Friday, September 30, 2011

ರೀತಿ!! ಈ ರೀತಿ !!! ಇನ್ನೊಂದು ರೀತಿ !!!!

ಮೊದಲು ಗೆಳೆಯ  ಪ್ರಕಾಶ್ ಅಣ್ಣ ಬರೆದ  ಬರೆದ "ರೀತಿ" ....   ಓದಿ    ಇಟ್ಟಿಗೆ ಸಿಮೆಂಟು: ರೀತಿ..., ನಂತರ ಮತ್ತೊಬ್ಬ ಗೆಳೆಯ  ದಿನಕರ ಮೊಗೆರ ಬರೆದ  "ಈ ರೀತಿ"....http://dinakarmoger.blogspot.in/2011/09/blog-post.html ಓದಿ ನಂತರ ಬನ್ನಿ ಇಲ್ಲಿದೆ "ಇನ್ನೊಂದು ರೀತಿ"!!!!!!!    ರೀತಿ , ಈ ರೀತಿ ಕತೆಗಳ  ಮುಂದುವರೆದ ಸಂಚಿಕೆಗೆ  ಅದೇ "ಇನ್ನೊಂದು ರೀತಿ "   ತಿರುವಿನ ಹಂದರ.                                                                                                                                ...................................................................................................................................................................                                              " ನಾನು ಬಗ್ಗಿ ನೋಡಿದೆ......

ONE MESSAGE RECEIVED.....!!!!
""                                                                                            
 " I am missing you a lot , how is your wife ????    ............ raagini "
                                      
ಅರೆ ಇದೇನಿದು !!! ಇವಳ್ಯಾರು ರಾಗಿಣಿ ??? ಈ ಬಗ್ಗೆ  ಇವನೇನು ಹೇಳೇ ಇರ್ಲಿಲ್ಲಾ !!!!! ತಾಳು ತಾಳು " ರಾಗಿಣಿ " ಮದುವೆಯ ಆರತಕ್ಷತೆಯಲ್ಲಿ  ಪರಿಚಯಿಸಿದ್ದ ನೆನಪು  ಆದರೆ ಆ ದಿನ ಸೇರಿದ್ದ ಸಾವಿರಾರು ಜನರಲ್ಲಿ  ಯಾರ ಮುಖ ಜ್ಞಾಪಕಕ್ಕೆ ಬರುತ್ತೆ??? ಆಲ್ವಾ . ಯಾಕೋ ಮನದಲ್ಲಿ ನನಗೆ ತುಮುಲ ಶುರುವಾಯ್ತು.............!!!!!!!! ಅಷ್ಟರಲ್ಲಿ ..................................
ನನ್ನ ಮೊಬೈಲಿನಲ್ಲಿ  ಎಸ.ಎಂ.ಎಸ ಬಂದ ಸದ್ದು ............................................!!!!!!!!!!!!!!!!!!!! ಇನ್ಬಾಕ್ಸ್  ತೆರೆದು ಮೆಸ್ಸೇಜ್  ನೋಡಿದೆ........................................................................!!!!!!!!!!    HAPPY WISHES TO "YOU, HOW IS HUBBY ?? IS HE SMARTER THAN ME ???  I MISSED U  A LOT , I..................................GUESS ME!!!!! .................................................A  HERO !!!!.......................!!"
                                                                                                                                                                 ನನಗೆ ಕೆಟ್ಟ ಕೋಪ ಬಂದು  ಮತ್ತೆ ನನ್ನ ಮೊಬೈಲ್ ನಿಂದ  ಎಸ. ಎಂ.ಎಸ. ಮಾಡಿದೆ  WHO'S THIS???...................ಅಷ್ಟರಲ್ಲಿ  ಪುಟ್ಟಣ್ಣಿ   ಆಫಿಸ್ ಗೆ ಲೇಟಾಯ್ತು  ತಿಂಡಿ ಕೊಡ್ತೀಯಾ ........................................... ಅವನ ಕರೆ ಬಂತು ಮನಸ್ಸಿನಲ್ಲಿ .ಗೊಂದಲದ ಗೂಡಾಗಿದ್ದ  ನಾನು  ಯಾಂತ್ರಿಕವಾಗಿ  ಹೋಗಿ  ತಿಂಡಿ ಕೊಟ್ಟೆ. ........................................!!!                  ಯಾಕೆ    "ಪುಟ್ಟಣ್ಣಿ" ರಾತ್ರಿ ಬೇಸರ ಇನ್ನೂ ಹೋಗಿಲ್ವಾ ಚಿನ್ನಾ ................. ಅಂತಾ ಅವನು ಹೇಳಿದ ಮಾತಿಗೆ  ಬಲವಂತದ ನಗೆ ನಕ್ಕು   ಹಾಗೇನಿಲ್ಲಾ  ಅಂತಾ ಸುಮ್ಮನಾದೆ.                .................... ತಿಂಡಿ ತಿನ್ನುವಾಗಲೂ  ಆತಂಕದಿಂದ ಆತ  ತನ್ನ ಮೊಬೈಲ್ ನಿಂದ ಮೆಸ್ಸೇಜ್  ಕಳುಹಿಸುತ್ತಲೇ ಇದ್ದದ್ದು ನನ್ನ ಗಮನಕ್ಕೆ ಬಂದು  "ಈ ಮನುಷ್ಯ ಒಬ್ಬ ಮುಖವಾಡ  ಧರಿಸಿದ  ಮೋಸಗಾರ ಅನ್ನಿಸಿತ್ತು." ಆದರೂ ಈ ಜಗತ್ತಿಗೆ ನಾವಿಬ್ಬರು  ಅಧಿಕೃತ ವಾಗಿ ಗಂಡ ಹೆಂಡಿರೆಂಬ  ಪದವಿ ಹೊತ್ತು ಮೆರೆಯಬೇಕಾದ  ಅನಿವಾರ್ಯತೆ ಇದೆ ಅನ್ನಿಸಿ  ಮೌನವಾಗಿ ರೋಧಿಸಿದ್ದೆ, ಮತ್ತೊಮ್ಮೆ ನನ್ನ  ಮೊಬೈಲಿನ ಮೆಸ್ಸೇಜ್  ಜ್ಞಾಪಕಕ್ಕೆ ಬಂದು  ನನ್ನ ಭಾವನೆಗಳನ್ನು ಅಣಕಿಸುತ್ತಿತ್ತು. ಹಾಗು ಹೀಗೂ ನಮ್ಮಿಬ್ಬರ  ಈ ಜೀವನ  ಆಟ ಈ ರೀತಿ "ಕಣ್ಣಾ ಮುಚ್ಚಾಲೆ"  ಆಟ ಆಗಿತ್ತು.  .........................             ತಿಂಡಿ ತಿಂದ ಆತ   " ಪುಟ್ಟಣ್ಣಿ" .....  ಬೈ ಚಿನ್ನಾ ಅಂತಾ ನನಗೆ ಅರಿವಿಲ್ಲದೆ  ನನ್ನ  ಬಳಸಿ ಕೆನ್ನೆಯ ಮಚ್ಚೆಗೆ  ಮುತ್ತಿಟ್ಟ !!!!!  ಕೋಪ ಬಂದರು ಸಾವರಿಸಿಕೊಂಡು  ನೋಡುವಷ್ಟರಲ್ಲಿ  ಆತ ಗೇಟು ದಾಟಿ  ಕಾರ್ ಒಳಗೆ ಹೊಕ್ಕಿ ಹೊರಟೇಬಿಟ್ಟ..................................!!!!!!!!!!!!!!!!!!!!!! ನಾನು ನಿಧಾನವಾಗಿ ಕೋಪ ಕಡಿಮೆ ಮಾಡಿಕೊಂಡು  ಖಾಲಿ ಇರುವ ಮನೆಯೊಳಗೇ ನಿಧಾನವಾಗಿ  ಬಂದು ನನ್ನ ಹಾಸಿಗೆಯ ಮೇಲೆ ಬಿದ್ದು ಕೊಂಡೆ........ ...............................
    ಮತ್ತೆ ನನ್ನ ಮೊಬೈಲ್ ರಿಂಗ್ ಆದಾಗ  ಎಚ್ಚರ ಗೊಂಡ ನಾನು ಹೆಲೋ ಅಂದದ್ದೇ  ಆ ಕಡೆಯಿಂದಾ  ಸಾರಿ ಕಣೆ ಬೆಳಿಗ್ಗೆ ನಿಂಗೆ ಎಸ. ಎಂ.ಎಸ. ಮಾಡಿದ್ದೆ   ಆದ್ರೆ ನೀನು ಕೋಪದಿಂದ  WHO'S THIS???.         ಅಂದೆ ಹಾಗಾಗಿ ನಿನ್ನೊಡನೆ ನಾನೇ ಮಾತಾಡಿ  ಬಿಡೋಣ ಅಂತಾ ಕಾಲ್ ಮಾಡಿದೆ . ನಾನು ಯಾರು ಗೊತಾಗ್ಲಿಲ್ವಾ ??? ಅರೆ "ಬುದ್ದು"   ನಾನು ಕಣೆ  ಜಯಂತ್  ಈಗ ಗೊತ್ತಾಯ್ತಾ!!!!  ಮಾರಾಯ್ತಿ  ನಿನ್ನನ್ನು ಎಲ್ಲೆಲ್ಲಿ ಹುಡುಕೋದು??????  ಕೊನೆಗೆ ನಿನ್ನ ಫ್ರೆಂಡ್  ಶೀಲ ಹತ್ತಿರ ನಿನ್ನ ನಂಬರ್ ತಗೊಂಡು ಕಾಲ್ ಮಾಡಿದೆ ,ನನ್ನ ಮೇಲೆ ಕೋಪಾನ??? ಅಂತಾ ಒಂದೇ ಸಮನೆ  ನನಗೆ ಮಾತಾಡಲೂ ಅವಕಾಶ ಕೊಡದೆ ಮಾತಾಡಿದ . ಮೊದಮೊದಲು ಅವ ಯಾರೆಂದು ತಿಳಿಯೋದು ಕಷ್ಟವಾದರೂ ನಂತರ ಅವನ್ಯಾರೆಂದು ತಿಳೀತು. ನಂತರ ನಾನು ಏನೋ ಸಮಾಚಾರ ಹೇಗಿದ್ದೀ ?? ಎಲ್ಲಿದ್ದೀ ?? ಅಂದೆ ......................., ಅಯ್ಯೋ ಬುದ್ದು!!!! ಯಾಕೆಳ್ತಿಯಾ ನನ್ನ ಪಾಡು  ಅದು, ಸರಿ ನಿಂಗೆ ಮದುವೇ ಆಯ್ತಂತೆ  ಹ್ಯಾಗಿದ್ದಾನೆ ನಿನ್ನ ಹಬ್ಬಿ , ನನಗಿಂತಾ ಸ್ಮಾರ್ಟಾ!!!!!!! ಅಂದಾ  ಯಾಕೋ ಗೊತ್ತಿಲ್ಲಾ .ಸ್ವಲ್ಪ ಇರೋ ಮತ್ತೆ ಕಾಲ್ ಮಾಡ್ತೆನಿ ಅಂತಾ ಫೋನ್ ಇಟ್ಟೆ!!!!!     ಆಗಲೇ ಮನಸು ನೆನಪಿನಾಳಕ್ಕೆ ಇಳೀತು.....................................................  ...................................................!!!! ಆಗ ಆಗಿದ್ದೆ  ಹಿಂದಿನ ಕಥೆಯ ಅನಾವರಣ.   ಹೌದು ಅಂದು ನಮ್ಮ  ಊರಿನ ಕಾಲೇಜಿನಲ್ಲಿ ಓದುವಾಗ  ನಡೆದ   ಗೋವಾ  ಘಟನೆ ನಂತರ  ನಾನು ಆ ಕಾಲೇಜಿಗೆ ಹೋಗದ ಕಾರಣ  ನನ್ನನ್ನು   ಆ ಕಾಲೇಜು ಬಿಡಿಸಿ  ಓದು ಮುಂದುವರೆಸಲು  ಈ ಊರಿಗೆ ತಂದು ಇಲ್ಲಿನ ಕಾಲೇಜಿಗೆ  ಸೇರಿಸಿದರು. ಹಾಗಾಗಿ ನನ್ನ ಚಿಕ್ಕಪ್ಪನ ಮನೆಗೆ   ಬಂದು ನೆಲೆನಿಂತೆ. ಆದರೂ ನೊಂದ ಮನಸಿನಲ್ಲಿ ಆ ಕಹಿ ನೆನಪು ಹಾಗೆ ಉಳಿದಿತ್ತು.   ಆ ನೋವಿನ ಸಮಯದಲ್ಲಿ ಒಂಟಿಯಾಗಿ ಜೀವನದಲ್ಲಿ ಬಳಲಿದ್ದ  ನನಗೆ ಅರಿವಿಲ್ಲದಂತೆ ಹತ್ತಿರ ಬಂದವನೇ  ಇವನು , ನಾನೆಷ್ಟು ದೂರ ಸರಿದರೂ  ನನಗೆ ಧೈರ್ಯ  ತುಂಬಿ , ಜೀವನದಲ್ಲಿ ಹೊಸ ಆಸೆ  ತುಂಬಿ ಭಾವನೆಗಳನ್ನು  ಚಿಗುರಿಸಿ,  ಹೂ ಬಿಡುವ ವೇಳೆಗೆ ಮಾಯವಾಗಿದ್ದ , ಯಾವಾಗಲೂ "ಬುದ್ದು" ಬುದ್ದು" ಅಂತಾ ರೇಗಿಸುತ್ತಾ  ನನ್ನ ಮನಸನ್ನು ಆಕ್ರಮಿಸಿಕೊಂಡು ಬಿಟ್ಟಿದ್ದ , ಅವನೇ ಒಂದು ದಿನ ಮದುವೇ ಪ್ರಸ್ತಾಪ ಮಾಡಿದನಾದರೂ ನಾನೇ ನನ್ನ ಅಹಂಕಾರದಿಂದ ಅವನನ್ನು ದೂರ ಇಟ್ಟು ಅವಮಾನಿಸಿದ್ದೆ. ಅಂದಿನಿಂದಾ ಅವನು ಒಬ್ಬ ಫ್ರೆಂಡ್ ಅನ್ನಿಸಿದ್ದರೂ ನಾನು ಓದು ಮುಗಿಸಿ  ಮತ್ತೆ  ನನ್ನ ಊರಿಗೆ ಹೊರಟಾಗ  ಅವನ ಬಾಡಿದ ಮುಖ ನೋಡಿ ತಡೆಯಲಾಗದೆ  ನಾನೇ ಅವನನ್ನು ಕಂಡು   ಪ್ರೀತಿಯ ನಿವೇದನೆ ಮಾಡಿದ್ದೆ............................!! ನಂತರ ಕೆಲದಿನಗಳಲ್ಲಿ ಅವ ವಿದೇಶಕ್ಕೆ ಹೊರಟಾಗ  ನಮ್ಮಿಬ್ಬರ  ಪ್ರೀತಿ ಪ್ರೇಮದ ಬಗ್ಗೆ   ನಮ್ಮ ಮನೆಯವರೊಂದಿಗೆ ಹೇಳಿಕೊಳ್ಳಲಾಗದಷ್ಟು  ಅಸಹಾಯಕರಾಗಿ  ನೋವಿನಿಂದ ನರಳುತ್ತಾ  ದೂರಾದೆವು.   ಆ "ಜಯಂತ್ "  ಇಂದು ಕಾಲ್ ಮಾಡಿದಾಗ  ಏನೂ ಮಾಡಲು ತೋಚದೆ  ಏನೋ ಹೇಳಿ ಫೋನ್ ಇಟ್ಟಿದ್ದೆ.                                                                                                      ಈ "ಜಯಂತ್"ನನ್ನ ಬಾಳಿನಲ್ಲಿ ಬಂದಿದ್ದ    ಘಟನೆಯನ್ನು  ನಾನು ಅವನಿಗೆ ಹೇಳದೆ  ಮುಚ್ಚಿಟ್ಟು................................................................. ಅಂದು ನಮ್ಮ ಪ್ರಥಮ  ರಾತ್ರಿಯ ವೇಳೆ ನನ್ನ ಗಂಡ     
"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ.. 
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."   ಅಂದ ಮಾತನ್ನು ಧಿಕ್ಕರಿಸಿ .................. ನನ್ನ ಈ ಕಥೆಯನ್ನು ಅವನಲ್ಲಿ ಹೇಳದೆ  ನಾನು ನನ್ನ ವರ್ತನೆಯಿಂದ  ಗೆದ್ದವಳಂತೆ ಮೆರೆದೆ ಆದರೆ ಅಂದು ನನಗರಿವಿಲ್ಲದೆ ಜೀವನದಲ್ಲಿ ಸೋತಿದ್ದೆ...............................!!!          ಮತ್ತೆ ಮೊಬೈಲ್ ರಿಂಗ್ ಆದಾಗ ಅವನೇ ......................................................ಮಾತಾಡಿ           !!!!!!!!!!!!!!!!!!!                                                   
ಯಾಕೆ ಬುದ್ದು ಫೋನ್ ಅವಾಯಿಡ್  ಮಾಡ್ತಾ ಇದ್ದೀಯ ಇಲ್ಲಿ ಕೇಳು  ನಿನಗೆ ಒಂದು ಸರ್ಪ್ರೈಸ್ ಕೊಡಬೇಕು ನಿನ್ನ ಗಂಡನ ಜೊತೆ ನಾಳೆ  "ಇಂದ್ರ ಲೋಕ"  ಹೋಟೆಲ್ ಗೆ ಬರಬೇಕೂ ಆಯ್ತಾ , ಇಲ್ಲಾನ್ನಬೇಡ , ನೀನು ಬರದೆ ಹೋದ್ರೆ  ನಿಮ್ಮ ಮನೆಗೆ ಬಂದು ಬಿಡ್ತೇನೆ ಅಷ್ಟೇ ಆಮೇಲೆ ನನ್ನ ಬೈಯ್ಯಭಾರದು ಅಂದಾ , ........................................................................... ನಾನು ಬೇಡಾ ಕಣೋ ಇದೆಲ್ಲಾ...............!!!  ನನಗೀಗ ಮದುವೇ ಆಗಿದೆ  ನೆಮ್ಮದಿಯಾಗಿ ಇರೋಕೆ ಬಿಡು  ಅಂದೆ. ನೋಡೇ" ಬುದ್ದು "  ನೀನು ನಾಳೆ ನಿನ್ನ ಹಬ್ಬಿಯ ಜೊತೆ ಹೋಟೆಲ್ ಗೆ ನಾಳೆ ಸಂಜೆ  ಐದೂವರೆ ಗೆ ಬರ್ತೀಯ ಅಷ್ಟೇ  ಬರದಿದ್ದರೆ  ಗೊತ್ತಲ್ಲಾ ಅಂತಾ ಫೋನ್ ಇಟ್ಟಾ...........................................ಕೆಟ್ಟ ಕೋಪ ಬಂದರು  ಹಳೆಯ ನೆನಪು ಅವನನ್ನು ಒಮ್ಮೆ ನೋಡೋಣ ಅಂತಾ ಕಾಡಿಸಿತ್ತು. ಸರಿ ನನ್ನ ಪತಿಗೆ ಹೇಳೋಣ ಅಂತಾ ಅಂದುಕೊಂಡು  ಅವನನ್ನು ಇವನಿಗೆ ಭೇಟಿಮಾದಿಸಿದರೆ, ಇವನು  ಹ್ಯಾಗೆ ರಿಯಾಕ್ಟ್ ಮಾಡ್ತಾನೆ ಅಂತಾ ಯೋಚನೆ ಶುರು ಆಯ್ತು , ಏನೋ ಒಂದು ಹೇಳೋಣ ಅಂತಾ ಅಂದುಕೊಂಡು  ಸಂಜೆ  ನನ್ನ ಪತಿ ಮನೆಗೆ ಬರೋದನ್ನು  ಕಾಯುತ್ತಾ ಟಿ.ವಿ.ಮುಂದೆ ಕುಳಿತೆ ಅದರಲ್ಲಿ  ಬರುತ್ತಿದ್ದ ಸೀರಿಯಲ್  ಯಾಕೋ ಬೋರಾಗಿ ................ಅದನ್ನು ಆಫ್ ಮಾಡಿ ........... ಕಂಪ್ಯೂಟರ್ ಮುಂದೆ ಕುಳಿತು  ನನ್ನ ಬ್ಲಾಗ್ ನಲ್ಲಿ ಒಂದು ವಿರಹ ಗೀತೆ ಬರೆದೆ. ......."ಗತಿಸಿದ ನೆನಪುಗಳ ರಾಡಿಯನ್ನು ತೊಳೆಯಲು ಮಳೆಯಂತೆ ನೀನು ಬಾ>>>>!!!" ......!!!!!!!!!!!!!!!!!!!!! ಸಾಲುಗಳು ಮೂಡಿಬಂದವು.

Thursday, September 22, 2011

ನಾವ್ಯಾಕೆ ಹೀಗೆ ಎಡಬಿಡಂಗಿಗಳು???? ಜೀವನ ಇಷ್ಟೇನೆ ??? ಚಮ್ಮಾರ ಕಲಿಸಿದ ಪಾಠ !!!!!!!



  •  "ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ " ಹಾಡು ತೇಲಿ ಬರುತ್ತಿತ್ತು , ಹಾಗೆ ಹೆಜ್ಜೆಹಾಕುತ್ತಾ  ನಡೆದು ಬರುತ್ತಿದ್ದೆ , ರಸ್ತೆಯ ಬದಿಯಲ್ಲಿ  ಹರಿದ  ಚಾಪೆಯ ಮೇಲೆ  ಸುತ್ತಾ ಹರಿದ ಚಪ್ಪಲಿ ರಾಶಿಗಳ ನಡುವೆ  ವಯಸ್ಸಾದ  ವ್ಯಕ್ತಿಯೊಬ್ಬ ತನ್ನೆದುರು ನಿಂತ ದಡೂತಿ ಮಹಿಳೆಯ ಮುಂದೆ ಕೈಚಾಚಿ  ತನ್ನ ಕೆಲಸದ ಕೂಲಿ ಬೇಡುತ್ತಿದ್ದ . ಮೈತುಂಬಾ ಒಡವೆ ರಾಶಿ ಹಾಕಿಕೊಂಡಿದ್ದ ಆ ಮಹಿಳೆ  ಹಣ ಕೊಡಲು ಕೊಸರಾಡುತ್ತಿದ್ದರು. ಬನ್ನಿ ಹತ್ತಿರ  ಹೋಗಿ ನೋಡೋಣ.

  • ಚಮ್ಮಾರ :-) "ತಾಯಿ ಇಗೊಳ್ಳಿ ನಿಮ್ಮ ಚಪ್ಪಲಿ ರೆಡಿ  ಹತ್ತು ರುಪಾಯಿ............... ಕೊಡಿ  "  
  •   
  •  ಮಹಿಳೆ :-)    "ಏನಪ್ಪಾ ಹಾಗೆ ಹೀಗೆ  ಎರಡು ಹೊಲಿಗೆ ಹಾಕಿಬಿಟ್ಟು  ಹತ್ತು ರುಪಾಯಿ ಕೇಳ್ತೀಯ ??? ನಾ ಕೊಡೋದೇ     ಎರಡು ರುಪಾಯಿ  "      

  •                                                                                                     ಚಮ್ಮಾರ :- "ಅಲ್ಲಾ ತಾಯಿ ನಿಮ್ಮೆದುರ್ಗೆ ಕಾಲ್ ಗಂಟೆ ಯಿಂದ  ಎರಡೂ ಚಪ್ಪಲಿ  ಒಲ್ದಿದ್ದೀನಿ  , ಹೊಲ್ಗೆ ದಾರ , ಮ್ಯಾಣ ಎಲ್ಲಾ ಸಾನೆ ದುಬಾರಿ ಯಾಗವೇ  , ನೀವು ತಿಳ್ದೊರು  ನೀವೇ ಇನ್ಗಂದ್ರೆ ಎಂಗೆ ತಾಯಿ , ಹತ್ತು ರುಪಾಯಿ ಕೊಡಿ ಇಲ್ಲಾ ಅನ್ಬ್ಯಾಡಿ''
  •                                                                                                        ಮಹಿಳೆ :-  "ಏನಯ್ಯ  ಬಲೆ ಮಾತಾಡ್ತಿ  ತಗೋ  ಅಂತಾ ಐದು ರುಪಾಯಿ  ನಾಣ್ಯ ಎಸೆದು ಹೊರಟಳು. "
  •    

  • ಚಮ್ಮಾರ   :- "ತಾಯಿ ತಾಯಿ ಬಡವನ ಹೊಟ್ಟೆ ಮ್ಯಾಲೆ   ಒಡಿ ಬ್ಯಾಡಿ   ಒಗ್ಲಿ ಇನ್ಮೂರು ರುಪಾಯಿ ಕೊಡಿ."

  •     ಅಂತಾ ಬೇಡಿದ  ಆದರೆ  ಅ ಹೆಂಗಸು ಈ ಮಾತನ್ನು  ಕೇಳದೆ   ಸರ ಸರನೆ ಹೊರಟೆ ಬಿಟ್ಟಳು . ಮನಸಿಗೆ  ಬೇಸರವಾಯಿತು ಹಾಗೆ ಸ್ವಲ್ಪ ದೂರ ಮುಂದುವರೆದೆ  ನನ್ನ ಸ್ನೇಹಿತ ರಘು  ಸಿಕ್ಕಿದ . ಬಾರೋ ಬಹಳ ವರ್ಷ ಆಯ್ತು ನಿನ್ನ ಜೊತೆ ಮಾತಾಡಬೇಕು , ನನ್ನ ಅಂಗಡಿಗೆ ಹೋಗೋಣ ಬಾ ಅಂತಾ ಬಲವಂತ ಮಾಡಿ ಕರೆದೊಯ್ದಾ . ಅಂಗಡಿಗೆ ಹೋದ್ರೆ  ಎರಡುವರ್ಷದ ಹಿಂದೆ  ಸುಮಾರಾಗಿದ್ದ  ಸಣ್ಣ ಬಟ್ಟೆ ಅಂಗಡಿ ಇಂದು   ವಿವಿಧ ಬಗೆಯ ಸೀರೆ , ಗಾರ್ಮೆಂಟ್ಸ್  ಗಳ ಷೋ ರೂಂ ಆಗಿ ಕಂಗೊಳಿಸಿತ್ತು.. ಬಾ ಗುರು  ನಿಧಾನವಾಗಿ ಮಾತಾಡೋಣ ಅಂತಾ ಅಂದವನೇ  ಯಾರನ್ನೋ ನೋಡಿ, ಬಾಲು ಸ್ವಲ್ಪ ಇರು  ಬಂದೆ ಒಂದು ಒಳ್ಳೆ ಗಿರಾಕಿ ಬಂದಿದ್ದಾರೆ  ಅಂತಾ ನನ್ನನ್ನು ಕುರ್ಚಿಯಲ್ಲಿ ಪತಿಷ್ಟಾಪಿಸಿ ಹೊರಟ. ನಾನೂ ಸಹ ಯಾರಪ್ಪಾ ಅಂತಾ  ಅತ್ತ ಗಮನಿಸಿದರೆ  ಅದೇ ಹೆಂಗಸು !!! ಹೌದು ನಿಜ ಅದೇ ಹೆಂಗಸು  ಆ ಚಮ್ಮಾರನಿಗೆ  ಚಳ್ಳೆ ಹಣ್ಣು ತಿನ್ನಿಸಿ ಬಂದ ಮಹಾ ತಾಯಿ  ದರ್ಶನ ಇಲ್ಲಿ.  ಅಷ್ಟರಲ್ಲಾಗಲೇ ನನ್ನ ಸ್ನೇಹಿತನ ಹೆಂಡತಿ  ಆ ಹೆಂಗಸಿಗೆ ಸೀರೆ ತೋರಿಸುತ್ತಾ  ವ್ಯಾಪಾರ ಶುರು ಮಾಡಿದ್ದರು. ನನ್ನ ಸ್ನೇಹಿತನನ್ನು  ಪಕ್ಕಕ್ಕೆ ಕರೆದು  ನಡೆದ ವಿಚಾರ ತಿಳಿಸಿ  ಈ ಮಹಿಳೆ ಮಾಡಿದ ಮಹಾ ಕಾರ್ಯ ವರ್ಣಿಸಿದೆ,  ನೋಡ್ತಾ ಇರು ಹಾಗೆ  ಅಂದವನೇ ಅವನ ಹೆಂಡತಿಗೆ  ಮರಾಟಿಯಲ್ಲಿ ಏನೋ ಹೇಳಿದ .  ಅವನ ಹೆಂಡತಿ ಇಲ್ಲೇ ಬನ್ನಿ ಅಣ್ಣಾ , ಅಕ್ಕಾ ಚೆನ್ನಾಗಿದ್ದಾರಾ  ಅಂತಾ ನಕ್ಕು ವ್ಯಾಪಾರದಲ್ಲಿ ಮಗ್ನರಾದರು. ನಾನೂ ಸಹ ಅಲ್ಲೇನು ನಡೆಯುತ್ತದೆ ಅಂತಾ ಆಸಕ್ತಿಯಿಂದಾ ನೋಡುತ್ತಾ ಹತ್ತಿರದಲ್ಲಿ ಕುಳಿತೆ. ಬನ್ನಿ ಅಲ್ಲಿನ ಮಾತನ್ನು ಕೇಳೋಣ.


  •   ರಘು :- "ನಮಸ್ಕಾರ ಮೇಡಂ , ಬಹಳ ದಿನ ಆಯ್ತು  ನಮ್ ಅಂಗಡಿಗೆ ಬಂದು. ಅಂದವನೇ ಲೇ ಯಾರೋ ಅಲ್ಲಿ  ಮೇಡಂ ಅವರಿಗೆ ಕೂಲ್  ಆಗಿ ಬಾದಾಮಿ ಹಾಲು ತಗೊಂಬಾರೋ ........" ಅಂದಾ..


Tuesday, September 13, 2011

ಬಿಳಿಗಿರಿ ರಂಗನ ಪುನರ್ ಪ್ರತಿಷ್ಟಾಪಿಸಿದ ಮುಜೀಬ್ ಅಹಮದ್ !!ಇಮಾಮರ ಗೋಕುಲಾಷ್ಟಮಿ ಸಂಬಂಧ ಇಲ್ಲಿದೆ!!!!!

ಕಳೆದ ವಾರ  ಹಾಗೆ ಮನೆಯಲ್ಲಿ ಕುಳಿತಿದ್ದೆ , ಸ್ನೇಹಿತರಿಗೆ ಮೊಬೈಲಿನಿಂದ ರಂಜಾನ್ , ಗೌರಿ ಹಬ್ಬ, ಗಣೇಶ ಹಬ್ಬದ ಶುಭಾಶಯಗಳನ್ನು ಕಳುಹಿಸುತ್ತಿದ್ದೆ. ನನ್ನ ಹಲವಾರು ಸ್ನೇಹಿತರಿಗೆ  ಶುಭ ಸಂದೇಶ ಕಳುಹಿಸಿದ ನಾನು ಮಾರನೆಯ ದಿನದ ಹಬ್ಬದ ತಯಾರಿಯಲ್ಲಿ  ತೊಡಗಿದೆ. ಅಷ್ಟರಲ್ಲಿ   ಸ್ನೇಹಿತರೊಬ್ಬರ   ಕರೆಬಂದು ದಿನಾಂಕ 28 /08 /2011 ರ  ವಿಜಯ ಕರ್ನಾಟಕ ಪತ್ರಿಕೆಯ ಲವ್ ಲವಿಕೆಯ ಸಂಚಿಕೆಯನ್ನು ಓದಲು ತಿಳಿಸಿದರು. ಪತ್ರಿಕೆಯನ್ನು ಕೈಗೆತ್ತಿಕೊಂಡು ಓದಲು ಹೋದಾಗ ಕಂಡಿದ್ದೆ ನನಗೂ ತಿಳಿದಿದ್ದ ಈ ವಿಸ್ಮಯ. ಹೌದು ಇದನ್ನು ನಾನೂ ಸಹ ಬ್ಲಾಗಿನಲ್ಲಿ ಹಾಕಲು ಉದ್ದೇಶಿಸಿದ್ದೆ. ಆದರೆ ನೆಚ್ಚಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಡಾ// ಏಜಾಸುದ್ದೀನ್ ರವರು ಒಂದು ಅಂದದ ವಿಚಾರ ಪೂರ್ಣ ಲೇಖನವನ್ನು ಬರೆದಿದ್ದರು. ನೆಚ್ಚಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿ "ಇಮಾಮ ಸಾಬರ ಗೋಕುಲಾಷ್ಟಮಿ " ಸಂಭಂದದ  ಕಥೆ  ಬರೆದಿದ್ದೇನೆ. [ ಈ ಲೇಖನ ಬರೆಯುವ ಮೊದಲು ಶ್ರೀ ಮುಜೀಬ್ ಅಹಮದ್ ರವರ  ಅವರಿಂದ ಮತ್ತಷ್ಟು ಮಾಹಿತಿ ಪಡೆದು ಈ ಲೇಖನ  ಪ್ರಕಟಿಸಲು ಅನುಮತಿ ಪಡೆದಿದ್ದೇನೆ]. ಆದರೂ ಬರೆದ  ಡಾ//ಎಜಾಸುದ್ದೀನ್ , ಹಾಗು ಪ್ರಕಟಣೆ ಮಾಡಿರುವ ವಿಜಯ ಕರ್ನಾಟಕ ಪತ್ರಿಕೆಗೆ ಕೃತಜ್ಞನಾಗಿದ್ದೇನೆ.                                     
ವಿಜಯ ಕರ್ನಾಟಕ ಪತ್ರಿಕೆಯ ಲೇಖನ

ಬನ್ನಿ  ವಿಚಾರ ತಿಳಿಯೋಣ. 1986 ನೆ ಇಸವಿ, ಬಿಳಿಗಿರಿ ರಂಗನ ಬೆಟ್ಟ  ಆಗಿನ್ನೂ  ಅವಿಭಜಿತ ಮೈಸೂರು ಜಿಲ್ಲೆಯಲ್ಲಿಯೇ ಇತ್ತು. ಒಮ್ಮೆ ಬಿಳಿಗಿರಿ ರಂಗನಾಥ ಸ್ವಾಮಿಯ ಅರ್ಚಕರಾದ  ಶ್ರೀ ನಾಗರಾಜ ಭಟ್ಟರು ತಾಲೂಕು ಕಚೇರಿಗೆ ಬಂದು ತಹಸಿಲ್ದಾರ್ ರವಲ್ಲಿ ಮನವಿ ಮಾಡಿ ಕೊಳ್ಳುತ್ತಾರೆ  ಸ್ವಾಮೀ  ಬಿಳಿಗಿರಿ ರಂಗನಾಥನ ಮೂಲ ವಿಗ್ರಹ ಅಲ್ಲಾಡುತ್ತಿದೆ  , ದಯಮಾಡಿ ಇದನ್ನು  ಪರಿಶೀಲಿಸಿ ಸರ್ಕಾರದ ವತಿಯಿಂದ ಕ್ರಮ ವಹಿಸಿ ದೇವಾಲಯ ದಲ್ಲಿ ಮೂಲ ವಿಗ್ರಹ ಪುನರ್ ಪ್ರತಿಷ್ಟಾಪಿಸಿ ದೇವಾಲಯದ ಪೂಜೆ ನಡೆಯಲು ಅವಕಾಶ ಮಾಡಿಕೊಡಿ,  ಎಂದು ವಿನಂತಿ ಮಾಡುತ್ತಾರೆ. ಯಾವುದೇ ದೇವಾಲಯದಲ್ಲಿ  ಭಗ್ನಗೊಂಡ, ವಿರೂಪಹೊಂದಿದ , ಅಲ್ಲಾಡುವ  ವಿಗ್ರಹಗಳನ್ನು ಪೂಜಿಸುವುದಿಲ್ಲಾ ಎಂಬ ಅಂಶ ತಿಳಿದಿದ್ದ  ತಹಸಿಲ್ದಾರ್ ಮುಜೀಬ್ ಅಹಮದ್ ರವರು , ಈ ಕಾರ್ಯದ ಬಗ್ಗೆ ಅರ್ಜಿ ಸ್ವೀಕರಿಸಿ  ಯೋಚಿಸಲು ತೊಡಗುತ್ತಾರೆ. ಅರ್ಚಕ ರಾದ ನಾಗರಾಜ ಭಟ್ಟರ ಬಳಿ ಮತ್ತಷ್ಟು ಹೆಚ್ಚಿನ ಮಾಹಿತಿ ವಿನಿಮಯ ಮಾಡಿ ಅವರನ್ನು ಬೀಳ್ಕೊಟ್ಟು ತಮ್ಮ ಯೋಚನಾ ಲಹರಿಯಲ್ಲಿ ತೊಡಗುತ್ತಾರೆ.ಇಂತಹ ಕಾರ್ಯದಲ್ಲಿ ತಾವು ತೊಡಗಿದಾಗ ಯಾವ ರೀತಿ ಪರಿಣಾಮ ಆಗಬಹುದು ಎಂಬ ವಿಚಾರದ ಬಗ್ಗೆ ಯೋಚಿಸಿದಾಗ ಅವರ ಮನಸ್ಸು ಭಾವೈಕ್ಯದ ಪರವಾಗಿ ನಿಲ್ಲುತ್ತದೆ. ಮಾರನೆಯದಿನ ದೇವಾಲಯದ ಧರ್ಮದರ್ಶಿಗಳ ಜೊತೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅವಲೋಕಿಸುತ್ತಾರೆ. ಈ ವಿಚಾರಗಳನ್ನು ಸರ್ಕಾರದ ಮಟ್ಟದ ಮುಜರಾಯಿ[ ಧಾರ್ಮಿಕ ದತ್ತಿ ಇಲಾಖೆ ] ಕಮಿಷನರ್ , ಹಾಗು ಜಿಲ್ಲಾಧಿಕಾರಿಗಳಿಗೆ  ಇಲ್ಲಿನ ವಿಚಾರದ  ಬಗ್ಗೆ ಪತ್ರ ಬರೆದು ಅವರ ಮನ  ಒಲಿಸಿ  ಅವರನ್ನು ಬಿಳಿಗಿರಿ  ರಂಗನ ಬೆಟ್ಟಕ್ಕೆ ಕರೆತರುತ್ತಾರೆ. ಅವರುಗಳೊಂದಿಗೆ ಸಮಾಲೋಚಿಸಿ ನಂತರ  ಯಳಂದೂರು ತಾಲೂಕಿನ  ಸರ್ವ ಜನಾಂಗದ ಮುಖಂಡರ ಸಭೆಯನ್ನು ಕರೆದು ವಿಚಾರ ವಿಮರ್ಶೆ ಮಾಡಲಾಗಿ ಎಲ್ಲಾ  ಜನಾಂಗದ ಮುಖಂಡರು ಮುಜೀಬ್ ಅಹಮದ್ ರವರ ನೇತೃತ್ವದಲ್ಲಿ  ಪುನರ್ಪ್ರತಿಷ್ಟಾಪನೆ  ಕಾರ್ಯ ಆಗಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ. ಅದರಂತೆ 1980 ರ  ಸೆಪ್ಟೆಂಬರ್ 01 ಮಧ್ಯಾಹ್ನ 12  ಘಂಟೆಗೆ   ಕಾರ್ಯಕ್ರಮ  ವಿಧಿ ವಿಧಾನ ಆರಂಭಿಸಿ ಅಕ್ಟೋಬರ್ 26 ರಂದು ಹೊಸ ವಿಗ್ರಹವನ್ನು ಧಾರ್ಮಿಕ ವಿಧಿಗಳೊಂದಿಗೆ ಪುನರ್ಪ್ರತಿಷ್ಟಾಪಿಸಬೇಕೆಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಎಲ್ಲಾ ಜವಾಬ್ಧಾರಿ ಹೊತ್ತ ಮುಜೀಬ್ ರವರಿಗೆ  ಮನದಲ್ಲಿ ತಳಮಳ ಇಂತಹ ಜವಾಬ್ಧಾರಿ ಕಾರ್ಯದಲ್ಲಿ ತಾನು ಎಷ್ಟರ ಮಟ್ಟಿಗೆ ತೊಡಗಬಲ್ಲೆ, ಹೆಚ್ಚು ಕಡಿಮೆ ಆದರೆ ಗತಿಯೇನು?? ಎಂಬ ಬಗ್ಗೆ ಯೋಚನೆ ಕಾಡಲು ಆರಂಭವಾಗುತ್ತದೆ.  1986 ರ ಆಗಸ್ಟ್ 31 ರಂದು ರಾತ್ರಿ ಒಂದೆರಡು ಬಾರಿ ಕನಸಿನಲ್ಲಿ ಬಿಳಿಗಿರಿರಂಗನೆ ಕನಸಿನಲ್ಲಿ ಬಂದು ಈ ಕಾರ್ಯವನ್ನು ಮಾಡಲು ನೀನು ಸಮರ್ಥ ಎಂದು ಹೇಳಿದಂತೆ ಭಾಸವಾಗುತ್ತದೆ . ಬೆಳಗಾಗುವುದನ್ನೇ ಕಾದಿದ್ದು ಮುಂಜಾನೆಯೇ ಬಿಳಿಗಿರಿ ರಂಗನ ಬೆಟ್ಟಕ್ಕೆ  ಆತುರಾತುರವಾಗಿ ದಾವಿಸುತ್ತಾರೆ. ದೇವರ ವಿಗ್ರಹದ ಎದುರು ನಿಲ್ಲ ಬೇಕೆಂಬ ಭಾವನೆ ಕಾಡಿ  ಅಲ್ಲಿಗೆ ಹೋಗಿ ವಿಗ್ರಹದ ಎದುರು ನಿಂತರೆ ಅಂದಿನ ಪ್ರಧಾನ ಆಗಮಿಕರಾದ  ಶ್ರೀ ಕೇಶವಾಚಾರ್ ರವರು ಯಜ್ಞಸಮಾನವಾದ ಕಾರ್ಯದ ಚುಕ್ಕಾಣಿಯನ್ನೇ ಇವರ ಕೈಗೆ ನೀಡುತ್ತಾರೆ.ಹಾಗು ಮುಜೀಬ್ ಅಹಮದ್ ರವರ ಹೆಸರಿನಲ್ಲೇ ಪ್ರತಿಷ್ಠಾಪನಾ ಸಂಕಲ್ಪ ಮಾಡಲಾಗುತ್ತದೆ , ಇದನ್ನು ಕಂಡು ದಿಗ್ಭ್ರಮೆಯಿಂದ  ಇದೇನು ಕೇಶವಾಚಾರರೆ??? ನೀವು ಮಾಡಿದ್ದು ಎಂದರೆ   ನನ್ನದೇನೂ ಇಲ್ಲಪ್ಪಾ  ಎಲ್ಲವೂ ಆ  ಬಿಳಿಗಿರಿರಂಗ ಆಡಿಸುತ್ತಿರುವ ನಾಟಕ ಇದು ಅಷ್ಟೇ ಅನ್ನುತ್ತಾರೆ. ಹಾಗು ಮೂಲವಿಗ್ರಹವನ್ನು ತಾತ್ಕಾಲಿಕವಾಗಿ ಬೇರೆಡೆಗೆ ಇದುವ ದಾರಿ ಮಾಡಿಕೊಡುವ ಕಳಾಕರ್ಷಣೆ ವಿಧಿ ಪ್ರಾರಂಭ ಆಗುವ ಸಮಯದಲ್ಲಿ ಪ್ರಧಾನ ಆಗಮಿಕರು ಗರ್ಭಗುಡಿಯೊಳಗೆ ಮೊದಲು ಮುಜೀಬ್ ಅಹಮದ್ ರವರನ್ನು ಕರೆದುಕೊಂಡು ಹೋಗುತ್ತಾರೆ.ಆಗ ಮನ ತುಂಬಿಬಂದ ಮುಜೀಬ್ ಅಹಮದ್ ರವರು ತಮ್ಮನ್ನು ತಾವು ನಂಬದ ಹಂತಕ್ಕೆ ಮುಟ್ಟಿರುತ್ತಾರೆ . ಸತತವಾಗಿ ಇವರ ಮುಂದಾಳತ್ವದಲ್ಲಿ ಐವತ್ತಾರು ದಿನ  ಹಗಲು ರಾತ್ರಿ  ಧಾರ್ಮಿಕ ಕಾರ್ಯಗಳು ನಿರ್ವಿಗ್ನವಾಗಿ ನಡೆಯುತ್ತವೆ. ಈ ಕಾರ್ಯಕ್ಕೆ ಬರುವ ಸಹಸ್ರಾರು ಭಕ್ತರಿಗೆ ಯಾವುದೇ ತೊಂದರೆ  ಆಗದಂತೆ   ಸಕಲ ವ್ಯವಸ್ತೆಯನ್ನು ಮಾಡಿ ಮುಜೀಬ್ ಅಹಮದ್  ಜೈ ಅನ್ನಿಸಿಕೊಳ್ಳುತ್ತಾರೆ.  1986  ರ ಅಕ್ಟೋಬರ್ 26ರಂದು ಬಿಳಿಗಿರಿರಂಗನ ಪರ್ತಿಷ್ಟಾಪನೆ ಕಾರ್ಯ ಯಶಸ್ವಿಯಾಗಿ ನೆರವೇರಿತು.ಅಲ್ಲಿಗೆ ಆಗಮಿಸಿದ್ದ ವಿವಿಧ ಧಾರ್ಮಿಕ ಕ್ಷೇತ್ರಗಳ ಆಗಮಿಕರು ಸುಮಾರು ಐವತ್ತು ಜನಕ್ಕೂ ಹೆಚ್ಚು ಆಗಮಿಕರು ವೇಧಘೋಶಗಳಿಂದ ವಾತಾವರಣವನ್ನು ಭಕ್ತಿ ಪರವಶಗೊಳಿಸುತ್ತಾರೆ. ನಂತರ ಕಾರ್ಯಕ್ರಮ ಮುಗಿಸಿ ಹೊರಡುವ ಸಮಯ ಬಂದಾಗ ಮುಜೀಬ್ ಅಹಮದ್ ರವರನ್ನು ಅಪ್ಪಿಕೊಂಡ ಪ್ರಧಾನ ಆಗಮಿಕರಾದ ಕೇಶವಾಚಾರ್ ರವರು  ಸ್ವಾಮೀ ನಿಮ್ಮ ಸಹಕಾರದಿಂದ ಬಿಳಿಗಿರಿರಂಗನ  ಪ್ರೇರಣೆಯಂತೆ ಕೆಲಸ ಸುಗಮವಾಗಿ ಆಯಿತು. ನೀವೊಬ್ಬ ಮಹಾಬ್ರಾಹ್ಮಣ  ನನಗೆ ಹೊರಡಲು ಅನುಮತಿ ಕೊಡಿ ಎಂದು ಭಾವ ಪೂರ್ವಕವಾಗಿ ಗದ್ಗತಿತರಾಗುತ್ತಾರೆ .ಕಣ್ಣಲ್ಲಿ ಆನಂದ ಭಾಷ್ಪ ಸುರಿಸುತ್ತಾ  ನಿಮ್ಮನ್ನು ಆ ಬಿಳಿಗಿರಿರಂಗ ಹರಸಿದ್ದಾನೆ ಎಂಬ  ಮನದ ಮಾತನ್ನು ಹೇಳುತ್ತಾರೆ.ಬಿಳಿಗಿರಿ ರಂಗನಾಥನ ಮೂರ್ತಿಯಲ್ಲಿ ಒಂದು ದಿವ್ಯ ಕಳೆ ಈ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿತ್ತು.