ಸಂಘಟನೆಗಳು,ವ್ಯಕ್ತಿಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಎಲೆಮರೆ ಕಾಯಿಯಂತೆ ಇದ್ದಾರೆ .
ಮಂಡ್ಯಾ ಜಿಲ್ಲೆ ಜನಗಳು ಒರಟರು , ಸಂಸ್ಕೃತಿ ಅರಿಯದವರೂ ಅನ್ನುವ ಜನರಿಗೆ ಸವಾಲ್ ಎಸೆದು ಸೆಡ್ಡು ಹೊಡೆದು ಮಂಡ್ಯಾ ಜಿಲ್ಲೆ ಜನ ಹೀಗೂ ಉಂಟು ಅನ್ನುವ ಸಂದೇಶ ಸಾರುತಿಹರು.ಬನ್ನಿ ನಮ್ಮ ಪುಸ್ತಕ ಸಾಮ್ರಾಟ ಅಂಕೆ ಗೌಡರ ಲೋಕಕ್ಕೆ ಹೋಗೋಣ .ನನಗೆ ಸುಮಾರು ಎಂಟು ವರುಷಗಳಿಂದ ಪರಿಚಯ ವಿರುವ ಇವರು ಮೃದುಭಾಷಿ,ಸಜ್ಜನ. .ಸ್ವಾಮೀ!!! ಒಬ್ಬ ವ್ಯಕ್ತಿ ಎಷ್ಟು ಪುಸ್ತಕ ಸಂಗ್ರಹಿಸ ಬಹುದು??ಹವ್ಯಾಸಕ್ಕಾಗಿ ಗಳಿಸಿದ ಹಣವನ್ನು ಎಷ್ಟು ಸುರಿಯ ಬಹುದು?? ಇಂತಹ ಹುಚ್ಚು ಹವ್ಯಾಸಗಳಿಗೆ ಮಡದಿಯ ಸಹಕಾರ ಎಷ್ಟಿರುತ್ತದೆ??ಇದಕ್ಕೆ ಉತ್ತರ ಈ ಅಂಕೆ ಗೌಡರುಸಾಧಿಸಿರುವ ಈ ಪುಸ್ತಕ ಲೋಕ.
ಬರೋಬ್ಬರಿ ಅಂದಾಜು ಸುಮಾರು ಒಂದು ಲಕ್ಷ ಮೀರಿ ಪುಸ್ತಕಗಳನ್ನೂ ಇವರು ಸಂಗ್ರಹಿಸಿದ್ದಾರೆ.ನಾಣ್ಯ ಸಂಗ್ರಹ,ಅಂಚೆ ಚೀಟಿಗಳ ಸಂಗ್ರಹ ,ಲಗ್ನಪತ್ರಿಕೆಗಳ ಸಂಗ್ರಹ ಸಹ ಇವರ ಬಳಿಯಲ್ಲಿದೆ.,ಈ ಪುಸ್ತಕದ ಮನೆ ಇಂದು ಸಾರ್ವಜನಿಕರಿಗಾಗಿ ಗ್ರಾಮೀಣ ಪ್ರದೇಶದ ಪುಸ್ತಕ ಪ್ರಿಯರಿಗಾಗಿ ನೀಡಲಾದ ಕೊಡುಗೆ.ಒಂದು ಸಂಸ್ಥೆ ಸಹ ಮಾಡಲು ಅಸಾಧ್ಯವಾದ ಕೆಲಸವನ್ನು ಇವರು ಮಾಡಿದ್ದಾರೆ.ಅಂಕೆ ಗೌಡರು ಒಬ್ಬ ಸಾಮಾನ್ಯ ಹಳ್ಳಿ ಕುಟುಂಬ ದಿಂದ ಬಂದವರು.ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿ ಗ್ರಾಮದ ಲ್ಲಿ ರೈತ ಕುಟುಂಬದಲ್ಲಿ ಜನಿಸಿದರು.ಪ್ರಾಥಮಿಕ,ಮಾಧ್ಯಮಿಕ, ಪ್ರೌಡ, ವಿಧ್ಯಾ ಭ್ಯಾಸ ಗ್ರಾಮೀಣ ಪ್ರದೇಶದಲ್ಲಿ ಆಯಿತು. ಪಿ.ಯೂ.ಸಿ. ಮುಗಿಸಿ ಓದುಮುಂದುವರೆಸಲು ಬಸ್ ಕಂಡಕ್ಟರ್ ಆಗಿ ಕೆಲ ಸಮಯ ನೌಕರಿ ಮಾಡಿ ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಿ ಬಿ.ಎ .ಪದವಿ ಪಡೆದರು.ಈ ಸಮಯದಲ್ಲಿ ಇವರ ಗುರುಗಳಾಗಿದ್ದ ಕೆ.ಅನಂತರಾಮು ರವರು ಯಾವುದೋ ಸಂದರ್ಭದಲ್ಲಿ ಹೇಳಿದ "ಸರ್ಟಿಫಿಕೇಟಿನ ದೊಡ್ದತನಕ್ಕಿಂತ ಒಳ್ಳೆಯ ಹವ್ಯಾಸಗಳೇ ಮೌಲ್ಯಯುತವಾಗಿರುತ್ತವೆ " ಸಾಧ್ಯ ವಾದರೆ ಬಡವರಿಗೆ ದ್ದ್ವನಿ ಯಾಗುವ ಪುಸ್ತಕ ಸಂಗ್ರಹ ಹವ್ಯಾಸ ಬೆಳಸಿಕೊಳ್ಳಿ ಎಂದು ಹೇಳಿದ ಮಾತು ಶಿಷ್ಯನ ಮನಸ್ಸಿನಲ್ಲಿ ನಾಟಿತು, ಅದರ ಫಲವೇ ಈ ಪುಸ್ತಕ ಸಂಗ್ರಹ.ಓದು ಮುಗಿದ ನಂತರ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಸಿಕ್ಕಿ ಟೈಮ್ ಆಫೀಸೆರ್ ಹುದ್ದೆಗೆ ಸೇರ್ಪಡೆ ಯಾದರು.ಪ್ರಾರಂಭದಿಂದಲೂ ಗಳಿಸಿದ ಹಣ ಪುಸ್ತಕ ಖರೀದಿಸಲು ವಿನಿಯೋಗವಾಗಲು ಶುರುವಾಯ್ತು.ಮಗನಿಗೆ ಮದುವೆ ಮಾಡಿದರೆ ಸರಿಯಾದಿತೆಂದು ಮದುವೆಮಾಡಿದರೆ .ಅಂಕೆ ಗೌಡರ ಬಾಳ ಸಂಗಾತಿ ಜಯಲಕ್ಷ್ಮಿ ಯವರೂ ಪತಿಗೆ ತಕ್ಕ ಸತಿಯಾಗಿ 


ಸಿನಿಮಾ ಹಾಲ್ ಒಂದನ್ನು ಖರೀದಿಸಿ ೧೨೦ ಇಂಟು 90 ಅಡಿ ಜಾಗದಲ್ಲಿ
ಡಾ.ಪ್ರಭುಶಂಕರ್ ,ನಾಗತಿಹಳ್ಳಿ ಚಂದ್ರಶೇಖರ್ [ ಸಾಹಿತಿ ಹಾಗು ಸಿನಿಮಾ ನಿರ್ದೇಶಕ],ಹಂ.ಪ . ನಾಗರಾಜಯ್ಯ ,ಡಾ.ಸಿದ್ದಲಿಂಗಯ್ಯ,ಒರಿಸ್ಸಾ ರಾಜ್ಯದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎ.ಜೆ. ಸದಾಶಿವ ,ನಿವೃತ್ತ ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯ , ಚಂಪಾ.ಕೆ.ಎಸ. ಭಗವಾನ್ ,ರಾಜೇಶ್ವರಿ ತೇಜಸ್ವಿ.ಚಂಪಾ,[ ಚಂದ್ರ ಶೇಖರ ಪಾಟಿಲ್] ಪ್ರಮುಖರು.ಕೆಲವು ಭೇಟಿ ನೀಡಿದ ದೇಶ ವಿದೇಶದ ಗಣ್ಯರು
ಅವರ ಅನುಭವಗಳನ್ನು ವಿವರವಾಗಿ ದಾಖಲಿಸಿ ಅಂಕೆ ಗೌಡರ ಕಾರ್ಯವನ್ನು ಕೊಂಡಾಡಿದ್ದಾರೆ.ನಾನು ಭೇಟಿನೀಡಿದ ಸಮಯದಲ್ಲಿ ನಾಗತಿಹಳ್ಳಿ ಚಂದ್ರ ಶೇಖರ್ ರವರ ತಾಯಿ ಭೇಟಿ ನೀಡಿದ್ದು ಅವರ ಇಳಿವಯಸ್ಸಿನಲ್ಲಿಯ ಪುಸ್ತಕ ಪ್ರೀತಿ ಕಂಡು ಅಚ್ಚರಿಯಾಯಿತು.ಅಂಕೆ ಗೌಡರ ಸಾಧನೆಯನ್ನು ಗುರುತಿಸಿದ ಹಿರೇ ಮಗಳೂರು ಕಣ್ಣನ್ ರವರು ಉದಯ ಟಿ.ವಿ. ಬೆಳಗಿನ ತಮ್ಮ ಕಾರ್ಯಕ್ರಮದಲ್ಲಿ ಸತತವಾಗಿ ಮೂರುದಿನಗಳ ಕಾಲ ಇವರ ಬಗ್ಗೆ ಮಾಹಿತಿ ನೀಡಿ ಉಪಕರಿಸಿದ್ದಾರೆ.ಉಳಿದಂತೆ ಇತರ ಎಲ್ಲಾ ಮಾಧ್ಯಮಗಳು ತಮ್ಮ ಕಾಣಿಕೆ ನೀಡಿವೆ.
ಇವರ ಸಾಧನೆಗೆ ಗರಿಯಾಗಿ ಹಲವು ಪ್ರಶಸ್ತಿಗಳು ಬಂದಿವೆ ಇವರಿಗೆ ಬೆನ್ನೆಲುಬಾಗಿ ಹಲವು ಸ್ನೇಹಿತರು ನಿಂತಿದ್ದು ಅವರಲ್ಲಿ ಚಂದ್ರ ಶೇಖರಯ್ಯ ಹಾಗು ಮಂಜುನಾಥ್ ಇಬ್ಬರು ಮಾತ್ರ ನನಗೆ ಸಿಕ್ಕಿದರು
ಬಹಳಷ್ಟು ಜನ ಸಾಮಾನ್ಯರು ಹಾಗೂ ಸ್ಥಳೀಯ ಶಿಕ್ಷಕರು ಈ ಪುಸ್ತಕ ಮನೆಯ ಯಶಸ್ಸಿನಲ್ಲಿ ಇಂದಿಗೂ ಪಾಲ್ಗೊಳ್ಳುತ್ತಿದ್ದಾರೆ.ಈ ಪುಸ್ತಕ ಮನೆ ಹಾಲಿ ಸುಮಾರು ಶೇಖಡ 60 ರಷ್ಟು ಕಾರ್ಯ ಮುಗಿದಿದ್ದು ಉಳಿದಂತೆ ಆಗಬೇಕಾದ ಕಾರ್ಯಗಳು ಬಹಳಷ್ಟಿದೆ. ಇನ್ನೂ ಸರಿ ಸುಮಾರು 20.೦೦೦ ಕ್ಕೂ ಮಿಗಿಲಾಗಿ ಪುಸ್ತಕಗಳು ವಿಂಗಡಣೆ ಆಗಬೇಕಾದ ಕೆಲಸ ಬಾಕಿಯಿದೆ.2] ಪುಸ್ತಕದ ಮನೆ ನಿರ್ವಹಣೆಗೆ ಆರ್ಥಿಕ ಅಡಚಣೆ ಉಂಟಾಗಿದೆ ಒಂದು ತಿಂಗಳಿಗೆ ಅಂದಾಜು ರೂ ೨೦,೦೦೦ ಗಳ ಖರ್ಚು ಉಂಟಾಗುತ್ತಿದ್ದು ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ.3] ಕೆಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಹೇರಳ ಧನ ಸಹಾಯ ಮಾಡುವುದಾಗಿ ಮುಂದೆ ಬಂದು ತಮ್ಮ ವಯಕ್ತಿಕ ಲಾಭ ಪಡೆಯಲು ಬಂದ ಕಾರಣ ಇಂತಹವರ ಧನ ಸಹಾಯವನ್ನು ಅಂಕೆ ಗೌಡರು ತಿರಸ್ಕರಿಸಿದ್ದಾರೆ.ನಾಡಿನ ಹಿರಿಮೆ ಸಾರಲು ಹೋರಾಟ ನಡೆಸಿರುವ ವ್ಯಕ್ತಿಗೆ ಸಹಾಯ ಮಾಡಲು ನಿಮಗೆ ಇಷ್ಟ ವಿದ್ದಲ್ಲಿ ಅವರನ್ನೇ ನೇರವಾಗಿ ಸಂಪರ್ಕಿಸಿ ಸಹಾಯ ಮಾಡ ಬಹುದು. ಅವರ ವಿಳಾಸ. ಶ್ರೀ ಅಂಕೆ ಗೌಡ ,ಪುಸ್ತಕದ ಮನೆ ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] ಹರಳ ಹಳ್ಳಿ ಪಾಂಡವಪುರ ತಾಲೂಕ್ ,ಮಂಡ್ಯ ಜಿಲ್ಲೆ.571434 ಮೊಬೈಲ್ ನಂಬರ್ ;9242844934 ,9242844206 ಗಳನ್ನೂ ಸಂಪರ್ಕಿಸಬಹುದು .ಪುಸ್ತಕ ಪ್ರಕಟಣೆ ಮಾಡುವವರು ತಮ್ಮ ಒಂದು ಪ್ರತಿಯನ್ನು ಇಲ್ಲಿಗೆ ಉಚಿತವಾಗಿ ಕಳುಹಿಸಿದರೆ ಅದೂ ಸಹ ಒಂದು ಉತ್ತಮ ಕಾರ್ಯ ವಾಗುತ್ತದೆ. ನೀವು ಒಮ್ಮೆ ಮೈಸೂರಿಗೆ ಬಂದರೆ ಮರೆಯದೆ ಇಲ್ಲಿಗೆ ಹೋಗಿಬನ್ನಿ ನಿಮ್ಮ ಗೆಳೆಯರಿಗೂ ತೋರಿಸಿ.ಒಂದು ಉತ್ತಮ ಹವ್ಯಾಸಿಯ ಕಾರ್ಯಕ್ಕೆ ನಾವೆಲ್ಲಾ ಬೆಂಬಲ ನೀಡೋಣ.ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.ಈ ಕಾರ್ಯದಿಂದ
ಓ .ಕೆ. ಮುಂದಿನ ಸಂಚಿಕೆಯಲ್ಲಿ ಹೊಸ ವಿಚಾರ ದೊಂದಿಗೆ ಮತ್ತೆ ಸಿಗೋಣ. ಥ್ಯಾಂಕ್ಸ್..



