಸಿಗಲಿಲ್ಲ.  ದಾರಿಯಂತೂ ಅಸಾಧ್ಯ ವಾಗಿತ್ತು ಆದರೆ ಎರಡೂ ಬದಿಯಲ್ಲಿ ಕಾಡು ಇದ್ದ ಕಾರಣ ನಿಧಾನ ವಾಗಿಚಲಿಸಿ ಡಿ.ಬಿ.ಕುಪ್ಪೆಗೆ ಬಂದಿಳಿದೆವು. ಡಿ.ಬಿ.ಕುಪ್ಪೆ [ ದೊಡ್ಡ ಬ್ಯಾಡರ ಕುಪ್ಪೆ ] ಕರ್ನಾಟಕದ ಗಡಿಯ ಅಂಚಿನ ಗ್ರಾಮ ಕಾಡಿನ ಸಮೀಪ ವಿದೆ. ಈ ಊರಿನ ಸಮೀಪದಲ್ಲೇ ಕಬಿನಿ ಹರಿದು ಕರ್ನಾಟಕ ಹಾಗು ಕೇರಳ ರಾಜ್ಯದ ಕಬಿನಿ ನದಿ ಎರಡೂ  ರಾಜ್ಯಗಳ ಗಡಿಯಾಗಿ ಪರ್ವರ್ತಿತ ವಾಗಿದೆ. ಐ.ಬಿ.  ತಲುಪಿದ ನಮಗೆ

 

ಆಶ್ರಯ ತಾಣ

                                                                                                                   ಅಲ್ಲಿನ ಮೇಟಿ ಶ್ರೀಧರ್ ರಿಂದ ಆತ್ಮೀಯ ಸ್ವಾಗತ . "ಸಾ ಚೆನ್ನಾಗಿದ್ದೀರಾ!! ಖುಸಿಯಾಯ್ತು ಬನ್ನಿ ಸಾ" ಅಂತಾ ಹೇಳಿ ನಮ್ಮ ಲಗ್ಗೆಜನ್ನು ಚಕ ಚಕನೆ ಇಳಿಸಲು ಸಹಾಯ ಮಾಡಿ ತಕ್ಷಣ ಕಾಫಿ ತಂದಿಡುವ ಆಸಾಮಿ.ಯಾವಾಗಲೂ ನಗುಮುಖ ಒಳ್ಳೆಯ ರುಚಿಕಟ್ಟಾದ ಅಡಿಗೆ ಮಾಡುವ ಬಾಣಸಿಗ,ಕಾಡಿನ ಮಾಹಿತಿ ನೀಡುವ ಗೈಡು ಎಲ್ಲಾ ಅವರೇ. ಕಾಫಿಕುಡಿದು  ಆಡಿಗೆ ಆಗುವ ತನಕ ನಾವು ಊರು ಸುತ್ತುವ ಕಾಯಕ ಶುರು ಮಾಡುತ್ತೇವೆ ಬನ್ನಿ ಡಿ.ಬಿ.ಕುಪ್ಪೆ ಫೋಟೋಗಳನ್ನು ನೋಡೋಣ.

Friday, December 17, 2010

ಮುಂಜಾನೆ ವಾಕಿಂಗ್ ನ ಈ ಪರಿ !!! ನಾ ಕಂಡ ಹಾಸ್ಯ ಲೋಕ !!! ಇವ್ರೂ ಯಾಕಿಂಗೆ ವ್ಯಾಕಿಂಗ್ ಮಾಡ್ತಾರೆ !!!

  • ಈಗೀಗ ಯಾಕೋ ಆರೋಗ್ಯದ ಕಡೆ ಗಮನ ಹರಿಸಬೇಕೂ ಅಂತಾ ನನ್ನ ಗೆಳೆಯ ವಾಕಿಂಗ್ ಶುರುಮಾಡಿದ್ದಾನೆ.ನಾನೇನು ಕಡಿಮೆ ಇಲ್ಲ ಬಿಡಿ. ಬೆಳಗಿನ ಜಾವ ಎದ್ದು ಮನೆಯ ಹತ್ತಿರ ವಿರುವ ಕುಕ್ಕರಹಳ್ಳಿ ಕೆರೆ ಸುತ್ತ ಒಂದು ಸುತ್ತು ಹಾಕಿ ಅಲ್ಲೇ ಸಿಗುವ ಹರ್ಬಲ್ ಜೂಸು ಕುಡಿದು ಬೆವರಿನ ವಾಸನೆಯೊಂದಿಗೆ ಮನೆಗೆ ಬಂದು ಕಂಪ್ಯೂಟರ್ ಮುಂದೆ ಕುಕ್ಕರಿಸುತ್ತೇನೆ.ಆಹಾ ಎಂತಾ ಪ್ರಪಂಚ ಗೊತ್ತ !!! ಮಬ್ಬಿನ  ಬೆಳಕಿನಲ್ಲಿ ವಾಕಿಂಗ್ ಮಾಡುವ ಸಮಯದಲ್ಲಿ ಅನೇಕ ವಿಚಿತ್ರ ವ್ಯಕ್ತಿಗಳು ,ಸನ್ನಿವೇಶಗಳನ್ನು ದಿನವೂ ನೋಡುತ್ತೇನೆ.ಬನ್ನಿ ಪರಿಚಯ ಮಾಡಿಕೊಳ್ಳೋಣ.  ಮುಂಜಾವಿನ ತಂಗಾಳಿ ನಡಿಗೆ, ಮನಸ್ಸಿಗೆ ಹರ್ಷ ಉಂಟುಮಾಡಿ,ಕೆರೆಯಲ್ಲಿ ಕಾಣಸಿಗುವ ಹಕ್ಕಿ ಪಕ್ಷಿಗಳ ಕಲರವ, ಸೂರ್ಯ ರಶ್ಮಿಯ ಚೆಲ್ಲಾಟ, ಸುಂದರ ನೋಟ ಮನಸಿಗೆ ಉಲ್ಲಾಸ ನೀಡಿ  ಪ್ರಶಾಂತ ಚಿತ್ತ ಮೂಡುತ್ತದೆ. ಆದ್ರೆ ಯಾಕೋ ಕೆಲವರು ಇದನ್ನು ಆನಂದಿಸದೇ ಅಲ್ಲೂ ವಿಚಿತ್ರವಾಗಿ ಆಡ್ತಾರೆ.                                                                        ಸನ್ನಿವೇಶ ಒಂದು : ಎದರುಗಡೆ ನಾಲ್ಕು ಜನ  ಬರುತ್ತಿದ್ದಾರೆ, ಅವರ ಬಳಿ ಇದ್ದ ಮೊಬೈಲ್ ನಲ್ಲಿ ವೆಂಕಟೇಶ್ವರ ಸುಪ್ರಭಾತ  ಬರುತ್ತಿದೆ !!! ಮಾತು ನೋಡಿ  ಇವತ್ತು "ಏನಾರ ಆಗ್ಲಿ ಅವ್ನ್ತವು ಬಡ್ಡಿ ವಸೂಲಿ ಮಾಡಲೇ ಬೇಕು ಕಣ್ಲಾ, ######@### !! "ಅಂತಾ ಇವರು ತಮ್ಮ   ಸುಪ್ರಭಾತ  ಹೇಳುತ್ತಾ, "ಇವತ್ತು ಎತ್ತಾಕಂಡು ಬದ್ನು ಎರಡು ತದುಕಿ ವಸೂಲಿ ಮಾಡುವ" ಅಂತಾ ಬಡ್ಡಿ ವ್ಯವಹಾರದ ಮಾತು ಆಡ್ತಾ ತಮ್ಮ ಗಿರಾಕಿಗಳನ್ನು ಬಯ್ತಾ  ಬಯ್ತಾ ವೆಂಕಟೇಶ್ವರ ಸುಪ್ರಭಾತ ದಜೋತೆಗೆ  ವಾಕಿಂಗ್ ಮಾಡುವ ಪರಿ ಆಹಾ ವೆಂಕಟೇಶ್ವರನಿಗೆ ಅರ್ಪಿತ.                                                                                        ಸನ್ನಿವೇಶ ಎರಡು: ಒಮ್ಮೆ ವಾಕಿಂಗ್ ಹೋಗುವ ಮಾರ್ಗದಲ್ಲಿ ಒಬ್ಬ ಮಹಿಳೆ ಒಂದು ನಾಯಿಯೊಡನೆ  ಬರ್ತಿದ್ರೂ !!! ನಾಯಿಗೆ ವಾಕಿಂಗ  ಅಥವಾ ಅವರಿಗೆ ವಾಕಿಂಗಾ ಗೊತ್ತಾಗಲಿಲ್ಲ!!. ನಾಯಿ ಚೈನು ಬಿಡಿಸಿಕೊಂಡು ಓಡುವ ಆಸೆ ಇಂದಾ ಜೋರಾಗಿ  ಸರಪಣಿ  ಎಳೆಯುತ್ತಿತ್ತು ಇವರು ಹರ ಸಾಹಸ ಮಾಡಿ ಅದನ್ನು ನಿಯಂತ್ರಿಸುತ್ತಿದ್ದರು , ಆದ್ರೆ ಅವ್ರ ಹತ್ತಿರ ಇದ್ದ ಮೊಬೈಲ್ '' ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವನೆಂದೂ "" ಅಂತಾ ಹಾಡುತ್ತಿತ್ತು.                                                                                                                         ಸನ್ನಿವೇಶ ಮೂರು:ಮತ್ತೊಮ್ಮೆ ಎದುರಿನಿಂದ  ಇಂದ ಒಬ್ಬ ಹುಡುಗಿ  ಓಡಿಕೊಂಡು ಬರುತ್ತಿದ್ದಳು !!! ಅವಳ ಓಟಕ್ಕೆ  ತಕ್ಕ ಹಾಗೆ ಅವಳ  ಕಟ್ಟಿದ ಜುಟ್ಟು ಎಗರಾಡುತ್ತಿತ್ತು !! ಪಾಪ ಅವಳು ಯಾರಿಗೂ ತೊಂದರೆಯಾಗದಿರಲಿ ಅಂತಾ ತನಗೆ ತಾನೇ ತುಟಿ ಕುಣಿಸುತ್ತಾ ಎರಡೂ  ಕಿವಿಗಳಿಗೆ ಇಯರ್ ಫೋನ್ ಹಾಕಿಕೊಂಡು ಓಡಿ  ಬರುತ್ತಿದ್ದಳು,   ಅವಳ ಎದುರಾಗಿ ಹೋಗುತ್ತಿದ್ದ ವಯಸ್ಸಾದ ಮಹಿಳೆಯರಲ್ಲಿ ಒಬ್ಬರು '' ಅಲ್ನೋಡು  ಆ ದೇವರಿಗೆ ಒಂಚೂರು ಕರುಣೆ ಇಲ್ಲ !!  ಪಾಪ ಆ ಹುಡ್ಗಿಗೆ ಕಿವಿ ಕೇಳದಂಗೆ ಮಾಡಿ ಕಿವಿಗೆ ಮಿಸೀನು ಮಡಗಿ ಕೊಳ್ಳೋ ಹಂಗೆ ಮಾಡವ್ನೆ " ಅಂದ್ರೆ ಇನ್ನೊಬ್ಬರು  "ಅಯ್ಯೋ ಪಾಪ  ಸ್ವಲ್ಪ ತಲೇನೂ ಸರಿ ಇಲ್ಲ ಅನ್ನೋಹಂಗೆ  ಕಾಣ್ತದೆ ತನಗೆ ತಾನೇ ಮಾತಾಡ್ತಾ ಐತೆ"  ಅಂದ್ರೂ , ಪಾಪಾ ಆ ಹುಡುಗಿ ಇದ್ಯಾವುದರ ಪರಿವೆ ಇಲ್ಲದೆ  ಮೊಬೈಲ್ ಸಂಗೀತ ಕೇಳ್ತಾ ಹಾಡ್ಕೊತಾ  ಹೋಯ್ತು.                                                                                    ಸನ್ನಿವೇಶ ನಾಲ್ಕು::ನಾನು ದಿನಾ ನೋಡುವ ಒಬ್ಬ ಆಸಾಮಿಯದು ಇನ್ನೊದು ರೀತಿ !! ನಾನು ವಾಕಿಂಗ್ ಮಾಡ್ತಾ ಬರುವ ಸಮಯಕ್ಕೆ ಎದುರಾಗಿ ಬರುತ್ತಾರೆ. ಹಳೆಯ ಕನ್ನಡ ಚಿತ್ರ ಗೀತೆಗಳನ್ನು ಮೊಬೈಲ್ ನಲ್ಲಿ  ಕೇಳುತ್ತಾ !!.ಅಲ್ಲಲ್ಲಾ ಬೇರೆಯವರಿಗೆ  ಕೇಳಿಸುತ್ತಾ ಸಾಗುವ ಈತ ಬಲು ವಿಚಿತ್ರ ಆಸಾಮಿ , ಅಶುದ್ದ ಗಾಳಿಯನ್ನು ಶಬ್ದ ಸಹಿತ  ದೇಹದಿಂದ ಬಿಡುವ ಹಾಗು ವಾಯು ಮಾಲಿನ್ಯ ಮಾಡುವುದರಲ್ಲಿ ನಿಸ್ಸೀಮ. ಒಮ್ಮೆ ನಡೆದು ಬರುವ ಹಾದಿಯಲ್ಲಿ ಹಾವು ಮಲಗಿದ್ದರೂ  ನೋಡದೆ ತನ್ನ ಲೋಕದಲ್ಲೇ ವಿಹರಿಸುತ್ತಾ  ಹಾವು  ದಾಟಿ ಅದು ಸರಿದಾಗ  ಬೆಚ್ಚಿ ಮುಗ್ಗರಿಸಿ ಬಿದ್ದರು.ಆದ್ರೆ  ಇವರ ಮೊಬೈಲ್ ನಿಂದ ಹಾಡು "ಚೆಲುವಾಂತ ಚೆನ್ನಿಗನೆ ನಲಿದಾಡು ಬಾ "ಅಂತಾ ಹಾಡ್ತಿತ್ತು                                                                                                                                        .ಇನ್ನೊಂದು ಮಜಾ ಹೇಳ್ತೀನಿ ತಾಳಿ !! ಇಲ್ಲೋಬ್ಬರಿದ್ದಾರೆ , ವಯಸ್ಸಾದ  ಇವರೂ ಮೊಬೈಲ್ ಗಿರಾಕಿನೆ !!! ಇವರು ಸುಂದರ ಹೆಂಗಸರು ಅಥವಾ  ಹುಡ್ಗೀರು ಬಂದ್ರೆ  ತಾನು ಹುಡುಗಾ ಅಂತಾ ನಟಿಸುವ ಚೂಲುಗಾರ. ನಿಧಾನವಾಗಿ ನಡೆಯುವ ಇವರು ದೂರದಲ್ಲಿ ಸುಂದರ ಹೆಣ್ಣು ಕಂಡೊಡನೆ  ತನ್ನ ಮೊಬೈಲ್ ನಿಂದ ಪ್ರೀತಿಗೆ ಸಂಬಂದಿಸಿದ ಹಾಡನ್ನು ಜೋರಾಗಿ ಹಾಕಿಕೊಳ್ಳುತ್ತಾನೆ. ಈ ಯಪ್ಪನನ್ನು  ಕಾಯಲು ಚುಡಾಯಿಸಲು ಒಂದು ಎರಡು ಹುಡುಗರು ಕಾದಿರುತ್ತಾರೆ." ಏನ್ ತಾತ  ಭಾರಿ ಸ್ಮಾರ್ಟ್ ಆಗಿ  ಕಾಣ್ತಿದೀರಾ ಅಂದ್ರೆ ಸಾಕು ನಾಚಿ ನೀರಾಗುವ ಈತ  "ನಮ್ಮ ಕಾಲದಲ್ಲಿ ಹಿಂಗಿರ್ಲಿಲ್ಲಾ ಕಣ್ರಪ್ಪಾ ಹೆಂಗಸರೂ ಹಾಳಾಗ್ಬುಟ್ರೂ" ಅಂತಾ ಪುರಾಣ ಹೇಳ್ತಾ   ಇರ್ತಾನೆ. ಜನ ಸಹ ಇವನ ಬಗ್ಗೆ ಗೊತ್ತಿರೋದ್ರಿಂದ  ವ್ಯಾಕರಿಸಿ ಹೋಗುತ್ತಾರೆ.  ಏನ್ ತಾತಾ ನಿಮಗೆ ಮದುವೆ   ªಮಾಡಿದ್ರೆ ಮಾಡ್ಕೊತೀರ ಅಂದ್ರೆ ಘಾಟಿ ಮುದುಕ " ನಮ್ಗ್ಯಾರಪ್ಪಾ ಹೆಣ್ಣು ಕೊಡ್ತಾರೆ ಅಂತಾನೆ "

    Wednesday, December 15, 2010

    ರಂಗೈಯ್ಯನ ಲಡ್ಡೂ ಪರ್ಸಾದ ಪುರಾಣ !!!! ಚಿತ್ರವಿಲ್ಲದ ಈ ಕಥೆ.

    ಯಾಕೋ ಕಾಣೆ ಕಾಡಿನ ಕಥೆಗಳಿಗೆ ನೂರೆಂಟು ವಿಘ್ನ ,ಕಾಡಿನ ನೆನಪುಗಳ ಮಾಲಿಕೆ ಯಲ್ಲಿ ಸ್ವಲ್ಪ ವಿರಾಮ ಪಡೆದು ವೈಧ್ಯರ "ಗೀತ ಗಾತಾ ಚಲ್" ಕಾರ್ಯಕ್ರಮ ಹಾಕುವ ಅನಿವಾರ್ಯ ಉಂಟಾಯಿತು. ತಾಳು ಮತ್ತೆ ಕಾಡಿನ ನೆನಪಿಗೆ ಜಾರೋಣ ಅಂತಾ ಕಂಪ್ಯೂಟರ್ ಮುಂದೆ ಕೂತರೆ  ಅರೆ ಇದೇನು ಕಂಪ್ಯೂಟರ್ ನಲ್ಲಿದ್ದ ಅಮೂಲ್ಯವಾದ ಫೋಟೋಗಳೇ ಮಾಯಾ !!!ನೋಡಿದ್ರೆ ಹಾರ್ಡ್ ಡಿಸ್ಕ್ ತೊಂದರೆಯಾಗಿ ಫೋಟೋ ಎಲ್ಲಾ ಅಳಿಸಿಹೊಗಿತ್ತು.ಮತ್ತೆ ಅವನ್ನು ಕಲೆಹಾಕಿ ಮತ್ತೆ ಕಾಡಿನ ನೆನಪಿನ ಯಾನಕ್ಕೆ ಸ್ವಲ್ಪ ವಿಳಂಭ ವಾಗುತ್ತೆ , ಆ ಕಾರಣದಿಂದ ಏನ್ ಮಾಡೋದು ಅಂತಾ ಕೂತಿದ್ದೆ.ನನ್ನ ಸ್ನೇಹಿತ ಅನಿಲ್ ಅದಕ್ಕೆ ಪರಿಹಾರ ಹೇಳಿಬಿಡೋದೇ.ಅಲ್ಲ ಕಣ್ಲಾ ನಿನ್ ಬ್ಲಾಗ್ ನಲ್ಲಿ ಯಾವದೇ ಲೇಖನ ನೋಡಿದರೂ ಚಿತ್ರಗಳೇ ಇವೆ.ಅಲ್ಲಾ ನಿಂಗೆ ಚಿತ್ರ ಇಲ್ದೆ ಲೇಖನ ಬರಿಯೋಕೆ ಬರಲ್ವಾ?? ಈ ಸರಿ ಚಿತ್ರ ಹಾಕದೆ ಹಾಸ್ಯವಾಗಿ ಬರಿ ನೋಡೋಣ !! ಅಂತಾ ಕೆಣಕಿದ.ಅದಕ್ಕೆ ಈ ಹಾಸ್ಯ ರಸಾಯನ ನಿಮಗಾಗಿ. ..   !!!                                                                                                                                       ನಮ್ಮ ಕಚೇರಿಯಲ್ಲಿ ರಂಗಯ್ಯ ಅಂತಾ ಒಬ್ಬ ಗ್ರೂಪ್ '' ಡಿ'' ನೌಕರ  ಇದ್ದ.ಗಿಡ್ಡನೆಯ ಇವನು ,ಒಳ್ಳೆಯ ಕೆಲಸ ಗಾರ ಕೆಲವರು ಇವನನ್ನು ಗುಳ್ಳೆ ನರಿ ಅಂತಾ ಕರೀತಿದ್ರು.ಆದರೂ ಇವನು ಒಮ್ಮೊಮ್ಮೆ ಇದ್ದಕ್ಕಿದಂತೆ ಎರಡು ,ಮೂರು ದಿನಗಳು ಪತ್ತೆ ಇರುತ್ತಿರಲಿಲ್ಲ , ನಂತರ ಕಚೇರಿಗೆ ಬಂದು  " ಹೇ ಹೇ ಹೇ ಸಾ ನಾನು ದೇವಸ್ಥಾನಕ್ಕೆ  ಒಗಿದ್ದೆ ಸಾ" ಅಂತಾ ತಲೆಕೆರೀತಾ ಬಂದು , "ಸಾ ಪರಸಾದ ತಂದೀವ್ನಿ ತಗಳಿ  ಸಾ" ಅಂತಾ , ಎಲ್ಲರಿಗೂ ಪರಸಾದ ಹಂಚೋವ್ನು.ಇಷ್ಟೆಲ್ಲಾ ಇದ್ರೂ ತಾನು ಕಚೇರಿಯಲ್ಲಿ ಡ್ಯೂಟಿಯಲ್ಲಿ ಇದ್ದಾಗ ಬೇಗ   ಕೆಲಸ ಮುಗಿಸೋವ್ನು  . ಹೀಗೆ ಸಾಗಿತ್ತು ಇವನ ಕಾರ್ಯ ವೈಖರಿ.ಒಮ್ಮೆಯಂತೂ   ಒಂದು ವಾರ ಪತ್ತೆ ಇಲ್ಲದೆ ನಂತರ ಆಫಿಸ್ ಗೆ ಬಂದೂ ಸಾ ಮನೆವ್ರಾ ಕೂಡ ತಿರುಪತಿ ಗೆ ಹೋಗಿದ್ದೆ " ಹಿ ಹಿ ಹಿ ಬೇಜಾರ್ ಮಾಡ್ಕಾ ಬ್ಯಾಡಿ" ಅಂತಾ ಪೂಸಿಹೊಡೆದು  ಗೋಗರೆದು ಆಫಿಸ್ನವ್ರ್ಗೆಲ್ಲಾ  ಲಡ್ಡೂ ಜೊತೆ  ಮೈಸೂರ್ ಪಾಕು ಹಂಚಿದಾ !! ನಾವು ಕೆಲವರು ಅಲ್ಲಾ ರಂಗಯ್ಯ ತಿರುಪತಿಯಲ್ಲಿ ಲಡ್ಡೂ ಜೊತೆ ಮೈಸೂರು ಪಾಕು ಕೊಡೋಕೆ ಯಾವಾಗ ಶುರುಮಾಡಿದರೂ ಅಂತಾ ಹಾಸ್ಯ ಮಾಡಿ ನಕ್ಕೆವು.       " ಹೇ ಹೇ ಬುಡಿ ಸಾ ತಮಾಸೆ ಮಾಡ್ಬ್ಯಾಡಿ" ಅಂತಾ ಆಚೆ ಹೋದ.ನಂತರ  ಯಥಾ ಸ್ಥಿತಿ . ಹಾಗೆ ಒಮ್ಮೆ ನಾನು ನನ್ನ ಸ್ನೇಹಿತನ ಸಹೋದರಿ  ಮದುವೆ     ಗಾಗಿ ರಜಾ ಹಾಕಿ ತೆರಳಿದ್ದೆ .  ಮದುವೆ ಮನೆಯಲ್ಲಿ ಯಾಂತ್ರಿಕವಾಗಿ  ಉಡುಗೊರೆ  ನೀಡಿ  ಊಟಕ್ಕೆ ಬಂದು ಕುಳಿತೆ , ಅರೆ ಇದೇನಿದು ಅಂತಾ ನೋಡಿದರೆ ನಮ್ಮ ರಂಗಯ್ಯ ನನ್ನ ಮುಂದಿನ ಸಾಲಿನ ತುದಿಯಲ್ಲಿ ಊಟಕ್ಕೆ ಕುಳಿತಿದ್ದ.ಪಕ್ಕದಲ್ಲಿ ಒಂದು ಬ್ಯಾಗು ಬೇರೆ ಇತ್ತು.ಪಾಪ ಇಲ್ಯಾಕೆ ಇವನನ್ನು ಮಾತಾಡಿಸಿ ತೊಂದ್ರೆ  ಕೊಡೋದು ಅಂತಾ ಯೋಚಿಸಿ ಊಟ ಮಾಡಲು ಶುರು ಮಾಡಿದೆ. ಊಟ ಎಲ್ಲಾ ಸಾಂಗವಾಗಿ  ಮುಗಿತೂ . ಕೈತೊಳೆಯುವ ಸರದಿ ಬಂದು ಅಲ್ಲಿ ರಶ್ ಆಗುವ ಮೊದಲು ಕೈ ತೊಳಿಯೋಣ ಅಂತಾ ಬೇಗ ಕೈ ತೊಳೆಯುವ   ಕೆಲಸ ಮುಗಿಸಿದೆ. ಅಲ್ಲೇ ಇದ್ದ ಸ್ನೇಹಿತ " ಬಾರೋ ಲೋ ಯಾಕೆ ಓಡ್ತಿಯಾ" ಅಂತಾ ತಡೆದು  ಮಾತಾಡ್ತಾ ನಿಲ್ಲಿಸಿಕೊಂಡ . ಊಟ ಮಾಡಿದ ಎಲ್ಲಾ ಜನರು ಊಟ ಮುಗಿಸಿ ತೆರಳಿದ್ದರು ,ಆದ್ರೆ ಒಬ್ಬ ವ್ಯಕ್ತಿ ಮಾತ್ರಾ ಎಲ್ಲಾ ಎಲೆಗಳಲ್ಲಿ ಉಳಿದಿದ್ದ ಲಡ್ಡು  ತೆಗೆದು ತನ್ನಾ ಬ್ಯಾಗಿಗೆ ತುಂಬಿ ಕೊಳ್ಳುತ್ತಿದ್ದಾ!!. ಅರೆ ಇದೇನು ಅಂಥಾ ನೋಡಿದ್ರೆ ಅವನೇ ನಮ್ಮ ಕಚೇರಿ ರಂಗಯ್ಯ !! ಅವನ ಜೊತೆ ಇದ್ದ ಬ್ಯಾಗು ಆಗಲೇ ಹೊಟ್ಟೆ ತುಂಬಾ ಲಡ್ಡು ಗಳನ್ನೂ ತುಂಬಿಕೊಂಡು ಜೋಲಾಡುತಿತ್ತು.           ನಾನು ಅವನಿಗೆ  ತಿಳಿಯದಂತೆ   ನೋಡ್ತಾ ಇದ್ದೆ !! ಎಲಾ ಇವನ ಅಂದು ಕೊಂಡು, ಮನದಲ್ಲಿ ಶಪಿಸುತ್ತಾ ಮನೆಹಾದಿ ಹಿಡಿದೇ.ಮಾರನೆದಿನ ಯಥಾ ಸ್ತಿತಿ "" ಹಿ ಹಿ ಹಿ ಸಾ ನಿನ್ನೆ ಚಾಮುಂಡಿ ಬೆಟ್ಟಕ್ಕೆ  ಹೋಗಿದ್ದೆ ಸಾ!!! ತಕಳಿ ಪರ್ಸಾದ" ಅಂತಾ ಒಳಗೆ ಬಂದಾ .ಬಂದಿತ್ತು ಕೆಟ್ಟ ಸಿಟ್ಟು!!! ಆದರೂ ಇವನಿಗೆ ಬುದ್ದಿ ಕಲಿಸೋಣ ಅಂದು ಕೊಂಡು "ಇರು ರಂಗಯ್ಯ ಎಲ್ಲರ ಜೊತೆ ತಿನ್ನೋಣ!!"  ಅಂದು ಎಲ್ಲರನ್ನೂ ಬರಹೇಳಿ ಒಟ್ಟಿಗೆ ಸೇರಿಸಿದೆ ,"ಈಗ ಬಾ ರಂಗಯ್ಯ ನಿನ್ ಪರ್ಸಾದ ಹಂಚುವಂತೆ ಅಂಥಾ ಅಂದೇ. "ಅವನು ಖುಷಿಯಾಗಿ ಬ್ಯಾಗಿನಿಂದಾ ತೆಗೆದು ಪೇಪರ್ ಮೇಲೆ ಸುರಿದ !!! ಅರೆ ಅದೇ ನಿನ್ನೆ ಮದುವೆ  ಮನೆ ಲಡ್ಡು ಗಳ  ಕರಾಮತ್ತು ಇಲ್ಲಿ ಬಂದಿತ್ತು !! "ಸಾ ಪರ್ಸಾದ ಕೊಡ್ಲಾ "ಅಂದಾ , " ತಡಿ ರಂಗಯ್ಯ ನಿನ್ ಪರ್ಸಾದದ ಮಹಿಮೆ ಹೇಳ್ತೀನಿ ಆಮೇಲೆ ಕೊಡಿವಂತೆ" ಅಂದು, ಕಚೇರಿ ಸ್ನೇಹಿತರಿಗೆ "ನೋಡ್ರಯ್ಯ ನಮ್ಮ ರಂಗಯ್ಯ ಪಾಪ ಇಷ್ಟು ದಿನಾ ಪುಣ್ಯ ಕ್ಷೇತ್ರ ದರ್ಶಿಸಿ ನಮಗೆ ಪರ್ಸಾದ ಕೊಟ್ಟಿದ್ದಾನೆ. ಇವತ್ತು ಅವನ ಪುಣ್ಯಕ್ಕೆ ನಮ್ಮ ಕಾಣಿಕೆಕೊಡೋಣ" ಎಂದೇ. ಅವನಿಗೆ ಅಚ್ಚರಿಯಾಗಿ "ಹೇ ಹೇ ಹೇ ಯಾನು ಬ್ಯಾಡ ಬುಡಿ ಸಾ ಅಂದಾ !!." "ಇರು ರಂಗಯ್ಯ ಅಂತಾ ಹೇಳಿ ಅವನು ನಿನ್ನೆ ಮಧುವೆ ಮನೆಯಲ್ಲಿ  ಮಾಡಿದ ಘನ ಕಾರ್ಯದ ವಿವರಣೆಯನ್ನು ಎಲ್ಲರಿಗೂ ದರ್ಶನ ಮಾಡಿಸಿ ರಂಗಯ್ಯನ ಪರ್ಸಾದದ ಮಹಿಮೆ ಸಾರಿದೆ. ಇಷ್ಟುದಿನ ಎಲ್ಲರನ್ನೂ  ಮಂಗಗಳನ್ನಾಗಿ ಮಾಡಿದ್ದ ರಂಗಯ್ಯ  ಇಂದು ತಾನೇ ಮಂಗಯ್ಯ ಆಗಿದ್ದಾ !! ಆಗ ನೋಡಬೇಕಿತ್ತು ಎಲ್ಲರ ಮುಖವನ್ನು !! ಆಹಾ ಪ್ರಸಾದ ಅಂಥಾ ಭಕ್ತಿ ಇಂದ ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸಿ ದೇವರ ಪ್ರಸಾದವೆಂದು ತಿಳಿದು ಮನೆಗೂ ತೆಗೆದುಕೊಂಡು ಹೋಗಿ  ಧನ್ಯತೆ ಮೆರೆಯುತ್ತಿದ್ದ ಆ  ಮಖಗಳು ಕಿವುಚಿಕೊಂಡು ಅವನಿಗೆ ಶಾಪಾ ಹಾಕಿ ಎರಡೆರಡು ತದುಕಲು ಮುಂದಾಗಿದ್ರೂ . ಅವನಿಗೂ ಈ ಅನಿರೀಕ್ಷಿತ ಬೆಳವಣಿಗೆ ಇಂದಾಗಿ ಸರಿಯಾದ ಮಂಗಳಾರತಿ ಎತ್ತಿಸಿಕೊಳ್ಳುವ ಸರದಿಯಾಗಿತ್ತು. ಇನ್ಮುಂದೆ ಹೀಗೆ ಮಾಡುವುದಿಲ್ಲ ವೆಂದು ಪ್ರಮಾಣ ಮಾಡಿ ಕ್ಷಮೆಕೋರಿದ .ಏನೋ ಹಾಳಾಗ್ಲಿ ಅಂತಾ ಎಲ್ಲರು ತಲಾ ಒಂದೊಂದು ಮಾತಾಡಿ ತಮಗೆ ತಾವೇ ಸಮಾಧಾನ ಪಟ್ಟುಕೊಂಡರು. ಆದರೂ ಈ ಪುಣ್ಯಾತ್ಮಾ ಪ್ರತೀಭಾರಿ ನಮಗೆ ಚಳ್ಳೆ ಹಣ್ಣು ತಿನ್ನಿಸಿ  ಇಂತಹ ಪರ್ಸಾದ ತಿನ್ನಿಸಿ ತನ್ನ ಮಹಿಮೆ ಸಾರಿ ನಮ್ಮನ್ನು ಮೂರ್ಖ ರನ್ನಾಗಿ ಮಾಡಿದ್ದ. ಹಿಂಗಿತ್ತು ನೋಡಿ ನಮ್ಮ ರಂಗಯ್ಯನ ಲಡ್ಡೂ ಪರ್ಸಾದ ಪುರಾಣ.                                                                                                    

    Wednesday, December 8, 2010

    ಕಾಡಿನ ನೆನಪಿಗೆ ಸ್ವಲ್ಪ ವಿರಾಮ.!! ಈಗ ಗೀತ್ ಗಾತಾ ಚಲ್!!!ಮೈಸೂರಿನಲ್ಲಿ ವೈಧ್ಯರ ಕಲರವ. !!! ಚಿತ್ರನಟಿ ಸುಮಲತಾ ಅಂಬರೀಶ್ ಹಾಡ್ತಾರೆ ಗೊತ್ತ!!!





    ಪ್ರತಿನಿತ್ಯ ರೋಗಿಗಳ ಒಡನೆ ಮಿಂದು ಅವರ ನೋವಿಗೆ ಮಿಡಿದ ವೈಧ್ಯರು ಮೈಸೂರಿನಲ್ಲಿ ಪ್ರತೀವರ್ಷ "" ಗೀತ ಗಾತಾ ಚಲ್ "" ಅಂತಾ ಹಾಡಿ ಕುಣಿದು, ಸುಮಧುರ ಹಾಡುಗಳ  ರಸದೌತಣವನ್ನು ಮೈಸೂರ ಜನರಿಗೆ ನೀಡುತ್ತಾರೆ.ಈ ಕಾರ್ಯ ಕಳೆದ ಹತ್ತು ವರ್ಷಗಳಿಂದ  ನಿರಂತರವಾಗಿ ನಡೆದುಕೊಂಡು ಬಂದಿದೆ.ಬನ್ನಿ ಈ ಬಾರಿಯ ವಿಶೇಷವನ್ನು ಸವಿಯುವ. ಅಚ್ಚರಿಯ ವಿಷಯವೆಂದರೆ ಈ ಬಾರಿ ವೈಧ್ಯರ ಮಕ್ಕಳೂ ಸಹ ವೇದಿಕೆ ಏರಿದ್ದು.ಜೊತೆಗೆ ತಾರಾ ಸ್ಪರ್ಶ .ಕಳೆದ ಭಾನುವಾರ ಸಂಜೆ ನನ್ನ ಪಾಲಿಗಂತೂ ಗಾನದ ಸ್ವರ ಮಾಧುರ್ಯದ  ಸವಿ ಸಂಜೆಯಾಗಿ ಬಂದಿತ್ತು  

    Wednesday, November 24, 2010

    " ಬಳ್ಳೆ" ದರ್ಶನ ಮಾಡೋಣ ಬನ್ನಿ !! ಕಾನನದ ನಡುವೆ ವನ್ಯ ಜೀವಿಗಳ ಮಾಯಾಲೋಕ !!!!

    ಹಸಿರು ಹೊದ್ದು ಮಲಗಿದ  ಕಬಿನಿ ಹಿನ್ನೀರು








    ನನ್ನ  ಹಾಡು ನನ್ನ ಪಾಡು








    ಇದು ನನ್ನ ಮನೆ 

    ಹಿಂದಿನ ದಿನ ಹುಲಿಯ ದರ್ಶನ ಮಾಡಿದ ನಾವು ಮುಂಜಾನೆ ಎದ್ದು ಸಿದ್ದತೆ ನಡೆಸಿ ತಯಾರಾದೆವು.ಮುಂಜಾವಿನ ಕಾನನದ ತಂಗಾಳಿ ಮನಸ್ಸನ್ನುಉಲ್ಲಾಸ ಗೊಳಿಸಿ ಮುದ ನೀಡಿತು. ಹಾಗೆಯೇ   " ಬಳ್ಳೆ"  ಎಂಬ ಮಾಯಾ ಲೋಕದ ನೆನಪಿನಾಳಕ್ಕೆ ಜಾರಿದೆ. ಅಯ್ಯೋ  ಕ್ಷಮಿಸಿ
    ಒಮ್ಮೆ ನಿಲ್ಲಿ ಇಲ್ಲಿ  ತಪಾಸಣೆಗಾಗಿ


    ನಿಮಗೆ    " ಬಳ್ಳೆ"   ಎಂಬ ಮಾಯಾಲೋಕ ಪರಿಚಯಿಸುತ್ತೇನೆ ಬನ್ನಿ .ಈ ಜಾಗ ಕಾಕನ ಕೋಟೆಯ ಕಾಡಿನ ಒಂದು ಮುಖ್ಯ ಆನೆ ಶಿಭಿರ.ಇಲ್ಲಿ ಒಂದು ಚೆಕ್ ಪೋಸ್ಟ್ ಇದ್ದು ಕರ್ನಾಟಕ -ಕೇರಳ ನಡುವೆ ಓಡಾಡುವ ವಾಹನಗಳನ್ನು ತಪಾಸಣೆ ಮಾಡುತ್ತಾರೆ. ಕರ್ನಾಟಕದ ಹೆಗ್ಗಡದೇವನ ಕೋಟೆ ಯಿಂದ  ಕೇರಳ ರಾಜ್ಯದ ಮಾನಂದವಾಡಿ ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ  ಚಲಿಸುವುದು ಒಂದು ಸವಾಲೇ ಸರಿ .ರಸ್ತೆಯಲ್ಲಿ ಹಳ್ಳ ಕೊಳ್ಳಗಳಿದ್ದು ವಾಹನಗಳ ಚಕ್ರಗಳ ಸಂಕಟ ಹೇಳ ತೀರದು.ಈ ಮಧ್ಯೆ ಎಲ್ಲಿಂದಲೋ ಇದ್ದಕ್ಕಿದಂತೆ


    ಸಂತಸ ಅರಳುವ ಸಮಯ
    ಇದು ನಮ್ಮದೇ ರಾಜ್ಯ
                                     





    ಸ್ವಚ್ಚಂದ  ವಿಹಾರ

    ಆನೆಗಳು  ಹಳ್ಳಿಯಲ್ಲಿ ರಸ್ತೆಗೆ ಅಡ್ಡ ಬರುವ  ಎಮ್ಮೆಗಳನ್ನು ನೆನಪಿಗೆ ತರುತ್ತವೆ.  ವಾಹನ ಚಾಲನೆ ಮಾಡುವಾಗ ಇವುಗಳನ್ನು ನೆನಪಿನಲ್ಲಿ ಇಟ್ಟುಕೊಂಡೆ ಚಲಿಸಬೇಕಾಗುತ್ತದೆ.ನಾವುಗಳೂ ಸಹ ಇಲ್ಲಿಗೆ ಬರುವಾಗ ಹಲವಾರು ಬಾರಿ  ಇಂತಹ ಸಂದರ್ಭ ಎದುರಿಸಿದ್ದೇವೆ .ಇನ್ನೂ ಒಂದು ತಮಾಷೆ ಅಂದ್ರೆ ಇಲ್ಲಿರುವ ಒಂದು ಕುಂಡಾ  ಅಂತ ಕರೆಯುವ[ ಕುರುಡು ಆನೆ ಎಂದು ಹೇಳುತ್ತಾರೆ ]  ಆನೆಯದು !!! ಇದು ರಸ್ತೆಯಲ್ಲಿ ಬರುವ ಲಾರಿಗಳನ್ನು ಅಡ್ಡ ಹಾಕಿ  ಲಾರಿಯಲ್ಲಿ ಲೋಡ್ ಆಗಿರುವ  ತಿನ್ನುವ ಪದಾರ್ಥ ಗಳನ್ನೂ  ಸೊಂಡಿಲಿನಲ್ಲಿ ಹುಡುಕಿ  ತಿಂದು ನಂತರ ಲಾರಿಯನ್ನು ಬಿಡುತ್ತದೆ .ಈ ಚಾಣಾಕ್ಷ ಆನೆಯ ಬಗ್ಗೆ ಇಲ್ಲಿ ಹಲವಾರು ಕಥೆಗಳು ಹರಿದಾಡಿವೆ.     " ಬಳ್ಳೆ"ಕ್ಯಾಂಪ್ ಗೆ ನಾವು ಬಂದಾಗಲೆಲ್ಲ  ನಮ್ಮನ್ನು ಎದುರುಗೊಂಡು ಸ್ವಾಗತ ನೀಡಲು ನಮ್ಮ ಗೆಳೆಯರೊಬ್ಬರು ಇರುತ್ತಾರೆ. ಅವರಿಗಾಗಿ ನಾವು ಪ್ರೀತಿಯಿಂದ  ಕ್ಯಾರೆಟ್  ತೆಗೆದು ಕೊಂದು ಹೋಗಿರುತ್ತೇವೆ. ಎಲ್ಲಿರುತ್ತದೋ ಗೊತ್ತಿಲ್ಲ ನಾವು ಇಳಿದ ಕೂಡಲೇ ಓಡಿಬಂದು ಈ " ಜಿಂಕೆ " ನಿಲ್ಲುತ್ತದೆ



    ಇಂತೀ ನಿಮ್ಮ ಪ್ರೀತಿಯ
    ನಿಮ್ಮ ಕ್ಯಾಮರಾಗೆ ನನ್ನದೊಂದು ಪೋಸು
    .


    ನಾವು ನೀಡುವ ಕ್ಯಾರೆಟ್ ತಿಂದು ನಮ್ಮ ಕಾರಿನ ಅಕ್ಕ ಪಕ್ಕ ಸುಳಿದಾಡಿ ನಂತರ ಕಾಡಿಗೆ ದೌಡಾಯಿಸುತ್ತದೆ.ಇದು ಸುಮಾರು ಐದಾರು ವರ್ಷಗಳಿಂದ  ನಡೆದುಕೊಂಡು ಬಂದ ಗೆಳೆತನ ವಾಗಿದೆ. ನಮ್ಮ ಕಣ್ಣುಗಳೂ ಸಹ ಅಲ್ಲಿಗೆ ಹೋದೊಡನೆ ಈ ಗೆಳೆಯನಿಗಾಗಿ ಹುಡುಕುತ್ತವೆ. ಇಲ್ಲೇ ಪಕ್ಕದಲ್ಲೇ ಇದೆ ಕಾಡಿನ  ದೇವಿಯ  ಒಂದು ದೇವಾಲಯ
    ಕಾಡಿನ ತಾಯಿ ನಿನಗೆ ವಂದನೆ 



    ಈ ದೇವರಿಗೆ ಇಲ್ಲಿನ ಪ್ರತಿಯೊಬ್ಬರೂ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಹಾಗೆ ಸ್ವಲ್ಪ ಮುಂದೆ ಬಂದರೆ


    ಕಾಡಿನ ಮಕ್ಕಳು ನಾವೆಲ್ಲಾ
    ನನ್ನ ಭವಿಷ್ಯ  ಎಲ್ಲಿದೆ
        



    ಇಲ್ಲಿದೆ ಒಂದು ಗಿರಿಜನರ ಒಂದು ಹಾಡಿ.[ ಕಾಡಿನ ವಾಸಿಗಳು ವಾಸಿಸುವ ಗುಡಿಸಿಲುಗಳ  ಗುಂಪು ]  ಮಣ್ಣಿನ ಗೋಡೆ ಹಾಕಿದ ಬಿದುರಿನ ಗಳುಗಳ ಜೊತೆಗೆ ಜೊಂಡು ಹುಲ್ಲನ್ನು ಹೊದಿಸಿದ ಚಾವಣಿಯ ಈ ಪುಟ್ಟ ಗುಡಿಸಿಲಿನಲ್ಲಿ   ವನ್ಯ ಜೀವಿಗಳ ಜೊತೆಯಲ್ಲಿ ಪ್ರತಿ ಕ್ಷಣಗಳನ್ನೂ ಕಳೆವ ಜೀವಿಗಳು. ನಾವು ಭೇಟಿ ನೀಡಿದಾಗ ಅಲ್ಲಿ ಆಟ ಆಡುತ್ತಿದ್ದ  ಮಕ್ಕಳನ್ನು ನೋಡಿ  ಮನಸು ಮರುಗಿತು. ಇವರೂ ಸಹ ನಮ್ಮ ದೇಶದ ಆಸ್ತಿ ಅಲ್ಲವೇ?? ಎನ್ನುವ ಪ್ರಶ್ನೆ ಮನದಲ್ಲಿ ಮೂಡಿಸಿತು. ಅರೆ ಇದೇನಿದು ಆನೆ ರಾಯರು




    ನನಗೂ ಬೇಕು  ಇಂತಹ ಆರೈಕೆ
    ವಿಶ್ರಾಂತಿಯ ಸಮಯ
    ನನ್ನ ಹೆಸರು ಅರ್ಜುನ
     


    ಇಲ್ಲಿ ವಿರಮಿಸಿದ್ದಾರೆ  ದೂಳಿನ ಸ್ನಾನ  ಅವರಿಗೆ ನಡೆಯುತ್ತಿದೆ !!! ಹೌದು  ನೋಡ್ರೀ ಆನೆ ರಾಯರಿಗೆ ನೀರಿನ ಸ್ನಾನಕ್ಕೆ ಮೊದಲು ಮಣ್ಣಿನ ಧೂಳಿನ ಮಜ್ಜನ ಆಗಲೇ ಬೇಕೆಂದು  ತಿಳಿಯಿತು.ಸುಮಾರು ಅರ್ಧ ಘಂಟೆ ನಡೆದ ಈ  ಕೆಲಸದ ನಂತರ ಮಾವುತರು ಆನೆಯನ್ನು ಕಬಿನಿ ಹಿನ್ನೀರಿನ   ಕಾಲುವೆಗೆ  ಕರೆತರಲು ಸಿದ್ದವಾದರು. ನಾವು ಹೊರಟೆವು. ಅಗೋ ನೋಡಿ




    ಗಜ  ನಡಿಗೆ


     ಆನೆ ನಡೆದು ಬರುವ ನೋಟವನ್ನು ಆನೆಯ ಮೇಲೆ ಕುಳಿತ ಮಾವುತರು ಆನೆಯನ್ನು  ಕರೆದುಕೊಂಡು     ಬರುವ ಆ ದೃಶ್ಯ  ''ಗಂಧದ ಗುಡಿಯ '' ಸನ್ನಿವೇಶಗಳನ್ನು ನೆನಪಿಸಿತು. ಬನ್ನಿ ಆನೆಯ ಜಳಕ ನೋಡೋಣ




    ಈಗ ಸ್ನಾನದ ಸಮಯ


    ನೀರಿನಲ್ಲಿ  ಮಲಗೋದು ಅಂದ್ರೆ ಖುಷಿ ಕಣ್ರೀ
    ಸರಿಯಾಗಿ ಕ್ಲೀನ್ ಮಾಡಪ್ಪ
    ಸ್ನಾನ ಆಯ್ತು ಒಂದು ಫೋಟೋ ಪ್ಲೀಸ್



    ಅಬ್ಭ ಸುಮಾರು  ಒಂದು ಘಂಟೆಗೂ ಹೆಚ್ಚು ಕಾಲ ಆನೆಯ ಮೈಯನ್ನು ಉಜ್ಜಿ   ಧೂಳಿನಿಂದ   ಕೊಳೆಯಾಗಿದ್ದ ಆನೆಯನ್ನು  ಫಳ ಫಳ ಹೊಳೆಯುವಂತೆ ಮಾಡಿದ ಆ ಮಾವುತನ  ಶ್ರಮಕ್ಕೆ ಜೈ ಹೋ ಎನ್ನದೆ ಇರಲಾಗಲಿಲ್ಲ. ಅಂದ ಹಾಗೆ ಈ ಆನೆ ಯಾವುದು ಗೊತ್ತ ??? ನಮ್ಮ ಮೈಸೂರಿನ ದಸರಾಕ್ಕೆ ಪ್ರತೀ ವರ್ಷ ಆಗಮಿಸುವ " ಅರ್ಜುನ " ಎಂಬ ಗಂಡಾನೆ. ತುಂಟ ಸ್ವಭಾವದವನಾದ ಇವನು ಆಗಾಗ ಎಡವಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಅಂತಾ ಅಂದು ಕೊಳ್ಳುತಿದ್ದಂತೆ  ವೇಣು ಬನ್ನಿ ಬನ್ನಿ  ಡಿ.ಬಿ. ಕುಪ್ಪೆ ಗೆ ಹೋಗ್ಬೇಕು  ಲೇಟಾಗುತ್ತೆ ಅಂದ್ರು . ಬರ್ತೀನಿ ಲೇಟಾಯ್ತು.ಮುಂದಿನ  ಸಂಚಿಕೆಯಲ್ಲಿ  ...ಅತ್ತ ಕೇರಳ  ಇತ್ತ  ಕರ್ನಾಟಕ  !!!!

    Tuesday, November 9, 2010

    ಕಾನನದ ದೇವಿಯ ಮಡಿಲಿಗೆ ಮೊದಲ ಹೆಜ್ಜೆ !! ಬಳ್ಳೆ ಮಾಡಿದ ಮೋಡಿ!!!ಹುಲಿರಾಯನ ದರ್ಶನ !!!

    ಹುಲಿಯ ಹೆಜ್ಜೆ ಗುರುತು


    ಕಾಡಿನ ಸೆಳೆತ ಒಬ್ಬೊಬ್ಬರಿಗೆ ಒಂದೊಂದು ಅನುಭವ  ನೀಡುತ್ತದೆ . ನನ್ನ ಎರಡನೇ ಕಂತನ್ನು ಸಹೋದರಿಬಿ.ಸೌಮ್ಯ ರವರ "ಹುಚ್ಚು ಮನಸಿನ ಹತ್ತೆಂಟು ಕನಸುಗಳು " ಬ್ಲಾಗಿನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ" ಅರಣ್ಯ ಹಾಗು ನದಿ"   ಕವಿತೆಯ ಕೆಲವು ಸಾಲಿನಿಂದ[ ಅವರ ಅನುಮತಿ ಪಡೆದು ] ಶುರುಮಾಡುತ್ತೇನೆ. ಸುಂದರ ಸಾಲುಗಳಲ್ಲಿ ಅರಣ್ಯ ಹಾಗು ನದಿಯ ಬಗ್ಗೆ  ಸುಂದರ ವರ್ಣನೆ ಇದೆ . ಯಾವೊಬ್ಬರಿಗೂ ಎಂದೂ ತಿಳಿಯುವುದೇ ಇಲ್ಲ
    ನನ್ನನ್ನು ಇತರರು ಹೇಗೆ ಭಾವಿಸುತ್ತಾರೆ ಎಂದು.
    ಮಾನವ ನಿಜವಾಗಿ ಬದುಕುತ್ತಿದ್ದಾನೋ ಅಥವಾ
    ಅವನೊಂದು ನೆರಳು ಮಾತ್ರವೋ ?
    ಹೀಗೆಂದು ಪ್ರಶ್ನಿಸುವವರೇ ಇಲ್ಲ .
    ಗೊತ್ತು ಗುರಿ ಇಲ್ಲದೆ ನೆರಳಿನಲ್ಲಿ ಅಲೆಯುವ ಮಾನವ
    ಕೊನೆಗೆ ಕೇಳಿಕೊಳ್ಳುತ್ತಾನೆ ತನ್ನಲ್ಲೇ..
    ನಾನು ಯಾರು ?
    ನದಿಯೋ? ಅರಣ್ಯವೋ?
    ಅಥವಾ ಅವೆರಡೋ ?
    ಪ್ರಶ್ನೆ ಪ್ರತಿಧ್ವನಿಸಿ ಉತ್ತರ ಸಿಗುವುದು ಹೀಗೆ

     ನದಿ ಮತ್ತು ಅರಣ್ಯ'....! ವಾಹ್ ಎಂತಹ ಸಾಲುಗಳಲ್ವ ಕಾಡಿನಲ್ಲಿ ಅಲೆಯುವ ನನಗೆ ಒಮ್ಮೊಮ್ಮೆ ಹೀಗೆ ಆನಿಸುತ್ತದೆ.ನಮ್ಮ  ಮೊದಲ ಕಾಡಿನ ಅನುಭವ ಹೀಗೆ ಶುರುವಾಯಿತು.

    ಮೈಸೂರಿನಿಂದ ಹುಣಸೂರಿನ ಮೂಲಕ ಸಾಗಿ ಹೆಗ್ಗಡದೇವನ ಕೋಟೆ ತಲುಪಿ ನಂತರ ನಾವು ಸಂಜೆ ತಲುಪಿದ ಜಾಗ " ಬಳ್ಳೆ" ಎಂಬ ಜಾಗಕ್ಕೆ .ಇದು ಕಾರಾಪುರ ಮಾನಂದ ವಾಡಿ ರಸ್ತೆಯಲ್ಲಿ ಬರುವ " ನಾಗರ ಹೊಳೆ' ರಕ್ಷಿತಾರಣ್ಯ ಕ್ಕೆ ಸೇರಿದ್ದು ಪ್ರವಾಸಿಗಳಿಗೆ  ನಿಶಿದ್ದ ಪ್ರದೇಶ !!, ಅರಣ್ಯ ಇಲಾಖೆಯ ಅಧಿಕಾರಿಗಳ  ಅನುಮತಿ  ಪಡೆದಿದ್ದ ನಮಗೆ [ಅನುಮತಿ ನೀಡುವ ಮೊದಲು ನಮ್ಮ ಬಗ್ಗೆ ವಿವರ ಪಡೆದಿದ್ದರು ]ಅಲ್ಲಿ ಉಳಿಯಲು  ತಡೆಯಾಗಲಿಲ್ಲ. ತಲುಪುವ ವೇಳೆಗೆ  ಸಂಜೆಯ ವೇಳೆ ಆಗಿತ್ತು. ಆದರದಿ ಸ್ವಾಗತಿಸಿದ ಅಲ್ಲಿನ ಅಧಿಕಾರಿ  ಕಾಫಿ ನೀಡಿ ಸತ್ಕರಿಸಿ  ಪರಿಚಯಿಸಿಕೊಂಡರು.ಬನ್ನಿ ಸಾರ್ ಒಂದು ರೌಂಡು ಹೋಗೋಣ ಅಂತಾ ನಮ್ಮನ್ನು ಕರೆದುಕೊಂಡು ಕಾಡಿನ ಒಳಗೆ ಹೋದರು ನಮಗೋ ಹಿಗ್ಗೋ ಹಿಗ್ಗು ಅರಣ್ಯದೊಳಗೆ ಕಾಲಿಟ್ಟ ಸಂತಸ ಕ್ಷಣ ಮುಧನೀಡಿತ್ತು.ಜೀಪಿನಲ್ಲಿ ಹೊರಟ ನಾವು ಅರಣ್ಯದಲ್ಲಿ ಕ್ಯಾಮರ ಸಿದ್ದ ಪಡಿಸಿಕೊಂಡು  ಬಳ್ಳೆ ಯಿಂದ ಕೈಮರ ಎಂಬ ಜಾಗಕ್ಕೆ ಹೊರಟಿದ್ದೆವು.ಸುಮಾರು ನಾಲ್ಕು ಕಿ.ಮಿ.ಕ್ರಮಿಸಿದ ನಮಗೆ ಗೇಂ   ರೂಟಿನ [ಅರಣ್ಯ ಇಲಾಖೆ ವಾಹನಗಳು ಗಸ್ತು ತಿರುಗುವ ಹಾದಿ ಗೆ ಹಾಗೆ ಕರೆಯುತ್ತಾರೆ ] ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡ ಹುಲ್ಲುಗಳ ಹಾದಿಯಲ್ಲಿ ಬೆಳೆದಿದ್ದ ಪೊದೆಗಳ ಸಾಲು ಸಿಕ್ಕಿತ್ತು. ಮುಂದೆ ಕುಳಿತಿದ್ದ  ನನ್ನ ಸಹೋದರ ವೇಣು " ಹುಲಿ ಹುಲಿ " ಮೆಲುದನಿಯಲ್ಲಿ ಉಸುರಿದರು




    ಚಿತ್ರಕೃಪೆ    ಅಂತರ್ಜಾಲ


    ದಟ್ಟ ಕಾನನದ ಮಧ್ಯೆ  ಜೀಪಿನಿಂದ ಕೇವಲ ಕೆಲವೇ ಅಡಿಗಳ ದೂರದಲ್ಲಿ  ಹುಲಿರಾಯ ದರ್ಶನ ನೀಡಿದ್ದ !! ಹುಲಿ ನೋಡಲು ಆಸೆ ಯಿಂದ ಎಲ್ಲರು ತವಕಪಡುತ್ತಿರುವಾಗ ಡ್ರೈವರ್ ಸ್ವಲ್ಪ ಜೀಪನ್ನು ಸ್ವಲ್ಪ ಮುಂದೆ ಕೆಲವು ಅಡಿ ಮುನ್ನಡೆಸಿದ್ದರು. ಸ್ವಲ್ಪ ಮುಂದೆ ಬಂದ ಜೀಪು ಗೊರ ಗೊರ ಅಂದು  ಸದ್ದುಮಾಡಿ ನಿಂತೇ ಬಿಟ್ಟಿತು. ಬಾಲೂ ಸಾರ್ ಸ್ವಲ್ಪ ನಿಮ್ಮ ಕಾಲನ್ನು ಬ್ಯಾಟರಿ ಮೇಲಿಂದ  ತೆಗಿರೀ ಅಂದ್ರೂ . ಕೆಳಗೆ ಇಳಿಯಲು ಎಲ್ಲರಿಗೂ ಭಯ  ಹುಲಿರಾಯ ನಮ್ಮಿಂದ ಕೆಲವೇ ಅಡಿಗಳ ಅಂತರದಲ್ಲಿ [ಅಂದಾಜು ಹತ್ತು ಅಡಿ ]ಪೊದೆಯೊಳಗೆ  ನಮ್ಮನ್ನು ಲೆಕ್ಕಿಸದೆ ಕುಳಿತಿದ್ದ.ನಮಗೋ ಇಂತಹ ಅನುಭವ ಜೀವಮಾನದಲ್ಲ್ಲಿ ಹೊಸದು!!!,  . ಕತ್ತಲು ಬೇರೆ  ನಮಗಿದ್ದ ಧೈರ್ಯ ಅಂದ್ರೆ ಡಿಸ್ಕವರಿ , ನ್ಯಾಷನಲ್ ಜಿಯೋಗ್ರಫಿ  ಚಾನಲ್ ನೋಡಿದ್ದ ಅನುಭವ ಅಷ್ಟೇ . ನಮ್ಮ ಜೊತೆಗಿದ್ದ ಅರಣ್ಯಾಧಿಕಾರಿ ಪಿಸು ಮಾತಿನಲ್ಲಿ   ಹೆದರಬೇಡಿ  ಹಾಗೆ ಕುಳಿತಿರಿ ಅಂದ್ರೂ, ದಟ್ಟ ಅರಣ್ಯದ ಮಧ್ಯೆ ಹುಲಿಯ ಸನಿಹದಲ್ಲಿ ಕೆಟ್ಟು ನಿಂತಿರುವ ಜೀಪಿನೊಳಗೆ ರಾತ್ರೀ ವೇಳೆ ಅಲುಗಾಡದೆ ಕುಳಿತು ಪೊದೆಯೊಳಗೆ ಅಡಗಿದ್ದ ಹುಲಿಯನ್ನು ನೆನೆಯುತ್ತಾ ಸುಮಾರು ಮುಕ್ಕಾಲು ಘಂಟೆ ಅಲುಗಾಡದೆ ಉಸಿರು ಬಿಗಿಹಿಡಿದು  ಕುಳಿತಿದ್ದೆವು.ಸ್ವಲ್ಪ ಸಮಯದಲ್ಲಿ ವಾಚರ್ ಒಬ್ಬರು ಸಾ ಹುಲಿ ಓಯ್ತು ಅಂದ್ರು !!! ಸರಿ ತಾಳಿ ಸಡನ್ನಾಗಿ ಇಳೀಬೇಡಿ ಅಂತಾ ಅರಣ್ಯಾಧಿಕಾರಿಗಳು ಮೊದಲು ತಾವು ಇಳಿದು ಸ್ವಲ್ಪ ಸಮಯದ  ನಂತರ ನಮ್ಮನ್ನು ಇಳಿಯಲು ಹೇಳಿದರು. ಹುಲಿಎನೋ ಹೋಯ್ತು  ಆ ಭಯದಲ್ಲಿ ಫೋಟೋ ತೆಗೆಯುವ ಕೈಗಳು ಕ್ಯಾಮರಾವನ್ನು ಕೆಳಗಿಟ್ಟು ಹುಲಿಯ ಫೋಟೋ ತೆಗೆಯಲು ನಿರಾಕರಿಸಿದ್ದವು .ಮುಂದಿನ ಕಾರ್ಯ ಕೆಟ್ಟ ಜೀಪಿನ ರಿಪೇರಿ; ಒಬ್ಬೊಬ್ಬರಾಗಿ ಇಳಿದ ನಾವು ಜೀಪಿನ  ಮುಂಬಾಗ ಬಂದು ತಲೆಗೆ ಕಟ್ಟಿಕೊಂಡಿದ್ದ ಲೈಟ್ ಆನ್ ಮಾಡಿದೆವು .ಜೀಪಿನ ಬ್ಯಾಟರಿ ಸರಿಯಾಗಿತ್ತು ಬಾನೆಟ್ ತೆಗೆದು ನೋಡಿದರೆ ವೈರು ಶಾರ್ಟ್ ಸರ್ಕ್ಯುಟ್ ಆಗಿ ಬೆಂದು ಹೋಗಿತ್ತು. ಸರಿ ರಿಪೇರಿ ಪ್ರಾರಂಭ ನಮ್ಮ ತಂಡದ ಸದಸ್ಯರೇ ಸೇರಿ ವೈರನ್ನು ಡೈರೆಕ್ಟ್  ಲಿಂಕ್ ಮಾಡಿ ಗಾಡಿಯನ್ನು ಸ್ಟಾರ್ಟ್ ಮಾಡಿದರು. ತುಂಬಾ ಹೊತ್ತಾಯ್ತು; ಕೈಮರ ಬೇಡ ವಾಪಸ್ಸು ಹೋಗೋಣ ಅಂತಾ ತೀರ್ಮಾನಿಸಿ ಜೀಪನ್ನು ಹಿಂದಕ್ಕೆ ತಿರುಗಿಸೋಣ ಅಂದ್ರೆ ಜಾಗ ಇದ್ರೆ ತಾನೇ ಹಾದಿಯ ಇಕ್ಕೆಲಗಳಲ್ಲೂ ಪೊದೆ ಮರಗಳಿಂದ  ಜೀಪ್ ತಿರುಗಿಸಲು ಆಗದ ಪರಿಸ್ತಿತಿ.ಸರಿ ನಮ್ಮ ಡ್ರೈವರ್ ಸೈಯದ್ ಸಾಹೇಬರು ಬುಡಿ ಸಾ ರಿವರ್ಸ್ ನಲ್ಲೆ ಹೋಗೋಣ ಅಂತಾ ಸುಮಾರು ಒಂದು ಕಿ.ಮಿ. ರಿವರ್ಸ್ ನಲ್ಲೆ ಜೀಪನ್ನು ಸಾಗಿಸಿ ನಂತರ ಸಿಕ್ಕ ಒಂದು ಜಾಗದಲ್ಲಿ ರಿವರ್ಸ್ ತೆಗೆದು ಮುಖ್ಯ ರಸ್ತೆ ತಂದು ನಮ್ಮನ್ನು ಜೋಪಾನವಾಗಿ; ಮೊದಲಿನ ಜಾಗಕ್ಕೆ ಸೇರಿಸಿ ನಿಟ್ಟುಸಿರು ಬಿಟ್ಟರು .ನಂತರ ಅಲ್ಲಿದ್ದ ರೂಮುಗಳಲ್ಲಿ ಸಿದ್ದವಿದ್ದ ಆಹಾರ ಸೇವಿಸಿ ರಸ್ತೆಯಲ್ಲಿ ಮತ್ತೊಂದು ಸುತ್ತು ಸುಮಾರು ಎರಡು ಮೂರು ಕಿ.ಮಿ. ಹೋಗಿ ಬಂದು ಕೆಲವು ಕಾಡೆಮ್ಮೆ ಹಾಗು ಜಿಂಕೆಗಳನ್ನು ಕಣ್ತುಂಬ ನೋಡಿ ಬಂದು ಮಲಗಿದೆವು. ರಾತ್ರಿ ವೇಳೆ ತೆಗೆದ ಫೋಟೋಗಳು ಅಂದು ಕೊಂಡ ರೀತಿ ಬರದ ಕಾರಣ ನೋಡಿದ್ದಷ್ಟೇ ಭಾಗ್ಯ ಅಂತಾ ನಿದ್ರೆಗೆ ಜಾರಿದೆವು. ನನ್ನ ಮನಸ್ಸಿನಲ್ಲಿ ಅರಣ್ಯಾಧಿಕಾರಿ ಹೇಳಿದ್ದ ಮಾತು ""ಸಾರ್ ನೀವು ಪುಣ್ಯಾ ಮಾಡಿದ್ರೀ ಸಾವಿರಾರು ರುಪಾಯಿ ಖರ್ಚು ಮಾಡಿ ಇಲ್ಲಿಗೆ ಬಂದು ಜಂಗಲ್ ಲಾಡ್ಜ್ ನಲ್ಲಿ ಉಳಿದು ಹಲವಾರು ದಿನ ಅಲೆಯೋ ಜನರಿಗೆ ಹುಲಿ ಸಿಗೋಲ್ಲ ಆದ್ರೆ ನಿಮ್ ಅದೃಷ್ಟ ನೋಡಿ  " ಅನ್ನೋ ಮಾತು


    ಹುಲಿಯ ಹೆಜ್ಜೆ ಗುರುತು


    ಮನದಲ್ಲಿ ಹಾಗೆ ಉಳಿದು ಮನದಲ್ಲಿ ಮಂಡಿಗೆ ತಿನ್ನುತ್ತಾ ನಿದ್ರೆಗೆ ಜಾರಿದ್ದೆ.ಹುಲಿಯ ಹೆಜ್ಜೆಯಂತೆ  ಈ ಮಾತು ಮನದಲ್ಲಿ ಉಳಿದು ಕನಸುಗಳೂ ಸಹ ಹೆದರಿಕೊಂಡು ಅವಿತುಕೊಂಡು  ಕನಸಿಲ್ಲದ ರಾತ್ರಿಯಲ್ಲಿ ಘಾಡ ನಿದ್ದೆ ಹೊಡೆದಿದ್ದೆ.!!!  ನಿದ್ದೆ ಮಾಡುತ್ತೇನೆ  ತಾಳಿ  ಮುಂದಿನ ಸಂಚಿಕೆಯಲ್ಲಿ ಬಾಕಿ ಪುರಾಣ ಓದೋರಂತೆ. ಅಲ್ಲಿವರ್ಗೆ  ನಿಮಗೆ ವಂದನೆಗಳು .  

    Tuesday, November 2, 2010

    ಕಾನನದ ಮಡಿಲಲ್ಲಿ ಕಬಿನಿಯ ಸೆರಗಲ್ಲಿ ನೆನಪಿನ ಬುತ್ತಿ !!!

    ಕಾನನದ ಮಡಿಲಲ್ಲಿ
     


    ಈ ಹಾಡು ಕೇಳಿದಾಗ ಏನೇ ಕೆಲಸವಿದ್ದರೂ ಹಾಗೆ ನಿಂತು ಬಿಡುತ್ತೇನೆ.ಇನ್ನು ಟಿ.ವಿ. ನಲ್ಲಿ ಬಂದರೆ ನೋಡುತ್ತಾ ಮೈಮರೆಯುತ್ತೇನೆ ಹಸಿರ ಕಾನನದ ವರ್ಣನೆ ನನ್ನನ್ನು ಮಂತ್ರ ಮುಗ್ದ ಗೊಳಿಸುತ್ತದೆ.   ಬಹಳ ದಿನಗಳಿಂದ ಈ ಪೋಸ್ಟ್ ಪ್ರಕಟಿಸಬೇಕೆಂಬ  ಆಸೆ ಇತ್ತು ಕಬಿನಿಯ ಮಡಿಲ ಕಾಕನ ಕೋಟೆ ಅರಣ್ಯ ದಲ್ಲಿನ ಚಿತ್ರಗಳು ಪದೇ ಪದೇ  ಕಾಡಿ ಈ ಕಾಡಿನ ಅನುಭವಗಳನ್ನು ನಿಮ್ಮ ಮುಂದೆ ಇಡಲು ಪ್ರೇರೇಪಿಸಿ ಇಂದು ಅದು ನನಸಾಗಿದೆ. ನಮ್ಮ ಮನೆ ದೇವರ ಸನ್ನಿಧಿಗೆ ತೆರಳುವಂತೆ ಈ ಕಾಡಿಗೆ ಪ್ರತೀವರ್ಷ  ಸುಮಾರು ಐದು ಸಾರಿತೆರಳಿ  ಅಲ್ಲಿನ ಕಾನನದ ವೈಭವವನ್ನು ಅನುಭವಿಸಿದ್ದೇನೆ. ಇದಕ್ಕೆ ಸ್ಪೂರ್ತಿಯಾಗಿ ನನ್ನ ಆತ್ಮೀಯ ಸಂಬಂಧಿಗಳು   [ಹೆಂಡತಿಯ ಇಬ್ಬರು ತಂಗಿಯರ  ಪತಿರಾಯರುಗಳು ,ಹಾಗು  ನಮ್ಮ ಭಾವ  ಇವರುಗಳು ಇದೆ ರೀತಿ ಮನೋಭಾವ ಹೊಂದಿ ಜೊತೆಗಿದ್ದರು ] ಹೌದು ನಾವು ಮೂವರು ಅಳಿಯಂದಿರು ನನ್ನ ಮಾವನ ಮನೆಗೆ , ಎಲ್ಲರೂ ಬೇರೆ ಬೇರೆ ಕುಟುಂಬದಿಂದ ಬಂದಿದ್ದರೂ ಅಣ್ಣ ತಮ್ಮಂದಿರ ತರಹ ಸಲಿಗೆ ,ಪ್ರೀತಿ ವಿಶ್ವಾಸವಿದೆ.ಜೊತೆಗೆ ನಮ್ಮ ಹವ್ಯಾಸಗಳೂ ಸಹ  ಒಂದೇ ಆಗಿವೆ .ಹಾಗಾಗಿ ನಮ್ಮಲ್ಲಿ ಬಿನ್ನಾಬಿಪ್ರಾಯ ಇಲ್ಲ . ಹಾಗೆ ಈ ಕಾಡು ಸುತ್ತುವ ಹವ್ಯಾಸ.ಪ್ರತೀವರ್ಷ ನಾವುಗಳು ಕಾಡಿಗೆ ಹೋಗಿಯೇ ಸಿದ್ಧ . ನಮ್ಮ ನೆಂಟರೂ ಸಹ ಏನ್ ಅಳಿಯಂದ್ರೆ ಕಾಡಿಗೆ ಹೋಗಿಲ್ವಾ ಅಂತಾ ಚುಡಾಯಿಸ್ತಾರೆ. ಕಾಡಿನಲ್ಲಿ ನಮ್ಮ ಅನುಭವ ಬಹುಕಾಲ  ನೆನಪಿನಲ್ಲಿ ಉಳಿದಿದೆ.ಬನ್ನಿ ನಮ್ಮ ಕಾನನದ ನೆನಪಿನ ಲೋಕಕ್ಕೆ  ಹೋಗೋಣ.ಬಾಲ್ಯದಿಂದಲೂ ನನಗೆ ಈ ಕಾಡಿನ ಬಗ್ಗೆ ಸೆಳೆತ ಯಾಕೆ? ಅಂಥಾ ಗೊತ್ತಿಲ್ಲ , ಚಿಕ್ಕವನಿದ್ದಾಗ ನಾನು ನನ್ನ ಹಳ್ಳಿಯಿಂದ ನನ್ನ  ಅಜ್ಜಿಯ ಜೊತೆ  ಅವಳ  ಸಹೋದರಿಯರ ಹಾಗು ನನ್ನ ಸೋದರ ಮಾವಂದಿರ ಮನೆಗೆ   ಹುಣಸೂರಿನ ಸಮೀಪದ" ಚೆನ್ನಸೋಗೆ'' ಎಂಬ ಹಳ್ಳಿಗೆ ರಜೆಕಳೆಯಲು ಹೋಗುತ್ತಿದ್ದೆ.ಪ್ರತಿಭಾರಿಯೂ ಅಲ್ಲಿ ಕನಿಷ್ಠ ಹತ್ತರಿಂದ ಹದಿನೈದು ದಿನಗಳ ವಾಸ್ತವ್ಯ ಇರುತ್ತಿದ್ದೆವು.ಪ್ರತಿ ನಿತ್ಯ ಮಲಗುವಾಗ ನನ್ನ ಸೋದರ ಮಾವಂದಿರು ಪಕ್ಕದಲ್ಲಿ ಮಲಗಿಸಿಕೊಂಡು ನನಗೆ ಕಾಡಿನ ಕಥೆಗಳನ್ನು ಹೇಳುತ್ತಿದ್ದರು.ಪಕ್ಕದಲ್ಲೇಅಂದರೆ  ಸುಮಾರು ಹದಿನೈದುಕಿ.ಮಿ.ಇದ್ದ ನಾಗರ ಹೊಳೆಯ ಕಾಡಿನಬಗ್ಗೆ ಅಲ್ಲಿನ ವನ್ಯ ಜೀವಿಗಳ ಬಗ್ಗೆ ಪ್ರತಿರಾತ್ರಿ  ಒಂದೊಂದು ಕಥೆ ಕೇಳಿಯೇ ನಾನು ಮಲಗುತ್ತಿದ್ದುದು.ಹಾಗೆ ಬೆಳೆಯುತ್ತಾ ನನಗೆ ಕಾಡನ್ನು ನೋಡುವ ಬಯಕೆ ಮೊಳಕೆಯೊಡೆಯಲು ಪ್ರಾರಂಭವಾಗಿತ್ತು.ಅಂದು ಚಿಕ್ಕಹುಡುಗನಾಗಿದ್ದಾಗ  ನನ್ನ ದೃಷ್ಟಿಯಲ್ಲಿ ಕಾಡಿಗೆ ಹೋದ ಕೂಡಲೇ  ಎಲ್ಲಾ ಪ್ರಾಣಿಗಳು ಸಾಲಾಗಿ ನಿಂತು ನನ್ನನ್ನು ಸ್ವಾಗತಿಸಿ ಹಾಯ್ ಹೇಳುತ್ತವೆ!!! ಅಂತಾ ಆಶಾಭಾವ.ಹಾಗು ಎಲ್ಲಾ ಪ್ರಾಣಿಗಳನ್ನೂ ಮುಟ್ಟಿ ಸವರಿ ಚಲನಚಿತ್ರಗಳಲ್ಲಿ ಆಗುವಂತೆ ಅವುಗಳೊಂದಿಗೆ ಆಟವಾಡುವ ಆಸೆ.ಸರಿ ನನ್ನನ್ನು" ನಾಗರ ಹೊಳೆಗೆ " ಕರೆದುಕೊಂಡು ಹೋಗಲು ಸೋದರ ಮಾವಂದಿರನ್ನು ಪೀಡಿಸಲು ಶುರುಮಾಡಿದೆ.ಅವರೂ ಪಾಪ ನನ್ನ ಆಸೆಯನ್ನು ಹೇಗೆ ತೀರಿಸ ಬಹುದೆಂಬ ಕಲ್ಪನೆಯೇ ಇಲ್ಲದೆ ನೋಡು ಮಗೂ ಹುಣಸೂರಿನಿಂದ" ನಾಗರ ಹೊಳೆ'ಗೆ ಇವತ್ತು ಬಸ್ಸು ಇಲ್ವಂತೆ ಇನ್ನು ಮೂರುದಿನದ ನಂತರ ಹೋಗೋಣ ಬಿಡು ಅನ್ನುತಿದ್ದರು ಮೂರುದಿನಗಳನ್ನು ಆಸೆಯಿಂದ  ಕಳೆದ ನಾನು ಮತ್ತೆ ಕೇಳಿದಾಗ ಮತ್ತೊಂದು ಸಬೂಬು ಎದುರಾಗುತ್ತಿತ್ತು.ಹೀಗೆ ಇದೆ
    ಅನುಭವದ ಪುನರಾವರ್ತನೆ ಹಲವು ವರ್ಷಗಳು ನಡೆದು ಚಿಕ್ಕ ವಯಸ್ಸಿನಲ್ಲಿ ಕಾಡು ನೋಡುವ ಆಸೆ ಮುರುಟಿಹೋಗಿತ್ತು.




    ಹಾಗೆ ಜೀವನ ಚಕ್ರ ಉರುಳಿ ಗೆಳೆಯರೊಂದಿಗೆ ಕಾಡು ನೋಡುವ ದಿನ ನಾನು ಪಿ.ಯು.ಸಿ. ಯಲ್ಲಿದ್ದಾಗ ಬಂತು.ಕಾಡಿಗೆ ಉತ್ಸಾಹದಿಂದ ಹೋರಾಟ ನಾನು ಮೊಜುಮಾಡಲು ಬಂದಿದ್ದ ನನ್ನ ಗೆಳೆಯರು ಕಾಡು ನೋಡಿದ ಬಗೆ ವಿಚಿತ್ರವಾಗಿತ್ತು,ಕಾಲೇಜಿನ ಹುಡುಗರು ನಾವುಗಳು ,ನಾಗರ ಹೊಳೆ ಅರಣ್ಯ ನೋಡಲು ಹೊರಟೆವು ಯಾರಿಗೂ ಸರಿಯಾದ ಕಲ್ಪನೆ ಕಾಡಿನ ಬಗ್ಗೆ ಇರಲಿಲ್ಲ ನಾಗರ ಹೊಳೆ ತಲುಪಿದ ನಾವು ಮೊದಲು ಮಾಡಿದ ಕೆಲಸ ಸಾರ್ ಇಲ್ಲಿ ಒಳ್ಳೆ ಹೋಟೆಲ್ ಇದ್ಯಾ? ಅಂತಾ ಕೇಳಿ ನಗೆ ಪಾಟಲಿಗೆ ಈಡಾಗಿದ್ದೆವು.ಸಫಾರಿಗೆ ತೆರಳಿ ನಾವು ಮೊದಲು  ನೋಡಿದ ಪ್ರಾಣಿ ಆನೆ ಸಫಾರಿ ವ್ಯಾನಿನ ಚಾಲಕರಿಗೆ  ಸಾರ್ ಸ್ವಲ್ಪ ನಿಲ್ಸಿ ಕೆಳಗಡೆ ಇಳಿದು ಒಂದುಫೋಟೋ  ತೆಗೀತೀನಿ ಅಂದಿದ್ದೆ.ಅದಕ್ಕೆ ಆ ಚಾಲಕ ರೀ ಸುಮ್ನಿರ್ರಿ ಓ ಕೆಳಗೆ ಇಳಿತಾರಂತೆ ಅಂದು ಇಲ್ಲೆಲ್ಲಾ ಪಟ್ಟಣದತರ ಅಲ್ಲಪ್ಪ ಪ್ರಾಣಿಗಳು ಅಟ್ಯಾಕ್ ಮಾಡುತ್ತೆ ಅಂದರು ,



     ನೋಡಿಇವನೇ ಅರ್ಜುನ ಅಂಬಾರಿ ಹೊರುತ್ತಾನೆ
     




    ನಂಗೆ ಆಶ್ಚರ್ಯ!! ಅಲ್ಲಾ ಆನೆ ಫೋಟೋ ತೆಗೆದರೆ ಆನೆಗೆ ಕೊಪಾ ಯಾಕೆ ಬರುತ್ತೆ ?? ಅನ್ಕೊಂಡೆ !!!.  ನಾನಾದರೂ ಏನ್ ಮಾಡ್ಲಿ ನಾನು ಓದಿದ ಯಾವ ಶಾಲೆಯಲ್ಲೂ ಕಾಡಿನ ಪ್ರಾಣಿಗಳ ಜೊತೆ ನಾವು ಯಾವ ರೀತಿ ವ್ಯವಹರಿಸಬೇಕೆಂದು ಯಾವ ಶಿಕ್ಷಕರೂ ಹೇಳಿ ಕೊಟ್ಟಿರಲಿಲ್ಲ!!!ಹಾಗು ಯಾವ ಪುಸ್ತಕವೂ ಈ ಬಗ್ಗೆ ಪಟ್ಯವಾಗಿರಲಿಲ್ಲ!! ನಾನು ನನ್ನ ಮಿತ್ರರು ಪ್ರತಿ ಪ್ರಾಣಿ ಕಂಡಾಗಲೂ ಕಾಡಿನ ನಿಶಬ್ಧತೆಯನ್ನು ಹಾಳುಮಾಡುವಂತೆ ಕಿರುಚಿ!!; ನಾವೇ ಪ್ರಾಣಿಗಳಂತೆ ಆಡಿ ಅವುಗಳಿಗೆ ತೊಂದರೆ ಕೊಟ್ಟುವಿಕೃತ ಸಂತೋಷ ಅನುಭವಿಸಿಬಂದಿದ್ದೆವು.ಕಾಡಿನ ಬಗ್ಗೆ ಸ್ಪಷ್ಟ ಚಿತ್ರಣ ದೊರೆತಿದ್ದು ಪುಸ್ತಕ ಓದಲು ಪ್ರಾರಂಭಿಸಿ ದಾಗ ಹಾಗು ಕಾಡಿನ ಬಗ್ಗೆ ಇಂಗ್ಲೀಶ್ ಸಿನೆಮಾ ನೋಡಿದಾಗ.ಅಲ್ಲಿಯವರೆಗೂ ನಾನು; ಅಜ್ಞಾನದ ಸಾಗರದ ಒಡೆಯನಾಗಿದ್ದೆ !!!!ಕಾಡಿನ ದಾರಿಯಲ್ಲಿ ಸಾಗುವಮೊದಲು ಕಾಡಿನ ಬಗ್ಗೆ ತಿಳಿಯಲು ಸ್ವಲ್ಪ ವಿರಮಿಸೋಣ ಆಲ್ವಾ. ನನ್ನ ದೃಷ್ಟಿಯಲ್ಲಿ .ಕಾಡು ಹಾಗಂದ್ರೇನು??? ಇನ್ನೂ ಮುಂತಾದ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳುವೆ ವಂದನೆಗಳು.

    Thursday, October 28, 2010

    ಕನ್ನಡ ಹಬ್ಬ ಬಂದಿದೆ ನೋಡಾ !! ಕನ್ನಡ ಮನವು ನಲಿದು ಹಾಡಿದೆ ಹಾಡ !!!

    ಕನ್ನಡ ನಾಡಿನ ಪ್ರತೀ ಕಾನನದಲ್ಲಿಯೂ ಪ್ರಕೃತಿ ಕನ್ನಡ ಕಂಪನ್ನು ಬೀರಿ ವನ ಸಿರಿಯ ಮೂಲೆಮೂಲೆಗಳಲ್ಲಿ ವನ್ಯ ಜೀವಿಗಳು ನಲಿದಿರಲು , ಕಣ್ಣಾರೆ ಕಂಡ ನನ್ನ ಜೀವನ ಪಾವನ ವಾಗಿದೆ."ಉದಯವಾಗಲಿ  ನಮ್ಮ  ಚೆಲುವಕನ್ನಡ ನಾಡು"  ಎಂದು  ಪಿ .ಕಾಳಿಂಗರಾಯರು  ಹಾಡಿದ  ಗೀತೆ  ಚಿಕ್ಕಂದಿನಲ್ಲಿ ಕೇಳುತ್ತಾ ಬೆಳೆದವನು  ನಾನು. ಕನ್ನಡದ ಕವಿಗಳ ಕವಿತೆಗಳು , ಕನ್ನಡ ಲೇಖಕರ ಕಥೆಗಳು  ,ಕನ್ನಡ ಸಂಸ್ಕೃತಿ , ಕನ್ನಡ ಭಾಷೆ ,ಕನ್ನಡ ಮಣ್ಣಿನ ಅನ್ನ, ನೀರು , ಕನ್ನಡ ನಾಡಿನ ಕಾನನ   ಕನ್ನಡ ಮಾತು ಇವೆಲ್ಲವೂ ನನ್ನನ್ನುಹೆಮ್ಮೆಯ  ಕನ್ನಡಿಗನನ್ನಾಗಿ ಮಾಡಿವೆ .ಇದು ನನ್ನ ಹೃದಯದಿಂದ ಬಂದ ಮಾತುಗಳು.ಕನ್ನಡ ಹಬ್ಬ ಬರುತ್ತದೆ  ಹೋಗುತ್ತದೆ  ಕನ್ನಡ ಮಾತಿಗೆ ನಲಿವ ನನ್ನ  ನಾಲಿಗೆ ನಿರಂತರ ಉಳಿಯುತ್ತದೆ.ನನ್ನ ಕನಸಿನಲ್ಲಿ ರಂಗನ್ನು ನೀಡುವ ಭಾಷೆ ನನ್ನ ಮುದ್ದಿನ ಕನ್ನಡ ಭಾಷೆ.ನನ್ನ ತಾಯಿ ನನಗೆ  ಕಲಿಸಿದ ಮಾತೃ ಹೃದಯದ  ಭಾಷೆ ಕನ್ನಡ ಭಾಷೆ, ಇವುಗಳಿಂದ ನಾನು ಕನ್ನಡಿಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ಎಂದು ಒಂದು ಸಮಾರಂಭದಲ್ಲಿ  ಕನ್ನಡ ದಲ್ಲಿ ಭಾಷಣ ಬಿಗಿಯುತ್ತಿದ್ದೆ ನೆರೆದಿದ್ದ  ಜೋರಾಗಿ ಚಪ್ಪಾಳೆ  ಹೊಡೆಯುತ್ತಿದ್ದರು . ಇನ್ನೇನು ನನಗೆ ಸನ್ಮಾನ ವಾಗಬೇಕು ಎನ್ನುವ ಸಮಯದಲ್ಲಿ ನನ್ನ ಪತ್ನಿ ರೀ ಎದ್ದೇಳಿ ಒಳ್ಳೆ ಮದ್ಯಾಹ್ನ ಮಲಗಿದ್ದೀರಲ್ಲಾ ಊಟ ಮಾಡಲ್ವಾ !! ಅಂತ ಎಬ್ಬಿಸಿ ನನಗೆ ಕನಸಿನಲ್ಲಿ  ನಡೆಯುತ್ತಿದ್ದ ಸನ್ಮಾನಕ್ಕೂ ಕಲ್ಲು ಹಾಕಿದಳು.ಎಂತಹ ಒಳ್ಳೆಯ ಕನಸು ಸ್ವಾಮೀ ಎಲ್ಲಾ ಹಾಳು ಮಾಡಿಬಿಟ್ಟಳೂ ಅಂತಾ ಮನದಲ್ಲಿ ಹೆಂಡತಿಯನ್ನು ಶಪಿಸಿಕೊಂಡು ಕ್ಯಾಲೆಂಡರ್ ನೋಡಿದ್ರೆ ಇನ್ನು ನಾಲ್ಕೇ ದಿನಕ್ಕೆ ನಮ್ಮ ನೆಚ್ಚಿನ ಕನ್ನಡ ಹಬ್ಬ ಬರುತ್ತಿದೆ. ಇದು ಎಷ್ಟನೆಯ ರಾಜ್ಯೋತ್ಸವ ಎಂಬ ಬಗ್ಗೆ ತಲೆಕೆಡಿಸಿಕೊಂಡು ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸಲು ಕೆಲವು  ಜನ ಒದ್ದಾಡುತ್ತಿದ್ದಾರೆ . ಅರೆ ಇದೇನು ??ಕನ್ನಡ  ರಾಜ್ಯೋತ್ಸವ ಬಂದೆ ಬಿಟ್ಟಿದೆ ಹೌದು ರೀ ಮರ್ತೆ ಬಿಟ್ಟಿದ್ದೆ ನಾನು!!! ನನ್ನ ಬ್ಲಾಗಿನ ಮಿತ್ರರಿಗೆ ಕನ್ನಡ ಹಬ್ಬದ ಶುಭಾಶಯಗಳನ್ನು ಈ ಕೆಳಗಿನ ನನ್ನ ಇಷ್ಟದ ವೀಡಿಯೊ ಮೂಲಕ ಅರ್ಪಿಸುತ್ತಿದ್ದೇನೆ. ಬ್ಲಾಗ್ ಮಿತ್ರರೇ ದಯಮಾಡಿ ಸ್ವೀಕರಿಸಿ . ತನು ಕನ್ನಡ ಮನ ಕನ್ನಡ ವಾಗಿ ಕನ್ನಡ ಕೀರ್ತಿ ಪತಾಕೆ ಹಾರಿಸಿ ಅನುದಿನವೂ ಕನ್ನಡಿಗರಾಗಿ ಬಾಳೋಣ. ಕನ್ನಡ ತಾಯಿಯ ಮಡಿಲಲ್ಲಿ ಎಷ್ಟೊಂದು ಪಡೆದ ನಾವು ಕನ್ನಡ ಭಾಷೆ ಮರೆತು , ನೆಲ ಮರೆತು ನಮ್ಮ ನೆಲದ ಸಂಸ್ಕೃತಿಯನ್ನು ಹಾಳು ಮಾಡುವುದು  ಉತ್ತಮ ಕನ್ನಡಿಗರ ಲಕ್ಷಣವಲ್ಲ.ಕನ್ನಡ ಸವಿ  ಭಾಷೆ ಮನದಲ್ಲಿ ಎಂದೆಂದೂ ಉಳಿಯಲಿ ನಮ್ಮ ನಾಲಿಗೆ ಮೇಲೆ ನಲಿಯಲಿ. ಇಲ್ಲಿ ಪ್ರಕಟಿಸಿರುವ ವೀಡಿಯೊ ಗಳು ನನಗೆ ತುಂಬಾ ಇಷ್ಟವಾದವು ಬಹುಷಃ ನಿಮಗೂ ಇಷ್ಟವಾಗುತ್ತವೆ. ಹೆಚ್ಚು ಪ್ರಚಾರವಿಲ್ಲದ ಈ ವೀಡಿಯೊ ಗಳು ಬಹಳ ಸುಂದರವಾಗಿ ಚಿತ್ರೀಕರಣ ಗೊಂಡು ಕರ್ನಾಟಕದ ಸೌಂದರ್ಯವನ್ನು ಉಣಬಡಿಸಿವೆ ಬನ್ನಿ ನೋಡಿ ನಲಿದು ಕನ್ನಡ ಹಬ್ಬದ ಸಂತಸ ಸವಿದು ನಿಜದ ಕನ್ನಡಿಗರಾಗೋಣ ಬನ್ನಿ.ಕನ್ನಡ ತಾಯಿಗೆ ನಮಿಸುತ್ತಾ ತಮ್ಮೆಲ್ಲರಿಗೂ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಗಳನ್ನು ಅರ್ಪಿಸಲು ಸಂತಸ ಪಡುತ್ತೇನೆ.ನಿಮ್ಮೆಲ್ಲರಿಗೂ ಕನ್ನಡ ಹಬ್ಬದ ಶುಭಾಶಯಗಳು.                                                                                                                                          

    Friday, October 22, 2010

    ಘಜಲ್ ಸಾಮ್ರಾಜ್ಯದ ಮಾಂತ್ರಿಕ ಹಾಡುಗಾರ ಜಗಜಿತ್ ಸಿಂಗ್ !!! ಮಾಂತ್ರಿಕ ಘಜಲ್ ಹಾಡುಗಾರ.!!! ಘಜಲ್ ಕೇಳಿದರೆ ಎಲ್ಲರ ಮನದಲ್ಲಿ ಕವಿತೆ ಅರಳುವುದು!!!

          ಕೆಲವೊಮ್ಮೆ ಪಟ್ಟಣದ ಜಂಜಾಟದಲ್ಲಿ  ಮನಸ್ಸು ರಾಡಿಯಾಗಿ ಏಕಾಂತ ಬಯಸಿದಾಗ  ಎಲ್ಲಾದರೂ ಹೊರಗೆ ಒಬ್ಬನೇ ಹೋಗಿ  ಶ್ರೀ ರಂಗ ಪಟ್ಟಣ ದ ಹಳ್ಳಿ ಗಳ ಕಾವೇರಿ ತೀರದಲ್ಲಿ ಕುಳಿತು ಕೊಳ್ಳುವುದು ನನ್ನ ವಾಡಿಕೆ. ತಿನ್ನೋಕೆ ಒಂದಷ್ಟು ತಿಂಡಿ,  ಓದೋಕೆ ಪುಸ್ತಕ,ನೆಚ್ಚಿನ ಕ್ಯಾಮರ , ಹಾಗೆ ನನ್ನ ಮೊಬೈಲ್ ನಲ್ಲಿ  ತುಂಬಿಕೊಂಡಿರುವ ಹಾಡುಗಳು. ಜನರಿಲ್ಲದ ತಾಣದಲ್ಲಿ ಕುಳಿತು ಮನದಣಿಯ ಓದಿ ,ಇಷ್ಟಾ ಬಂದ  ಚಿತ್ರಗಳನ್ನುಕ್ಲಿಕ್ಕಿಸಿ ,   ಹಾಡು ಕೇಳುತ್ತಾ ಮೈಮರೆತು ಬಿಡುತ್ತೇನೆ.ಜೀವನಕ್ಕೆ ಹೊಸ ಹುರುಪು ತುಂಬಿ ಕೊಳ್ಳುತ್ತೇನೆ.ನನ್ನ ಮೊಬೈಲ್ ನಲ್ಲಿ ಪದೇ ಪದೇ  ಕೇಳುವ ಹಾಡು ಜಗಜಿತ್ ಸಿಂಗ್ ನ ಘಜಲ್ ಗಳು,ಕನ್ನಡ ಭಾವಗೀತೆಗಳು,ಹಳೆಯ ಕನ್ನಡ, ಹಿಂದಿ, ಇಂಗ್ಲೀಶ್ ಹಾಡುಗಳು.ಆದರೂ ಜಗಜೀತ್ ಸಿಂಗ್ ನ ಘಜಲ್ ನಲ್ಲಿ ಏನೋ ಸೆಳೆತವಿರುತ್ತದೆ.ಕೆಲವೊಮ್ಮೆ ಅವರ ಘಜಲ್  ಕೇಳಿ ನಾನಿರುವ ಪರಿಸರಕ್ಕೆ ತಕ್ಕ ಹಾಗೆ  ಹಲವಾರು ಕವಿತೆಗಳು ಮನದಲ್ಲಿ ಉಕ್ಕಿಬರಲು ಕಾರಣ ವಾಗಿರುತ್ತದೆ.ಮಾಂತ್ರಿಕ  ಸ್ವರದ ಹಾಡುಗಾರ ಜಗಜಿತ್ ಸಿಂಗ್ ನನ್ನ ಏಕಾಂತ ದಲ್ಲಿ ಹಾಡಿ  ಮನಸನ್ನು ಪ್ರಸನ್ನ ಗೊಳಿಸಿದ್ದಾನೆ.ನೆಚ್ಚಿನ ಘಜಲ್ ಗಳ ವಿಡಿಯೋ ನಿಮಗಾಗಿ ಹಾಕಿದ್ದೇನೆ .ಹಿತವಾದ ವಾತಾವರಣ ನಿರ್ಜನ ಪ್ರದೇಶ ಕಾವೇರಿಯ ಜುಳು ಜುಳು ಹರಿವು,ಪಕ್ಷಿಗಳ ಕಲರವ,ಮನಸ್ಸಿಗೆ ಹಿತವಾಗುವ ಜಗಜಿತ್ ಸಿಂಗ್ ಹಾಡುಗಳು !!! ಆ ಕ್ಷಣ ನನಗೆ ಎಷ್ಟು ಕೋಟಿ ಕೊಟ್ಟರೂ ಪಟ್ಟಣದಲ್ಲಿ ಸಿಗಲಾರದು .!! ಆ ಪರಿಸರದಲ್ಲಿ ಮುಳುಗಿ ಹೊಸ ಮನುಷ್ಯನಾಗಿ  ಹೊಸ ಚಿತನ್ಯ ದೊಂದಿಗೆ ಪಟ್ಟಣದ ಜೀವನದ ಜಂಜಾಟ ಎದುರಿಸಲು ಬಂದಿರುತ್ತೇನೆ.  ಬನ್ನಿ    ಜಗಜಿತ್ ಸಿಂಗ್ ಬಗ್ಗೆ ಅಂತರ್ಜಾಲದಲ್ಲಿ ಸಿಕ್ಕ ಅವರ ಮಾಹಿತಿ ನಿಮಗೆ ನೀಡಿದ್ದೇನೆ ಬನ್ನಿ ಅವರ ಬಗ್ಗೆ ತಿಳಿಯೋಣ.Jagjit Singh (Punjabi: ਜਗਜੀਤ ਸਿੰਘ, Hindi: जगजीत सिंह, Urdu: جگجیت سنگھ) (born February 8, 1941) is a prominent Indian Ghazal singer, composer, music director, activist and entrepreneur. Popularly known as "The Ghazal King" he gained acclaim together with his wife, another renowned Indian Ghazal singer Chitra Singh, in 1970's and 80's, as the first ever successful duo (husband-wife) act in the history of recorded Indian music. Together, they are considered to be the pioneers of modern Ghazal singing and regarded as most successful recording artistes outside the realm of Indian film music. He has sung in Punjabi, Hindi, Urdu, Bengali, Gujarati, Sindhi and Nepali languages. He was awarded India's third highest civilian honour, the Padma Bhushan, in 2003.

    Widely credited for the revival and popularity of Ghazal, an Indian classical art form, through his music in landmark films such as Prem Geet (1981), Arth and Saath Saath (1982), and TV serials Mirza Ghalib (1988) and Kahkashan (1991), Jagjit Singh is considered to be the most successful ghazal singer and composer of all time, in terms of both critical acclaim and commercial success. With a career spanning over four decades and a repertoire comprising 50 albums the range and breadth of his work has been regarded as genre-defining. He is the only composer and singer to have composed and recorded songs written by an incumbent Prime Minister - Atal Behari Vajpayee, also a critically acclaimed poet - in two albums, Nayi Disha (1999) and Samvedna (2002). India's current Prime Minister Manmohan Singh and his wife Gursharan Kaur are known to be his avid admirers.         

    On May 10, 2007, in a milestone joint session held in the historic Central Hall of India's Parliament (Sansad Bhawan), Jagjit Singh rendered the last Moghul Emperor, Bahadur Shah Zafar's famous ghazal "Lagta nahin hai dil mera" to commemorate the 150th anniversary of India's First War of Independence (1857). President A P J Abdul Kalam, Prime Minister Manmohan Singh, Vice-President Bhairon Singh Shekhawat, Lok Sabha Speaker Somnath Chatterjee, Congress President Sonia Gandhi and dignitaries including former Prime Ministers, Members of Parliament, Foreign Ambassadors and High Commissioners were in attendance.

    Jagjit Singh is the first Indian composer, and together with his wife Chitra Singh the first recording artist in the history of Indian music to use digital multi-track recording for their (India's first digitally recorded) album, Beyond Time (1987). He is regarded as one of India's most influential artistes. Together with sitar legend Ravi Shankar and other leading figures of Indian classical music and literature, Singh has voiced his concerns over politicisation of arts and culture in India and lack of support experienced by the practitioners of India's traditional art forms, particularly folk artists and musicians. He has lent active support to several philanthropic endeavors such as the library at St. Mary's School, Mumbai, Bombay Hospital, CRY, Save the Children and ALMA.

    ಗುದ್ದಿಗೊಂದು ಸುದ್ದಿ: ಮೈಸೂರಿನ ಚಿತ್ರ ಸಂತೆ ಯಲ್ಲಿ ಬಣ್ಣಗಳ ಕಲರವ !!!!

    ಗುದ್ದಿಗೊಂದು ಸುದ್ದಿ: ಮೈಸೂರಿನ ಚಿತ್ರ ಸಂತೆ ಯಲ್ಲಿ ಬಣ್ಣಗಳ ಕಲರವ !!!!: " ಕಳೆದ ಭಾನುವಾರ ದಿನಾಂಕ 03-10-2010 ರಂದು ಮೈಸೂರಿನಲ್ಲಿ ಚಿತ್ರಸಂತೆ ಏರ್ಪಡಿಸಲಾಗಿತ್ತು.ಅದ್ಭತ ಕಲಾವಿದರ ಸಂಗಮ ,ಅದ್ಭುತ ಕಲಾಕೃತಿಗಳ ಅನಾವರಣ ..."

    Sunday, October 17, 2010

    ಅಮ್ಮ ನಿನ್ನ್ನ ತೋಳಿನಲ್ಲಿ ಕಂದಾ ನಾನು !! ಎಂದಿತ್ತು ಈ ಮುದ್ದಿನ ಕೂಸು "ಅನಘ "!!!

    ಹಾಯ್ !! ನಾನು ಅನಘ !!!

    ಅಲ್ಲ ಮೈಸೂರಿನಲ್ಲಿ ಇದ್ದುಕೊಂಡು ದಸರಾ ಬಗ್ಗೆ ಬರೆಯಲ್ವಾ !! ಅಂತಾ ಕೆಲವು ಗೆಳೆಯರ ಹಕ್ಕೊತ್ತಾಯ . ಅದಕ್ಕೆ ಅವ್ರ ಹತ್ತಿರ ಹೇಳ್ದೆ  ಅಲ್ಲಾ ಕಣ್ರಯ್ಯ ಯಾವ ಪೇಪರ್ ತೆಗೆದರೂ , ಟೀ.ವಿ  ಚಾನಲ್ ಹಾಕಿದರೂ ದಸರಾ ದಸರಾ ಅಂಥಾ ವಿಶೇಷ  ಮಾಹಿತಿ ಬರುತ್ತಿರುವಾಗ ಮದ್ಯದಲ್ಲಿ ನನ್ನ ತುತ್ತೂರಿಲೂ ದಸರಾ ಅಂದ್ರೆ  ಇಂದೇ ಕೊನೆ ಆಟ ನಾಳೆ ಅದೇ ಆಟ ಅನ್ನೋ ಹಾಗೆ ಓದುಗರಿಗೆ ಬೇಸರ ವಾಗುತ್ತೆ !! ಈಗ ಬೇಡ ಸುಮ್ಮನಿರು ಅಂತಾ ಅಂದೇ .ಹಾಗೆ ಮಾತಾಡ್ತಾ  ಲೋ ಕಳೆದವಾರ ಬೆಂಗಳೂರಿಗೆ ಹೋಗಿದ್ಯಲ್ಲ ಆ ಮಗೂ ಬಗ್ಗೆ  ಒಂದು ಸಾರಿ ಬರಿ, ಚಿತ್ರಗಳು ಚೆನ್ನಾಗಿವೆ ಅಂದಾ ಗೆಳೆಯ.ಸರಿ ಬಿಡಪ್ಪಾ ಸಧ್ಯಕ್ಕೆ ನನ್ನ ತಲೇನೂ ಖಾಲಿ ಅದನ್ನೇ ಬರೀತೀನಿ ಅಂತಾ ಶುರುಮಾಡಿದೆ . ಹೌದು ನಮ್ಮ ಸುತ್ತ ಮುತ್ತ ಹಲವು ಮಕ್ಕಳು ಕಾಣ ಸಿಗುತ್ತವೆ . ಒಂದೊಂದು ಮಗುವಿಗೂ ಅದರದೇ ಆದ ವಿಶೇಷ ಗುಣಗಳಿರುತ್ತದೆ.ಆದರೆ ನಾವು ಮಾತ್ರ ಅದನ್ನು ಗಮನಿಸಿರುವುದಿಲ್ಲ.ಕೆಲವು ಮಕ್ಕಳು ಚಿನಕುರುಳಿ ಯಂತೆ ಪಟ ಪಟ ಅಂತಾ ಮಾತಾಡಿನಲಿದರೆ., ಇನ್ನು ಕೆಲವು ಮಕ್ಕಳು ಸೈಲೆಂಟಾಗಿ ತಮ್ಮ ಕಣ್ಣು ಗಳಲ್ಲೇ ಮಾತಾಡಿ ಅಚ್ಚರಿ ಮೂಡಿಸುತ್ತವೆ. ಇಂತಹ ಒಂದು ವಿಶೇಷದ ಮಗು ನನಗೆ ಕಳೆದವಾರ ಬೆಂಗಳೂರಿನಲ್ಲಿ ಸಿಕ್ಕಿತು
    ಈ ಪೌಡರು ನಂಗಿಷ್ಟ !!

    .ಅವಳೇ ನಮ್ಮ ಮುದ್ದಿನ ಕೂಸು ಅನಘ .ಈ ಮುದ್ದಿನ ಕಂದ ಕಣ್ಣಿನಲ್ಲೇ ಮಾತನಾಡಿ ಎಲ್ಲರ ಮನ ಗೆಲ್ಲುತ್ತದೆ .  ಮನೆಯ ಎಲ್ಲರ ಮುದ್ದಿನ ಕೂಸು . ತನ್ನ ತಾಯಿಯೊಡನೆ  ಸೈಲೆಂಟಾಗಿ  ಭಾವನೆಗಳ ಸಂಭಾಷಣೆ ನಡೆಸಿದ ಕೆಲವು ಅಮೂಲ್ಯ ಕ್ಷಣಗಳು  . ನನ್ನ ಕ್ಯಾಮರ ದಲ್ಲಿ ಸೆರೆಸಿಕ್ಕಿದ್ದು ಹೀಗೆ .
    ನಮ್ಮಮ್ಮ ನಂಗೆ ಲ್ಯಾಪ್ ಟಾಪ್ ಕೊಡಲ್ಲಾ ಗೊತ್ತ !!
    ದೊಡ್ಡವರೆಲ್ಲಾ ಜಾಣರಲ್ಲಾ !!!
    ಅಮ್ಮನಿಗೆ  ನಾನೇ ಗುಡ್ ಮಾರ್ನಿಂಗ್ ಹೇಳೋದು ಗೊತ್ತ !!
    ಅಮ್ಮ ಏಳಲ್ವಾ  ನಿನ್ ಸಂಗಾ ಟೂ ಟೂ !!
    ಅಮ್ಮ ಒಂದು ಉಮ್ಮ ಕೊಡ್ಲಾ ??
    ನಮ್ಮಮ್ಮ  ಒಳ್ಳೆವ್ರೂ!!
    ಬೇಡ ದೊಡ್ಡಪ್ಪಾ  ನಂಗೆ ನಾಚ್ಕೆ ಆಗುತ್ತೆ !!!
    ಅಮ್ಮ ಏತ ಏತ ಆಟ ಆಡಿಸ್ತಾರೆ ಗೊತ್ತ !!!!!
    "ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು" ಅಂತಾ ಲಾಲಿ ಹಾಡ್ಲಾ ಅಮ್ಮ !!
    ಅಮ್ಮ ಪಾಪ ಸುಸ್ತಾಗಿದೆ  ದೊಡ್ಡಪ್ಪಾ !!!
    ಅಮ್ಮ ಏನಾಯ್ತು ಗೊತ್ತ ???
    ಪ್ರೀತಿಯ ನಮ್ಮಮ್ಮ ನಂಗಿಷ್ಟ !!!
    ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು !!!
    ಹೆಂಗಿತ್ತು ನಮ್ಮಮ್ಮನ ಜೊತೆ ನನ್ನ ಆಟ???
           ಮಕ್ಕಳು ಮಕ್ಕಳೇ ಇವರನ್ನು ಅನುಕರಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತಾ ನನ್ನ ತಾಯಿ ಹೇಳಿದ ಮಾತುಗಳು ನಿಜವೆನ್ನಿಸಿತು. ಸುಂದರ ಕ್ಷಣದ ಈ ಚಿತ್ರಗಳು ನನ್ನ ಬಾಲ್ಯದ ನೆನಪಿನ ದೋಣಿಯಲ್ಲಿ  ಪಯಣಿಸುವಂತೆ ಮಾಡಿತು. ಇದನ್ನು ನೋಡಿದರೆ ನಿಮಗೂ ನಿಮ್ಮ ಬಾಲ್ಯದ ದಿನಗಳಲ್ಲಿ ನಿಮ್ಮ ತಾಯಿ ಜೊತೆ ಕಳೆದ ಸುಂದರ ಕ್ಷಣಗಳ ನೆನಪು ಬರಬಹುದು ಆಲ್ವಾ !! ಬನ್ನಿ ಬಾಲ್ಯದ ನೆನಪಿನ ದೋಣಿ ಏರೋಣ.