Friday, February 10, 2012

ವೆಂಕಟ ರಮಣ ಗೋವಿಂದ ,ಬನದೊಳಗೆ ನಲಿದಿಹ ವೆಂಕಟೇಶ!! ನೆನಪಿನ ಪುಟ :05


ವನಸಿರಿಯ ನಡುವೆ ದೇವಾಲಯ.

ಹಸಿವಿನಿಂದ ಕಂಗಾಲಾಗಿ ಹೊನ್ನ ಮೇಟಿ ಬೆಟ್ಟ ದಿಂದ ಹೊರಟ ನಾವು  ಗಿರಿಗಳನ್ನು ನಿಧಾನವಾಗಿ    ಇಳಿಯ ತೊಡಗಿದೆವು.ಮೊದಲೇ ನಿತ್ರಾಣ ಯಾರಿಗೂ ಮಾತಾಡುವ ಆಸಕ್ತಿಹಾಗು ಶಕ್ತಿ  ಇರಲಿಲ್ಲ.ಮಾರ್ಗ  ಮಧ್ಯದಲ್ಲಿ ಬಾಲು, ಬಾಲು  ಬೇಗ ಆ ಪಕ್ಷಿ ಫೋಟೋ ತೆಗೀರಿ ಅಂದ್ರೂ ವೇಣು , ಎಲ್ಲಿ ಎಲ್ಲಿ ಅಂತಾ ನಾನು ಹುಡುಕೋ ಅಷ್ಟರಲ್ಲಿ  ಆ ಹದ್ದು ಹಾರಿಹೋಗಿತ್ತು. ಹಸಿವಿಂದ ಬಳಲಿದ್ದ ದೇಹ ಹಾಗು ನನ್ನ ಕಣ್ಣುಗಳು ಮುಂದೆಯೇ ಕುಳಿತಿದ್ದ   ದೈತ್ಯಾಕಾರದ ಆ ಹದ್ದನ್ನು ಗುರುತಿಸಲು ವಿಫಲವಾಗಿತ್ತು.
ಮನಸೆಳೆವ ನೋಟ ನೀಡಿದ ಕೋಡುಗಲ್ಲುಗಳು
ಪಯಣ ಸಾಗಿತ್ತು ಹಾದಿಯಲ್ಲಿ ಹಸಿವನ್ನು ಮರೆಸಿ ಖುಶಿನೀಡಿದ ಎರಡು ಕೋಡುಗಲ್ಲುಗಳು ಮನಸೆಳೆದವು ಹಾಗು ಹೀಗೂ ಹೊನ್ನ ಮೇಟಿ ಎಸ್ಟೇಟ್ ತಲುಪಿ ನಿಟ್ಟುಸಿರು ಬಿಟ್ಟೆವು.ಆ ಜಾಗ ತಲುಪಿದ ಕೂಡಲೇ "ಸಾ ಇಲ್ಲೇ ಇರಿ ಇಲ್ಲೊಂದು ದೇವಸ್ತಾನ ಐತೆ ನೋಡೋರಂತೆ, "  ಅಂತಾ ಅರಣ್ಯ ಇಲಾಖೆ ಸಿಬ್ಬಂಧಿ ಪೂಜಾರಿಯನ್ನು ಕರೆಯಲು ತಯಾರಾಗುತ್ತಿದ್ದರು.ಹೊಟ್ಟೆಯಲ್ಲಿ ಹಸಿವಿನ ಮಾಯೆ ಆವರಿಸಿದ್ದ ಕಾರಣ ಅವರನ್ನು ತಡೆದು ಮೊದಲು ಅಲ್ಲೇ ಕಾಣಿಸಿದ ಸಣ್ಣ ಪೆಟ್ಟಿಗೆ ಅಂಗಡಿಯಲ್ಲಿ ಬಿಸ್ಕತ್ತು, ಬಾಳೆಹಣ್ಣು , ಟೀ ಸೇವಿಸಿ ಸ್ವಲ್ಪ ಮಟ್ಟಿಗೆ ಹಸಿವನ್ನು ತಣಿಸಿದೆವು.ಅರಣ್ಯ ಸಿಬ್ಬಂಧಿ ಪುರೋಹಿತರನ್ನು ಕರೆತರುವುದಾಗಿ ಹೇಳಿ ಹೊರಟರು ,ನಾವು ಸುತ್ತ ಮುತ್ತ ಪ್ರದೇಶದ ವೀಕ್ಷಣೆಯಲ್ಲಿ ತೊಡಗಿದೆವು.
ಗಣಪತಿ ಗುಡಿ
ಗಣಪತಿ ಬಪ್ಪ ಮೊರ್ಯ
ಅಲ್ಲೇ ಇದ್ದ ಒಂದು ಪುಟ್ಟ ಗಣಪತಿ ಗುಡಿ ಕಣ್ಣಿಗೆ ಬಿತ್ತು ಹತ್ತಿರ ಹೋಗಿ ದರ್ಶನ ಪಡೆದೆವು ಸುಂದರ ಮೂರ್ತಿ ಆ ಪ್ರದೇಶದ ಹಾದಿಯ ಕೇಂದ್ರ ಭಾಗದ  ವೃತ್ತದಲ್ಲಿ ನೆಲೆಗೊಂಡಿತ್ತು. ಅಷ್ಟರಲ್ಲಿ ಪುರೋಹಿತರ ಆಗಮನವಾಯಿತು, ಪರಸ್ಪರ ಪರಿಚಯ ಆದನಂತರ ಬನ್ನಿ ದೇವಾಲಯ  ನೋಡೋಣ. ಅಂದರು ದಾರಿಯಲ್ಲಿ  ಹೋಗುತ್ತಾ ಹೋಗುತ್ತಾ ತಾವು ಶೃಂಗೇರಿ ಕಡೆಯವರೆಂದೂ , ಈ ಎಸ್ಟೇಟ್ ನಲ್ಲಿ ರೈಟರ್ ಹಾಗು ಈ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಣೆ ಮಾಡುವುದಾಗಿ ತಿಳಿಸಿ ಆತ್ಮೀಯವಾಗಿ ಮಾತಾಡಿದರು.
ಸುಂದರ ದೇವಾಲಯ ನೋಟ
ಸುಂದರ ದೇವಾಲಯದ ಅನಾವರಣ ಸುಂದರ ಪರಿಸರದ ನಡುವೆ ನಮಗೆ ಹೊಸ ಚೈತನ್ಯ ತಂದಿತು.ಆದರೂ  ಈ ಭವ್ಯ ದೇವಾಲಯವನ್ನು ಈ ಕಾಡಿನಲ್ಲಿ ನಿರ್ಮಿಸಿದ್ದು ಯಾರು, ಇಲ್ಲಿಗೆ ಹೆಚ್ಚಿಗೆ ಜನ ಬರೋದಿಲ್ಲ , ದೇವಾಲಯ ನಿರ್ವಹಣೆ ಹೇಗೆ ಮಾಡ್ತಾರೆ ಎಂಬ ಅಚ್ಚರಿ ಉಂಟಾಯಿತು. ಈ ದೇವಾಲಯವನ್ನು ಹೊನ್ನ ಮೇಟಿ ಎಸ್ಟೇಟಿನ ಮಾಲಿಕರಾದ ಬಿರ್ಲಾ ಸಂಸ್ಥೆಯವರು ನಿರ್ಮಿಸಿದ್ದಾಗಿ ತಿಳಿದುಬಂತು. ದೇವಾಲಯವನ್ನು ತಮ್ಮ ಖಾಸಗಿ ಉಪಯೋಗಕ್ಕಾಗಿ ಕಟ್ಟಿಸಿದ್ದು,ಸಾರ್ವಜನಿಕರಿಗೂ ಪ್ರವೇಶಇರುವುದಾಗಿ  ಅಲ್ಲಿನ ಜನ ತಿಳಿಸಿದರು.
ಕಾಡಿನಲ್ಲಿ ನೆಲೆನಿಂತ ವೆಂಕಟರಮಣ
ಕಾಡಿನ ಸೊಬಗಿನ ತೀರ್ಥ  ಪ್ರಸಾದ
ಅರ್ಚಕರು ನಮ್ಮ ಹೆಸರಿನಲ್ಲಿ ಪೂಜೆಮಾಡಿ ಮಂಗಳಾರತಿ,ತೀರ್ಥ ಪ್ರಸಾದ ನೀಡಿ ಹರಸಿದರು.ಸರಿ ದೇವಾಲಯ ವೀಕ್ಷಣೆ ಮಾಡಲು ಅಲ್ಲಿನ ಚಿತ್ರ ತೆಗೆಯಲು ಅನುಮತಿಪಡೆದು  ಕೆಲವು ಚಿತ್ರಗಳನ್ನು ತೆಗೆದೆವು, ಸುಮಾರು ಕೋಟಿ ಬೆಲೆಬಾಳುವ ಅಮೃತ ಶಿಲೆಯಿಂದ ಅಲಂಕೃತ ಗೊಂಡ ದೇವಾಲಯ ಮನಸೂರೆಗೊಂಡಿದ್ದು ಸುಳ್ಳಲ್ಲಾ , ದೇವಾಲಯ ಪ್ರದಕ್ಷಿಣೆ ಹಾಕುವಾಗ
ಪ್ರದಕ್ಷಿಣೆ ಪಥ
ಗರುಡ

ಶಂಖ

ಚಕ್ರ
ಓಂ ಕಲಾಕೃತಿ
ಪ್ರದಕ್ಷಿಣೆ ಮಾಡಲು ಸುಂದರ ಆವರಣ ,ಗರುಡ ,ಶಂಖ , ಚಕ್ರ, ಓಂ ಮುಂತಾದ ಸುಂದರ ಕಲಾಕೃತಿಗಳು ಮನಸೆಳೆದವು.ಸುಂದರ ನೋಟ ಮನ ಸೂರೆಗೊಂಡು ಹರುಷದಿಂದ ಹೊರಡಲು ತಯಾರಾದೆವು
ಶುಭ ವಿದಾಯ 
.ನಮ್ಮನ್ನು ಬೀಳ್ಕೊಟ್ಟ ಪುರೋಹಿತರು ದೇವಾಲಯದ  ಬಾಗಿಲನ್ನು ಮುಚ್ಚುತಿದ್ದರು ನಮ್ಮ ಬರುವಿಕೆಗಾಗಿ
ಎಷ್ಟು ಹೊತ್ತು  ಕಾಯೋದು ಇವರನ್ನಾ 
ಗನ್ ಹಿಡಿದು ಅರಣ್ಯ ಸಿಬ್ಬಂದಿ ಕಾಯುತ್ತಿದ್ದರು.........................!!!!!