tag:blogger.com,1999:blog-4215797146714128289.post1124215715633886362..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಸಿರ್ಸಿ [ ಶಿರಸಿ ] ನೆನಪು ಕಾಡ್ತಾ ಇದೆ.....ಪಯಣ.15 ಬನ್ನಿ ಶಿರಸಿ ಜಾತ್ರೆ ನೋಡೋಣ !!!!Unknownnoreply@blogger.comBlogger4125tag:blogger.com,1999:blog-4215797146714128289.post-36009036940053721902012-11-12T18:19:09.317+05:302012-11-12T18:19:09.317+05:30ಬಾಲು ರವರೆ ನೀವು ಸಂಜೆ 4 ರ ವರೆಗಸ್ಟೇ ಇದ್ರಿ. ಆಮೇಲೆ ನೀ...ಬಾಲು ರವರೆ ನೀವು ಸಂಜೆ 4 ರ ವರೆಗಸ್ಟೇ ಇದ್ರಿ. ಆಮೇಲೆ ನೀವು ಇದ್ದು ಜಾತ್ರೆಯ ಮಜಾ ನೋಡಬೇಕಿತ್ತು. ರವಿ ಮನೆ ಸೇರಿದ ಮೇಲೆ ಜಾತ್ರೆಗೆ ರಂಗೆeರುವದು. ನಾಟಕ ಕಂಪನಿಗಳು, ಯಕ್ಷಗಾನ ಡೆeರೆಗಳು ಎಲ್ಲ ಸುತ್ತಬೇಕಿತ್ತು. ರಾತ್ರೆಯಾದೊಡನೆ , ಅದೂ ಹನ್ನೊಂದರ ಮೇಲೆ ಸಭ್ಯರೆಲ್ಲ, ಮನೆಸೇರಿದ ಮೇಲೆ , ಜಾತ್ರೆಯಲ್ಲಿ ವಿಶೇಷಗಳೂ ನಡೆಯುತ್ತವೆ. ಮಹಾರಾಷ್ಟ್ರದ ಲಾವಣಿಗಳಂತೆ ಲಂಗ ದಾವಣಿಗಳು ಕುಣಿಯುತ್ತವೆ.<br /><br />ಏನೇ ಇರಲಿ , ಸಿರ್ಸಿ ಜಾತ್ರೆಗೆ ಅದರದೇ ಆದ ಮಹತ್ವವಿದೆ. ಆಸ್ತಿಕರ ಮನೋಭಾವನೆಗೆ ಚ್ಯುತಿ ಬಾರದಂತೆ ದಶಕಗಳ ಆಚರಣೆಯ ಇತಿಹಾಸ ಈ ದೇವಿ ಜಾತ್ರೆಗಿದೆ.<br /><br />ಹರಿಹರ ಭಟ್, ಬೆಂಗಳೂರು.<br />November 12 , 2012.Anonymoushttps://www.blogger.com/profile/01732607413276688814noreply@blogger.comtag:blogger.com,1999:blog-4215797146714128289.post-71166414672717852722012-11-12T11:15:19.170+05:302012-11-12T11:15:19.170+05:30ನಮ್ಮನ್ನು ಜಾತ್ರೆಗೆ ಕರೆದುಕೊಂಡು ಹೋಗಿದ್ದೀರಲ್ಲಾ ಸರ್. ಧನ...ನಮ್ಮನ್ನು ಜಾತ್ರೆಗೆ ಕರೆದುಕೊಂಡು ಹೋಗಿದ್ದೀರಲ್ಲಾ ಸರ್. ಧನ್ಯವಾದಗಳು, ಶಿರಸಿ ಜಾತ್ರೆ ಬಹಳಷ್ಟು ಹೆಸರು ಮಾಡಿದೆ ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-4215797146714128289.post-77131836066476622362012-11-12T10:29:53.835+05:302012-11-12T10:29:53.835+05:30ಬಾಲು ಸರ್...
ಶಿರಸಿಯ ಜಾತ್ರೆ...
ಹಮ್.ಮೊದಲಿಗೆ ನಿಮಗೆ ಧನ್...ಬಾಲು ಸರ್...<br />ಶಿರಸಿಯ ಜಾತ್ರೆ...<br />ಹಮ್.ಮೊದಲಿಗೆ ನಿಮಗೆ ಧನ್ಯವಾದ ನನಗೊಂದಿಷ್ಟು ಶಿರಸಿಯ ಜಾತ್ರೆಯ ಚಿತ್ರಗಳನ್ನು ಕೊಟ್ಟಿದ್ದಕ್ಕೆ...ಇದನ್ನು ನನ್ನ ಗಣಕದಲ್ಲಿ ಜೋಪಾನವಾಗಿಟ್ಟುಕೊಳ್ಳುತ್ತೇನೆ..<br />ಇನ್ನು ಜಾತ್ರೆಯ ಬಗ್ಗೆ..<br />ಏನು ಹೇಳ್ಳಿ??? ಎಲ್ಲರೂ ಜಾತ್ರೆಯ ಬಗ್ಗೆ ಬರ್ದಿರ್ತಾರೆ.ನನದೇನೂ ವಿಶೇಷವಿಲ್ಲ,ಆದರೆ ನನ್ನ ಪಾಲಿಗೆ ಜಾತ್ರೆ ವಿಶೇಷ ಅಷ್ಟೇ...<br />ನಮ್ಮೆಲ್ಲರ ಪಾಲಿಗೆ ಜಾತ್ರೆ ಎಂದರೆ ಅದೊಂದು ವರ್ಡಕಪ್ಪಿನಂತೆ...ಮತ್ತೆ ಯಾವಾಗ ಬರುತ್ತೇವೋ ಎಂದು ಕಾಯುತ್ತಿರುತ್ತೇವೆ..<br />ಮೊದಲ ಬಾರಿಗೆ ನಾನು ಜಾತ್ರೆ ನೋಡಿದ್ದು ಬಹುಷಃ ಒಂದನೇ ತರಗತಿಯಲ್ಲ್ಲೇನೋ...ಆಗ ತಗೋಂಡಿದ್ದ ಕೆಂಪು ಪಲ್ಟಿಹೊಡೆಯುವ ಜೀಪು ಇನ್ನೂ ನೆನಪಿದೆ ನನಗೆ..ಆಮೇಲೆ ಹಂಗೇ ನಂತರದಲ್ಲಿ ಏಳು ಸೌಡಿನ ಗನ್ನು ಮೂರನೇ ತರಗತಿಗೆ,ಐದಕ್ಕೆ ರಿಮೋಟ್ ಕಾರು, ಏಳಕ್ಕೆ ಅದೇನೋ ಒಂದು ರೀತಿಯ ಗನ್ನು,ಒಂಬತ್ತಕ್ಕೆ ಗುಳ್ಳೆ ಬಿಡುವ ಆ ಅಂಟು ,.ಹಾಂ ಅದೇ ಮೊದಲು ನಾನು ದೋಣಿ ಹತ್ತಿದ್ದು...<br />ಅಲ್ಲಿಯತನಕ ನಮ್ಮ ಜಾತ್ರೆ ಸಂಜೆಯ ತನಕವಷ್ಟೇ ಸೀಮಿತ,ಆಮೇಲೆ ಅಪ್ಪನ ಮೊಪೆಡ್ ಹತ್ತಿ ಮುಂದೆಕೂತು ಮನೆಗೆ ಬರುತ್ತಿದ್ದುದಷ್ಟೇ...<br />ರಾತ್ರಿ ಹೊತ್ತು ಜಾತ್ರೆಯ ಪರಿಚಯವಾಗಿದ್ದು ಮೊದಲ ಪೀಯುಸಿಯಲ್ಲಿ...ಶಿರಸಿಯ ಆದರ್ಶ ನಗರದಿಂದ ದಿನಾ ಸಂಜೆ ೬ಕ್ಕೆ ಒಂದು ಗ್ವಾಲೆ(ಗುಂಪು) ಹುಡುಗರೊಂದಿಗೆ ಅವರಿವರಿಗೆ ಕಿಚಾಯಿಸಿಕೊಳ್ಳುತ್ತಾ ಹೊರಟರೆ ೭ಕ್ಕೆ ದೇವಿಕೆರೆ ಸೇರಿದರೆ ಅಲ್ಲಿಂದ ಸುಮ್ಮನೆ ನಿಂತರೆ ಸಾಕು, ಜನರೇ ನಮ್ಮನ್ನು ದೂಕಿಕೊಂಡು ಜಾತ್ರೆ ಚಪ್ಪರ ಮುಟ್ಟಿಸುತ್ತಾರೆ!!!!!<br />ಆ ರಾತ್ರಿ ಓಡಾಟ ಮಾತ್ರ ಮರೆಯಲಿಕ್ಕಾಗದು...<br />ಮುಂದೆ ಮೊದಲ ವರುಷದ ಇಂಜಿನಿಯರಿಂಗಿನಲ್ಲಿ ಇನ್ನಷ್ಟು ಹೊಸ ಸ್ನೇಹಿತರೊಂದಿಗೆ ಸುತ್ತಾಟ,ಹಳೆಯ ಪಿ.ಯು.ಸಿ ಗೆಳೆಯರ ಜೊತೆ ಕಿತ್ತಾಟ..ಹಿಂಗೇ ನಡೆದಿತ್ತು...<br />ಮೂರನೇ ವರುಷ ಬೆಂಗಳೂರಿಗೆ ವಿ.ಟಿ.ಯು ಸಾಂಸ್ಕೃತಿಕ ಉತ್ಸವಕ್ಕೆ ಹೋಗಿದ್ದರಿಂದ ಜಾತ್ರೆ ತಪ್ಪಿಸಿಕೊಂಡೆ..<br /><br />ಇನ್ನು ಜಾತ್ರೆಗೆ ಒಂದಷ್ಟು ದಿನವಿರುವಾಗಲೇ ಉಳಿದ ದಿನದಲ್ಲಿ ತರಕಾರಿ ಮಾರುಕಟ್ಟೆಯಾಗಿರುವ ಮಾರಿ ಚಪ್ಪರದ ಟೆಂಡರ್ ಪ್ರಕ್ರಿಯೆ ಶುರುವಾಗುತ್ತದೆ..ಆಮೇಲೆ ಸ್ವಲ್ಪ ದಿನ ಇದ್ದಾಗ ಹಳೆ ಬಸ್ಸು ನಿಲ್ದಾಣವೂ ವಿಕಾಸಾಶ್ರಮ ಬಯಲಿಗೆ ಸ್ಥಳಾಂತರವಾಗುತ್ತದೆ...ಟೆಂಪೋಸ್ಟಾಂಡು ಕೂಡ ಖಾಲಿಯಾಗುತ್ತದೆ...ಮಳಿಗೆಗಳು ಬಂದು ಕೂರುತ್ತವೆ..<br /><br />ಹಾಂ ಪರೀಕ್ಷೆಗೂ ಜಾತ್ರೆಗೂ ಅವಿನಾಭಾವ ಸಂಭಂದ..ಸಾಧಾರಣವಾಗಿ ಮಾರ್ಚಿನಲ್ಲೇ ಇವೆರಡೂ ಬರುವುದಲ್ಲಾ!!!<br /><br /><br />ಏನೋ ಗೊತ್ತಿಲ್ಲ,ನನಗೆ <br />ಗೊತ್ತಿಲ್ಲದಂತೆ ಕೈಬೆರಳು ಇದನ್ನೆಲ್ಲಾ ಬರೆಳಚ್ಚಿಸಿದೆ... <br />ಬರೆಯುತ್ತಿರಿ ನಮಸ್ತೆ ಅಷ್ಟೇ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-4215797146714128289.post-3402329777774133212012-11-12T08:18:47.303+05:302012-11-12T08:18:47.303+05:30"ಕಾಡು ನೋಡ ಹೋದೆ..ಕವಿತೆಯೊಡನೆ ಬಂದೆ.." ಇದು ಸ..."ಕಾಡು ನೋಡ ಹೋದೆ..ಕವಿತೆಯೊಡನೆ ಬಂದೆ.." ಇದು ಸಿ.ಬಿ.ಐ ಶಂಕರ್ ಚಿತ್ರದ ಒಂದು ಗೀತೆ...ಹಾಗೆಯೇ ಸಿರ್ಸಿ ನೋಡ ಹೋದೆ...ಸಿಕ್ಕಾಪಟ್ಟೆ ಖುಷಿಯಾಗಿ ಬಂದೆ...ಇದು ನಿಮ್ಮ ಸಿರ್ಸಿ ಪ್ರವಾಸದ ಲೇಖನಗಳು ನನ್ನ ಮನಸಲ್ಲಿ ತಂದ ಭಾವನೆಗಳು..ಮಹಾಭಾರತದಲ್ಲಿ ಇಲ್ಲದೆ ಇರುವುದು ಪ್ರಪಂಚದಲ್ಲಿ ಇಲ್ಲ ಎನ್ನುವ ಮಾತಿದೆ.ಹಾಗೆ ಈ ಸುಂದರ ಸಿರ್ಸಿ ಪ್ರವಾಸದಲ್ಲಿ ಭಕ್ತಿಭಾವದ ಸಿಂಚನ, ಪ್ರಕೃತಿಯ ಮಡಿಲಲ್ಲಿ ನರ್ತನ, ಇತಿಹಾಸದ ನೋಟ, ದೇವಿಯ ಚರಿತ್ರೆ ಇದಕ್ಕೆಲ್ಲ ಕಳಶವಿಟ್ಟಂತೆ ಈ ಮಾಲಿಕೆಯಲ್ಲಿ ಮಾರಿಕಾಂಬೆ ಜಾತ್ರೆಯ ಪರಿಚಯ, ಜನವಿದ್ದರೆ ಜಾತ್ರೆ...ರೋಗವಿದ್ದಾಗ ಮಾತ್ರೆ..ಎನ್ನುವ ಹಾಗೆ ಎಂತಹ ಸಂಭ್ರಮದ ಕ್ಷಣಗಳನ್ನು ಸೆರೆ ಹಿಡಿದಿದೆ ನಿಮ್ಮ ಮೂರನೇ ಕಣ್ಣು ಜಾತ್ರೆಯಲ್ಲಿ ನಾವು ಇದ್ದೇವೆ ಅನ್ನುವಷ್ಟು ನೈಜತೆಯಿಂದ ನಮ್ಮನ್ನು ಆವರಿಸಿಕೊಳ್ಳುತ್ತದೆ ನಿಮ್ಮ ಲೇಖನ...ಅಭಿನಂದನೆಗಳು. <br /><br /><br />ಅರೆ ದೋಸೆ ಬಂತು, ಚಟ್ನಿ ಬಂತು, ಸಾಂಬಾರ್ ಬಂತು, ಪಲ್ಯ ಬಂತು...ಆಹಾ...ಬಜ್ಜಿಯೂ ಬಂತು...ತೆಳ್ಳನೆ ನೀರು ದೋಸೆ ಬಂತು...ಮೀಸಲ್ ಬಾಜಿ ಬಂತು..ಬೇಕು..ನಮ್ಮೂರ ಊಟ ರೆಡಿ ಇದೆಯಾ..ಸರ್ ಊಟ ರೆಡಿ ಇದೆ ಆದ್ರೆ ಆದ್ರೆ ಬಾಲೂ ಸರ್ ಬನವಾಸಿಗೆ ಹೋಗುತ್ತಾರೆ ಅಂತ ಕೇಳಿದೆವು..ಅಲ್ಲಿಯೇ ಅಡಿಗೆ ರೆಡಿ ಇದೆ ಅಲ್ಲೇ ಊಟ ಮಾಡುವಿರಂತೆ (ಕೆಂಪಕ್ಕಿ ಅನ್ನ , ಬಿಸಿ ಬಿಸಿ ಹುಳಿ, ಮಜ್ಜಿಗೆ, ಉಪ್ಪಿನಕಾಯಿ ಸಿದ್ಧವಾಗಿದೆ ..ಪ್ರಸಾದದ ರೂಪದಲ್ಲಿ :-)...ಆಹಾ ಮಧುಕೇಶ್ವರ.ನಿನ್ನ ಕೃಪೆಯಿಂದ ಹೊಟ್ಟೆಗೆ ತಂಪಾಯಿತು..ಒಳ್ಳೆ ಕಷಾಯ ಕುಡಿದ ಮೇಲೆ..ಮೆಣಸನ್ನು ನೋಡಿದಾಗ.ಆಹಾ ಕರಿ ಮೆಣಸಿನ ಖಾರ.ಉದ್ದಿನವಡೆಯ ಮಧ್ಯೆ ಸಿಕ್ಕಿತು...ಸತ್ಕಾರ್ ಹೋಟೆಲಿನ ಗರಿ ಗರಿ ಮಸಾಲೆ ದೋಸೆ ಬಂದು ವಾತಾಪಿ ಜೀರ್ಣೋಭವವಾದಮೇಲೆ ..ಮದುವೆ ಮನೆಯಿಂದ ಹವ್ಯಕರ ಸಂಪ್ರದಾಯದ ಊಟ ಎಲೆ ಮೇಲೆ ಕಾದಿತ್ತು ರಸಗವಳ...ರಸಗವಳ ಹೊಡೆದ ಮೇಲೆ ನಡೆಯಿರಿ ಸರ್ ಮಾರಿಕಾಂಬೆ ಜಾತ್ರೆಯಲ್ಲಿ ತಿಂದ ಚುರುಮುರಿ ಬಲು ಸೊಗಸು...ಪಾಪ ನನ್ನ ಮಗಳು ಜಾತ್ರೆಯಲ್ಲಿ ಸಿಗುವ ಮುಖವಾಡ. ಗೊಂಬೆಗಳು..ಪೀ ಎಂದು ಕಿರುಚುವ ಪೀಪಿ ಬೇಕು ಅಂತ ಹೇಳಿದ್ದಳು ನೆಡೀರಿ ಸರ್ ಅದನ್ನು ಕೊಳ್ಳುವ...ಹಾಗೆಯೇ ನೇಣಿಗೆ ಹಾಕಿರುವ ಜಿಲೇಬಿಯನ್ನು ತಿಂದು, ಖಾನಾವಳಿಯ ಊಟ ಮಾಡಿ..ಸಿರ್ಸಿಗೆ ವಂದನೆ ಹೇಳುವ..Srikanth Manjunathhttps://www.blogger.com/profile/04152086368173454221noreply@blogger.com