Sunday, January 17, 2010

ಬಿಳಿಗಿರಿಯ ಬನದಲ್ಲಿ ..೦೪ ಹೊನ್ನ ಮೇಟಿ ಬೆಟ್ಟದ ಮೇಲೆ ಸಂತಸದ ಸರಮಾಲೆ!!

ಬಿಳಿಗಿರಿಯ ಬನದ ನಮ್ಮ ಓಡಾಟ ಮುಂದುವರೆದು ಮರುದಿನಕ್ಕೆ ಕಾಲಿಟ್ಟಿತು.ಮುಂಜಾನೆ ಚುಮು ಚುಮು ಚಳಿಯಲ್ಲಿ ಅಲ್ಲೇ ಹಾಕಿದ್ದ ಕ್ಯಾಂಪಿನ ಬೆಂಕಿಯಲ್ಲಿ [ರಾತ್ರಿವೇಳೆ ಕಾಡು ಪ್ರಾಣಿಗಳಿಂದ ರಕ್ಷಿಸಿ ಕೊಳ್ಳಲು ಹಾಕಿರುತ್ತಾರೆ] ಬೆಂಕಿ ಕಾಯುತ್ತಾ ಬಿಸಿ,ಬಿಸಿ, ಕಾಫಿ ಹೀರುತ್ತಾ ಹೊನ್ನ ಮೇಟಿ ಕಲ್ಲು ಬೆಟ್ಟಕ್ಕೆ ಹೋಗಲು ತೀರ್ಮಾನಿಸಿದೆವು.ಬುರುಡೆ ಕ್ಯಾಂಪಿನಿಂದ ಹೊಂನಮೆತಿಕಲ್ಲು ಬೆಟ್ಟಕ್ಕೆ ಸುಮಾರು ೨೦.ಕಿ.ಮೀ ಹಾದಿ. ಚಳಿಗೆ ಸ್ನಾನದ ಯೋಚನೆ ತೊರೆದು ಪಯಣ ಆರಂಭಿಸಿದೆವು. ಹಾದಿಯ ಎರಡೂ ಕಡೆ ಪ್ರಕೃತಿ ಮಾತೆ ಚೆಲುವಿನ ಚಿತ್ತಾರ ಬಿಡಿಸಿ ಮನಸೂರೆ ಗೊಂಡಿದ್ದಳು. ನಮ್ಮ ಕ್ಯಾಮರ ಗಳಿಗಂತೂ ಬಿಡುವಿಲ್ಲದ ಕೆಲಸಾ!!,ದಾರಿ ಯುದ್ದಕ್ಕೂ ಕಿತ್ತಳೆ,ಕಾಫಿಯ ಸವಾಸನೆ ಸೂಸುವ ಮರ ಗಿಡಗಳು., ಹಾಗೆ ಚಲನೆಗೆ ಸವಾಲಾದ ಕಡಿದಾದ ಹಾದಿ.ಎದೆ ನಡುಗಿಸುವ ಆಳವಾದ ಕಣಿವೆ ದಾಟಿ ಪಯಣ ಸಾಗಿತ್ತು.ಹೊನ್ನ ಮೆತಿಕಲ್ಲು ನಮ್ಮನ್ನು ಕೈ ಬೀಸಿ ಕರೆದಿತ್ತು. ಹೊನ್ನ ಮೇಟಿ ಕಲ್ಲು ಸಮುದ್ರ ಮತ್ತ ದಿಂದ ೯೦೦೦ ಅಡಿ ಎತ್ತರವಾಗಿದ್ದು !!ಬಿಳಿಗಿರಿ ಶ್ರೇಣಿಯ ಬೆಟ್ಟಗಳಲ್ಲಿ   ಎತ್ತರವಾದ ಬೆಟ್ಟವೆಂದು ತಿಳಿದು ಬಂತು.ಹೊನ್ನ ಮೇಟಿ ಕಲ್ಲು ಹತ್ತಿದ ನಮಗೆ ಶುದ್ದ ತಂಗಾಳಿ ಚಾಮರ ಬೀಸಿ ಸ್ವಾಗತ ಕೋರಿದ ಅನುಭವ.ಹಸಿರ ಹೊದ್ದ ಬಿಳಿಗಿರಿಯ ಬನ ಸಿಂಗಾರ ಮಾಡಿ ಕೊಂದು ನಲಿದಿತ್ತು.ಅಲ್ಲೇ ಇದ್ದ anti poaching camp ನೋಡಿದಾಗ  ನಮಗೆ ಆಶ್ಚರ್ಯ ವಾಯಿತು ಇಲ್ಲಿಯಾವ ಪ್ರಾಣಿ ಇಷ್ಟು ಎತ್ತರ ಹತ್ತಿ ಬರುತ್ತೆ ಅಂತ ಮನೆ ಕಟ್ಟಿದ್ದಾರೆ ಅಂತ!! ಅದಕ್ಕೆ ಉತ್ತರವಾಗಿ ಅಲ್ಲೇ ಸನಿಹದಲ್ಲಿದ್ದ ಒಂದು ಬೆಟ್ಟದ ಮೇಲೆ ಸಾರಂಗ ನಿಂತು ನಮ್ಮ ಪ್ರಶ್ನೆಗೆ ಉತ್ತರ ನೀಡಿ ಕ್ಯಾಮರದಲ್ಲಿ ಸೆರೆಯಾಯಿತು .ಅಲ್ಲೇ ಇದ್ದ ಒಂದು ಹಾಸು ಬಂದೆ ಹಾಗೂ ಇನ್ನೊಂದು ಎತ್ತರದ, ಇಳಿಜಾರಿಗೆ ವಾಲಿದ ಕಲ್ಲುಗಳು ಮನಸೆಳೆದು ನಮ್ಮಲ್ಲಿದ್ದ ಹುಡುಗುತನ ಜಾಗೃತವಾಗಿ ನಾವೇ ಹೀರೋಗಳು ಅಂತ ಅನ್ಕೊಂಡು ವಿವಿಧ ಬಗೆಯಲ್ಲಿ ನೆಗೆದಾಡಿ ಕೈ  ಕಾಲು ಗಳಿಗೆ ಕಸರತ್ತು ನೀಡಿದೆವು.ಹಾಗೆ ಸಾಗಿದ ನಮ್ಮ ತುಂಟಾಟ ಬಹಳ ಹೊತ್ತು ನಡೆಯದೆಹೊಟ್ಟೆ ಅಲಾರಂ ನೀಡಿದಾಗ ಮದ್ಯಾಹ್ನ ೨ ಘಂಟೆ ಆಗಲೇ ನಮಗೆ ತಿಳಿದದ್ದು ನಾವು ಬೆಳಿಗ್ಗೆ ತಿಂಡಿ ತಿಂದೆ ಇಲ್ಲಾ ಅಂತ !!ಹಸಿವ ಮರೆಸಿ ಚೆಲುವ ಸುರಿಸಿ  ಆನಂದ ನೆಡಿದ ಆ ಪ್ರಕೃತಿ ಮಾತೆಗೆ ಎಷ್ಟು ನಮಿಸಿದರೂ ಸಾಲದು.

Friday, January 15, 2010

ದ್ವೀಪದ ರಂಗನಿಗೆ ಸಂಕ್ರಾಂತಿ ದೀಪಗಳ ಸಂಭ್ರಮ!!!ಲಕ್ಷದೀಪ ಉತ್ಸವ !!!


ಬೆಳಕಿನಹಣತೆಗಳ  ಜೋಡಣೆ!! ಕಣ್ಣಿಗೆ ಬೆಳಕಿನ ಹಣತೆಗಳ ವಿವಿಧ ಆಕಾರಗಳ  ಅರ್ಪಣೆ!! ಲಕ್ಷದೀಪಗಳ ಸಾಲು ಸಾಲು ರಂಗನಿಗೆ ಅರ್ಪಣೆ!![ಚಿತ್ರಗಳನ್ನು  ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ರಂಗನಾಥ ದೇವಾಲಯದ  ಆವರಣ ದಲ್ಲಿ ತೆಗೆಯಲಾಗಿದೆ .

Thursday, January 14, 2010

ಬಿಳಿಗಿರಿಯ ಬನದಲ್ಲಿ .03 ಬುರುಡೆ ಕ್ಯಾಂಪಿನಲ್ಲಿ ವೀರಪ್ಪನ್ ನೆನಪು !!!

ಗುಂದಾಲ್ ಅಣೆಕಟ್ಟಿನ೨೩ ಕಿ.ಮಿ ಹಾದಿ ಕಾಡಿನಲ್ಲಿ ಸಂಚರಿಸಿ ಕೊನೆಗೆ ಬುರುಡೆ ಕ್ಯಾಂಪಿನ ಮನೆಗೆ ಬಂದೆವು. ಇದು ೧೯೪೦ ರಲ್ಲಿ ನಿರ್ಮಿಸಿದ ಒಂದು ದತ್ತದವಿಯ ಕ್ಯಾಂಪು .ಹಳೆಯ ಮನೆಯಾದರೂ ಉತ್ತಮ ನಿರ್ವಹಣೆ ಇದೆ!! ನಿಮಗೆ ಕಾಡಿನ ನಿಜದ ಅನುಭವ ನೀಡಲು ಈ ಮನೆಗೆ ವಿದ್ಯುತ್ ಸಂಪರ್ಕ?[ಇಲ್ಲಿಗೆ ಲೈನ್ ಎಳೆಯೋಕೆ ಕಾಡಿನಲ್ಲಿ ಕಂಬ ಹಾಕಬೇಕು]ಇಲ್ಲ .ಇದು ಒಂತರಚಂದದ ಅನುಭವ .ವಿದ್ಯುತ್ ಇದ್ರೆ ನಾವು ಟಿ.ವಿ. ಕೇಳ್ತಿವಿ,ಸಂಗೀತ ಬರುತ್ತೆ ,ಬೆಳಕಿನಲ್ಲಿ ಪರಿಸರ ನಮ್ಮಿಂದ ಹಾಳಾಗುತ್ತೆ ಅಲ್ವ?ಸ್ವಾಮೀ ಇಲ್ಲಿಗೆ ಬಂದ ನಂತರ ಇಲ್ಲಿ ಕಾಡುಗಳ್ಳ ವೀರಪ್ಪನ್ ನನ್ನು ಸ್ವಲ್ಪ ದಿನ ಇಟ್ಟಿದ್ರು ಅಂತ ಗೊತ್ತಾಯ್ತು!![ಈ ಬಗ್ಗೆ ಹಲವು ಅಂತರ್ಜಾಲಗಳಲ್ಲಿ ವೀರಪ್ಪನ್ ಹಾಗು ಈ ಪ್ರದೇಶದ ನಂಟಿನ ಬಗ್ಗೆ ಮಾಹಿತಿ ಹರಿದಾಡ್ತಿದೆ ] ವೀರಪ್ಪನ್ ಹಿಡಿಯೋಕೆ ಯಾಕೆ ಅಷ್ಟು ಕಷ್ಟ ಆಯ್ತು ಅಂತ ಇಲ್ಲಿಬಂದ್ರೆ ಗೊತ್ತಾಗುತ್ತೆ!! ನಾವೋ ಪಾಪ ಪೋಲಿಸ್ ನವರನ್ನು  ಆ ಕಾಲದಲ್ಲಿ ಬೈದಿದ್ದ ಬಗ್ಗೆ ಪಶ್ಚಾತ್ತಾಪ ಪಟ್ವಿ.ಈ ಜಾಗವು ದತ್ತ ಕಾಡಿನ ಮಧ್ಯ ದಲ್ಲಿದ್ದು, ಆನೆಗಳು,ಕಾಟಿಗಳು, ನಿರ್ಭಯವಾಗಿ ಓಡಾಡುವ ಪ್ರದೇಶ!! ನಮಗೂ ರಾತ್ರಿಯೆಲ್ಲ ಈಆನೆಗಳ ಗೀಳು ,ಕಾಟಿಗಳ ಅರಚಾಟ, ಕೇಳುವ ಅವಕಾಶ ಒದಗಿಬಂತು.ಕತ್ತಲಿನ ನಿಶ್ಯಬ್ದತೆ  ಹೊಸ ಪ್ರಪಂಚದೊಳಗೆ ನಾವು ಕಳೆದು ಹೋಗಿದ್ದೆವು.ಮೊಬೈಲ್ ಕಿರಿಕಿರಿ,ಟಿ.ವಿ. ಗದ್ದಲ,ವಾಹನಗಳ ಆರ್ಭಟ, ಎಲ್ಲದರಿಂದ ಮುಕ್ತ ...ಮುಕ್ತ !! ಶುದ್ದ ಗಾಳಿ ,ಮರಗಳ ಬೇರುಗಳಿಂದ ಜಾರಿ ಔಷದಿ ಗುಣವುಳ್ಳ ಶುದ್ದ ಜರಿಯ ನೀರು  ,ಎಲ್ಲ ಕಾಡಿನ ತಾಯಿ ನಮಗೆ ನೀಡಿ ಹರಸಿದಳು!! ರಾತ್ರಿ ಅಲ್ಲೇ ಇದ್ದ ಸಿಬ್ಬಂದಿ ನಮ್ಮ ಬುಟ್ಟಿಯಲ್ಲಿದ್ದ ಜೋಳದ ರೊಟ್ಟಿ,ಚಪಾತಿ,ಅನ್ನು ಬಿಸಿಮಾಡಿ , ಅಣ್ಣ  ಸಾಂಬಾರ್ [ಅಡಿಗೆ ತಯಾರಿ ಚಿತ್ರ ೦೫] ನೀಡಿ ತೃಪ್ತಿ ಪಡಿಸಿದರು.ಅಂದು ಸಂಜೆ ಒಬ್ಬ ಮನುಷ್ಯ ಕಾಡಿನ ಹಾದಿಯಲ್ಲಿ ಸೈಕಲ್ಲಿನಲ್ಲಿ ನಾವಿದ್ದ ಕ್ಯಾಂಪಿಗೆ ಬಂದದ್ದು  ಒಂತರ ವೀರಪ್ಪನ್ ನೋಡಿದ ಹಾಗೆ ಆಯ್ತು[ಚಿತ್ರ ೪] ನಾಡಿನಾಲ್ಲಿ ಇಲ್ಲದ ಸಂಬ್ರಮ ಕಾಡಿನಲ್ಲಿ ವೀರಪ್ಪನ್ ಅಲೆದ ಜಾಗಗಳಲ್ಲಿ ಸಿಕ್ಕಿತ್ತು!! ಹಾಗೆ ರಾತ್ರಿಯ ನೀರವತೆಯಲ್ಲಿ  ನಮ್ಮ ನಿದ್ರೆಯ ಯಾತ್ರೆ ಶುರುವಾಗಿತ್ತು .

ಬಿಳಿಗಿರಿಯ ಬನದಲ್ಲಿ ..02 ಗುಂದಾಳು ಅಣೆಕಟ್ಟಿನಿಂದ ಬುರುಡೆ ಕ್ಯಾಂಪಿನ ಕಾನನದ ಹಾದಿಯಲ್ಲಿ !!!

೨೦೦೯ ರ ಡಿಸೆಂಬರ್ ೨೫ ರಿಂದ ೨೮ ರವರೆಗೆ ಎಲ್ಲಾದರೂ ಪ್ರವಾಸ ಹೋಗುವ ಪ್ಲಾನ್ ನಡೆದಿತ್ತು!ಹೋಗೋದು ಎಲ್ಲಿಗೆ ?ರಜದಲ್ಲಿ ಎಲ್ಲಿ ಹೋದ್ರೂ ಜನಗಳ ಸಂತೆ !! ಜನಗಳ ಧಾಳಿ ಇಂದ ಪ್ರವಾಸಿ ತಾಣಗಳಲ್ಲಿ ಊಟ, ತಿಂಡಿ, ವಸತಿ ಎಲ್ಲಕ್ಕೂ ಪರದಾಟ ವಾಗಿ ಪ್ರವಾಸ ಪ್ರಯಾಸ ವಾಗಿ ನಿಜವಾದ ಉತ್ಸಾಹ ಇಳಿದು ಸಂಕಟ ಪಡುವ ಕ್ರಮ ಬೇಡವೆಂದು ತೀರ್ಮಾನಿಸಿ ಕಾಡಿಗೆ ಹೋಗಲು ತಯಾರಿ ನಡೆಯಿತು.ಸ್ನೇಹಿತರನ್ನು ಗೋಳಾಡಿಸಿ ಮಾಹಿತಿ ಪಡೆದು ಅರಣ್ಯಾಧಿಕಾರಿಗಳ ಅನುಮತಿ ಪಡೆದು ೨೫ ನೆ ತಾರೀಖು ಟಾ.ಟಾ. ಸಫಾರಿ ಕಾರು ವೇಣು ಚಾಲನೆಯಲ್ಲಿ ನಮ್ಮನ್ನು [ನಾನು,ಶ್ರೀಧರ್,ವೇಣು,ನಾರಾಯಣ ರಾವ್,ರಘು,ದೀಪಕ್ ]ಹೊತ್ತು ಸಾಗಿತು.ಯಾವ ಜಾಗ ವೆಂದು ತೀರ್ಮಾನವಾಗದ ಕಾರಣ ನಮ್ಮನ್ನು ಅಂತಿಮವಾಗಿ ಗುಂಡಾಲ್ ಅಣೆಕಟ್ಟೆ ಮುಖಾಂತರ ಬುರುಡೆ ಕ್ಯಾಂಪಿಗೆ ಕಳುಹಿಸಿ ಕೊಡಲಾಯಿತು.[ನಮ್ಮನ್ನು ಆತ್ಮೀಯವಾಗಿ ಕಂಡ ಅರಣ್ಯಾಧಿಕಾರಿ ಶ್ರೀ ಬೋರಯ್ಯ ರವರನ್ನು ನೆನೆಯದಿದ್ದರೆ ತಪ್ಪಾಗುತ್ತೆ!!ಅವರ ಸಹಕಾರ ತುಂಬಾ ದೊಡ್ಡದು.]ಗುಂಡಾಲ್ ಅಣೆಕಟ್ಟೆ ತಲುಪಿದೆವು[ಚಿತ್ರ 02,ಹಾಗು 03 ಗುಂಡಾಲ್ ಡ್ಯಾಮಿನ ನೋಟ]ಗುಂದಾಲ್ ದ್ಯಾಮಿನಿಂದ ಬುರುಡೆ ಕ್ಯಾಂಪಿಗೆ ಸುಮಾರು ೨೩ ಕಿ.ಮೀ  ದೂರದ ದಟ್ಟ ಕಾನನದ ಹಾದಿ !! ಒಂದು ಬದಿ ಆಳವಾದ ಕಣಿವೆ ಇನ್ನೊದು ಬದಿ ಕಾಡಿನ ಬೆಟ್ಟದ ಗೋಡೆ ಮಧ್ಯೆ ಸಾಗಿದ ನಮ್ಮ ಕಾರು ಸುಮಾರು ೧೦ ಕಿ.ಮೀ/ಘಂಟೆಗೆ  ವೇಗದಿಂದ ತೆವಳುತ್ತಿತ್ತು !! ಮೊದಲ ಸ್ವಾಗತ ನೀಡಿದ ಸಾರಂಗಗಗಳ  ಜೋಡಿ ಮೊಡಿಮಾಡಿತ್ತು!!![ಚಿತ್ರ 04]ಹಾಗೆ ತೆವಳಿದ ನಾವು ಕಾಡಿನೊಳಗೆ ಲೀನವಾಗಿ ಸಾಗಿದೆವುಮುಂದೆ ಲಾಂಗೂರ್ ಕೋತಿಯೊಂದು ಮರದಿಂದ ಇನ್ನೊಂದು ಮರಕ್ಕೆ ಹಾರುವ ಸಾಹಸ ಕಂಡು ವಿಸ್ಮಯ ವಾಯಿತು [ಚಿತ್ರ 01].ದಾರಿಯಲ್ಲಿ  ಕಡಿದಾದ   ಬಂಡೆಗಳು  ನೀರಿನ  ಜಾರಿಯಲ್ಲಿ  ಅಡಗಿ ವಾಹನಗಳು ತೊಂದರೆಗೆ ಈಡಾಗುವ ಸಂಭವ ವಿದ್ದು[ಚಿತ್ರ ೦೫ ,೦೬]ಆತಂಕದಲ್ಲೇ ಸಾಗಿ ಗುರಿ ಮುಟ್ಟಿದೆವು. ಕಾನನದ ಹಾದಿಯ ಪಯಣ ನಮ್ಮನ್ನು ಮುಧಗೊಳಿಸಿ  ಮೋಡಿ ಮಾಡಿತ್ತು !!!


ಕಾನನದಲ್ಲಿ   ಸಾಗಿದ  ನಮಗೆ  ಸಿಕ್ಕ ದಾರಿ !!!

Wednesday, January 13, 2010

ಬಿಳಿಗಿರಿಯ ಬನದಲ್ಲಿ ,ದೊಡ್ಡ ಸಂಪಿಗೆ ಮರದ ಸನಿಹದಲ್ಲಿ !!!

ಬಿಳಿಗಿರಿಯ ಬನದಲ್ಲಿ ನಮ್ಮ ಕಲ್ಪನೆಗೆ ನಿಲುಕದ ಎಷ್ಟೋ ಕೌತುಕಗಳು ಅಡಗಿವೆ.!! ಅಂತ ಒಂದು ಕೌತುಕದ ಬಗ್ಗೆ ತಿಳಿಯೋಣ ಬನ್ನಿ.ಬಿಳಿಗಿರಿ ರಂಗನ ಬೆಟ್ಟ ಶ್ರೇಣಿಯ ಕಾಡುಗಳು ದಟ್ಟವಾಗಿದ್ದು ವನ್ಯಜೀವಿಗಳಿಂದ ತುಂಬಿದೆ.ಇಂತಹ ಒಂದು ದಟ್ಟ ಕಾನನದ ಮಧ್ಯೆ ಸುಮಾರು ೨೦೦೦ ವರ್ಷ!!![ಅರಣ್ಯ ಇಲಾಖೆಯ ಮಾಹಿತಿಯಂತೆ}ಗಳಿಂದ  ಭಾರ್ಗವಿ ನದಿ [ ಈ ಸಣ್ಣ ನದಿ ಕಾವೇರಿಯ ಉಪನದಿ!! ಬಿಳಿಗಿರಿಯ ಬನದ  ಹಲವಾರು ಸಣ್ಣ ಜರಿಗಳು ಸೇರಿ ಆಗಿರುವ   ನದಿ!ಇದು ಕಾವೇರಿ ನದಿಯ ಉಪನದಿಯೂ ಹೌದು ,] ತೀರದಲ್ಲಿ ಸಂಪಿಗೆ ಸುವಾಸನೆ ಬೀರುತ್ತಿದೆ.ದೊಡ್ಡ ಸಂಪಿಗೆ ಮರದ ವಿಶೇಷ ವೆಂದರೆ ಒಂದೆಮರದಲ್ಲಿ ಕೆಂಪು ಹಾಗು ಹಳದಿ ಬಣ್ಣದ ಹೂ ಗಳನ್ನ ಬೆಳಸುವುದು!!ಈ ಮರದ ಸನಿಹ ಹರಿವ ನದಿ ಜಮದಗ್ನಿ ಮಹರ್ಷಿಯ ಪತ್ನಿ ರೇಣುಕ ದೇವಿಯ ಅವತಾರವೆಂದೂ,ಈ ಪ್ರದೇಶದಲ್ಲೇ ವಾಸಿಸುತ್ತಿದ್ದರೆಂದೂ, ಪ್ರತೀತಿ [ಇದು ಕರ್ನಾಟಕ ಗೆಜೆತೀರ್ನಲ್ಲಿ ದಾಖಲಾಗಿದೆ]ದೊಡ್ಡ ಸಂಪಿಗೆ ಮರದ  ಸುತ್ತ ಲಿಂಗ ಗಳೆಂದು ಪೂಜಿಸುವ ಸುಮಾರು ಒಂದು ನೂರಕ್ಕೂ ಹೆಚ್ಚಿನ ಶಿಲೆಗಳಿದ್ದು ,ಮರದ ಸುತ್ತಳತೆ ೨೦ ಮೀಟರ್ ಇರುತ್ತದೆ!!! ಮರದ ಎತ್ತರ ೧೩೦ ಅಡಿ ಇದ್ದು ಗಗನ ಚುಂಬಿಯಾಗಿದೆ!!ಇಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಬೇಕಿದ್ದು, ಕೆ .ಗುಡಿ ಇಂದ ಬಿ.ಆರ್. ಹಿಲ್ಲ್ಸ್ ದಾರಿಯ ಮಧ್ಯೆ ಸಿಗುವ ಅರಣ್ಯ ಇಲಾಖೆಯ ಗೇಂ ರೂಟ್ ನಲ್ಲಿ ಸಾಗಬೇಕು.ದಟ್ಟ ಕಾಡಿನಲ್ಲಿನ ಪ್ರದೇಶ ವಾದ ಕಾರಣ ಆನೆ, ಕಾಟಿ, ಕಾಡು ಹಂದಿ, ,ಹುಲಿ,ಸಾರಂಗ, ಮುಂತಾದ ಜೀವಿಗಳು ಅದೃಷ್ಟವಿದ್ದರೆ ಸಿಗಬಹುದು !!!. ನೆನಪಿಡಿ ಇದು  ಕಾಡುಗಳ್ಳ ವೀರಪ್ಪನ್  ಓಡಾಡಿದ ಪ್ರದೇಶ !!!.ಇಲ್ಲಿನ ಗಾಳಿ ,ನೀರು ಸಂಪೂರ್ಣ ಶುದ್ದ ವಾಗಿದ್ದು ಮನಸ್ಸಿಗೆ ಉಲ್ಲಾಸ ನೀಡುತ್ತದೆ.ಅವಕಾಶ ಸಿಕ್ಕರೆ ಅರಣ್ಯ ಇಲಾಖೆಯ ಅನುಮತಿ ಪಡೆದು ಹೋಗಿಬನ್ನಿ.